Homeಕರ್ನಾಟಕ‘ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ, ಸತೀಶಣ್ಣ ಚೀರ್ಸ್!’: ವ್ಯಂಗ್ಯ ಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

‘ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ, ಸತೀಶಣ್ಣ ಚೀರ್ಸ್!’: ವ್ಯಂಗ್ಯ ಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

ಹತ್ತು ಒಳ್ಳೆಯ ಕೆಲಸ ಮಾಡಿ, ಒಂದು ಹಾಳು ಕೆಲಸ ಮಾಡಿದರೆ, ನಾವು ಕಾರ್ಟೂನಿಸ್ಟರು ಆ ಒಂದು ಹಾಳು ಕೆಲಸದ ಬಗ್ಗೆ ಮಾತ್ರ ಮಾತಾಡುತ್ತೇವೆ. ಅದು ನಮ್ಮ ವೃತ್ತಿಧರ್ಮ. ಅದು ಕಾರ್ಟೂನಿನ ಶೈಲಿ. ಅದರ ಸಂಹಿತೆಯೇ ಅಂಥದ್ದು!

- Advertisement -
- Advertisement -

ಕಳೆದ ಆರೇಳು ವರ್ಷಗಳಿಂದ ಇಡೀ ದೇಶದಲ್ಲೇ ಕಾರ್ಟೂನಿಸ್ಟ್‌ಗಳ ಮೇಲೆ ಸೋಷಿಯಲ್ ಮೀಡಿಯಾ ಗುಂಪು ದಾಳಿಗಳು, ಫಿಸಿಕಲ್ ಅಟ್ಯಾಕ್‌‌ಗಳೂ ನಡೆಯುವುದು ಸಾಮಾನ್ಯ ಎನಿಸಿಬಿಟ್ಟಿವೆ. ಎಷ್ಟೋ ಬಾರಿ ನಾನಂದುಕೊಂಡದ್ದು ಇದೆ. ಕಾರ್ಟೂನ್ ನೋಡುವುದು ಹೇಗೆ ಎಂಬ ಕುರಿತೇ ಜನರಿಗೆ ಪಠ್ಯ ಅಥವಾ ಸೆಮಿನಾರ್ ಮಾಡಬೇಕಾದ ಅಗತ್ಯವಿದೆ ಎಂದು.

ಜನಪ್ರತಿನಿಧಿಯಾದವ ಎಲ್ಲಾ ರೀತಿಯ ಟೀಕೆ ವಿಮರ್ಶೆಗಳಿಗೆ ಒಳಗಾಗಬೇಕಾದ ಒಂದು ವಿಶಿಷ್ಟ ಸನ್ನಿವೇಶವನ್ನು ಕಲ್ಪಿಸಿಕೊಟ್ಟಿದೆ ಈ ಪ್ರಜಾಪ್ರಭುತ್ವ. ಹೆಜ್ಜೆ ಹೆಜ್ಜೆಗೂ ಆತ ಜನರಿಗೆ ಉತ್ತರದಾಯಿಯೇ ಹೊರತು ಸರ್ವಾಧಿಕಾರಿಯಲ್ಲ. ಹಿಂದೆ ಶಂಕರ್ ಅವರ “ಡೋಂಟ್ ಸ್ಪೇರ್ ಮೀ” ಪುಸ್ತಿಕೆ ಹೊರಬಂದ ಬಗೆ ಮತ್ತು ಹಿನ್ನೆಲೆ ನಮಗೆಲ್ಲ ತಿಳಿದೇ ಇದೆ. ಆರ್. ಕೆ. ಲಕ್ಷ್ಮಣ್ ಮತ್ತು ಇಂದಿರಾ ಗಾಂಧಿ ಒಮ್ಮೆ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಸಂದರ್ಭ ಬಂದಾಗ ಕಾರ್ಯಕ್ರಮದ ಕೊನೆಯಲ್ಲಿ ಎದ್ದು ಬಂದು ಲಕ್ಷಮಣ್‌ರನ್ನು ಅಭಿನಂದಿಸಿದ ಇಂದಿರಾಜೀ “I enjoy your creations. Congratulations” ಅಂದಿದ್ದರಂತೆ!

