Homeಅಂಕಣಗಳುಮೂರು ಸಾರಿ ಲಡ್ಡು ಹಂಚಲಾಯಿತು; ರೈತರಿಗೆ ಬೂಂದಿ ಕಾಳೂ ಸಿಗಲಿಲ್ಲ

ಮೂರು ಸಾರಿ ಲಡ್ಡು ಹಂಚಲಾಯಿತು; ರೈತರಿಗೆ ಬೂಂದಿ ಕಾಳೂ ಸಿಗಲಿಲ್ಲ

- Advertisement -
- Advertisement -

ಮಗು ಇನ್ನೂ ಹುಟ್ಟೇ ಇಲ್ಲ, ಆದರೆ ಈಗಾಗಲೇ ಮೂರು ಸಲ ಸಿಹಿ ಹಂಚಿಕೊಂಡು ತಿಂದುಬಿಟ್ಟರು. ರೈತರ ಬೆಳೆಗೆ ಸರಿಯಾದ ಬೆಲೆ ನೀಡುವಲ್ಲಿ ಮೋದಿ ಸರಕಾರ ಇದನ್ನೇ ಮಾಡಿದೆ. ಇಲ್ಲಿಯತನಕ ಒಬ್ಬ ರೈತನಿಗೂ ಹೆಚ್ಚಿಸಲಾದ ಬೆಲೆ ಸಿಕ್ಕಿಲ್ಲ. ಹೆಚ್ಚಿನ ರೈತರಿಗೆ ಬೆಲೆ ಸಿಗುವ ಸಾಧ್ಯತೆಯೂ ಕಾಣುತ್ತಿಲ್ಲ. ಆದರೆ ಮೂರು ಬಾರಿ ಚಪ್ಪಾಳೆ ತಟ್ಟಲಾಗಿದೆ, ಅಭಿನಂದನೆಗಳ ಪೋಸ್ಟರ್‍ಗಳು, ಹೋರ್ಡಿಂಗ್‍ಗಳನ್ನು ಹಚ್ಚಲಾಗಿದೆ, ಸಿಹಿ ತಿನ್ನಲಾಗಿದೆ.
ಫೆಬ್ರುವರಿ 1 ರಂದು ಅರುಣ್ ಜೇಟ್ಲಿಯವರು ಈ ‘ಐತಿಹಾಸಿಕ’ ನಿರ್ಣಯದ ಘೋಷಣೆ ಮಾಡಿದಾಗ ಮೊದಲ ಬಾರಿ ಲಡ್ಡೂ ತಿನ್ನಲಾಯಿತು. ವಿತ್ತ ಸಚಿವರು ಕೃಷಿ ವೆಚ್ಚದ ವ್ಯಾಖ್ಯೆಯನ್ನೇ ಬದಲಿಸಿದ ಹಾಗೂ ತಮ್ಮ ಮೂಲ ಆಶ್ವಾಸನೆಯಿಂದ ನುಣುಚಿಕೊಂಡ ಕಹಿ ಸತ್ಯ ಲಡ್ಡೂಗಳ ಸಿಹಿಯಲ್ಲಿ ಮುಚ್ಚಿಹೋಯಿತು. ಜುಲೈ 4 ರಂದು ಸರಕಾರ ಈ ವರ್ಷದ ಮುಂಗಾರು ಬೆಳೆಯ ಬೆಲೆಯಲ್ಲಿ ‘ಐತಿಹಾಸಿಕ’ ವೃದ್ಧಿ ಘೋಷಿಸಿದಾಗ ಎರಡನೇ ಬಾರಿ ಲಡ್ಡೂ ತಿನ್ನಲಾಯಿತು. ಇದಕ್ಕಿಂತ ಹೆಚ್ಚಿನ ಚುನಾವಣೆಯ ಉಂಡೆಗಳನ್ನು ಹಿಂದಿನ ಸರಕಾರ 2009 ರಲ್ಲಿಯೇ ಹಂಚಿತ್ತು ಎನ್ನುವ ಸತ್ಯವೂ ಈ ಲಡ್ಡೂಗಳ ಭಾರದಲ್ಲಿ ಅವಿತುಹೋಯಿತು.
