Homeಅಂಕಣಗಳುಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

ಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವಹತ್ಯೆಗಳು ನಡೆಯುತ್ತಿವೆ. ಪ್ರವೀಣ್ ಹತ್ಯೆ, ಭಯೋತ್ಪಾದನೆ ಬಳಸಿ ತಮ್ಮ ತಂಟೆಗೆ ಬರದಂತೆ ಎಚ್ಚರಿಸುವ ಹತ್ಯೆ ಅನ್ನುವುದಾದರೆ, ಪಾಝಿಲ್ ಹತ್ಯೆ ಪ್ರತೀಕಾರವಾಗಿ ಭಯೋತ್ಪಾದನಾ ಹತ್ಯೆಯಾಗಿಯೇ ಕಾಣುತ್ತಿದೆ. ಆದರೆ ಇವರಿಬ್ಬರೂ ಮನುಷ್ಯ ಜೀವಿಗಳು. ಈ ಹತ್ಯೆಯನ್ನು ಖಂಡಿಸುವುದರಲ್ಲಿ ತಾರತಮ್ಯ ಇರಬಾರದು. ಮನುಷ್ಯನ ಜೀವ ಯಾವಯಾವುದಕ್ಕೋ ಬಲಿಯಾಗಬಹುದು, ಆದರೆ ಮನುಷ್ಯ ಮನುಷ್ಯನನ್ನ ಕೊಲ್ಲುವುದು ಎಲ್ಲರನ್ನ ಭಯದಲ್ಲಿ ಮುಳುಗಿಸುವ ಕ್ರಿಯೆ. ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲ ಹತ್ಯೆಗಳನ್ನು ಖಂಡಿಸುತ್ತಾರೆ, ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಾರೆ. ಆದರೆ ಕರ್ನಾಟಕವನ್ನಾಳುತ್ತಿರುವ ಸದ್ಯದ ನಾಯಕ ಕ್ರಿಯೆಗೆ ಪ್ರತಿಕ್ರಿಯೆಯಲ್ಲಿ ನಂಬಿಕೆ ಇಟ್ಟವರು. ಆದ್ದರಿಂದ ತಾರತಮ್ಯವೆಸಗಿದ್ದಾರೆ. ಸತ್ತವರ ಕುಟುಂಬಕ್ಕಾಗಲಿ ಪರಿಹಾರ ನೀಡುವ ವಿಷಯಕ್ಕಾಗಲಿ ಅವರು ತಾನು ಬಿಜೆಪಿ ಜನರ ರಕ್ಷಕನೇ ಹೊರತು ಇನ್ನಾರಿಗೂ ನಾಯಕನಲ್ಲ ಎಂಬುದನ್ನ ಸಾಬೀತುಪಡಿಸಿದ್ದಾರೆ. ಇದು ಈ ನಾಡಿಗೆ ಅವಮಾನ. ಚಿಂತಕ ಎಂ.ಎನ್ ರಾಯ್‌ರವರ ವಿದ್ವತ್ತಿನ ಅನುಯಾಯಿಯಾಗಿದ್ದ ಎಸ್.ಆರ್ ಬೊಮ್ಮಾಯಿಯವರ ಮಗನಿಂದ ತಂದೆಗೆ ಅವಮಾನವಾಗಿದೆ. ಅಷ್ಟಕ್ಕೂ ಈ ಬೊಮ್ಮಾಯಿಯವರು, ಸ್ವಪ್ರತಿಭೆ ಮತ್ತು ಸ್ವಪ್ರಯತ್ನದಿಂದ ಮುಖ್ಯಮಂತ್ರಿಯಾದವರಲ್ಲ; ಯಾವುದೋ ಮತಾಂದ ಕಂಪನಿ ನೇಮಿಸಿದ ಮೇನೇಜರ್. ’ನೀನು ಸುಮ್ಮನಿರು ಉಳಿದುದನ್ನ ನಾವು ನೋಡಿಕೊಳ್ಳುತ್ತೇವೆ’ ಎಂಬ ಆದೇಶ ಅವರು ನೇಮಕವಾದಾಗಿನಿಂದ ಚಾಲ್ತಿಯಲ್ಲಿದೆ. ಇವರ ಮನಸ್ಸಿಗೂ ಕಾಳಿ ಸ್ವಾಮಿ ಮನಸ್ಸಿಗೂ ಏನಾದರೂ ಸಂಬಂಧವಿದೆಯೇ ಎಂದು ಕರ್ನಾಟಕದ ಜನ ಚಿಂತೆಗೀಡಾಗಿದ್ದಾರಂತಲ್ಲಾ, ಥೂತ್ತೇರಿ..

