Homeಅಂಕಣಗಳುಟಿಪ್ಪು ವಿರೋಧಿಗಳು ತಮ್ಮವರನ್ನೇ ವಿರೋಧಿಸುತ್ತಿವೆ!

ಟಿಪ್ಪು ವಿರೋಧಿಗಳು ತಮ್ಮವರನ್ನೇ ವಿರೋಧಿಸುತ್ತಿವೆ!

- Advertisement -
- Advertisement -

ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಬರೀ ಹಗರಣಗಳಲ್ಲೇ ಮುಳುಗಿದ್ದ ಬಿಜೆಪಿ ಪಾರ್ಟಿಗೆ ಮಾಡಾಳು ವಿರೂಪಾಕ್ಷಪ್ಪನ ಹಗರಣ ಆರೋಪ ಮುಟ್ಟಿನೋಡಿಕೊಳ್ಳುವಂತೆ ಮಾಡಿದೆಯಲ್ಲಾ. ಆದರೇನು ಈ ಬಿಜೆಪಿಗಳನ್ನು ಯಾರೂ ಅವಮಾನ ಮಾಡಲಾಗುವುದಿಲ್ಲ. ಮರ್ಯಾದೆ ಕಳೆಯಲಾಗುವುದಿಲ್ಲ. ಮನಸ್ಸಿಗೆ ನೋವು ಮಾಡಲಾಗುವುದಿಲ್ಲ. ಸದರಿ ಹಗರಣದ ಆರೋಪಕ್ಕೆ ಮಾಧುಸ್ವಾಮಿ ಮತ್ತು ಮುಖ್ಯಮಂತ್ರಿ ಉತ್ತರ ಕೊಟ್ಟಾಗಿದೆ. ಏನೆಂದರೆ, ಲೋಕಾಯುಕ್ತದಲ್ಲಿ ನಿಮ್ಮ ಹಗರಣಗಳೂ ಹೊರಬರಲಿವೆ. ಮಗ ಮಾಡಿದ ಹಗರಣಕ್ಕೆ ಅಪ್ಪ ವಿರೂಪಾಕ್ಷನದೇನು ತಪ್ಪು. ನಿಮ್ಮ ಕಾಲದಲ್ಲಿ ಹಗರಣಗಳೇ ಆಗಿರಲಿಲ್ಲವೆ? ಹೀಗೆ. ಇಂತಹ ಉತ್ತರಗಳಿಂದ ಬಿಜೆಪಿಗಳ ಮನಸ್ಸೇನೆಂಬುದು ನಾಡಿನ ಜನಕ್ಕೆ ಅರಿವಾಗುತ್ತಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ಶಾ ಎಂಬಾತ ತನ್ನ ಭಾಷಣದಲ್ಲಿ ಮುಂದೆ ಲಂಚಮುಕ್ತ ಸರಕಾರ ಕೊಡುತ್ತೇವೆ ಎಂದಿದ್ದರು! ಅಲ್ಲಿಗೆ ಈವರೆಗೆ ಲಂಚ ತಿಂದ ಸರಕಾರ ನಡೆಸಿದ್ದೇವೆ ಎಂಬುದನ್ನು ಒಪ್ಪಿಕೊಡಂತಾಯ್ತು. ಈ ಬಿಜೆಪಿಗಳಿಗೆ ತಾವು ಆಡುವ ಮಾತಿನ ಅರ್ಥ ಭಾವ ಒಂದು ತಿಳಿಯುವುದಿಲ್ಲವೆಂಬುದಕ್ಕೆ ಇದು ಸಾಕ್ಷಿ. ಇನ್ನು ನಮ್ಮ ಮಾಡಾಳು ಇರಪಾಕ್ಷಿ ಕೋಟ್ಯಾಧಿಪತಿ ವಡ್ನಾಳು ರಾಜಣ್ಣನನ್ನು ಸೋಲಿಸಿ ಬಂದವರು. ಬರಲಿರುವ ಚುನಾವಣೆಯಲ್ಲಿ ಕೋಟಿಕೋಟಿ ಚೆಲ್ಲಬೇಕಿರುವುದರಿಂದ ಧನ ಸಂಗ್ರಹಕ್ಕೆ ಮಗನನ್ನು ನೇಮಿಸಿದ್ದರು ಅನಿಸುತ್ತೆ. ಮಾಡಾಳನ ಮಗನಂಥವರು ಇನ್ನು ಅದೆಷ್ಟು ಮಂದಿ ಬಿಜೆಪಿಯ ಮಂತ್ರಿ ಶಾಸಕರ ಬೆನ್ನಿಗಿದ್ದಾರೊ ಎಂಬುದು ಆ ಮಾಧುಸ್ವಾಮಿಗೇ ಗೊತ್ತಂತಿಲ್ಲಾ, ಥೂತ್ತೇರಿ.

