Homeಮುಖಪುಟ2014-2021ರವರೆಗೆ ಬಂಗಾಳದಲ್ಲಿ ಮೋದಿ ಭಾಷಣಗಳು: ಮಮತಾ ಪರವಿದ್ದ ಮೋದಿ ದಿಢೀರ್ ವಿರೋಧಿಯಾದ ಬಗೆ!

2014-2021ರವರೆಗೆ ಬಂಗಾಳದಲ್ಲಿ ಮೋದಿ ಭಾಷಣಗಳು: ಮಮತಾ ಪರವಿದ್ದ ಮೋದಿ ದಿಢೀರ್ ವಿರೋಧಿಯಾದ ಬಗೆ!

- Advertisement -
- Advertisement -

ರವಿವಾರ ಬಂಗಾಳದಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರು ಮಮತಾ ಸರ್ಕಾರದ ವಿರುದ್ಧ ಪದಪುಂಜಗಳ ವಾಗ್ದಾಳಿ ನಡೆಸಿದರು. ಆದರೆ ಬಂಗಾಳ ನೆಲದಲ್ಲಿ 2014ರಿಂದ ಮೋದಿ ಮಾಡಿದ ಭಾಷಣಗಳ ಹೂರಣವೇನು? ಆಗ ದೀದಿ ಪರ ಧ್ವನಿ ಎತ್ತುತ್ತಿದ್ದ ಮೋದಿ ಈಗ ದೀದಿ ವಿರುದ್ಧ ನೆರ ದಾಳಿ ಮಾಡುತ್ತಿದ್ದಾರೆ…

‘ತೃಣಮೂಲ ಕಾಂಗ್ರೆಸ್ ಆಟ ಮುಗಿದಿದೆ (“ಖೇಲಾ ಶೇಷ್”)’ ಎಂದು ರವಿವಾರ ಭವಿಷ್ಯ ನುಡಿದ ಪ್ರಧಾನಿ, 2014ರಲ್ಲಿ ‘ದೆಹಲಿಯಲ್ಲಿ ನರೇಂದ್ರ ಮೋದಿ ಮತ್ತು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ’ಯವರನ್ನು ಆಯ್ಕೆ ಮಾಡುವಂತೆ ಮತದಾರರಿಗೆ ಮನವಿ ಮಾಡಿದ್ದರು!

“ಆಪ್ಕೆ ದೋನೊ ಹಾಥ್ ಮೇ ಲಡ್ಡು”(ನಿಮ್ಮೆರಡೂ ಕೈಗಳಲ್ಲಿ ಲಡ್ಡು ಉಂಡೆ) ಎಂದು ಅವರು 2014 ರಲ್ಲಿ ಅದೇ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದಿದ್ದ ಚುನಾವಣಾ ರ‍್ಯಾಲಿಯಲ್ಲಿ ಹೇಳಿದ್ದರು.

ಎರಡು ವರ್ಷಗಳ ನಂತರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಬರುವ ಹೊತ್ತಿಗೆ, ಶಾರದಾ ಹಗರಣದ ಬಗ್ಗೆ ಮೋದಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ “ಸಿಂಡಿಕೇಟ್ ಸಂಸ್ಕೃತಿ” ತಲೆಯೆತ್ತಿದೆ ಎಂದು ಆಕ್ರಮಣ ಮಾಡಿದ್ದರು.

2019 ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪುಲ್ವಾಮಾ-ಬಾಲಕೋಟ್ ಬಗ್ಗೆ ಪ್ರಸ್ತಾಪಿಸುತ್ತ, “ದೀದಿ ಮತ್ತು ಅವರ ಸ್ನೇಹಿತರು ರಾಷ್ಟ್ರದ ವಿರುದ್ಧ ಮಾತನಾಡುತ್ತಿದ್ದಾರೆ” ಎಂದು ಮೋದಿ ಆರೋಪಿಸಿದರು.

