Homeಕರ್ನಾಟಕಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು

ಧರ್ಮ ಮತ್ತು ಹಿಂದುತ್ವ ಪ್ರತಿಪಾದಕರು

- Advertisement -
- Advertisement -

ನೂರರ ನೋಟ- 40

| ಎಚ್.ಎಸ್ ದೊರೆಸ್ವಾಮಿ |

ಹಿಂದುತ್ವ ಪ್ರತಿಪಾದಕ ಉತ್ತರ ಪ್ರದೇಶದ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲೆಯ ತಲೆಕೆಟ್ಟ ಹಿಂದುತ್ವ ಪ್ರತಿಪಾದಕರು ಗೋವಿನ ಹೆಸರಲ್ಲಿ ಮತೀಯ ದ್ವೇಷ ಸಾಧಿಸುವುದಕ್ಕಾಗಿ ಆಗಾಗ ಕೋಮುದಂಗೆ ಮಾಡಿಸುತ್ತಾರೆ; ಕೊಲೆ ಆಗುವಂತೆ ಮಾಡುತ್ತಾರೆ. ‘ಧರ್ಮವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಧರ್ಮೋರಕ್ಷತಿ ರಕ್ಷಿತಃ ಧರ್ಮವನ್ನು ರಕ್ಷಿಸುವವರನ್ನು ಧರ್ಮ ಕಾಪಾಡುತ್ತದೆ. ಆದ್ದರಿಂದ ಧರ್ಮವನ್ನು ರಕ್ಷಿಸಲು ಹೋರಾಡಬೇಕು. ಧರ್ಮಕ್ಕೆ ಹೋರಾಡದಿದ್ದರೆ ನಮ್ಮ ಸಮಾಜ ಎಲ್ಲಿ ಉಳಿಯುತ್ತದೆ’ ಎಂದು ಹಿಂದೂ ಮತಾಂಧರು, ಮುಸ್ಲಿಂ ಮತಾಂಧರು ವಾದಿಸುತ್ತಾರೆ.

ಈ ಧರ್ಮಾಂಧರಿಗೆ ಧರ್ಮ ರಕ್ಷಣೆ ತಮ್ಮ ಕರ್ತವ್ಯ ಎಂದು ಅನಿಸಿದಾಗ ಗೂಂಡಾಗಳನ್ನು ಸಾಕಿಕೊಳ್ಳುತ್ತಾರೆ. ಈ ಪಡೆ ಶಾಂತಿಕಾಲದಲ್ಲಿ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುವುದರಲ್ಲಿ ತೊಡಗುತ್ತಾರೆ ಮತ್ತು ಹೋರಾಡುವ ಸಂದರ್ಭ ಬಂದಾಗ ತಮ್ಮ ನಿಲುವನ್ನು ಒಪ್ಪದ ಜನರ ಮೇಲೆ ಬಿದ್ದು ಅವರನ್ನು ಕೊಲೆಮಾಡುವರು. ಹಣಕ್ಕಾಗಿ ಕೊಲೆಮಾಡಲು ಸುಪಾರಿ ಸ್ವೀಕರಿಸುವವರಿಗೂ ಈ ಮತಾಂಧರು ಸಾಕಿಕೊಂಡಿರುವ ಗೂಂಡಾಗಳಿಗೂ ಏನು ವ್ಯತ್ಯಾಸ? ಧರ್ಮಕ್ಕೂ ಈ ಗೂಂಡಾಗಳಿಗೂ ಯಾವ ನಂಟು? ಗೂಂಡಾಗಳಿಗೊಂದು ಧರ್ಮವಿದೆಯೇ? ಸಿದ್ಧಾಂತವಿದೆಯೇ? ಹಿಂದುತ್ವ ಪ್ರತಿಪಾದಕರು ತಾವೇ ಗೂಂಡಾಗಳಾಗಿರುವುದರಿಂದ ಸಂದರ್ಭ ಸಿಕ್ಕರೆ ಇವರು ಸಮಸ್ತ ಅಧಿಕಾರವನ್ನು ಕರವಶ ಮಾಡಿಕೊಂಡು ವಿಜೃಂಭಿಸುವರು. ತಾತ್ಪರ್ಯವಿಷ್ಟೇ. ಯಾರು ಧರ್ಮ ರಕ್ಷಣೆಗಾಗಿ ಗೂಂಡಾಗಳನ್ನು ಬೆಳೆಸುವರೋ-ಬಳಸುವರೋ ಅವರು ಧರ್ಮವನ್ನು ಹೇಗೆ ಪ್ರತಿಪಾದಿಸುತ್ತಾರೆ?