*****

ಈ ರಾಜಕೀಯ ಹತ್ಯಾಕಾಂಡದಲ್ಲಿ ಒಬ್ಬನೇಒಬ್ಬ ಆರೆಸ್ಸೆಸ್ಸಿಗನಾಗಾಲಿ ಬಿಜೆಪಿ ಮುಖಂಡನಾಗಲೀ ಹತ್ಯೆಯಾದ ಉದಾಹರಣೆಯಿಲ್ಲ. ಏಕೆಂದರೆ ಅವರ ಜೀವ ದೇವನೂರರು ಹೇಳುವಂತೆ ಸಪ್ತ ಸಮುದ್ರದಾಚೆಯಿರುವ ಕಾಡಿನ ಮರದ ಪೊಟರೆಯಲ್ಲಿರುವ ಗಿಳಿಯ ದೇಹದಲ್ಲಿ ಸುರಕ್ಷಿತವಾಗಿದೆ. ಅದನ್ನ ರಕ್ಷಿಸುವ ಹೂಣೆ ಈ ಶೂದ್ರ ಜಾತಿ ಹುಡುಗರ-ಕಾರ್ಯಕರ್ತರ ಕರ್ತವ್ಯ. ಸಂಘಿಗಳ ಪ್ರಕಾರ ಯಾವುದು ಶಕ್ತಿವಂತ ಸಮೂಹವೊ ಅದು ಶಕ್ತಿಯಿಲ್ಲದ್ದನ್ನ ಜಯಿಸಿ ಅರಗಿಸಿಕೊಳ್ಳುತ್ತದಂತೆ. ಮುಸ್ಲಿಮರನ್ನ ಹೊಡೆದು ಓಡಿಸಿ ಎಂಬ ಸಂದೇಶವನ್ನ ಗೋಳವಲಕರನೇ ನೀಡಿ ಹೋಗಿದ್ದಾರೆ. ಸರಿಯಾದ ಜನಗಣತಿ ನಡೆದರೆ ಮುಸ್ಲಿಮರು ಮುವತ್ತು ಕೋಟಿ ದಾಟಬಲ್ಲರು. ಪ್ರಪಂಚದ ಯಾವ ದೇಶದಲ್ಲೂ ಇಷ್ಟ ಸಂಖ್ಯೆಯಲ್ಲಿ ಮುಸ್ಲಿಮರು ಇರಲಾರರು. ದಾಳಿಯಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲಿ ಬಂದವರು ಬರೀ ಸೈನಿಕರೇ ಹೊರತು ಅವರು ಹೆಂಡತಿ ಮಕ್ಕಳೊಂದಿಗೆ ಬಂದವರಲ್ಲ. ಕುಟುಂಬವನ್ನ ಇಲ್ಲೇ ಸಂಪಾದಿಸಿಕೊಂಡರು. ಹಿಂದೂ ಧರ್ಮದ ಜಾತೀಯತೆ ಮತ್ತು ಅಸ್ಪೃಶ್ಯತೆಯ ಅವಮಾನದಿಂದ ನೊಂದವರು ಹಾಗೂ ಅಮಿಷಕ್ಕೆ ಬಲಿಯಾದವರೆಲ್ಲಾ ಮುಸ್ಲಿಮರಾದರು. ಈಗ ಮುಸ್ಲಿಮರಾಗಿದ್ದರೂ ಅವರಿಗೆ ನೆಮ್ಮದಿಯಿಲ್ಲ. ಆದರೂ ಅವರಿಲ್ಲೇ ಇರುತ್ತಾರೆ. ಅವರು ಕೂಡ ಇಲ್ಲಿನ ದೇಶವಾಸಿಗಳೆಂಬುದನ್ನ ಅರ್ಥಪಡಿಸುತ್ತಿದ್ದಾರೆ. ಅವರ ಅಭದ್ರ ಸ್ಥಿತಿಯೇ ಅವರಲ್ಲಿ ದೈತ್ಯ ಶಕ್ತಿಯನ್ನ ಮೂಡಿಸುತ್ತದೆ. ಜನಾಂಗೀಯವಾದಿಗಳಿಗೆ ಇದು ಅರ್ಥವೇ ಆಗುತ್ತಿಲ್ಲವಂತಲ್ಲಾ, ಥೂತ್ತೇರಿ.

