Homeಅಂಕಣಗಳುಟಿಪ್ಪು ವಿರೋಧಿಗಳು ತಮ್ಮವರನ್ನೇ ವಿರೋಧಿಸುತ್ತಿವೆ!

ಟಿಪ್ಪು ವಿರೋಧಿಗಳು ತಮ್ಮವರನ್ನೇ ವಿರೋಧಿಸುತ್ತಿವೆ!

- Advertisement -
- Advertisement -

ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಬರೀ ಹಗರಣಗಳಲ್ಲೇ ಮುಳುಗಿದ್ದ ಬಿಜೆಪಿ ಪಾರ್ಟಿಗೆ ಮಾಡಾಳು ವಿರೂಪಾಕ್ಷಪ್ಪನ ಹಗರಣ ಆರೋಪ ಮುಟ್ಟಿನೋಡಿಕೊಳ್ಳುವಂತೆ ಮಾಡಿದೆಯಲ್ಲಾ. ಆದರೇನು ಈ ಬಿಜೆಪಿಗಳನ್ನು ಯಾರೂ ಅವಮಾನ ಮಾಡಲಾಗುವುದಿಲ್ಲ. ಮರ್ಯಾದೆ ಕಳೆಯಲಾಗುವುದಿಲ್ಲ. ಮನಸ್ಸಿಗೆ ನೋವು ಮಾಡಲಾಗುವುದಿಲ್ಲ. ಸದರಿ ಹಗರಣದ ಆರೋಪಕ್ಕೆ ಮಾಧುಸ್ವಾಮಿ ಮತ್ತು ಮುಖ್ಯಮಂತ್ರಿ ಉತ್ತರ ಕೊಟ್ಟಾಗಿದೆ. ಏನೆಂದರೆ, ಲೋಕಾಯುಕ್ತದಲ್ಲಿ ನಿಮ್ಮ ಹಗರಣಗಳೂ ಹೊರಬರಲಿವೆ. ಮಗ ಮಾಡಿದ ಹಗರಣಕ್ಕೆ ಅಪ್ಪ ವಿರೂಪಾಕ್ಷನದೇನು ತಪ್ಪು. ನಿಮ್ಮ ಕಾಲದಲ್ಲಿ ಹಗರಣಗಳೇ ಆಗಿರಲಿಲ್ಲವೆ? ಹೀಗೆ. ಇಂತಹ ಉತ್ತರಗಳಿಂದ ಬಿಜೆಪಿಗಳ ಮನಸ್ಸೇನೆಂಬುದು ನಾಡಿನ ಜನಕ್ಕೆ ಅರಿವಾಗುತ್ತಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ಶಾ ಎಂಬಾತ ತನ್ನ ಭಾಷಣದಲ್ಲಿ ಮುಂದೆ ಲಂಚಮುಕ್ತ ಸರಕಾರ ಕೊಡುತ್ತೇವೆ ಎಂದಿದ್ದರು! ಅಲ್ಲಿಗೆ ಈವರೆಗೆ ಲಂಚ ತಿಂದ ಸರಕಾರ ನಡೆಸಿದ್ದೇವೆ ಎಂಬುದನ್ನು ಒಪ್ಪಿಕೊಡಂತಾಯ್ತು. ಈ ಬಿಜೆಪಿಗಳಿಗೆ ತಾವು ಆಡುವ ಮಾತಿನ ಅರ್ಥ ಭಾವ ಒಂದು ತಿಳಿಯುವುದಿಲ್ಲವೆಂಬುದಕ್ಕೆ ಇದು ಸಾಕ್ಷಿ. ಇನ್ನು ನಮ್ಮ ಮಾಡಾಳು ಇರಪಾಕ್ಷಿ ಕೋಟ್ಯಾಧಿಪತಿ ವಡ್ನಾಳು ರಾಜಣ್ಣನನ್ನು ಸೋಲಿಸಿ ಬಂದವರು. ಬರಲಿರುವ ಚುನಾವಣೆಯಲ್ಲಿ ಕೋಟಿಕೋಟಿ ಚೆಲ್ಲಬೇಕಿರುವುದರಿಂದ ಧನ ಸಂಗ್ರಹಕ್ಕೆ ಮಗನನ್ನು ನೇಮಿಸಿದ್ದರು ಅನಿಸುತ್ತೆ. ಮಾಡಾಳನ ಮಗನಂಥವರು ಇನ್ನು ಅದೆಷ್ಟು ಮಂದಿ ಬಿಜೆಪಿಯ ಮಂತ್ರಿ ಶಾಸಕರ ಬೆನ್ನಿಗಿದ್ದಾರೊ ಎಂಬುದು ಆ ಮಾಧುಸ್ವಾಮಿಗೇ ಗೊತ್ತಂತಿಲ್ಲಾ, ಥೂತ್ತೇರಿ.

