Homeಅಂಕಣಗಳುಮೋಡದ ಮರೆಯಲ್ಲಿ ಮೋದಿ

ಮೋಡದ ಮರೆಯಲ್ಲಿ ಮೋದಿ

ಸಾಹಿತ್ಯದ ಲೋಕದ ಜೈನ ವಿದ್ವಾಂಸರಾದ ಹಂಪನಾ ಅವರು ಮಠಮಂದಿರಗಳು ಭಯೋತ್ಪಾದನೆಯ ಕೇಂದ್ರಗಳಾಗದಿರಲಿ ಎಂದಿದ್ದಾರೆ.

- Advertisement -
- Advertisement -

ಬಾಲಾಕೋಟ್ ಕಾರ್ಯಾಚರಣೆಯನ್ನು ಮೋಡದ ಮರೆಯಲ್ಲಿ ಮಾಡಿ ಪಾಕಿಸ್ತಾನಕ್ಕೆ ಚಳ್ಳೆಹಣ್ಣು ತಿನ್ನಿಸಿದೆ ಎಂದು ನಮ್ಮ ಭವ್ಯ ಭಾರತದ ಪ್ರಧಾನಿ ಭೂಗತಲೋಕದ ಕಿಡಿಗೇಡಿಯಂತೆ ಬಾಯಿ ಬಿಟ್ಟಿದ್ದಾರಲ್ಲಾ. ಇದನ್ನು ಕೇಳಿದ ಇಡೀ ಭಾರತವಷ್ಟೆ ಅಲ್ಲ. ಬಾಂಗ್ಲಾ, ಪಾಕಿಸ್ತಾನ ಕೂಡ ನಗಾಡಿದವಂತೆ. ಇದೇ ಮೋದಿ ಪ್ರಧಾನಿಯಾದ ಆರಂಭದಲ್ಲಿ ನಮ್ಮ ಪುರಾತನ ಆಯುರ್ವೇದ ಪಂಡಿತರು ಪ್ಲಾಸ್ಟಿಕ್ ಸರ್ಜರಿಯಲ್ಲಿ ಪರಿಣಿತರಾಗಿದ್ದರು. ಆ ಕಾರಣಕ್ಕೆ ಆನೆಮರಿ ತಲೆಯನ್ನು ಗಣೇಶನಿಗೆ ಜೋಡಿಸಿ ಕೆಲವೇ ದಿನಗಳಲ್ಲಿ ಗಣೇಶ ಮಾತನಾಡುವಂತೆ ಮಾಡಿದರು ಎಂದಾಗ, ಇಡೀ ಭಾರತವೇ ಅಯ್ಯೋ ಮುಂಡೆದೆ ಎಂದು ಲೊಚಗರೆದಿತ್ತು. ಆ ಪುರಾಣ ಹಾಳುಬಿದ್ದೋಗಲಿ ಮೋಡ ಮುಸುಕಿದ್ದರೆ ಯುದ್ಧ ವಿಮಾನಗಳು ಮತ್ತು ರೆಡಾರ್ ಸಂದೇಶಗಳು ಬಂದಾಗುತ್ತವೆ ಎಂದು ಭಾವಿಸಿರುವ ಈತ, ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಜರ್ಮನ್ ಶೆಪರ್ಡ್ ನಾಯಿಯ ಬಗ್ಗೆ ತಿಳಿದುಕೊಂಡಿಲ್ಲ ಅನ್ನಿಸುತ್ತದೆ. ಹಾಗೆ ನೋಡಿದರೆ ಸದರಿ ಮೇಧಾವಿ ಯಾವುದರ ಬಗ್ಗೆಯೂ ನಿಖರವಾಗಿ ತಿಳಿದು ಕೊಂಡಿಲ್ಲ. ಅದಕ್ಕೆ ಪ್ರೆಸ್‍ಮೀಟು ಗಳಿಗೆ ಹೆದರಿ ರುವುದು ಅಕಸ್ಮಾತ್ ಸಂದರ್ಶನ ವಿದ್ದರೆ ತಾನೇ ಪ್ರಶ್ನೆ ಕಳಿಸಿ, ಏಕಪಾತ್ರಾಭಿನಯ ಮಾಡುವುದು ಇನ್ನೊಂದು ಜೋಕ್ ಎಂದರೆ ಈತ ಪಾಕಿಸ್ತಾನಕ್ಕೆ ಹೋಗಿದ್ದು ಕೂಡ ಮೋಡದ ಮರೆಯಲ್ಲಂತಲ್ಲಾ ಥೂತ್ತೇರಿ.

