Homeಅಂಕಣಗಳುಡೇಟಾಖೋಲಿ: ಮಾಧ್ಯಮ ನಲ್ಲರು - ಯಾರ ಕೆಲಸ ಏನು?

ಡೇಟಾಖೋಲಿ: ಮಾಧ್ಯಮ ನಲ್ಲರು – ಯಾರ ಕೆಲಸ ಏನು?

- Advertisement -
- Advertisement -

ಈ ವಾರ ಇಡೀ ಜಗತ್ತು ಶಾಂತಿ ಹಾಗೂ ಸಮೃದ್ಧಿಯಿಂದ ತುಂಬಿ ತುಳುಕುತ್ತಿದ್ದಾಗ ಒಂದು ಸುದ್ದಿ ಬಂತು. ಈಗಿನ ಕಾಲದ ಎಲ್ಲ ಒಳ್ಳೆ-ಕೆಟ್ಟ ಸುದ್ದಿಗಳಂತೆ ಅದು ಕೆಲವೇ ನಿಮಿಷದಾಗ ವೈರಲ್ ಆಗಿ ಹೋತು.

ಅದು ಯಾವುದಪಾ ಅಂದರ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ನಡುವೆ ಜಗಳ ಆಗಿ, ಅದರಾಗ ಕಿರಿಯ ಅಧಿಕಾರಿ ಒಬ್ಬರು ರಾಜೀನಾಮೆ ಕೊಟ್ಟು, ಕಡಿಕೆ ರಾಜ್ಯ ಸರಕಾರ ಇಬ್ಬರನ್ನೂ ವರ್ಗಾವಣೆ ಮಾಡಿದ ಸುದ್ದಿ.

ಅದರಾಗ ಹಿರಿಯ ಅಧಿಕಾರಿ, ’ಇದರ ಹಿಂದೆ ದೊಡ್ಡ ಪಿತೂರಿ ಐತಿ. ರಿಯಲ್ ಎಸ್ಟೇಟ್ ಮಾಫಿಯಾ ಎಲ್ಲ ಇದಕ್ಕ ಕಾರಣ. ನಮ್ಮ ನಡುವಿನ ಭಿನ್ನಾಭಿಪ್ರಾಯ ಎಲ್ಲ ಸಣ್ಣದು ಆಷ್ಟ. ಅದನ್ನ ನೆವ ಮಾಡಿಕೊಂಡು ನಮ್ಮನ್ನ ಇಲ್ಲಿಂದ ಹೊರಗ ಹಾಕಿದರು’ ಅನ್ನೋ ಅರ್ಥ ಬಾರೋ ಹಂಗ ಪ್ರತಿಕ್ರಿಯೆ ಕೊಟ್ಟರು.

ಅಲ್ಲಿಗೆ ಆ ಕತಿ ಮುಗೀತು. ಆದರ ಅದರಗಿಂತ ಕುತೂಹಲಕಾರಿಯಾಗಿದ್ದು ಯಾವುದು ಅಂದರ ಈ ವಿಷಯಕ್ಕ ಸಂಬಂಧ ಪಡದೇ ಇರುವ ಒಬ್ಬ ಐಪಿಎಸ್ಸು ಅಧಿಕಾರಿ ತಮ್ಮ ಫೇಸ್ಬುಕ್ ಗೋಡೆ ಮೇಲೆ ಒಂದು ಬರಹ ಬರದು ಹಾಕಿದರು. ಅದರಾಗ ಅವರು ಏನು ಹೇಳಿದರು ಅಂದರ ಕೆಲವು ಅಧಿಕಾರಿಗಳು ತಾವು ಸಿಂಗಮ್, ಸಿಂಹಿಣಿ ಅಂತ ಎಲ್ಲಾ ಪ್ರಚಾರ ಮಾಡಿಕೊಳತಾರ. ಇದು ಸರಿಯಲ್ಲ. ತಮ್ಮ ಕೆಲಸ ತಾವು ಸುಮ್ಮನೇ ಮಾಡಬೇಕು, ರಾಜಕೀಯದಿಂದ ಅವರು ದೂರ ಇರಬೇಕು, ಒಳ್ಳೆ ಕೆಲಸ ಮಾಡಿದರ ತಮ್ಮ ತಂಡಕ್ಕೆ ಅದರ ಶ್ರೇಯಸ್ಸು ಕೊಡಬೇಕು, ಕೆಟ್ಟ ಕೆಲಸ ಮಾಡಿದರ ಅದರ ತಪ್ಪು ಹೊರಲಿಕ್ಕೆ ತಯಾರು ಇರಬೇಕು, ಅನ್ನುವ ಮಾತು ಹೇಳಿದರು. ಮಜಾ ಅಂದರ ಈ ಅಧಿಕಾರಿ ಹುಬ್ಬಳ್ಳಿ- ಬೆಳಗಾವಿಯೊಳಗ ಕೆಲಸ ಮಾಡಿದಾಗ ಇದೆ ರೀತಿಯ ಮಾಧ್ಯಮ ಪ್ರಚಾರದ ಅನುಕೂಲ ಪಡೆದುಕೊಂಡಿದ್ರು. ಆ ಮಾತು ಬ್ಯಾರೆ.

