Homeಅಂಕಣಗಳುಬೆನ್ನು ಸೀಳುವ ರಾಮ ಧನಸ್ಸೇ: ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ? ವಿನಯಾ ಒಕ್ಕುಂದರವರ ಅಂಕಣ

ಬೆನ್ನು ಸೀಳುವ ರಾಮ ಧನಸ್ಸೇ: ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ? ವಿನಯಾ ಒಕ್ಕುಂದರವರ ಅಂಕಣ

ಧರ್ಮೋನ್ಮಾದದ ದುರಂತವು ಎಲ್ಲ ಒಮ್ಮೆ ಆಕಸ್ಮಿಕವಾಗಿ ನಡೆದು ಮುಗಿದುಹೋಗುವಂತದ್ದಲ್ಲ. ಇದು ಸಹಜೀವಿಗಳನ್ನು ಭಯಗೊಳಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಡೆಸುವ ಆಂತರಿಕ ಯುದ್ಧ. ಈ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುತ್ತದೆ.

- Advertisement -
- Advertisement -

ರಾಷ್ಟ್ರೀಯತೆ ಎನ್ನುವುದು ಬಹು ದೊಡ್ಡ ಅಪಾಯವಾಗಬಹುದು. ‘ಒಬ್ಬ ವ್ಯಕ್ತಿ ತಾನು ಪ್ರಬಲನಾಗಲು ಎಂತಹ ಅನೈತಿಕ ಕೆಲಸಗಳನ್ನು ಮಾಡಬಲ್ಲನೋ ಹಾಗೆ ಒಂದು ಸಮುದಾಯ ತಾನು ಪ್ರಬಲವಾಗಲು ಅನೈತಿಕವಾಗಿ ವರ್ತಿಸಬಲ್ಲದು’ ಎಂದಿದ್ದರು ರವೀಂದ್ರನಾಥ ಠಾಗೋರ್.

ನನ್ನ ದೇಶದಲ್ಲೀಗ ರಾಷ್ಟ್ರೀಯತೆಯ ಹೆಸರಿನಲ್ಲಿ ಮತೀಯ ಉನ್ಮಾದ ಹೆಚ್ಚುತ್ತಿದೆ. ರಾಷ್ಟ್ರ ಮತ್ತು ಧರ್ಮಗಳನ್ನು ಒಂದಾಗಿಸುವ ಪ್ರಯತ್ನದಲ್ಲಿ ಬಹುತ್ವದ ಬೇರು ಕತ್ತರಿಸಲಾಗುತ್ತಿದೆ. ಗಾಂಧೀಜಿ ತಮ್ಮ ಹಿಂದ್ ಸ್ವರಾಜ್‍ನಲ್ಲಿ ಯಾವ ಧರ್ಮಾಧಾರಿತ ರಾಷ್ಟ್ರೀಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದರೋ ಅದನ್ನೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹರಡಲು ಯತ್ನಿಸುತ್ತಿದೆ. ಒಂದೇ ಧರ್ಮವಿದ್ದರೆ ಒಂದು ರಾಷ್ಟ್ರ ಎನ್ನುವುದು ಸರಿಯಾದದ್ದಲ್ಲ, ಪ್ರತಿಯೊಂದು ಪ್ರಬಲ ಧರ್ಮವೂ ಪ್ರತ್ಯೇಕ ರಾಷ್ಟ್ರದ ತುಡಿತ ಹೊಂದಿದರೆ ಮುಂದೇನು? ಎಂದು ಪ್ರಶ್ನಿಸಿದ್ದರು. ಧರ್ಮ ಬೇರೆಯಿದೆ ಎಂದ ಕ್ಷಣ ಯಾರೂ ವೈರಿಗಳಾಗುವುದಿಲ್ಲ ಎಂದಿದ್ದರು.

