Homeಅಂಕಣಗಳುಅಪ್ಪನ ಆ ಭಾಷಣ ಮತ್ತು ಜಾಗೃತ ಸಾಹಿತ್ಯ ಸಮಾವೇಶ

ಅಪ್ಪನ ಆ ಭಾಷಣ ಮತ್ತು ಜಾಗೃತ ಸಾಹಿತ್ಯ ಸಮಾವೇಶ

ಓದಿರಿ ಗೌರಿ ಕಣ್ಣೋಟ

- Advertisement -
- Advertisement -

|ಗೌರಿ ಲಂಕೇಶ್ |

18 ಫೆಬ್ರವರಿ, 2009 (‘ಕಂಡಹಾಗೆ’ ಸಂಪಾದಕೀಯದಿಂದ)

1990ರಲ್ಲಿ ಅಪ್ಪ ಬರೆದಿದ್ದ ‘ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು’ ಎಂಬ ಲೇಖನದಲ್ಲಿ ಸಾಹಿತ್ಯ ಪರಿಷತ್ತಿನ ಆರಂಭಿಕ ಆಶಯಗಳನ್ನು ಮೆಚ್ಚಿದ್ದರೂ ಆನಂತರ ಅದರಲ್ಲಿ ನಡೆದ ಸೆಣಸಾಟ, ಹೊಡೆದಾಟ, ಜಾತಿ ರಾಜಕೀಯ ಇತ್ಯಾದಿಗಳ ಬಗ್ಗೆ ಬೇಸರಗೊಂಡಿದ್ದರ ಬಗ್ಗೆ ಹೇಳುತ್ತಾರೆ.

“ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನಗಳಲ್ಲಿ ಆದ ಜಗಳಗಳು, ವಿವಾದ, ಹಗರಣಗಳು ಇವೆಲ್ಲವನ್ನು ನೋಡುತ್ತಿದ್ದ ಸೂಕ್ಷ್ಮ ಮನಸ್ಸಿನ ಸಾಹಿತಿಗಳಲ್ಲಿ ಅಸಹ್ಯ ಹುಟ್ಟಿಸಿದವು. ಸಾಹಿತಿಗಳೆಂದರೆ ಲಜ್ಜೆಯ, ಘನತೆಯ ವ್ಯಕ್ತಿಗಳು ಎಂದು ತಿಳಿದಿದ್ದವರಿಗೆ ದಿಗ್ಭ್ರಮೆಯಾಯಿತು. ಸಾಹಿತ್ಯ ಮೂಲಭೂತವಾಗಿ ನಿಷ್ಪಕ್ಷಪಾತವಾದುದು ಎಂದು ತಿಳಿದವರಿಗೆ ಸಾಹಿತ್ಯದ ಇತರೆ ಮುಖಗಳು ಕಾಣತೊಡಗಿದವು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಕೀಯ ಮುಖಂಡನಂತೆ ಮೆರೆಯತೊಡಗಿದರೆ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಉತ್ಸವ ಮೂರ್ತಿಯಾಗಿ ವಿಜೃಂಭಿಸತೊಡಗಿದ… ರಾಜಕೀಯ ಚುನಾವಣೆಯ ಕೊಳಕುತನವನ್ನೆಲ್ಲ ಮೀರಿಸತೊಡಗಿದ ಪರಿಷತ್ತು ಎಲ್ಲರ ತಾತ್ಸಾರಕ್ಕೆ ಗುರಿಯಾಗತೊಡಗಿತು”. ಎಂದು ಅಪ್ಪ ಅದೇ ಲೇಖನದಲ್ಲಿ ಬರೆದಿದ್ದಾರೆ.

ಕನ್ನಡಿಗರಲ್ಲಿ ಯಾವುದೇ ಸ್ಫೂರ್ತಿ, ಭರವಸೆ ಮೂಡಿಸಲಾಗದಂತಹ ಅವಸ್ಥೆಯ ಮಟ್ಟಕ್ಕೆ ಪರಿಷತ್ ಇಳಿದಾಗ ಅಪ್ಪ ಮತ್ತು ಇತರ ಸಾಹಿತಿಗಳಿಗೆ ಉಳಿದಿದ್ದ ಮಾರ್ಗ ‘ಜಾಗೃತ ಸಾಹಿತ್ಯ ಸಮಾವೇಶ’ವನ್ನು ಪ್ರತ್ಯೇಕವಾಗಿ ಏರ್ಪಡಿಸುವುದು. ಫೆಬ್ರವರಿ 16, 1990ರಲ್ಲಿ ನಡೆದ ಈ ‘ಜಾಗೃತ ಸಾಹಿತ್ಯ ಸಮಾವೇಶ’ವನ್ನು ಅಪ್ಪ ಉದ್ಘಾಟಿಸಿ ಮಾಡಿದ ಭಾಷಣದ ತುಣುಕು ಹೀಗಿದೆ…

