Homeಅಂತರಾಷ್ಟ್ರೀಯನಾಸಾದಲ್ಲಿರುವ ಭಾರತೀಯರ ಸಂಖ್ಯೆ ಶೇ.58 ಅಲ್ಲ! ಅಲ್ಲಿರುವ ಏಶಿಯನ್ನರ ಸಂಖ್ಯೆಯೇ ಶೇ.8 ಮಾತ್ರ!

ನಾಸಾದಲ್ಲಿರುವ ಭಾರತೀಯರ ಸಂಖ್ಯೆ ಶೇ.58 ಅಲ್ಲ! ಅಲ್ಲಿರುವ ಏಶಿಯನ್ನರ ಸಂಖ್ಯೆಯೇ ಶೇ.8 ಮಾತ್ರ!

- Advertisement -
- Advertisement -

ಮಿಥ್ಯ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ದಲ್ಲಿ ಶೆ.58% ರಷ್ಟು ಭಾರತೀಯರಿದ್ದಾರೆ…
ಹೀಗೊಂದು ಅಂಕಿ-ಅಂಶ ಕಳೆದ ವಾರದಿಂದ ಹರಿದಾಡುತ್ತಿದೆ. ಭಾರತ ಮುಂದಿನ ಸೂಪರ್ ಪವರ್ ಎಂದು ಭ್ರಮೆ ಹೊತ್ತಿರುವ ಕೆಲವು ಭಕ್ತರು ಇದನ್ನು ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದ ಸಾವಿರಾರು ಜನ, ಸುಳ್ಳು ಎಂದು ಗೊತ್ತಿರುವ ಕೆಲವು ವೇಷಭಕ್ತರು ಫೇಸ್‍ಬುಕ್, ವ್ಯಾಟ್ಸಾಪ್‍ಗಳಲ್ಲಿ ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ.

ಕಳೆದ ವಾರ 2030ಕ್ಕೆ ಚಂದ್ರನಲ್ಲಿ ಬಾಹ್ಯಾಕಾಶ ನಿಲ್ದಾಣ ಸಿದ್ಧ ಎಂದು ಇಸ್ರೋ ಮುಖ್ಯಸ್ಥ ಶಿವನ್ ಘೋಷಿಸಿದಾಗ ಬಹುಪಾಲು ಟಿವಿ ಪರದೆಗಳ ಮೇಲೆ ಚಂದ್ರಯಾನಕ್ಕೆ ಸಂಬಂಧಿಸಿದ ಅಥವಾ ಇಸ್ರೋದ ಫೋಟೊ ಪಕ್ಕ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಫೋಟೊವನ್ನು ತಗುಲಿಸಲಾಗಿತ್ತು. ಮೋದಿ ಈ ಘೋಷಣೆಯನ್ನೂ ಮಾಡಿಲ್ಲ, ಇಸ್ರೋ ತನ್ನ ಕಾರ್ಯ ಚಟುವಟಿಕೆಯ ಬಗ್ಗೆ ಎಂದಿನಂತೆ ಮಾಹಿತಿ ನೀಡಿದೆ. ಚಾನೆಲ್‍ಗಳ ಈ ಹುಚ್ಚಾಟವೇ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಹರಿದು ಬಂತು. ಮೋದಿ ಕಾರಣದಿಂದಾಗಿಯೇ ಇದೆಲ್ಲ ಆಗುತ್ತಿದೆ ಎಂಬ ಭಾವವನ್ನು ಬಿತ್ತುವ ಯತ್ನವದು.

ಯಾವುದೇ ಸಂಸ್ಥೆ ಸಾಧನೆ ಮಾಡಿದಾಗ ಅದರ ಕ್ರೆಡಿಟ್ ಆ ಸರ್ಕಾರ, ಮತ್ತು ಹಿಂದೆ ಆ ಯೋಜನೆಗೆ ನೆರವು ನೀಡಿದ ಸರ್ಕಾರಗಳಿಗೂ ಹೋಗುತ್ತದೆ. ಅದಕ್ಕೂ ಮೊದಲು ಆ ಸಂಸ್ಥೆಯ ನೌಕರರಿಗೆ ಸಲ್ಲಬೇಕು. ಆದರೆ ಇಲ್ಲಿ ಬಾಲಾಕೋಟ್ ದಾಳಿಯನ್ನು ಮೋದಿಯೇ ಆಯೋಜಿಸಿದರು ಎಂಬರ್ಥದಲ್ಲಿ ಫೇಕು ಸುದ್ದಿ ಹರಡಲಾಗಿತು. ಕನ್ನಡದ ಕೆಲವು ದಿನಪತ್ರಿಕೆಗಳು ದೇಶದ ಸೇನೆಯನ್ನು ಮೋದಿ ಸೇನೆ ಎಂದೆಲ್ಲ ಬರೆದವು.