ಗಾಂಧೀ ಹತ್ಯೆ ವಾರಸುದಾರರು ಗಾಂಧೀ ಸಾಮರಸ್ಯದ ಚಿಂತನೆಯ ಹತ್ಯಾರರಾಗಿ ಬೆಳೆಯತೊಡಗಿದರು. ಭಾರತಮಾತೆಯ ಜಾಗದಲ್ಲೀಗ ಶ್ರೀರಾಮ ಬಂದು ಕೂತಿದ್ದಾನೆ. ಪ್ರಭುತ್ವದ ಸಂಗೋಪನೆಗಾಗಿ ಎದುರಾದ ಬಿಕ್ಕಟ್ಟುಗಳನ್ನು ನಿವಾರಿಸಲು ಚಾರಿತ್ರಿಕ ತಪ್ಪುಗಳನ್ನು ಮಾಡಿದ್ದ ಶ್ರೀರಾಮ ಆ ನಂತರದಲ್ಲಿ ತನ್ನ ಕೃತ್ಯಗಳಿಗಾಗಿ ಪರಿತಪಿಸಿದವನು. ಮರಣ ಮುಖದಲ್ಲಿದ್ದ ವಾಲಿಯ ಎದುರು ಮೊಣಕಾಲೂರಿ ತಪ್ಪೊಪ್ಪಿಕೊಂಡವನು. ಆ ಶ್ರೀರಾಮನನ್ನು ಕರೆತಂದು ಇತ್ತೀಚೆಗೆ ಜೈಶ್ರೀರಾಮ್ ಘೋಷಣೆ ಕೂಗದ ಕಾರಣಕ್ಕೆ ಹಲ್ಲೆಗೀಡಾಗಿ ಶವವಾಗಿದ್ದ ಮಗನ ಪಕ್ಕ ಶೂನ್ಯ ದಿಟ್ಟಿಸುತ್ತಾ ಕೂತಿದ್ದ ಅಪ್ಪನ ಎದುರು ತಂದು ನಿಲ್ಲಿಸಬೇಕು. ಈ ತಂದೆಯ ದಿಗ್ಭ್ರಾಂತ ದೈನ್ಯಕ್ಕೆ ಶ್ರೀರಾಮ ಏನೆನ್ನಬಹುದು? ಖಂಡಿತ, ಮಗನ ಅಗಲಿಕೆಯ ನೋವಿನ ತೀವ್ರತೆಯನ್ನು ತಾಳದೆ ಮರಣಿಸಿದ ಅಪ್ಪ ದಶರಥನ ಕಣ್ಣಾಳದಲ್ಲಿ ಹೆಪ್ಪುಗಟ್ಟಿದ ಮಮತೆಯ ಸೆಳೆಯನ್ನವನಿಲ್ಲಿ ಕಾಣುತ್ತಿದ್ದನು. ಕರುಣಾಳು ರಾಘವನಿಗೆ ಖಂಡಿತ ಆ ಕಾಣ್ಕಿಯಿತ್ತು.

ಧರ್ಮೋನ್ಮಾದದ ದುರಂತವು ಎಲ್ಲೋ ಒಮ್ಮೆ ಆಕಸ್ಮಿಕವಾಗಿ ನಡೆದು ಮುಗಿದುಹೋಗುವಂತದ್ದಲ್ಲ. ಇದು ಸಹಜೀವಿಗಳನ್ನು ಭಯಗೊಳಿಸಿ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ನಡೆಸುವ ಆಂತರಿಕ ಯುದ್ಧ. ಈ ಕಾರ್ಯಾಚರಣೆ ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿರುತ್ತದೆ. ಜೈಶ್ರೀರಾಮ್ ಘೋಷಣೆ ಕೂಗಿಲ್ಲದ ಕಾರಣಕ್ಕೆ ಜಾರ್ಖಂಡ್‍ನಲ್ಲಿ ಯುವಕನ ಹತ್ಯೆಯಾಗಿದೆ. ಜಾರ್ಖಂಡ್‍ನ ಮುಸ್ಲಿಂ ಶಾಸಕರೊಬ್ಬರಿಗೆ ಈ ಘೋಷಣೆ ಕೂಗಲು ಒತ್ತಾಯಿಸುವ ವಿಡಿಯೋ ವೈರಲ್ ಆಗಿದೆ. ಕಲ್ಕತ್ತದಲ್ಲಿ ಶಿಕ್ಷಕರೊಬ್ಬರನ್ನು ರೈಲು ಪ್ರಯಾಣದಲ್ಲಿ ಹೀಗೆ ಪೀಡಿಸಲಾಗಿದೆ. ವರದಿಯಾಗಿರುವ ಘಟನೆಗಳನ್ನು ಗಮನಿಸಿದರೆ ದೇಶವೀಗ ಕುದಿಯುತ್ತಿದೆ. ದೇವರು ಧರ್ಮ ಎಂಬ ಜೀವಪ್ರೇಮದ ಸಂಕೇತಗಳನ್ನು ದ್ವೇಷದ ಕಾರಣವಾಗಿ ಬದಲಿಸುವುದು ಎಂದರೆ ಜೀವಪೋಷಕ ಜಲವನ್ನು ವಿನಾಶಕ್ಕೆ ಉದ್ದೀಪಿಸಿದಂತೆ.

