Homeಅಂಕಣಗಳುಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

ಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವಹತ್ಯೆಗಳು ನಡೆಯುತ್ತಿವೆ. ಪ್ರವೀಣ್ ಹತ್ಯೆ, ಭಯೋತ್ಪಾದನೆ ಬಳಸಿ ತಮ್ಮ ತಂಟೆಗೆ ಬರದಂತೆ ಎಚ್ಚರಿಸುವ ಹತ್ಯೆ ಅನ್ನುವುದಾದರೆ, ಪಾಝಿಲ್ ಹತ್ಯೆ ಪ್ರತೀಕಾರವಾಗಿ ಭಯೋತ್ಪಾದನಾ ಹತ್ಯೆಯಾಗಿಯೇ ಕಾಣುತ್ತಿದೆ. ಆದರೆ ಇವರಿಬ್ಬರೂ ಮನುಷ್ಯ ಜೀವಿಗಳು. ಈ ಹತ್ಯೆಯನ್ನು ಖಂಡಿಸುವುದರಲ್ಲಿ ತಾರತಮ್ಯ ಇರಬಾರದು. ಮನುಷ್ಯನ ಜೀವ ಯಾವಯಾವುದಕ್ಕೋ ಬಲಿಯಾಗಬಹುದು, ಆದರೆ ಮನುಷ್ಯ ಮನುಷ್ಯನನ್ನ ಕೊಲ್ಲುವುದು ಎಲ್ಲರನ್ನ ಭಯದಲ್ಲಿ ಮುಳುಗಿಸುವ ಕ್ರಿಯೆ. ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲ ಹತ್ಯೆಗಳನ್ನು ಖಂಡಿಸುತ್ತಾರೆ, ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಾರೆ. ಆದರೆ ಕರ್ನಾಟಕವನ್ನಾಳುತ್ತಿರುವ ಸದ್ಯದ ನಾಯಕ ಕ್ರಿಯೆಗೆ ಪ್ರತಿಕ್ರಿಯೆಯಲ್ಲಿ ನಂಬಿಕೆ ಇಟ್ಟವರು. ಆದ್ದರಿಂದ ತಾರತಮ್ಯವೆಸಗಿದ್ದಾರೆ. ಸತ್ತವರ ಕುಟುಂಬಕ್ಕಾಗಲಿ ಪರಿಹಾರ ನೀಡುವ ವಿಷಯಕ್ಕಾಗಲಿ ಅವರು ತಾನು ಬಿಜೆಪಿ ಜನರ ರಕ್ಷಕನೇ ಹೊರತು ಇನ್ನಾರಿಗೂ ನಾಯಕನಲ್ಲ ಎಂಬುದನ್ನ ಸಾಬೀತುಪಡಿಸಿದ್ದಾರೆ. ಇದು ಈ ನಾಡಿಗೆ ಅವಮಾನ. ಚಿಂತಕ ಎಂ.ಎನ್ ರಾಯ್‌ರವರ ವಿದ್ವತ್ತಿನ ಅನುಯಾಯಿಯಾಗಿದ್ದ ಎಸ್.ಆರ್ ಬೊಮ್ಮಾಯಿಯವರ ಮಗನಿಂದ ತಂದೆಗೆ ಅವಮಾನವಾಗಿದೆ. ಅಷ್ಟಕ್ಕೂ ಈ ಬೊಮ್ಮಾಯಿಯವರು, ಸ್ವಪ್ರತಿಭೆ ಮತ್ತು ಸ್ವಪ್ರಯತ್ನದಿಂದ ಮುಖ್ಯಮಂತ್ರಿಯಾದವರಲ್ಲ; ಯಾವುದೋ ಮತಾಂದ ಕಂಪನಿ ನೇಮಿಸಿದ ಮೇನೇಜರ್. ’ನೀನು ಸುಮ್ಮನಿರು ಉಳಿದುದನ್ನ ನಾವು ನೋಡಿಕೊಳ್ಳುತ್ತೇವೆ’ ಎಂಬ ಆದೇಶ ಅವರು ನೇಮಕವಾದಾಗಿನಿಂದ ಚಾಲ್ತಿಯಲ್ಲಿದೆ. ಇವರ ಮನಸ್ಸಿಗೂ ಕಾಳಿ ಸ್ವಾಮಿ ಮನಸ್ಸಿಗೂ ಏನಾದರೂ ಸಂಬಂಧವಿದೆಯೇ ಎಂದು ಕರ್ನಾಟಕದ ಜನ ಚಿಂತೆಗೀಡಾಗಿದ್ದಾರಂತಲ್ಲಾ, ಥೂತ್ತೇರಿ..