****

ಉಡುಪಿ ಭಟ್ಟನ ಪ್ರಕರಣದಿಂದ ಹಿಡಿದು, ಮೈಸೂರು ರಾಮದಾಸ, ಅತ್ತ ಬೆಳಗಾವಿಯ ಜಾರಕಿಹೊಳಿ, ಹೊನ್ನಾಳಿಯ ರೇಣುಕಾಚಾರಿ, ಹರತಾಳು ಹಾಲಪ್ಪ ಇಂತಹವರ ಹಲವಾರು ಸಾಮಾಜಿಕ ಸಮಸ್ಯಗೆಳಿಂದ ಬಿಜೆಪಿ ನರಳಿದರೂ, ಅದು ಹೇಗೋ ಚೇತರಿಸಿಕೊಳ್ಳುತ್ತದೆಲ್ಲಾ. ಮತ್ತೆ ಹಗರಣಕ್ಕೆ ಸಂಬಂಧಪಟ್ಟವರೆಲ್ಲಾ ಚುನಾವಣೆಯಲ್ಲಿ ಗೆದ್ದು ಬರುವುದು ಸಾಮಾನ್ಯವಾಗಿದೆಯಲ್ಲಾ. ಅಧಿಕಾರ ದುರುಪಯೋಗದಿಂದ ಲೈಂಗಿಕ ಶೋಷಣೆ ಮಾಡಿದ ರೇಣುಕಾಚಾರಿ ವಿರುದ್ಧದ ಆರೋಪದ ಸುದ್ದಿಗೆ ಈ ನಾಡೇನು ಬೆಚ್ಚಲಿಲ್ಲ. ಬದಲಿಗೆ ಶಾಸಕನಾದಾಗ ಸಿಗುವ ಸವಲತ್ತು ನೋಡಿ ದಂಗುಬಡಿದರು. ಜನ ಸಂತ್ರಸ್ತರನ್ನೇ ಕುರಿತು ಆಡಿಕೊಳ್ಳುವುದು ಜಾಸ್ತಿ. ಆಗ ಈಶ್ವರಪ್ಪನೆಂಬ ಮಹಿಳಾವಾದಿ, ’ನೀವು ಆರೋಪ ಮಾಡಿದ ಮಹಿಳೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೀರಿ, ಆದರೆ ರೇಣುಕಾಚಾರಿ ಪತ್ನಿಯ ಬಗ್ಗೆ ಯೋಚಿಸಿದ್ದೀರಾ?’ ಎಂದು ಪ್ರಶ್ನೆ ಕೇಳಿದ್ದರು! ಬಿಜೆಪಿ ಮತದಾರರು ಕನಿಕರದಿಂದ, ’ಪಾಪ ರೇಣುಕಾಚಾರಿಯದೇನೂ ತಪ್ಪಿಲ್ಲ’ ಎಂದುದಲ್ಲದೆ ಆತನನ್ನು ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿದರು. ತಮ್ಮ ನಾಯಕನ ವಿರುದ್ಧ ಬಂದ ಸುಳ್ಳು ಜಾತಿ ಸರ್ಟಿಫಿಕೇಟ್ ಆರೋಪ ಪ್ರಕರಣ, ವಂಚನೆ, ಭ್ರಷ್ಟತೆ, ವ್ಯಭಿಚಾರ ಇವೆಲ್ಲಾ ಸಮಸ್ಯೆಯೇ ಅಲ್ಲವೆಂದು ರೇಣುಕಾಚಾರಿಯನ್ನು ಗೆಲ್ಲಿಸಿ ಅರಾಮವಾಗಿರುವ ಒಂದು ವರ್ಗದ ಪ್ರಜೆಗಳ ಮನೋಗತವೇ, ಮಾಡಾಳು ಮೈಮರೆತು ಮೇದದ್ದು ಕೂಡ ಒಂದು ಅಪರಾಧವಾಗಿ ಕಾಣದಂತೆ ಕಾಯುತ್ತದಂತಲ್ಲಾ. ಮುಂದಿನ ಚುನಾವಣೆಯಲ್ಲಿ ಮಾಡಾಳರನ್ನೇ ಗೆಲ್ಲಿಸುವ ಶಪಥವನ್ನು ಅವರ ಮನೆ ಮುಂದೆ ಸೇರಿದ್ದ ಜನ ಮಾಡಿದರಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