*****

ಇಂತಹ ಮೋದಿ ಇನ್ನೂ ಹದಿನೈದು ವರ್ಷ ಪ್ರಧಾನಿಯಾಗಿರಬೇಕು ಎಂದು ಭೈರಿಗೆ ಹಿಡಿದುಕೊಂಡಿರುವ ಸಂತೆಶಿವರದ ಚೆಡ್ಡಿ ಭೈರಣ್ಣನಿಗೆ, ನ್ಯಾಯಪಥದ ಪಂಚಕನ್ಯೆಯರು ಭೈರನ ಕೆನ್ನೆಗೆ ಸರಿಯಾಗಿ ತಪರಾಕಿ ಹಾಕಿದ್ದಾರಲ್ಲಾ. ಇವರೆಲ್ಲರ ಅನುಭವ ಏನೆಂದರೆ ಇದು ಅಗ್ರಹಾರದ ಹಾಳುಬಿದ್ದ ವಠಾರದಲ್ಲಿ ತನ್ನದೇ ಕಗ್ಗದ ರಾಶಿಯಲ್ಲಿ ಹುದುಗಿರುವ ಮುದಿಗೊಡ್ಡು. ಇದಕ್ಕೆ ಎಷ್ಟು ಬೈದರೂ ಅಷ್ಟೆ ಎಂದು ಸುಮ್ಮನಾದರಂತಲ್ಲಾ. ಚೆಡ್ಡಿ ಭೈರಣ್ಣ ಮಹಿಳೆಯರನ್ನೇನು ದ್ವೇಷ ಮಾಡುವುದಿಲ್ಲ. ಅವರಿಗೆ ಕರ್ತವ್ಯಗಳನ್ನು ನಿರ್ದೇಶಿಸುತ್ತಾನೆ ಅಷ್ಟೆ. ಈತನ ಗೊಡ್ಡು ಸಾಹಿತ್ಯದಲ್ಲಿ ವಿಧವೆಯರು ಮದುವೆಯಾದರೆ ನಿರಂತರ ಗರ್ಭಪಾತವಾಗುತ್ತದೆ. ಧಾಟುವಿನಲ್ಲಿ ಒಕ್ಕಲಿಗರ ಹುಡುಗನನ್ನ ಮದುವೆಯಾದ ಬ್ರಾಹ್ಮಣ ಪುರೋಹಿತನ ಮಗಳು ಸತ್ತುಹೋಗುತ್ತಾಳೆ. ಅಸ್ಪøಶ್ಯತೆ ಅವಮಾನದಿಂದ ಸಿಡಿದೆದ್ದ ಮೋಹನದಾಸ ಕೆರೆಗಳನ್ನು ಸ್ಫೋಟಿಸುತ್ತಾನೆ. ಹೀಗೆ ತನ್ನದೆ ಚೆಡ್ಡಿ ಕುಲುಮೆಯಲ್ಲಿ ಕಾಯಿಸಿ, ಕುಟ್ಟಿ ಕಟ್ಟಿದ ಪುಸ್ತಕಗಳ ರಾಶಿಯಿಂದ ಹೆಕ್ಕಿ ತೆಗೆಯಲು ಒಂದೇ ಒಂದು ಮಾನವೀಯ ಗುಣದ ಸಾಲಿಲ್ಲವಂತಲ್ಲಾ. ಆದರೂ ಈತ ಭಾರತದ ಜನಪ್ರಿಯ ಲೇಖಕ. ಏಕೆಂದರೆ ಅಕ್ಷರದ ಗುತ್ತಿಗೆ ಹಿಡಿದ ಪುರೋಹಿತರ ಕಪಾಟಿನಲ್ಲಿ ಈತನವೇ ಪುಸ್ತಕಗಳು. ಕೆರೆಯುತ್ತಿರುವವನೂ ಅವನೆ, ಓದುತ್ತಿರುವವರೂ ಅವರೆ. ಹುಟ್ಟ ಚೆಡ್ಡಿಗಳು ಚಟ್ಟದವರೆಗೂ ಚೆಡ್ಡಿಗಳಾಗಿರುತ್ತವೆ ಎಂಬುದಕ್ಕೆ, ಭೈರಣ್ಣನೇ ಉದಾಹರಣೆಯಂತಲ್ಲಾ ಥೂತ್ತೇರಿ.