ಈ ಉನ್ಮತ್ತತೆ ಎಳೆಎಳೆಯ ಯುವಕರ ಬೆನ್ನಿನ ಮೇಲೆ ‘. . . . .ಹುಲಿ ಮುಟ್ಟಿದರೆ ಬಲಿ’ ಎಂಬ ಹಿಂಸಾಶಾಸನವಾಗಿ ರಾರಾಜಿಸುತ್ತಿದೆ. ಇಂತಹ ಸಂದರ್ಭಗಳನ್ನು ತಹಬಂದಿಗೆ ತರಬೇಕಾದ ನಿಷ್ಠುರ ಕಾನೂನು ರಕ್ಷಣೆಯೂ ಕಾಣುತ್ತಿಲ್ಲ. ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ 15 ವರ್ಷದ ಬಾಲಕ ಇದೇ ಹಿಂಸೆಯಿಂದ ಆಸ್ಪತ್ರೆ ಸೇರಿ ಪೊಲೀಸರು ಬಾಲಕನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬಾಲಕನ ಮಾತುಗಳು ಆಸ್ಪತ್ರೆಯ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಆದರೆ ಪೊಲೀಸರು ‘ಬಾಲಕ ವ್ಯತಿರಿಕ್ತ ಹೇಳಿಕೆಗಳನ್ನು ಕೊಡುತ್ತಿದ್ದಾನೆ. ಅವನೂ ಅವನ ತಾಯಿಯೂ ಒತ್ತಡಕ್ಕೆ ಮಣಿಯುತ್ತಿದ್ದಾರೆ’ ಎನ್ನುತ್ತಿದ್ದಾರೆ. ಪೊಲೀಸರ ಈ ಪಕ್ಷಪಾತ ವರ್ತನೆಯ ಕಾರಣಗಳು ಸ್ಪಷ್ಟ. ಅವರು ಆರೋಪಿಗಳ ರಕ್ಷಕರಾಗಿರುವ ಪ್ರಭುತ್ವದ ಪರವಾಗಿರಲು ಯತ್ನಿಸುತ್ತಾರೆ. ಇಂತಹ ಘಟನೆಗಳು ಯಾವ ದೇಶದ ಆಂತರಿಕ ವಿಕಾಸಕ್ಕೂ ತಕ್ಕುದಲ್ಲ. ಆದರೇನು? ಪ್ರಜಾಪ್ರಭುತ್ವವನ್ನೇ ಆರಾಣೆ-ಬಾರಾಣೆಗೆ ಮಾರಿಕೊಳ್ಳಲು ನಿಂತ ಮೇಲೆ ಅದರ ಘನತೆಯ ಮಾತೇನು?

