Homeಅಂಕಣಗಳುಡೇಟಾಖೋಲಿ: ಮಾಧ್ಯಮ ನಲ್ಲರು - ಯಾರ ಕೆಲಸ ಏನು?

ಡೇಟಾಖೋಲಿ: ಮಾಧ್ಯಮ ನಲ್ಲರು – ಯಾರ ಕೆಲಸ ಏನು?

- Advertisement -
- Advertisement -

ಈ ವಾರ ಇಡೀ ಜಗತ್ತು ಶಾಂತಿ ಹಾಗೂ ಸಮೃದ್ಧಿಯಿಂದ ತುಂಬಿ ತುಳುಕುತ್ತಿದ್ದಾಗ ಒಂದು ಸುದ್ದಿ ಬಂತು. ಈಗಿನ ಕಾಲದ ಎಲ್ಲ ಒಳ್ಳೆ-ಕೆಟ್ಟ ಸುದ್ದಿಗಳಂತೆ ಅದು ಕೆಲವೇ ನಿಮಿಷದಾಗ ವೈರಲ್ ಆಗಿ ಹೋತು.

ಅದು ಯಾವುದಪಾ ಅಂದರ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ನಡುವೆ ಜಗಳ ಆಗಿ, ಅದರಾಗ ಕಿರಿಯ ಅಧಿಕಾರಿ ಒಬ್ಬರು ರಾಜೀನಾಮೆ ಕೊಟ್ಟು, ಕಡಿಕೆ ರಾಜ್ಯ ಸರಕಾರ ಇಬ್ಬರನ್ನೂ ವರ್ಗಾವಣೆ ಮಾಡಿದ ಸುದ್ದಿ.

ಅದರಾಗ ಹಿರಿಯ ಅಧಿಕಾರಿ, ’ಇದರ ಹಿಂದೆ ದೊಡ್ಡ ಪಿತೂರಿ ಐತಿ. ರಿಯಲ್ ಎಸ್ಟೇಟ್ ಮಾಫಿಯಾ ಎಲ್ಲ ಇದಕ್ಕ ಕಾರಣ. ನಮ್ಮ ನಡುವಿನ ಭಿನ್ನಾಭಿಪ್ರಾಯ ಎಲ್ಲ ಸಣ್ಣದು ಆಷ್ಟ. ಅದನ್ನ ನೆವ ಮಾಡಿಕೊಂಡು ನಮ್ಮನ್ನ ಇಲ್ಲಿಂದ ಹೊರಗ ಹಾಕಿದರು’ ಅನ್ನೋ ಅರ್ಥ ಬಾರೋ ಹಂಗ ಪ್ರತಿಕ್ರಿಯೆ ಕೊಟ್ಟರು.

ಅಲ್ಲಿಗೆ ಆ ಕತಿ ಮುಗೀತು. ಆದರ ಅದರಗಿಂತ ಕುತೂಹಲಕಾರಿಯಾಗಿದ್ದು ಯಾವುದು ಅಂದರ ಈ ವಿಷಯಕ್ಕ ಸಂಬಂಧ ಪಡದೇ ಇರುವ ಒಬ್ಬ ಐಪಿಎಸ್ಸು ಅಧಿಕಾರಿ ತಮ್ಮ ಫೇಸ್ಬುಕ್ ಗೋಡೆ ಮೇಲೆ ಒಂದು ಬರಹ ಬರದು ಹಾಕಿದರು. ಅದರಾಗ ಅವರು ಏನು ಹೇಳಿದರು ಅಂದರ ಕೆಲವು ಅಧಿಕಾರಿಗಳು ತಾವು ಸಿಂಗಮ್, ಸಿಂಹಿಣಿ ಅಂತ ಎಲ್ಲಾ ಪ್ರಚಾರ ಮಾಡಿಕೊಳತಾರ. ಇದು ಸರಿಯಲ್ಲ. ತಮ್ಮ ಕೆಲಸ ತಾವು ಸುಮ್ಮನೇ ಮಾಡಬೇಕು, ರಾಜಕೀಯದಿಂದ ಅವರು ದೂರ ಇರಬೇಕು, ಒಳ್ಳೆ ಕೆಲಸ ಮಾಡಿದರ ತಮ್ಮ ತಂಡಕ್ಕೆ ಅದರ ಶ್ರೇಯಸ್ಸು ಕೊಡಬೇಕು, ಕೆಟ್ಟ ಕೆಲಸ ಮಾಡಿದರ ಅದರ ತಪ್ಪು ಹೊರಲಿಕ್ಕೆ ತಯಾರು ಇರಬೇಕು, ಅನ್ನುವ ಮಾತು ಹೇಳಿದರು. ಮಜಾ ಅಂದರ ಈ ಅಧಿಕಾರಿ ಹುಬ್ಬಳ್ಳಿ- ಬೆಳಗಾವಿಯೊಳಗ ಕೆಲಸ ಮಾಡಿದಾಗ ಇದೆ ರೀತಿಯ ಮಾಧ್ಯಮ ಪ್ರಚಾರದ ಅನುಕೂಲ ಪಡೆದುಕೊಂಡಿದ್ರು. ಆ ಮಾತು ಬ್ಯಾರೆ.

