Homeಮುಖಪುಟಜನಾಂದೋಲನಗಳ ಹಾಗೂ ರಾಜಕೀಯ ಪಕ್ಷಗಳ ಶಕ್ತಿಯನ್ನು ಜೋಡಿಸುವ ಅಗತ್ಯ: ಯೋಗೇಂದ್ರ ಯಾದವ್

ಜನಾಂದೋಲನಗಳ ಹಾಗೂ ರಾಜಕೀಯ ಪಕ್ಷಗಳ ಶಕ್ತಿಯನ್ನು ಜೋಡಿಸುವ ಅಗತ್ಯ: ಯೋಗೇಂದ್ರ ಯಾದವ್

ಇದಕ್ಕಿಂತ ಮುನ್ನ ಎಂದೂ ನಮ್ಮ ಮೇಲೆ ಇಷ್ಟು ನಿರ್ಲಜ್ಜತೆಯಿಂದ ದ್ವೇಷ, ವಿಭಜನೆ ಹಾಗೂ ಭೇದಭಾವಗಳನ್ನು ಹೇರಲಾಗಿದ್ದಿಲ್ಲ. ಇದಕ್ಕಿಂತ ಮುಂಚಿತವಾಗಿ ಎಂದೂ ನಾವು ಈ ಮಟ್ಟಿಗೆ ಬೇಹುಗಾರಿಕೆ, ಪ್ರೊಪಗಾಂಡಾ ಹಾಗೂ ಮಿಥ್ಯಾತಂತ್ರಕ್ಕೆ (ಸುಳ್ಳಿನ ತಂತ್ರಗಾರಿಕೆ) ಬಲಿಯಾಗುವ ಪರಿಸ್ಥಿತಿ ಇದ್ದಿಲ್ಲ.

- Advertisement -
- Advertisement -

ಸಂಯುಕ್ತ ಕಿಸಾನ್ ಮೋರ್ಚಾದ ಸಮನ್ವಯ ಸಮಿತಿಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂಬ ಸುದ್ದಿ ಹರಡಲು ಶುರುವಾದ ಕೂಡಲೇ ಹಲವಾರು ಶುಭಚಿಂತಕರು ಕರೆ ಮಾಡಲು ಶುರು ಮಾಡಿದರು.

“ಏನಾಯ್ತು? ಏನಾದರೂ ಮನಸ್ತಾಪವಾಯಿತೇ? ಮೋರ್ಚಾದಲ್ಲಿ ಒಡಕು ಉಂಟಾಗಿದೆಯೇ?” ಖಂಡಿತವಾಗಿಯೂ ಇಲ್ಲ ಎಂದು ನಾನು ಹೇಳಿದೆ. ನಾನು ಸ್ವಇಚ್ಛೆಯಿಂದ ನನ್ನನ್ನು ಸಮನ್ವಯ ಸಮಿತಿಯಿಂದ ತೆಗೆಯಬೇಕು ಎಂಬ ಪ್ರಸ್ತಾಪ ಇಟ್ಟಿದ್ದೆ. ಅದನ್ನು ಸೆಪ್ಟೆಂಬರ್ 4ರಂದು ನಡೆದ ಸಭೆಯಲ್ಲಿ ಇಡಲಾಗಿತ್ತು. ನನ್ನ ಸ್ಥಾನದಲ್ಲಿ ’ಜೈ ಕಿಸಾನ್ ಆಂದೋಲನ’ದ ಅಧ್ಯಕ್ಷ ಅವಿಕ್ ಸಾಹಾ ಅವರು ಸಮಿತಿಯ ಕೆಲಸ ಮಾಡಲು ಲಭ್ಯವಿರುತ್ತಾರೆ. ನನ್ನ ಸಂಘಟನೆ ’ಜೈ ಕಿಸಾನ್ ಆಂದೋಲನ್’ ನಿಸ್ಸಂದೇಹವಾಗಿಯೂ ಸಂಯುಕ್ತ ಕಿಸಾನ್ ಮೋರ್ಚಾದ ಒಂದು ಸ್ಥಾಪಕ ಸಂಘಟನೆಯಾಗಿದೆ. ಮೋರ್ಚಾದ ಯಾವುದೇ ತೀರ್ಮಾನವನ್ನು ಅನುಷ್ಠಾನಗೊಳಿಸುವಲ್ಲಿ ಒಬ್ಬ ಸೈನಿಕನಂತೆ ನಾನು ಸದಾ ಲಭ್ಯವಿರುವೆ.