*****

ಈ ರಾಜಕೀಯ ಹತ್ಯಾಕಾಂಡದಲ್ಲಿ ಒಬ್ಬನೇಒಬ್ಬ ಆರೆಸ್ಸೆಸ್ಸಿಗನಾಗಾಲಿ ಬಿಜೆಪಿ ಮುಖಂಡನಾಗಲೀ ಹತ್ಯೆಯಾದ ಉದಾಹರಣೆಯಿಲ್ಲ. ಏಕೆಂದರೆ ಅವರ ಜೀವ ದೇವನೂರರು ಹೇಳುವಂತೆ ಸಪ್ತ ಸಮುದ್ರದಾಚೆಯಿರುವ ಕಾಡಿನ ಮರದ ಪೊಟರೆಯಲ್ಲಿರುವ ಗಿಳಿಯ ದೇಹದಲ್ಲಿ ಸುರಕ್ಷಿತವಾಗಿದೆ. ಅದನ್ನ ರಕ್ಷಿಸುವ ಹೂಣೆ ಈ ಶೂದ್ರ ಜಾತಿ ಹುಡುಗರ-ಕಾರ್ಯಕರ್ತರ ಕರ್ತವ್ಯ. ಸಂಘಿಗಳ ಪ್ರಕಾರ ಯಾವುದು ಶಕ್ತಿವಂತ ಸಮೂಹವೊ ಅದು ಶಕ್ತಿಯಿಲ್ಲದ್ದನ್ನ ಜಯಿಸಿ ಅರಗಿಸಿಕೊಳ್ಳುತ್ತದಂತೆ. ಮುಸ್ಲಿಮರನ್ನ ಹೊಡೆದು ಓಡಿಸಿ ಎಂಬ ಸಂದೇಶವನ್ನ ಗೋಳವಲಕರನೇ ನೀಡಿ ಹೋಗಿದ್ದಾರೆ. ಸರಿಯಾದ ಜನಗಣತಿ ನಡೆದರೆ ಮುಸ್ಲಿಮರು ಮುವತ್ತು ಕೋಟಿ ದಾಟಬಲ್ಲರು. ಪ್ರಪಂಚದ ಯಾವ ದೇಶದಲ್ಲೂ ಇಷ್ಟ ಸಂಖ್ಯೆಯಲ್ಲಿ ಮುಸ್ಲಿಮರು ಇರಲಾರರು. ದಾಳಿಯಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲಿ ಬಂದವರು ಬರೀ ಸೈನಿಕರೇ ಹೊರತು ಅವರು ಹೆಂಡತಿ ಮಕ್ಕಳೊಂದಿಗೆ ಬಂದವರಲ್ಲ. ಕುಟುಂಬವನ್ನ ಇಲ್ಲೇ ಸಂಪಾದಿಸಿಕೊಂಡರು. ಹಿಂದೂ ಧರ್ಮದ ಜಾತೀಯತೆ ಮತ್ತು ಅಸ್ಪೃಶ್ಯತೆಯ ಅವಮಾನದಿಂದ ನೊಂದವರು ಹಾಗೂ ಅಮಿಷಕ್ಕೆ ಬಲಿಯಾದವರೆಲ್ಲಾ ಮುಸ್ಲಿಮರಾದರು. ಈಗ ಮುಸ್ಲಿಮರಾಗಿದ್ದರೂ ಅವರಿಗೆ ನೆಮ್ಮದಿಯಿಲ್ಲ. ಆದರೂ ಅವರಿಲ್ಲೇ ಇರುತ್ತಾರೆ. ಅವರು ಕೂಡ ಇಲ್ಲಿನ ದೇಶವಾಸಿಗಳೆಂಬುದನ್ನ ಅರ್ಥಪಡಿಸುತ್ತಿದ್ದಾರೆ. ಅವರ ಅಭದ್ರ ಸ್ಥಿತಿಯೇ ಅವರಲ್ಲಿ ದೈತ್ಯ ಶಕ್ತಿಯನ್ನ ಮೂಡಿಸುತ್ತದೆ. ಜನಾಂಗೀಯವಾದಿಗಳಿಗೆ ಇದು ಅರ್ಥವೇ ಆಗುತ್ತಿಲ್ಲವಂತಲ್ಲಾ, ಥೂತ್ತೇರಿ.

