Homeಕರ್ನಾಟಕ‘ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ, ಸತೀಶಣ್ಣ ಚೀರ್ಸ್!’: ವ್ಯಂಗ್ಯ ಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

‘ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ, ಸತೀಶಣ್ಣ ಚೀರ್ಸ್!’: ವ್ಯಂಗ್ಯ ಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

ಹತ್ತು ಒಳ್ಳೆಯ ಕೆಲಸ ಮಾಡಿ, ಒಂದು ಹಾಳು ಕೆಲಸ ಮಾಡಿದರೆ, ನಾವು ಕಾರ್ಟೂನಿಸ್ಟರು ಆ ಒಂದು ಹಾಳು ಕೆಲಸದ ಬಗ್ಗೆ ಮಾತ್ರ ಮಾತಾಡುತ್ತೇವೆ. ಅದು ನಮ್ಮ ವೃತ್ತಿಧರ್ಮ. ಅದು ಕಾರ್ಟೂನಿನ ಶೈಲಿ. ಅದರ ಸಂಹಿತೆಯೇ ಅಂಥದ್ದು!

- Advertisement -
- Advertisement -

ಕಳೆದ ಆರೇಳು ವರ್ಷಗಳಿಂದ ಇಡೀ ದೇಶದಲ್ಲೇ ಕಾರ್ಟೂನಿಸ್ಟ್‌ಗಳ ಮೇಲೆ ಸೋಷಿಯಲ್ ಮೀಡಿಯಾ ಗುಂಪು ದಾಳಿಗಳು, ಫಿಸಿಕಲ್ ಅಟ್ಯಾಕ್‌‌ಗಳೂ ನಡೆಯುವುದು ಸಾಮಾನ್ಯ ಎನಿಸಿಬಿಟ್ಟಿವೆ. ಎಷ್ಟೋ ಬಾರಿ ನಾನಂದುಕೊಂಡದ್ದು ಇದೆ. ಕಾರ್ಟೂನ್ ನೋಡುವುದು ಹೇಗೆ ಎಂಬ ಕುರಿತೇ ಜನರಿಗೆ ಪಠ್ಯ ಅಥವಾ ಸೆಮಿನಾರ್ ಮಾಡಬೇಕಾದ ಅಗತ್ಯವಿದೆ ಎಂದು.

ಜನಪ್ರತಿನಿಧಿಯಾದವ ಎಲ್ಲಾ ರೀತಿಯ ಟೀಕೆ ವಿಮರ್ಶೆಗಳಿಗೆ ಒಳಗಾಗಬೇಕಾದ ಒಂದು ವಿಶಿಷ್ಟ ಸನ್ನಿವೇಶವನ್ನು ಕಲ್ಪಿಸಿಕೊಟ್ಟಿದೆ ಈ ಪ್ರಜಾಪ್ರಭುತ್ವ. ಹೆಜ್ಜೆ ಹೆಜ್ಜೆಗೂ ಆತ ಜನರಿಗೆ ಉತ್ತರದಾಯಿಯೇ ಹೊರತು ಸರ್ವಾಧಿಕಾರಿಯಲ್ಲ. ಹಿಂದೆ ಶಂಕರ್ ಅವರ “ಡೋಂಟ್ ಸ್ಪೇರ್ ಮೀ” ಪುಸ್ತಿಕೆ ಹೊರಬಂದ ಬಗೆ ಮತ್ತು ಹಿನ್ನೆಲೆ ನಮಗೆಲ್ಲ ತಿಳಿದೇ ಇದೆ. ಆರ್. ಕೆ. ಲಕ್ಷ್ಮಣ್ ಮತ್ತು ಇಂದಿರಾ ಗಾಂಧಿ ಒಮ್ಮೆ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಸಂದರ್ಭ ಬಂದಾಗ ಕಾರ್ಯಕ್ರಮದ ಕೊನೆಯಲ್ಲಿ ಎದ್ದು ಬಂದು ಲಕ್ಷಮಣ್‌ರನ್ನು ಅಭಿನಂದಿಸಿದ ಇಂದಿರಾಜೀ “I enjoy your creations. Congratulations” ಅಂದಿದ್ದರಂತೆ!

