Homeಅಂಕಣಗಳುಅಪ್ಪನ ಆ ಭಾಷಣ ಮತ್ತು ಜಾಗೃತ ಸಾಹಿತ್ಯ ಸಮಾವೇಶ

ಅಪ್ಪನ ಆ ಭಾಷಣ ಮತ್ತು ಜಾಗೃತ ಸಾಹಿತ್ಯ ಸಮಾವೇಶ

ಓದಿರಿ ಗೌರಿ ಕಣ್ಣೋಟ

- Advertisement -
- Advertisement -

|ಗೌರಿ ಲಂಕೇಶ್ |

18 ಫೆಬ್ರವರಿ, 2009 (‘ಕಂಡಹಾಗೆ’ ಸಂಪಾದಕೀಯದಿಂದ)

1990ರಲ್ಲಿ ಅಪ್ಪ ಬರೆದಿದ್ದ ‘ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು’ ಎಂಬ ಲೇಖನದಲ್ಲಿ ಸಾಹಿತ್ಯ ಪರಿಷತ್ತಿನ ಆರಂಭಿಕ ಆಶಯಗಳನ್ನು ಮೆಚ್ಚಿದ್ದರೂ ಆನಂತರ ಅದರಲ್ಲಿ ನಡೆದ ಸೆಣಸಾಟ, ಹೊಡೆದಾಟ, ಜಾತಿ ರಾಜಕೀಯ ಇತ್ಯಾದಿಗಳ ಬಗ್ಗೆ ಬೇಸರಗೊಂಡಿದ್ದರ ಬಗ್ಗೆ ಹೇಳುತ್ತಾರೆ.

“ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನಗಳಲ್ಲಿ ಆದ ಜಗಳಗಳು, ವಿವಾದ, ಹಗರಣಗಳು ಇವೆಲ್ಲವನ್ನು ನೋಡುತ್ತಿದ್ದ ಸೂಕ್ಷ್ಮ ಮನಸ್ಸಿನ ಸಾಹಿತಿಗಳಲ್ಲಿ ಅಸಹ್ಯ ಹುಟ್ಟಿಸಿದವು. ಸಾಹಿತಿಗಳೆಂದರೆ ಲಜ್ಜೆಯ, ಘನತೆಯ ವ್ಯಕ್ತಿಗಳು ಎಂದು ತಿಳಿದಿದ್ದವರಿಗೆ ದಿಗ್ಭ್ರಮೆಯಾಯಿತು. ಸಾಹಿತ್ಯ ಮೂಲಭೂತವಾಗಿ ನಿಷ್ಪಕ್ಷಪಾತವಾದುದು ಎಂದು ತಿಳಿದವರಿಗೆ ಸಾಹಿತ್ಯದ ಇತರೆ ಮುಖಗಳು ಕಾಣತೊಡಗಿದವು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಕೀಯ ಮುಖಂಡನಂತೆ ಮೆರೆಯತೊಡಗಿದರೆ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಉತ್ಸವ ಮೂರ್ತಿಯಾಗಿ ವಿಜೃಂಭಿಸತೊಡಗಿದ… ರಾಜಕೀಯ ಚುನಾವಣೆಯ ಕೊಳಕುತನವನ್ನೆಲ್ಲ ಮೀರಿಸತೊಡಗಿದ ಪರಿಷತ್ತು ಎಲ್ಲರ ತಾತ್ಸಾರಕ್ಕೆ ಗುರಿಯಾಗತೊಡಗಿತು”. ಎಂದು ಅಪ್ಪ ಅದೇ ಲೇಖನದಲ್ಲಿ ಬರೆದಿದ್ದಾರೆ.

ಕನ್ನಡಿಗರಲ್ಲಿ ಯಾವುದೇ ಸ್ಫೂರ್ತಿ, ಭರವಸೆ ಮೂಡಿಸಲಾಗದಂತಹ ಅವಸ್ಥೆಯ ಮಟ್ಟಕ್ಕೆ ಪರಿಷತ್ ಇಳಿದಾಗ ಅಪ್ಪ ಮತ್ತು ಇತರ ಸಾಹಿತಿಗಳಿಗೆ ಉಳಿದಿದ್ದ ಮಾರ್ಗ ‘ಜಾಗೃತ ಸಾಹಿತ್ಯ ಸಮಾವೇಶ’ವನ್ನು ಪ್ರತ್ಯೇಕವಾಗಿ ಏರ್ಪಡಿಸುವುದು. ಫೆಬ್ರವರಿ 16, 1990ರಲ್ಲಿ ನಡೆದ ಈ ‘ಜಾಗೃತ ಸಾಹಿತ್ಯ ಸಮಾವೇಶ’ವನ್ನು ಅಪ್ಪ ಉದ್ಘಾಟಿಸಿ ಮಾಡಿದ ಭಾಷಣದ ತುಣುಕು ಹೀಗಿದೆ…

