Homeನ್ಯಾಯ ಪಥನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ಇವುಗಳಲ್ಲಿ ಸೂತ್ರಗಳೂ ಇವೆ. ಪ್ರೇಮದಿಂದಲೇ ದುಡಿಯುತ್ತಿರಬೇಕು. ನನ್ನ ದಾರಿಗಡ್ಡ ಬಂದವರನ್ನು ಕ್ಷಮಿಸಬೇಕು. ಕ್ಷಮಿಸುವ ಸಾಮರ್ಥ್ಯವಿಲ್ಲದವನ ಚೈತನ್ಯ ಉನ್ನತಿಗೇರದು

- Advertisement -
- Advertisement -

ಪುಟಕ್ಕಿಟ್ಟ ಪುಟಗಳು – ಜೊನಾತನ್ ಲಿವಿಂಗ್‍ಸ್ಟನ್ ಸೀಗಲ್ ರಿಚರ್ಡ್ ಬ್ಯಾಕ್

  • ಯೋಗೇಶ್ ಮಾಸ್ಟರ್

ಸಮುದ್ರದ ಬೆಳ್ಳಕ್ಕಿಯೊಂದರ ದೃಷ್ಟಾಂತವೇ ಜೊನಾತನ್ ಲಿವಿಂಗ್‍ಸ್ಟನ್ ಸೀಗಲ್. 1972ರಲ್ಲಿ ಪ್ರಕಟವಾದ ರಿಚರ್ಡ್‍ರವರ ಈ ಕತೆ ಮಿಲಿಯನುಗಟ್ಟಲೆ ಪ್ರತಿಗಳು ಮುದ್ರಿತವಾದವು.

ಎಳೆಯ ವಯಸ್ಸಿನ ಜೊನಾತನ್ ಎಂಬ ಸೀಗಲ್ ಮೊದಮೊದಲು ತಾನೂ ಇತರ ಸಮುದ್ರದ ಬೆಳ್ಳಕ್ಕಿಗಳಂತೆ ಅವುಗಳೊಡನೆ ಇದ್ದವನೇ. ಆದರೆ ಆ ಹಕ್ಕಿಗಳು ಬದುಕಿದ್ದದ್ದೇ ಬರೀ ತಿನ್ನುವುದಕ್ಕೆ. ತಿನ್ನುವುದು ಮತ್ತು ತಿಂದು ಬದುಕಿರುವುದು ಅವುಗಳ ಬದುಕು. ಅದೇ ಅವುಗಳ ರೂಢಿ. ಹಾಗಿರುವುದೇ ತಮ್ಮ ಹಣೆಬರಹ ಎಂಬುದು ಆ ಹಕ್ಕಿಗಳ ಸಮಾಜದ ನಂಬಿಕೆ. ಆದರೆ ಜೊನಾತನಿಗೆ ಅದು ಬಹಳ ಬೇಸರ. ಹೊಸತನ್ನು ಮಾಡುವ ತುಡಿತ. ತಿನ್ನುವುದಕ್ಕಷ್ಟೇ ಹಾರುವುದರ ಹೊರತಾಗಿ ದೂರಕ್ಕೆ, ಎತ್ತರಕ್ಕೆ, ಹೊಸತಿಗೆ ವೇಗದಲ್ಲಿ ಸಾಗುವ ಅದಮ್ಯ ಬಯಕೆ. ಅವನ ಹಾರುವ ಕನಸಿನ ಶಕ್ತಿಯನ್ನು ಸೀಮಿತಗೊಳಿಸುವ ಅವನ ಪರಿವಾರದೊಂದಿಗೆ ಅವನ ಸಂಘರ್ಷ. ಅವನದು ಉದ್ಧಟತನವೆಂದು ಸೀಗಲ್ ಹಕ್ಕಿಗಳ ಪರಿವಾರ ಅವನನ್ನು ಬಹಿಷ್ಕರಿಸಿದಾಗ ಅವನು ಒಂಟಿ.

ಒಂಟಿಯಾಗಿ ಸಾಗಿದಾಗಲೇ ಹೊಸ ಶಕ್ತಿಗಳ ಪರಿಚಯ. ಅದರಂತೆ ಅವನಿಗೆ ಉನ್ನತಕ್ಕೆ ಹಾರಲು ಉತ್ತೇಜಿಸುವ ಪಕ್ಷಿಗಳ ಸಹವಾಸವಾಗಿ ಅವನು ತರಾವರಿಯಾಗಿ ಬಾನಂಗಳದಲ್ಲಿ ಹಾರಲು ಕಲಿಯುವನು. ವಿವಿಧ ಒಳನೋಟ ಮತ್ತು ಹಾರುವ ಪಾಠಗಳೊಂದಿಗೆ ತನ್ನ ಪರಿವಾರಕ್ಕೆ ಮರಳುವನು.

