Homeಅಂಕಣಗಳುಮೂರು ಸಾರಿ ಲಡ್ಡು ಹಂಚಲಾಯಿತು; ರೈತರಿಗೆ ಬೂಂದಿ ಕಾಳೂ ಸಿಗಲಿಲ್ಲ

ಮೂರು ಸಾರಿ ಲಡ್ಡು ಹಂಚಲಾಯಿತು; ರೈತರಿಗೆ ಬೂಂದಿ ಕಾಳೂ ಸಿಗಲಿಲ್ಲ

- Advertisement -
- Advertisement -

ಮಗು ಇನ್ನೂ ಹುಟ್ಟೇ ಇಲ್ಲ, ಆದರೆ ಈಗಾಗಲೇ ಮೂರು ಸಲ ಸಿಹಿ ಹಂಚಿಕೊಂಡು ತಿಂದುಬಿಟ್ಟರು. ರೈತರ ಬೆಳೆಗೆ ಸರಿಯಾದ ಬೆಲೆ ನೀಡುವಲ್ಲಿ ಮೋದಿ ಸರಕಾರ ಇದನ್ನೇ ಮಾಡಿದೆ. ಇಲ್ಲಿಯತನಕ ಒಬ್ಬ ರೈತನಿಗೂ ಹೆಚ್ಚಿಸಲಾದ ಬೆಲೆ ಸಿಕ್ಕಿಲ್ಲ. ಹೆಚ್ಚಿನ ರೈತರಿಗೆ ಬೆಲೆ ಸಿಗುವ ಸಾಧ್ಯತೆಯೂ ಕಾಣುತ್ತಿಲ್ಲ. ಆದರೆ ಮೂರು ಬಾರಿ ಚಪ್ಪಾಳೆ ತಟ್ಟಲಾಗಿದೆ, ಅಭಿನಂದನೆಗಳ ಪೋಸ್ಟರ್‍ಗಳು, ಹೋರ್ಡಿಂಗ್‍ಗಳನ್ನು ಹಚ್ಚಲಾಗಿದೆ, ಸಿಹಿ ತಿನ್ನಲಾಗಿದೆ.
ಫೆಬ್ರುವರಿ 1 ರಂದು ಅರುಣ್ ಜೇಟ್ಲಿಯವರು ಈ ‘ಐತಿಹಾಸಿಕ’ ನಿರ್ಣಯದ ಘೋಷಣೆ ಮಾಡಿದಾಗ ಮೊದಲ ಬಾರಿ ಲಡ್ಡೂ ತಿನ್ನಲಾಯಿತು. ವಿತ್ತ ಸಚಿವರು ಕೃಷಿ ವೆಚ್ಚದ ವ್ಯಾಖ್ಯೆಯನ್ನೇ ಬದಲಿಸಿದ ಹಾಗೂ ತಮ್ಮ ಮೂಲ ಆಶ್ವಾಸನೆಯಿಂದ ನುಣುಚಿಕೊಂಡ ಕಹಿ ಸತ್ಯ ಲಡ್ಡೂಗಳ ಸಿಹಿಯಲ್ಲಿ ಮುಚ್ಚಿಹೋಯಿತು. ಜುಲೈ 4 ರಂದು ಸರಕಾರ ಈ ವರ್ಷದ ಮುಂಗಾರು ಬೆಳೆಯ ಬೆಲೆಯಲ್ಲಿ ‘ಐತಿಹಾಸಿಕ’ ವೃದ್ಧಿ ಘೋಷಿಸಿದಾಗ ಎರಡನೇ ಬಾರಿ ಲಡ್ಡೂ ತಿನ್ನಲಾಯಿತು. ಇದಕ್ಕಿಂತ ಹೆಚ್ಚಿನ ಚುನಾವಣೆಯ ಉಂಡೆಗಳನ್ನು ಹಿಂದಿನ ಸರಕಾರ 2009 ರಲ್ಲಿಯೇ ಹಂಚಿತ್ತು ಎನ್ನುವ ಸತ್ಯವೂ ಈ ಲಡ್ಡೂಗಳ ಭಾರದಲ್ಲಿ ಅವಿತುಹೋಯಿತು.