ತಮ್ಮ ಕುರಿತಾಗಿ ಅಬು ಅಬ್ರಹಾಂ ಬರೆದ ತೀವ್ರ ಟೀಕೆಯ ಬೆತ್ತಲೆ ವ್ಯಂಗ್ಯಚಿತ್ರವನ್ನು ಆಗಿನ ರಾಷ್ಟ್ರಪತಿ ಫಕ್ರುದೀನ್ ಅಲಿ ಅಹಮದ್ ಆ ತುರ್ತುಪರಿಸ್ಥಿತಿ ಯ ಕಾಲದಲ್ಲೇ ಅರಗಿಸಿಕೊಂಡಿದ್ದರು! ಸುಮ್ಮನೆ ಈಗಿನ ಪರಿಸ್ಥಿತಿ ಯಲ್ಲಿ ಅದನ್ನೊಮ್ಮೆ ಊಹಿಸಿ ನೋಡಿ!

ಇದನ್ನೂ ಓದಿ: ‘ಸತೀಶ್ ಆಚಾರ್ಯ ಅವರೇ, ನೀವು ಆನೆಯಂತೆ‌ ನಡೆಯಿರಿ’: ಬಿಜೆಪಿ ಐಟಿ ಸೆಲ್‌ ದಾಳಿ ವಿರುದ್ದ ಆಕ್ರೋಶ

ಜಸ್ವಂತ್ ಸಿಂಗ್ ಅವರು ವಿದೇಶಾಂಗ ಸಚಿವರಾಗಿದ್ದ ಕಾಲದಲ್ಲಿ ಅವರನ್ನು ಟೀಕಿಸಿ ಸುಧೀರ್ ತೈಲಾಂಗ್ ಅವರು ಬರೆದ ವ್ಯಂಗ್ಯಚಿತ್ರವನ್ನು ಸಿಂಗ್ ಫ್ರೇಮ್‌ ಹಾಕಿಸಿ ತನ್ನ ಕೋಣೆಯಲ್ಲಿ ನೇತುಹಾಕಿದ್ದರಂತೆ! ಹೆಚ್ಚುಕಮ್ಮಿ ಅಧಿಕಾರದ ಹಮ್ಮುಬಿಮ್ಮಿನಲ್ಲೇ ಮೆರೆಯುತ್ತಿದ್ದ ತೆಲುಗಿನ ಎನ್.ಟಿ.ಆರ್. ಆಗ ‘ಆಂಧ್ರಭೂಮಿ’ ಪತ್ರಿಕೆಯಲ್ಲಿ ಕಾರ್ಟೂನ್ ಬರೆಯುತ್ತಿದ್ದ ಸುರೇಂದ್ರನ್ ಅವರು ತನ್ನನ್ನು ಟೀಕಿಸಿ ಬರೆದ ‘ಕೃಷ್ಣಾವತಾರಂ’ ಚಿತ್ರವನ್ನು ಬಹುವಾಗಿ ಮೆಚ್ಚಿದ್ದರಂತೆ! ಮುಂದ್ಯಾವತ್ತೋ ಸಂದರ್ಶನದಲ್ಲಿ ಅದನ್ನು ಹೇಳಿಕೊಂಡಿದ್ದರೂ ಕೂಡ.