ಇವತ್ತಿಗೂ ಭಾರತದ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಇರುವ ಬಹುಪಾಲು ಯುವ ಮತ್ತು ಮಧ್ಯಮವರ್ಗಗಳ ಇಂಜನಿಯರ್‍ಗಳು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (ನ್ಯಾಷನಲ್ ಏರೊಸ್ಪೇಸ್ ಮತ್ತು ಸ್ಪೇಸ್ ಅಡ್ಮಿನಿಷ್ಟ್ರೇಷನ್)ದಲ್ಲಿ ‘ಭಾರತೀಯರೇ ಅಧಿಕ’ ಎಂದು ಸುದ್ದಿ ಹಬ್ಬಿಸುತಿದ್ದಾರೆ. ಈ ವಾರ ಹರಿದಾಡುತ್ತಿರುವ ಸುಳ್ ಸುದ್ದಿಗಳಲ್ಲಿ ನಾಸಾದಲ್ಲಿ ಶೇ. 58% ರಷ್ಟು ಭಾರತೀಯರೇ ತುಂಬಿದ್ದಾರಂತೆ. ಇಲ್ಲಿ ಇಸ್ರೋ ಪ್ರಕಟಿಸಿದ ತನ್ನ ಮುಂದಿನ ಯೋಜನೆಯ ಪಕ್ಕ ಮೋದಿ ಫೋಟೊ ಹಾಕುವ ಸಂದರ್ಭದಲ್ಲಿಯೇ ಈ ಸುಳ್ ಸುದ್ದಿ ಓಡಾಡುತ್ತಿದೆ. ಬಹುಪಾಲು ಇಂಜಿನಿಯರ್‍ಗಳು ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದವರೇ ಹೆಚ್ಚು. ಇದನ್ನು ತಮ್ಮ ಸಂಗಾತಿಗೂ ಅವರು ದಾಟಿಸುತ್ತಾರೆ. ಮನೆಯ ಮಕ್ಕಳಿಗೂ ಇದನ್ನೇ ಬೋಧಿಸುತ್ತಾರೇನೋ?

ಸತ್ಯ: ಈಗಷ್ಟೇ ಅಲ್ಟ್‍ನ್ಯೂಸ್ ಮಾಡಿರುವ ಫ್ಯಾಕ್ಟ್ ಚೆಕ್ ಪ್ರಕಾರ, ಅಲ್ಲಿರುವುದು ಶೇ 8% ಏಶಿಯನ್ನರು ( ಪೆಸಿಫಿಕ್ ಐಸ್ ಲ್ಯಾಂಡರ್ಸ್) ಮಾತ್ರ. ಅಂದರೆ ಇರುವ ಶೇ.8%ರಷ್ಟಲ್ಲೂ ಭಾರತೀಯರಷ್ಟೇ ಅಲ್ಲ, ಇತರ ಏಶಿಯಾದ ದೇಶಗಳ ವಿಜ್ಞಾನಿಗಳು, ಇಂಜಿನಿಯರ್ಸ್ ಇದ್ದಾರೆ.