ಇದ್ದಕ್ಕಿದ್ದಂತೆ ಬೆಲ್ಜಿಯಂನಿಂದ ಹಾರಿಬಂದ ಬಾಲು ಹೆಸರಿನ ಮನುಷ್ಯ ಕುವೆಂಪು ಯೂನಿವರ್ಸಿಟಿ ಆವರಣದಲ್ಲಿ ಹಾರಾಡಿ ಆರೆಸ್ಸೆಸ್ ಭೈಠಕ್‌ನಲ್ಲೂ ಭಾಗವಹಿಸಿ ನಿಮ್ಮಲ್ಲಿ ಸಾಹಿತಿಗಳು, ಕಲಾವಿದರು, ಬುದ್ಧಿವಂತರ ಕೊರತೆಯಿದೆ; ಆದ್ದರಿಂದ ಆ ಬಗ್ಗೆ ಎಚ್ಚರವಹಿಸಿ ಎಂದು ಹೇಳಿದ್ದಲ್ಲದೆ ಭಾರತದಲ್ಲಿ ಭೀಕರ ಜಾತೀಯತೆ ಅಸ್ಪೃಶ್ಯತೆ ಭುಗಿಲೇಳಲು ಬ್ರಿಟಿಷರು ಕಾರಣ ಎಂದು ಹೇಳು ಇಲ್ಲೊಂದೆರಡು ’ಬಾಲು’ಗಳನ್ನು ತಯಾರು ಮಾಡಿ ದೇವನೂರ, ಡಿ. ಎಸ್. ನಾಗಭೂಷಣ್ ಇಂತಹವರೆಲ್ಲಾ ಗದರಿದ ಮೇಲೆ ಮತ್ತೆ ಬೆಲ್ಜಿಯಂಗೆ ಹಾರಿಹೋದುದು ಈಗ ಇತಿಹಾಸ. ಆದರೇನು ಬೆಲ್ಜಿಯಂನಲ್ಲಿ ಕುಳಿತೇ ತನ್ನ ನಿರೂಪಣೆಯ ಜಾಲವನ್ನು ಹರಡುತ್ತಿರುವ ಬಾಲುವಿನ ಬಾಲಬಡುಕರು ಸೆಕ್ಯುಲರ್ ಪದ ಹಿಡಿದುಕೊಂಡು ಬಡಿಯತೊಡಗಿವೆ. ಇನ್ನ ಕೆಲವರು ವಿಜ್ಞಾನವು ಶಂಕರಾಚಾರ್ಯರ ವೇದಾಂತದತ್ತ ವಾಲುತ್ತಿದೆ ಎಂದು ವಾದಿಸತೊಡಗಿದರೆ ಮತ್ತೆ ಕೆಲವು ಸದ್ಯಕ್ಕೆ ತಾವು ಕೈಗೆತ್ತಿಕೊಂಡಿರುವ ಟಿಪ್ಪು ವಿಷಯದಲ್ಲಿ ಬ್ರಿಟಿಷ್ ಲೇಖಕರು ಏನು ಹೇಳಿದ್ದಾರೆಂದು ಹುಡುಕಿ ಅನಾವರಣ ಮಾಡತೊಡಗಿವೆಯಲ್ಲಾ, ಥೂತ್ತೇರಿ.

