Homeಅಂಕಣಗಳುಪ್ರಧಾನಿ ಹುದ್ದೆಯ ಘನತೆ ಹಾಳು ಮಾಡಿದ ನರೇಂದ್ರ ಮೋದಿ

ಪ್ರಧಾನಿ ಹುದ್ದೆಯ ಘನತೆ ಹಾಳು ಮಾಡಿದ ನರೇಂದ್ರ ಮೋದಿ

ಇದನ್ನು ಓದಿರಿ

- Advertisement -
- Advertisement -

|ನ್ಯಾಯಪಥ ಸಂಪಾದಕೀಯ |

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಳೆದೊಂದು ವಾರದಿಂದ ಬಹಳ ಸುದ್ದಿಯಲ್ಲಿದ್ದಾರೆ. ಒಳ್ಳೆಯ ಸಾಧನೆಯ ಕಾರಣಕ್ಕಾಗಿ, ಇಲ್ಲವೇ ದೇಶದ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ವಿಚಾರದಲ್ಲಿ ಸುದ್ದಿಯಾಗಿದ್ದರೆ ಎಲ್ಲರೂ ಸಂತಸ ಪಡಬಹುದಿತ್ತು. ಆದರೆ ಅವರ ಅಜ್ಞಾನದ ಕಾರಣಕ್ಕಾಗಿ, ಸಾರ್ವಜನಿಕವಾಗಿ ಒಂದರ ಮೇಲೊಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಕಾರಣಕ್ಕಾಗಿ ಪ್ರಧಾನಿಯವರು ಸುದ್ದಿಯಲ್ಲಿರುವುದು ದುರಂತವಾಗಿದೆ.

ನ್ಯೂಸ್ ನೇಷನ್ ಎಂಬ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತ, ನರೇಂದ್ರ ಮೋದಿಯವರು ‘ಕೆಟ್ಟ ಹವಾಮಾನ ಮತ್ತು ಮೋಡಗಳಿರುವ ಕಾರಣಕ್ಕಾಗಿ ಬಾಲಾಕೋಟ್ ವಾಯುದಾಳಿಯನ್ನು ಮುಂದೂಡುವ ಬಗ್ಗೆ ತಜ್ಞರು ನಿರ್ಧರಿಸಿದ್ದರು. ಆದರೆ ನಾನು ಮೋಡವಿದ್ದರೆ ಯುದ್ಧವಿಮಾನಗಳು ರೇಡಾರ್‍ನಿಂದ ತಪ್ಪಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಸಲಹೆ ನೀಡಿದ್ದೆ’ ಎಂದು ಹೇಳಿದ್ದಾರೆ. ಒಂದು ಘನತೆಯುತ ಪ್ರಧಾನಿಯ ಸ್ಥಾನದಲ್ಲಿರುವವರು ತಿಳಿದುಕೊಂಡು ಮಾತನಾಡಬೇಕು. ತಾಂತ್ರಿಕ ವಿಚಾರಗಳು ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕು. ಆದರೆ ಯಾವಾಗಲೂ ಪ್ರಶಂಸೆ ಬಯಸುವ ಮೋದಿಯವರ ಈ ಹೇಳಿಕೆಯಿಂದ ಇಡೀ ದೇಶವೇ ಮುಜುಗರಕ್ಕೊಳಪಡಬೇಕಾದ ಪರಿಸ್ಥಿತಿ ಬಂದಿದೆ.

ಮೊದಲನೆಯದಾಗಿ ಮಳೆ, ಮೋಡ ಮಂಜು ಏನೇ ಇದ್ದರೂ ರೇಡಾರ್ ಕಿರಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬ ಸತ್ಯವನ್ನು ಸೇನೆಯಲ್ಲಿರುವವರು ತಿಳಿದೂ ಸಹ ಯಾರು ಅಂದು ಪ್ರಶ್ನಿಸದೇ ಇರುವುದು ಏನನ್ನು ಸೂಚಿಸುತ್ತದೆ? ಅಂದು ಕಣ್ಣು ಮುಚ್ಚಿಕೊಂಡು ವಾಯುಪಡೆಯ ಅಧಿಕಾರಿಗಳು ಮೋದಿಯವರ ಆದೇಶವನ್ನು ಪಾಲಿಸಿದ್ದಾರೆ. ಮುಂದೆಯೂ ಇಂತಹದೇ ಅವೈಜ್ಞಾನಿಕ ಆದೇಶಗಳನ್ನು ಮೋದಿ ನೀಡಿದರೆ ಅದರ ಬೆಲೆ ತೆರಬೇಕಾದವರು ಯಾರು?

