Homeಅಂಕಣಗಳುಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

ಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವಹತ್ಯೆಗಳು ನಡೆಯುತ್ತಿವೆ. ಪ್ರವೀಣ್ ಹತ್ಯೆ, ಭಯೋತ್ಪಾದನೆ ಬಳಸಿ ತಮ್ಮ ತಂಟೆಗೆ ಬರದಂತೆ ಎಚ್ಚರಿಸುವ ಹತ್ಯೆ ಅನ್ನುವುದಾದರೆ, ಪಾಝಿಲ್ ಹತ್ಯೆ ಪ್ರತೀಕಾರವಾಗಿ ಭಯೋತ್ಪಾದನಾ ಹತ್ಯೆಯಾಗಿಯೇ ಕಾಣುತ್ತಿದೆ. ಆದರೆ ಇವರಿಬ್ಬರೂ ಮನುಷ್ಯ ಜೀವಿಗಳು. ಈ ಹತ್ಯೆಯನ್ನು ಖಂಡಿಸುವುದರಲ್ಲಿ ತಾರತಮ್ಯ ಇರಬಾರದು. ಮನುಷ್ಯನ ಜೀವ ಯಾವಯಾವುದಕ್ಕೋ ಬಲಿಯಾಗಬಹುದು, ಆದರೆ ಮನುಷ್ಯ ಮನುಷ್ಯನನ್ನ ಕೊಲ್ಲುವುದು ಎಲ್ಲರನ್ನ ಭಯದಲ್ಲಿ ಮುಳುಗಿಸುವ ಕ್ರಿಯೆ. ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲ ಹತ್ಯೆಗಳನ್ನು ಖಂಡಿಸುತ್ತಾರೆ, ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಾರೆ. ಆದರೆ ಕರ್ನಾಟಕವನ್ನಾಳುತ್ತಿರುವ ಸದ್ಯದ ನಾಯಕ ಕ್ರಿಯೆಗೆ ಪ್ರತಿಕ್ರಿಯೆಯಲ್ಲಿ ನಂಬಿಕೆ ಇಟ್ಟವರು. ಆದ್ದರಿಂದ ತಾರತಮ್ಯವೆಸಗಿದ್ದಾರೆ. ಸತ್ತವರ ಕುಟುಂಬಕ್ಕಾಗಲಿ ಪರಿಹಾರ ನೀಡುವ ವಿಷಯಕ್ಕಾಗಲಿ ಅವರು ತಾನು ಬಿಜೆಪಿ ಜನರ ರಕ್ಷಕನೇ ಹೊರತು ಇನ್ನಾರಿಗೂ ನಾಯಕನಲ್ಲ ಎಂಬುದನ್ನ ಸಾಬೀತುಪಡಿಸಿದ್ದಾರೆ. ಇದು ಈ ನಾಡಿಗೆ ಅವಮಾನ. ಚಿಂತಕ ಎಂ.ಎನ್ ರಾಯ್‌ರವರ ವಿದ್ವತ್ತಿನ ಅನುಯಾಯಿಯಾಗಿದ್ದ ಎಸ್.ಆರ್ ಬೊಮ್ಮಾಯಿಯವರ ಮಗನಿಂದ ತಂದೆಗೆ ಅವಮಾನವಾಗಿದೆ. ಅಷ್ಟಕ್ಕೂ ಈ ಬೊಮ್ಮಾಯಿಯವರು, ಸ್ವಪ್ರತಿಭೆ ಮತ್ತು ಸ್ವಪ್ರಯತ್ನದಿಂದ ಮುಖ್ಯಮಂತ್ರಿಯಾದವರಲ್ಲ; ಯಾವುದೋ ಮತಾಂದ ಕಂಪನಿ ನೇಮಿಸಿದ ಮೇನೇಜರ್. ’ನೀನು ಸುಮ್ಮನಿರು ಉಳಿದುದನ್ನ ನಾವು ನೋಡಿಕೊಳ್ಳುತ್ತೇವೆ’ ಎಂಬ ಆದೇಶ ಅವರು ನೇಮಕವಾದಾಗಿನಿಂದ ಚಾಲ್ತಿಯಲ್ಲಿದೆ. ಇವರ ಮನಸ್ಸಿಗೂ ಕಾಳಿ ಸ್ವಾಮಿ ಮನಸ್ಸಿಗೂ ಏನಾದರೂ ಸಂಬಂಧವಿದೆಯೇ ಎಂದು ಕರ್ನಾಟಕದ ಜನ ಚಿಂತೆಗೀಡಾಗಿದ್ದಾರಂತಲ್ಲಾ, ಥೂತ್ತೇರಿ..

