Homeಅಂಕಣಗಳುಪ್ರಧಾನಿ ಹುದ್ದೆಯ ಘನತೆ ಹಾಳು ಮಾಡಿದ ನರೇಂದ್ರ ಮೋದಿ

ಪ್ರಧಾನಿ ಹುದ್ದೆಯ ಘನತೆ ಹಾಳು ಮಾಡಿದ ನರೇಂದ್ರ ಮೋದಿ

ಇದನ್ನು ಓದಿರಿ

- Advertisement -
- Advertisement -

|ನ್ಯಾಯಪಥ ಸಂಪಾದಕೀಯ |

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಳೆದೊಂದು ವಾರದಿಂದ ಬಹಳ ಸುದ್ದಿಯಲ್ಲಿದ್ದಾರೆ. ಒಳ್ಳೆಯ ಸಾಧನೆಯ ಕಾರಣಕ್ಕಾಗಿ, ಇಲ್ಲವೇ ದೇಶದ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ವಿಚಾರದಲ್ಲಿ ಸುದ್ದಿಯಾಗಿದ್ದರೆ ಎಲ್ಲರೂ ಸಂತಸ ಪಡಬಹುದಿತ್ತು. ಆದರೆ ಅವರ ಅಜ್ಞಾನದ ಕಾರಣಕ್ಕಾಗಿ, ಸಾರ್ವಜನಿಕವಾಗಿ ಒಂದರ ಮೇಲೊಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಕಾರಣಕ್ಕಾಗಿ ಪ್ರಧಾನಿಯವರು ಸುದ್ದಿಯಲ್ಲಿರುವುದು ದುರಂತವಾಗಿದೆ.

ನ್ಯೂಸ್ ನೇಷನ್ ಎಂಬ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತ, ನರೇಂದ್ರ ಮೋದಿಯವರು ‘ಕೆಟ್ಟ ಹವಾಮಾನ ಮತ್ತು ಮೋಡಗಳಿರುವ ಕಾರಣಕ್ಕಾಗಿ ಬಾಲಾಕೋಟ್ ವಾಯುದಾಳಿಯನ್ನು ಮುಂದೂಡುವ ಬಗ್ಗೆ ತಜ್ಞರು ನಿರ್ಧರಿಸಿದ್ದರು. ಆದರೆ ನಾನು ಮೋಡವಿದ್ದರೆ ಯುದ್ಧವಿಮಾನಗಳು ರೇಡಾರ್‍ನಿಂದ ತಪ್ಪಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಸಲಹೆ ನೀಡಿದ್ದೆ’ ಎಂದು ಹೇಳಿದ್ದಾರೆ. ಒಂದು ಘನತೆಯುತ ಪ್ರಧಾನಿಯ ಸ್ಥಾನದಲ್ಲಿರುವವರು ತಿಳಿದುಕೊಂಡು ಮಾತನಾಡಬೇಕು. ತಾಂತ್ರಿಕ ವಿಚಾರಗಳು ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕು. ಆದರೆ ಯಾವಾಗಲೂ ಪ್ರಶಂಸೆ ಬಯಸುವ ಮೋದಿಯವರ ಈ ಹೇಳಿಕೆಯಿಂದ ಇಡೀ ದೇಶವೇ ಮುಜುಗರಕ್ಕೊಳಪಡಬೇಕಾದ ಪರಿಸ್ಥಿತಿ ಬಂದಿದೆ.

ಮೊದಲನೆಯದಾಗಿ ಮಳೆ, ಮೋಡ ಮಂಜು ಏನೇ ಇದ್ದರೂ ರೇಡಾರ್ ಕಿರಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬ ಸತ್ಯವನ್ನು ಸೇನೆಯಲ್ಲಿರುವವರು ತಿಳಿದೂ ಸಹ ಯಾರು ಅಂದು ಪ್ರಶ್ನಿಸದೇ ಇರುವುದು ಏನನ್ನು ಸೂಚಿಸುತ್ತದೆ? ಅಂದು ಕಣ್ಣು ಮುಚ್ಚಿಕೊಂಡು ವಾಯುಪಡೆಯ ಅಧಿಕಾರಿಗಳು ಮೋದಿಯವರ ಆದೇಶವನ್ನು ಪಾಲಿಸಿದ್ದಾರೆ. ಮುಂದೆಯೂ ಇಂತಹದೇ ಅವೈಜ್ಞಾನಿಕ ಆದೇಶಗಳನ್ನು ಮೋದಿ ನೀಡಿದರೆ ಅದರ ಬೆಲೆ ತೆರಬೇಕಾದವರು ಯಾರು?

