Homeಅಂಕಣಗಳುಮೂರು ಸಾರಿ ಲಡ್ಡು ಹಂಚಲಾಯಿತು; ರೈತರಿಗೆ ಬೂಂದಿ ಕಾಳೂ ಸಿಗಲಿಲ್ಲ

ಮೂರು ಸಾರಿ ಲಡ್ಡು ಹಂಚಲಾಯಿತು; ರೈತರಿಗೆ ಬೂಂದಿ ಕಾಳೂ ಸಿಗಲಿಲ್ಲ

- Advertisement -
- Advertisement -

ಮಗು ಇನ್ನೂ ಹುಟ್ಟೇ ಇಲ್ಲ, ಆದರೆ ಈಗಾಗಲೇ ಮೂರು ಸಲ ಸಿಹಿ ಹಂಚಿಕೊಂಡು ತಿಂದುಬಿಟ್ಟರು. ರೈತರ ಬೆಳೆಗೆ ಸರಿಯಾದ ಬೆಲೆ ನೀಡುವಲ್ಲಿ ಮೋದಿ ಸರಕಾರ ಇದನ್ನೇ ಮಾಡಿದೆ. ಇಲ್ಲಿಯತನಕ ಒಬ್ಬ ರೈತನಿಗೂ ಹೆಚ್ಚಿಸಲಾದ ಬೆಲೆ ಸಿಕ್ಕಿಲ್ಲ. ಹೆಚ್ಚಿನ ರೈತರಿಗೆ ಬೆಲೆ ಸಿಗುವ ಸಾಧ್ಯತೆಯೂ ಕಾಣುತ್ತಿಲ್ಲ. ಆದರೆ ಮೂರು ಬಾರಿ ಚಪ್ಪಾಳೆ ತಟ್ಟಲಾಗಿದೆ, ಅಭಿನಂದನೆಗಳ ಪೋಸ್ಟರ್‍ಗಳು, ಹೋರ್ಡಿಂಗ್‍ಗಳನ್ನು ಹಚ್ಚಲಾಗಿದೆ, ಸಿಹಿ ತಿನ್ನಲಾಗಿದೆ.
ಫೆಬ್ರುವರಿ 1 ರಂದು ಅರುಣ್ ಜೇಟ್ಲಿಯವರು ಈ ‘ಐತಿಹಾಸಿಕ’ ನಿರ್ಣಯದ ಘೋಷಣೆ ಮಾಡಿದಾಗ ಮೊದಲ ಬಾರಿ ಲಡ್ಡೂ ತಿನ್ನಲಾಯಿತು. ವಿತ್ತ ಸಚಿವರು ಕೃಷಿ ವೆಚ್ಚದ ವ್ಯಾಖ್ಯೆಯನ್ನೇ ಬದಲಿಸಿದ ಹಾಗೂ ತಮ್ಮ ಮೂಲ ಆಶ್ವಾಸನೆಯಿಂದ ನುಣುಚಿಕೊಂಡ ಕಹಿ ಸತ್ಯ ಲಡ್ಡೂಗಳ ಸಿಹಿಯಲ್ಲಿ ಮುಚ್ಚಿಹೋಯಿತು. ಜುಲೈ 4 ರಂದು ಸರಕಾರ ಈ ವರ್ಷದ ಮುಂಗಾರು ಬೆಳೆಯ ಬೆಲೆಯಲ್ಲಿ ‘ಐತಿಹಾಸಿಕ’ ವೃದ್ಧಿ ಘೋಷಿಸಿದಾಗ ಎರಡನೇ ಬಾರಿ ಲಡ್ಡೂ ತಿನ್ನಲಾಯಿತು. ಇದಕ್ಕಿಂತ ಹೆಚ್ಚಿನ ಚುನಾವಣೆಯ ಉಂಡೆಗಳನ್ನು ಹಿಂದಿನ ಸರಕಾರ 2009 ರಲ್ಲಿಯೇ ಹಂಚಿತ್ತು ಎನ್ನುವ ಸತ್ಯವೂ ಈ ಲಡ್ಡೂಗಳ ಭಾರದಲ್ಲಿ ಅವಿತುಹೋಯಿತು.