ಇನ್ನೂ ಬೇರೆ ತರಹದ ಕರೆಗಳೂ ಇದ್ದವು:

“ನೀವು ಮೋರ್ಚಾದೊಂದಿಗೆ ಇದ್ದೀರಿ ಅಂದಮೇಲೆ ಸಮನ್ವಯ ಸಮಿತಿಯಿಂದ ಹೊರಬರುವ ಅವಶ್ಯಕತೆ ಏನಿದೆ? ನೀವೂ ರಾಜಕೀಯ ಮಾಡಬಯಸುತ್ತೀರಿ ಎಂಬ ಮಾತುಗಳು ಕೇಳಿಬರುತ್ತಿವೆ?” ಕೆಲವ್ಯಾವೋ ಮಾಧ್ಯಮಗಳಲ್ಲಿ ನಾನು ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದೇನೆ ಎಂಬ ವದಂತಿ ಹಬ್ಬಿಸಿದ್ದರು. ಈ ಮಿತ್ರರಿಗೂ ನನ್ನ ಉತ್ತರ ನೇರವಾಗಿತ್ತು; ರಾಜಕೀಯದಲ್ಲಿ ನಾನು ಈಗಲ್ಲ ಕನಿಷ್ಠ ಹತ್ತು ವರ್ಷದಿಂದ ಇದ್ದೇನೆ. ನಾನು ಯಾವಾಗಲೂ ಹೇಳಿದ್ದೇನೆಂದರೆ, ಶುಭವನ್ನು ವಾಸ್ತವದಲ್ಲಿ ಬದಲಿಸುವುದಕ್ಕೆ ಇರುವ ಹೆಸರೇ ರಾಜಕಾರಣ. ಹಾಗಾಗಿ ರಾಜಕಾರಣ ನಮ್ಮ ಯುಗಧರ್ಮವಾಗಿದೆ. ಒಂದು ವೇಳೆ ದೇಶ ಸುಧಾರಣೆ ಆಗಬೇಕಾದರೆ, ಪ್ರಜಾಪ್ರಭುತ್ವ ಉಳಿಸಬೇಕಾದರೆ ರಾಜಕಾರಣ ಮಾಡಬೇಕಾಗುತ್ತದೆ. ಸ್ವರಾಜ್ ಇಂಡಿಯಾ ಹೆಸರಿನ ರಾಜಕೀಯ ಪಕ್ಷದ ಸಂಸ್ಥಾಪಕ ಸದಸ್ಯನಾಗುವ ಸೌಭಾಗ್ಯವೂ ಸಿಕ್ಕಿದೆ. ಅಲ್ಲದೆ ಇಂದಿಗೂ ನಾನು ನನ್ನ ರಾಜಕೀಯ ಮನೆಯಲ್ಲಿಯೇ ಇದ್ದೇನೆ. ಕಾಂಗ್ರೆಸ್ ಆಯೋಜಿಸುತ್ತಿರುವ “ಭಾರತ ಜೋಡೊ ಯಾತ್ರಾ”ಗೆ ಸಮರ್ಥನೆ ನೀಡುವ ನಿರ್ಣಯ ನನ್ನ ವೈಯಕ್ತಿಕ ನಿರ್ಣಯವಾಗಿಲ್ಲ. ಇದು ನನ್ನ ಪಕ್ಷದ ಎಲ್ಲಾ ಸಂಗಾತಿಗಳ ಸಾಮೂಹಿಕ ನಿರ್ಣಯವಾಗಿದೆ.