ಕಳೆದ ವಾರ ಸರಕಾರದ ಖರೀದಿಯ ವಾರ್ಷಿಕ ನೀತಿಯನ್ನು ಕ್ಯಾಬಿನೆಟ್ ಘೋಷಿಸಿದಾಗ ಮೂರನೇ ಬಾರಿ ಲಡ್ಡೂ ತಿನ್ನಲಾಯಿತು. ಮತ್ತೆ ಇದನ್ನು ಒಂದು ಹೊಸ ‘ಐತಿಹಾಸಿಕ’ ಘೋಷಣೆಯಂತೇ ದೇಶದ ಎದುರಿಡಲಾಯಿತು. ತನ್ನ ಕಾಯಕದ ಫಲ ಯಾವಾಗ ಸಿಗುವುದೆಂದು ರೈತ ಮಾತ್ರ ಕಣ್ಣು ಬಿಟ್ಟು ಕಾಯುತ್ತಿದ್ದ.
ಎಲ್ಲ ರೈತರು ತಮ್ಮ ಎಲ್ಲಾ ಬೆಳೆಗಳನ್ನು ಎಮ್‍ಎಸ್‍ಪಿ ದರದಲ್ಲಿ ಮಾರಾಟ ಮಾಡುವ ಒಂದು ವ್ಯವಸ್ಥೆ ಹೇಗೆ ಮಾಡಬಹುದು ಎಂಬ ಸಮಸ್ಯೆಗೆ ಹೊಸ ನೀತಿಯಲ್ಲೂ ಯಾವುದೇ ಉತ್ತರವಿಲ್ಲ. ಈಗ ಮೂರು ವಿಧಗಳಲ್ಲಿ ಒಂದು ವಿಧದಲ್ಲಿ ಸರಕಾರೀ ಖರೀದಿ ಆಗಬಹುದು. ಮೊದಲನೆಯದು ಹಳೆಯ ಸರಕಾರೀ ಖರೀದಿಯ ವಿಧ. ಈ ಯೋಜನೆ ಅನುಗುಣವಾಗಿ ರೇಷನ್ ಅಂಗಡಿಗಳಲ್ಲಿ ಮಾರಾಟ ಮಾಡಲು ಸರಕಾರ ಧಾನ್ಯಗಳನ್ನು ಖರೀದಿ ಮಾಡುತ್ತದೆ. ಅಥವಾ ಮೌಲ್ಯ ಸಮರ್ಥನೆ ಯೋಜನೆಯ ಅಡಿಯಲ್ಲಿ ಯಾವುದೇ ಬೆಳೆಯ ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಲ್ಲಿ ಸರಕಾರ ಆ ಬೇಳೆಯನ್ನು ಖರೀದಿ ಮಾಡಲು ಪ್ರಾರಂಭಿಸುತ್ತದೆ. ಏಳು ತಿಂಗಳ ನಂತರ ಎಂದಿನಂತೆಯೇ ಈ ವರ್ಷ ಕೂಡ ಇದೇ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸರಕಾರ ನಿರ್ಣಯಿಸಿದೆ.
ಒಂದೇ ಒಂದು ಬದಲಾವಣೆ ಏನೆಂದರೆ, ಸರಕಾರ ತನ್ನ ಬಜೆಟ್‍ನಲ್ಲಿ ಮಾಡಿದ ಕಟುವ್ಯಂಗ್ಯವನ್ನು ಸುಧಾರಿಸುತ್ತ ಈ ಖರೀದಿಗಾಗಿ 200 ಕೋಟಿಗಳ ಬದಲಾಗಿ ಈಗ ಸುಮಾರು 16,000 ಕೋಟಿ ರೂಪಾಯಿಗಳನ್ನು ನೀಡುವ ನಿರ್ಣಯ ಮಾಡಿದೆ. ಅದರೊಂದಿಗೆ ಸರಕಾರೀ ಖರೀದಿ ಮಾಡುವ ಏಜೆನ್ಸಿಗಳು ಬ್ಯಾಂಕಿನಿಂದ 45,000 ಕೋಟಿ ರೂಪಾಯಿಗಳ ಸಾಲ ಮಾಡಬಹುದು ಎನ್ನುವ ಘೋಷಣೆಯನ್ನೂ ಮಾಡಿದೆ. ಆದರೆ ಇದರಲ್ಲಿ ಸರಕಾರ ಗ್ಯಾರಂಟಿ ಮಾತ್ರ ನೀಡಿದೆ, ತನ್ನ ಬೊಕ್ಕಸದಿಂದ ಒಂದು ರೂಪಾಯಿಯನ್ನೂ ಹಾಕಿಲ್ಲ.