****

ಇನ್ನೂರು ವರ್ಷದ ಹಿಂದೆ ಆಳಿಹೋದ ಟಿಪ್ಪು ಸಮಾಧಿ ಅಗೆಯುತ್ತ ಬಿಜೆಪಿಗಳು ಕುಳಿತಿರುವಾಗಲೇ ಚಿಕ್ಕಮಗಳೂರಿನ ಉರಿಗೌಡ ಮತ್ತು ಬೆಂಗಳೂರಿನ ನಂಜೇಗೌಡ ಸೇರಿಕೊಂಡು ಮಂಡ್ಯಕ್ಕೆ ಉರಿತಾಗಿಸುವ ಸುದ್ದಿ ಕೇಳಿದ ಮೋದಿ ಮಂಡ್ಯದಿಂದಲೇ ರೋಡ್ ಶೋ ಮಾಡುವ ತೀರ್ಮಾನ ತೆಗೆದುಕೊಂಡರಂತಲ್ಲಾ. ಅಷ್ಟಕ್ಕೂ ಟಿಪ್ಪು ವಿಷಯಕ್ಕೆ ಮರುಜೀವ ಕೊಡುತ್ತಿರುವ ಮಡಕೇರಿ ಕಡೆಯ ಅಡ್ನಾಡಿ ಸಂಶೋಧನೆಯ ವಾದದ ಪ್ರಕಾರ ಟಿಪ್ಪು ಸಾವಿರಾರು ಜನರನ್ನು ಇಸ್ಲಾಂ ಮತಾಂತರ ಮಾಡಿದ ಎಂದು ಬಡಿದುಕೊಳ್ಳುತ್ತಿರುವುದು. ಇದೇನು ಅಲ್ಲಗಳೆವ ಸಂಗತಿಯಲ್ಲ. ಇದಕ್ಕೆ ದಾಖಲೆಗಳಿವೆ. ಟಿಪ್ಪು ರಾಜನಾದ ಮೇಲೆ ದಂಗೆ ಎದ್ದ ಕೊಡಗಿನ ಕೆಲವರನ್ನ ಮತಾಂತರ ಮಾಡಿದ ಎನ್ನಲಾಗುತ್ತದೆ. ಆ ನಂತರ, ಟಿಪ್ಪು ಸತ್ತ ಕೂಡಲೇ ಆತ ಮತಾಂತರ ಮಾಡಿದವರನ್ನು ಮರಳಿ ಅವರ ಧರ್ಮ (ಜಾತಿ ಯಾವುದಕ್ಕೆ ಎಂಬ ಪ್ರಶ್ನೆ ಬೇರೆಯದ್ದು) ಕರೆತರಬಹುದಿತ್ತಲ್ಲವಾ? ಆ ಕೆಲಸವನ್ನು ಮಾಡದೆ ಅಂದು ಮತಾಂತರಗೊಂಡ ಕೊಡವರು ಮತ್ತು ಲಿಂಗಾಯತರನ್ನು ಇಂದು ದ್ವೇಷ ಮಾಡುತ್ತಿರುವ ಮಂದಮತಿಗಳಿಗೆ ತಾವು ತಮ್ಮವರನ್ನೇ ದ್ವೇಷ ಮಾಡುತ್ತಿದ್ದೇವೆ ಎಂಬುದು ಅರಿವಿಗೇ ಬಂದಿಲ್ಲವಲ್ಲಾ, ಥೂತ್ತೇರಿ.