ಭೀಮನ ಗದೆಯಾಗಲೀ, ಅರ್ಜುನನ ಗಾಂಡೀವವಾಗಲೀ ಧರ್ಮವನ್ನು ರಕ್ಷಿಸುವ ಸಾಧನವಾಗಲಾರದು. ಧರ್ಮದಿಂದ ನಡೆದುಕೊಂಡಿದ್ದರಿಂದ ಅವರು ಹೊತ್ತಿದ್ದ ಅಯುಧಗಳಿಗೆ ಕೀರ್ತಿ ಬಂತು. ಹಾಗಿಲ್ಲವಾದರೆ ಭೀಮ ಅರ್ಜುನರು ಕೊಲೆಗಡುಕರು ಅನ್ನಿಸಿಕೊಳ್ಳುತ್ತಿದ್ದರು.

ಹಿಂದುತ್ವ ಪ್ರತಿಪಾದಕರು ಯಾರ ಕೈಯಲ್ಲಿ ಗದೆ ಇದೆಯೋ ಅವರಿಗೇ ಜಯ ಎಂದು ಭಾವಿಸುತ್ತಾರೆ. ಧರ್ಮ ಅವರಿಗೆ ಒಂದು ಕೋಣವಿದ್ದಂತೆ. ಯಾರು ಅಪಮಾರ್ಗದಲ್ಲಿ ಗೆಲ್ಲುವರೋ ಅವರು ಧರ್ಮಿಷ್ಟರು, ಅವರದು ಕೋಣ. ಧರ್ಮದ ರಕ್ಷಣೆ ಎಂದರೆ ಧರ್ಮಿಷ್ಟರಾಗಿ ನಡೆದುಕೊಳ್ಳುವುದು.

ಹಿಂದೂ ಮತಾಂಧರು, ಮುಸ್ಲಿಮ್ ಮತಾಂಧರು, ಕ್ರಿಶ್ಚಿಯನ್ ಮತಾಂಧರು ಧರ್ಮ ಎಂದರೆ, ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಧರ್ಮ ಎಂದು ಅರ್ಥೈಸುತ್ತಾರೆ. ಇವೆಲ್ಲ ಹೊಡೆದಾಡುವ ಧರ್ಮಗಳು. ಬಡಿದಾಡುವ ಧರ್ಮಗಳು ಧರ್ಮವೇ ಅಲ್ಲ. ಯಾವ ಧರ್ಮವು ಪರಸ್ಪರ ಹೊಡೆದಾಡಲು ಹೇಳಿಲ್ಲ. ಶಾಂತಿಯನ್ನು ಬೋಧಿಸುತ್ತದೆ. ಆದರೆ ಈ ಧರ್ಮಾಂಧರು ಧರ್ಮವನ್ನು ಬಳಸಿಕೊಂಡು ಕೋಮು ಸಂಘರ್ಷದ ಕೆಲಸವನ್ನೇ ಮಾಡುತ್ತಾರೆ. ಕ್ರಿಶ್ಚಿಯನ್ ಜನಾಂಗದವರು ಮಾಡಿರುವಷ್ಟು ಯುದ್ಧವನ್ನು ಬೇರಾವ ಜನಾಂಗವೂ ಮಾಡಿಲ್ಲ.