ಇಲ್ಲಿ ನನ್ನ ರಾಜೀನಾಮೆಗೆ ಸಂಬಂಧಿಸಿದ ಈ ಎರಡು ಪ್ರತಿಕ್ರಿಯೆಗಳನ್ನು ಉಲ್ಲೇಖಿಸುವ ಉದ್ದೇಶ ನನ್ನ ಒಂದು ನಿರ್ಣಯದ ಮೇಲೆ ಬೆಳಕು ಚೆಲ್ಲುವುದು ಅಲ್ಲ. ಈ ಪುಟ್ಟ ಉದಾಹರಣೆಯು ನಮ್ಮ ಸಾರ್ವಜನಿಕ ಜೀವನದ ಒಂದು ದೊಡ್ಡ ಅಸಂಗತತೆಯ ಕಡೆಗೆ ಬೊಟ್ಟು ಮಾಡುತ್ತದೆ. ಇಂದು ನಮ್ಮ ದೇಶದಲ್ಲಿ ಲೋಕತಾಂತ್ರಿಕ ರಾಜಕಾರಣದ ಶಕ್ತಿಯು ಎರಡು ಭಾಗಗಳಲ್ಲಿ ವಿಂಗಡನೆಯಾಗಿದೆ. ಒಂದು ಕಡೆ ರಾಜಕೀಯ ಪಕ್ಷಗಳಿವೆ, ಅವುಗಳು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವ ಮಶೀನ್‌ಗಳಾಗಿವೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಸರಾಸರಿ ಕಾರ್ಯಕರ್ತರು ಒಂದೋ ಅಧಿಕಾರದ ಸುಖ ಭೋಗಿಸುತ್ತಾನೆ/ಳೆ ಅಥವಾ ಅಧಿಕಾರದಲ್ಲಿ ಬರಲು ಕಾಯುತ್ತಾನೆ/ಳೆ ಹಾಗೂ ಅದಕ್ಕಾಗಿ ಶ್ರಮಿಸುತ್ತಾಳೆ/ನೆ. ಈ ಎರಡರ ತೀರ್ಮಾನವೂ ಚುನಾವಣೆಗಳಲ್ಲಿ ಆಗುವುದರಿಂದ, ಪಕ್ಷದ ಎಲ್ಲಾ ಗಮನ ಮತ್ತು ಶಕ್ತಿ ಚುನಾವಣೆಯ ಕೇಂದ್ರಿತವಾಗಿಯೇ ಇರುತ್ತವೆ. ಮೊದಲು ಹೇಳಲಾಗುತ್ತಿತ್ತು, ರಾಜಕೀಯ ಪಕ್ಷ ರಚಿಸುವ ಅರ್ಥವೇನೆಂದರೆ: ಕಾರ್ಯಕರ್ತ, ಕಾರ್ಯಕ್ರಮ, ಕಾರ್ಯಾಲಯ ಹಾಗೂ ಕೋಷ. ಹೇಗೆ ರಾಜಕೀಯ ಪಕ್ಷಗಳು ಪೊಳ್ಳಾಗುತ್ತ ಹೋದವೋ, ಹಾಗೆಯೇ ರಾಜಕಾರಣದ ಈ ನಾಲ್ಕೂ ಛಾಯೆಗಳು ಕಣ್ಮರೆಯಾದವು. ಇಂದು ರಾಜಕೀಯ ಪಕ್ಷಗಳ ಬಳಿ ವಿಶಾಲವಾದ ಜನ ಸಮರ್ಥನೆಯಿದೆ, ದುಡ್ಡು ಮತ್ತು ಮೀಡಿಯಾದ ದೊಡ್ಡ ತಂತ್ರವಿದೆ, ಮುಖಂಡರುಗಳ ದೊಡ್ಡ ದರಬಾರುಗಳಿವೆ ಆದರೆ ಅಲ್ಲಿ ವಿಚಾರವೂ ಇಲ್ಲ ಹಾಗೂ ಆ ವಿಚಾರಗಳನ್ನು ಅನುಷ್ಠಾನಗೊಳಿಸಬಲ್ಲ ಸಂಘಟನೆಯೂ ಇಲ್ಲ.