****

ಇತ್ತ ಬೆಲ್ಜಿಯಂ ಬಾಲು ಕಡೆಯವರು ಟಿಪ್ಪು ಮತಾಂಧ ಮತ್ತು ಕ್ರೂರಿ ಎಂಬುದನ್ನು ಸಾಬೀತುಪಡಿಸಲೋಸ್ಕರ ಇತಿಹಾಸ ಪುಸ್ತಕಗಳನ್ನು ಕೆದಕುತ್ತಾ ಕುಳಿತಿವೆಯಂತೆ. ಅದೂ ಬ್ರಿಟಿಷ್ ಲೇಖಕರು ಬರೆದ ಕೃತಿಗಳನ್ನು. ಈ ಪೈಕಿ ಫ್ರಾನ್ಸಿಸ್ ಬುಖನನ್ ಕುರಿತು ಅಧ್ಯಯನ ಮಾಡುತ್ತಿರುವ ಸಂಘಿ ವಿದ್ವಾಂಸರು, ಅದರಲ್ಲಿ ಟಿಪ್ಪು ಬಗ್ಗೆ ಒಂದು ಸಣ್ಣ ಟೀಕೆ ಕಂಡರೂ ಅದನ್ನು ರಾಷ್ಟ್ರೋತ್ಥಾನ ಸಾಹಿತ್ಯದ ಪದಪುಂಜ ಬಳಸಿ ಮರುಕಟ್ಟುತ್ತಿವೆ. ಟಿಪ್ಪು ಬ್ರಿಟಿಷರ ಪಾಲಿಗೆ ಹುಲಿಯಾಗಿದ್ದ. ಅವರನ್ನ ಭಾರತದಿಂದಲೇ ಓಡಿಸುವ ಶಪಥ ಮಾಡಿದ್ದ. ಆದರೆ ಬ್ರಿಟಿಷರ ಆಡಳಿತದಲ್ಲಿ ಕಲೆಕ್ಟರಾಗಿದ್ದವರು, ಅವರ ಆಸ್ಥಾನದಲ್ಲಿದ್ದವರು, ಮಂತ್ರಿಗಳಾಗಿದ್ದವರು, ದಿವಾನರಾಗಿದ್ದವರು ಏಕೆ ಟಿಪ್ಪು ಬಗ್ಗೆ ಏನೂ ಬರೆಯದೆ ಹೊರಟುಹೋಗಿದ್ದಾರೆ ಎಂಬುದನ್ನು ಸಂಘಿ ವಿದ್ವಾಂಸರು ಅಧ್ಯಯನ ಮಾಡಿದರೆ ತಮ್ಮ ಪೂರ್ವಿಕರ ಭೋಜನದ ಇತಿಹಾಸ ತಿಳಿಯಬಹುದುದಲ್ಲವೆ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ...

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...

ಮಣಿಪುರ: ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಇಂಫಾಲ್ ಕಣಿವೆಯಲ್ಲಿ ಪ್ರತಿಭಟನೆ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಮಣಿಪುರ: ಕಣಿವೆಯ ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿಗಳು ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಮಣಿಪುರ ಸರ್ಕಾರ ಮಂಗಳವಾರ ಆದೇಶಿಸಿದೆ. ಗೃಹ ಇಲಾಖೆಯ ಅಧಿಕೃತ...

ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐವರ ಬಂಧನ; ಅಂತರರಾಜ್ಯ ಎಲ್‌ಇಟಿ ಮಾಡ್ಯೂಲ್ ಪತ್ತೆ 

ಶ್ರೀನಗರ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಅಂತರರಾಜ್ಯ ಮಾಡ್ಯೂಲ್ ಅನ್ನು ಭೇದಿಸಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐದು...

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಮೂವರು ಸಾವು

ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ಕಾನ್ಸುಲೇಟ್ ಕಟ್ಟಡದ ಬಳಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ, ಅಧಿಕಾರಿಗಳು ಆ ಪ್ರದೇಶವನ್ನು...

ತೆಲಂಗಾಣ ಸಿಎಂ ರೆಡ್ಡಿ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ; ತೀವ್ರ ಸ್ವರೂಪ ಪಡೆದುಕೊಂಡ ವಾಕ್ಸಮರ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ (ಏ.7) ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರ ನಡುವಿನ ಮಾತಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಣ್ಣೂರಿನಲ್ಲಿ ನಡೆದ ಪತ್ರಿಕಾ ಸಂವಾದ...

ಹಿಮಂತ ಬಿಸ್ವಾ ಶರ್ಮಾ ಪತ್ನಿಯ ವಿರುದ್ಧ ‘ಹಲವು ಪಾಸ್‌ಪೋರ್ಟ್‌’ ಹೊಂದಿರುವ ಆರೋಪ : ಪವನ್ ಖೇರಾ ಮನೆಯಲ್ಲಿ ಶೋಧ ನಡೆಸಿದ ಅಸ್ಸಾಂ ಪೊಲೀಸರು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಮನೆಯಲ್ಲಿ ಶೋಧ...

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇಂದ್ರದ ಹಣವನ್ನು ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಂಡಿದೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ನಿಧಿಯ ದುರುಪಯೋಗ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ಕುಸಿತವಾಗಿದೆ ಎಂದು...