ಕಳೆದ ವಾರ ಸರಕಾರದ ಖರೀದಿಯ ವಾರ್ಷಿಕ ನೀತಿಯನ್ನು ಕ್ಯಾಬಿನೆಟ್ ಘೋಷಿಸಿದಾಗ ಮೂರನೇ ಬಾರಿ ಲಡ್ಡೂ ತಿನ್ನಲಾಯಿತು. ಮತ್ತೆ ಇದನ್ನು ಒಂದು ಹೊಸ ‘ಐತಿಹಾಸಿಕ’ ಘೋಷಣೆಯಂತೇ ದೇಶದ ಎದುರಿಡಲಾಯಿತು. ತನ್ನ ಕಾಯಕದ ಫಲ ಯಾವಾಗ ಸಿಗುವುದೆಂದು ರೈತ ಮಾತ್ರ ಕಣ್ಣು ಬಿಟ್ಟು ಕಾಯುತ್ತಿದ್ದ.
ಎಲ್ಲ ರೈತರು ತಮ್ಮ ಎಲ್ಲಾ ಬೆಳೆಗಳನ್ನು ಎಮ್‍ಎಸ್‍ಪಿ ದರದಲ್ಲಿ ಮಾರಾಟ ಮಾಡುವ ಒಂದು ವ್ಯವಸ್ಥೆ ಹೇಗೆ ಮಾಡಬಹುದು ಎಂಬ ಸಮಸ್ಯೆಗೆ ಹೊಸ ನೀತಿಯಲ್ಲೂ ಯಾವುದೇ ಉತ್ತರವಿಲ್ಲ. ಈಗ ಮೂರು ವಿಧಗಳಲ್ಲಿ ಒಂದು ವಿಧದಲ್ಲಿ ಸರಕಾರೀ ಖರೀದಿ ಆಗಬಹುದು. ಮೊದಲನೆಯದು ಹಳೆಯ ಸರಕಾರೀ ಖರೀದಿಯ ವಿಧ. ಈ ಯೋಜನೆ ಅನುಗುಣವಾಗಿ ರೇಷನ್ ಅಂಗಡಿಗಳಲ್ಲಿ ಮಾರಾಟ ಮಾಡಲು ಸರಕಾರ ಧಾನ್ಯಗಳನ್ನು ಖರೀದಿ ಮಾಡುತ್ತದೆ. ಅಥವಾ ಮೌಲ್ಯ ಸಮರ್ಥನೆ ಯೋಜನೆಯ ಅಡಿಯಲ್ಲಿ ಯಾವುದೇ ಬೆಳೆಯ ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಲ್ಲಿ ಸರಕಾರ ಆ ಬೇಳೆಯನ್ನು ಖರೀದಿ ಮಾಡಲು ಪ್ರಾರಂಭಿಸುತ್ತದೆ. ಏಳು ತಿಂಗಳ ನಂತರ ಎಂದಿನಂತೆಯೇ ಈ ವರ್ಷ ಕೂಡ ಇದೇ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸರಕಾರ ನಿರ್ಣಯಿಸಿದೆ.
ಒಂದೇ ಒಂದು ಬದಲಾವಣೆ ಏನೆಂದರೆ, ಸರಕಾರ ತನ್ನ ಬಜೆಟ್‍ನಲ್ಲಿ ಮಾಡಿದ ಕಟುವ್ಯಂಗ್ಯವನ್ನು ಸುಧಾರಿಸುತ್ತ ಈ ಖರೀದಿಗಾಗಿ 200 ಕೋಟಿಗಳ ಬದಲಾಗಿ ಈಗ ಸುಮಾರು 16,000 ಕೋಟಿ ರೂಪಾಯಿಗಳನ್ನು ನೀಡುವ ನಿರ್ಣಯ ಮಾಡಿದೆ. ಅದರೊಂದಿಗೆ ಸರಕಾರೀ ಖರೀದಿ ಮಾಡುವ ಏಜೆನ್ಸಿಗಳು ಬ್ಯಾಂಕಿನಿಂದ 45,000 ಕೋಟಿ ರೂಪಾಯಿಗಳ ಸಾಲ ಮಾಡಬಹುದು ಎನ್ನುವ ಘೋಷಣೆಯನ್ನೂ ಮಾಡಿದೆ. ಆದರೆ ಇದರಲ್ಲಿ ಸರಕಾರ ಗ್ಯಾರಂಟಿ ಮಾತ್ರ ನೀಡಿದೆ, ತನ್ನ ಬೊಕ್ಕಸದಿಂದ ಒಂದು ರೂಪಾಯಿಯನ್ನೂ ಹಾಕಿಲ್ಲ.