****

ಉಡುಪಿ ಭಟ್ಟನ ಪ್ರಕರಣದಿಂದ ಹಿಡಿದು, ಮೈಸೂರು ರಾಮದಾಸ, ಅತ್ತ ಬೆಳಗಾವಿಯ ಜಾರಕಿಹೊಳಿ, ಹೊನ್ನಾಳಿಯ ರೇಣುಕಾಚಾರಿ, ಹರತಾಳು ಹಾಲಪ್ಪ ಇಂತಹವರ ಹಲವಾರು ಸಾಮಾಜಿಕ ಸಮಸ್ಯಗೆಳಿಂದ ಬಿಜೆಪಿ ನರಳಿದರೂ, ಅದು ಹೇಗೋ ಚೇತರಿಸಿಕೊಳ್ಳುತ್ತದೆಲ್ಲಾ. ಮತ್ತೆ ಹಗರಣಕ್ಕೆ ಸಂಬಂಧಪಟ್ಟವರೆಲ್ಲಾ ಚುನಾವಣೆಯಲ್ಲಿ ಗೆದ್ದು ಬರುವುದು ಸಾಮಾನ್ಯವಾಗಿದೆಯಲ್ಲಾ. ಅಧಿಕಾರ ದುರುಪಯೋಗದಿಂದ ಲೈಂಗಿಕ ಶೋಷಣೆ ಮಾಡಿದ ರೇಣುಕಾಚಾರಿ ವಿರುದ್ಧದ ಆರೋಪದ ಸುದ್ದಿಗೆ ಈ ನಾಡೇನು ಬೆಚ್ಚಲಿಲ್ಲ. ಬದಲಿಗೆ ಶಾಸಕನಾದಾಗ ಸಿಗುವ ಸವಲತ್ತು ನೋಡಿ ದಂಗುಬಡಿದರು. ಜನ ಸಂತ್ರಸ್ತರನ್ನೇ ಕುರಿತು ಆಡಿಕೊಳ್ಳುವುದು ಜಾಸ್ತಿ. ಆಗ ಈಶ್ವರಪ್ಪನೆಂಬ ಮಹಿಳಾವಾದಿ, ’ನೀವು ಆರೋಪ ಮಾಡಿದ ಮಹಿಳೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೀರಿ, ಆದರೆ ರೇಣುಕಾಚಾರಿ ಪತ್ನಿಯ ಬಗ್ಗೆ ಯೋಚಿಸಿದ್ದೀರಾ?’ ಎಂದು ಪ್ರಶ್ನೆ ಕೇಳಿದ್ದರು! ಬಿಜೆಪಿ ಮತದಾರರು ಕನಿಕರದಿಂದ, ’ಪಾಪ ರೇಣುಕಾಚಾರಿಯದೇನೂ ತಪ್ಪಿಲ್ಲ’ ಎಂದುದಲ್ಲದೆ ಆತನನ್ನು ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿದರು. ತಮ್ಮ ನಾಯಕನ ವಿರುದ್ಧ ಬಂದ ಸುಳ್ಳು ಜಾತಿ ಸರ್ಟಿಫಿಕೇಟ್ ಆರೋಪ ಪ್ರಕರಣ, ವಂಚನೆ, ಭ್ರಷ್ಟತೆ, ವ್ಯಭಿಚಾರ ಇವೆಲ್ಲಾ ಸಮಸ್ಯೆಯೇ ಅಲ್ಲವೆಂದು ರೇಣುಕಾಚಾರಿಯನ್ನು ಗೆಲ್ಲಿಸಿ ಅರಾಮವಾಗಿರುವ ಒಂದು ವರ್ಗದ ಪ್ರಜೆಗಳ ಮನೋಗತವೇ, ಮಾಡಾಳು ಮೈಮರೆತು ಮೇದದ್ದು ಕೂಡ ಒಂದು ಅಪರಾಧವಾಗಿ ಕಾಣದಂತೆ ಕಾಯುತ್ತದಂತಲ್ಲಾ. ಮುಂದಿನ ಚುನಾವಣೆಯಲ್ಲಿ ಮಾಡಾಳರನ್ನೇ ಗೆಲ್ಲಿಸುವ ಶಪಥವನ್ನು ಅವರ ಮನೆ ಮುಂದೆ ಸೇರಿದ್ದ ಜನ ಮಾಡಿದರಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

