Homeಅಂಕಣಗಳುಕುವೆಂಪು ನೆಲದಲ್ಲಿ ಸುಳ್ಳಿನ ಚಕ್ರತೀರ್ಥ

ಕುವೆಂಪು ನೆಲದಲ್ಲಿ ಸುಳ್ಳಿನ ಚಕ್ರತೀರ್ಥ

- Advertisement -
- Advertisement -

ಕನ್ನಡದ ಸಾಂಸ್ಕೃತಿಕ ಲೋಕದೊಳಕ್ಕೆ ನುಗ್ಗಿರುವ ಪುರೋಹಿತಶಾಹಿಗಳ ಸುಳ್ಳುಗಳು ವಿಜೃಂಭಿಸತೊಡಗಿದೆಯಲ್ಲಾ. ಈ ಪೈಕಿ ಕುವೆಂಪು ಸಾಹಿತ್ಯವನ್ನು ’ತಿದ್ದಲು’ ಹೋಗಿ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿ ಸಿಕ್ಕಿಬಿದ್ದರಲ್ಲಾ. ಕುವೆಂಪು ನಡೆದಾಡಿದ ಪ್ರದೇಶಕ್ಕೆ ಬಂದು ಕುವೆಂಪು ಚಾತುವರ್ಣದ ವಿರೋಧಿಯಾಗಿರಲಿಲ್ಲ ಎಂದಿದ್ದಾರಲ್ಲ. ಸದರಿ ಹೇಳಿಕೆಗೆ ಅಂತಹಾ ಪ್ರತಿಭಟನೆ ಕಂಡುಬಂದಿಲ್ಲ. ಏಕೆಂದರೆ ಒಬ್ಬ ವ್ಯಕ್ತಿ ಸುಳ್ಳನ್ನೇ ಹೇಳುತ್ತ ಜೀವಿಸುವುದಾದರೆ ನಮ್ಮ ಜನ ತಾತ್ಸಾರ ಮಾಡುತ್ತಾರೆ. ಹಾಗೆಯೇ ನಾಡಿನ ಪ್ರಜ್ಞಾವಂತರ ತಾತ್ಸಾರಕ್ಕೆ ಗುರಿಯಾಗಿರುವ ಚಕ್ರತೀರ್ಥ ಕುವೆಂಪುರವರನ್ನು, ಪಟ್ಟಾಗಿ ಕುಳಿತು ಓದಿದ್ದಾದರೆ ಅಲ್ಲಿ ಚಾತುರ್ವಣಕ್ಕೆ ಚಾಟೀ ಬೀಸಿರುವ ಮಾತುಗಳು ಯಥೇಚ್ಛವಾಗಿ ಸಿಗುತ್ತವೆ. ಭಾರತದ ಸಮಾಜವನ್ನು ಛಿದ್ರವಿಚ್ಛಿದ್ರಗೈದ ಮತ್ತು ಇಂದಿನ ಭರತಖಂಡದ ಸಮಸ್ಯೆಗಳಿಗೆ ಮೂಲ ಕಾರಣವಾದ ಮನುಧರ್ಮ ಶಾಸ್ತ್ರವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಸುಟ್ಟಿದ್ದರಲ್ಲಿ ದೊಡ್ಡ ಸಂದೇಶವಿದೆ. ಅದರ ಹೇಳಹೆಸರುಳಿಯದಂತೆ ಸುಟ್ಟು, ಬೂದಿಯನ್ನ ಅರಬ್ಬೀ ಸಮುದ್ರಕ್ಕೆರಚಿದಾಗ ಮಾತ್ರ ದೇಶ ಹಾಗೂ ಅಮಾಯಕ ಜನ ಅನಿಷ್ಠದ ಧರ್ಮಶೃಂಖಲೆಗಳಿಂದ ಪಾರಾಗುತ್ತಾರೆ. “ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ” ಎಂದು ಅಲ್ಲಮಪ್ರಭುಗಳು ಹೇಳಿದ್ದಾರಲ್ಲ. ಹಾಗೆಯೇ, “ಶಾಸ್ತ್ರಕ್ಕೆ ನಿಗಳನಿಕ್ಕುವೆ, ತರ್ಕದ ಬೆನ್ನ ಭಾರನೆತ್ತುವೆ, ಆಗಮದ ಮೂಗ ಕುಯ್ಯುವೆ” ಎಂಬ ಬಸವಣ್ಣನ ಮಾತನ್ನ ದಾಖಲಿಸಿರುವ ಕುವೆಂಪು ಅದಾವ ಮಾನದಂಡದಿಂದ ಚಾತುರ್ವರ್ಣ ಒಪ್ಪಿದ್ದರೆಂಬುದನ್ನ ಚಕ್ರತೀರ್ಥರೇ ತೋರಿಸಬೇಕಾಗಿದೆಯಲ್ಲಾ ಥೂತ್ತೇರಿ.