ಇನ್ನೊಂದು ಕಡೆ ಜನ ಆಂದೋಲನಗಳಿವೆ, ಅವುಗಳ ಬಳಿ ಶಕ್ತಿ ಇದೆ, ವಿಚಾರಗಳಿವೆ, ಪ್ರತಿರೋಧ ಮಾಡುವ ಕ್ಷಮತೆ ಇದೆ. ಆದರೆ ಅವುಗಳು ಇಂದಿನ ಲೋಕತಾಂತ್ರಿಕ ರಾಜಕಾರಣದಲ್ಲಿ ಪರಿಣಾಮ ಬೀರಲು ಸಾಧ್ಯವಿಲ್ಲ. ಇತ್ತೀಚಿಗೆ, ರೈತರ ಚಳವಳಿಯ ಶಕ್ತಿಯ ಒಂದು ಮಾದರಿಯನ್ನು ದೇಶ ನೋಡಿದೆ. ಆದರೆ, ದೇಶದಲ್ಲಿ ಇಂತಹ ಇತರ ಸಂಘಟನೆಗಳೂ ಇವೆ, ಈ ಸಂಘಟನೆಗಳಲ್ಲಿಯೂ ಇಂತಹ ಶಕ್ತಿಯಿದೆ. ಆದರೆ ತಮ್ಮ ಎಲ್ಲಾ ಶಕ್ತಿಯನ್ನು ಬಳಸಿ ದೆಹಲಿಯಲ್ಲಿ ಅಂತಹ ಮೋರ್ಚಾ ಕಟ್ಟುವಲ್ಲಿ ಸಮರ್ಥರಾಗಿಲ್ಲ. ಇದರಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಆಂದೋಲನ, ನಿರುದ್ಯೋಗಿ ಯುವಕರ ಅಂದೋಲನ, ಮಹಿಳಾ ಸಬಲೀಕರಣದ ಚಳವಳಿ, ದಲಿತ ಆದಿವಾಸಿ ಹಾಗೂ ಇತರ ಹಿಂದುಳಿದ ವರ್ಗಗಳ ಆಂದೋಲನ ಅಥವಾ ಮದ್ಯ ನಿಷೇಧದಂತಹ ವಿಷಯಗಳನ್ನಿಟ್ಟುಕೊಂಡು ನಡೆಯುವ ಆಂದೋಲನಗಳೂ ಇವೆ. ಈ ದೇಶದ ಚಳವಳಿಗಳಲ್ಲಿ ನೆಲಮಟ್ಟದಲ್ಲಿ ಜನರನ್ನು ಸೇರಿಸದೇ ಇರುವಂತಹ ಯಾವುದೇ ಒಂದು ಮೂಲೆ ಇರಲಾರದು. ಈ ಚಳವಳಿಗಳು ಚುನಾವಣೆಯಿಂದ ಅಂತರ ಕಾಯ್ದುಕೊಳ್ಳುತ್ತವೆ. ಆದರೆ ಇವುಗಳು ರಾಜಕೀಯೇತರ ಚಳವಳಿಗಳಲ್ಲ. ಇವರುಗಳ ವಿಚಾರಧಾರೆ, ದೇಶ ಮತ್ತು ಜಗತ್ತಿನ ಪ್ರಶ್ನೆಗಳ ಬಗ್ಗೆ ಇವರುಗಳ ಧೋರಣೆ ಹಾಗೂ ಆಡಳಿತದ ಪ್ರತಿರೋಧ ಮಾಡುವ ಇವರ ಸಾಮರ್ಥ್ಯ ಈ ಆಂದೋಲನಗಳನ್ನು ಆಳವಾಗಿ ರಾಜಕೀಯವಾಗಿಸುತ್ತವೆ. ಆದರೆ, ಈ ನೆಲಮಟ್ಟದ ಚಳವಳಿಗಳ ಇತಿಹಾಸವೇ ಹೇಗಿದೆಯೆಂದರೆ ಅದು ಒಂದು ಪುಟ್ಟ ಪ್ರದೇಶ ಅಥವಾ ಸಣ್ಣ ವರ್ಗದಲ್ಲಿಯೇ ದಟ್ಟವಾಗಿ ಹೊರಹೊಮ್ಮುತ್ತವೆ. ಹಾಗಾಗಿಯೇ ಮತ ರಾಜಕಾರಣದ ಪ್ರಶ್ನೆ ಉದ್ಭವಿಸಿದಾಗ ಈ ಚಳವಳಿಗಳ ನೇರ ಪರಿಣಾಮ ಆ ಅಧಿಕಾರದ ಚುನಾವಣಾ ಆಟದಲ್ಲಿ ಪ್ರಭಾವಕಾರಿಯಾಗಿರುವುದಿಲ್ಲ.