ಇದ್ದಕ್ಕಿದ್ದಂತೆ ಬೆಲ್ಜಿಯಂನಿಂದ ಹಾರಿಬಂದ ಬಾಲು ಹೆಸರಿನ ಮನುಷ್ಯ ಕುವೆಂಪು ಯೂನಿವರ್ಸಿಟಿ ಆವರಣದಲ್ಲಿ ಹಾರಾಡಿ ಆರೆಸ್ಸೆಸ್ ಭೈಠಕ್‌ನಲ್ಲೂ ಭಾಗವಹಿಸಿ ನಿಮ್ಮಲ್ಲಿ ಸಾಹಿತಿಗಳು, ಕಲಾವಿದರು, ಬುದ್ಧಿವಂತರ ಕೊರತೆಯಿದೆ; ಆದ್ದರಿಂದ ಆ ಬಗ್ಗೆ ಎಚ್ಚರವಹಿಸಿ ಎಂದು ಹೇಳಿದ್ದಲ್ಲದೆ ಭಾರತದಲ್ಲಿ ಭೀಕರ ಜಾತೀಯತೆ ಅಸ್ಪೃಶ್ಯತೆ ಭುಗಿಲೇಳಲು ಬ್ರಿಟಿಷರು ಕಾರಣ ಎಂದು ಹೇಳು ಇಲ್ಲೊಂದೆರಡು ’ಬಾಲು’ಗಳನ್ನು ತಯಾರು ಮಾಡಿ ದೇವನೂರ, ಡಿ. ಎಸ್. ನಾಗಭೂಷಣ್ ಇಂತಹವರೆಲ್ಲಾ ಗದರಿದ ಮೇಲೆ ಮತ್ತೆ ಬೆಲ್ಜಿಯಂಗೆ ಹಾರಿಹೋದುದು ಈಗ ಇತಿಹಾಸ. ಆದರೇನು ಬೆಲ್ಜಿಯಂನಲ್ಲಿ ಕುಳಿತೇ ತನ್ನ ನಿರೂಪಣೆಯ ಜಾಲವನ್ನು ಹರಡುತ್ತಿರುವ ಬಾಲುವಿನ ಬಾಲಬಡುಕರು ಸೆಕ್ಯುಲರ್ ಪದ ಹಿಡಿದುಕೊಂಡು ಬಡಿಯತೊಡಗಿವೆ. ಇನ್ನ ಕೆಲವರು ವಿಜ್ಞಾನವು ಶಂಕರಾಚಾರ್ಯರ ವೇದಾಂತದತ್ತ ವಾಲುತ್ತಿದೆ ಎಂದು ವಾದಿಸತೊಡಗಿದರೆ ಮತ್ತೆ ಕೆಲವು ಸದ್ಯಕ್ಕೆ ತಾವು ಕೈಗೆತ್ತಿಕೊಂಡಿರುವ ಟಿಪ್ಪು ವಿಷಯದಲ್ಲಿ ಬ್ರಿಟಿಷ್ ಲೇಖಕರು ಏನು ಹೇಳಿದ್ದಾರೆಂದು ಹುಡುಕಿ ಅನಾವರಣ ಮಾಡತೊಡಗಿವೆಯಲ್ಲಾ, ಥೂತ್ತೇರಿ.