*****

ಈ ರಾಜಕೀಯ ಹತ್ಯಾಕಾಂಡದಲ್ಲಿ ಒಬ್ಬನೇಒಬ್ಬ ಆರೆಸ್ಸೆಸ್ಸಿಗನಾಗಾಲಿ ಬಿಜೆಪಿ ಮುಖಂಡನಾಗಲೀ ಹತ್ಯೆಯಾದ ಉದಾಹರಣೆಯಿಲ್ಲ. ಏಕೆಂದರೆ ಅವರ ಜೀವ ದೇವನೂರರು ಹೇಳುವಂತೆ ಸಪ್ತ ಸಮುದ್ರದಾಚೆಯಿರುವ ಕಾಡಿನ ಮರದ ಪೊಟರೆಯಲ್ಲಿರುವ ಗಿಳಿಯ ದೇಹದಲ್ಲಿ ಸುರಕ್ಷಿತವಾಗಿದೆ. ಅದನ್ನ ರಕ್ಷಿಸುವ ಹೂಣೆ ಈ ಶೂದ್ರ ಜಾತಿ ಹುಡುಗರ-ಕಾರ್ಯಕರ್ತರ ಕರ್ತವ್ಯ. ಸಂಘಿಗಳ ಪ್ರಕಾರ ಯಾವುದು ಶಕ್ತಿವಂತ ಸಮೂಹವೊ ಅದು ಶಕ್ತಿಯಿಲ್ಲದ್ದನ್ನ ಜಯಿಸಿ ಅರಗಿಸಿಕೊಳ್ಳುತ್ತದಂತೆ. ಮುಸ್ಲಿಮರನ್ನ ಹೊಡೆದು ಓಡಿಸಿ ಎಂಬ ಸಂದೇಶವನ್ನ ಗೋಳವಲಕರನೇ ನೀಡಿ ಹೋಗಿದ್ದಾರೆ. ಸರಿಯಾದ ಜನಗಣತಿ ನಡೆದರೆ ಮುಸ್ಲಿಮರು ಮುವತ್ತು ಕೋಟಿ ದಾಟಬಲ್ಲರು. ಪ್ರಪಂಚದ ಯಾವ ದೇಶದಲ್ಲೂ ಇಷ್ಟ ಸಂಖ್ಯೆಯಲ್ಲಿ ಮುಸ್ಲಿಮರು ಇರಲಾರರು. ದಾಳಿಯಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲಿ ಬಂದವರು ಬರೀ ಸೈನಿಕರೇ ಹೊರತು ಅವರು ಹೆಂಡತಿ ಮಕ್ಕಳೊಂದಿಗೆ ಬಂದವರಲ್ಲ. ಕುಟುಂಬವನ್ನ ಇಲ್ಲೇ ಸಂಪಾದಿಸಿಕೊಂಡರು. ಹಿಂದೂ ಧರ್ಮದ ಜಾತೀಯತೆ ಮತ್ತು ಅಸ್ಪೃಶ್ಯತೆಯ ಅವಮಾನದಿಂದ ನೊಂದವರು ಹಾಗೂ ಅಮಿಷಕ್ಕೆ ಬಲಿಯಾದವರೆಲ್ಲಾ ಮುಸ್ಲಿಮರಾದರು. ಈಗ ಮುಸ್ಲಿಮರಾಗಿದ್ದರೂ ಅವರಿಗೆ ನೆಮ್ಮದಿಯಿಲ್ಲ. ಆದರೂ ಅವರಿಲ್ಲೇ ಇರುತ್ತಾರೆ. ಅವರು ಕೂಡ ಇಲ್ಲಿನ ದೇಶವಾಸಿಗಳೆಂಬುದನ್ನ ಅರ್ಥಪಡಿಸುತ್ತಿದ್ದಾರೆ. ಅವರ ಅಭದ್ರ ಸ್ಥಿತಿಯೇ ಅವರಲ್ಲಿ ದೈತ್ಯ ಶಕ್ತಿಯನ್ನ ಮೂಡಿಸುತ್ತದೆ. ಜನಾಂಗೀಯವಾದಿಗಳಿಗೆ ಇದು ಅರ್ಥವೇ ಆಗುತ್ತಿಲ್ಲವಂತಲ್ಲಾ, ಥೂತ್ತೇರಿ.