ದೇಶದ ರಾಜಕಾರಣದಲ್ಲಿ ಈ ದ್ವಂದ್ವತೆ ಹೊಸದೇನಲ್ಲ. ಎಂಭತ್ತರ ದಶಕದಿಂದಲೇ ಭಾರತೀಯ ರಾಜಕಾರಣದ ವಿದ್ವಾಂಸರು ಪಕ್ಷವಲ್ಲದ ರಾಜಕಾರಣದ ಪ್ರವೃತ್ತಿಯನ್ನು ಗುರುತಿಸಲು ಪ್ರಾರಂಭಿಸಿದರು. ಪ್ರೊ. ರಜನಿ ಕೊಠಾರಿಯಂತಹ ವಿದ್ವಾಂಸರ ನಿಲುವಿನ ಪ್ರಕಾರ, ಇತಿಹಾಸದ ಈ ಘಟ್ಟದಲ್ಲಿ ಸಾಮಾಜಿಕ ಬದಲಾವಣೆಗೆ ಪಕ್ಷಗಳ ರಾಜಕೀಯಕ್ಕೆ ಬದಲಿಗೆ ಪಕ್ಷಗಳಿಗೆ ಸೇರದ ರಾಜಕೀಯವೇ ಹೆಚ್ಚು ಪ್ರಸ್ತುತ ಎಂಬುದಾಗಿತ್ತು. ಆದರೆ ಇಂದು ಆ ಪರಿಸ್ಥಿತಿ ಉಲ್ಟಾ ಆಗಿದೆ. ಲೋಕತಾಂತ್ರಿಕ ರಾಜಕೀಯದೊಳಗೆ ಪಕ್ಷಾತೀತ ರಾಜಕಾರಣದ ಸ್ವಾಯತ್ತತೆಯನ್ನು ಉಳಿಸುವುದು ಇಂದಿನ ಮುಖ್ಯ ಸವಾಲಾಗಿಲ್ಲ. ಬದಲಿಗೆ ಲೋಕತಾಂತ್ರಿಕ ರಾಜಕಾರಣವನ್ನು ಉಳಿಸುವುದು ಇಂದಿನ ಸವಾಲಾಗಿದೆ. ಇಂತಹ ಸಮಯದಲ್ಲಿ ನಮ್ಮ ಸವಾಲು ಸಂಸದೀಯ ವಿರೋಧಪಕ್ಷ ಹಾಗೂ ಬೀದಿ ಹೋರಾಟಗಳ ಸಮನ್ವಯ ಸಾಧಿಸಿ ಒಂದು ನಿಜವಾದ ವಿರೋಧಪಕ್ಷವನ್ನು ಕಟ್ಟುವುದೇ ಆಗಿದೆ.