ಎರಡನೆಯದಾಗಿ ರಫೇಲ್ ವಿಷಯದಲ್ಲಿ ಅವ್ಯವಹಾರ ನಡೆದಿದೆ ಎಂದು ವಿಪಕ್ಷಗಳು ಆರೋಪ ಮಾಡಿದಾಗ ಅದು ರಕ್ಷಣಾ ವಿಷಯವಾದ್ದರಿಂದ ಕೋರ್ಟಿಗೆ ರಹಸ್ಯ ದಾಖಲೆಗಳನ್ನು ಕೊಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈಗ ಯಾರು ಕೇಳದಿದ್ದರೂ ಸಹ ಖುದ್ದು ಮೋದಿಯವರೇ ನಿರ್ದಿಷ್ಟ ವಾಯುದಾಳಿಯೊಂದರ ವಿವರಗಳನ್ನು ಟಿವಿಯೊಂದರಲ್ಲಿ ಕುಳಿತು ಹೇಳುತ್ತಾರೆಂದರೆ ಏನರ್ಥ? ದೇಶದ ರಕ್ಷಣಾ ರಹಸ್ಯಗಳನ್ನು ತನ್ನ ಸ್ವಂತ ಇಮೇಜ್ ಹೆಚ್ಚಿಸಿಕೊಳ್ಳಲು ಬಹಿರಂಗ ಮಾಡುವುದು ಸರ್ವಥಾ ಸರಿಯಲ್ಲ.

ಮೂರನೆಯದಾಗಿ ಬಾಲಾಕೋಟ್ ವಾಯುದಾಳಿಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೇ ಇರಲು ಈ ಪ್ರಧಾನಿಯವರ ಅಜ್ಞಾನದ ಆದೇಶವೇ ಕಾರಣ ಎಂಬ ಅನುಮಾನ ದಟ್ಟವಾಗುತ್ತಲಿದೆ. ಬಾಲಾಕೋಟ್ ವಾಯುದಾಳಿಯಲ್ಲಿ 300 ಜನ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದರೂ ಇದುವರೆಗೂ ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ. ಒಬ್ಬರೂ ಕೂಡ ಸಾವನ್ನಪ್ಪಿಲ್ಲ ಎಂಬುವವರೆಗು ವರದಿಗಳು ಹರಿದಾಡುತ್ತಿವೆ. ಈಗ ಪ್ರಧಾನಿಯವರ ಹೇಳಿಕೆ ನೋಡಿದರೆ ಅದಕ್ಕೆ ಮತ್ತಷ್ಟು ಇಂಬು ಕೊಡುವಂತೆ ಕಾಣುತ್ತಿವೆ. ವಾಯುದಾಳಿಯಲ್ಲಿ ಒಬ್ಬ ವಿಂಗ್ ಕಮಾಂಡರ್ ಹುತಾತ್ಮನಾಗಿದ್ದರೆ ಮತ್ತೊಬ್ಬ ಅಭಿನಂದನ್ ಎರಡು ದಿನಗಳ ಕಾಲ ಪಾಕ್‍ನಲ್ಲಿ ಸೆರೆಯಾಳಾಗಬೇಕಾಗಿ ಬಂದಿದ್ದು ಪ್ರಧಾನಿಯವರ ಆದೇಶದಿಂದಲೇ ಎಂಬ ಪ್ರಶ್ನೆ ಎದುರಾಗುತ್ತಿದೆ

ನಾಲ್ಕನೆಯದಾಗಿ ಮೋದಿಯವರ ಈ ಹೇಳಿಕೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಬರುವಂತಾಗಿದೆ. ಏಕೆಂದರೆ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಪ್ರಧಾನಿಯವರ ಇಂತಹ ಹೇಳಿಕೆಗಳು ಜೋಕ್‍ನಂತಾಗಿಬಿಡುವ ಅಪಾಯವಿದೆ. ಈಗಾಗಲೇ ಭಾರತದಲ್ಲಿ ಈ ಕುರಿತು ಲಕ್ಷಾಂತರ ಜೋಕ್‍ಗಳು, ಮೀಮ್‍ಗಳು, ಟ್ರೋಲ್‍ಗಳು ಹರಿದಾಡುತ್ತಿವೆ. ‘ಇವು ಮೋದಿಯವರ ಮೇಲಿನ ಜೋಕ್‍ಗಳಲ್ಲ, ಬದಲಿಗೆ ಮೋದಿಯವರನ್ನು ಇನ್ನೂ ಬೆಂಬಲಿಸುತ್ತಿರುವ ವಿದ್ಯಾವಂತ ವರ್ಗದವರ ಮೇಲಿನ ಜೋಕ್‍ಗಳು’ ಎಂದು ಪತ್ರಕರ್ತರೊಬ್ಬರು ಮಾರ್ಮಿಕವಾಗಿ ನುಡಿದಿರುವುದು ಸತ್ಯವಾಗಿದೆ.