ಅಭಿವೃದ್ಧಿಯ ಭರವಸೆ ಮತ್ತು “ಸೋನಾರ್ ಬಾಂಗ್ಲಾ” (ಚಿನ್ನದ ಬಂಗಾಳ) ಎಂಬುದು 2014 ರಿಂದ 2019 ರವರೆಗೆ ಮೋದಿಯವರ ಭಾಷಣಗಳಲ್ಲಿ ನಿರಂತರ ವಿಷಯವಾಗಿ ಉಳಿದಿದೆ. ಅವರು ಭಾನುವಾರ “ಅಸೋಲ್ ಪೊರಿಬೊರ್ತನ್” (ನೈಜ ಅಭಿವೃದ್ಧಿ) ಕುರಿತು ಮಾತನಾಡಿದರು.

ಈ ಹಿಂದೆ ಮೋದಿ ಇದೇ ಮೈದಾನದಲ್ಲಿ, “ನಾನು ಬಂಗಾಳದ ಜನರೊಂದಿಗೆ ನೇರವಾಗಿ ಮಾತನಾಡಲು ಬಯಸುತ್ತೇನೆ” ಎಂದು ಮೋದಿ ಫೆಬ್ರವರಿ 5, 2014 ರಂದು ಬ್ರಿಗೇಡ್‌ನಲ್ಲಿ ಜನಚೇತನ ಸಭೆಗೆ ತಿಳಿಸಿದರು. “ಈ ಬಾರಿ ಎಲ್ಲಾ [ಲೋಕಸಭಾ] ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಹಾಯ ಮಾಡಿ. ನೀವು ಬಂಗಾಳದಲ್ಲಿ 34 ವರ್ಷಗಳ ಎಡ ಆಡಳಿತವನ್ನು ಕೊನೆಗೊಳಿಸಿದ್ದೀರಿ. ನೀವು ಇಲ್ಲಿ ಹೊಸ ಸರ್ಕಾರವನ್ನು ಹೊಂದಿದ್ದೀರಿ. ಮಮತಾ ಬ್ಯಾನರ್ಜಿ ನಿಮಗಾಗಿ ಇಲ್ಲಿ ಕೆಲಸ ಮಾಡಲಿ. ಫಲಿತಾಂಶಗಳ ಬಗ್ಗೆ ಅವರನ್ನು ಪ್ರಶ್ನಿಸಿ. ನನಗೆ ಬಂಗಾಳದಿಂದ ಎಲ್ಲಾ ಸ್ಥಾನಗಳನ್ನು ನೀಡಿ, ದೇಶದಲ್ಲಿ ಪೊರಿಬೋರ್ತನ್ ತರಲು. ನಾವು ದೆಹಲಿಯಲ್ಲಿ ಏನು ಮಾಡುತ್ತೇವೆ ಎಂಬ ಕುರಿತು ನನ್ನನ್ನು ಪ್ರಶ್ನಿಸಿ. ಆಪ್ಕೆ ದೋನೊ ಹಾಥ್ ಮೇ ಲಡ್ಡು……’ ಎಂದಿದ್ದರು.

“ಬಂಗಾಳದ ಭವಿಷ್ಯವನ್ನು ಬದಲಾಯಿಸಲು ರಾಜ್ಯ ಸರ್ಕಾರದ ಉತ್ತಮ ಕೆಲಸಗಳು ಮಾತ್ರ ಸಾಕಾಗುವುದಿಲ್ಲ” ಎಂದು ಮೋದಿ ಹೇಳಿದ್ದರು. “ದೆಹಲಿಯ ಸರ್ಕಾರವು ಬಂಗಾಳಕ್ಕೂ ಕೆಲಸ ಮಾಡಬೇಕು. ನೀವು ಬದಲಾವಣೆಯನ್ನು ತಂದರೆ (ದೆಹಲಿಯಲ್ಲಿ) ನಾವು ಸೋನಾರ್ ಬಾಂಗ್ಲಾವನ್ನು ಮರಳಿ ತರುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ”