ನಾಸಾ ಅಲ್ಲಿ ನೇಮಕಾತಿ ಮಾಡುವಾಗ, ಎಲ್ಲ ಜನಾಂಗ ಮತ್ತು ಪ್ರ್ಯಾಂತ್ಯಗಳಿಗೆ ಆದ್ಯತೆ ನೀಡುತ್ತದೆ. ಇದಂತೂ ಮೀಸಲಾತಿ ವಿರೋಧಿ ಭಕ್ತರಿಗೆ ಗೊತ್ತಾಗಲಿ ಎಂಬುದು ನಮ್ಮ ಆಶಯ. ನಾಸಾ ಪ್ರಕಾರ, ಅದು ವೈವಿಧ್ಯ ಹಿನ್ನೆಲೆಯಿರುವ ಸುಮಾರು 17 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತದೆ: ನಾಸಾದ ಉದ್ಯೋಗಿಗಳಲ್ಲಿ ಶೇ.72ರಷ್ಟು ಬಿಳಿಯರು(Caussasians), ಶೇ 12ರಷ್ಟು ಕರಿಯರು ಅಥವಾ ಆಫ್ರಿಕನ್ ಅಮೆರಿಕನ್ನರು, ಶೇ. 7-8 ಏಶಿಯನ್ನರು ( ಪೆಸಿಫಿಕ್ ಐಸ್‍ಲ್ಯಾಂಡರ್ಸ್), ಶೇ 7ರಷ್ಟು ಹಿಸ್ಪಾನಿಕ್ ಅಥವಾ ಲಾಟಿನೊ, ಶೇ 1.1 ರಷ್ಟು ಅಮೆರಿಕನ್ ಇಂಡಿಯನ್ಸ್ ಇದ್ದಾರೆ. ನಾಸಾದ ಅಂಕಿಸಂಖ್ಯೆ ಪ್ರಕಾರ, 1996ರಲ್ಲಿ ಶೇ. 4.5ರಷ್ಟಿದ್ದ ಏಶಿಯನ್ನರು ಈಗ 7.4ರಷ್ಟಿದ್ದಾರೆ.

ಹತ್ತು ವರ್ಷದಿಂದಲೂ ಇಂತಹ ಸುದ್ದಿ ಚಾಲ್ತಿಯಲ್ಲಿದೆ. ಆಗ ಶೇ 33ರಷ್ಟು ನಾಸಾ ನಮ್ಮವರೆ ಅಂತಿದ್ದವರು ಈಗ ಶೇ 58ಕ್ಕೆ ಏರಿದ್ದಾರೆ. ನಮ್ಮ ಭಾರತೀಯರು ಪ್ರಪಂಚದೆಲ್ಲೆಡೆ ಕೆಲಸ ಮಾಡುತ್ತಿದ್ದಾರೆ. ಅದು ನಮ್ಮ ಹೆಮ್ಮೆಯೂ ಹೌದು ಜೊತೆಗೆ ಯಾಕೆ ಅವರು ಇಲ್ಲಿಯೇ ಕೆಲಸ ಮಾಡಿ, ನಮ್ಮ ದೇಶಕ್ಕೆ ಕೊಡುಗೆ ಕೊಡಬಹುದಿತ್ತಲ್ಲ ಎಂಬ ಕೊರಗು ಹೌದು.

ನಾವು ವಾಸ್ತವ ಅಂಶಗಳನ್ನು ಇಟ್ಟುಕೊಂಡು ಹೆಮ್ಮೆಪಡಬೇಕು. ಬದಲಿಗೆ ಈ ರೀತಿಯ 58% ಭಾರತೀಯರು ಎಂಬ ಸುಳ್ಳುಗಳನ್ನು ಇಟ್ಟು ಕೊಚ್ಚಿಕೊಂಡರೆ ಮುಂದೆ ನಮಗೆ ತೊಂದರೆ ಕಾದಿರುತ್ತದೆ. ಎಲ್ಲರಿಗೂ ಗೂಗಲ್ ನೆಟ್ ಕ್ಷಣಾರ್ಧದಲ್ಲಿ ಕೈಗೆ ಸಿಗುವುದರಿಂದ ಇದು ಸುಳ್ಳು ಎಂದು ಸುಲಭವಾಗಿ ಗೊತ್ತಾಗಿ ನಂತರ ನಮ್ಮ ದೇಶದವರನ್ನು ಅಪಹಾಸ್ಯ ಮಾಡುವುದನ್ನು ತಪ್ಪಿಸಿಕೊಳ್ಳಬೇಕಾದರೆ ಇಂತಹ ಸುಳ್ಳು ಸುದ್ದಿಗಳನ್ನು ನಿಲ್ಲಿಸಬೇಕು.
(ಆಧಾರ: ಅಲ್ಟ್‍ನ್ಯೂಸ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...