ವಾಸ್ತವದಲ್ಲಿ ಈ ಮೊತ್ತವೂ ಒಂಟೆ ಬಾಯಲ್ಲಿ ಜೀರಿಗೆ ಹಾಕಿದಂತಿದೆ ಏಕೆಂದರೆ, ಸರಕಾರ ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲಿ ಅದಕ್ಕೆ ಕನಿಷ್ಠ ಒಂದೂವರೆಯಿಂದ ಎರಡು ಲಕ್ಷ ಕೋಟಿ ರೂಪಾಯಿಗಳ ವ್ಯವಸ್ಥೆ ಮಾಡಬೇಕಿತ್ತು. ಸರಕಾರ ಯಾವುದೇ ಬೆಳೆಯ ಸಂಪೂರ್ಣ ಉತ್ಪನ್ನದಲ್ಲಿ ಕೇವಲ 25% ಉತ್ಪನ್ನ ಖರೀದಿಸುವಲ್ಲಿ ಮಾತ್ರ ರಾಜ್ಯ ಸರಕಾರದೊಂದಿಗೆ ಸಹಯೋಗ ಮಾಡುವುದು ಎನ್ನುವ ಸತ್ಯವೂ ಲಡ್ಡೂಗಳ ತಟ್ಟೆಯ ಮುಂದೆ ಮುಚ್ಚಿಹೋಗಿದೆ. ಇನ್ನುಳಿದ 75% ಖರೀದಿ ಮಾಡುವುದು ರಾಜ್ಯಸರಕಾರದ ತಲೆನೋವು ಆಗಿರುತ್ತದೆ. ರಾಜ್ಯ ಸರಕಾರಗಳಲ್ಲಿ ಅಷ್ಟು ದುಡ್ಡು ಇರೋಲ್ಲ, ರೈತರಿಗೆ ಬೆಳೆಯನ್ನು ಖರೀದಿ ಮಾಡಲ್ಲ.
ಅದರ ಬದಲಿಗೆ ಕೇಂದ್ರ ಸರಕಾರ ಪ್ರಾಯೋಗಿಕವಾಗಿ ಎರಡು ಬೇರೇ ವಿಧಾನಗಳ ಘೋಷಣೆ ಮಾಡಿದೆ. ಆದರೆ ಇವೆರಡರಿಂದಲೂ ರೈತರಿಗೆ ಯಾವುದೇ ಲಾಭ ಆಗಲು ಸಾಧ್ಯವಿಲ್ಲ. ಮೊದಲನೇದಂತೂ ಮಧ್ಯಪ್ರದೇಶದಲ್ಲಿ ಸಂಪೂರ್ಣವಾಗಿ ಫೇಲ್ ಆದ ‘ಭಾವಾಂತರ’ ಯೋಜನೆ. ಇದರಲ್ಲಿ ರೈತರು ಭಾರಿ ನಷ್ಟ ಅನುಭವಿಸಬೇಕಾಗಿ ಬಂತು. ಇನ್ನೊಂದೆಡೆ ಈ ಯೋಜನೆಯ ಗರಿಷ್ಠ ಲಾಭ ಪಡೆಯಲು ವ್ಯಾಪಾರಿಗಳು ರಾತ್ರೋರಾತ್ರಿ ಬೆಳೆಗಳನ್ನು ಬೆಲೆ ಇಳಿಸಿಬಿಟ್ಟರು ಹಾಗೂ ನಂತರ ಭಾರೀ ಲಾಭ ಗಳಿಸಿದರು. ಇದನ್ನು ಸುಧಾರಿಸದೇ ಭಾವಾಂತರ ಯೋಜನೆ ದೇಶಾದ್ಯಂತ ಅನುಷ್ಠಾನಗೊಳಿಸಿದರೆ ರೈತರಿಗೆ ನಷ್ಠ ಹಾಗೂ ವ್ಯಾಪಾರಿ ಮತ್ತು ವಂಚಕರಿಗೆ ಲಾಭ ಕಟ್ಟಿಟ್ಟ ಬುತ್ತಿ.