ಕಳೆದ ವಾರ ಸರಕಾರದ ಖರೀದಿಯ ವಾರ್ಷಿಕ ನೀತಿಯನ್ನು ಕ್ಯಾಬಿನೆಟ್ ಘೋಷಿಸಿದಾಗ ಮೂರನೇ ಬಾರಿ ಲಡ್ಡೂ ತಿನ್ನಲಾಯಿತು. ಮತ್ತೆ ಇದನ್ನು ಒಂದು ಹೊಸ ‘ಐತಿಹಾಸಿಕ’ ಘೋಷಣೆಯಂತೇ ದೇಶದ ಎದುರಿಡಲಾಯಿತು. ತನ್ನ ಕಾಯಕದ ಫಲ ಯಾವಾಗ ಸಿಗುವುದೆಂದು ರೈತ ಮಾತ್ರ ಕಣ್ಣು ಬಿಟ್ಟು ಕಾಯುತ್ತಿದ್ದ.
ಎಲ್ಲ ರೈತರು ತಮ್ಮ ಎಲ್ಲಾ ಬೆಳೆಗಳನ್ನು ಎಮ್‍ಎಸ್‍ಪಿ ದರದಲ್ಲಿ ಮಾರಾಟ ಮಾಡುವ ಒಂದು ವ್ಯವಸ್ಥೆ ಹೇಗೆ ಮಾಡಬಹುದು ಎಂಬ ಸಮಸ್ಯೆಗೆ ಹೊಸ ನೀತಿಯಲ್ಲೂ ಯಾವುದೇ ಉತ್ತರವಿಲ್ಲ. ಈಗ ಮೂರು ವಿಧಗಳಲ್ಲಿ ಒಂದು ವಿಧದಲ್ಲಿ ಸರಕಾರೀ ಖರೀದಿ ಆಗಬಹುದು. ಮೊದಲನೆಯದು ಹಳೆಯ ಸರಕಾರೀ ಖರೀದಿಯ ವಿಧ. ಈ ಯೋಜನೆ ಅನುಗುಣವಾಗಿ ರೇಷನ್ ಅಂಗಡಿಗಳಲ್ಲಿ ಮಾರಾಟ ಮಾಡಲು ಸರಕಾರ ಧಾನ್ಯಗಳನ್ನು ಖರೀದಿ ಮಾಡುತ್ತದೆ. ಅಥವಾ ಮೌಲ್ಯ ಸಮರ್ಥನೆ ಯೋಜನೆಯ ಅಡಿಯಲ್ಲಿ ಯಾವುದೇ ಬೆಳೆಯ ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಲ್ಲಿ ಸರಕಾರ ಆ ಬೇಳೆಯನ್ನು ಖರೀದಿ ಮಾಡಲು ಪ್ರಾರಂಭಿಸುತ್ತದೆ. ಏಳು ತಿಂಗಳ ನಂತರ ಎಂದಿನಂತೆಯೇ ಈ ವರ್ಷ ಕೂಡ ಇದೇ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸರಕಾರ ನಿರ್ಣಯಿಸಿದೆ.
ಒಂದೇ ಒಂದು ಬದಲಾವಣೆ ಏನೆಂದರೆ, ಸರಕಾರ ತನ್ನ ಬಜೆಟ್‍ನಲ್ಲಿ ಮಾಡಿದ ಕಟುವ್ಯಂಗ್ಯವನ್ನು ಸುಧಾರಿಸುತ್ತ ಈ ಖರೀದಿಗಾಗಿ 200 ಕೋಟಿಗಳ ಬದಲಾಗಿ ಈಗ ಸುಮಾರು 16,000 ಕೋಟಿ ರೂಪಾಯಿಗಳನ್ನು ನೀಡುವ ನಿರ್ಣಯ ಮಾಡಿದೆ. ಅದರೊಂದಿಗೆ ಸರಕಾರೀ ಖರೀದಿ ಮಾಡುವ ಏಜೆನ್ಸಿಗಳು ಬ್ಯಾಂಕಿನಿಂದ 45,000 ಕೋಟಿ ರೂಪಾಯಿಗಳ ಸಾಲ ಮಾಡಬಹುದು ಎನ್ನುವ ಘೋಷಣೆಯನ್ನೂ ಮಾಡಿದೆ. ಆದರೆ ಇದರಲ್ಲಿ ಸರಕಾರ ಗ್ಯಾರಂಟಿ ಮಾತ್ರ ನೀಡಿದೆ, ತನ್ನ ಬೊಕ್ಕಸದಿಂದ ಒಂದು ರೂಪಾಯಿಯನ್ನೂ ಹಾಕಿಲ್ಲ.
