Homeಕರ್ನಾಟಕಶ್ರದ್ಧಾಂಜಲಿ: ದುರಿತ ಕಾಲದ ಎಚ್ಚರದ ದನಿಯೊಂದು ಕರಗಿ...

ಶ್ರದ್ಧಾಂಜಲಿ: ದುರಿತ ಕಾಲದ ಎಚ್ಚರದ ದನಿಯೊಂದು ಕರಗಿ…

- Advertisement -
- Advertisement -

ಜಿ ರಾಜಶೇಖರ್‌ರನ್ನು ನಾನು ಯಾವತ್ತೂ ಭೇಟಿಯಾಗಿಲ್ಲ. ಅವಕಾಶ ಬರಲಿಲ್ಲ. ಅಥವಾ ಅವಕಾಶ ಮಾಡಿಕೊಳ್ಳಲಿಲ್ಲ. ಆದರೆ ಜಿ ರಾಜಶೇಖರ್ ಹತ್ತಿರ ಅನ್ನಿಸುತ್ತಿದ್ದರು. ಪರಿಚಿತರು ಅನ್ನಿಸುತ್ತಿತ್ತು. ಅವರ ಬಿಡಿ ಬರಹಗಳನ್ನು, ಲೇಖನಗಳನ್ನು ಓದಿಕೊಂಡ ನನಗೆ ಮತ್ತು ನನ್ನಂತಹ ಅನೇಕರಿಗೆ ಹೀಗೆ ಅನ್ನಿಸಿರುವುದರಲ್ಲಿ ಅಚ್ಚರಿಯೇನಾದರೂ ಉಂಟೆ. ಚೆ ಗುವೆರಾ ಹೇಳುತ್ತಾನಲ್ಲ, “ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಿನ್ನ ಎದೆ ಕಂಪಿಸಿದರೆ ನೀನು ನನ್ನ ಸಂಗಾತಿ”, ಹಾಗೇ ಅನ್ಯಾಯವೊ, ಅಹಿತಕರವಾದದ್ದೊ, ಜೀವವಿರೋಧಿಯಾದದ್ದೊ ನಡೆದಾಗ ಮಾತನಾಡುವವರು ನಮ್ಮದೆ ಮಾತನ್ನು ಮಾರ್ದನಿಸಿದಂತೆ ಇರುತ್ತದೆ ನೋಡಿ, ಹಾಗೇ ಅವರು ನಮ್ಮವರಾಗಿಬಿಡುತ್ತಾರೆ.

ಎಡಪಂಥೀಯ ಸಂಘಟನೆಯೊಳಗಿದ್ದು, ಅದರ ತಪ್ಪುಗಳನ್ನು ಕಟುವಾಗಿ ಟೀಕಿಸಬಲ್ಲವರಾಗಿದ್ದರು ಎಂಬುದೇ ಜಿಆರ್ ಬದ್ಧತೆ ಮತ್ತು ನ್ಯಾಯಕ್ಕೆ, ಸತ್ಯಕ್ಕೆ ಹೊರತಾದ ಚೌಕಟ್ಟುಗಳು ಅವರ ಬಳಿ ಸುಳಿಯಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಶಾಲೆಯ ಮೇಷ್ಟ್ರಾಗಿ, ವಿಮಾ ಸಂಸ್ಥೆಯ ಉದ್ಯೋಗಿಯಾಗಿ ಜನರೊಂದಿಗೆ ಬೆರೆತ ಜಿಆರ್ ಜೀವಪರ ಜೀವವಾಗಿ ಅಸಂಖ್ಯರ ಪ್ರೀತಿಗೆ ಪಾತ್ರರಾಗಿದ್ದನ್ನು ನಾನು ತಿಳಿದೆ.