2014 ರಲ್ಲಿ ಬಂಗಾಳದಿಂದ ಎರಡು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು.
ಏಪ್ರಿಲ್ 17, 2016 ರಂದು ವಿಧಾನಸಭಾ ಚುನಾವಣೆಗೆ ಮುನ್ನ ಮೋದಿ ಕೋಲ್ಕತಾ ಮೈದಾನದ ಸಾಹಿದ್ ಮಿನಾರ್ ಮೈದಾನದಲ್ಲಿ ಮಾತನಾಡಿದರು. “ವಿವೇಕಾನಂದ ಸೇತುವೆ ಕುಸಿತದಲ್ಲಿ ಪ್ರಾಣ ಕಳೆದುಕೊಂಡ 27 ಮುಗ್ಧ ಜನರ ಅಪರಾಧವೇನು” ಎಂದು ಅವರು ಕೇಳಿದರು. “ಶಾರದ (ಹಗರಣ) ದಲ್ಲಿ ಕಂಡುಬರುವ ಅದೇ ಜನರನ್ನು ಶಾರದಾ (ಚಿಟ್ ಫಂಡ್ ಹಗರಣ) ಮತ್ತು ವಿವೇಕಾನಂದ ಸೇತುವೆ ದುರಂತದಲ್ಲೂ ಕಾಣಬಹುದು. ಈ ಜನರು ಪರಸ್ಪರ ಸಂಪರ್ಕ ಹೊಂದಿದ್ದಾರೆ. ಸಿಂಡಿಕೇಟ್ ಸಂಸ್ಕೃತಿಯನ್ನು ಮುಂದುವರಿಸಲು ಅನುಮತಿಸಬೇಕೇ? ಈ ಸಂಸ್ಕೃತಿ ಮುಂದುವರಿದರೆ ಬಂಗಾಳ ಉಳಿಯುತ್ತದೆಯೇ? ಎಡಪಂಥೀಯರು ಬಿಟ್ಟುಹೋದ ಎಲ್ಲಾ ತೊಂದರೆಗಳನ್ನು ದೀದಿ ಹೆಚ್ಚಿಸಿದ್ದಾರೆ… ”

“ಪೂರ್ವ ಭಾರತವನ್ನು ಅಭಿವೃದ್ಧಿಪಡಿಸುವುದು” ತನ್ನ ಕನಸು ಎಂದು ಮೋದಿ ಹೇಳಿದ್ದರು. “ನನ್ನ ಮೊದಲ ಕಾರ್ಯಸೂಚಿ ಅಭಿವೃದ್ಧಿ. ನನ್ನ ಎರಡನೇ ಕಾರ್ಯಸೂಚಿ ಅಭಿವೃದ್ಧಿಯ ವೇಗ… ನನ್ನ ಮೂರನೇ ಕಾರ್ಯಸೂಚಿ ಅಭಿವೃದ್ಧಿಯಲ್ಲಿಯೇ ಎಲ್ಲ” ಎಂದು ಹೇಳಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 3 ಸ್ಥಾನಗಳನ್ನು ಗೆದ್ದಿತ್ತು; ಅದರ ಮಿತ್ರ ಜಿಜೆಎಂ ಡಾರ್ಜಿಲಿಂಗ್ ಹಿಲ್ಸ್‌ನಲ್ಲಿ 3 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಏಪ್ರಿಲ್ 3, 2019 ರಂದು ಪ್ರಧಾನಿ ಮತ್ತೆ ಬ್ರಿಗೇಡ್‌ನಲ್ಲಿ ಮಾತನಾಡಿದರು. ಪುಲ್ವಾಮ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 46 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ ಬಾಲಕೋಟ್ ವಾಯುದಾಳಿಗಳನ್ನು ಪ್ರಶ್ನಿಸಿದ್ದಕ್ಕಾಗಿ ಅವರು, ಮಮತಾ ಮತ್ತು ಉಳಿದ ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.

“ನಾವು ಸ್ವಾಮಿ ವಿವೇಕಾನಂದರು ಕಲ್ಪಿಸಿಕೊಂಡ ಭಾರತದತ್ತ ಸಾಗುತ್ತಿರುವ ಸಮಯದಲ್ಲಿ, ಮೋದಿಯನ್ನು ವಿರೋಧಿಸುವ ಸಲುವಾಗಿ ಮಾ ಭಾರತಿ ವಿರುದ್ಧ ಮಾತನಾಡುತ್ತಿರುವ ಕೆಲವರು ಇದ್ದಾರೆ… ದೀದಿ ಮತ್ತು ಅವರ ಸ್ನೇಹಿತರು ರಾಜಕೀಯ ಅಸ್ತಿತ್ವವನ್ನು ಕಳೆದುಕೊಂಡಿರುವ ಕಾರಣ ರಾಷ್ಟ್ರದ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದರು.