******

ಇತ್ತ ಸಾಹಿತ್ಯ ಪರಿಷತ್ತಿಗೆ ವಕ್ಕರಿಸಿರುವ ಜೋಶಿ ಎಂಬಾತನ ಸುಳ್ಳಿಗೆ ಇಡೀ ನಾಡೇ ಬೆಚ್ಚಿ ಬಿದ್ದಿದೆಯಲ್ಲಾ. ಶಿಶುನಾಳ ಶರೀಫರು ತಮ್ಮ ಆಧ್ಯಾತ್ಮದ ಗುರುವಾದ ಗೋವಿಂದ ಭಟ್ಟರನ್ನ ವಜ್ರದ ಹರಳೆಂದು ಕರೆದಿದ್ದಾರೆ. ಶಿಶುನಾಳ ಶರೀಫ ಈ ನಾಡುಕಂಡ ಮಹಾನ್ ಕವಿ. ಈ ಕವಿಯನ್ನ ಶೋಧಿಸಿ ನಾಡ ಗಾಯಕರೆಲ್ಲಾ ಹಾಡಿದ್ದಾರೆ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದಂತಿರುವ ಈ ಚೇತನಗಳು ಕನ್ನಡದ ನೆಲದಲ್ಲಿ ಅಜರಾಮರವಾಗಿವೆ. ಶರೀಫರ ಕುಲಬಾಂಧವರಾರೂ ಅವರ ಸಂಬಂಧಿಗಳೆಂದು ಈವರೆಗೆ ಹೇಳಿಕೊಂಡಿಲ್ಲ. ಆದರೆ ಸಂಸಾರವೇ ಇಲ್ಲದೆ ಕಾಲವಾದ ಗೋವಿಂದ ಭಟ್ಟರ ವಂಶದ ಕುಡಿಯೊಂದು ಪ್ರತಿ ಮೂರು ಮಾತಿನ ನಡುವೆ ನಾನು ಗೋವಿಂದ ಭಟ್ಟರ ಮರಿಮೊಮ್ಮಮಗನೆಂದು ಹೇಳುತ್ತದೆಲ್ಲಾ. ಏನಾದರೂ ಪ್ರತಿಪಾದಿಸಿಕೊಂಡು ಹಾಳಾಗಿ ಹೋಗಲಿ ಎಂದರೆ, ಕನ್ನಡ ಸಾಂಸ್ಕೃತಿಕ ಲೋಕದ ಜಾತ್ಯತೀತ ವೇದಿಕೆಯಾದ ಸಾಹಿತ್ಯ ಪರಿಷತ್‌ಗೆ ಜನಿವಾರ ತೊಡಿಸುತ್ತಾ, ಸರಿಪಡಿಸಲಾಗದ ಅವಾಂತರ ಸೃಷ್ಟಿಸತೊಡಗಿದ್ದಾರೆ. ಒಂದು ವೇಳೆ ಈತ ಅಕಸ್ಮಾತ್ ಗೋವಿಂದ ಭಟ್ಟರ ಮರಿಮೊಮ್ಮಗನೇ ಆಗಿದ್ದರೆ ಕನ್ನಡದ ಪ್ರಗತಿಪರ ಚಿಂತಕರನ್ನು ಮನೋರೋಗದಿಂದ ಬಳಲುತ್ತಿರುವ ಜನ ಎಂದು ಸಂಬೋಧಿಸುತ್ತಿರಲಿಲ್ಲವಲ್ಲವೇ? ಥೂತ್ತೇರಿ.