ವಾಸ್ತವದಲ್ಲಿ ಈ ಮೊತ್ತವೂ ಒಂಟೆ ಬಾಯಲ್ಲಿ ಜೀರಿಗೆ ಹಾಕಿದಂತಿದೆ ಏಕೆಂದರೆ, ಸರಕಾರ ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದ್ದಲ್ಲಿ ಅದಕ್ಕೆ ಕನಿಷ್ಠ ಒಂದೂವರೆಯಿಂದ ಎರಡು ಲಕ್ಷ ಕೋಟಿ ರೂಪಾಯಿಗಳ ವ್ಯವಸ್ಥೆ ಮಾಡಬೇಕಿತ್ತು. ಸರಕಾರ ಯಾವುದೇ ಬೆಳೆಯ ಸಂಪೂರ್ಣ ಉತ್ಪನ್ನದಲ್ಲಿ ಕೇವಲ 25% ಉತ್ಪನ್ನ ಖರೀದಿಸುವಲ್ಲಿ ಮಾತ್ರ ರಾಜ್ಯ ಸರಕಾರದೊಂದಿಗೆ ಸಹಯೋಗ ಮಾಡುವುದು ಎನ್ನುವ ಸತ್ಯವೂ ಲಡ್ಡೂಗಳ ತಟ್ಟೆಯ ಮುಂದೆ ಮುಚ್ಚಿಹೋಗಿದೆ. ಇನ್ನುಳಿದ 75% ಖರೀದಿ ಮಾಡುವುದು ರಾಜ್ಯಸರಕಾರದ ತಲೆನೋವು ಆಗಿರುತ್ತದೆ. ರಾಜ್ಯ ಸರಕಾರಗಳಲ್ಲಿ ಅಷ್ಟು ದುಡ್ಡು ಇರೋಲ್ಲ, ರೈತರಿಗೆ ಬೆಳೆಯನ್ನು ಖರೀದಿ ಮಾಡಲ್ಲ.
ಅದರ ಬದಲಿಗೆ ಕೇಂದ್ರ ಸರಕಾರ ಪ್ರಾಯೋಗಿಕವಾಗಿ ಎರಡು ಬೇರೇ ವಿಧಾನಗಳ ಘೋಷಣೆ ಮಾಡಿದೆ. ಆದರೆ ಇವೆರಡರಿಂದಲೂ ರೈತರಿಗೆ ಯಾವುದೇ ಲಾಭ ಆಗಲು ಸಾಧ್ಯವಿಲ್ಲ. ಮೊದಲನೇದಂತೂ ಮಧ್ಯಪ್ರದೇಶದಲ್ಲಿ ಸಂಪೂರ್ಣವಾಗಿ ಫೇಲ್ ಆದ ‘ಭಾವಾಂತರ’ ಯೋಜನೆ. ಇದರಲ್ಲಿ ರೈತರು ಭಾರಿ ನಷ್ಟ ಅನುಭವಿಸಬೇಕಾಗಿ ಬಂತು. ಇನ್ನೊಂದೆಡೆ ಈ ಯೋಜನೆಯ ಗರಿಷ್ಠ ಲಾಭ ಪಡೆಯಲು ವ್ಯಾಪಾರಿಗಳು ರಾತ್ರೋರಾತ್ರಿ ಬೆಳೆಗಳನ್ನು ಬೆಲೆ ಇಳಿಸಿಬಿಟ್ಟರು ಹಾಗೂ ನಂತರ ಭಾರೀ ಲಾಭ ಗಳಿಸಿದರು. ಇದನ್ನು ಸುಧಾರಿಸದೇ ಭಾವಾಂತರ ಯೋಜನೆ ದೇಶಾದ್ಯಂತ ಅನುಷ್ಠಾನಗೊಳಿಸಿದರೆ ರೈತರಿಗೆ ನಷ್ಠ ಹಾಗೂ ವ್ಯಾಪಾರಿ ಮತ್ತು ವಂಚಕರಿಗೆ ಲಾಭ ಕಟ್ಟಿಟ್ಟ ಬುತ್ತಿ.
