Homeಅಂತರಾಷ್ಟ್ರೀಯನಾಸಾದಲ್ಲಿರುವ ಭಾರತೀಯರ ಸಂಖ್ಯೆ ಶೇ.58 ಅಲ್ಲ! ಅಲ್ಲಿರುವ ಏಶಿಯನ್ನರ ಸಂಖ್ಯೆಯೇ ಶೇ.8 ಮಾತ್ರ!

ನಾಸಾದಲ್ಲಿರುವ ಭಾರತೀಯರ ಸಂಖ್ಯೆ ಶೇ.58 ಅಲ್ಲ! ಅಲ್ಲಿರುವ ಏಶಿಯನ್ನರ ಸಂಖ್ಯೆಯೇ ಶೇ.8 ಮಾತ್ರ!

- Advertisement -
- Advertisement -

ಮಿಥ್ಯ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ದಲ್ಲಿ ಶೆ.58% ರಷ್ಟು ಭಾರತೀಯರಿದ್ದಾರೆ…
ಹೀಗೊಂದು ಅಂಕಿ-ಅಂಶ ಕಳೆದ ವಾರದಿಂದ ಹರಿದಾಡುತ್ತಿದೆ. ಭಾರತ ಮುಂದಿನ ಸೂಪರ್ ಪವರ್ ಎಂದು ಭ್ರಮೆ ಹೊತ್ತಿರುವ ಕೆಲವು ಭಕ್ತರು ಇದನ್ನು ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದ ಸಾವಿರಾರು ಜನ, ಸುಳ್ಳು ಎಂದು ಗೊತ್ತಿರುವ ಕೆಲವು ವೇಷಭಕ್ತರು ಫೇಸ್‍ಬುಕ್, ವ್ಯಾಟ್ಸಾಪ್‍ಗಳಲ್ಲಿ ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ.

ಕಳೆದ ವಾರ 2030ಕ್ಕೆ ಚಂದ್ರನಲ್ಲಿ ಬಾಹ್ಯಾಕಾಶ ನಿಲ್ದಾಣ ಸಿದ್ಧ ಎಂದು ಇಸ್ರೋ ಮುಖ್ಯಸ್ಥ ಶಿವನ್ ಘೋಷಿಸಿದಾಗ ಬಹುಪಾಲು ಟಿವಿ ಪರದೆಗಳ ಮೇಲೆ ಚಂದ್ರಯಾನಕ್ಕೆ ಸಂಬಂಧಿಸಿದ ಅಥವಾ ಇಸ್ರೋದ ಫೋಟೊ ಪಕ್ಕ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಫೋಟೊವನ್ನು ತಗುಲಿಸಲಾಗಿತ್ತು. ಮೋದಿ ಈ ಘೋಷಣೆಯನ್ನೂ ಮಾಡಿಲ್ಲ, ಇಸ್ರೋ ತನ್ನ ಕಾರ್ಯ ಚಟುವಟಿಕೆಯ ಬಗ್ಗೆ ಎಂದಿನಂತೆ ಮಾಹಿತಿ ನೀಡಿದೆ. ಚಾನೆಲ್‍ಗಳ ಈ ಹುಚ್ಚಾಟವೇ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಹರಿದು ಬಂತು. ಮೋದಿ ಕಾರಣದಿಂದಾಗಿಯೇ ಇದೆಲ್ಲ ಆಗುತ್ತಿದೆ ಎಂಬ ಭಾವವನ್ನು ಬಿತ್ತುವ ಯತ್ನವದು.

ಯಾವುದೇ ಸಂಸ್ಥೆ ಸಾಧನೆ ಮಾಡಿದಾಗ ಅದರ ಕ್ರೆಡಿಟ್ ಆ ಸರ್ಕಾರ, ಮತ್ತು ಹಿಂದೆ ಆ ಯೋಜನೆಗೆ ನೆರವು ನೀಡಿದ ಸರ್ಕಾರಗಳಿಗೂ ಹೋಗುತ್ತದೆ. ಅದಕ್ಕೂ ಮೊದಲು ಆ ಸಂಸ್ಥೆಯ ನೌಕರರಿಗೆ ಸಲ್ಲಬೇಕು. ಆದರೆ ಇಲ್ಲಿ ಬಾಲಾಕೋಟ್ ದಾಳಿಯನ್ನು ಮೋದಿಯೇ ಆಯೋಜಿಸಿದರು ಎಂಬರ್ಥದಲ್ಲಿ ಫೇಕು ಸುದ್ದಿ ಹರಡಲಾಗಿತು. ಕನ್ನಡದ ಕೆಲವು ದಿನಪತ್ರಿಕೆಗಳು ದೇಶದ ಸೇನೆಯನ್ನು ಮೋದಿ ಸೇನೆ ಎಂದೆಲ್ಲ ಬರೆದವು.