ಇಲ್ಲಿ ಮುಖ್ಯವಾದ ವಿಷಯ ಏನು ಅಂದರ ನಮ್ಮ ಭವ್ಯ ಭಾರತದ ಮಾನ್ಯ ಮತದಾರ ಬಂಧುಗಳಿಗೆ ನಮ್ಮ ಘನ ಸರಕಾರದ ಒಳಗ ಯಾರಿಗೆ ಯಾವ ಕೆಲಸ, ಯಾವ ಜವಾಬುದಾರಿ ಅನ್ನೋದು ಸರಿಯಾಗಿ ಗೊತ್ತಿಲ್ಲ. ರಾಜಕಾರಣಿಯ ಕೆಲಸ ಏನು, ಅಧಿಕಾರಿಗಳ ಕೆಲಸ ಏನು ಅನ್ನೋದು ಗೊತ್ತಿಲ್ಲ.

PC : Wikipedia, (ಪ್ರತಾಪ್ ಸಿಂಗ್ ಖೈರೋಂ)

ಇದರ ಬಗ್ಗೆ ಒಂದು ರಸವತ್ತಾದ ಕತೆ ಇದೆ. ಪ್ರತಾಪ್ ಸಿಂಗ್ ಖೈರೋಂ ಅವರು 50ನೇ ದಶಕದೊಳಗ ಪಂಜಾಬ್‌ನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆಗ ಒಬ್ಬ ದಕ್ಷಿಣ ಭಾರತ ಮೂಲದ ಐಎಎಸ್ ಅಧಿಕಾರಿ ಪಂಜಾಬಿನ ಮುಖ್ಯ ಕಾರ್ಯದರ್ಶಿ ಆಗಿದ್ದರು. ಮುಖ್ಯಮಂತ್ರಿ ಅವರು ಮುಖ್ಯ ಕಾರ್ಯದರ್ಶಿಯನ್ನು ಕೇಳಿದರಂತ – ಅಲ್ರೀ, ನಿಮ್ಮ ಕೆಲಸ ಏನು, ನನ್ನ ಕೆಲಸ ಏನು? ಅಂತ. ಆಗ ಆ ಐಎಎಸ್ ಅಧಿಕಾರಿ ಸರ್, ನಿಮ್ಮ ಕೆಲಸ ಸರಕಾರದ ಕಾನೂನು, ನೀತಿನಿಯಮ ರೂಪಿಸುವುದು. ನನ್ನ ಕೆಲಸ ದಿನನಿತ್ಯದ ಆಡಳಿತ ನಿರ್ವಹಣೆ ಮಾಡೋದು, ಅಂತ. ಹೌದಾ, ಹಂಗಾರ ನಾಳೆಯಿಂದ ನನ್ನ ಕೆಲಸ ನೀವು ಮಾಡ್ರಿ, ನಿಮ್ಮ ಕೆಲಸ ನಾನು ಮಾಡತೆನಿ ಅಂತ ಮುಖ್ಯಮಂತ್ರಿ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಹೇಳಿದರಂತ.

ಖೈರೋಂ ಅವರು ಪ್ರಾಮಾಣಿಕರು, ಸರಳ ಮನುಷ್ಯರು. ಹಿಂಗಾಗಿ ಅವರು ಅಧಿಕಾರಿನ ಕರೆದು ಮಾತಾಡಿದರು. ಬ್ಯಾರೆ ರಾಜಕಾರಣಿಗಳು ಸಹಿತ ಇದೆ ಕೆಲಸ ಮಾಡ್ತಾ ಇದಾರೆ, ಅದರ ಅದನ್ನ ಮುಕ್ತವಾಗಿ ಒಪ್ಪಿಕೊಳ್ಳೋದಿಲ್ಲ.

ಈಗ ಮತ್ತ ನಮ್ಮ ರಾಜ್ಯದ ಅಧಿಕಾರಿಗಳಿಗೆ ಬರೋಣ. ಮೈಸೂರಿನ ಇಬ್ಬರು ಅಧಿಕಾರಿಗಳು ಜಗಳ ಅಡಿದರ, ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಚಾಮರಾಜನಗರದ ಜಿಲ್ಲಾಧಿಕಾರಿಗೆ ಭಿನ್ನಾಭಿಪ್ರಾಯ ಬಂದರ, ಅವರ ಮ್ಯಾಲೆ ಒಬ್ಬ ಪ್ರಾದೇಶಿಕ ಆಯುಕ್ತ ಅಂತ ಒಬ್ಬ ಅಧಿಕಾರಿ ಇದ್ದ ಇರತಾನ. ಆ ಪುಣ್ಯಾತ್ಮ ಈ ಅಧಿಕಾರಿಗಳ ಮೇಲೆ ನಿಗರಾಣಿ ವಹಿಸಿ ಅವರು ಸರಿಯಾಗಿ ಕೆಲಸ ಮಾಡುವ ಹಂಗ ಯಾಕ್ ಮಾಡಲಿಲ್ಲ ಅಂತ ಯಾವ ಮಾಧ್ಯಮದವರು ಕೇಳಲಿಲ್ಲ, ರಾಜಕಾರಣಿನು ಕೇಳಲಿಲ್ಲ.