“ರಾಜ್ಯಭಾಷೆ ಬಹುಸಂಖ್ಯಾತ ಜನರ ಮಾತೃಭಾಷೆ. ಆಡಳಿತ ಭಾಷೆ, ವ್ಯವಹಾರ ಭಾಷೆ-ಅದು ನಮ್ಮಲ್ಲಿ ಕನ್ನಡ: ಹಾಗೆಯೇ ಬಳ್ಳಾರಿಯ ಒಂದು ಹಳ್ಳಿಯೊಂದರಲ್ಲಿ ವಾಸಿಸುವ ತೆಲುಗರ ಆಡಳಿತ ಭಾಷೆ, ವ್ಯವಹಾರ ಭಾಷೆ ಕನ್ನಡ: ಅಂತೆಯೇ ಅವರೆಲ್ಲರ ಮಾತೃಭಾಷೆಯನ್ನು ನಾಶಮಾಡುವುದು ಕರ್ನಾಟಕ ಆಡಳಿತದ ಉದ್ದೇಶವಾಗಕೂಡದು.

ಒಂದು ರಾಜ್ಯ ಪೂರ್ಣ ಸಾಕ್ಷರತೆಯತ್ತ ಸಾಗಿದೆ ಎಂದರೆ ಅರ್ಥ, ಇಲ್ಲಿಯ ಎಲ್ಲ, ವರ್ಗ, ಜಾತಿಯ ಜನರಿಗೆ ಹೊಸತೊಂದು ಶಕ್ತಿ, ಹೊಸತೊಂದು ಚೈತನ್ಯ ಬಂದಿದೆ ಎಂಬುದು: ಹಾಗೆಯೇ ಮುಂದುವರಿದ ಜಾತಿಗಳ ಸ್ವತ್ತಾಗಿದ್ದ ನೆನಪನ್ನು ದಾಖಲಿಸುವ, ಅನುಭವವನ್ನು ನಮೂದಿಸುವ, ಗ್ರಂಥಗಳನ್ನು ರಚಿಸುವ ಬರವಣಿಗೆಯ ಸವಲತ್ತು ದಲಿತರಿಗೆ, ಹಿಂದುಳಿದವರಿಗೆ ಕೂಡ ದೊರೆತಿದೆ ಎಂಬುದು; ಹಾಗೆಯೆ ಲಕ್ಷಾಂತರ ವರ್ಷಗಳಿಂದ ನೋವು, ಅವಮಾನ ಅನುಭವಿಸಿದ ಜನತೆಗೆ ಆತ್ಮವಿಶ್ವಾಸ, ಆತ್ಮಗೌರವ ದೊರೆತು ಹಲವಾರು ಅರ್ಥಪೂರ್ಣ ಅನುಭವಸ್ಥರುಗಳೊಂದಿಗೆ ಸಾಂಸ್ಕೃತಿಕ ರಾಜಕೀಯ ಕ್ರಿಯೆಯಲ್ಲಿ ಭಾಗವಹಿಸುವುದು ಸಾಧ್ಯವಾಗಿದೆ ಎಂಬುದು.

ಒಂದು ಅನಕ್ಷರಸ್ಥ ದಲಿತ ಕುಟುಂಬ, ಹಿಂದುಳಿದವರ ಕುಟುಂಬ ಈ ವಲಯಗಳಲ್ಲಿ ಅನುಭವಿಸುವ ದಿಗ್ಭ್ರಮೆ ಅವರಿಗೆ ಮಾತ್ರ ಗೊತ್ತಾಗುವಂಥದು. ಮೀಸಲಾತಿ ವಿರೋಧಿಸುವ, ಇವರ ಕಷ್ಟಗಳನ್ನು ಅರ್ಥಮಾಡಿಕೊಳ್ಳದ ಜನರಿಂದಲೇ ಈ ಬಗೆಯ ದಿಗ್ಭ್ರಮೆ ಹುಟ್ಟಿದೆ ಮತ್ತು ಈ ಜನರಿಂದಲೇ ಇವತ್ತು ಏನನ್ನೂ ಮಾಡಲಾರದ ಸ್ಥಿತಿಯನ್ನು ಸರ್ಕಾರಗಳು ತಲುಪಿವೆ. ಸರ್ಕಾರ, ಸಾಂಸ್ಕøತಿಕ ವ್ಯವಸ್ಥೆ ನೇರಗೊಳ್ಳದೆ ಇಲ್ಲಿ ಅಸಹಾಯಕರಿಗೆ ನೆಮ್ಮದಿ, ಕನ್ನಡದ ಸಂಪೂರ್ಣ ವಿಕಾಸ ಕಷ್ಟಸಾಧ್ಯ.