ವಾಸ್ತವದಲ್ಲಿ ಈ ಮೊತ್ತವೂ ಒಂಟೆ ಬಾಯಲ್ಲಿ ಜೀರಿಗೆ ಹಾಕಿದಂತಿದೆ ಏಕೆಂದರೆ, ಸರಕಾರ ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲಿ ಅದಕ್ಕೆ ಕನಿಷ್ಠ ಒಂದೂವರೆಯಿಂದ ಎರಡು ಲಕ್ಷ ಕೋಟಿ ರೂಪಾಯಿಗಳ ವ್ಯವಸ್ಥೆ ಮಾಡಬೇಕಿತ್ತು. ಸರಕಾರ ಯಾವುದೇ ಬೆಳೆಯ ಸಂಪೂರ್ಣ ಉತ್ಪನ್ನದಲ್ಲಿ ಕೇವಲ 25% ಉತ್ಪನ್ನ ಖರೀದಿಸುವಲ್ಲಿ ಮಾತ್ರ ರಾಜ್ಯ ಸರಕಾರದೊಂದಿಗೆ ಸಹಯೋಗ ಮಾಡುವುದು ಎನ್ನುವ ಸತ್ಯವೂ ಲಡ್ಡೂಗಳ ತಟ್ಟೆಯ ಮುಂದೆ ಮುಚ್ಚಿಹೋಗಿದೆ. ಇನ್ನುಳಿದ 75% ಖರೀದಿ ಮಾಡುವುದು ರಾಜ್ಯಸರಕಾರದ ತಲೆನೋವು ಆಗಿರುತ್ತದೆ. ರಾಜ್ಯ ಸರಕಾರಗಳಲ್ಲಿ ಅಷ್ಟು ದುಡ್ಡು ಇರೋಲ್ಲ, ರೈತರಿಗೆ ಬೆಳೆಯನ್ನು ಖರೀದಿ ಮಾಡಲ್ಲ.
ಅದರ ಬದಲಿಗೆ ಕೇಂದ್ರ ಸರಕಾರ ಪ್ರಾಯೋಗಿಕವಾಗಿ ಎರಡು ಬೇರೇ ವಿಧಾನಗಳ ಘೋಷಣೆ ಮಾಡಿದೆ. ಆದರೆ ಇವೆರಡರಿಂದಲೂ ರೈತರಿಗೆ ಯಾವುದೇ ಲಾಭ ಆಗಲು ಸಾಧ್ಯವಿಲ್ಲ. ಮೊದಲನೇದಂತೂ ಮಧ್ಯಪ್ರದೇಶದಲ್ಲಿ ಸಂಪೂರ್ಣವಾಗಿ ಫೇಲ್ ಆದ ‘ಭಾವಾಂತರ’ ಯೋಜನೆ. ಇದರಲ್ಲಿ ರೈತರು ಭಾರಿ ನಷ್ಟ ಅನುಭವಿಸಬೇಕಾಗಿ ಬಂತು. ಇನ್ನೊಂದೆಡೆ ಈ ಯೋಜನೆಯ ಗರಿಷ್ಠ ಲಾಭ ಪಡೆಯಲು ವ್ಯಾಪಾರಿಗಳು ರಾತ್ರೋರಾತ್ರಿ ಬೆಳೆಗಳನ್ನು ಬೆಲೆ ಇಳಿಸಿಬಿಟ್ಟರು ಹಾಗೂ ನಂತರ ಭಾರೀ ಲಾಭ ಗಳಿಸಿದರು. ಇದನ್ನು ಸುಧಾರಿಸದೇ ಭಾವಾಂತರ ಯೋಜನೆ ದೇಶಾದ್ಯಂತ ಅನುಷ್ಠಾನಗೊಳಿಸಿದರೆ ರೈತರಿಗೆ ನಷ್ಠ ಹಾಗೂ ವ್ಯಾಪಾರಿ ಮತ್ತು ವಂಚಕರಿಗೆ ಲಾಭ ಕಟ್ಟಿಟ್ಟ ಬುತ್ತಿ.