ಇವತ್ತಿಗೂ ಭಾರತದ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಇರುವ ಬಹುಪಾಲು ಯುವ ಮತ್ತು ಮಧ್ಯಮವರ್ಗಗಳ ಇಂಜನಿಯರ್‍ಗಳು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (ನ್ಯಾಷನಲ್ ಏರೊಸ್ಪೇಸ್ ಮತ್ತು ಸ್ಪೇಸ್ ಅಡ್ಮಿನಿಷ್ಟ್ರೇಷನ್)ದಲ್ಲಿ ‘ಭಾರತೀಯರೇ ಅಧಿಕ’ ಎಂದು ಸುದ್ದಿ ಹಬ್ಬಿಸುತಿದ್ದಾರೆ. ಈ ವಾರ ಹರಿದಾಡುತ್ತಿರುವ ಸುಳ್ ಸುದ್ದಿಗಳಲ್ಲಿ ನಾಸಾದಲ್ಲಿ ಶೇ. 58% ರಷ್ಟು ಭಾರತೀಯರೇ ತುಂಬಿದ್ದಾರಂತೆ. ಇಲ್ಲಿ ಇಸ್ರೋ ಪ್ರಕಟಿಸಿದ ತನ್ನ ಮುಂದಿನ ಯೋಜನೆಯ ಪಕ್ಕ ಮೋದಿ ಫೋಟೊ ಹಾಕುವ ಸಂದರ್ಭದಲ್ಲಿಯೇ ಈ ಸುಳ್ ಸುದ್ದಿ ಓಡಾಡುತ್ತಿದೆ. ಬಹುಪಾಲು ಇಂಜಿನಿಯರ್‍ಗಳು ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದವರೇ ಹೆಚ್ಚು. ಇದನ್ನು ತಮ್ಮ ಸಂಗಾತಿಗೂ ಅವರು ದಾಟಿಸುತ್ತಾರೆ. ಮನೆಯ ಮಕ್ಕಳಿಗೂ ಇದನ್ನೇ ಬೋಧಿಸುತ್ತಾರೇನೋ?

ಸತ್ಯ: ಈಗಷ್ಟೇ ಅಲ್ಟ್‍ನ್ಯೂಸ್ ಮಾಡಿರುವ ಫ್ಯಾಕ್ಟ್ ಚೆಕ್ ಪ್ರಕಾರ, ಅಲ್ಲಿರುವುದು ಶೇ 8% ಏಶಿಯನ್ನರು ( ಪೆಸಿಫಿಕ್ ಐಸ್ ಲ್ಯಾಂಡರ್ಸ್) ಮಾತ್ರ. ಅಂದರೆ ಇರುವ ಶೇ.8%ರಷ್ಟಲ್ಲೂ ಭಾರತೀಯರಷ್ಟೇ ಅಲ್ಲ, ಇತರ ಏಶಿಯಾದ ದೇಶಗಳ ವಿಜ್ಞಾನಿಗಳು, ಇಂಜಿನಿಯರ್ಸ್ ಇದ್ದಾರೆ.

