Homeಅಂಕಣಗಳುಅಪ್ಪನ ಆ ಭಾಷಣ ಮತ್ತು ಜಾಗೃತ ಸಾಹಿತ್ಯ ಸಮಾವೇಶ

ಅಪ್ಪನ ಆ ಭಾಷಣ ಮತ್ತು ಜಾಗೃತ ಸಾಹಿತ್ಯ ಸಮಾವೇಶ

ಓದಿರಿ ಗೌರಿ ಕಣ್ಣೋಟ

- Advertisement -
- Advertisement -

|ಗೌರಿ ಲಂಕೇಶ್ |

18 ಫೆಬ್ರವರಿ, 2009 (‘ಕಂಡಹಾಗೆ’ ಸಂಪಾದಕೀಯದಿಂದ)

1990ರಲ್ಲಿ ಅಪ್ಪ ಬರೆದಿದ್ದ ‘ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು’ ಎಂಬ ಲೇಖನದಲ್ಲಿ ಸಾಹಿತ್ಯ ಪರಿಷತ್ತಿನ ಆರಂಭಿಕ ಆಶಯಗಳನ್ನು ಮೆಚ್ಚಿದ್ದರೂ ಆನಂತರ ಅದರಲ್ಲಿ ನಡೆದ ಸೆಣಸಾಟ, ಹೊಡೆದಾಟ, ಜಾತಿ ರಾಜಕೀಯ ಇತ್ಯಾದಿಗಳ ಬಗ್ಗೆ ಬೇಸರಗೊಂಡಿದ್ದರ ಬಗ್ಗೆ ಹೇಳುತ್ತಾರೆ.

“ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನಗಳಲ್ಲಿ ಆದ ಜಗಳಗಳು, ವಿವಾದ, ಹಗರಣಗಳು ಇವೆಲ್ಲವನ್ನು ನೋಡುತ್ತಿದ್ದ ಸೂಕ್ಷ್ಮ ಮನಸ್ಸಿನ ಸಾಹಿತಿಗಳಲ್ಲಿ ಅಸಹ್ಯ ಹುಟ್ಟಿಸಿದವು. ಸಾಹಿತಿಗಳೆಂದರೆ ಲಜ್ಜೆಯ, ಘನತೆಯ ವ್ಯಕ್ತಿಗಳು ಎಂದು ತಿಳಿದಿದ್ದವರಿಗೆ ದಿಗ್ಭ್ರಮೆಯಾಯಿತು. ಸಾಹಿತ್ಯ ಮೂಲಭೂತವಾಗಿ ನಿಷ್ಪಕ್ಷಪಾತವಾದುದು ಎಂದು ತಿಳಿದವರಿಗೆ ಸಾಹಿತ್ಯದ ಇತರೆ ಮುಖಗಳು ಕಾಣತೊಡಗಿದವು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಕೀಯ ಮುಖಂಡನಂತೆ ಮೆರೆಯತೊಡಗಿದರೆ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಉತ್ಸವ ಮೂರ್ತಿಯಾಗಿ ವಿಜೃಂಭಿಸತೊಡಗಿದ… ರಾಜಕೀಯ ಚುನಾವಣೆಯ ಕೊಳಕುತನವನ್ನೆಲ್ಲ ಮೀರಿಸತೊಡಗಿದ ಪರಿಷತ್ತು ಎಲ್ಲರ ತಾತ್ಸಾರಕ್ಕೆ ಗುರಿಯಾಗತೊಡಗಿತು”. ಎಂದು ಅಪ್ಪ ಅದೇ ಲೇಖನದಲ್ಲಿ ಬರೆದಿದ್ದಾರೆ.

ಕನ್ನಡಿಗರಲ್ಲಿ ಯಾವುದೇ ಸ್ಫೂರ್ತಿ, ಭರವಸೆ ಮೂಡಿಸಲಾಗದಂತಹ ಅವಸ್ಥೆಯ ಮಟ್ಟಕ್ಕೆ ಪರಿಷತ್ ಇಳಿದಾಗ ಅಪ್ಪ ಮತ್ತು ಇತರ ಸಾಹಿತಿಗಳಿಗೆ ಉಳಿದಿದ್ದ ಮಾರ್ಗ ‘ಜಾಗೃತ ಸಾಹಿತ್ಯ ಸಮಾವೇಶ’ವನ್ನು ಪ್ರತ್ಯೇಕವಾಗಿ ಏರ್ಪಡಿಸುವುದು. ಫೆಬ್ರವರಿ 16, 1990ರಲ್ಲಿ ನಡೆದ ಈ ‘ಜಾಗೃತ ಸಾಹಿತ್ಯ ಸಮಾವೇಶ’ವನ್ನು ಅಪ್ಪ ಉದ್ಘಾಟಿಸಿ ಮಾಡಿದ ಭಾಷಣದ ತುಣುಕು ಹೀಗಿದೆ…