ತಮ್ಮ ಕುರಿತಾಗಿ ಅಬು ಅಬ್ರಹಾಂ ಬರೆದ ತೀವ್ರ ಟೀಕೆಯ ಬೆತ್ತಲೆ ವ್ಯಂಗ್ಯಚಿತ್ರವನ್ನು ಆಗಿನ ರಾಷ್ಟ್ರಪತಿ ಫಕ್ರುದೀನ್ ಅಲಿ ಅಹಮದ್ ಆ ತುರ್ತುಪರಿಸ್ಥಿತಿ ಯ ಕಾಲದಲ್ಲೇ ಅರಗಿಸಿಕೊಂಡಿದ್ದರು! ಸುಮ್ಮನೆ ಈಗಿನ ಪರಿಸ್ಥಿತಿ ಯಲ್ಲಿ ಅದನ್ನೊಮ್ಮೆ ಊಹಿಸಿ ನೋಡಿ!

ಇದನ್ನೂ ಓದಿ: ‘ಸತೀಶ್ ಆಚಾರ್ಯ ಅವರೇ, ನೀವು ಆನೆಯಂತೆ‌ ನಡೆಯಿರಿ’: ಬಿಜೆಪಿ ಐಟಿ ಸೆಲ್‌ ದಾಳಿ ವಿರುದ್ದ ಆಕ್ರೋಶ

ಜಸ್ವಂತ್ ಸಿಂಗ್ ಅವರು ವಿದೇಶಾಂಗ ಸಚಿವರಾಗಿದ್ದ ಕಾಲದಲ್ಲಿ ಅವರನ್ನು ಟೀಕಿಸಿ ಸುಧೀರ್ ತೈಲಾಂಗ್ ಅವರು ಬರೆದ ವ್ಯಂಗ್ಯಚಿತ್ರವನ್ನು ಸಿಂಗ್ ಫ್ರೇಮ್‌ ಹಾಕಿಸಿ ತನ್ನ ಕೋಣೆಯಲ್ಲಿ ನೇತುಹಾಕಿದ್ದರಂತೆ! ಹೆಚ್ಚುಕಮ್ಮಿ ಅಧಿಕಾರದ ಹಮ್ಮುಬಿಮ್ಮಿನಲ್ಲೇ ಮೆರೆಯುತ್ತಿದ್ದ ತೆಲುಗಿನ ಎನ್.ಟಿ.ಆರ್. ಆಗ ‘ಆಂಧ್ರಭೂಮಿ’ ಪತ್ರಿಕೆಯಲ್ಲಿ ಕಾರ್ಟೂನ್ ಬರೆಯುತ್ತಿದ್ದ ಸುರೇಂದ್ರನ್ ಅವರು ತನ್ನನ್ನು ಟೀಕಿಸಿ ಬರೆದ ‘ಕೃಷ್ಣಾವತಾರಂ’ ಚಿತ್ರವನ್ನು ಬಹುವಾಗಿ ಮೆಚ್ಚಿದ್ದರಂತೆ! ಮುಂದ್ಯಾವತ್ತೋ ಸಂದರ್ಶನದಲ್ಲಿ ಅದನ್ನು ಹೇಳಿಕೊಂಡಿದ್ದರೂ ಕೂಡ.

ಪ್ರಜಾಪ್ರಭುತ್ವದ ಕಾಲ ಹಾಗಿರಲಿ. ಬ್ರಿಟಿಷ್‌ ಆಡಳಿತದ ಭಾರತದಲ್ಲಿ ವೈಸರಾಯ್‌ಗಳು ಮೆರೆಯುತ್ತಿದ್ದ ಕಾಲ. ಕಾರ್ಟೂನಿಸ್ಟ್ ಅಬ್ರಹಾಂ ಅವರು ವೈಸರಾಯ್ ಕುರಿತು ಬರೆದ ನೆಗೆಟಿವ್ ಚಿತ್ರವನ್ನು ಮೆಚ್ಚಿ, ಮರುದಿನ ದೂತನೊಬ್ಬನನ್ನು ಕಳಿಸಿ ಅಬ್ರಹಾಂ ಅವರಿಂದ ಅದರ ಒರಿಜಿನಲ್ ಪ್ರತಿ ಪಡೆದು ಸಂಗ್ರಹಿಸಿಟ್ಟುಕೊಂಡಿದ್ದರಂತೆ! ನೆನಪಿಡಿ. ನಮಗೆ ಸ್ವಾತಂತ್ರ್ಯವಿರಲಿಲ್ಲ ಆಗ!