ಇಲ್ಲಿ ಮುಖ್ಯವಾದ ವಿಷಯ ಏನು ಅಂದರ ನಮ್ಮ ಭವ್ಯ ಭಾರತದ ಮಾನ್ಯ ಮತದಾರ ಬಂಧುಗಳಿಗೆ ನಮ್ಮ ಘನ ಸರಕಾರದ ಒಳಗ ಯಾರಿಗೆ ಯಾವ ಕೆಲಸ, ಯಾವ ಜವಾಬುದಾರಿ ಅನ್ನೋದು ಸರಿಯಾಗಿ ಗೊತ್ತಿಲ್ಲ. ರಾಜಕಾರಣಿಯ ಕೆಲಸ ಏನು, ಅಧಿಕಾರಿಗಳ ಕೆಲಸ ಏನು ಅನ್ನೋದು ಗೊತ್ತಿಲ್ಲ.

PC : Wikipedia, (ಪ್ರತಾಪ್ ಸಿಂಗ್ ಖೈರೋಂ)

ಇದರ ಬಗ್ಗೆ ಒಂದು ರಸವತ್ತಾದ ಕತೆ ಇದೆ. ಪ್ರತಾಪ್ ಸಿಂಗ್ ಖೈರೋಂ ಅವರು 50ನೇ ದಶಕದೊಳಗ ಪಂಜಾಬ್‌ನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆಗ ಒಬ್ಬ ದಕ್ಷಿಣ ಭಾರತ ಮೂಲದ ಐಎಎಸ್ ಅಧಿಕಾರಿ ಪಂಜಾಬಿನ ಮುಖ್ಯ ಕಾರ್ಯದರ್ಶಿ ಆಗಿದ್ದರು. ಮುಖ್ಯಮಂತ್ರಿ ಅವರು ಮುಖ್ಯ ಕಾರ್ಯದರ್ಶಿಯನ್ನು ಕೇಳಿದರಂತ – ಅಲ್ರೀ, ನಿಮ್ಮ ಕೆಲಸ ಏನು, ನನ್ನ ಕೆಲಸ ಏನು? ಅಂತ. ಆಗ ಆ ಐಎಎಸ್ ಅಧಿಕಾರಿ ಸರ್, ನಿಮ್ಮ ಕೆಲಸ ಸರಕಾರದ ಕಾನೂನು, ನೀತಿನಿಯಮ ರೂಪಿಸುವುದು. ನನ್ನ ಕೆಲಸ ದಿನನಿತ್ಯದ ಆಡಳಿತ ನಿರ್ವಹಣೆ ಮಾಡೋದು, ಅಂತ. ಹೌದಾ, ಹಂಗಾರ ನಾಳೆಯಿಂದ ನನ್ನ ಕೆಲಸ ನೀವು ಮಾಡ್ರಿ, ನಿಮ್ಮ ಕೆಲಸ ನಾನು ಮಾಡತೆನಿ ಅಂತ ಮುಖ್ಯಮಂತ್ರಿ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಹೇಳಿದರಂತ.

ಖೈರೋಂ ಅವರು ಪ್ರಾಮಾಣಿಕರು, ಸರಳ ಮನುಷ್ಯರು. ಹಿಂಗಾಗಿ ಅವರು ಅಧಿಕಾರಿನ ಕರೆದು ಮಾತಾಡಿದರು. ಬ್ಯಾರೆ ರಾಜಕಾರಣಿಗಳು ಸಹಿತ ಇದೆ ಕೆಲಸ ಮಾಡ್ತಾ ಇದಾರೆ, ಅದರ ಅದನ್ನ ಮುಕ್ತವಾಗಿ ಒಪ್ಪಿಕೊಳ್ಳೋದಿಲ್ಲ.

ಈಗ ಮತ್ತ ನಮ್ಮ ರಾಜ್ಯದ ಅಧಿಕಾರಿಗಳಿಗೆ ಬರೋಣ. ಮೈಸೂರಿನ ಇಬ್ಬರು ಅಧಿಕಾರಿಗಳು ಜಗಳ ಅಡಿದರ, ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಚಾಮರಾಜನಗರದ ಜಿಲ್ಲಾಧಿಕಾರಿಗೆ ಭಿನ್ನಾಭಿಪ್ರಾಯ ಬಂದರ, ಅವರ ಮ್ಯಾಲೆ ಒಬ್ಬ ಪ್ರಾದೇಶಿಕ ಆಯುಕ್ತ ಅಂತ ಒಬ್ಬ ಅಧಿಕಾರಿ ಇದ್ದ ಇರತಾನ. ಆ ಪುಣ್ಯಾತ್ಮ ಈ ಅಧಿಕಾರಿಗಳ ಮೇಲೆ ನಿಗರಾಣಿ ವಹಿಸಿ ಅವರು ಸರಿಯಾಗಿ ಕೆಲಸ ಮಾಡುವ ಹಂಗ ಯಾಕ್ ಮಾಡಲಿಲ್ಲ ಅಂತ ಯಾವ ಮಾಧ್ಯಮದವರು ಕೇಳಲಿಲ್ಲ, ರಾಜಕಾರಣಿನು ಕೇಳಲಿಲ್ಲ.