ಪ್ರಜಾಪ್ರಭುತ್ವದ ಕಾಲ ಹಾಗಿರಲಿ. ಬ್ರಿಟಿಷ್‌ ಆಡಳಿತದ ಭಾರತದಲ್ಲಿ ವೈಸರಾಯ್‌ಗಳು ಮೆರೆಯುತ್ತಿದ್ದ ಕಾಲ. ಕಾರ್ಟೂನಿಸ್ಟ್ ಅಬ್ರಹಾಂ ಅವರು ವೈಸರಾಯ್ ಕುರಿತು ಬರೆದ ನೆಗೆಟಿವ್ ಚಿತ್ರವನ್ನು ಮೆಚ್ಚಿ, ಮರುದಿನ ದೂತನೊಬ್ಬನನ್ನು ಕಳಿಸಿ ಅಬ್ರಹಾಂ ಅವರಿಂದ ಅದರ ಒರಿಜಿನಲ್ ಪ್ರತಿ ಪಡೆದು ಸಂಗ್ರಹಿಸಿಟ್ಟುಕೊಂಡಿದ್ದರಂತೆ! ನೆನಪಿಡಿ. ನಮಗೆ ಸ್ವಾತಂತ್ರ್ಯವಿರಲಿಲ್ಲ ಆಗ!

ಈಗ ಬನ್ನಿ 2021 ರ ಈ ಹೊತ್ತಿಗೆ!

ವಸಾಹತುಶಾಹಿ ಆಡಳಿತವಿದೆಯೇನು ಇಲ್ಲಿ? ತುರ್ತುಪರಿಸ್ಥಿತಿ ಏನಾದರೂ ಘೋಷಿಸಲ್ಪಟ್ಟಿದೆಯಾ ಇಲ್ಲಿ? ವ್ಯವಸ್ಥೆಯ ಕುರಿತು ಟೀಕೆ ಅಂದರೇನು? ವ್ಯವಸ್ಥೆಯ ಮುಂದಾಳತ್ವ ವಹಿಸಿದ ವ್ಯಕ್ತಿಯ ವಿಮರ್ಶೆಯೇ ತಾನೇ? ಟೀಕೆ ಅಥವಾ ವಿಮರ್ಶೆ ಸರಿಯಾಗಿದ್ದರೆ ಜನ ತಲೆದೂಗುತ್ತಾರೆ. ಇಲ್ಲವೆಂದರೆ ಕೃತಿಕಾರನನ್ನು ತಾವಾಗೇ ಇಗ್ನೋರ್ ಮಾಡುತ್ತಾರೆ ಜನ! ಜನರಿಂದ ಕೋಟಿ ಕೋಟಿ ಸೌಲಭ್ಯಗಳನ್ನು ಪಡೆದು ಸಲಹುವ ಉತ್ತರದಾಯಿತ್ವ ಹೊಂದಿದ ನಾಯಕನೊಬ್ಬನನ್ನು ಟೀಕಿಸಲೇಬಾರದೆಂದರೆ?

ಇದನ್ನೂ ಓದಿ: ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಲಸಿಕೆ ದರದಲ್ಲಿ ತಾರತಮ್ಯವೇಕೆ: ಸುಪ್ರೀಂ ಪ್ರಶ್ನೆ

ಒಂದು ವಿಚಾರ ನಾನ್ಯಾವತ್ತೂ ಹೇಳುತ್ತಿರುತ್ತೇನೆ ಮಿತ್ರರಲ್ಲಿ. ಪ್ರಧಾನಿಯಾದವ ಅಥವಾ ಇನ್ಯಾರೇ ನಾಯಕನಾದವ ಹತ್ತು ಒಳ್ಳೆಯ ಕೆಲಸಗಳನ್ನು ಮಾಡಿ ಒಂದು ಕೆಟ್ಟ ಕೆಲಸ ಮಾಡಿದನೆಂದಾದರೆ, ನಾವು ಕಾರ್ಟೂನಿಸ್ಟರು ಆತನ ಆ ಒಂದು ಹಾಳು ಕೆಲಸದ ಬಗ್ಗೆ ಮಾತ್ರ ಮಾತಾಡುತ್ತೇವೆ. ಅದು ನಮ್ಮ ವೃತ್ತಿಧರ್ಮ. ಅದು ಕಾರ್ಟೂನಿನ ಶೈಲಿ. ಅದರ ಸಂಹಿತೆಯೇ ಅಂಥದ್ದು!