****

ಇನ್ನೂರು ವರ್ಷದ ಹಿಂದೆ ಆಳಿಹೋದ ಟಿಪ್ಪು ಸಮಾಧಿ ಅಗೆಯುತ್ತ ಬಿಜೆಪಿಗಳು ಕುಳಿತಿರುವಾಗಲೇ ಚಿಕ್ಕಮಗಳೂರಿನ ಉರಿಗೌಡ ಮತ್ತು ಬೆಂಗಳೂರಿನ ನಂಜೇಗೌಡ ಸೇರಿಕೊಂಡು ಮಂಡ್ಯಕ್ಕೆ ಉರಿತಾಗಿಸುವ ಸುದ್ದಿ ಕೇಳಿದ ಮೋದಿ ಮಂಡ್ಯದಿಂದಲೇ ರೋಡ್ ಶೋ ಮಾಡುವ ತೀರ್ಮಾನ ತೆಗೆದುಕೊಂಡರಂತಲ್ಲಾ. ಅಷ್ಟಕ್ಕೂ ಟಿಪ್ಪು ವಿಷಯಕ್ಕೆ ಮರುಜೀವ ಕೊಡುತ್ತಿರುವ ಮಡಕೇರಿ ಕಡೆಯ ಅಡ್ನಾಡಿ ಸಂಶೋಧನೆಯ ವಾದದ ಪ್ರಕಾರ ಟಿಪ್ಪು ಸಾವಿರಾರು ಜನರನ್ನು ಇಸ್ಲಾಂ ಮತಾಂತರ ಮಾಡಿದ ಎಂದು ಬಡಿದುಕೊಳ್ಳುತ್ತಿರುವುದು. ಇದೇನು ಅಲ್ಲಗಳೆವ ಸಂಗತಿಯಲ್ಲ. ಇದಕ್ಕೆ ದಾಖಲೆಗಳಿವೆ. ಟಿಪ್ಪು ರಾಜನಾದ ಮೇಲೆ ದಂಗೆ ಎದ್ದ ಕೊಡಗಿನ ಕೆಲವರನ್ನ ಮತಾಂತರ ಮಾಡಿದ ಎನ್ನಲಾಗುತ್ತದೆ. ಆ ನಂತರ, ಟಿಪ್ಪು ಸತ್ತ ಕೂಡಲೇ ಆತ ಮತಾಂತರ ಮಾಡಿದವರನ್ನು ಮರಳಿ ಅವರ ಧರ್ಮ (ಜಾತಿ ಯಾವುದಕ್ಕೆ ಎಂಬ ಪ್ರಶ್ನೆ ಬೇರೆಯದ್ದು) ಕರೆತರಬಹುದಿತ್ತಲ್ಲವಾ? ಆ ಕೆಲಸವನ್ನು ಮಾಡದೆ ಅಂದು ಮತಾಂತರಗೊಂಡ ಕೊಡವರು ಮತ್ತು ಲಿಂಗಾಯತರನ್ನು ಇಂದು ದ್ವೇಷ ಮಾಡುತ್ತಿರುವ ಮಂದಮತಿಗಳಿಗೆ ತಾವು ತಮ್ಮವರನ್ನೇ ದ್ವೇಷ ಮಾಡುತ್ತಿದ್ದೇವೆ ಎಂಬುದು ಅರಿವಿಗೇ ಬಂದಿಲ್ಲವಲ್ಲಾ, ಥೂತ್ತೇರಿ.

****

ಇತ್ತ ಬೆಲ್ಜಿಯಂ ಬಾಲು ಕಡೆಯವರು ಟಿಪ್ಪು ಮತಾಂಧ ಮತ್ತು ಕ್ರೂರಿ ಎಂಬುದನ್ನು ಸಾಬೀತುಪಡಿಸಲೋಸ್ಕರ ಇತಿಹಾಸ ಪುಸ್ತಕಗಳನ್ನು ಕೆದಕುತ್ತಾ ಕುಳಿತಿವೆಯಂತೆ. ಅದೂ ಬ್ರಿಟಿಷ್ ಲೇಖಕರು ಬರೆದ ಕೃತಿಗಳನ್ನು. ಈ ಪೈಕಿ ಫ್ರಾನ್ಸಿಸ್ ಬುಖನನ್ ಕುರಿತು ಅಧ್ಯಯನ ಮಾಡುತ್ತಿರುವ ಸಂಘಿ ವಿದ್ವಾಂಸರು, ಅದರಲ್ಲಿ ಟಿಪ್ಪು ಬಗ್ಗೆ ಒಂದು ಸಣ್ಣ ಟೀಕೆ ಕಂಡರೂ ಅದನ್ನು ರಾಷ್ಟ್ರೋತ್ಥಾನ ಸಾಹಿತ್ಯದ ಪದಪುಂಜ ಬಳಸಿ ಮರುಕಟ್ಟುತ್ತಿವೆ. ಟಿಪ್ಪು ಬ್ರಿಟಿಷರ ಪಾಲಿಗೆ ಹುಲಿಯಾಗಿದ್ದ. ಅವರನ್ನ ಭಾರತದಿಂದಲೇ ಓಡಿಸುವ ಶಪಥ ಮಾಡಿದ್ದ. ಆದರೆ ಬ್ರಿಟಿಷರ ಆಡಳಿತದಲ್ಲಿ ಕಲೆಕ್ಟರಾಗಿದ್ದವರು, ಅವರ ಆಸ್ಥಾನದಲ್ಲಿದ್ದವರು, ಮಂತ್ರಿಗಳಾಗಿದ್ದವರು, ದಿವಾನರಾಗಿದ್ದವರು ಏಕೆ ಟಿಪ್ಪು ಬಗ್ಗೆ ಏನೂ ಬರೆಯದೆ ಹೊರಟುಹೋಗಿದ್ದಾರೆ ಎಂಬುದನ್ನು ಸಂಘಿ ವಿದ್ವಾಂಸರು ಅಧ್ಯಯನ ಮಾಡಿದರೆ ತಮ್ಮ ಪೂರ್ವಿಕರ ಭೋಜನದ ಇತಿಹಾಸ ತಿಳಿಯಬಹುದುದಲ್ಲವೆ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...