*****

ರಾಷ್ಟ್ರೋತ್ಥಾನ ಸಾಹಿತ್ಯದ ಅಗ್ರಲೇಖಕರಾದ ಎಸ್.ಎಲ್ ಭೈರಪ್ಪನವರು, ಕೆಲ ಲೇಖಕರು ಉತ್ತಮ ಕೃತಿಗಳನ್ನ ರಚಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಆಪಾದನೆಯನ್ನ ಬರೀ ಬ್ರೇಮಿನ್ ವಿಮರ್ಶಕರೇ ಹೆಚ್ಚಿರುವಾಗ ಮಾಡಿದ್ದಾರಂತಲ್ಲಾ. ಹಾಗೆ ನೋಡಿದರೆ ಕನ್ನಡ ವಿಮರ್ಶಕರ ಕಟು ಟೀಕೆಯನ್ನ ಭೈರಪ್ಪನವರು ಸಕಾರಣವಾಗಿಯೇ ಎದುರಿಸಿದ್ದಾರೆ. ಅದರಲ್ಲೂ ನವ್ಯರ ಹೊಡೆತಗಳ ಎದುರು ಭೈರಪ್ಪನವರು ಮಂಕಾಗಿ ಹೋಗಿದ್ದರು. ಏಕೆಂದರೆ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಶಾಂತಿನಾಥ ದೇಸಾಯಿ ಇವರೆಲ್ಲಾ ಭೈರಪ್ಪನವರ ಅಗ್ರಹಾರದ ಕಾಯಿಗಳನ್ನ ಅನಾವರಣ ಮಾಡಿ ಸರಿಮಾಡಿಕೊಳ್ಳಿ ಎಂದಿದ್ದರು. ಅದರಲ್ಲೂ ನವ್ಯದಲ್ಲಿ ಹೆಚ್ಚು ದಿನ ಇರದ ತೇಜಸ್ವಿಯವರಂತೂ ಭೈರಪ್ಪನ ಆವರಣ ಕೃತಿಗೆ ಒಂದು ಸಾಲಿನ ವಿಮರ್ಶೆ ಮಾಡಿ, ’ಹೊಟ್ಟಿಗೆ ಅನ್ನ ತಿನ್ನುವವರಾರು ಇಂತಹ ಕೃತಿ ಬರೆಯಲಾರ’ ಎಂದಿದ್ದರು. ಹೀಗೆ ಭೈರಪ್ಪನವರ ಅಪಾಯಕಾರಿ ಕೃತಿಗಳ ಬಗ್ಗೆ ಎಚ್ಚರಿಸಿ ಹೋಗಿದಾರೆ. ಸರಿಯಾದ ವಿಮರ್ಶಕರಿದ್ದರೆ, ಭೈರಪ್ಪನವರ ಮಾತು ಅವರ ಹಲವು ಕಾದಂಬರಿಗಳಿಗೇ ಅನ್ವಯಿಸುತ್ತದೆಂತಲ್ಲಾ, ಥೂತ್ತೇರಿ.