ಹತ್ತು ಒಳ್ಳೆಯ ಕೆಲಸದ ಬಗ್ಗೆ ಮಾತಾಡುವುದಕ್ಕೇನಿದೆ? ಅದು ಅವನ ಕರ್ತವ್ಯ ತಾನೇ? ಅದಕ್ಕಲ್ಲವೇ ಆತ ದೇಶದ ಅತ್ಯುನ್ನತ ಗೌರವವನ್ನು ಹೊಂದಿರುವುದು? ಅಷ್ಟಾಗಿಯೂ ಆ ಹತ್ತು ಕೆಲಸಗಳ ಬಗ್ಗೆ ತುತ್ತೂರಿ ಊದಿ ಉಘೇ ಅನ್ನುವುದಕ್ಕೆ ಅವರದ್ದೇ ಪ್ರತ್ಯೇಕ ಗುಂಪುಗಳಿವೆ. ನಮ್ಮ ಕೆಲಸವಲ್ಲವಲ್ಲ ಅದು!

ಎಲ್ಲೋ ಉತ್ತರ ಕೊರಿಯಾದಲ್ಲಿದ್ದೇವೇನೋ ಅನ್ನಿಸಿಬಿಡುತ್ತದೆ ಈಗ. ಅಲ್ಲ, ಆ ಮನಮೋಹನ್ ಸಿಂಗ್ ಕುರಿತಂತೆ, ಲಾಲೂಪ್ರಸಾದ್ ಕುರಿತಂತೆ, ನಮ್ಮ ದೇವೇಗೌಡರ ಕುರಿತಂತೆ ದೇಶದ ವ್ಯಂಗ್ಯಚಿತ್ರಕಾರರು ಮಾಡದೇ ಬಿಟ್ಟ ಕಾರ್ಟೂನ್ ಯಾವುದಾದ್ರೂ ಇದೆಯೇನ್ರೀ? ಎಷ್ಟು ಗೋಳು ಹುಯ್ಕೊಂಡಿಲ್ಲ ಆ ಪುಣ್ಯಾತ್ಮರುಗಳನ್ನೆಲ್ಲ! ಅವರ್ಯಾರಿಗೂ ಆಗದ ಅವಮಾನ, ಅಸಹಿಷ್ಣುತೆ ಈ ನರೇಂದ್ರ ಮೋದಿ ಅಥವಾ ಅವರ ಪರಿವಾರಕ್ಕೇನಿದೆ? ಅರೆ! ಒಬ್ಬ ಸ್ಟೇಟ್ಸ್‌ಮನ್‌ನ ಮೊತ್ತ ಮೊದಲ ಲಕ್ಷಣವೇ ತಾನು ಎಲ್ಲಾ ವಿಮರ್ಶೆಗಳಿಗೂ ತೆರೆದು ಕೊಂಡಿರುವುದು. ಇದೇನಾಗ್ತಿದೆ ಇಲ್ಲಿ?

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಮೋದಿ ಫೋಟೊಗಳಿಗೆ ಹೆಚ್ಚುತ್ತಿರುವ #ResignModi ಕಮೆಂಟ್‌ಗಳು: ಹಳೆ ಫೋಟೊಗಳನ್ನು ಬಿಡದ ನೆಟ್ಟಿಗರು!

ಯಾವ ದೇಶದಲ್ಲಿ ಕಲೆ, ಸಾಹಿತ್ಯ, ರಂಗಭೂಮಿ…. ಇತ್ಯಾದಿ ಸೃಜನಶೀಲ ಆಯಾಮಗಳಿಗೆ ಪೂರ್ತಿ ಸ್ವಾತಂತ್ರ್ಯ ಇಲ್ಲವೋ ಆ ದೇಶದ ಭವಿಷ್ಯ ಅಪಾಯದಲ್ಲಿರುವುದಂತೂ ಖಂಡಿತ. ಅಮೆರಿಕದ ವ್ಯಂಗ್ಯಚಿತ್ರಕಾರರು ಟ್ರಂಪನ್ನಷ್ಟೆಲ್ಲ ಗೋಳು ಹುಯ್ಕೊಂಡರೂ ಮಹಾ ಡಿಕ್ಟೇಟರ್ ಮನಸ್ಥಿತಿಯ ಟ್ರಂಪ್ ಅವರ ಕೂದಲೂ ಕೊಂಕಿಸಲಿಲ್ಲ!