ಈಗ ಬನ್ನಿ 2021 ರ ಈ ಹೊತ್ತಿಗೆ!

ವಸಾಹತುಶಾಹಿ ಆಡಳಿತವಿದೆಯೇನು ಇಲ್ಲಿ? ತುರ್ತುಪರಿಸ್ಥಿತಿ ಏನಾದರೂ ಘೋಷಿಸಲ್ಪಟ್ಟಿದೆಯಾ ಇಲ್ಲಿ? ವ್ಯವಸ್ಥೆಯ ಕುರಿತು ಟೀಕೆ ಅಂದರೇನು? ವ್ಯವಸ್ಥೆಯ ಮುಂದಾಳತ್ವ ವಹಿಸಿದ ವ್ಯಕ್ತಿಯ ವಿಮರ್ಶೆಯೇ ತಾನೇ? ಟೀಕೆ ಅಥವಾ ವಿಮರ್ಶೆ ಸರಿಯಾಗಿದ್ದರೆ ಜನ ತಲೆದೂಗುತ್ತಾರೆ. ಇಲ್ಲವೆಂದರೆ ಕೃತಿಕಾರನನ್ನು ತಾವಾಗೇ ಇಗ್ನೋರ್ ಮಾಡುತ್ತಾರೆ ಜನ! ಜನರಿಂದ ಕೋಟಿ ಕೋಟಿ ಸೌಲಭ್ಯಗಳನ್ನು ಪಡೆದು ಸಲಹುವ ಉತ್ತರದಾಯಿತ್ವ ಹೊಂದಿದ ನಾಯಕನೊಬ್ಬನನ್ನು ಟೀಕಿಸಲೇಬಾರದೆಂದರೆ?

ಇದನ್ನೂ ಓದಿ: ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಲಸಿಕೆ ದರದಲ್ಲಿ ತಾರತಮ್ಯವೇಕೆ: ಸುಪ್ರೀಂ ಪ್ರಶ್ನೆ

ಒಂದು ವಿಚಾರ ನಾನ್ಯಾವತ್ತೂ ಹೇಳುತ್ತಿರುತ್ತೇನೆ ಮಿತ್ರರಲ್ಲಿ. ಪ್ರಧಾನಿಯಾದವ ಅಥವಾ ಇನ್ಯಾರೇ ನಾಯಕನಾದವ ಹತ್ತು ಒಳ್ಳೆಯ ಕೆಲಸಗಳನ್ನು ಮಾಡಿ ಒಂದು ಕೆಟ್ಟ ಕೆಲಸ ಮಾಡಿದನೆಂದಾದರೆ, ನಾವು ಕಾರ್ಟೂನಿಸ್ಟರು ಆತನ ಆ ಒಂದು ಹಾಳು ಕೆಲಸದ ಬಗ್ಗೆ ಮಾತ್ರ ಮಾತಾಡುತ್ತೇವೆ. ಅದು ನಮ್ಮ ವೃತ್ತಿಧರ್ಮ. ಅದು ಕಾರ್ಟೂನಿನ ಶೈಲಿ. ಅದರ ಸಂಹಿತೆಯೇ ಅಂಥದ್ದು!

ಹತ್ತು ಒಳ್ಳೆಯ ಕೆಲಸದ ಬಗ್ಗೆ ಮಾತಾಡುವುದಕ್ಕೇನಿದೆ? ಅದು ಅವನ ಕರ್ತವ್ಯ ತಾನೇ? ಅದಕ್ಕಲ್ಲವೇ ಆತ ದೇಶದ ಅತ್ಯುನ್ನತ ಗೌರವವನ್ನು ಹೊಂದಿರುವುದು? ಅಷ್ಟಾಗಿಯೂ ಆ ಹತ್ತು ಕೆಲಸಗಳ ಬಗ್ಗೆ ತುತ್ತೂರಿ ಊದಿ ಉಘೇ ಅನ್ನುವುದಕ್ಕೆ ಅವರದ್ದೇ ಪ್ರತ್ಯೇಕ ಗುಂಪುಗಳಿವೆ. ನಮ್ಮ ಕೆಲಸವಲ್ಲವಲ್ಲ ಅದು!