ಎರಡನೆಯದಾಗಿ ರಫೇಲ್ ವಿಷಯದಲ್ಲಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷಗಳು ಆರೋಪ ಮಾಡಿದಾಗ ಅದು ರಕ್ಷಣಾ ವಿಷಯವಾದ್ದರಿಂದ ಕೋರ್ಟಿಗೆ ರಹಸ್ಯ ದಾಖಲೆಗಳನ್ನು ಕೊಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈಗ ಯಾರು ಕೇಳದಿದ್ದರೂ ಸಹ ಖುದ್ದು ಮೋದಿಯವರೇ ನಿರ್ದಿಷ್ಟ ವಾಯುದಾಳಿಯೊಂದರ ವಿವರಗಳನ್ನು ಟಿವಿಯೊಂದರಲ್ಲಿ ಕುಳಿತು ಹೇಳುತ್ತಾರೆಂದರೆ ಏನರ್ಥ? ದೇಶದ ರಕ್ಷಣಾ ರಹಸ್ಯಗಳನ್ನು ತನ್ನ ಸ್ವಂತ ಇಮೇಜ್ ಹೆಚ್ಚಿಸಿಕೊಳ್ಳಲು ಬಹಿರಂಗ ಮಾಡುವುದು ಸರ್ವಥಾ ಸರಿಯಲ್ಲ.

ಮೂರನೆಯದಾಗಿ ಬಾಲಾಕೋಟ್ ವಾಯುದಾಳಿಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಇರಲು ಈ ಪ್ರಧಾನಿಯವರ ಅಜ್ಞಾನದ ಆದೇಶವೇ ಕಾರಣ ಎಂಬ ಅನುಮಾನ ದಟ್ಟವಾಗುತ್ತಲಿದೆ. ಬಾಲಾಕೋಟ್ ವಾಯುದಾಳಿಯಲ್ಲಿ 300 ಜನ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದರೂ ಇದುವರೆಗೂ ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ. ಒಬ್ಬರೂ ಕೂಡ ಸಾವನ್ನಪ್ಪಿಲ್ಲ ಎಂಬುವವರೆಗು ವರದಿಗಳು ಹರಿದಾಡುತ್ತಿವೆ. ಈಗ ಪ್ರಧಾನಿಯವರ ಹೇಳಿಕೆ ನೋಡಿದರೆ ಅದಕ್ಕೆ ಮತ್ತಷ್ಟು ಇಂಬು ಕೊಡುವಂತೆ ಕಾಣುತ್ತಿವೆ. ವಾಯುದಾಳಿಯಲ್ಲಿ ಒಬ್ಬ ವಿಂಗ್ ಕಮಾಂಡರ್ ಹುತಾತ್ಮನಾಗಿದ್ದರೆ ಮತ್ತೊಬ್ಬ ಅಭಿನಂದನ್ ಎರಡು ದಿನಗಳ ಕಾಲ ಪಾಕ್‍ನಲ್ಲಿ ಸೆರೆಯಾಳಾಗಬೇಕಾಗಿ ಬಂದಿದ್ದು ಪ್ರಧಾನಿಯವರ ಆದೇಶದಿಂದಲೇ ಎಂಬ ಪ್ರಶ್ನೆ ಎದುರಾಗುತ್ತಿದೆ

ನಾಲ್ಕನೆಯದಾಗಿ ಮೋದಿಯವರ ಈ ಹೇಳಿಕೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಬರುವಂತಾಗಿದೆ. ಏಕೆಂದರೆ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಪ್ರಧಾನಿಯವರ ಇಂತಹ ಹೇಳಿಕೆಗಳು ಜೋಕ್‍ನಂತಾಗಿಬಿಡುವ ಅಪಾಯವಿದೆ. ಈಗಾಗಲೇ ಭಾರತದಲ್ಲಿ ಈ ಕುರಿತು ಲಕ್ಷಾಂತರ ಜೋಕ್‍ಗಳು, ಮೀಮ್‍ಗಳು, ಟ್ರೋಲ್‍ಗಳು ಹರಿದಾಡುತ್ತಿವೆ. ‘ಇವು ಮೋದಿಯವರ ಮೇಲಿನ ಜೋಕ್‍ಗಳಲ್ಲ, ಬದಲಿಗೆ ಮೋದಿಯವರನ್ನು ಇನ್ನೂ ಬೆಂಬಲಿಸುತ್ತಿರುವ ವಿದ್ಯಾವಂತ ವರ್ಗದವರ ಮೇಲಿನ ಜೋಕ್‍ಗಳು’ ಎಂದು ಪತ್ರಕರ್ತರೊಬ್ಬರು ಮಾರ್ಮಿಕವಾಗಿ ನುಡಿದಿರುವುದು ಸತ್ಯವಾಗಿದೆ.

