Homeಮುಖಪುಟಕೋಟಾ ಆಸ್ಪತ್ರೆಯ ಮಕ್ಕಳ ಸಾವಿನ ಚರ್ಚೆಯ ಸುತ್ತ ಹೆಣೆದುಕೊಂಡಿದೆಯಾ ರಾಜಕೀಯ ವಿಷಸರ್ಪ!?

ಕೋಟಾ ಆಸ್ಪತ್ರೆಯ ಮಕ್ಕಳ ಸಾವಿನ ಚರ್ಚೆಯ ಸುತ್ತ ಹೆಣೆದುಕೊಂಡಿದೆಯಾ ರಾಜಕೀಯ ವಿಷಸರ್ಪ!?

- Advertisement -
- Advertisement -

ಮಕ್ಕಳ ಸಾವಿನ ಕುರಿತು ಹೇಳಿಕೆ ನೀಡುತ್ತಾ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ “ಮಕ್ಕಳು ಪ್ರತಿ ವರ್ಷ ಸಾಯ್ತಾರೆ. ಅದ್ರಲ್ಲಿ ಹೊಸದೇನೂ ಇಲ್ಲ” ಅಂತ ಹೇಳಿದ್ದು ನಿಜಕ್ಕೂ ಅಕ್ಷಮ್ಯ ಹೊಣೆಗೇಡಿ ಹೇಳಿಕೆ. ಆದ್ರೆ ಆ ಹೊಣೆಗೇಡಿ ಹೇಳಿಕೆಯಲ್ಲೂ ಸಣ್ಣದೊಂದು ಸತ್ಯ ಅಡಗಿರೋದನ್ನು ಆಸ್ಪತ್ರೆಯ ದಾಖಲೆಗಳೇ ರುಜುವಾತು ಮಾಡುತ್ತಿವೆ.

ರಾಜಸ್ತಾನದ ಕೋಟಾದಲ್ಲಿರುವ ಜೆಕೆ ಲೋನ್ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ತಿಂಗಳು ನೂರು ಮಕ್ಕಳು ಅಸುನೀಗಿದ್ದು ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‍ರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದ್ದರೆ, ರಾಷ್ಟ್ರೀಯ ನ್ಯೂಸ್ ಮೀಡಿಯಾಗಳು ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸದ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಚರ್ಚೆಗಳನ್ನು ನಡೆಸುತ್ತಿವೆ. ಹೌದು, ವಿರೋಧ ಪಕ್ಷ ಮತ್ತು ಸಂವಿಧಾನದ ನಾಲ್ಕನೇ ಆಯಾಮವಾದ ಮಾಧ್ಯಮ, ಸರ್ಕಾರವೊಂದರ ವೈಫಲ್ಯವನ್ನು ಹೀಗೆ ಪ್ರಶ್ನಿಸಲೇಬೇಕು. ಜಗತ್ತನ್ನೇ ನೋಡದ ಹಸುಗೂಸುಗಳು ತಾವು ಮಾಡದ ತಪ್ಪಿಗೆ ಕಣ್ಮುಚ್ಚುವಂತೆ ಆದದ್ದು ಅಕ್ಷಮ್ಯ ಅಪರಾಧ. ಹಿಂದೆ ಬಿಜೆಪಿ ಸಿಎಂ ಯೋಗಿ ಆದಿತ್ಯನಾಥರ ಉತ್ತರಪ್ರದೇಶದ ಗೋರಖ್‍ಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಿಲ್ಲದೆ 71 ನವಜಾತ ಶಿಶುಗಳು ಅಸುನೀಗಿದಾಗ ದೇಶ ತಲ್ಲಣಿಸಿದ್ದು ಇದೇ ಕಾರಣಕ್ಕೆ.