ನಾವೀಗ ಚಲಾವಣೆಗೆ ತಂದುಕೊಂಡಿರುವುದು ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು. ಇದರಲ್ಲಿ ಪ್ರಜಾಪ್ರಭುತ್ವದ ಆಶಯಗಳು ಕ್ವಚಿತ್ತಾಗಿ ಆಕಸ್ಮಿಕವಾಗಿ ನಡೆಯುತ್ತವೆ. ಬಂಡವಾಳಶಾಹಿ ಹಿತಾಸಕ್ತಿಗಳೇ ಕಾರ್ಯರೂಪದಲ್ಲಿರುತ್ತವೆ. ನಮ್ಮ ಚುನಾವಣೆಗಳು ಬಹುಕೋಟಿ ಹೂಡಿಕೆಯ ಉದ್ಯಮವಾಗಿದೆ. ನಮ್ಮ ಸಂಸತ್ತುಗಳಲ್ಲಿ ಪ್ರವೇಶ ಪಡೆಯುವವರು ಕೋಟ್ಯಾಧಿಪತಿಗಳೂ, ಕ್ರಿಮಿನಲ್ ಹಿನ್ನೆಲೆಯವರೂ ಆಗಿರುವುದನ್ನು ಸಹಜ ಎಂದು ಒಪ್ಪಿಕೊಳ್ಳುತ್ತಿದ್ದೇವೆ. ಬಂಡವಾಳಪರ ರಾಜಕಾರಣ ಉಗ್ರ ಬಲಪಂಥೀಯ ರಾಷ್ಟ್ರೀಯವಾದವನ್ನು ಬೆಳೆಸುತ್ತದೆ. ಸಾದತ್ ಹಸನ್ ಮಾಂಟೋ ಕಥೆ ‘ಕಾರ್ಯಾಚರಣೆ’ ಈ ಮತೀಯ ಉನ್ಮಾದ ಮತ್ತು ಬಂಡವಾಳೋದ್ಯಮದ ಬಿಗಿತವನ್ನು ಹೇಳುತ್ತದೆ. ಈ ಕಥೆ ಹೀಗಿದೆ ‘ರಾತ್ರಿಯೆಲ್ಲ ಆ ಓಣಿ ಬೆಂಕಿಯಲ್ಲಿ ಬೆಂದುಹೋಯಿತು. ಒಂದು ಅಂಗಡಿ ಸುಡದೇ ಉಳಿದಿತ್ತು. ಬೆಳಗ್ಗೆ ಅಂಗಡಿಯ ಮುಂದಿನ ಬೋರ್ಡಿನಲ್ಲಿ ಇಲ್ಲಿ ಮನೆ ರಿಪೇರಿಯ ಸಾಮಗ್ರಿಗಳು ಮಾರಾಟಕ್ಕಿದೆ ಎಂದು ಬರೆದಿತ್ತು.’ ಮತೀಯ ಹಿಂಸೆ ಮತ್ತು ಬಂಡವಾಳದ ಬೆರಕೆಯನ್ನು ಇನ್ನೂ ಸಂಕೀರ್ಣ ರೂಪಕದಲ್ಲಿಡಲು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಉಸಿರುಗಟ್ಟುತ್ತದೆ. ‘ಜೈಶ್ರೀರಾಮ್’ ಘೋಷಣೆಯನ್ನೂ ಭಾರತದಲ್ಲಿ ಕೂಗದೆ ಪಾಕಿಸ್ತಾನದಲ್ಲಿ ಕೂಗಲು ಸಾಧ್ಯವೇ? ಎಂದು ದೇಶದ ಗೃಹಮಂತ್ರಿಗಳು ಹೇಳಲು ಸಾಧ್ಯವಾಗುತ್ತದೆ.

ವಾಲ್ಮೀಕಿ ಹೇಳುವ ರಾಮಕಥೆಯೊಂದು ಹೀಗಿದೆ. ‘ರಾಮ ಸೀತೆಯರು ವನವಾಸದ ಸೌಖ್ಯದಲ್ಲಿದ್ದ ಕಾಲ. ಅರೆ ಸಂಜೆ ಕಲ್ಲು ಬಂಡೆಯ ಮೇಲೆ ಕುಳಿತು ಹರಟೆ. ರಾಮಧನಸ್ಸು ನೆಲಕ್ಕೆ ಚುಚ್ಚಿತ್ತು. ಎದ್ದು ಹೊರಟು ಬಿಲ್ಲು ಎತ್ತಿದರೆ, ಬಿಲ್ಲಿನ ಮೊನೆಗೆ ಚುಚ್ಚಿದ್ದ ಮಂಡೂಕ ಜಟ್ಟಿಯಾಗಿ ವಿಲಗೂಡುತ್ತಿತ್ತು. ಸೀತೆ ಗಾಬರಿಯಿಂದ ಕೇಳಿದಳಂತೆ ಯಾಕೆ ಸುಮ್ಮನಿದ್ದೆ? ಕೂಗಬಾರದೆ? ಮಂಡೂಕ ವಿಷಾದದಿಂದ ಉಸುರಿತಂತೆ. ಯಾರನ್ನು ಕೂಗಲಿ? ರಾಮಧನಸ್ಸೇ ನಟ್ಟಿರುವಾಗ?’ ಈ ಘಟನೆ ಸೀತೆಗೆ ಅವಳ ಮುಂದಿನ ದಿನಗಳಲ್ಲಿ ಪದೇಪದೇ ನೆನಪಾಗುತ್ತದೆ. ರಾಮನನ್ನು ಪ್ರೀತಿಸಿದ ಭಾರತೀಯ ಮನಸ್ಸೀಗ ಈ ಸ್ಥಿತಿಯಲ್ಲಿಯೇ ಇದೆಯೇ?