*****

ರಾಷ್ಟ್ರೋತ್ಥಾನ ಸಾಹಿತ್ಯದ ಅಗ್ರಲೇಖಕರಾದ ಎಸ್.ಎಲ್ ಭೈರಪ್ಪನವರು, ಕೆಲ ಲೇಖಕರು ಉತ್ತಮ ಕೃತಿಗಳನ್ನ ರಚಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಆಪಾದನೆಯನ್ನ ಬರೀ ಬ್ರೇಮಿನ್ ವಿಮರ್ಶಕರೇ ಹೆಚ್ಚಿರುವಾಗ ಮಾಡಿದ್ದಾರಂತಲ್ಲಾ. ಹಾಗೆ ನೋಡಿದರೆ ಕನ್ನಡ ವಿಮರ್ಶಕರ ಕಟು ಟೀಕೆಯನ್ನ ಭೈರಪ್ಪನವರು ಸಕಾರಣವಾಗಿಯೇ ಎದುರಿಸಿದ್ದಾರೆ. ಅದರಲ್ಲೂ ನವ್ಯರ ಹೊಡೆತಗಳ ಎದುರು ಭೈರಪ್ಪನವರು ಮಂಕಾಗಿ ಹೋಗಿದ್ದರು. ಏಕೆಂದರೆ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಶಾಂತಿನಾಥ ದೇಸಾಯಿ ಇವರೆಲ್ಲಾ ಭೈರಪ್ಪನವರ ಅಗ್ರಹಾರದ ಕಾಯಿಗಳನ್ನ ಅನಾವರಣ ಮಾಡಿ ಸರಿಮಾಡಿಕೊಳ್ಳಿ ಎಂದಿದ್ದರು. ಅದರಲ್ಲೂ ನವ್ಯದಲ್ಲಿ ಹೆಚ್ಚು ದಿನ ಇರದ ತೇಜಸ್ವಿಯವರಂತೂ ಭೈರಪ್ಪನ ಆವರಣ ಕೃತಿಗೆ ಒಂದು ಸಾಲಿನ ವಿಮರ್ಶೆ ಮಾಡಿ, ’ಹೊಟ್ಟಿಗೆ ಅನ್ನ ತಿನ್ನುವವರಾರು ಇಂತಹ ಕೃತಿ ಬರೆಯಲಾರ’ ಎಂದಿದ್ದರು. ಹೀಗೆ ಭೈರಪ್ಪನವರ ಅಪಾಯಕಾರಿ ಕೃತಿಗಳ ಬಗ್ಗೆ ಎಚ್ಚರಿಸಿ ಹೋಗಿದಾರೆ. ಸರಿಯಾದ ವಿಮರ್ಶಕರಿದ್ದರೆ, ಭೈರಪ್ಪನವರ ಮಾತು ಅವರ ಹಲವು ಕಾದಂಬರಿಗಳಿಗೇ ಅನ್ವಯಿಸುತ್ತದೆಂತಲ್ಲಾ, ಥೂತ್ತೇರಿ.