ಆದರೆ ರಾಜಸ್ಥಾನದ ಕೋಟಾ ಆಸ್ಪತ್ರೆಯ ಹಸುಗೂಸುಗಳ ಸಾವು ಚರ್ಚೆಗೆ ಬಂದಿರುವುದು ಇಂಥಾ ನೈಜ ಕಾಳಜಿಗಿಂತಲೂ ಹೆಚ್ಚಾಗಿ ರಾಜಕೀಯಪ್ರೇರಿತ ಕಾರಣಕ್ಕಾ ಎಂಬ ಅನುಮಾನ ಆಸ್ಪತ್ರೆಯ ಹಳೆಯ ರೆಕಾರ್ಡುಗಳನ್ನು ಪರಿಶೀಲಿಸಿದಾಗ ಮೂಡುತ್ತೆ. ಆಸ್ಪತ್ರೆಯ ದಾಖಲಾತಿಯ ಪ್ರಕಾರ 2019ರಲ್ಲಿ 963 ಮಕ್ಕಳು ಅಲ್ಲಿ ಅಸುನೀಗಿದ್ದಾರೆ. ಅವುಗಳಲ್ಲಿ ಬಹುಪಾಲು ನವಜಾತ ಶಿಶುಗಳು. ಅಚ್ಚರಿಯ ಸಂಗತಿಯೆಂದರೆ, ಕಳೆದ ಐದು ವರ್ಷಗಳ ಲೆಕ್ಕ ನೋಡಿದರೆ ಅಲ್ಲಿ ಇದೇ ಅತಿ ಕಡಿಮೆ ಮಕ್ಕಳು ಸತ್ತ ವರ್ಷ! 2014ರಿಂದ ಆ ಆಸ್ಪತ್ರೆಯಲ್ಲಿ ಸರಾಸರಿ ಪ್ರತಿವರ್ಷ 1,100 ಮಕ್ಕಳು ಅಸುನೀಗುತ್ತಲೇ ಬಂದಿದ್ದಾರೆ!

ಇವತ್ತಿನ ದುರ್ಗತಿ ಕಳೆದ ಐದು ವರ್ಷದಿಂದ ಸತತವಾಗಿ, ಅಂದರೆ ಬಿಜೆಪಿಯ ವಸುಂಧರಾ ರಾಜೆ ಸಿಎಂ ಆಗಿದ್ದ ಅವಧಿಯುದ್ದಕ್ಕೂ, ಇತ್ತಿ ಎನ್ನುವುದಾದರೆ ಇಷ್ಟುದಿನ ನ್ಯಾಷನಲ್ (ಗೋದಿ) ಮೀಡಿಯಾಗಳೇಕೆ ಇದರತ್ತ ಕುರುಡಾಗಿದ್ದವು? ಈಗ ಕಾಂಗ್ರೆಸ್ ಅಧಿಕಾರಕ್ಕೇರಿದ ಮೇಲೆಯೇ, ಆ ಆಸ್ಪತ್ರೆಯ ಅವ್ಯವಸ್ಥೆ ಮೀಡಿಯಾಗಳ ಗಮನ ಸೆಳೆದಿರುವುದರ ಹಿಂದೆ ಯಾವ ರಾಜಕೀಯ ಕಾರಣವೂ ಇಲ್ಲ ಎಂದು ನಂಬುವುದೇಗೆ?

ವಿವಾದವನ್ನು ಚರ್ಚಿಸುತ್ತಿರುವ ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಸಂಗತಿ ಏನೆಂದರೆ, ಕಾಂಗ್ರೆಸ್‍ನ ಅಶೋಕ್ ಗೆಹ್ಲೋಟ್ ಮತ್ತು ಬಿಜೆಪಿಯ ವಸುಂಧರಾ ರಾಜೆ ಇಬ್ಬರ ಅವಧಿಯಲ್ಲೂ ಕೋಟಾ ಆಸ್ಪತ್ರೆಯಲ್ಲಿ ಪ್ರತಿವರ್ಷ ಸರಾಸರಿ 1,100 ಹಸುಗೂಸುಗಳು ತಮ್ಮದಲ್ಲದ ತಪ್ಪಿಗೆ ಸಾವನ್ನಪ್ಪುತ್ತಲೇ ಬಂದಿದ್ದಾರೆ. ಹಾಗೆ ನೋಡಿದರೆ ಈ ಅವಧಿಯಲ್ಲಿ ಅತಿಹೆಚ್ಚು, ಅಂದರೆ 1260 ಮಕ್ಕಳು ಸಾವನ್ನಪ್ಪಿದ್ದು 2015ರಲ್ಲಿ. ಆಗ ರಾಜಸ್ತಾನದಲ್ಲಿ ಅಧಿಕಾರದಲ್ಲಿದ್ದುದು ಬಿಜೆಪಿ ಸರ್ಕಾರ! ಆಗ್ಯಾಕೆ ಮೀಡಿಯಾಗಳು ಈ ದುರಂತದತ್ತ ಕಣ್ಣು ತೆರೆಯಲಿಲ್ಲ.