ಅವರು ನಿಧನರಾದಾಗ ಫೇಸ್‌ಬುಕ್ಕಿನಲ್ಲಿ ಬಹಳಷ್ಟು ಮಂದಿ ಅವರನ್ನು ನೆನೆದು ತಮ್ಮ ನೆನಪು, ವಿದಾಯದ ಸಂಕಟಗಳನ್ನು ಹಂಚಿಕೊಂಡರು. ಕರಾವಳಿಯ ಕೋಮುವಾದದ ಬಗ್ಗೆ ಹಲವರು ಪ್ರಸ್ತಾಪಿಸಿದ್ದನ್ನು ಓದಿದೆ. ನನಗೂ ಜಿಆರ್ ಹೆಚ್ಚು ಪರಿಚಯವಾಗಿದ್ದು ಅದೇ ಕಾರಣಕ್ಕೆ. ದಕ್ಷಿಣ ಕನ್ನಡದವರೇ ಆದ ಹಿರಿಯ ಪತ್ರಕರ್ತರೊಂದಿಗೆ ಮಾತನಾಡುತ್ತಾ, ’ನೀವೂ ಕೋಮುವಾದದ ಬಗ್ಗೆ ಗಟ್ಟಿಯಾಗಿ ಮಾತನಾಡಿದಿರಿ. ಅವರೂ ಕೋಮುವಾದ ವಿರೋಧಿಸಿದವರು’ ಎಂದು ಮೆಲುಕು ಹಾಕಿದೆ.

ಕೋಮುವಾದದ ಬಗ್ಗೆ ಈಗಂತೂ ಮಾತನಾಡಿ ಅರಗಿಸಿಕೊಳ್ಳುವುದು ಸುಲಭವಲ್ಲ. ವ್ಯವಸ್ಥೆಯೇ ಬೇಟೆಗೆ ಸೀಳುನಾಯಿಗಳನ್ನು ಛೂ ಬಿಡುವಷ್ಟು ಪರಿಸ್ಥಿತಿ ಹದಗಟ್ಟಿದೆ. ಆದರೂ ಜಿಆರ್ ಕೋಮುವಾದ ಕುಲುಮೆಯಲ್ಲಿ ನಿಂತು ಕೆಂಡವನ್ನು ಆರಿಸುವ ಛಾತಿ ತೋರಿದರು.

ಕೋಮುವಾದದ ವಿರುದ್ಧ ಹೋರಾಡುತ್ತಾ, ಕೋಮುವಾದಕ್ಕೆ ಜೀವತೆತ್ತ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಕೊಡಿಸುವುದಕ್ಕೆ ಅವರು ಸದಾ ಓಡಾಡಿದ್ದನ್ನು ಕೇಳಿದೆ. ಅವರ ಕೋಮುವಾದದ ಹೋರಾಟ ಬಾಬ್ರಿ ಮಸೀದಿ ಧ್ವಂಸಕಾಲದಿಂದಲೂ ನಡೆಯುತ್ತಾ ಬಂದಿದೆ. ಇದೇ ಕಾರಣಕ್ಕೆ ಅವರು ಲಂಕೇಶ್ ಪತ್ರಿಕೆಗೆ ಬರೆಯುವುದಕ್ಕೂ ಶುರು ಮಾಡಿದ್ದು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕನ್ನಡದ ಬಹುತೇಕ ಬುದ್ಧಿಜೀವಿಗಳು, ಚಿಂತಕರು ಬಾಯಿಮುಚ್ಚಿಕೊಂಡಿದ್ದಾಗ, ಲಂಕೇಶ್ ದೇಶ ಒಡೆದ ಘಟನೆಯನ್ನು ಖಂಡಿಸಿದ್ದರು ಎಂಬ ಕಾರಣಕ್ಕೆ ಜಿಆರ್ ಅವರ ಪತ್ರಿಕೆಗೆ ಬರೆಯಲಾರಂಭಿಸಿದ್ದರಂತೆ.