ಎಲ್ಲಾ ಮತಗಳ ಹೊಂದಾಣಿಕೆಯೇ ಧರ್ಮ. ಪರಸ್ಪರ ಬಡಿದಾಡುವ ಧರ್ಮ ಧರ್ಮವೇ ಅಲ್ಲ. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಮುಂತಾದ ಎಲ್ಲಾ ಧರ್ಮಗಳ ಅನುಯಾಯಿಗಳು ‘ಧರ್ಮ’ ಪದವನ್ನು ತಮ್ಮ ವಾದಕ್ಕೆ ಅನುಗುಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಸತ್ಯಂವದ, ಧರ್ಮಂಚರ ಎಂದು ನಮ್ಮ ಉಪನಿಷತ್ತು ಹೇಳುತ್ತದೆ. ಸತ್ಯವನ್ನು ನುಡಿ ಧರ್ಮವನ್ನು ಆಚರಣೆ ಮಾಡು ಎಂದು ಇದರ ಅರ್ಥ. ‘ಧರ್ಮ’ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಅದು ವಿಶ್ವ ಧರ್ಮವನ್ನು ಪ್ರತಿಪಾದಿಸುತ್ತದೆ. ಎಲ್ಲಾ ಧರ್ಮಗಳೂ ಅಂಗೀಕರಿಸಬೇಕಾದ ಧರ್ಮ ಅದು, ವಿಶ್ವಧರ್ಮ. ಯಾರನ್ನೂ ದ್ವೇಷಿಸಲು ಹೇಳುವುದಿಲ್ಲ. ಯಾವ ಧರ್ಮವನ್ನೂ ಅದು ಅಲ್ಲಗಳೆಯುವುದಿಲ್ಲ. ಧರ್ಮದ ಹೆಸರಿನಲ್ಲಿ ಇತರ ಧರ್ಮಗಳ ಮೇಲೆ ದಾಳಿಮಾಡಲು ದ್ವೇಷ ಬುದ್ಧಿಯಿಂದ ನಡೆದುಕೊಳ್ಳಲು ಹೇಳುವುದಿಲ್ಲ. ಶ್ರೀರಾಮಕೃಷ್ಣ ಪರಮಹಂಸರು ವಿಶ್ವ ಧರ್ಮ ಪರಿಪಾಲಕರು. ಎಲ್ಲಾ ಮತಗಳಲ್ಲಿರುವ ಉತ್ತಮ ವಿಚಾರಗಳನ್ನು ಹಿಂದೂ ಧರ್ಮ ಅಳವಡಿಸಿಕೊಳ್ಳಬೇಕೆಂದು ಅವರು ಬಯಸಿ, ಸರ್ವಧರ್ಮ ಸಮನ್ವಯದ ಮಾತನಾಡಿದ್ದರು. ಇತರ ಮತಗಳ ಸಂಸ್ಥಾಪಕರು ಪ್ರತಿಪಾದಿಸಿದ ಉತ್ತಮ ಅಂಶಗಳನ್ನು ಹಿಂದೂ ಧರ್ಮಕ್ಕೆ ಜೋಡಿಸಿದರು. ಹಿಂದೂ ಧರ್ಮದಲ್ಲಿ ಪ್ರತಿಪಾದಿಸದಿರುವ ಅನೇಕ ಒಳ್ಳೆಯ ಅಂಶಗಳು ಇತರ ಧರ್ಮಗಳಲ್ಲಿರುವುದನ್ನು ಅರಿತು ಅವನ್ನು ಹಿಂದೂ ಧರ್ಮಕ್ಕೆ ಅಳವಡಿಸಲು ಮುಂದಾದರು. ಪೂಜ್ಯ ವಿನೋಬಾ ಭಾವೆಯವರು ಬೈಬಲ್ ಕುರಾನ್‍ಗಳಲ್ಲಿರುವ ಮೌಲಿಕ ತತ್ವಗಳನ್ನು ಆಯ್ದು ಕಲೆ ಹಾಕಿ ‘ಎಸೆನ್ಸ್ ಆಫ್ ಇಸ್ಲಾಂ, ಎಸೆನ್ಸ್ ಆಫ್ ಕ್ರಿಶ್ಚಿಯಾನಿಟಿ’ ಶೀರ್ಷಿಕೆಯು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮತ ಧರ್ಮಗಳ ಹೊಂದಾಣಿಕೆಯ ಕೆಲಸ ಇದು.

ಹಿಂದೂ ಮತಾಂಧ ಸಂಸ್ಥೆಗಳವರು ಈ ಲೋಕ ಕಲ್ಯಾಣದ ಕೆಲಸ ಮಾಡುವ ಬದಲು, ಮತಧರ್ಮಗಳನ್ನು ಒಡೆಯುವ, ಆ ಮೂಲಕ ಮುಗ್ಧ ಹಿಂದೂಗಳ ಭಾವನೆಗಳನ್ನು ಕೆರಳಿಸಿ ಅನ್ಯ ಧರ್ಮೀಯರನ್ನು ಶತ್ರುಗಳಂತೆ ಕಾಣಲು ಕೈ ಜೋಡಿಸುತ್ತಾರೆ. ಕೃಷ್ಣ ಗೋಕುಲಕ್ಕೆ ಬೆಂಕಿ ಬಿದ್ದಾಗ ಗೋವರ್ಧನ ಪರ್ವತವನ್ನು ಮೇಲೆತ್ತಿ ಅದರ ತಳಗೆ ಗೋಕುಲದವರನ್ನೆಲ್ಲಾ ಇಟ್ಟು ಕಾಪಾಡಿದನಂತೆ. ಆದರೆ ಹಿಂದೂತ್ವ ಪ್ರತಿಪಾದಕರು ಸಮಾಜಕ್ಕೆ ಸಂದರ್ಭ ಒದಗಿದಾಗಲೆಲ್ಲ ಬೆಂಕಿ ಹಾಕುವ ತಯಾರಿಯಲ್ಲಿರುವವರೇ!

ಎಲ್ಲಾ ಮತ ಧರ್ಮಗಳಲ್ಲಿ ಕೆಲವು ಲೋಪ ದೋಷಗಳು ಇದ್ದೇ ಇವೆ. ಹಿಂದೂ ಧರ್ಮ ಇದಕ್ಕೆ ಹೊರತಲ್ಲ. ಹಿಂದೂ ಧರ್ಮದಲ್ಲಿ ಜಾತೀಯತೆ, ಶ್ರೇಣೀಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಹೆಣ್ಣಿನ ಬಗೆಗೆ ತಾರತಮ್ಯ, ಹೀಗೆ ಹತ್ತಾರು ಲೋಪದೋಷಗಳಿವೆ.