“ರಾಜ್ಯಭಾಷೆ ಬಹುಸಂಖ್ಯಾತ ಜನರ ಮಾತೃಭಾಷೆ. ಆಡಳಿತ ಭಾಷೆ, ವ್ಯವಹಾರ ಭಾಷೆ-ಅದು ನಮ್ಮಲ್ಲಿ ಕನ್ನಡ: ಹಾಗೆಯೇ ಬಳ್ಳಾರಿಯ ಒಂದು ಹಳ್ಳಿಯೊಂದರಲ್ಲಿ ವಾಸಿಸುವ ತೆಲುಗರ ಆಡಳಿತ ಭಾಷೆ, ವ್ಯವಹಾರ ಭಾಷೆ ಕನ್ನಡ: ಅಂತೆಯೇ ಅವರೆಲ್ಲರ ಮಾತೃಭಾಷೆಯನ್ನು ನಾಶಮಾಡುವುದು ಕರ್ನಾಟಕ ಆಡಳಿತದ ಉದ್ದೇಶವಾಗಕೂಡದು.

ಒಂದು ರಾಜ್ಯ ಪೂರ್ಣ ಸಾಕ್ಷರತೆಯತ್ತ ಸಾಗಿದೆ ಎಂದರೆ ಅರ್ಥ, ಇಲ್ಲಿಯ ಎಲ್ಲ, ವರ್ಗ, ಜಾತಿಯ ಜನರಿಗೆ ಹೊಸತೊಂದು ಶಕ್ತಿ, ಹೊಸತೊಂದು ಚೈತನ್ಯ ಬಂದಿದೆ ಎಂಬುದು: ಹಾಗೆಯೇ ಮುಂದುವರಿದ ಜಾತಿಗಳ ಸ್ವತ್ತಾಗಿದ್ದ ನೆನಪನ್ನು ದಾಖಲಿಸುವ, ಅನುಭವವನ್ನು ನಮೂದಿಸುವ, ಗ್ರಂಥಗಳನ್ನು ರಚಿಸುವ ಬರವಣಿಗೆಯ ಸವಲತ್ತು ದಲಿತರಿಗೆ, ಹಿಂದುಳಿದವರಿಗೆ ಕೂಡ ದೊರೆತಿದೆ ಎಂಬುದು; ಹಾಗೆಯೆ ಲಕ್ಷಾಂತರ ವರ್ಷಗಳಿಂದ ನೋವು, ಅವಮಾನ ಅನುಭವಿಸಿದ ಜನತೆಗೆ ಆತ್ಮವಿಶ್ವಾಸ, ಆತ್ಮಗೌರವ ದೊರೆತು ಹಲವಾರು ಅರ್ಥಪೂರ್ಣ ಅನುಭವಸ್ಥರುಗಳೊಂದಿಗೆ ಸಾಂಸ್ಕೃತಿಕ ರಾಜಕೀಯ ಕ್ರಿಯೆಯಲ್ಲಿ ಭಾಗವಹಿಸುವುದು ಸಾಧ್ಯವಾಗಿದೆ ಎಂಬುದು.

ಒಂದು ಅನಕ್ಷರಸ್ಥ ದಲಿತ ಕುಟುಂಬ, ಹಿಂದುಳಿದವರ ಕುಟುಂಬ ಈ ವಲಯಗಳಲ್ಲಿ ಅನುಭವಿಸುವ ದಿಗ್ಭ್ರಮೆ ಅವರಿಗೆ ಮಾತ್ರ ಗೊತ್ತಾಗುವಂಥದು. ಮೀಸಲಾತಿ ವಿರೋಧಿಸುವ, ಇವರ ಕಷ್ಟಗಳನ್ನು ಅರ್ಥಮಾಡಿಕೊಳ್ಳದ ಜನರಿಂದಲೇ ಈ ಬಗೆಯ ದಿಗ್ಭ್ರಮೆ ಹುಟ್ಟಿದೆ ಮತ್ತು ಈ ಜನರಿಂದಲೇ ಇವತ್ತು ಏನನ್ನೂ ಮಾಡಲಾರದ ಸ್ಥಿತಿಯನ್ನು ಸರ್ಕಾರಗಳು ತಲುಪಿವೆ. ಸರ್ಕಾರ, ಸಾಂಸ್ಕøತಿಕ ವ್ಯವಸ್ಥೆ ನೇರಗೊಳ್ಳದೆ ಇಲ್ಲಿ ಅಸಹಾಯಕರಿಗೆ ನೆಮ್ಮದಿ, ಕನ್ನಡದ ಸಂಪೂರ್ಣ ವಿಕಾಸ ಕಷ್ಟಸಾಧ್ಯ.