ಲಂಕೇಶರಿಗೆ ಜಿಆರ್ ಎಂದರೆ ಅಷ್ಟೇ ಪ್ರೀತಿ. “ನಮ್ಮ ರಾಜಶೇಖರ ಎಷ್ಟು ಒಳ್ಳೆಯ ವಿಚಾರವಂತ. ನಿಷ್ಠುರತೆ ಮತ್ತು ಬದುಕಿನ ಬಗ್ಗೆ ಪ್ರೀತಿಯನ್ನು ಇಟ್ಟುಕೊಂಡ ಆತ ಶ್ರೇಷ್ಠ ಚಿಂತನಕಾರ ಎನ್ನುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ” ಎಂದು ಸ್ವತಃ ಲಂಕೇಶ್ ಹೇಳಿದ್ದರಂತೆ. ಆದರೆ ಅದೇ ಲಂಕೇಶ್ ಅವರನ್ನು ಟೀಕಿಸುವುದಕ್ಕೆ ಅವರ ಸ್ನೇಹ ಅಡ್ಡಿಪಡಿಸಿರಲಿಲ್ಲ. ಲಂಕೇಶ್ ಪ್ರಗತಿರಂಗ ಎಂಬ ಪಕ್ಷ ಕಟ್ಟಿ ರಾಜಕೀಯಕ್ಕೆ ಇಳಿದಾಗ ಅದರ ಪ್ರಣಾಳಿಕೆಯನ್ನು ಗಂಭೀರವಾಗಿ ವಿಮರ್ಶಿಸಿದ್ದರು ಜಿಆರ್.

ಸದಾ ಕಾಲ ತಮ್ಮನ್ನು ಕೇಳಿಕೊಳ್ಳುತ್ತಾ, ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸುತ್ತಾ ತತ್ವಕ್ಕಿಂತ ಜೀವಕ್ಕೆ ಬೆಲೆ ಕಟ್ಟಿ ಬದುಕಿದವರು ಜಿಆರ್ ಎಂಬುದನ್ನು ಅವರ ಬದುಕೇ ಹೇಳುತ್ತದೆ. ಕೋಮುವಾದದ ವಿರುದ್ಧದ ಹೋರಾಟದ ಜೊತೆಜೊತೆಗೇ ಅವರು ಪ್ರಭುತ್ವದ ಕ್ರೌರ್ಯಗಳನ್ನು ಟೀಕಿಸಿದ್ದಾರೆ. ಆದರೆ ಅವರ ಆತಂಕ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೋಮುವಾದದ ಕಡೆಗಿತ್ತು. ಈ ದೇಶದಲ್ಲಿ ಹಿಂದೂ ಕೋಮುವಾದ ಅಧಿಕಾರ ಹಿಡಿಯಬಹುದು ಎಂದು ಹೇಳಿದ್ದವರಲ್ಲಿ ಜಿಆರ್ ಕೂಡ ಒಬ್ಬರು. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಅಸಹಿಷ್ಣುತೆ ನುಸುಳಿದ್ದಾಗ ಕನಲಿ ಎಚ್ಚರಿಸಿದವರು. ಜಿಆರ್ ಗಟ್ಟಿಯಾಗಿ ಕೋಮುವಾದದ ಕುರಿತು ಮಾತನಾಡುತ್ತಾ ಬಂದಿದ್ದರಿಂದಲೇ ಜೀವಪರವಾಗಿ ಮಿಡಿಯುವ ಯುವಪಡೆಯೊಂದು ಬೆಳೆದು
ನಿಂತಿದ್ದು ಎನ್ನುತ್ತಿದ್ದರು ಅಲ್ಲಿಯ ಗೆಳೆಯರು.

ಎಪ್ಪತ್ತರ ದಶಕದಿಂದ ಬೀದಿ ಹೋರಾಟಗಳಲ್ಲಿ ಭಾಗವಹಿಸುತ್ತಾ ಅದೆಷ್ಟು ಮನಸ್ಸುಗಳನ್ನು ಹುರಿದುಂಬಿಸುತ್ತಾ ಬಂದಿದ್ದಾರೊ ಲೆಕ್ಕವಿಲ್ಲ. “ಸಂವಿಧಾನವನ್ನು ಬದಲಾಯಿಸಲು ಅದನ್ನೆನು ಜನಿವಾರವೆ?” ಎಂಬ ಘೋಷಣೆಯ ಪ್ಲಕಾರ್ಡ್ ಹಿಡಿದು ನಿಂತ ಜಿಆರ್ ಅವರ ಕುಬ್ಜ ದೇಹ ಎಷ್ಟು ಅಗಾಧ ಆತ್ಮಶಕ್ತಿಯನ್ನು ಹೊಂದಿತ್ತು ಮತ್ತು ಅದು ಎಚ್ಚರವಾಗಿ ಕರಾವಳಿಯನ್ನು, ಈ ನಾಡನ್ನು ಹೇಗೆ ಆವರಿಸಿಕೊಂಡಿರಬಹುದು ಎಂಬುದು ಸಾಮಾನ್ಯದ ಬೆರಗಲ್ಲ.