 

*****

ಕರ್ನಾಟಕದ ರಾಜಕಾರಣದ ವಿಷಯಕ್ಕೆ ಬರುವುದಾದರೆ, ಕೋಡುಗಳಿಲ್ಲದ ಕುರುಬರ ಟಗರಿನ ಕಾಳಗ ಶಾನೆ ಜೋರಾಗಿದೆಯಲ್ಲಾ, ಜೆಡಿಎಸ್‍ನಿಂದ ವಿಶ್ವನಾಥ, ಬಿಜೆಪಿಯಿಂದ ಈಶ್ವರಪ್ಪ, ಕಾಂಗ್ರೆಸ್‍ನಿಂದ ಸಿದ್ದರಾಮಯ್ಯ ಈ ಮೂರು ಜನರ ಕುರಿಗಾಹಿ ಜಗಳದಂತ ಮಾತುಗಳನ್ನು ಕೇಳಿದರೆ, ಈ ರಾಜ್ಯದಲ್ಲಿ ಇನ್ನಾರೂ ಇಲ್ಲವೆ ಅನ್ನಿಸುತ್ತಿದೆಯಲ್ಲಾ. ಸಿದ್ದರಾಮಯ್ಯನೇ ಹೇಳಿದಂತೆ ಈಶ್ವರಪ್ಪನ ನಾಲಿಗೆ ಮತ್ತು ಮೆದುಳಿನ ನಡುವೆ ಲೂಸ್ ಕಾಂಟ್ಯಾಕ್ಟಿದೆ. ಇನ್ನ ವಿಶ್ವನಾಥ ಹೊಟ್ಟೆಕಿಚ್ಚಿನವನು. ಅದಕ್ಕೆ ವಿಶ್ವನಾಥ ಸಕಾರಣ ಒದಗಿಸಬಲ್ಲರು. ಆದರೆ ಸಿದ್ದು ಕತೆ ಅದಲ್ಲ. ಬರಲಿರುವ ರಿಸಲ್ಟಿನಿಂದ ಭಾರತ ಮತ್ತು ಕರ್ನಾಟಕದಲ್ಲಿ ಏನಾದರೂ ಆಗಬಹುದು ಆಗಿನ ದಾಳಗಳನ್ನ ಈಗಲೇ ರೆಡಿಮಾಡಿಕೊಳ್ಳುತ್ತಿರುವ ಸಿದ್ದು ವ್ಯಸನ ಏನೆಂದರೆ ಮತ್ತೆ ಮುಖ್ಯಮಂತ್ರಿಯಾಗುವುದು. ಸಿದ್ದರಾಮಯ್ಯ ಎಡೂರಪ್ಪನಂತಾಡುವುದು ಕೆಲವು ಕಾಂಗೈಗಳಲ್ಲೇ ಇರಿಸು ಮುರುಸಾಗಿದೆಯಂತಲ್ಲಾ. ಐದು ವರ್ಷ ಪೂರೈಸಿದ ಹೆಗ್ಗಳಿಕೆಯನ್ನು ಮುಂದಿಟ್ಟುಕೊಂಡು ನಮ್ಮ ಮುಂದಿನ ಮುಖ್ಯಮಂತ್ರಿ ಒಬ್ಬ ದಲಿತ ಎನ್ನಲು ಸಿದ್ದರಾಮಯ್ಯಗೇನಾಗಿದೆ. ಆಗ ಹಿಂದೆ ಖರ್ಗೆಯನ್ನ ಮುಖ್ಯಮಂತ್ರಿ ಮಾಡಿ ಎಂದಿದ್ದ ದೇವೇಗೌಡರು ಅನಾವರಣಗೊಳ್ಳುತ್ತಾರೆ, ಕಾಂಗ್ರೆಸ್‍ನ ದೊಡ್ಡ ಋಣವೊಂದು ಪರಿಹಾರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಎಡೂರಪ್ಪನ ಟೀಮೂ ಕೂಡ ಆಪರೇಷನ್ ಕತ್ತರಿಯನ್ನು ಬಿಸಾಡುತ್ತವಲ್ಲಾ, ಥೂತ್ತೇರಿ!