ಈ ಸಮಾವೇಶ ಐತಿಹಾಸಿಕ ಎಂದು ನಾನಂತೂ ತಿಳಿದಿದ್ದೇನೆ. ನಿಜಕ್ಕೂ ಕ್ರಿಯಾಶೀಲ ಸಾಹಿತಿಗಳಾಗಿರುವ, ಸಂಶೋಧಕರಾಗಿರುವ ಎಲ್ಲ ಜಾತಿ ಹಿನ್ನೆಲೆಯ ಜನ ಒಂದೆಡೆ ಸೇರಿ ಚರ್ಚಿಸುವುದು, ಕೃತಿಗಳ, ಸಂಶೋಧನೆಯ ಬೆಲೆ ಕಟ್ಟುವುದು ಅಗತ್ಯವಾಗಿದೆ. ಹಿಂದುಳಿದವರು, ದಲಿತರು ತಮ್ಮ ತಮ್ಮ ಕೃತಿಗಳನ್ನು ತಮ್ಮ ತಮ್ಮ ಮಾನದಂಡಕ್ಕೆ ತಕ್ಕಂತೆ ನಿರ್ಧರಿಸುವುದಕ್ಕೆ ಬದಲು ತಮ್ಮಿಂದ ಹೊರತಾದ ಮಾಪನದ ಸವಾಲು ಎತ್ತಿಕೊಳ್ಳಬೇಕಾಗಿದೆ. ಅಂತೆಯೇ ಈ ಸಮಾಜಕ್ಕೆ ಪರಂಪರಾಗತವಾಗಿ ಬಂದಿರುವ ಅಂಧತ್ವವನ್ನು ಎಲ್ಲರೂ ಗಮನಿಸಬೇಕಾಗಿದೆ. ಪರಕೀಯರ ಆಕ್ರಮಣ, ದಬ್ಬಾಳಿಕೆಯಿಂದ ತತ್ತಿರಿಸಿಹೋದ ಜನರು ಜಾತೀಯತೆಯ ಸಣ್ಣಪುಟ್ಟ ಗುಂಪಿನ ರಕ್ಷಣೆಯಲ್ಲಿ, ಇದ್ದುದ್ದನ್ನು ಹೇಗಾದರೂ ಮಾಡಿ ಕಾಪಾಡಿಕೊಳ್ಳಲು ಯತ್ನಿಸಿದರು. ಹೊಸಬರ ಅಕ್ಷರಾಭ್ಯಾಸ, ಸಂವೇದನೆಯ ವಿಚಾರವೇ ಅವರನ್ನು ಬೆಚ್ಚಿಸಿತು. ಇದರಿಂದ ಸಾಹಿತ್ಯ, ಛಂದಸ್ಸು, ವ್ಯಾಕರಣಗಳೆಲ್ಲ ಜೀವಂತ ಅನುಭವದೊಂದಿಗಿನ ಪ್ರಯೋಗಗಳಾಗದೆ ಜಡ ಶಾಸ್ತ್ರಗಳಾದವು. ಸಾಹಿತ್ಯವನ್ನು ನೋಡುವ ಕಣ್ಣು ಕುರುಡಾದವು. ಜಾತಿಯ ವಲಯವನ್ನು ಮೀರಿದ ಸತ್ಯ ಇರಬಹುದೆಂಬುದು ಅವರಿಗೆ ತಿಳಿಯಲೇ ಇಲ್ಲ. ಈ ಕಾರಣಕ್ಕಾಗಿಯೇ ದಲಿತರಿಗೆ, ಹಿಂದುಳಿದವರಿಗೆ ಅವರ ಸದ್ಯದ ಅನ್ನಿಸಿಕೆಯನ್ನು ಮೀರಿದ ಮಾಪನ, ಮೌಲ್ಯ ಇರುವುದು ಗೊತ್ತಾಗಬೇಕಾಗಿರುವಂತೆಯೇ ಪರಂಪರಾಗತ ಅನುಭವಗಳ ಕುರುಡರೂ ತಮ್ಮ ಕಣ್ಣು ತೆರೆದು ತಮ್ಮಿಂದ ಹೊರಗಿರುವ ಮಾಪನವನ್ನು ಗಮನಿಸಬೇಕಾಗಿದೆ. ಅರ್ಜುನ, ಏಕಲವ್ಯರ ಪ್ರತಿಭೆ ಈ ಸತ್ಯದೆದುರು ಅರಳಬೇಕಾಗಿದೆ.