******

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಕುಮಾರಣ್ಣ ಮತ್ತು ರೇವಣ್ಣ ಅಳುವುದನ್ನ ನೋಡಿದ ಜನ ದಂಗಾಗಿ ಹೋದರಂತಲ್ಲಾ. ಜನ ಸಂಘಟನಾ ಸಭೆಗಳನ್ನ ತಮ್ಮ ಜೀವಮಾನದುದ್ದಕ್ಕೂ ಮಾಡಿಕೊಂಡು ಬಂದ ದೇವೇಗೌಡರು, ತಾವೇ ರೂಪಿಸಿಕೊಂಡ ವೈರಿಗಳನ್ನ ಹತ್ತಿಕ್ಕುವ ಸಭೆಗೆ ಮೊದಲಬಾರಿಗೆ ಬರಲಾಗಲಿಲ್ಲ. ದೇವೇಗೌಡರಿಗೆ ತಮ್ಮ ಮಕ್ಕಳನ್ನ ದಾರಿ ತಪ್ಪಿಸಿದವರ ಪೈಕಿ ಚಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಇತ್ಯಾದಿಗಳನ್ನ ಸರ್ವನಾಶಮಾಡದ ಹೊರತು ನೆಮ್ಮದಿಯಿಲ್ಲಾ. ಈಚೆಗೆ ಆ ಪಟ್ಟಿಗೆ ಕೆ.ಆರ್ ಪೇಟೆ ನಾರಾಯಣಗೌಡರು ಸೇರಿಕೊಂಡಿದ್ದಾರೆ. ಈ ನಾರಾಯಣಗೌಡರ ಕ್ಷೇತ್ರಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ. ಇವರನ್ನ ಹೀನಾಯವಾಗಿ ನಡೆಸಿಕೊಂಡ ಕಾರಣವಾಗಿ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಕಾಲೂರಿತು. ಇದರ ಜಾಡನ್ನೇ ಹಿಡಿದು ನೋಡುತ್ತಾ ಹೋದರೆ ಜೆಡಿಎಸ್ ಪಾರ್ಟಿ ಕರ್ನಾಟಕದಲ್ಲಿ ಬಿಜೆಪಿ ಕಾಲೂರುವಂತೆ ಮಾಡಲು ಬಹಳ ಶ್ರಮವಹಿಸುತ್ತಿರುವುದು ಎದ್ದು ಕಾಣುತ್ತಿದೆಯಲ್ಲಾ. ಕರ್ನಾಟಕದಲ್ಲಿ ಮೂರನೇ ಪಾರ್ಟಿಯೊಂದು ಇರಲೇಬೇಕೆಂದು, ಅದಕ್ಕಾಗಿ ಶ್ರಮಿಸಿದ್ದವರೆಲ್ಲಾ ಒಬ್ಬೊಬ್ಬರೇ ಹಲ್ಲುಕಳಚಿದಂತೆ ಬಿದ್ದುಹೋಗುತ್ತಿರುವ ಬಗ್ಗೆ ಯೋಚಿಸಿ ಕಣ್ಣೀರು ಹಾಕಬೇಕಿತ್ತು. ಅದರ ಬದಲು ಚಲುವರಾಯಸ್ವಾಮಿಯನ್ನ ಸೋಲಿಸಲೋಸ್ಕರ ಜನರನ್ನ ಭಾವುಕರನ್ನಾಗಿಸಲು ಕಣ್ಣೀರು ಹಾಕಬಾರದಿತ್ತು. ರೇವಣ್ಣ ಕುಮಾರಣ್ಣ ಅಳುವುದನ್ನ ನೋಡಿದ ನಾಗಮಂಗಲದ ಜನರು, ರೇವಣ್ಣ ಕಣ್ಣೀರು ಹಾಕಿದವರಲ್ಲ, ಅಂತಹ ಮನುಷ್ಯ ಅಳುತ್ತಿರಬೇಕಾದರೆ ಏನೋ ಭಾರಿ ಕುಟುಂಬ ಸಮಸ್ಯೆ ಇರಬೇಕೆಲ್ಲ, ಎಂದು ಗಾಬರಿ ಮುಖದಲ್ಲಿ ಚರ್ಚಿಸುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: “ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...