ಯಾಕೆ ಅಂದ್ರ ಮಾಧ್ಯಮದವರಿಗೆ ಸಹಿತ ಯಾರದ್ದು ಯಾವ ಕೆಲಸ ಅಂತ ಹೇಳಿ ಸರಿಯಾಗಿ ಗೊತ್ತಿಲ್ಲ. ಅಥವಾ ಗೊತ್ತಿದರೂ, ಟಿಆರ್‌ಪಿ ಆಸೆಗೆ, ಮಾರುಕಟ್ಟೆ, ಜಾಹೀರಾತು ಆಸೆಗೆ, ಅವರು ಬಹು ಚರ್ಚಿತ ವಿಷಯಗಳನ್ನ ತೋರಿಸ್ತಾರ ಹೊರತು, ಕೇಳಲೇಬೇಕಾದ ಪ್ರಶ್ನೆ ಕೇಳಿ, ಸರಿಯಾದ ಉತ್ತರ ಹುಡುಕುವ ಪ್ರಯತ್ನ ಮಾಡೋದಿಲ್ಲ.

ಈ ರೀತಿಯ ಸುದ್ದಿ ಅಥವಾ ಚರ್ಚೆ, ಜನರಿಗೆ ಬೇಕೋ ಬೇಡವೋ? ಪ್ರತಿ ದಿನ ಮುಂಜಾನೆದೊಳಗಿನ ಸುದ್ದಿಯ ಹೆಡ್‌ಲೈನ್ ಓದಿ ಪೇಪರ್ ಮುಚ್ಚಿ ಇಡುವ ನಮ್ಮ ಜನರಿಗೆ ಸುದ್ದಿಯ ಅಳಕ್ಕೆ ಹೋಗೋದು ಬೇಕೋ ಬ್ಯಾಡವೋ?

ಇದರಾಗ ನಾಯಕರ ತಪ್ಪೂ ಐತಿ. ಈಗಿನ ನಾಯಕರು ಮುಂದಿನ ಚುನಾವಣೆ ಬಗ್ಗೆ ಮಾತ್ರ ವಿಚಾರ ಮಾಡತಾರ ಹೊರತು ಅವರಿಗೆ ಬೇರೆ ಮುಂದಾಲೋಚನೆ, ದೂರದೃಷ್ಟಿತ್ವ ಅನ್ನೋದು ಇರೋದಿಲ್ಲ.

ಬಹಳ ಹಿಂದೆ ರಾಮಚಂದ್ರಪ್ಪ ಅಂತ ಬೆಂಗಳೂರಿನ ಮೇಯರ್ ಇದ್ದರು. ಅವರು ಜಾಸ್ತಿ ಓದಿರಲಿಲ್ಲ, ಆದ್ದರಿಂದ ಅವರನ್ನ ಬೆಂಗಳೂರಿನ ಕೆಲವು ಪತ್ರಕರ್ತರು ಮೇಯರ್ ಮುತ್ತಣ್ಣ ಅಂತ ಕರಿತಿದ್ದರು. ಅವರು ಬಹಳ ಸರಳ ಭಾಷೆಯೊಳಗ ಭಾಷಣ ಮಾಡ್ತಿದ್ದರು. ಪಾಲಿಕೆಯ ಆಯುಕ್ತರು ಬದಲಾವಣೆ ಆದಾಗ ಅವರು ಒಂದು ಸ್ವಾಗತ ಭಾಷಣ ಮಾಡಿದ್ದರು. ಅದರಲ್ಲಿ ಒಂದು ಮರೆಯಲಾರದಂತಹ ಮಾತು ಹೇಳಿದರು.

’ನೋಡಿ ಸ್ವಾಮಿ, ನಮ್ಮ ಅಧಿಕಾರಿಗಳು ಕುದುರೆಗಳು ಇದ್ದಂತೆ. ಅವರು ಯಾವ ದಿಕ್ಕಿನಲ್ಲಿ ಓಡುತ್ತಾರೆ ಅನ್ನುವುದು ಅವರನ್ನು ಓಡಿಸುವ ಸವಾರರ ಮೇಲೆ ಇರುತ್ತದೆ. ಆಯುಕ್ತರು ಸವಾರರು ಇದ್ದಂತೆ. ನೀವು ಒಳ್ಳೆಯವರಾದರೆ, ಅವರು ಒಳ್ಳೆಯವರು’, ಅಂತ ಹೇಳಿ ಮಾತು ಮುಗಿಸಿದ್ದರು.

ಈ ರೀತಿಯ ಸ್ಪಷ್ಟತೆ ಈಗಿನ ನಾಯಕರಲ್ಲಿ ಬಂದರೆ, ಅದು ಜನರಿಗೆ ತಿಳಿದರೆ, ಆಡಳಿತ ಅನ್ನುವುದು ಸರಿಯಾದ ದಾರಿಯಲ್ಲಿ ನಡೆದೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...