ಎಲ್ಲೇ ಏನೇ ಗಲಭೆ, ಅಹಿತಕರ ಘಟನೆಗಳು ನಡೆದರೆ ಅಲ್ಲಿಗೆ ಖುದ್ದು ಭೇಟಿ ನೀಡಿ ಸತ್ಯಶೋಧನೆ ನಡೆಸಿ ಸಿದ್ಧಪಡಿಸಿದ ವರದಿಗಳು ಬಹುಶಃ ಯಾವ ಪತ್ರಕರ್ತನೂ, ಸತ್ಯಶೋಧನಾ ತಂಡಗಳು ಮಾಡಿರಲಾರವು. ಸುರತ್ಕಲ್ ಗಲಭೆ, ಮಂಗಳೂರಿನ ಪಬ್‌ದಾಳಿ, ಹೋಮ್‌ಸ್ಟೇ ದಾಳಿ, ಕುಂದಾಪುರದಲ್ಲಿ ನಡೆದ ಗಲಭೆ, ಆದಿ ಉಡುಪಿಯ ಬೆತ್ತಲೆ ಪ್ರಕರಣ ಹೀಗೆ ಹಲವು ಘಟನೆಗಳ ಹಿಂದಿನ ಅಮಾನವೀಯ, ಜೀವವಿರೋಧಿ ಶಕ್ತಿ ಮತ್ತು ಉದ್ದೇಶಗಳನ್ನು ಬೆತ್ತಲು ಮಾಡಿದವರು ಜಿಆರ್.

ಸಾಮಾಜಿಕ, ರಾಜಕೀಯ ವಿದ್ಯಮಾನಗಳಿಗೆ ಸ್ಪಂದಿಸಿ ನೂರಾರು ಲೇಖನಗಳನ್ನು ಬರೆದು, ಬಹುತ್ವದ ಚಿಂತನೆಗಳ ಮೂಲಕ ಈ ದೇಶ, ಈ ನಾಡು ಎದುರಿಸಿದ ಹಿಂಸೆಯ ವಿಕೃತಿಗಳನ್ನು ಅಕ್ಷರಗಳ ರೂಪದಲ್ಲಿ ಎಚ್ಚರಿಸಿದವರು ಜಿಆರ್.

ನಿರಂಕುಶತೆ, ಮತಾಂಧತೆ ಹಲವು ರೂಪಗಳಲ್ಲಿ ಆವರಿಸಿಕೊಳ್ಳುತ್ತಿರುವಾಗ, ಜಿಆರ್ ಹಾಕಿಕೊಟ್ಟಿರುವ ಹೋರಾಟದ ಮಾರ್ಗದಲ್ಲಿ ಬೆಳಕಿದ್ದು, ಆ ಮಾರ್ಗದಲ್ಲಿ ನಡೆಯುವುದು ಅವರಿಗೆ ಸಲ್ಲಿಸುವ ನಿಜ ಶ್ರದ್ಧಾಂಜಲಿಯಾಗಬಹುದು.

ಎಸ್ ಕುಮಾರ್
ಸಂಪಾದಕರು, ಈದಿನ.ಕಾಂ


ಇದನ್ನೂ ಓದಿ: “ಜನಪ್ರಿಯತೆಯನ್ನು ನಾವು ಸಾಹಿತ್ಯಿಕ ಅರ್ಹತೆಯೆಂದು ಗೊಂದಲಿಸಬಾರದು” – ಜಿ. ರಾಜಶೇಖರ್ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...