******

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಕುಮಾರಣ್ಣ ಮತ್ತು ರೇವಣ್ಣ ಅಳುವುದನ್ನ ನೋಡಿದ ಜನ ದಂಗಾಗಿ ಹೋದರಂತಲ್ಲಾ. ಜನ ಸಂಘಟನಾ ಸಭೆಗಳನ್ನ ತಮ್ಮ ಜೀವಮಾನದುದ್ದಕ್ಕೂ ಮಾಡಿಕೊಂಡು ಬಂದ ದೇವೇಗೌಡರು, ತಾವೇ ರೂಪಿಸಿಕೊಂಡ ವೈರಿಗಳನ್ನ ಹತ್ತಿಕ್ಕುವ ಸಭೆಗೆ ಮೊದಲಬಾರಿಗೆ ಬರಲಾಗಲಿಲ್ಲ. ದೇವೇಗೌಡರಿಗೆ ತಮ್ಮ ಮಕ್ಕಳನ್ನ ದಾರಿ ತಪ್ಪಿಸಿದವರ ಪೈಕಿ ಚಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಇತ್ಯಾದಿಗಳನ್ನ ಸರ್ವನಾಶಮಾಡದ ಹೊರತು ನೆಮ್ಮದಿಯಿಲ್ಲಾ. ಈಚೆಗೆ ಆ ಪಟ್ಟಿಗೆ ಕೆ.ಆರ್ ಪೇಟೆ ನಾರಾಯಣಗೌಡರು ಸೇರಿಕೊಂಡಿದ್ದಾರೆ. ಈ ನಾರಾಯಣಗೌಡರ ಕ್ಷೇತ್ರಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ. ಇವರನ್ನ ಹೀನಾಯವಾಗಿ ನಡೆಸಿಕೊಂಡ ಕಾರಣವಾಗಿ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಕಾಲೂರಿತು. ಇದರ ಜಾಡನ್ನೇ ಹಿಡಿದು ನೋಡುತ್ತಾ ಹೋದರೆ ಜೆಡಿಎಸ್ ಪಾರ್ಟಿ ಕರ್ನಾಟಕದಲ್ಲಿ ಬಿಜೆಪಿ ಕಾಲೂರುವಂತೆ ಮಾಡಲು ಬಹಳ ಶ್ರಮವಹಿಸುತ್ತಿರುವುದು ಎದ್ದು ಕಾಣುತ್ತಿದೆಯಲ್ಲಾ. ಕರ್ನಾಟಕದಲ್ಲಿ ಮೂರನೇ ಪಾರ್ಟಿಯೊಂದು ಇರಲೇಬೇಕೆಂದು, ಅದಕ್ಕಾಗಿ ಶ್ರಮಿಸಿದ್ದವರೆಲ್ಲಾ ಒಬ್ಬೊಬ್ಬರೇ ಹಲ್ಲುಕಳಚಿದಂತೆ ಬಿದ್ದುಹೋಗುತ್ತಿರುವ ಬಗ್ಗೆ ಯೋಚಿಸಿ ಕಣ್ಣೀರು ಹಾಕಬೇಕಿತ್ತು. ಅದರ ಬದಲು ಚಲುವರಾಯಸ್ವಾಮಿಯನ್ನ ಸೋಲಿಸಲೋಸ್ಕರ ಜನರನ್ನ ಭಾವುಕರನ್ನಾಗಿಸಲು ಕಣ್ಣೀರು ಹಾಕಬಾರದಿತ್ತು. ರೇವಣ್ಣ ಕುಮಾರಣ್ಣ ಅಳುವುದನ್ನ ನೋಡಿದ ನಾಗಮಂಗಲದ ಜನರು, ರೇವಣ್ಣ ಕಣ್ಣೀರು ಹಾಕಿದವರಲ್ಲ, ಅಂತಹ ಮನುಷ್ಯ ಅಳುತ್ತಿರಬೇಕಾದರೆ ಏನೋ ಭಾರಿ ಕುಟುಂಬ ಸಮಸ್ಯೆ ಇರಬೇಕೆಲ್ಲ, ಎಂದು ಗಾಬರಿ ಮುಖದಲ್ಲಿ ಚರ್ಚಿಸುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: “ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...