ಇದೀಗ ಪ್ರತಿರೋಧವನ್ನು ಉಸುರುವುದೂ ಅಪರಾಧವಾಗಿದೆ. ‘ಜೈರಾಮ್ ಘೋಷಣೆ ಯುದ್ಧದ ಘೋಷಣೆಯಂತೆ ಬಳಕೆಯಾಗುತ್ತಿದೆ. ರಾಮನ ಹೆಸರು ಅಪವಿತ್ರಗೊಳ್ಳುತ್ತಿದೆ’ ಎಂದು ದೇಶದ 49 ಚಿಂತಕರು, ಸೃಜನಶೀಲರು ಪ್ರಧಾನಮಂತ್ರಿಯವರಿಗೊಂದು ಪತ್ರ ಬರೆದರು. ಅದರೀಗ ಅವರ ಕಳಕಳಿಯನ್ನೇ ತಪ್ಪೆಂದು ಸಾಧಿಸುವ ಪ್ರಯತ್ನ ನಡೆಯುತ್ತಿದೆ. 62 ಸೆಲೆಬ್ರಿಟಿಗಳಿಂದ ‘ಈ ಪತ್ರ ದೇಶದ್ರೋಹ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಎಂದು ಮರುಪತ್ರ ಹೋಯಿತು. ಇದರ ಆಧಾರದಿಂದ ಬಿಹಾರದ ಕೋರ್ಟಿನಲ್ಲಿ ಪ್ರಕರಣ ದಾಖಲಿಸಲಾಯಿತು. ದೇಶಪ್ರೇಮದ ನಿಜವಾದ ಆಯಾಮವನ್ನು ದ್ರೋಹವೆಂದು ತಿರುಚುವ ಸ್ಥಿತಿಯಿದು.

ಕೇರಳದ ಬಿಜೆಪಿಯವರು ತಮ್ಮ ನಾಡಿನ ಹೆಮ್ಮೆಯಾದ ಪದ್ಮವಿಭೂಷಣ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಆಡೂರರಿಗೆ ಭಾರತ ಬಿಟ್ಟು ಚಂದ್ರಗ್ರಹಕ್ಕೆ ಹೋಗುವಂತೆ ಹೀನಾಯಿಸಿದರು. ಪಶ್ಚಿಮ ಬಂಗಾಳದಲ್ಲಿ ನಟ ಕೌಶಿಕ್ ಸೇನರಿಗೆ ಜೀವಬೆದರಿಕೆಯ ಕರೆಗಳು ಬಂದವು. ಏನಾಗುತ್ತಿದೆ ನಮ್ಮ ದೇಶಕ್ಕೆ? ರಾಷ್ಟ್ರಧ್ವಜದ ಕೆಳಗೆ ನಿಂತು ಜನಗಣಮನ ಹಾಡುವಾಗ ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ. ಈ ದುರಂತದಲ್ಲಿ ನನ್ನ ಪಾಲೆಷ್ಟು?