ಎಲ್ಲೋ ಉತ್ತರ ಕೊರಿಯಾದಲ್ಲಿದ್ದೇವೇನೋ ಅನ್ನಿಸಿಬಿಡುತ್ತದೆ ಈಗ. ಅಲ್ಲ, ಆ ಮನಮೋಹನ್ ಸಿಂಗ್ ಕುರಿತಂತೆ, ಲಾಲೂಪ್ರಸಾದ್ ಕುರಿತಂತೆ, ನಮ್ಮ ದೇವೇಗೌಡರ ಕುರಿತಂತೆ ದೇಶದ ವ್ಯಂಗ್ಯಚಿತ್ರಕಾರರು ಮಾಡದೇ ಬಿಟ್ಟ ಕಾರ್ಟೂನ್ ಯಾವುದಾದ್ರೂ ಇದೆಯೇನ್ರೀ? ಎಷ್ಟು ಗೋಳು ಹುಯ್ಕೊಂಡಿಲ್ಲ ಆ ಪುಣ್ಯಾತ್ಮರುಗಳನ್ನೆಲ್ಲ! ಅವರ್ಯಾರಿಗೂ ಆಗದ ಅವಮಾನ, ಅಸಹಿಷ್ಣುತೆ ಈ ನರೇಂದ್ರ ಮೋದಿ ಅಥವಾ ಅವರ ಪರಿವಾರಕ್ಕೇನಿದೆ? ಅರೆ! ಒಬ್ಬ ಸ್ಟೇಟ್ಸ್‌ಮನ್‌ನ ಮೊತ್ತ ಮೊದಲ ಲಕ್ಷಣವೇ ತಾನು ಎಲ್ಲಾ ವಿಮರ್ಶೆಗಳಿಗೂ ತೆರೆದು ಕೊಂಡಿರುವುದು. ಇದೇನಾಗ್ತಿದೆ ಇಲ್ಲಿ?

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಮೋದಿ ಫೋಟೊಗಳಿಗೆ ಹೆಚ್ಚುತ್ತಿರುವ #ResignModi ಕಮೆಂಟ್‌ಗಳು: ಹಳೆ ಫೋಟೊಗಳನ್ನು ಬಿಡದ ನೆಟ್ಟಿಗರು!

ಯಾವ ದೇಶದಲ್ಲಿ ಕಲೆ, ಸಾಹಿತ್ಯ, ರಂಗಭೂಮಿ…. ಇತ್ಯಾದಿ ಸೃಜನಶೀಲ ಆಯಾಮಗಳಿಗೆ ಪೂರ್ತಿ ಸ್ವಾತಂತ್ರ್ಯ ಇಲ್ಲವೋ ಆ ದೇಶದ ಭವಿಷ್ಯ ಅಪಾಯದಲ್ಲಿರುವುದಂತೂ ಖಂಡಿತ. ಅಮೆರಿಕದ ವ್ಯಂಗ್ಯಚಿತ್ರಕಾರರು ಟ್ರಂಪನ್ನಷ್ಟೆಲ್ಲ ಗೋಳು ಹುಯ್ಕೊಂಡರೂ ಮಹಾ ಡಿಕ್ಟೇಟರ್ ಮನಸ್ಥಿತಿಯ ಟ್ರಂಪ್ ಅವರ ಕೂದಲೂ ಕೊಂಕಿಸಲಿಲ್ಲ!

ಆರ್.ಕೆ.ಲಕ್ಷ್ಮಣ್, ಅಬು ಅಬ್ರಹಾಂ, ಶಂಕರ್ಸ್ ವೀಕ್ಲಿಯ ಶಂಕರ್ ಅವರೇನಾದರೂ ಈಗಿರುತ್ತಿದ್ದರೆ ಒಂದೋ ಜೈಲಲ್ಲಿರುತ್ತಿದ್ದರು ಅಥವಾ ಇನ್ನೊಬ್ಬ ಗೌರಿ ಲಂಕೇಶ್ ಆಗಿಬಿಡುತ್ತಿದ್ದರು ಅಂತ ಎಷ್ಟೋ ಬಾರಿ ಅನಿಸಿದ್ದಿದೆ ನನಗೆ! ಕಳೆದ ಶತಮಾನದ ಅರವತ್ತು ಎಪ್ಪತ್ತು ಎಂಭತ್ತರ ದಶಕ ಎಂಥಾ ಸುವರ್ಣ ಯುಗವಾಗಿತ್ತದು! ಭಾರತ ಮತ್ತೆಂದು ಅಂಥ ದಿನಗಳನ್ನು ಕಾಣುವುದೋ!