ಆರ್.ಕೆ.ಲಕ್ಷ್ಮಣ್, ಅಬು ಅಬ್ರಹಾಂ, ಶಂಕರ್ಸ್ ವೀಕ್ಲಿಯ ಶಂಕರ್ ಅವರೇನಾದರೂ ಈಗಿರುತ್ತಿದ್ದರೆ ಒಂದೋ ಜೈಲಲ್ಲಿರುತ್ತಿದ್ದರು ಅಥವಾ ಇನ್ನೊಬ್ಬ ಗೌರಿ ಲಂಕೇಶ್ ಆಗಿಬಿಡುತ್ತಿದ್ದರು ಅಂತ ಎಷ್ಟೋ ಬಾರಿ ಅನಿಸಿದ್ದಿದೆ ನನಗೆ! ಕಳೆದ ಶತಮಾನದ ಅರವತ್ತು ಎಪ್ಪತ್ತು ಎಂಭತ್ತರ ದಶಕ ಎಂಥಾ ಸುವರ್ಣ ಯುಗವಾಗಿತ್ತದು! ಭಾರತ ಮತ್ತೆಂದು ಅಂಥ ದಿನಗಳನ್ನು ಕಾಣುವುದೋ!

ಕಳೆದ ಆರೇಳು ವರ್ಷಗಳಿಂದ ನನ್ನ ಇನ್ಬಾಕ್ಸ್‌ಗೆ ಬಂದು ಬೀಳುತ್ತಿರುವ ಸಂಸ್ಕೃತ ಶ್ಲೋಕಗಳನ್ನು ನೋಡಿದರೆ ಕನಿಕರ ಮೂಡುತ್ತದೆ ಆ ಬಿಜೆಪಿ ಬೆಂಬಲಿಗರ ಬಗ್ಗೆ. ನನ್ನೆದುರೇ ಓಡಾಡಿ ಬೆಳೆದ ಹುಡುಗನೊಬ್ಬ ಅತ್ಯಂತ ಕೊಳಕು ಸುಳ್ಳುಗಳ ಮೂಲಕ ಭಯಂಕರ ಟ್ರಾಲ್ ಮಾಡಿ ಬರೆದಿದ್ದ ನನ್ನ ಕುರಿತು. ಅವರ ಬಾಲಂಗೋಚಿಗಳ ಕಮೆಂಟುಗಳೋ..! ಆಹ! ಭಾರತಾಂಬೆಯ ಸುಸಂಸ್ಕೃತ ಪುತ್ರರತ್ನರವರು ಅನ್ನಲು ಯಾವ ಅಡ್ಡಿಯೂ ಇರದು.

ಇದನ್ನೂ ಓದಿ: ‘ಅದು ಹೃದಯವಲ್ಲ, ಕಲ್ಲು’- ಮೋದಿಗೆ ಪರೋಕ್ಷವಾಗಿ ಕುಟುಕಿದ ರಾಹುಲ್‌ ಗಾಂಧಿ

ಇನ್ನು ಪ್ರಗತಿಪರರ ಸೋಗು ಹಾಕಿ ಮನೆಯಲ್ಲಿ ಜಾತಿವಾದಿ ಮೂಲಭೂತವಾದಿ ಪುಟಾಣಿಗಳನ್ನು ಬೆಳೆಸುತ್ತಿರುವ ಸಾಹಿತಿಗಳದ್ದೋ ಇನ್ನೊಂದು ಪ್ರತ್ಯೇಕ ಕತೆ! ಇವರ ನೆಂಟರಿಷ್ಟರಾದ ಪ್ರಗತಿಪರರದ್ದಂತೂ ದಾಕ್ಷಿಣ್ಯದ ನಾಜೂಕು ನಡೆ. ನಿಷ್ಠುರಕ್ಕೆ ಬಿದ್ದು ಯಾವ ನರಕಕ್ಕೆ ಹೋಗಬೇಕು? ಇವರನ್ನೆಲ್ಲ ಯಾರೂ ಪ್ರಶ್ನೆ ಮಾಡಬಾರದು. ಇವರು ಗುಪ್ತವಾಗಿಯೋ ಬಹಿರಂಗವಾಗಿಯೋ ನಂಬಿದ ಸಿದ್ದಾಂತಗಳ ವಿರುದ್ಧ ಟಿಪ್ಪಣಿ ಮಾಡಬಾರದು. ಇದು ಈ ಶತಮಾನದ ಈ ಹೊತ್ತಿನ ಕರ್ಮ!