ಯಾವ ವ್ಯಕ್ತಿಗೂ ಯಾವ ನೆಪದಿಂದಲೂ ಇನ್ನೊಬ್ಬರ ವ್ಯಕ್ತಿ ಸ್ವಾತಂತ್ರ್ಯವನ್ನು ಅಪಹರಿಸುವ ಹಕ್ಕಿಲ್ಲ – ಎಂದಿದ್ದರು ಶಿವರಾಮ ಕಾರಂತರು. ಬೇಂದ್ರೆಯವರು ಓರಿಯೆಂಟಲ್ ಹಿಸ್ಟರಿಯ ವಿರುದ್ಧ ಜನಕಥನಕ್ಕೆ ಕಿವಿಗೊಡಿ ಎಂದಿದ್ದರು.
ಭರತಖಂಡ ಬದನಿಕಾಯಿ,
ಭರತಾ ಮಾಡಬ್ಯಾಡ ತಮ್ಮಾ
ಸುರತದ ಕಲಹ ಮೆತ್ತಬ್ಯಾಡ,
ಒಮ್ಮನವಿರದೆ ನಮ್ಮ ನಿಮ್ಮ
ಎಂದು ತಿಳಿಸಿದ್ದರು.

ನವೋದಯದ ಸಾಹಿತ್ಯದಲ್ಲಿ ದೇಶಪ್ರೇಮ ತೊಟ್ಟಿಕ್ಕುತ್ತದೆ. ದೇಶವಿಭಜನೆಯ ಹಿಂಸೆಯಲ್ಲಿ ದೇಶಪ್ರೇಮದ ಬೆಳಕಿನ ಕಿರಣದ ಶೋಧನೆಯಿದೆ. ದೇಶಪ್ರೇಮ ಮತ್ತು ಮತೀಯ ಉನ್ಮಾದಗಳು ಪರಸ್ಪರ ವಿಮುಖವಾದದೆಂಬ ತಿಳಿವಿದ್ದ ಕಾಲವದು. ಆದರೀಗ ದೇಶಪ್ರೇಮವು ಉನ್ಮಾದವನ್ನು ಉದ್ದೀಪಿಸುವ ಸರಕಾಗಿದೆ. ಅದರೊಳಗಿದ್ದ ಮತಧರ್ಮ ಪ್ರೇಮವು ಚರ್ಮಕಿತ್ತು ಹೊರಗಿಣುಕುತ್ತಿದೆ. ರಾಷ್ಟ್ರಭಕ್ತಿ–ರಾಷ್ಟ್ರ ಚಾರಿತ್ರ್ಯದ ವಿಷಯದಲ್ಲಿ ತಪ್ಪು ಕಲಿತು, ತಪ್ಪು ಬೆಳೆಸಿ, ತಪ್ಪು ವಿಜೃಂಭಿಸುತ್ತಿರುವ ವರ್ತಮಾನವಿದು ಕವಿ ಆರ್.ವಿ.ಭಂಡಾರಿಯವರ ‘ಇತಿಹಾಸ’ ಪದ್ಯ ನೆನಪಾಗುತ್ತಿದೆ.
ನೇಗಿಲ ಮೊನೆಯಿಂದ ಇತಿಹಾಸ ಕೊರೆಯಲ್ಪಟ್ಟಿತು
ಕಿರೀಟದ ವಜ್ರದ ಮೊನೆಯಿಂದ ಎಂದು ಕಲಿಸಿದರು
ಗೆಯ್ಮೆಯ ಕೈಯಿಂದ ಇತಿಹಾಸ ನಿರ್ಮಾಣವಾಯಿತು
ಆದರೆ ಪುರೋಹಿತರ ಮಂತ್ರದಿಂದ ಎಂದು ಕಲಿಸಿದರು.
ನಮ್ಮನ್ನು ತಪ್ಪಾಗಿ ಕಲಿಸಿದ ಪಾಠಗಳಿಂದ ಬಿಡುಗಡೆಗೊಂಡು, ನಿಜದ ಬೆಳಕಿನಲ್ಲಿ ಇತಿಹಾಸ -ವರ್ತಮಾನಗಳನ್ನು ಕಾಣುವ, ಸತ್ಯದ ವಿಷದ ಬಟ್ಟಲುಗಳಲ್ಲಿ ನಮ್ಮ ಪಾಲೂ ಇರಲಿ ಎಂದು ಧ್ವಜಕ್ಕೆ ನಮಿಸುವಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...