ಸಾಹಿತಿ ವಿಚಿತ್ರ ಸಾತಂತ್ರ್ಯ ಪ್ರೇಮಿ. ರಾಜಕೀಯ ಹಂಗುತೊರೆದ ನಿಷ್ಠುರ. ಇಲ್ಲಿ ಕೂಡ ಸಾಹಿತಿಯ ದಿಟ್ಟತನ, ನಿಷ್ಠುರತೆಯನ್ನು ಗಮನಿಸುತ್ತಾ ನಾವು ಆತನ ಅಸಹಾಯಕತೆಯನ್ನು ಮರೆಯದಿರೋಣ. ಸಾಹಿತಿ ಮತ್ತು ಸಹೃದಯನ, ಸಾಹಿತಿ ಮತ್ತು ಸಂಶೋಧಕನ, ಸಾಹಿತಿ ಮತ್ತು ಓದುಗನ ಸಂಬಂಧ ಮುಖ್ಯವಾದುದ್ದು. ಸಾಹಿತಿಗೆ ನಿಜವಾದ ಕೃತಕೃತ್ಮತೆ ದೊರೆಯುವುದು ಆತ ಈ ಸೇತುವೆಗಳನ್ನು ಕಂಡುಕೊಂಡಾಗ. ತನ್ನ ಅಂತರಾಳದಲ್ಲಿ ಸಲ್ಲುವ ಆತ ಸಹೃದಯನ ಆಂತರ್ಯದಲ್ಲಿ ಸಲ್ಲುವಂತಾದಾಗ. ಆದ್ದರಿಂದಲೇ ಈ ಸಾಹಿತ್ಯ ಸಮಾವೇಶ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ವಿಷಯಗಳನ್ನೆಲ್ಲ ಒಳಗೊಂಡು ಸಾಹಿತ್ಯದಲ್ಲಿನ ವರ್ಣ, ವರ್ಗವನ್ನೆಲ್ಲ ಧ್ಯಾನಿಸುವಂತಾಗಬೇಕು. ಇಲ್ಲಿಯ ಚರ್ಚೆ ಮತ್ತು ವಾದ ಮೈಲುಗಟ್ಟಲೆ ಬಾಹ್ಯವನ್ನು ಕ್ರಮಿಸುವಾಗಲೇ ಸಾಹಿತಿಯ ಪುಟ್ಟ, ಮನೋಹರ, ವ್ಯಸನಗಳ, ನೋವುಗಳ ಜಗತ್ತನ್ನೂ ನೋಡಬೇಕು. ಆಗಲೇ ಕನ್ನಡ ಸಾಹಿತ್ಯ ಕನ್ನಡ ಭಾಷೆಗೆ ಅಮೂಲ್ಯ ಕೊಡುಗೆ ನೀಡುವ ಶಕ್ತಿ ಪಡೆಯುತ್ತದೆ: ವ್ಯಾಕರಣದ ಬದ್ಧತೆ ಮತ್ತು ಅನುಭವದ ಉಜ್ವಲತೆ ನಮ್ಮದಾಗುತ್ತದೆ. ಎಲ್ಲ ನಿರ್ಜೀವ ಸಂಸ್ಥೆಗಳ ವಿರುದ್ಧ ಸಾಹಿತಿ ಮತ್ತು ಸಾಹಿತ್ಯ ಕೃತಿಗಳ ಸೂಕ್ಷ್ಮಜ್ಞ ಪ್ರತಿಭಟನೆಯಾಗುತ್ತದೆ”.

ಅಪ್ಪ ಈ ಆಶಯಗಳನ್ನು ವ್ಯಕ್ತಪಡಿಸಿ ಹತ್ತಿರತ್ತಿರ ಎರಡು ದಶಕಗಳಾಗಿದ್ದರೂ ಪರಿಸ್ಥಿತಿ ಉದ್ಧಾರವಾಗುವ ಬದಲು ಇನ್ನಷ್ಟು ಕೆಟ್ಟಿದೆ, ಅದು ನಿರುತ್ಸಾಹ ತರುವ ಸಂಗತಿ.

ಇದನ್ನು ಓದಿರಿ ಗೌರಿ ಕಣ್ಣೋಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...