ಮೂರನೇ ವಿಧಾನ, ಸರಕಾರದ ಪರವಾಗಿ ಕನಿಷ್ಠ ಬೆಂಬಲ ಬೆಲೆ ಮೇಲೆ ಖರೀದಿಯನ್ನು ಖಾಸಗೀ ವ್ಯಾಪಾರಿಗಳು ಮಾಡುವುದು. ಖರೀದಿ, ಸಂಸ್ಕರಣೆ, ಶೇಖರಣೆ ಮತ್ತು ಮಾರಾಟ ಇವೆಲ್ಲವೂ ಅವರ ಜವಾಬ್ದಾರಿ ಆಗಿರುತ್ತವೆ. ಸರಕಾರ ಅವರ ಈ ಕೆಲಸಕ್ಕಾಗಿ 15% ವರೆಗೆ ಶುಲ್ಕ ಪಾವತಿಸುತ್ತದೆ. ಆದರೆ, ಪ್ರಶ್ನೆ ಇರುವುದು, ಒಂದು ವೇಳೆ ಬೆಳೆಯ ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ತುಂಬಾ ಕಡಿಮೆ ಇದ್ದಲ್ಲಿ ಯಾವುದೇ ವ್ಯಾಪಾರಿ ಅದನ್ನೇಕೆ ಖರೀದಿಸುತ್ತಾರೆ ಎನ್ನುವುದು. ಇದರ ಬದಲಾಗಿ ಸರಕಾರ ಯಾವುದೇ ವ್ಯಾಪಾರಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸುವುದನ್ನು ಅಪರಾಧ ಎಂದು ಪರಿಗಣಿಸುವಂತೆ ನಿಯಮ ಮಾಡಬೇಕು ಎಂದು ರೈತ ಚಳವಳಿಗಳು ಬೇಡಿಕೆ ಇಟ್ಟಿದ್ದವು. ಇದರ ಬಗ್ಗೆ ಕೇಂದ್ರ ಸರಕಾರ ಮೌನ ತೋರಿದೆ.
ಈಗ ಅನಿಸುವುದೇನೆಂದರೆ, ಈ ಬಾರಿಯೂ ಮತ್ತೊಮ್ಮೆ ಕುರ್ಚಿಗಳು ಲಡ್ಡೂ ತಿಂದು ಹಾಕುತ್ತವೆ ಹಾಗೂ ರೈತ ನೋಡುತ್ತ ನಿಲ್ಲಲಿದ್ದಾನೆ. ಸರ್ಕಾರ ಈ ‘ಐತಿಹಾಸಿಕ’ ನಿರ್ಣಯದ ಘೋಷಣೆ ಮಾಡಿಬಿಟ್ಟೆನೆಂದು ಕೇಂದ್ರ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಸಂಭ್ರಮ ಆಚರಿಸುತ್ತಿದ್ದಾಗ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮಂಡಿಗಳಲ್ಲಿ ಹೆಸರುಕಾಳು ಬಂದು ಬಿದ್ದಿತ್ತು. ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ಸರ್ಕಾರದ ಪ್ರಕಾರ ಅಧಿಕೃತವಾಗಿ 6975 ಆಗಿದ್ದರೂ, ಮಂಡಿಯ ವೆಬ್‍ಸೈಟುಗಳಲ್ಲಿ ಅದು 3900 ಅಥವಾ 4400 ಎಂದು ಕಾಣಿಸಿಕೊಳ್ಳುತ್ತಾ, ಹೆಸರುಕಾಳಿನ ವಹಿವಾಟು ಅಷ್ಟಕ್ಕೇ ನಡೆದು ಮುಗಿಯಿತು. ಹೆಸರಿನ ಉಂಡೆಗಳಂತೂ ರೈತರ ಪಾಲಿಗೆ ಬಹಳ ಕಹಿಯಾದವು. ಇನ್ನುಳಿದ ಲಡ್ಡುಗಳ ಸಿಹಿಯು ರೈತರ ಮನೆಬಾಗಿಲಿನವರೆಗೆ ತಲುಪಲಿದೆಯೇ?

– ಯೋಗೇಂದ್ರ ಯಾದವ್
ಅನುವಾದ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...