ಕಳೆದ ಆರೇಳು ವರ್ಷಗಳಿಂದ ನನ್ನ ಇನ್ಬಾಕ್ಸ್‌ಗೆ ಬಂದು ಬೀಳುತ್ತಿರುವ ಸಂಸ್ಕೃತ ಶ್ಲೋಕಗಳನ್ನು ನೋಡಿದರೆ ಕನಿಕರ ಮೂಡುತ್ತದೆ ಆ ಬಿಜೆಪಿ ಬೆಂಬಲಿಗರ ಬಗ್ಗೆ. ನನ್ನೆದುರೇ ಓಡಾಡಿ ಬೆಳೆದ ಹುಡುಗನೊಬ್ಬ ಅತ್ಯಂತ ಕೊಳಕು ಸುಳ್ಳುಗಳ ಮೂಲಕ ಭಯಂಕರ ಟ್ರಾಲ್ ಮಾಡಿ ಬರೆದಿದ್ದ ನನ್ನ ಕುರಿತು. ಅವರ ಬಾಲಂಗೋಚಿಗಳ ಕಮೆಂಟುಗಳೋ..! ಆಹ! ಭಾರತಾಂಬೆಯ ಸುಸಂಸ್ಕೃತ ಪುತ್ರರತ್ನರವರು ಅನ್ನಲು ಯಾವ ಅಡ್ಡಿಯೂ ಇರದು.

ಇದನ್ನೂ ಓದಿ: ‘ಅದು ಹೃದಯವಲ್ಲ, ಕಲ್ಲು’- ಮೋದಿಗೆ ಪರೋಕ್ಷವಾಗಿ ಕುಟುಕಿದ ರಾಹುಲ್‌ ಗಾಂಧಿ

ಇನ್ನು ಪ್ರಗತಿಪರರ ಸೋಗು ಹಾಕಿ ಮನೆಯಲ್ಲಿ ಜಾತಿವಾದಿ ಮೂಲಭೂತವಾದಿ ಪುಟಾಣಿಗಳನ್ನು ಬೆಳೆಸುತ್ತಿರುವ ಸಾಹಿತಿಗಳದ್ದೋ ಇನ್ನೊಂದು ಪ್ರತ್ಯೇಕ ಕತೆ! ಇವರ ನೆಂಟರಿಷ್ಟರಾದ ಪ್ರಗತಿಪರರದ್ದಂತೂ ದಾಕ್ಷಿಣ್ಯದ ನಾಜೂಕು ನಡೆ. ನಿಷ್ಠುರಕ್ಕೆ ಬಿದ್ದು ಯಾವ ನರಕಕ್ಕೆ ಹೋಗಬೇಕು? ಇವರನ್ನೆಲ್ಲ ಯಾರೂ ಪ್ರಶ್ನೆ ಮಾಡಬಾರದು. ಇವರು ಗುಪ್ತವಾಗಿಯೋ ಬಹಿರಂಗವಾಗಿಯೋ ನಂಬಿದ ಸಿದ್ದಾಂತಗಳ ವಿರುದ್ಧ ಟಿಪ್ಪಣಿ ಮಾಡಬಾರದು. ಇದು ಈ ಶತಮಾನದ ಈ ಹೊತ್ತಿನ ಕರ್ಮ!

ನಿನ್ನೆ ಮೊನ್ನೆ ಮತ್ತೆ ನನ್ನ ಕಾರ್ಟೂನ್ ಗಳ ನೆಪವಾಗಿ ನನ್ನ ಮೇಲೆ ದಾಳಿ ನಡೆದಿತ್ತು. ಇವತ್ತು ನಮ್ಮನೆಚ್ಚಿನ ಸತೀಶ್ ಆಚಾರ್ಯರ ಮೇಲೆ! ನಮಗಿವೆಲ್ಲ ಹೊಸತೇನೂ ಅಲ್ಲ ಬಿಡಿ. ಆದರೆ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಬಗ್ಗೆ ಸಣ್ಣದೊಂದು ವಿಷಾದ ಅಷ್ಟೆ!