ಈ ಸಮಾವೇಶ ಐತಿಹಾಸಿಕ ಎಂದು ನಾನಂತೂ ತಿಳಿದಿದ್ದೇನೆ. ನಿಜಕ್ಕೂ ಕ್ರಿಯಾಶೀಲ ಸಾಹಿತಿಗಳಾಗಿರುವ, ಸಂಶೋಧಕರಾಗಿರುವ ಎಲ್ಲ ಜಾತಿ ಹಿನ್ನೆಲೆಯ ಜನ ಒಂದೆಡೆ ಸೇರಿ ಚರ್ಚಿಸುವುದು, ಕೃತಿಗಳ, ಸಂಶೋಧನೆಯ ಬೆಲೆ ಕಟ್ಟುವುದು ಅಗತ್ಯವಾಗಿದೆ. ಹಿಂದುಳಿದವರು, ದಲಿತರು ತಮ್ಮ ತಮ್ಮ ಕೃತಿಗಳನ್ನು ತಮ್ಮ ತಮ್ಮ ಮಾನದಂಡಕ್ಕೆ ತಕ್ಕಂತೆ ನಿರ್ಧರಿಸುವುದಕ್ಕೆ ಬದಲು ತಮ್ಮಿಂದ ಹೊರತಾದ ಮಾಪನದ ಸವಾಲು ಎತ್ತಿಕೊಳ್ಳಬೇಕಾಗಿದೆ. ಅಂತೆಯೇ ಈ ಸಮಾಜಕ್ಕೆ ಪರಂಪರಾಗತವಾಗಿ ಬಂದಿರುವ ಅಂಧತ್ವವನ್ನು ಎಲ್ಲರೂ ಗಮನಿಸಬೇಕಾಗಿದೆ. ಪರಕೀಯರ ಆಕ್ರಮಣ, ದಬ್ಬಾಳಿಕೆಯಿಂದ ತತ್ತಿರಿಸಿಹೋದ ಜನರು ಜಾತೀಯತೆಯ ಸಣ್ಣಪುಟ್ಟ ಗುಂಪಿನ ರಕ್ಷಣೆಯಲ್ಲಿ, ಇದ್ದುದ್ದನ್ನು ಹೇಗಾದರೂ ಮಾಡಿ ಕಾಪಾಡಿಕೊಳ್ಳಲು ಯತ್ನಿಸಿದರು. ಹೊಸಬರ ಅಕ್ಷರಾಭ್ಯಾಸ, ಸಂವೇದನೆಯ ವಿಚಾರವೇ ಅವರನ್ನು ಬೆಚ್ಚಿಸಿತು. ಇದರಿಂದ ಸಾಹಿತ್ಯ, ಛಂದಸ್ಸು, ವ್ಯಾಕರಣಗಳೆಲ್ಲ ಜೀವಂತ ಅನುಭವದೊಂದಿಗಿನ ಪ್ರಯೋಗಗಳಾಗದೆ ಜಡ ಶಾಸ್ತ್ರಗಳಾದವು. ಸಾಹಿತ್ಯವನ್ನು ನೋಡುವ ಕಣ್ಣು ಕುರುಡಾದವು. ಜಾತಿಯ ವಲಯವನ್ನು ಮೀರಿದ ಸತ್ಯ ಇರಬಹುದೆಂಬುದು ಅವರಿಗೆ ತಿಳಿಯಲೇ ಇಲ್ಲ. ಈ ಕಾರಣಕ್ಕಾಗಿಯೇ ದಲಿತರಿಗೆ, ಹಿಂದುಳಿದವರಿಗೆ ಅವರ ಸದ್ಯದ ಅನ್ನಿಸಿಕೆಯನ್ನು ಮೀರಿದ ಮಾಪನ, ಮೌಲ್ಯ ಇರುವುದು ಗೊತ್ತಾಗಬೇಕಾಗಿರುವಂತೆಯೇ ಪರಂಪರಾಗತ ಅನುಭವಗಳ ಕುರುಡರೂ ತಮ್ಮ ಕಣ್ಣು ತೆರೆದು ತಮ್ಮಿಂದ ಹೊರಗಿರುವ ಮಾಪನವನ್ನು ಗಮನಿಸಬೇಕಾಗಿದೆ. ಅರ್ಜುನ, ಏಕಲವ್ಯರ ಪ್ರತಿಭೆ ಈ ಸತ್ಯದೆದುರು ಅರಳಬೇಕಾಗಿದೆ.