ಮೋದಿಯವರ ಸುಳ್ಳು ಇಲ್ಲಿಗೆ ನಿಲ್ಲುವುದಿಲ್ಲ. ಅದೇ ಸಂದರ್ಶನದಲ್ಲಿ ಮುಂದುವರೆದು ‘ನಾನು 1987-88ರಲ್ಲಿ ನನ್ನ ಡಿಜಿಟಲ್ ಕ್ಯಾಮರದಿಂದ ಅಡ್ವಾಣಿಯವರ ವರ್ಣರಂಜಿತ ಫೋಟೊ ತೆಗೆದು ದೆಹಲಿಗೆ ಇಮೇಲ್ ಮಾಡಿದ್ದೆ’ ಎಂದು ಮತ್ತೊಂದು ಸುಳ್ಳು ಹೇಳಿಬಿಟ್ಟಿದ್ದಾರೆ. ವಾಸ್ತವವಾಗಿ 90ರ ದಶಕದ ನಂತರ ಡಿಜಿಟಲ್ ಕ್ಯಾಮರ ಭಾರತದ ಮಾರುಕಟ್ಟೆಗೆ ಬಂದಿದೆ. ಇನ್ನು ಆಗಸ್ಟ್ 14, 1995ರಂದು ವಿಎಸ್‍ಎನ್‍ಎಲ್ ಇಂಟರ್‍ನೆಟ್ ಸೇವೆ ಬಳಕೆಗೆ ಬಂದಿದೆ. ಆದರೆ ಮೋದಿ 1987-88ರಲ್ಲಿಯೇ ಬಳಸಿದ್ದೆ ಎನ್ನುವ ಮೂಲಕ ಹಾಸ್ಯದ ವಸ್ತು ಆಗಿದ್ದಾರೆ. ದೇಶದ ಪ್ರಧಾನಿಯೇ ಹೀಗಾದರೆ ದೇಶದ ಗೌರವ ಉಳಿದೀತೇ?

ಇದನ್ನು ಓದಿರಿ ನ್ಯಾಯಪಥ ಸಂಪಾದಕೀಯ

ಮೋದಿಯವರ ಈ ರೀತಿಯ ಸುಳ್ಳು ಹೇಳಿಕೆಗಳು ಇದೇ ಮೊದಲೇನಲ್ಲ. ಈ ಹಿಂದೆ ಸಹ ಅವರು ಗಟಾರಗಳಿಂದ ಗ್ಯಾಸ್ ಉತ್ಪಾದಿಸಬಹುದೆಂದು ಹೇಳಿದ್ದರು. ವಿಶ್ವದಾದ್ಯಂತ ಆಗುತ್ತಿರುವ ಹವಾಮಾನ ಬದಲಾವಣೆ ಪ್ರಶ್ನೆ ಬಂದಾಗ ಮೋದಿಯವರು ಹವಾಮಾನ ಬದಲಾವಣೆಯಾಗುತ್ತಿಲ್ಲ, ನಮ್ಮ ಚರ್ಮ ಬದಲಾಗುತ್ತಿದೆ ಅಷ್ಟೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.

ಮೋದಿ ಮಾತ್ರವಲ್ಲ ಅವರ ಸಹೋದ್ಯೋಗಿಗಳು ಸಹ ಸುಳ್ಳು ಹೇಳುವುದರಲ್ಲಿ ಕಡಿಮೆ ಏನಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ. ಗಣೇಶನದು ಪ್ಲಾಸ್ಟಿಕ್ ಸರ್ಜರಿ, ವೇದಕಾಲದಲ್ಲೇ ನಮ್ಮ ಬಳಿ ವಿಮಾನವಿತ್ತು, ಪ್ರಣಾಳಶಿಶು ತಂತ್ರಜ್ಞಾನವು ಇತ್ತು, ಮಂಗನಿಂದ ಮಾನವ ಆಗಿದ್ದು ಸುಳ್ಳು ಎಂದೆಲ್ಲಾ ಹೇಳಿಕೆಗಳನ್ನು ನೀಡಿದ್ದರಿಂದ ಎರಡು ಮೂರು ಬಾರಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ಸಮುದಾಯವು ಈ ಮೋದಿ ಸಹೋದ್ಯೋಗಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

ಮೋದಿಯವರು ವಿಜ್ಞಾನ ಮತ್ತು ವೈಚಾರಿಕತೆಯನ್ನು ನಿರ್ಲಕ್ಷಿಸಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ವಿದ್ವತ್ತು, ವಿದ್ವಾಂಸರು, ಬುದ್ದಿಜೀವಿಗಳು, ವಿಜ್ಞಾನಿಗಳೆಂದರೆ ಈ ಸರ್ಕಾರಕ್ಕೆ ಆಗಿಬರುವುದಿಲ್ಲ. ಎಲ್ಲಿಯವರೆಗೆ ಈ ಬಿಕ್ಕಟ್ಟು ಬಗೆಹರಿಯುವುದಿಲ್ಲವೋ ಅಲ್ಲಿಯವರೆಗೆ ಭಾರತ ಅಭಿವೃದ್ದಿಯಾಗುವುದಿಲ್ಲ ಮಾತ್ರವಲ್ಲ ಪ್ರಪಂಚದಲ್ಲಿ ತನ್ನ ಹೆಸರನ್ನು ಮತ್ತಷ್ಟು ಕೆಡಿಸಿಕೊಳ್ಳುವ ಅಪಾಯವಿದೆ. ಮೋದಿಯವರಿಗೆ ಇದು ಅರ್ಥವಾಗಬೇಕು ಅಥವಾ ಅಧಿಕಾರದಿಂದ ಕೆಳಗಿಳಿಯಬೇಕು ಇವೆರಡೆ ಸದ್ಯಕ್ಕಿರುವ ದಾರಿಗಳಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...