ಮೂರನೇ ವಿಧಾನ, ಸರಕಾರದ ಪರವಾಗಿ ಕನಿಷ್ಠ ಬೆಂಬಲ ಬೆಲೆ ಮೇಲೆ ಖರೀದಿಯನ್ನು ಖಾಸಗೀ ವ್ಯಾಪಾರಿಗಳು ಮಾಡುವುದು. ಖರೀದಿ, ಸಂಸ್ಕರಣೆ, ಶೇಖರಣೆ ಮತ್ತು ಮಾರಾಟ ಇವೆಲ್ಲವೂ ಅವರ ಜವಾಬ್ದಾರಿ ಆಗಿರುತ್ತವೆ. ಸರಕಾರ ಅವರ ಈ ಕೆಲಸಕ್ಕಾಗಿ 15% ವರೆಗೆ ಶುಲ್ಕ ಪಾವತಿಸುತ್ತದೆ. ಆದರೆ, ಪ್ರಶ್ನೆ ಇರುವುದು, ಒಂದು ವೇಳೆ ಬೆಳೆಯ ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ತುಂಬಾ ಕಡಿಮೆ ಇದ್ದಲ್ಲಿ ಯಾವುದೇ ವ್ಯಾಪಾರಿ ಅದನ್ನೇಕೆ ಖರೀದಿಸುತ್ತಾರೆ ಎನ್ನುವುದು. ಇದರ ಬದಲಾಗಿ ಸರಕಾರ ಯಾವುದೇ ವ್ಯಾಪಾರಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸುವುದನ್ನು ಅಪರಾಧ ಎಂದು ಪರಿಗಣಿಸುವಂತೆ ನಿಯಮ ಮಾಡಬೇಕು ಎಂದು ರೈತ ಚಳವಳಿಗಳು ಬೇಡಿಕೆ ಇಟ್ಟಿದ್ದವು. ಇದರ ಬಗ್ಗೆ ಕೇಂದ್ರ ಸರಕಾರ ಮೌನ ತೋರಿದೆ.
ಈಗ ಅನಿಸುವುದೇನೆಂದರೆ, ಈ ಬಾರಿಯೂ ಮತ್ತೊಮ್ಮೆ ಕುರ್ಚಿಗಳು ಲಡ್ಡೂ ತಿಂದು ಹಾಕುತ್ತವೆ ಹಾಗೂ ರೈತ ನೋಡುತ್ತ ನಿಲ್ಲಲಿದ್ದಾನೆ. ಸರ್ಕಾರ ಈ ‘ಐತಿಹಾಸಿಕ’ ನಿರ್ಣಯದ ಘೋಷಣೆ ಮಾಡಿಬಿಟ್ಟೆನೆಂದು ಕೇಂದ್ರ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಸಂಭ್ರಮ ಆಚರಿಸುತ್ತಿದ್ದಾಗ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮಂಡಿಗಳಲ್ಲಿ ಹೆಸರುಕಾಳು ಬಂದು ಬಿದ್ದಿತ್ತು. ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ಸರ್ಕಾರದ ಪ್ರಕಾರ ಅಧಿಕೃತವಾಗಿ 6975 ಆಗಿದ್ದರೂ, ಮಂಡಿಯ ವೆಬ್‍ಸೈಟುಗಳಲ್ಲಿ ಅದು 3900 ಅಥವಾ 4400 ಎಂದು ಕಾಣಿಸಿಕೊಳ್ಳುತ್ತಾ, ಹೆಸರುಕಾಳಿನ ವಹಿವಾಟು ಅಷ್ಟಕ್ಕೇ ನಡೆದು ಮುಗಿಯಿತು. ಹೆಸರಿನ ಉಂಡೆಗಳಂತೂ ರೈತರ ಪಾಲಿಗೆ ಬಹಳ ಕಹಿಯಾದವು. ಇನ್ನುಳಿದ ಲಡ್ಡುಗಳ ಸಿಹಿಯು ರೈತರ ಮನೆಬಾಗಿಲಿನವರೆಗೆ ತಲುಪಲಿದೆಯೇ?

– ಯೋಗೇಂದ್ರ ಯಾದವ್
ಅನುವಾದ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...