ಮೂರನೇ ವಿಧಾನ, ಸರಕಾರದ ಪರವಾಗಿ ಕನಿಷ್ಠ ಬೆಂಬಲ ಬೆಲೆ ಮೇಲೆ ಖರೀದಿಯನ್ನು ಖಾಸಗೀ ವ್ಯಾಪಾರಿಗಳು ಮಾಡುವುದು. ಖರೀದಿ, ಸಂಸ್ಕರಣೆ, ಶೇಖರಣೆ ಮತ್ತು ಮಾರಾಟ ಇವೆಲ್ಲವೂ ಅವರ ಜವಾಬ್ದಾರಿ ಆಗಿರುತ್ತವೆ. ಸರಕಾರ ಅವರ ಈ ಕೆಲಸಕ್ಕಾಗಿ 15% ವರೆಗೆ ಶುಲ್ಕ ಪಾವತಿಸುತ್ತದೆ. ಆದರೆ, ಪ್ರಶ್ನೆ ಇರುವುದು, ಒಂದು ವೇಳೆ ಬೆಳೆಯ ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ತುಂಬಾ ಕಡಿಮೆ ಇದ್ದಲ್ಲಿ ಯಾವುದೇ ವ್ಯಾಪಾರಿ ಅದನ್ನೇಕೆ ಖರೀದಿಸುತ್ತಾರೆ ಎನ್ನುವುದು. ಇದರ ಬದಲಾಗಿ ಸರಕಾರ ಯಾವುದೇ ವ್ಯಾಪಾರಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸುವುದನ್ನು ಅಪರಾಧ ಎಂದು ಪರಿಗಣಿಸುವಂತೆ ನಿಯಮ ಮಾಡಬೇಕು ಎಂದು ರೈತ ಚಳವಳಿಗಳು ಬೇಡಿಕೆ ಇಟ್ಟಿದ್ದವು. ಇದರ ಬಗ್ಗೆ ಕೇಂದ್ರ ಸರಕಾರ ಮೌನ ತೋರಿದೆ.
ಈಗ ಅನಿಸುವುದೇನೆಂದರೆ, ಈ ಬಾರಿಯೂ ಮತ್ತೊಮ್ಮೆ ಕುರ್ಚಿಗಳು ಲಡ್ಡೂ ತಿಂದು ಹಾಕುತ್ತವೆ ಹಾಗೂ ರೈತ ನೋಡುತ್ತ ನಿಲ್ಲಲಿದ್ದಾನೆ. ಸರ್ಕಾರ ಈ ‘ಐತಿಹಾಸಿಕ’ ನಿರ್ಣಯದ ಘೋಷಣೆ ಮಾಡಿಬಿಟ್ಟೆನೆಂದು ಕೇಂದ್ರ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಸಂಭ್ರಮ ಆಚರಿಸುತ್ತಿದ್ದಾಗ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮಂಡಿಗಳಲ್ಲಿ ಹೆಸರುಕಾಳು ಬಂದು ಬಿದ್ದಿತ್ತು. ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ಸರ್ಕಾರದ ಪ್ರಕಾರ ಅಧಿಕೃತವಾಗಿ 6975 ಆಗಿದ್ದರೂ, ಮಂಡಿಯ ವೆಬ್‍ಸೈಟುಗಳಲ್ಲಿ ಅದು 3900 ಅಥವಾ 4400 ಎಂದು ಕಾಣಿಸಿಕೊಳ್ಳುತ್ತಾ, ಹೆಸರುಕಾಳಿನ ವಹಿವಾಟು ಅಷ್ಟಕ್ಕೇ ನಡೆದು ಮುಗಿಯಿತು. ಹೆಸರಿನ ಉಂಡೆಗಳಂತೂ ರೈತರ ಪಾಲಿಗೆ ಬಹಳ ಕಹಿಯಾದವು. ಇನ್ನುಳಿದ ಲಡ್ಡುಗಳ ಸಿಹಿಯು ರೈತರ ಮನೆಬಾಗಿಲಿನವರೆಗೆ ತಲುಪಲಿದೆಯೇ?

– ಯೋಗೇಂದ್ರ ಯಾದವ್
ಅನುವಾದ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...