*****

ರಾಷ್ಟ್ರೋತ್ಥಾನ ಸಾಹಿತ್ಯದ ಅಗ್ರಲೇಖಕರಾದ ಎಸ್.ಎಲ್ ಭೈರಪ್ಪನವರು, ಕೆಲ ಲೇಖಕರು ಉತ್ತಮ ಕೃತಿಗಳನ್ನ ರಚಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಆಪಾದನೆಯನ್ನ ಬರೀ ಬ್ರೇಮಿನ್ ವಿಮರ್ಶಕರೇ ಹೆಚ್ಚಿರುವಾಗ ಮಾಡಿದ್ದಾರಂತಲ್ಲಾ. ಹಾಗೆ ನೋಡಿದರೆ ಕನ್ನಡ ವಿಮರ್ಶಕರ ಕಟು ಟೀಕೆಯನ್ನ ಭೈರಪ್ಪನವರು ಸಕಾರಣವಾಗಿಯೇ ಎದುರಿಸಿದ್ದಾರೆ. ಅದರಲ್ಲೂ ನವ್ಯರ ಹೊಡೆತಗಳ ಎದುರು ಭೈರಪ್ಪನವರು ಮಂಕಾಗಿ ಹೋಗಿದ್ದರು. ಏಕೆಂದರೆ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಶಾಂತಿನಾಥ ದೇಸಾಯಿ ಇವರೆಲ್ಲಾ ಭೈರಪ್ಪನವರ ಅಗ್ರಹಾರದ ಕಾಯಿಗಳನ್ನ ಅನಾವರಣ ಮಾಡಿ ಸರಿಮಾಡಿಕೊಳ್ಳಿ ಎಂದಿದ್ದರು. ಅದರಲ್ಲೂ ನವ್ಯದಲ್ಲಿ ಹೆಚ್ಚು ದಿನ ಇರದ ತೇಜಸ್ವಿಯವರಂತೂ ಭೈರಪ್ಪನ ಆವರಣ ಕೃತಿಗೆ ಒಂದು ಸಾಲಿನ ವಿಮರ್ಶೆ ಮಾಡಿ, ’ಹೊಟ್ಟಿಗೆ ಅನ್ನ ತಿನ್ನುವವರಾರು ಇಂತಹ ಕೃತಿ ಬರೆಯಲಾರ’ ಎಂದಿದ್ದರು. ಹೀಗೆ ಭೈರಪ್ಪನವರ ಅಪಾಯಕಾರಿ ಕೃತಿಗಳ ಬಗ್ಗೆ ಎಚ್ಚರಿಸಿ ಹೋಗಿದಾರೆ. ಸರಿಯಾದ ವಿಮರ್ಶಕರಿದ್ದರೆ, ಭೈರಪ್ಪನವರ ಮಾತು ಅವರ ಹಲವು ಕಾದಂಬರಿಗಳಿಗೇ ಅನ್ವಯಿಸುತ್ತದೆಂತಲ್ಲಾ, ಥೂತ್ತೇರಿ.