ಯಾಕೆ ಅಂದ್ರ ಮಾಧ್ಯಮದವರಿಗೆ ಸಹಿತ ಯಾರದ್ದು ಯಾವ ಕೆಲಸ ಅಂತ ಹೇಳಿ ಸರಿಯಾಗಿ ಗೊತ್ತಿಲ್ಲ. ಅಥವಾ ಗೊತ್ತಿದರೂ, ಟಿಆರ್‌ಪಿ ಆಸೆಗೆ, ಮಾರುಕಟ್ಟೆ, ಜಾಹೀರಾತು ಆಸೆಗೆ, ಅವರು ಬಹು ಚರ್ಚಿತ ವಿಷಯಗಳನ್ನ ತೋರಿಸ್ತಾರ ಹೊರತು, ಕೇಳಲೇಬೇಕಾದ ಪ್ರಶ್ನೆ ಕೇಳಿ, ಸರಿಯಾದ ಉತ್ತರ ಹುಡುಕುವ ಪ್ರಯತ್ನ ಮಾಡೋದಿಲ್ಲ.

ಈ ರೀತಿಯ ಸುದ್ದಿ ಅಥವಾ ಚರ್ಚೆ, ಜನರಿಗೆ ಬೇಕೋ ಬೇಡವೋ? ಪ್ರತಿ ದಿನ ಮುಂಜಾನೆದೊಳಗಿನ ಸುದ್ದಿಯ ಹೆಡ್‌ಲೈನ್ ಓದಿ ಪೇಪರ್ ಮುಚ್ಚಿ ಇಡುವ ನಮ್ಮ ಜನರಿಗೆ ಸುದ್ದಿಯ ಅಳಕ್ಕೆ ಹೋಗೋದು ಬೇಕೋ ಬ್ಯಾಡವೋ?

ಇದರಾಗ ನಾಯಕರ ತಪ್ಪೂ ಐತಿ. ಈಗಿನ ನಾಯಕರು ಮುಂದಿನ ಚುನಾವಣೆ ಬಗ್ಗೆ ಮಾತ್ರ ವಿಚಾರ ಮಾಡತಾರ ಹೊರತು ಅವರಿಗೆ ಬೇರೆ ಮುಂದಾಲೋಚನೆ, ದೂರದೃಷ್ಟಿತ್ವ ಅನ್ನೋದು ಇರೋದಿಲ್ಲ.

ಬಹಳ ಹಿಂದೆ ರಾಮಚಂದ್ರಪ್ಪ ಅಂತ ಬೆಂಗಳೂರಿನ ಮೇಯರ್ ಇದ್ದರು. ಅವರು ಜಾಸ್ತಿ ಓದಿರಲಿಲ್ಲ, ಆದ್ದರಿಂದ ಅವರನ್ನ ಬೆಂಗಳೂರಿನ ಕೆಲವು ಪತ್ರಕರ್ತರು ಮೇಯರ್ ಮುತ್ತಣ್ಣ ಅಂತ ಕರಿತಿದ್ದರು. ಅವರು ಬಹಳ ಸರಳ ಭಾಷೆಯೊಳಗ ಭಾಷಣ ಮಾಡ್ತಿದ್ದರು. ಪಾಲಿಕೆಯ ಆಯುಕ್ತರು ಬದಲಾವಣೆ ಆದಾಗ ಅವರು ಒಂದು ಸ್ವಾಗತ ಭಾಷಣ ಮಾಡಿದ್ದರು. ಅದರಲ್ಲಿ ಒಂದು ಮರೆಯಲಾರದಂತಹ ಮಾತು ಹೇಳಿದರು.

’ನೋಡಿ ಸ್ವಾಮಿ, ನಮ್ಮ ಅಧಿಕಾರಿಗಳು ಕುದುರೆಗಳು ಇದ್ದಂತೆ. ಅವರು ಯಾವ ದಿಕ್ಕಿನಲ್ಲಿ ಓಡುತ್ತಾರೆ ಅನ್ನುವುದು ಅವರನ್ನು ಓಡಿಸುವ ಸವಾರರ ಮೇಲೆ ಇರುತ್ತದೆ. ಆಯುಕ್ತರು ಸವಾರರು ಇದ್ದಂತೆ. ನೀವು ಒಳ್ಳೆಯವರಾದರೆ, ಅವರು ಒಳ್ಳೆಯವರು’, ಅಂತ ಹೇಳಿ ಮಾತು ಮುಗಿಸಿದ್ದರು.

ಈ ರೀತಿಯ ಸ್ಪಷ್ಟತೆ ಈಗಿನ ನಾಯಕರಲ್ಲಿ ಬಂದರೆ, ಅದು ಜನರಿಗೆ ತಿಳಿದರೆ, ಆಡಳಿತ ಅನ್ನುವುದು ಸರಿಯಾದ ದಾರಿಯಲ್ಲಿ ನಡೆದೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...