“ರಾಜ್ಯಭಾಷೆ ಬಹುಸಂಖ್ಯಾತ ಜನರ ಮಾತೃಭಾಷೆ. ಆಡಳಿತ ಭಾಷೆ, ವ್ಯವಹಾರ ಭಾಷೆ-ಅದು ನಮ್ಮಲ್ಲಿ ಕನ್ನಡ: ಹಾಗೆಯೇ ಬಳ್ಳಾರಿಯ ಒಂದು ಹಳ್ಳಿಯೊಂದರಲ್ಲಿ ವಾಸಿಸುವ ತೆಲುಗರ ಆಡಳಿತ ಭಾಷೆ, ವ್ಯವಹಾರ ಭಾಷೆ ಕನ್ನಡ: ಅಂತೆಯೇ ಅವರೆಲ್ಲರ ಮಾತೃಭಾಷೆಯನ್ನು ನಾಶಮಾಡುವುದು ಕರ್ನಾಟಕ ಆಡಳಿತದ ಉದ್ದೇಶವಾಗಕೂಡದು.

ಒಂದು ರಾಜ್ಯ ಪೂರ್ಣ ಸಾಕ್ಷರತೆಯತ್ತ ಸಾಗಿದೆ ಎಂದರೆ ಅರ್ಥ, ಇಲ್ಲಿಯ ಎಲ್ಲ, ವರ್ಗ, ಜಾತಿಯ ಜನರಿಗೆ ಹೊಸತೊಂದು ಶಕ್ತಿ, ಹೊಸತೊಂದು ಚೈತನ್ಯ ಬಂದಿದೆ ಎಂಬುದು: ಹಾಗೆಯೇ ಮುಂದುವರಿದ ಜಾತಿಗಳ ಸ್ವತ್ತಾಗಿದ್ದ ನೆನಪನ್ನು ದಾಖಲಿಸುವ, ಅನುಭವವನ್ನು ನಮೂದಿಸುವ, ಗ್ರಂಥಗಳನ್ನು ರಚಿಸುವ ಬರವಣಿಗೆಯ ಸವಲತ್ತು ದಲಿತರಿಗೆ, ಹಿಂದುಳಿದವರಿಗೆ ಕೂಡ ದೊರೆತಿದೆ ಎಂಬುದು; ಹಾಗೆಯೆ ಲಕ್ಷಾಂತರ ವರ್ಷಗಳಿಂದ ನೋವು, ಅವಮಾನ ಅನುಭವಿಸಿದ ಜನತೆಗೆ ಆತ್ಮವಿಶ್ವಾಸ, ಆತ್ಮಗೌರವ ದೊರೆತು ಹಲವಾರು ಅರ್ಥಪೂರ್ಣ ಅನುಭವಸ್ಥರುಗಳೊಂದಿಗೆ ಸಾಂಸ್ಕೃತಿಕ ರಾಜಕೀಯ ಕ್ರಿಯೆಯಲ್ಲಿ ಭಾಗವಹಿಸುವುದು ಸಾಧ್ಯವಾಗಿದೆ ಎಂಬುದು.

ಒಂದು ಅನಕ್ಷರಸ್ಥ ದಲಿತ ಕುಟುಂಬ, ಹಿಂದುಳಿದವರ ಕುಟುಂಬ ಈ ವಲಯಗಳಲ್ಲಿ ಅನುಭವಿಸುವ ದಿಗ್ಭ್ರಮೆ ಅವರಿಗೆ ಮಾತ್ರ ಗೊತ್ತಾಗುವಂಥದು. ಮೀಸಲಾತಿ ವಿರೋಧಿಸುವ, ಇವರ ಕಷ್ಟಗಳನ್ನು ಅರ್ಥಮಾಡಿಕೊಳ್ಳದ ಜನರಿಂದಲೇ ಈ ಬಗೆಯ ದಿಗ್ಭ್ರಮೆ ಹುಟ್ಟಿದೆ ಮತ್ತು ಈ ಜನರಿಂದಲೇ ಇವತ್ತು ಏನನ್ನೂ ಮಾಡಲಾರದ ಸ್ಥಿತಿಯನ್ನು ಸರ್ಕಾರಗಳು ತಲುಪಿವೆ. ಸರ್ಕಾರ, ಸಾಂಸ್ಕøತಿಕ ವ್ಯವಸ್ಥೆ ನೇರಗೊಳ್ಳದೆ ಇಲ್ಲಿ ಅಸಹಾಯಕರಿಗೆ ನೆಮ್ಮದಿ, ಕನ್ನಡದ ಸಂಪೂರ್ಣ ವಿಕಾಸ ಕಷ್ಟಸಾಧ್ಯ.