******

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಕುಮಾರಣ್ಣ ಮತ್ತು ರೇವಣ್ಣ ಅಳುವುದನ್ನ ನೋಡಿದ ಜನ ದಂಗಾಗಿ ಹೋದರಂತಲ್ಲಾ. ಜನ ಸಂಘಟನಾ ಸಭೆಗಳನ್ನ ತಮ್ಮ ಜೀವಮಾನದುದ್ದಕ್ಕೂ ಮಾಡಿಕೊಂಡು ಬಂದ ದೇವೇಗೌಡರು, ತಾವೇ ರೂಪಿಸಿಕೊಂಡ ವೈರಿಗಳನ್ನ ಹತ್ತಿಕ್ಕುವ ಸಭೆಗೆ ಮೊದಲಬಾರಿಗೆ ಬರಲಾಗಲಿಲ್ಲ. ದೇವೇಗೌಡರಿಗೆ ತಮ್ಮ ಮಕ್ಕಳನ್ನ ದಾರಿ ತಪ್ಪಿಸಿದವರ ಪೈಕಿ ಚಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಇತ್ಯಾದಿಗಳನ್ನ ಸರ್ವನಾಶಮಾಡದ ಹೊರತು ನೆಮ್ಮದಿಯಿಲ್ಲಾ. ಈಚೆಗೆ ಆ ಪಟ್ಟಿಗೆ ಕೆ.ಆರ್ ಪೇಟೆ ನಾರಾಯಣಗೌಡರು ಸೇರಿಕೊಂಡಿದ್ದಾರೆ. ಈ ನಾರಾಯಣಗೌಡರ ಕ್ಷೇತ್ರಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ. ಇವರನ್ನ ಹೀನಾಯವಾಗಿ ನಡೆಸಿಕೊಂಡ ಕಾರಣವಾಗಿ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಕಾಲೂರಿತು. ಇದರ ಜಾಡನ್ನೇ ಹಿಡಿದು ನೋಡುತ್ತಾ ಹೋದರೆ ಜೆಡಿಎಸ್ ಪಾರ್ಟಿ ಕರ್ನಾಟಕದಲ್ಲಿ ಬಿಜೆಪಿ ಕಾಲೂರುವಂತೆ ಮಾಡಲು ಬಹಳ ಶ್ರಮವಹಿಸುತ್ತಿರುವುದು ಎದ್ದು ಕಾಣುತ್ತಿದೆಯಲ್ಲಾ. ಕರ್ನಾಟಕದಲ್ಲಿ ಮೂರನೇ ಪಾರ್ಟಿಯೊಂದು ಇರಲೇಬೇಕೆಂದು, ಅದಕ್ಕಾಗಿ ಶ್ರಮಿಸಿದ್ದವರೆಲ್ಲಾ ಒಬ್ಬೊಬ್ಬರೇ ಹಲ್ಲುಕಳಚಿದಂತೆ ಬಿದ್ದುಹೋಗುತ್ತಿರುವ ಬಗ್ಗೆ ಯೋಚಿಸಿ ಕಣ್ಣೀರು ಹಾಕಬೇಕಿತ್ತು. ಅದರ ಬದಲು ಚಲುವರಾಯಸ್ವಾಮಿಯನ್ನ ಸೋಲಿಸಲೋಸ್ಕರ ಜನರನ್ನ ಭಾವುಕರನ್ನಾಗಿಸಲು ಕಣ್ಣೀರು ಹಾಕಬಾರದಿತ್ತು. ರೇವಣ್ಣ ಕುಮಾರಣ್ಣ ಅಳುವುದನ್ನ ನೋಡಿದ ನಾಗಮಂಗಲದ ಜನರು, ರೇವಣ್ಣ ಕಣ್ಣೀರು ಹಾಕಿದವರಲ್ಲ, ಅಂತಹ ಮನುಷ್ಯ ಅಳುತ್ತಿರಬೇಕಾದರೆ ಏನೋ ಭಾರಿ ಕುಟುಂಬ ಸಮಸ್ಯೆ ಇರಬೇಕೆಲ್ಲ, ಎಂದು ಗಾಬರಿ ಮುಖದಲ್ಲಿ ಚರ್ಚಿಸುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: “ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....