ಜನವರಿ 19, 2019 ರಂದು ಬ್ರಿಗೇಡ್‌ನಲ್ಲಿ ಮಮತಾ ಅವರು ಕರೆದಿದ್ದ ‘ಯುನೈಟೆಡ್ ಇಂಡಿಯಾ’ ರ‍್ಯಾಲಿಯನ್ನು ಉಲ್ಲೇಖಿಸಿ ಮೋದಿ ಹೀಗೆ ಹೇಳಿದ್ದರು: “ದೇಶದ ವಿವಿಧ ಭಾಗಗಳ ರಾಜಕೀಯ ಮುಖಂಡರು ಇಲ್ಲಿ ಜಮಾಯಿಸಿ ಕೈ ಎತ್ತಿ ‘ಮೋದಿ ಹಠಾವೊ, ಮೋದಿ ಹಠಾವೊ’ ಎಂದರು. ಏಕೆ? ಮೋದಿಯವರು ಯಾವ ಅಪರಾಧ ಮಾಡಿದ್ದಾರೆ? ಮನೆಗಳಿಗೆ ಶೌಚಾಲಯ ನೀಡುವುದು ಅಪರಾಧವೇ? ಬಡವರಿಗೆ ಮನೆ ಕೊಡುವುದು ಅಪರಾಧವೇ? ಮನೆಗಳಲ್ಲಿ ವಿದ್ಯುತ್ ನೀಡುವುದು ಅಪರಾಧವೇ? ”

2019 ರ ಲೋಕಸಭಾ ಚುನಾವಣೆಯಲ್ಲಿ 42 ರಲ್ಲಿ 18 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು.
ಆದರೆ, ಈ ಸಲವು ವಿಧಾನಸಭೆ ಚುನಾವಣೆಯಲ್ಲಿ ಮಮತಾ ಪಕ್ಷವೇ ಫೆವರಿಟ್ ಆಗಿದೆ. ಈಗ ಮತ್ತೆ ಮೋದಿ ಖೇಲ್ ಖತಂ ಅಂತಹ ಪದಪುಂಜ ಬಳಸುತ್ತಿದ್ದಾರೆ. ಮಮತಾ ಗ್ಯಾಸ್ ದರ ಏರಿಕೆ, ನಿರುದ್ಯೋಗ, ಆರ್ಥಿಕ ದಿವಾಳಿತನದಂತಹ ನೈಜ ಸಮಸ್ಯೆಗಳ ಬಗ್ಗೆ ಮಾತನಾಡುತ್ತಲೇ, ‘ದಂಗಾಬಾಜ್’ಗಳ ವಿರುದ್ಧ ‘ಖೇಲಾ ಹೋಬೆ’ ಎಂದು ಘರ್ಜಿಸುತ್ತಿದ್ದಾರೆ….ಸದ್ಯದಲ್ಲೇ ಅಲ್ಲಿ ಕೃಷಿ ಕಾಯ್ದೆ ವಿರೋಧಿಸುತ್ತಿರುವ ರೈತ ನಾಯಕರು ಬಿಜೆಪಿ ವಿರುದ್ಧ ಮಹಾ ಪಂಚಾಯತ್ ನಡೆಸಲಿದ್ದಾರೆ… ಖೇಲಾ ಹೋಬೆ…, ಆಟ ಶುರು…

-ಪಿ.ಕೆ ಮಲ್ಲನಗೌಡರ್
(ಮಾಹಿತಿ: ಇಂಡಿಯನ್ ಎಕ್ಸ್‌ಪ್ರೆಸ್)


ಇದನ್ನೂ ಓದಿ: ‘ಖೇಲಾ ಹೋಬೆ’ಗೆ ‘ಖೇಲ್ ಖತಂ’ ಎಂದ ಪ್ರಧಾನಿ: ‘ಉಜ್ವಲಾ-ಜುಮ್ಲಾ’ ಎಂದು ದಾಳಿ ಮಾಡಿದ ದೀದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...