*****

ಇನ್ನ ಕರ್ನಾಟಕದ ಸಾಹಿತ್ಯ ಮತ್ತು ಆಧ್ಯಾತ್ಮಲೋಕಕ್ಕೆ ಬರುವುದಾದರೆ ಸಿರಿಗೆರೆಸ್ವಾಮಿ, ಹಂಪಾನಾ ಇತ್ಯಾದಿ ಜನ ತಮ್ಮ ತಮ್ಮ ಹೇಳಿಕೆಯಿಂದ ಭಯ ಹುಟ್ಟಿಸಿದ್ದಾರಲ್ಲಾ. ಸಿರಿಗೆರೆ ಶ್ರೀಗಳ ಪ್ರಕಾರ ಮಠಮಂದಿರಗಳು ಜಾತಿ ಸಂಘರ್ಷಗಳಾಗುತ್ತಿವೆ. ಇದಂತೂ ನಿಜ. ಸಾದ ಜನಾಂಗದ ಸಿರಿಗೆರೆ ಮಠ ಕಂಡರೆ ನೊಣಬರಿಗಾಗುತ್ತಿಲ್ಲ, ಬಣಜಿಗರಿಗೂ ಅಷ್ಟೇ. ಇನ್ನ ಅದರಲ್ಲಿನ ಪಂಗಡಗಳಿಗೂ ಅಷ್ಟೆ. ‘ಇವ ನಮ್ಮವ’ ಎಂಬ ಭಾವನೆ ಕೊರತೆ ಈ ಮಠದ ಆವರಣದಲ್ಲಿದೆ. ಜಾತಿಮಠದ ತುದಿಯಲ್ಲಿ ಕುಳಿತ ಜಗದ್ಗುರು ಎಲ್ಲ ಜಾತಿಗೂ ಜಗದ್ಗುರುವಾಗುವುದು ಕಷ್ಟ. ಅಷ್ಟಕ್ಕೂ ಸಿರಿಗೆರೆ ಮಠದ ಸಂವಿಧಾನ ಮೀರಿ ನಿವೃತ್ತಿ ವಯಸ್ಸಾದರೂ ಅದನ್ನು ಹತ್ತಿಕ್ಕಿ ಪೀಠದ ಮೇಲಿರುವ ಸಿರಿಗೆರೆ ಶ್ರೀ ತಮ್ಮ ಮಾತುಗಳಿಗೆ ಹಿನ್ನಡೆ ಅನುಭವಿಸುತ್ತಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಜಗದ್ಗುರುಗಳಿರುವ ಈ ನಾಡಿನಲ್ಲಿ ಇನ್ನ ಜಾತಿ ಸಾಮರಸ್ಯ ಮೂಡಿಲ್ಲ. ಅಸ್ಪøಶ್ಯತೆ ಹಾಗೇ ಇದೆ. ಬದಲಾದ ಜಗತ್ತಿನಲ್ಲಿ ಅಕಸ್ಮಾತ್ ಅಂತರ್ಜಾತಿ ಪ್ರೇಮವೇರ್ಪಟ್ಟರೆ ಮರ್ಯಾದೆ ಹತ್ಯೆಗಳು ಜರುಗುತ್ತಿವೆ. ಈ ಎಲ್ಲಾ ಅನಿಷ್ಟಗಳ ಮುಂದುವರಿಕೆಯಲ್ಲಿ ಜಗದ್ಗುರುಗಳ ಪಾಲಿರುವುದನ್ನು ಮರೆಮಾಚಿ ಮಠಮಂದಿರಗಳಿಂದ ಜಾತಿಸಂಘರ್ಷಗಳು ನಡೆಯುತ್ತವೆ ಎನ್ನುವ ಜಗದ್ಗುರುಗಳು ತಾವು ವಾಸ ಮಾಡುವ ಜಾಗದ ರಾಜಕಾರಣಿಗಳಾದ ಆಂಜನೇಯ, ಚಂದ್ರಪ್ಪನನ್ನ ಕರೆದು ಈಗಲೂ ನೀವು ಮನೆಗಳಿಂದ ಹೊರನಿಲ್ಲುವ ಸ್ಥಿತಿ ಇದೆಯೇ ಎಂದು ಕೇಳಬಹುದಲ್ಲಾ, ಥೂತ್ತೇರಿ!!