*******

ಗುಜರಾತಿನ ಅಮಿತ್ ಶಾ ಎಂಬ ಅಮುಲ್ ಗಿರಾಕಿ ಮಂಡ್ಯಕ್ಕೆ ಬಂದುದ್ದೂ ಅಲ್ಲದೆ, ಕರ್ನಾಟಕದ ನಂದಿನಿಯನ್ನು ಅಮುಲ್ ಜೊತೆಗೆ ಸೇರಿಸಬೇಕು ಎಂದು ಬಿಟ್ಟಿದ್ದಾರಂತಲ್ಲಾ. ಶಾ ಅವರ ಇಂತಹ ಹೇಳಿಕೆಗೆ ಮಂಡ್ಯದ ಆ ಸಭೆಯಲ್ಲಿ ಯಾವ ಪ್ರತಿರೋಧವೂ ಬರಲಿಲ್ಲ. ಕಾರಣ ಅಲ್ಲಿ ಚಪ್ಪಾಳೆಗಾಗಿ ಕರೆದುಕೊಂಡು ಬಂದವರಿಗೆ ಶಾ ಹೇಳುವುದೇನು ಎಂಬುದೇ ತಿಳಿಯಲಿಲ್ಲ. ತಿಳಿದರೂ ಅವರ ಮಾತನ್ನು ಕೇಳುವವರು ಯಾರಿದ್ದರು ಅಲ್ಲಿ? ಆದರೆ ತಿಳಿದುಕೊಳ್ಳಬೇಕಾದವರು ತಮ್ಮ ರಾಸುಗಳ ಜೊತೆಗಿದ್ದರು. ರಾಸುಗಳ ಮೈ ತೊಳೆಯುವುದು, ಹಾಲು ಕರೆಯುವುದು, ಹುಲ್ಲು ಹಾಕುವುದು ಇತ್ಯಾದಿ ನಿರಂತರ ಕೆಲಸಗಳ ನಡುವೆ, ಇಂತಹ ಚಪ್ಪಾಳೆ ಸಂಸ್ಕೃತಿಗೆ ಹೊರತಾದ ಜನ ಅವರು. ಅಮುಲ್ ಹಾಲಿನೊಳಕ್ಕೆ ನಂದಿನಿ ಮಿಕ್ಸ್ ಮಾಡಿ ಕಡೆಗೆ ಅಮುಲ್ ಮಾತ್ರ ಬಳಸಿಕೊಂಡು ನಂದಿನಿಗೆ ತಿಲಾಂಜಲಿ ಇಡುವ ಹಿಕಮತ್ತಿನ ಭಾಷಣ ಅವರಿಗೆ ತಲುಪಲೇಯಿಲ್ಲ. ತಲುಪಿದ್ದೇ ಆದರೆ ಶಾ ಕಡೆಯವರು ಮಂಡ್ಯದ ಕಡೆ ಮುಖಹಾಕುವುದು ಕಷ್ಟವೆಂದರಿತು, ಶಾ ಹಾಗೆ ಹೇಳಿಲ್ಲ, ಅಮುಲ್ ಹಾಲಿನ ಹಂಡೆಗಳು ಮಂಡ್ಯಕ್ಕೆ ಬರುತ್ತವೆ, ಮಂಡ್ಯದ ಹಳೆ ಹಾಲಿನ ಕ್ಯಾನ್‌ಗಳು ಗುಜರಾತಿನ ಗುಜರಿ ಸೇರಿ ಹೊಸ ಕ್ಯಾನ್ ಬರುತ್ತವೆ ಎಂದು ಮುಖ್ಯಮಂತ್ರಿಯಿಂದ ಹಿಡಿದು ಕೂಗುಮಾರಿ ಸಿ.ಟಿ ರವಿವರೆಗೆ ಕರ್ನಾಟಕದ ಬಿಜೆಪಿಗಳು ಕೂಗುತ್ತಿವೆಯಲ್ಲಾ. ಮಂಡ್ಯದ ನೆಲ ಹುಟ್ಟಿಸಿದ ಭಯಕ್ಕೆ ಇನ್ನೇನು ಬೇಕು, ಥೂತ್ತೇರಿ.