ಮೋದಿಯವರ ಸುಳ್ಳು ಇಲ್ಲಿಗೆ ನಿಲ್ಲುವುದಿಲ್ಲ. ಅದೇ ಸಂದರ್ಶನದಲ್ಲಿ ಮುಂದುವರೆದು ‘ನಾನು 1987-88ರಲ್ಲಿ ನನ್ನ ಡಿಜಿಟಲ್ ಕ್ಯಾಮರದಿಂದ ಅಡ್ವಾಣಿಯವರ ವರ್ಣರಂಜಿತ ಫೋಟೊ ತೆಗೆದು ದೆಹಲಿಗೆ ಇಮೇಲ್ ಮಾಡಿದ್ದೆ’ ಎಂದು ಮತ್ತೊಂದು ಸುಳ್ಳು ಹೇಳಿಬಿಟ್ಟಿದ್ದಾರೆ. ವಾಸ್ತವವಾಗಿ 90ರ ದಶಕದ ನಂತರ ಡಿಜಿಟಲ್ ಕ್ಯಾಮರ ಭಾರತದ ಮಾರುಕಟ್ಟೆಗೆ ಬಂದಿದೆ. ಇನ್ನು ಆಗಸ್ಟ್ 14, 1995ರಂದು ವಿಎಸ್‍ಎನ್‍ಎಲ್ ಇಂಟರ್‍ನೆಟ್ ಸೇವೆ ಬಳಕೆಗೆ ಬಂದಿದೆ. ಆದರೆ ಮೋದಿ 1987-88ರಲ್ಲಿಯೇ ಬಳಸಿದ್ದೆ ಎನ್ನುವ ಮೂಲಕ ಹಾಸ್ಯದ ವಸ್ತು ಆಗಿದ್ದಾರೆ. ದೇಶದ ಪ್ರಧಾನಿಯೇ ಹೀಗಾದರೆ ದೇಶದ ಗೌರವ ಉಳಿದೀತೇ?

ಇದನ್ನು ಓದಿರಿ ನ್ಯಾಯಪಥ ಸಂಪಾದಕೀಯ

ಮೋದಿಯವರ ಈ ರೀತಿಯ ಸುಳ್ಳು ಹೇಳಿಕೆಗಳು ಇದೇ ಮೊದಲೇನಲ್ಲ. ಈ ಹಿಂದೆ ಸಹ ಅವರು ಗಟಾರಗಳಿಂದ ಗ್ಯಾಸ್ ಉತ್ಪಾದಿಸಬಹುದೆಂದು ಹೇಳಿದ್ದರು. ವಿಶ್ವದಾದ್ಯಂತ ಆಗುತ್ತಿರುವ ಹವಾಮಾನ ಬದಲಾವಣೆ ಪ್ರಶ್ನೆ ಬಂದಾಗ ಮೋದಿಯವರು ಹವಾಮಾನ ಬದಲಾವಣೆಯಾಗುತ್ತಿಲ್ಲ, ನಮ್ಮ ಚರ್ಮ ಬದಲಾಗುತ್ತಿದೆ ಅಷ್ಟೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.

ಮೋದಿ ಮಾತ್ರವಲ್ಲ ಅವರ ಸಹೋದ್ಯೋಗಿಗಳು ಸಹ ಸುಳ್ಳು ಹೇಳುವುದರಲ್ಲಿ ಕಡಿಮೆ ಏನಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ. ಗಣೇಶನದು ಪ್ಲಾಸ್ಟಿಕ್ ಸರ್ಜರಿ, ವೇದಕಾಲದಲ್ಲೇ ನಮ್ಮ ಬಳಿ ವಿಮಾನವಿತ್ತು, ಪ್ರಣಾಳಶಿಶು ತಂತ್ರಜ್ಞಾನವು ಇತ್ತು, ಮಂಗನಿಂದ ಮಾನವ ಆಗಿದ್ದು ಸುಳ್ಳು ಎಂದೆಲ್ಲಾ ಹೇಳಿಕೆಗಳನ್ನು ನೀಡಿದ್ದರಿಂದ ಎರಡು ಮೂರು ಬಾರಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ಸಮುದಾಯವು ಈ ಮೋದಿ ಸಹೋದ್ಯೋಗಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.

ಮೋದಿಯವರು ವಿಜ್ಞಾನ ಮತ್ತು ವೈಚಾರಿಕತೆಯನ್ನು ನಿರ್ಲಕ್ಷಿಸಿರುವುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ವಿದ್ವತ್ತು, ವಿದ್ವಾಂಸರು, ಬುದ್ದಿಜೀವಿಗಳು, ವಿಜ್ಞಾನಿಗಳೆಂದರೆ ಈ ಸರ್ಕಾರಕ್ಕೆ ಆಗಿಬರುವುದಿಲ್ಲ. ಎಲ್ಲಿಯವರೆಗೆ ಈ ಬಿಕ್ಕಟ್ಟು ಬಗೆಹರಿಯುವುದಿಲ್ಲವೋ ಅಲ್ಲಿಯವರೆಗೆ ಭಾರತ ಅಭಿವೃದ್ದಿಯಾಗುವುದಿಲ್ಲ ಮಾತ್ರವಲ್ಲ ಪ್ರಪಂಚದಲ್ಲಿ ತನ್ನ ಹೆಸರನ್ನು ಮತ್ತಷ್ಟು ಕೆಡಿಸಿಕೊಳ್ಳುವ ಅಪಾಯವಿದೆ. ಮೋದಿಯವರಿಗೆ ಇದು ಅರ್ಥವಾಗಬೇಕು ಅಥವಾ ಅಧಿಕಾರದಿಂದ ಕೆಳಗಿಳಿಯಬೇಕು ಇವೆರಡೆ ಸದ್ಯಕ್ಕಿರುವ ದಾರಿಗಳಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...