ಅದರ ಜೊತೆಗೆ ಹಿಂದೂ ಮತಾಂಧತೆ, ಅನ್ಯ ಧರ್ಮೀಯರ ವಿಚಾರದಲ್ಲಿ ಕ್ರೌರ್ಯ, ಅಸಹನೆ, ವೈಚಾರಿಕ ಭಿನ್ನಾಭಿಪ್ರಾಯ ಉಳ್ಳವರನ್ನು, ಹಿಂದುತ್ವ ಪ್ರತಿಪಾದಕರನ್ನು ಪ್ರಶ್ನಿಸುವವರನ್ನು ವ್ಯವಸ್ಥಿತವಾಗಿ ಕೊಲೆ ಮಾಡುವುದು, ಸೆರೆಮನೆಗೆ ದೂಡುವುದು, ಖಟ್ಲೆಗಳನ್ನು ಹಾಕುವುದು ಅವ್ಯಾಹತವಾಗಿ ನಡೆದಿದೆ. ಇಷ್ಟೆಲ್ಲಾ ಅನಾಹುತ ಹಿಂದುತ್ವ ಪ್ರತಿಪಾದಕರಿಂದ ಮೇಲಿಂದ ಮೇಲೆ ನಡೆಯುತ್ತಿದ್ದರೂ, ಪ್ರಧಾನಿ ಮೋದಿಯವರು ಒಂದು ಸಾರಿಯೂ ಈ ಕುರಿತು ಪ್ರಸ್ತಾಪಿಸಿದ್ದೇ ಇಲ್ಲ. ಇಷ್ಟೇ ಅಲ್ಲ, ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅವರೂ ಅಮಿತ್ ಷಾರವರು ಕೂಡಿಕೊಂಡು ವ್ಯವಸ್ಥಿತವಾಗಿ ಮುಸ್ಲಿಮರ ಸಾಲ್ಗೊಲೆ ಮಾಡಿಸಿದ್ದೂ ಜಗಜ್ಜಾಹೀರಾಗಿದೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಈ ಎಲ್ಲ ಪಿಡುಗುಗಳಿಂದ ಹಿಂದೂ ಮತವನ್ನು ಪಾರು ಮಾಡಲೇಬೇಕಾದ್ದು ಮತದಾರರ ಆದ್ಯ ಕರ್ತವ್ಯವಾಗಿದೆ. ಆಸ್ಟ್ರೇಲಿಯಾ ಪ್ರಜೆಯೊಬ್ಬ ನ್ಯೂಜಿಲೆಂಡಿನಲ್ಲಿ ನೌಕರಿ ಮಾಡುತ್ತಿದ್ದು, ಕಳೆದ ಶುಕ್ರವಾರ 2 ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 50 ಮುಸ್ಲಿಂ ಮುಗ್ಧರನ್ನು ಬಂದೂಕಿನಿಂದ ಹೊಡೆದು ಕೊಂದಿದ್ದಾನೆ. ಅವನು ಇವರನ್ನು ಏಕೆ ಕೊಂದನೆಂಬುದಕ್ಕೆ, ಬಿಳಿಯರಿಗೆ ಮಾತ್ರ ಈ ದೇಶ ಇರುವುದು ಎಂದು ಹೇಳಿದ್ದಾನೆ.

ಭಾರತದಲ್ಲಿ ಆರ್‍ಎಸ್‍ಎಸ್, ಬಿಜೆಪಿ, ಮೋದಿ ಹೇಳುವುದೂ ಇದನ್ನೇ. ಭಾರತ ಹಿಂದೂಗಳ ರಾಷ್ಟ್ರ, ಇಲ್ಲಿ ಬೇರೆಯವರಿಗೆ ಇರಲು ಅವಕಾಶವಿಲ್ಲ, ಇದ್ದರೂ ಅವರು 2ನೇ ದರ್ಜೆಯ ಪ್ರಜೆಗಳಾಗಿ ಇರಬೇಕು.

ಈ ವಿಚಿತ್ರ ನಿಲುವಿನ ಕೊಲೆಗಡುಕ ಜನ ಅಲ್ಲೊಬ್ಬರು ಇಲ್ಲೊಬ್ಬರು ಇದ್ದರೆ, ಭಾರತದಲ್ಲಿ ಇಂತಹ ತಲೆ ಕೆಟ್ಟವರ ಸಂಘಟನೆಗಳೇ ಇವೆ. ರಾಜಕೀಯದಲ್ಲಿ ವಿಷ ಸೇರಿಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...