ಅಂದಿನ ಬಸವಣ್ಣನಿಂದ ಹಿಡಿದು, ಮೊನ್ನೆ ಮೊನ್ನೆಯ ಗಾಂಧಿ, ದಾಬೋಲ್ಕರ್, ಗೌರಿಯರವರೆಗೆ…. ಇದೇ ಮೇಲ್ವರ್ಗದ ಸಂಚಿಗೆ ಬಲಿಯಾದ ದಕ್ಷಿಣ ಕನ್ನಡದ ಆರಾಧ್ಯ ದೈವಗಳಾದ ಕಲ್ಕುಡ ಕಲ್ಲುರ್ಟಿಯರಿಂದ ಹಿಡಿದು ಕೋಟಿ ಚೆನ್ನಯರವರೆಗೆ ಈ ನೆಲದಲ್ಲಿ ಪುರಾಣ ಇತಿಹಾಸಗಳ ಏಳುಬೀಳುಗಳ ಹಸಿಹಸಿ ನೆನಪು ನೆನವರಿಕೆಗಳಿವೆ. ಆ ನೆನಪುಗಳಲ್ಲಿ ಜೀವ ಪುಟಿಯುವ ಎದೆಯ ಉತ್ತೇಜಕ ದ್ರವ್ಯಗಳಿವೆ. ನನ್ನ ಚಿತ್ರ ನನ್ನದು. Always with you ಸತೀಶಣ್ಣ. ನಮ್ಮೆಲ್ಲರದೂ ಒಂದೇ ಧರ್ಮ- ಅದು ಮನುಷ್ಯ ಧರ್ಮ! Cheers!

ವ್ಯಂಗ್ಯಚಿತ್ರಕಾರ ದಿನೇಶ್‌ ಕುಕ್ಕುಜಡ್ಕ

ಇದನ್ನೂ ಓದಿ: ಕೋವಿಡ್ 2ನೆ ಅಲೆ ತೀವ್ರವಾಗುತ್ತಿದ್ದಾಗ ಕುಂಭಮೇಳದಲ್ಲಿ ಮುಳುಗೆದ್ದವರು 70 ಲಕ್ಷ ಜನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮನುವಾದಿಗಳ ಆಡಳಿತದಲ್ಲಿ ಬಾರತ ಬಹಳ ವೇಗವಾಗಿ ಹಿಟ್ಲರೀಕರಣಗೊಳ್ಳುತ್ತಿದೆ. ಈ ದೇಶದ ಪ್ರಜ್ಞಾವಂತರು ಎದೆಗುಂದದೆ, ಒಕ್ಕೊರಲಿನಿಂದ ಇದನ್ನು ಪ್ರತಿಭಟಿಸಬೇಕು.

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ನೇಮಕದ ಹಿಂದೆ ಬಿಜೆಪಿ ನಾಯಕತ್ವದ ಮಾಸ್ಟರ್ ಮೈಂಡ್: ‘ಸಾಮ್ನಾ’

ಮಹಾರಾಷ್ಟ್ರದ ವಿರೋಧ ಪಕ್ಷವಾದ ಶಿವಸೇನೆ (ಯುಬಿಟಿ), ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕಿ ಸುನೇತ್ರಾ ಪವಾರ್ ಅವರು ಪತಿ ಅಜಿತ್ ಪವಾರ್ ನಿಧನರಾದ ಕೆಲವೇ ದಿನಗಳಲ್ಲಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ...

ಎಪ್‌ಸ್ಟೀನ್‌ ಫೈಲ್ಸ್‌ನಲ್ಲಿ ಹೆಸರು ಉಲ್ಲೇಖ : ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು?

ಜಗತ್ತಿನಾದ್ಯಂತ ಚರ್ಚೆಯ ವಿಷಯವಾಗಿರುವ ಜೆಫ್ರಿ ಎಪ್‌ಸ್ಟೀನ್‌ ಫೈಲ್ಸ್‌ನಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಹೆಸರಿದೆ, ಪುರಿ ಮತ್ತು ಎಪ್‌ಸ್ಟೀನ್ ನಡುವೆ ಇ-ಮೇಲ್ ಸಂಭಾಷಣೆಗಳು ನಡೆದಿವೆ. ಈ ಇ-ಮೇಲ್‌ಗಳು ಕೇವಲ ವ್ಯವಹಾರಿಕ...

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...