ಈಗ ಜೊನಾತನನೇ ಗುರು. ಇತರ ಸೀಗಲ್ಲುಗಳು ಅವನಿಂದ ಹಾರಲು ಕಲಿಯುವವು. ತಮ್ಮಲ್ಲಿಯೂ ಅಮಿತವಾದ ಶಕ್ತಿ ಇದೆ ಎಂದು ಅರಿಯುವವು. ಒಟ್ಟಾರೆ ಪರಿವಾರವು ನನ್ನ ಬಗ್ಗೆ ಏನೇ ಹೇಳಿದರೂ, ನಾನು ನಾನಾಗಿ ಇರಲು ಸಂಪೂರ್ಣ ಸ್ವಾತಂತ್ರ್ಯವನ್ನು ನಾನೇ ಪಡೆದುಕೊಳ್ಳಬೇಕು ಎಂದು ಅರ್ಥಮಾಡಿಕೊಳ್ಳುವವು. ಮಿತಿಗಳನ್ನು ಮೀರುವ ನನ್ನ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಇಲ್ಲೇ ಈಗಲೇ ನಾನೇ ಪಡೆದುಕೊಳ್ಳಬೇಕು. ನನ್ನತನದ ದಾರಿಯಲ್ಲಿ ಯಾವುದೂ ನನ್ನ ತಡೆಯಲಾಗದು, ನಾನು ಏನಾಗಬೇಕೆಂದು ಬಯಸುತ್ತೇನೆಯೋ ಅದು ಈಗಾಗಲೇ ಆಗಿರುವಂತೆ ಭಾವಿಸಿ, ಆ ಭಾವಶಕ್ತಿಯಿಂದಲೇ ಸಾಧಿಸುವುದು; ಇವೇ ಆ ಪ್ರೇರಣೆಗಳು.

ಇವುಗಳಲ್ಲಿ ಸೂತ್ರಗಳೂ ಇವೆ. ಪ್ರೇಮದಿಂದಲೇ ದುಡಿಯುತ್ತಿರಬೇಕು. ನನ್ನ ದಾರಿಗಡ್ಡ ಬಂದವರನ್ನು ಕ್ಷಮಿಸಬೇಕು. ಕ್ಷಮಿಸುವ ಸಾಮರ್ಥ್ಯವಿಲ್ಲದವನ ಚೈತನ್ಯ ಉನ್ನತಿಗೇರದು.

ಪುಟಪುಟಗಳಲ್ಲಿಯೂ ತಾತ್ವಿಕತೆಯ ಒಳನೋಟಗಳನ್ನು ಹಂಚಿಕೊಳ್ಳುವ ಜೊನಾತನ್ ಅಷ್ಟೊಂದು ಜನಪ್ರಿಯವಾಗಿದ್ದು ನಾನಾ ಕಾರಣಗಳಿಂದ.

ಸ್ವತಃ ಪೈಲೆಟ್ ಆಗಿದ್ದ ರಿಚರ್ಡ್ ಬ್ಯಾಕ್ ತಮ್ಮ ಹಾರುವಿಕೆಯಲ್ಲಿ ಕಂಡುಕೊಂಡಿದ್ದ ಸತ್ಯ, ಸೌಂದರ್ಯ ಮತ್ತು ಅನುಭವಗಳನ್ನೆಲ್ಲಾ ಜೊನಾತನ್ ಸೀಗಲ್ಲಿನಲ್ಲಿ ಪ್ರತಿಫಲಿಸಿದ್ದರು. ಅವರ ಅನುಭವಗಳ ಗಾಢತೆ ಅನುಭೂತಿಯಾಗಿ ಆಧ್ಯಾತ್ಮಿಕತೆಯ ಒಳನೋಟಗಳನ್ನೂ ಈ ಪುಸ್ತಕ ಫಲಿಸಿತ್ತು. ವ್ಯಕ್ತಿಗತವಾಗಿ ಯಾರೊಬ್ಬರೂ ತಮ್ಮ ಮಿತಿಗಳನ್ನು ಮೀರಲು ಇರುವ ಸಾಧ್ಯತೆಗಳ ಕಂಡುಕೊಳ್ಳಲು ಪ್ರೇರಣೆಯಾಗಿತ್ತು. ಸಾಂಪ್ರದಾಯಿಕವಾದ ಸಮಾಜದ ಚೌಕಟ್ಟುಗಳ ಮಿತಿಗಳನ್ನು ಮೀರಲು ಉತ್ತೇಜಿಸಿತ್ತು. ಮಿಗಿಲಾಗಿ ಪುಸ್ತಕ ಓದುತ್ತಿದ್ದರೆ ಜೊನಾತನ್ ಬದುಕನ್ನು ದೃಶ್ಯದಲ್ಲಿಯೇ ಕಟ್ಟಿಕೊಡುವಂತಹ ಶೈಲಿ ಬರವಣಿಗೆಯದಾಗಿತ್ತು.

ಈಗಲೂ ಜೊನಾತನ್ ಬಲ್ಲವರಿಗೆ ಅದೊಂದು ಪ್ರೇರಣೆಯ ರೂಪಕ ಶಕ್ತಿಯೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...