*****

ಸಾಹಿತ್ಯದ ಲೋಕದ ಜೈನ ವಿದ್ವಾಂಸರಾದ ಹಂಪನಾ ಅವರು ಮಠಮಂದಿರಗಳು ಭಯೋತ್ಪಾದನೆಯ ಕೇಂದ್ರಗಳಾಗದಿರಲಿ ಎಂದುಬಿಟ್ಟಿದ್ದಾರೆ. `ಕನ್ನಡ ಸಾಹಿತ್ಯ ಪಂಪನಿಂದ ಹಿಡಿದು ಹಂಪಾನಾವರೆಗೆ’ ಎಂದು ತಮ್ಮವರ ಕೈಯಿಂದ ಹೊಗಳಿಸಿಕೊಂಡು ಹಾರ, ತುರಾಯಿ, ಪ್ರಶಸ್ತಿಗಳನ್ನು ಪಡೆದಿರುವ ಈ ಹಂಪಾನಾ ಕಾಲದಲ್ಲೇ, ಸಾಹಿತ್ಯ ವೇದಿಕೆಗೆ ಮಠಮಂದಿರಗಳ ಜಗದ್ಗುರುಗಳು ಬಂದು ಆಸೀನರಾಗಿದ್ದು. ಜಾತ್ಯತೀತ ವೇದಿಕೆಗೆ ಜಗದ್ಗುರುಗಳನ್ನ ತಂದ ಅನಿಷ್ಠವೇ ಈ ಹಂಪಾನಾ. ಇವರ ಕಾಲದಲ್ಲಿ ಹಾಳಾದ ಸಾಹಿತ್ಯ ಪರಿಷತ್ತು ಸುಧಾರಿಸಲೇಇಲ್ಲ. ಕುವೆಂಪು ಟ್ರಸ್ಟಿಗೂ ವಕ್ಕರಿಸಿದ ಈತ ಅದಕ್ಕೂ ಭ್ರಷ್ಟತೆ ಕಳಂಕ ಹಚ್ಚಿದವರು. ಅದಿರಲಿ, ಸದ್ಯಕ್ಕೆ ಇವರಿಗೆ ಅದ್ಯಾವ ಮಠ ಬೆದರಿಕೆ ಹಾಕಿತು ಎಂಬುದೇ ಗೊತ್ತಿಲ್ಲ. ಇಷ್ಟಾದರೂ ಹಂಪಾನಾ ಚೆಡ್ಡಿ ಭೈರಣ್ಣನಂತಲ್ಲ. ಅಪ್ಪಟ ಸ್ತ್ರೀವಾದಿ. ಕಮಲಾಹಂಪನಾ ಅವರು ಭಾಷಣ ಮಾಡುತ್ತಿದ್ದಾಗ ಅವರ ಸಾಧಾರಣ ಮಾತಿಗೂ ಬಿರುಸಿನ ಚಪ್ಪಾಳೆ ಬೀಳುತ್ತಿತ್ತು. ತಿರುಗಿ ನೋಡಿದಾಗ ಪತಿ ಹಂಪಾನ ಕಮಲಾ ಮಾತಿಗೆ ಚಪ್ಪಾಳೆ ಚಚ್ಚುತಿದ್ದರಂತಲ್ಲಾ, ಥೂತ್ತೇರಿ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...