ಈ ಸಮಾವೇಶ ಐತಿಹಾಸಿಕ ಎಂದು ನಾನಂತೂ ತಿಳಿದಿದ್ದೇನೆ. ನಿಜಕ್ಕೂ ಕ್ರಿಯಾಶೀಲ ಸಾಹಿತಿಗಳಾಗಿರುವ, ಸಂಶೋಧಕರಾಗಿರುವ ಎಲ್ಲ ಜಾತಿ ಹಿನ್ನೆಲೆಯ ಜನ ಒಂದೆಡೆ ಸೇರಿ ಚರ್ಚಿಸುವುದು, ಕೃತಿಗಳ, ಸಂಶೋಧನೆಯ ಬೆಲೆ ಕಟ್ಟುವುದು ಅಗತ್ಯವಾಗಿದೆ. ಹಿಂದುಳಿದವರು, ದಲಿತರು ತಮ್ಮ ತಮ್ಮ ಕೃತಿಗಳನ್ನು ತಮ್ಮ ತಮ್ಮ ಮಾನದಂಡಕ್ಕೆ ತಕ್ಕಂತೆ ನಿರ್ಧರಿಸುವುದಕ್ಕೆ ಬದಲು ತಮ್ಮಿಂದ ಹೊರತಾದ ಮಾಪನದ ಸವಾಲು ಎತ್ತಿಕೊಳ್ಳಬೇಕಾಗಿದೆ. ಅಂತೆಯೇ ಈ ಸಮಾಜಕ್ಕೆ ಪರಂಪರಾಗತವಾಗಿ ಬಂದಿರುವ ಅಂಧತ್ವವನ್ನು ಎಲ್ಲರೂ ಗಮನಿಸಬೇಕಾಗಿದೆ. ಪರಕೀಯರ ಆಕ್ರಮಣ, ದಬ್ಬಾಳಿಕೆಯಿಂದ ತತ್ತಿರಿಸಿಹೋದ ಜನರು ಜಾತೀಯತೆಯ ಸಣ್ಣಪುಟ್ಟ ಗುಂಪಿನ ರಕ್ಷಣೆಯಲ್ಲಿ, ಇದ್ದುದ್ದನ್ನು ಹೇಗಾದರೂ ಮಾಡಿ ಕಾಪಾಡಿಕೊಳ್ಳಲು ಯತ್ನಿಸಿದರು. ಹೊಸಬರ ಅಕ್ಷರಾಭ್ಯಾಸ, ಸಂವೇದನೆಯ ವಿಚಾರವೇ ಅವರನ್ನು ಬೆಚ್ಚಿಸಿತು. ಇದರಿಂದ ಸಾಹಿತ್ಯ, ಛಂದಸ್ಸು, ವ್ಯಾಕರಣಗಳೆಲ್ಲ ಜೀವಂತ ಅನುಭವದೊಂದಿಗಿನ ಪ್ರಯೋಗಗಳಾಗದೆ ಜಡ ಶಾಸ್ತ್ರಗಳಾದವು. ಸಾಹಿತ್ಯವನ್ನು ನೋಡುವ ಕಣ್ಣು ಕುರುಡಾದವು. ಜಾತಿಯ ವಲಯವನ್ನು ಮೀರಿದ ಸತ್ಯ ಇರಬಹುದೆಂಬುದು ಅವರಿಗೆ ತಿಳಿಯಲೇ ಇಲ್ಲ. ಈ ಕಾರಣಕ್ಕಾಗಿಯೇ ದಲಿತರಿಗೆ, ಹಿಂದುಳಿದವರಿಗೆ ಅವರ ಸದ್ಯದ ಅನ್ನಿಸಿಕೆಯನ್ನು ಮೀರಿದ ಮಾಪನ, ಮೌಲ್ಯ ಇರುವುದು ಗೊತ್ತಾಗಬೇಕಾಗಿರುವಂತೆಯೇ ಪರಂಪರಾಗತ ಅನುಭವಗಳ ಕುರುಡರೂ ತಮ್ಮ ಕಣ್ಣು ತೆರೆದು ತಮ್ಮಿಂದ ಹೊರಗಿರುವ ಮಾಪನವನ್ನು ಗಮನಿಸಬೇಕಾಗಿದೆ. ಅರ್ಜುನ, ಏಕಲವ್ಯರ ಪ್ರತಿಭೆ ಈ ಸತ್ಯದೆದುರು ಅರಳಬೇಕಾಗಿದೆ.