ಹಾಗಂತ ಈ ಸಾವಿನ ದುರಂತ ಇಷ್ಟು ವರ್ಷ ಯಾರ ಗಮನಕ್ಕೂ ಬಾರದ ಗೌಪ್ಯ ವಿದ್ಯಮಾನವಾಗಿರಲಿಲ್ಲ. ಆಸ್ಪತ್ರೆಯ ಮಕ್ಕಳಿಗೆ ಇಂಥಾ ದುಸ್ಥಿತಿ ಎದುರಾದ ಆರಂಭದ ದಿನಗಳಿಂದಲೇ ಇಲ್ಲಿನ ಸ್ಥಳೀಯ ಪತ್ರಕರ್ತರು ಆಸ್ಪತ್ರೆಯಲ್ಲಿರುವ ಮೂಲಸೌಕರ್ಯದ ಕೊರತೆ, ಸಿಬ್ಬಂದಿ ಕೊರತೆ, ನೈರ್ಮಲ್ಯೀಕರಣದ ವೈಫಲ್ಯಗಳ ಕುರಿತಂತೆ ಬೆಳಕು ಚೆಲ್ಲುತ್ತಲೇ ಬಂದಿದ್ದರು. ಕೆಲ ಪತ್ರಕರ್ತರಂತು ಆಸ್ಪತ್ರೆ ದುಸ್ಥಿತಿ ನೋಡಲಾಗದೆ ಎನ್‍ಐಸಿಯುನಲ್ಲಿ ಮಕ್ಕಳನ್ನು ಬೆಚ್ಚಗಿಡುವ ಹೀಟರ್‍ಗಳನ್ನೂ ದಾನ ಮಾಡಿದ್ದುಂಟು. ಬಿಜೆಪಿಯ ವಸುಂಧರಾ ರಾಜೆ ಸಿಎಂ ಆಗಿದ್ದ ಅವಧಿಯಿಂದಲೂ ಇಂಥಾ ವರದಿಗಾರಿಕೆ ನಡೆಯುತ್ತಲೇ ಇತ್ತು. ಆದರೆ ಅವೆಲ್ಲವೂ ಸ್ಥಳೀಯ ಸುದ್ದಿಗಳಾಗಿ ಕಳೆದುಹೋದವೇ ವಿನಃ, ನ್ಯಾಷನಲ್ ಮೀಡಿಯಾಗಳು ಅದರತ್ತ ತಿರುಗಿಯೂ ನೋಡಲಿಲ್ಲ.