ನಿನ್ನೆ ಮೊನ್ನೆ ಮತ್ತೆ ನನ್ನ ಕಾರ್ಟೂನ್ ಗಳ ನೆಪವಾಗಿ ನನ್ನ ಮೇಲೆ ದಾಳಿ ನಡೆದಿತ್ತು. ಇವತ್ತು ನಮ್ಮನೆಚ್ಚಿನ ಸತೀಶ್ ಆಚಾರ್ಯರ ಮೇಲೆ! ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ. ಆದರೆ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಬಗ್ಗೆ ಸಣ್ಣದೊಂದು ವಿಷಾದ ಅಷ್ಟೆ!

ಅಂದಿನ ಬಸವಣ್ಣನಿಂದ ಹಿಡಿದು, ಮೊನ್ನೆ ಮೊನ್ನೆಯ ಗಾಂಧಿ, ದಾಬೋಲ್ಕರ್, ಗೌರಿಯರವರೆಗೆ…. ಇದೇ ಮೇಲ್ವರ್ಗದ ಸಂಚಿಗೆ ಬಲಿಯಾದ ದಕ್ಷಿಣ ಕನ್ನಡದ ಆರಾಧ್ಯ ದೈವಗಳಾದ ಕಲ್ಕುಡ ಕಲ್ಲುರ್ಟಿಯರಿಂದ ಹಿಡಿದು ಕೋಟಿ ಚೆನ್ನಯರವರೆಗೆ ಈ ನೆಲದಲ್ಲಿ ಪುರಾಣ ಇತಿಹಾಸಗಳ ಏಳುಬೀಳುಗಳ ಹಸಿಹಸಿ ನೆನಪು ನೆನವರಿಕೆಗಳಿವೆ. ಆ ನೆನಪುಗಳಲ್ಲಿ ಜೀವ ಪುಟಿಯುವ ಎದೆಯ ಉತ್ತೇಜಕ ದ್ರವ್ಯಗಳಿವೆ. ನನ್ನ ಚಿತ್ರ ನನ್ನದು. Always with you ಸತೀಶಣ್ಣ. ನಮ್ಮೆಲ್ಲರದೂ ಒಂದೇ ಧರ್ಮ- ಅದು ಮನುಷ್ಯ ಧರ್ಮ! Cheers!

ವ್ಯಂಗ್ಯಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

ಇದನ್ನೂ ಓದಿ: ಕೋವಿಡ್ 2ನೆ ಅಲೆ ತೀವ್ರವಾಗುತ್ತಿದ್ದಾಗ ಕುಂಭಮೇಳದಲ್ಲಿ ಮುಳುಗೆದ್ದವರು 70 ಲಕ್ಷ ಜನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮನುವಾದಿಗಳ ಆಡಳಿತದಲ್ಲಿ ಬಾರತ ಬಹಳ ವೇಗವಾಗಿ ಹಿಟ್ಲರೀಕರಣಗೊಳ್ಳುತ್ತಿದೆ. ಈ ದೇಶದ ಪ್ರಜ್ಞಾವಂತರು ಎದೆಗುಂದದೆ, ಒಕ್ಕೊರಲಿನಿಂದ ಇದನ್ನು ಪ್ರತಿಭಟಿಸಬೇಕು.

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...