ಸಾಹಿತಿ ವಿಚಿತ್ರ ಸಾತಂತ್ರ್ಯ ಪ್ರೇಮಿ. ರಾಜಕೀಯ ಹಂಗುತೊರೆದ ನಿಷ್ಠುರ. ಇಲ್ಲಿ ಕೂಡ ಸಾಹಿತಿಯ ದಿಟ್ಟತನ, ನಿಷ್ಠುರತೆಯನ್ನು ಗಮನಿಸುತ್ತಾ ನಾವು ಆತನ ಅಸಹಾಯಕತೆಯನ್ನು ಮರೆಯದಿರೋಣ. ಸಾಹಿತಿ ಮತ್ತು ಸಹೃದಯನ, ಸಾಹಿತಿ ಮತ್ತು ಸಂಶೋಧಕನ, ಸಾಹಿತಿ ಮತ್ತು ಓದುಗನ ಸಂಬಂಧ ಮುಖ್ಯವಾದುದ್ದು. ಸಾಹಿತಿಗೆ ನಿಜವಾದ ಕೃತಕೃತ್ಮತೆ ದೊರೆಯುವುದು ಆತ ಈ ಸೇತುವೆಗಳನ್ನು ಕಂಡುಕೊಂಡಾಗ. ತನ್ನ ಅಂತರಾಳದಲ್ಲಿ ಸಲ್ಲುವ ಆತ ಸಹೃದಯನ ಆಂತರ್ಯದಲ್ಲಿ ಸಲ್ಲುವಂತಾದಾಗ. ಆದ್ದರಿಂದಲೇ ಈ ಸಾಹಿತ್ಯ ಸಮಾವೇಶ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ವಿಷಯಗಳನ್ನೆಲ್ಲ ಒಳಗೊಂಡು ಸಾಹಿತ್ಯದಲ್ಲಿನ ವರ್ಣ, ವರ್ಗವನ್ನೆಲ್ಲ ಧ್ಯಾನಿಸುವಂತಾಗಬೇಕು. ಇಲ್ಲಿಯ ಚರ್ಚೆ ಮತ್ತು ವಾದ ಮೈಲುಗಟ್ಟಲೆ ಬಾಹ್ಯವನ್ನು ಕ್ರಮಿಸುವಾಗಲೇ ಸಾಹಿತಿಯ ಪುಟ್ಟ, ಮನೋಹರ, ವ್ಯಸನಗಳ, ನೋವುಗಳ ಜಗತ್ತನ್ನೂ ನೋಡಬೇಕು. ಆಗಲೇ ಕನ್ನಡ ಸಾಹಿತ್ಯ ಕನ್ನಡ ಭಾಷೆಗೆ ಅಮೂಲ್ಯ ಕೊಡುಗೆ ನೀಡುವ ಶಕ್ತಿ ಪಡೆಯುತ್ತದೆ: ವ್ಯಾಕರಣದ ಬದ್ಧತೆ ಮತ್ತು ಅನುಭವದ ಉಜ್ವಲತೆ ನಮ್ಮದಾಗುತ್ತದೆ. ಎಲ್ಲ ನಿರ್ಜೀವ ಸಂಸ್ಥೆಗಳ ವಿರುದ್ಧ ಸಾಹಿತಿ ಮತ್ತು ಸಾಹಿತ್ಯ ಕೃತಿಗಳ ಸೂಕ್ಷ್ಮಜ್ಞ ಪ್ರತಿಭಟನೆಯಾಗುತ್ತದೆ”.

ಅಪ್ಪ ಈ ಆಶಯಗಳನ್ನು ವ್ಯಕ್ತಪಡಿಸಿ ಹತ್ತಿರತ್ತಿರ ಎರಡು ದಶಕಗಳಾಗಿದ್ದರೂ ಪರಿಸ್ಥಿತಿ ಉದ್ಧಾರವಾಗುವ ಬದಲು ಇನ್ನಷ್ಟು ಕೆಟ್ಟಿದೆ, ಅದು ನಿರುತ್ಸಾಹ ತರುವ ಸಂಗತಿ.

ಇದನ್ನು ಓದಿರಿ ಗೌರಿ ಕಣ್ಣೋಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...