ಕೋಟಾದ ಆಸ್ಪತ್ರೆ ಸಿಬ್ಬಂದಿಗಳ ಮತ್ತು ಮೂಲಸೌಕರ್ಯದ ಕೊರತೆಯಿಂದ ನಿರಂತರವಾಗಿ ನರಳುತ್ತಲೇ ಬಂದಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಮಂಜೂರಾದ 533 ಅಗತ್ಯ ಪರಿಕರಗಳ ಪೈಕಿ 213 ಮಾತ್ರ ಕಾರ್ಯನಿರ್ವಹಣಾ ಸ್ಥಿತಿಯಲ್ಲಿವೆ. ಇನ್ನುಳಿದ 320 ಉಪಕರಣಗಳು ಕೆಟ್ಟುಹೋಗಿಯೋ, ಮುರಿದೋ ಮೂಲೆ ಸೇರಿ ಯಾವುದೋ ಕಾಲವಾಗಿದೆ. ಆಸ್ಪತ್ರೆಯ ಆವರಣದಲ್ಲಿ ಹಂದಿಗಳು ಯಾವ ಎಗ್ಗಿಲ್ಲದೆ ತಿರುಗಾಡುತ್ತವೆ. ಕಿಟಕಿಯ ಗಾಜುಗಳೆಲ್ಲ ಹೊಡೆದು ಚಳಿ, ಗಾಳಿಯಿಂದ ರೋಗಿಗಳಿಗೆ ರಕ್ಷಣೆ ಇಲ್ಲದಾಗಿದೆ. ಒಂದು ಬೆಡ್ ಮೇಲೆ ನಾಲ್ಕು ಮಕ್ಕಳನ್ನು ಮಲಗಿಸಲಾಗುತ್ತಿದೆ. ಒಂದೊಂದು ವೆಂಟಿಲೇಟರನ್ನು ಏಕಕಾಲದಲ್ಲಿ ಇಬ್ಬರು ಮಕ್ಕಳಿಗೆ ಬಳಸಲಾಗುತ್ತಿದೆ. ಆಸ್ಪತ್ರೆಯ ಪರಿಸ್ಥಿತಿ ಇಂಥಾ ಕರುಣಾಜನಕವಾಗಿರುವುದರಿಂದಲೇ 2014ರಿಂದ ನಿರಂತರವಾಗಿ ಇಲ್ಲಿ ಮಕ್ಕಳು ಪ್ರತಿವರ್ಷ ಸಾವಿರಕ್ಕೂ ಮೇಲ್ಪಟ್ಟು ಅಸುನೀಗುತ್ತಲೇ ಇದ್ದಾರೆ. ಆದರೆ ಆಗೆಲ್ಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದುದರಿಂದ ತೆಪ್ಪಗಿದ್ದ ನ್ಯಾಷನಲ್ ಗೋದಿ ಮೀಡಿಯಾಗಳು, ಈಗ ಎಚ್ಚೆತ್ತು ಬೊಬ್ಬೆ ಹೊಡೆದುಕೊಳ್ಳುತ್ತಿವೆಯೆಂದರೆ, ಅದಕ್ಕೆ ಕಾರಣ ಅಸುನೀಗುತ್ತಿರುವ ಮಕ್ಕಳ ಮೇಲಿನ ಕಾಳಜಿಯಲ್ಲ, ಅಧಿಕಾರದಲ್ಲಿರೋದು ಕಾಂಗ್ರೆಸ್ ಸರ್ಕಾರ ಎಂಬ ಸಂಕಟ!

ಮಕ್ಕಳ ಸಾವಿನ ಕುರಿತು ಹೇಳಿಕೆ ನೀಡುತ್ತಾ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ “ಮಕ್ಕಳು ಪ್ರತಿ ವರ್ಷ ಸಾಯ್ತಾರೆ. ಅದ್ರಲ್ಲಿ ಹೊಸದೇನೂ ಇಲ್ಲ” ಅಂತ ಹೇಳಿದ್ದು ನಿಜಕ್ಕೂ ಅಕ್ಷಮ್ಯ ಹೊಣೆಗೇಡಿ ಹೇಳಿಕೆ. ಆದ್ರೆ ಆ ಹೊಣೆಗೇಡಿ ಹೇಳಿಕೆಯಲ್ಲೂ ಸಣ್ಣದೊಂದು ಸತ್ಯ ಅಡಗಿರೋದನ್ನು ಆಸ್ಪತ್ರೆಯ ದಾಖಲೆಗಳೇ ರುಜುವಾತು ಮಾಡುತ್ತಿವೆ.

ಅದೇನೇ ಇರಲಿ, ಅಕ್ಕಪಕ್ಕದ ಮೂರ್ನಾಲ್ಕು ಜಿಲ್ಲೆಗಳ ಬಡರೋಗಿಗಳಿಗೆ ಏಕಮಾತ್ರ ಆಸರೆಯಾಗಿ ಉಳಿದಿರುವ ಜೆಕೆ ಲೋನ್ ಆಸ್ಪತ್ರೆ ಇನ್ಮುಂದಾದರು ಸುಧಾರಿಸುವಂತಾದರೆ ಅಷ್ಟುಸಾಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...