ಸಾಹಿತಿ ವಿಚಿತ್ರ ಸಾತಂತ್ರ್ಯ ಪ್ರೇಮಿ. ರಾಜಕೀಯ ಹಂಗುತೊರೆದ ನಿಷ್ಠುರ. ಇಲ್ಲಿ ಕೂಡ ಸಾಹಿತಿಯ ದಿಟ್ಟತನ, ನಿಷ್ಠುರತೆಯನ್ನು ಗಮನಿಸುತ್ತಾ ನಾವು ಆತನ ಅಸಹಾಯಕತೆಯನ್ನು ಮರೆಯದಿರೋಣ. ಸಾಹಿತಿ ಮತ್ತು ಸಹೃದಯನ, ಸಾಹಿತಿ ಮತ್ತು ಸಂಶೋಧಕನ, ಸಾಹಿತಿ ಮತ್ತು ಓದುಗನ ಸಂಬಂಧ ಮುಖ್ಯವಾದುದ್ದು. ಸಾಹಿತಿಗೆ ನಿಜವಾದ ಕೃತಕೃತ್ಮತೆ ದೊರೆಯುವುದು ಆತ ಈ ಸೇತುವೆಗಳನ್ನು ಕಂಡುಕೊಂಡಾಗ. ತನ್ನ ಅಂತರಾಳದಲ್ಲಿ ಸಲ್ಲುವ ಆತ ಸಹೃದಯನ ಆಂತರ್ಯದಲ್ಲಿ ಸಲ್ಲುವಂತಾದಾಗ. ಆದ್ದರಿಂದಲೇ ಈ ಸಾಹಿತ್ಯ ಸಮಾವೇಶ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ವಿಷಯಗಳನ್ನೆಲ್ಲ ಒಳಗೊಂಡು ಸಾಹಿತ್ಯದಲ್ಲಿನ ವರ್ಣ, ವರ್ಗವನ್ನೆಲ್ಲ ಧ್ಯಾನಿಸುವಂತಾಗಬೇಕು. ಇಲ್ಲಿಯ ಚರ್ಚೆ ಮತ್ತು ವಾದ ಮೈಲುಗಟ್ಟಲೆ ಬಾಹ್ಯವನ್ನು ಕ್ರಮಿಸುವಾಗಲೇ ಸಾಹಿತಿಯ ಪುಟ್ಟ, ಮನೋಹರ, ವ್ಯಸನಗಳ, ನೋವುಗಳ ಜಗತ್ತನ್ನೂ ನೋಡಬೇಕು. ಆಗಲೇ ಕನ್ನಡ ಸಾಹಿತ್ಯ ಕನ್ನಡ ಭಾಷೆಗೆ ಅಮೂಲ್ಯ ಕೊಡುಗೆ ನೀಡುವ ಶಕ್ತಿ ಪಡೆಯುತ್ತದೆ: ವ್ಯಾಕರಣದ ಬದ್ಧತೆ ಮತ್ತು ಅನುಭವದ ಉಜ್ವಲತೆ ನಮ್ಮದಾಗುತ್ತದೆ. ಎಲ್ಲ ನಿರ್ಜೀವ ಸಂಸ್ಥೆಗಳ ವಿರುದ್ಧ ಸಾಹಿತಿ ಮತ್ತು ಸಾಹಿತ್ಯ ಕೃತಿಗಳ ಸೂಕ್ಷ್ಮಜ್ಞ ಪ್ರತಿಭಟನೆಯಾಗುತ್ತದೆ”.

ಅಪ್ಪ ಈ ಆಶಯಗಳನ್ನು ವ್ಯಕ್ತಪಡಿಸಿ ಹತ್ತಿರತ್ತಿರ ಎರಡು ದಶಕಗಳಾಗಿದ್ದರೂ ಪರಿಸ್ಥಿತಿ ಉದ್ಧಾರವಾಗುವ ಬದಲು ಇನ್ನಷ್ಟು ಕೆಟ್ಟಿದೆ, ಅದು ನಿರುತ್ಸಾಹ ತರುವ ಸಂಗತಿ.

ಇದನ್ನು ಓದಿರಿ ಗೌರಿ ಕಣ್ಣೋಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...