ಇಂದು ನಮ್ಮ ದೇಶ ಒಂದು ಅಭೂತಪೂರ್ವ ಸಂಕಷ್ಟವನ್ನು ಹಾದುಹೋಗುತ್ತಿದೆ. ದೇಶದ ಪ್ರಮುಖ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ಒಂದು ಹೇಳಿಕೆಯಲ್ಲಿ ಈ ಅಪಾಯವನ್ನು ಅಕ್ಷರರೂಪಕ್ಕಿಳಿಸಿದ್ದಾರೆ: “ಇಂದು ಸಂವಿಧಾನಿಕ ಮೌಲ್ಯಗಳನ್ನು ಹಾಗೂ ಲೋಕತಾಂತ್ರಿಕ ಮಾನದಂಡಗಳನ್ನು ನಿರ್ಲಜ್ಜತೆಯಿಂದ ಧ್ವಂಸಗೊಳಿಸಲಾಗುತ್ತಿದೆ. ಇಂದು ಭಾರತದ ಸ್ವಧರ್ಮವು ಒಂದು ನಿಯೋಜಿತ ದಾಳಿಯನ್ನು ಎದುರಿಸುತ್ತಿದೆ. ಇದಕ್ಕಿಂತ ಮುನ್ನ ನಮ್ಮ ಗಣತಂತ್ರದ ಎಲ್ಲಾ ಮೌಲ್ಯಗಳ ಮೇಲೆ ಒಂದೇ ಸಮಯದಲ್ಲಿ ಇಷ್ಟು ದೊಡ್ಡ ಘೋರವಾದ ದಾಳಿ ಆಗಿದ್ದಿಲ್ಲ. ಇದಕ್ಕಿಂತ ಮುನ್ನ ಎಂದೂ ನಮ್ಮ ಮೇಲೆ ಇಷ್ಟು ನಿರ್ಲಜ್ಜತೆಯಿಂದ ದ್ವೇಷ, ವಿಭಜನೆ ಹಾಗೂ ಭೇದಭಾವಗಳನ್ನು ಹೇರಲಾಗಿದ್ದಿಲ್ಲ. ಇದಕ್ಕಿಂತ ಮುಂಚಿತವಾಗಿ ಎಂದೂ ನಾವು ಈ ಮಟ್ಟಿಗೆ ಬೇಹುಗಾರಿಕೆ, ಪ್ರೊಪಗಾಂಡಾ ಹಾಗೂ ಮಿಥ್ಯಾತಂತ್ರಕ್ಕೆ (ಸುಳ್ಳಿನ ತಂತ್ರಗಾರಿಕೆ) ಬಲಿಯಾಗುವ ಪರಿಸ್ಥಿತಿ ಇದ್ದಿಲ್ಲ. ಇದಕ್ಕಿಂತ ಮೊದಲು ಎಂದೂ ನಾವು ಜನರ ದುರ್ದಶೆಗೆ ಪ್ರತಿಕ್ರಿಯೆಯಾಗಿ ಇಷ್ಟು ನಿಷ್ಠುರ ಆಡಳಿತವನ್ನು ನೋಡಿದ್ದಿಲ್ಲ, ಅಸ್ತವ್ಯಸ್ತವಾಗಿರುವ ಆರ್ಥಿಕತೆಯನ್ನು ಕೆಲವೇ ಕೆಲವು ಹಣವುಳ್ಳವರ ನೆರವಿನಿಂದ ನಡೆಸಲಾಗಿರಲಿಲ್ಲ”. ಇಂದು ನಮಗೆ ಈ ರಾಷ್ಟ್ರೀಯ ಬಿಕ್ಕಟ್ಟನ್ನು ಎದುರಿಸಬಲ್ಲ ಒಂದು ಸಾಧನದ ಅವಶ್ಯಕತೆ ಇದೆ.

ದೇಶದಲ್ಲಿ ಪ್ರತಿರೋಧ ಮಾಡುವ ಸಾಮರ್ಥ್ಯ ನಶಿಸಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ನಾವು ಸ್ವತಂತ್ರ ಭಾರತದಲ್ಲಿ ಪ್ರಜಾಸತ್ತಾತ್ಮಕ ಪ್ರತಿರೋಧದ ಕೆಲವು ಅತ್ಯದ್ಭುತ ಕ್ಷಣಗಳನ್ನು ನೋಡಿದ್ದೇವೆ. ರೈತರ ಚಳವಳಿ ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಇದರ ಹೊರತಾಗಿ ಲಕ್ಷಾಂತರ ಜನರು ಸಮಾನ ನಾಗರಿಕತೆಯ ಬೇಡಿಕೆಯನ್ನಿಟ್ಟುಕೊಂಡು ಬೀದಿಗಿಳಿದಿದ್ದರು. ಅನೇಕ ಕಾರ್ಯಕರ್ತರು, ಪತ್ರಕರ್ತರು, ವಕೀಲರು, ಲೇಖಕರು ಹಾಗೂ ಸಾಮಾನ್ಯ ನಾಗರಿಕರು ಯಾವುದೇ ಬೆದರಿಕೆಗಳನ್ನು ಲೆಕ್ಕಿಸದೆ, ಜೈಲು ಪಾಲಾಗುವದನ್ನು ಸ್ವೀಕರಿಸಿದರು ಹಾಗೂ ಅಧಿಕಾರದ ಎದುರಿಗೆ ಸತ್ಯವನ್ನು ನುಡಿಯುವ ಸಲುವಾಗಿ ಎಲ್ಲವನ್ನೂ ಪಣಕ್ಕಿಟ್ಟರು.