ನಾಸಾ ಅಲ್ಲಿ ನೇಮಕಾತಿ ಮಾಡುವಾಗ, ಎಲ್ಲ ಜನಾಂಗ ಮತ್ತು ಪ್ರ್ಯಾಂತ್ಯಗಳಿಗೆ ಆದ್ಯತೆ ನೀಡುತ್ತದೆ. ಇದಂತೂ ಮೀಸಲಾತಿ ವಿರೋಧಿ ಭಕ್ತರಿಗೆ ಗೊತ್ತಾಗಲಿ ಎಂಬುದು ನಮ್ಮ ಆಶಯ. ನಾಸಾ ಪ್ರಕಾರ, ಅದು ವೈವಿಧ್ಯ ಹಿನ್ನೆಲೆಯಿರುವ ಸುಮಾರು 17 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತದೆ: ನಾಸಾದ ಉದ್ಯೋಗಿಗಳಲ್ಲಿ ಶೇ.72ರಷ್ಟು ಬಿಳಿಯರು(Caussasians), ಶೇ 12ರಷ್ಟು ಕರಿಯರು ಅಥವಾ ಆಫ್ರಿಕನ್ ಅಮೆರಿಕನ್ನರು, ಶೇ. 7-8 ಏಶಿಯನ್ನರು ( ಪೆಸಿಫಿಕ್ ಐಸ್‍ಲ್ಯಾಂಡರ್ಸ್), ಶೇ 7ರಷ್ಟು ಹಿಸ್ಪಾನಿಕ್ ಅಥವಾ ಲಾಟಿನೊ, ಶೇ 1.1 ರಷ್ಟು ಅಮೆರಿಕನ್ ಇಂಡಿಯನ್ಸ್ ಇದ್ದಾರೆ. ನಾಸಾದ ಅಂಕಿಸಂಖ್ಯೆ ಪ್ರಕಾರ, 1996ರಲ್ಲಿ ಶೇ. 4.5ರಷ್ಟಿದ್ದ ಏಶಿಯನ್ನರು ಈಗ 7.4ರಷ್ಟಿದ್ದಾರೆ.

ಹತ್ತು ವರ್ಷದಿಂದಲೂ ಇಂತಹ ಸುದ್ದಿ ಚಾಲ್ತಿಯಲ್ಲಿದೆ. ಆಗ ಶೇ 33ರಷ್ಟು ನಾಸಾ ನಮ್ಮವರೆ ಅಂತಿದ್ದವರು ಈಗ ಶೇ 58ಕ್ಕೆ ಏರಿದ್ದಾರೆ. ನಮ್ಮ ಭಾರತೀಯರು ಪ್ರಪಂಚದೆಲ್ಲೆಡೆ ಕೆಲಸ ಮಾಡುತ್ತಿದ್ದಾರೆ. ಅದು ನಮ್ಮ ಹೆಮ್ಮೆಯೂ ಹೌದು ಜೊತೆಗೆ ಯಾಕೆ ಅವರು ಇಲ್ಲಿಯೇ ಕೆಲಸ ಮಾಡಿ, ನಮ್ಮ ದೇಶಕ್ಕೆ ಕೊಡುಗೆ ಕೊಡಬಹುದಿತ್ತಲ್ಲ ಎಂಬ ಕೊರಗು ಹೌದು.

ನಾವು ವಾಸ್ತವ ಅಂಶಗಳನ್ನು ಇಟ್ಟುಕೊಂಡು ಹೆಮ್ಮೆಪಡಬೇಕು. ಬದಲಿಗೆ ಈ ರೀತಿಯ 58% ಭಾರತೀಯರು ಎಂಬ ಸುಳ್ಳುಗಳನ್ನು ಇಟ್ಟು ಕೊಚ್ಚಿಕೊಂಡರೆ ಮುಂದೆ ನಮಗೆ ತೊಂದರೆ ಕಾದಿರುತ್ತದೆ. ಎಲ್ಲರಿಗೂ ಗೂಗಲ್ ನೆಟ್ ಕ್ಷಣಾರ್ಧದಲ್ಲಿ ಕೈಗೆ ಸಿಗುವುದರಿಂದ ಇದು ಸುಳ್ಳು ಎಂದು ಸುಲಭವಾಗಿ ಗೊತ್ತಾಗಿ ನಂತರ ನಮ್ಮ ದೇಶದವರನ್ನು ಅಪಹಾಸ್ಯ ಮಾಡುವುದನ್ನು ತಪ್ಪಿಸಿಕೊಳ್ಳಬೇಕಾದರೆ ಇಂತಹ ಸುಳ್ಳು ಸುದ್ದಿಗಳನ್ನು ನಿಲ್ಲಿಸಬೇಕು.
(ಆಧಾರ: ಅಲ್ಟ್‍ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...