******

ಮೈಸೂರು ರಂಗಾಯಣದ ಪ್ರದೇಶಕ್ಕೆ ಬಂದು ಸೇರಿಕೊಂಡಿರುವ ಅಡ್ನಾಡಿಗಳ ಅವಾಂತರಕ್ಕೆ ಹೇಸಿದ ಪ್ರಜ್ಞಾವಂತರಾರೂ ಆ ಕಡೆ ಸುಳಿಯದಿರುವುದು ಹಳೆಯ ಸುದ್ದಿ. ಈಗಾಗಲೇ ಟಿಪ್ಪು ಜೀವನವನ್ನ ವಿಕೃತಗೊಳಿಸಿ ನಾಟಕ ರಚಿಸಿ ಬೈಸಿಕೊಂಡವರ ಪೈಕಿ ಒಬ್ಬರು, ಚಂದ್ರಶೇಖರ ಕಂಬಾರರ ಸಾಂಭಶಿವ ಪ್ರಹಸನಕ್ಕೂ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರರ ಕಾರ್ಯವೈಖರಿಗೂ ಸಂಬಂಧವೇ ಇಲ್ಲದಿದ್ದರೂ, ಅನ್ನಭಾಗ್ಯವನ್ನ ಆಡಿಕೊಂಡಿದ್ದಾರಂತಲ್ಲಾ. ವಾಸ್ತವವಾಗಿ ಈ ನಾಟಕ ನಿರ್ದೇಶಕನಿಗೆ ಬಂದ ಧೈರ್ಯದ ಪ್ರೇರಣೆಯಾವುದೆಂದರೆ ಟಿಪ್ಪುವಿನ ಚರಿತ್ರೆಯನ್ನು ವಿಕೃತವಾಗಿ ತಿರುಚಿ ಆಡಿಸಿದ ನಾಟಕವೇ. ಇಂತಹವರ ವಿಕೃತಿಗೆ ಅಂತ್ಯ ಅಡುವುದು ಮೈಸೂರಿನ ಪ್ರಜ್ಞಾವಂತರ ಕೆಲಸ. ಈ ದೇಶವೇ ಕೊಂಡಾಡಿದ ಮೈಸೂರಿನ ಮಹಾರಾಜರ ಕರ್ಮ ಭೂಮಿಯಲ್ಲಿ, ಅದರಲ್ಲೂ ರಂಗಾಯಣದ ಆವರಣದಲ್ಲಿ, ಇತಿಹಾಸವನ್ನೇ ತಿರುಚುವ ವಿಕೃತಿಗಳು, ಕಲೆ ಸಾಹಿತ್ಯ ಸಂಗೀತವನ್ನೇ ಹಾಳುಮಾಡುವ ಕ್ರಿಮಿ ಕೀಟಗಳು ಇರಬಾರದಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ನಿಜಕ್ಕೂ ಇಂತದ್ದೊಂದು ಪಾರ್ಟಿ ಬೇಕಿತ್ತು ಸಾರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...