ಇಂದು ಜನ ಎದ್ದೇಳುತ್ತಿರುವ ಈ ಶಕ್ತಿಯನ್ನು ನಮ್ಮ ಸಂವಿಧಾನಿಕ ಲೋಕತಂತ್ರದ ರಕ್ಷಣೆಗೆ ಬದ್ಧರಾಗಿರುವ ರಾಜಕೀಯ ಪಕ್ಷಗಳೊಂದಿಗೆ ಜೋಡಿಸುವ ಅವಶ್ಯಕತೆ ಇದೆ. ಹಾಗಾಗಿಯೇ ನಾನು ರೈತರ ಚಳವಳಿಯ ಜೊತೆಜೊತೆಗೆ ಇತರ ಆಂದೋಲನಗಳೊಂದಿಗೂ ಸಂಪರ್ಕದಲ್ಲಿರುವೆ. ನನ್ನ ಪಕ್ಷ ’ಸ್ವರಾಜ್ ಇಂಡಿಯಾ’ದ ಜೊತೆಜೊತೆಗೆ ಇತರ ವಿಪಕ್ಷೀಯ ರಾಜಕೀಯ ಪಕ್ಷಗಳೊಂದಿಗೆ ಸಮನ್ವಯ ಸಾಧಿಸುವ ಪ್ರಯತ್ನದಲ್ಲಿದ್ದೇನೆ. ಆ ಕಾರಣಕ್ಕಾಗಿಯೇ ನಾನು ಸಂಯುಕ್ತ ಮೋರ್ಚಾದ ಹೊಣೆಗಾರಿಕೆಯಿಂದ ಮುಕ್ತನಾಗುವ ಮನವಿ ಮಾಡಿದ್ದೇನೆ. ಆದರೆ, ಈ ಮಿಷನ್ ಯಾವುದೇ ಒಬ್ಬ ವ್ಯಕ್ತಿಯಿಂದ ಸಾಧ್ಯವಾಗುವುದಿಲ್ಲ. ಹೇಗೆ ದೇಶವನ್ನು ಸ್ವತಂತ್ರಗೊಳಿಸಲು ಸಾವಿರಾರು ’ಹುಚ್ಚ’ರು ಮನೆಮಠ ಬಿಟ್ಟು ಹೊರಬಂದರೋ, ಅದೇ ರೀತಿ ದೇಶದ ಎರಡನೆಯ ಸ್ವತಂತ್ರಕ್ಕೂ ಸಾವಿರಾರು ’ಆಂದೋಲನಜೀವಿ’ಗಳು ಈ ಸವಾಲನ್ನು ತಮ್ಮ ಜೀವನದ ಮಿಷನ್ ಮಾಡಿಕೊಳ್ಳಬೇಕಾಗಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.


ಇದನ್ನೂ ಓದಿ: ಹಿಂದೂತ್ವದ ವ್ಯಾಖ್ಯಾನ ನೀಡಲು ಸೋತಿದ್ದೇಕೆ?: ವಿ.ಡಿ ಸಾವರ್ಕರ್ ಕುರಿತು ಹೊಸ ಪುಸ್ತಕದ ಬಗ್ಗೆ ಯೋಗೇಂದ್ರ ಯಾದವ್ ಟಿಪ್ಪಣಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...