Homeಕರ್ನಾಟಕಶ್ರದ್ಧಾಂಜಲಿ; ಕಾಮ್ರೆಡ್ ಲಿಂಗಪ್ಪ ಎಂಬ ಪ್ರತಿಭಟನೆಯ ದನಿ

ಶ್ರದ್ಧಾಂಜಲಿ; ಕಾಮ್ರೆಡ್ ಲಿಂಗಪ್ಪ ಎಂಬ ಪ್ರತಿಭಟನೆಯ ದನಿ

- Advertisement -
- Advertisement -

ಕಾಮ್ರೆಡ್ ಲಿಂಗಪ್ಪ ತೊಂಭತ್ತೆಂಟು ವರ್ಷ ತುಂಬು ಜೀವನ ನಡೆಸಿ ತೀರಿಕೊಂಡಿದ್ದಾರೆ. ಪ್ರತಿಭಟನೆಯ ದನಿಯೆಂದು ಶಿವಮೊಗ್ಗದ ಜನತೆ ಯಾವಾಗಲೂ ನೆನೆಸುವ ದನಿ ಈ ಲಿಂಗಪ್ಪನವರದಾಗಿತ್ತು.

ತುಮಕೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿ ಬಾಲ್ಯದಲ್ಲೇ ಬೊಂಬಾಯಿ ಸೇರಿಕೊಂಡು ಅಲ್ಲಿ ಹೋಟೆಲಿನಲ್ಲಿ ಕೆಲಸ ಮಾಡುತ್ತ, ಕಾರ್ಮಿಕ ಚಳವಳಿಗಳಲ್ಲಿ ಭಾಗವಹಿಸುತ್ತ ಬೆಳೆದ ಲಿಂಗಪ್ಪ ಟ್ರೇಡ್ ಯೂನಿಯನ್ ಲೀಡರಾದರು. ಆ ನಂತರ ಶಿವಮೊಗ್ಗಕ್ಕೆ ಬಂದು ಅಂದಿನ ಶಿವಮೊಗ್ಗದ ಲೀಡರುಗಳಾದ ಎಚ್ಚರಿಕೆ ನಾಗೇಂದ್ರಪ್ಪ, ಪುಟ್ಟಪ್ಪ, ಮಹೇಶ್ವರಪ್ಪ ಮುಂತಾದವರ ಜೊತೆ ಸೇರಿಕೊಂಡು ಹೋರಾಟಕ್ಕಿಳಿದರು. ಉಕ್ಕಿನ ದೇಹದ ಲಿಂಗಪ್ಪ ಕೆಂಪು ಟೋಪಿ, ಅದೇ ಬಣ್ಣದ ಬೂಟು ಸಾಕ್ಸು ಧರಿಸುತ್ತಿದ್ದರು; ತಾವು ಓಡಾಡುವ ಲೂನಾದ ಬಣ್ಣವೂ ಕೆಂಪು. ತೊಂಬತ್ತೆಂಟು ವರ್ಷವಾದರೂ ತಲೆಕೂದಲಿಗೆ ಡೈಯಿಂಗ್ ಮಾಡಿಕೊಂಡು ಸುತ್ತಾಡುತ್ತಿದ್ದರು. ಎಣ್ಣೆಗೆಂಪಿನ ಲಿಂಗಪ್ಪ ಆರಂಭದಲ್ಲಿ ಮಾಡಿಕೊಂಡ ಡೈಯಿಂಗ್ ಕಪ್ಪುಗಟ್ಟುತ್ತಾ ವಿಭಿನ್ನವಾಗಿ ಕಾಣುತ್ತಿದ್ದರು. ಇವರ ತರತರದ ಫೋಟೋಗಳು ಕಡಿದಾಳು ಶಾಮಣ್ಣನವರ ಬಳಿ ಇವೆ.

ಶಾಮಣ್ಣನವರು ಮತ್ತು ಲಿಂಗಪ್ಪ ಗೆಳೆಯರು. ಲಂಕೇಶ್ ಪತ್ರಿಕೆ ಹೊರಬಂದ ಆರಂಭದಲ್ಲಿ ಅದರ ಪ್ರತಿಭಟನೆಯ ದನಿಗೆ ಮಾರುಹೋದ ಲಿಂಗಪ್ಪ ತಮ್ಮ ಪ್ರಾಂತ್ಯದವರೇ ಆದ ಲಂಕೇಶರನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಲು ಬಸವನಗುಡಿಯಲ್ಲಿದ್ದ ಪತ್ರಿಕೆ ಆಫೀಸಿಗೆ ಹೋದರು. ಲಂಕೇಶ್ ಆಫೀಸಿನ ಬಾಗಿಲಲ್ಲಿದ್ದ ಹುಡುಗನಿಗೆ “ಹೋಗಿ ಲಂಕೇಶ್‌ಗೇಳು, ಶಿವಮೊಗ್ಗದಿಂದ ಕಾಮ್ರೆಡ್ ಲಿಂಗಪ್ಪ ಬಂದವುರೆ ಅಂತ” ಎಂದು ಹೇಳಿಕಳಿಸಿದರು. ಆ ಹುಡುಗ ಮಾಹಿತಿ ತಲುಪಿಸಿದ ಕೂಡಲೇ ಲಂಕೇಶ್ “ಒಳಗಡೆ ಕಳಿಸಬೇಡ, ಈಗವುರು ನೋಡಕ್ಕಾಗಲ್ಲ ಅಂತ ಹೇಳು ಅಂದ್ರು”. ಆತ ಬಂದು ಹಾಗೇ ಒಪ್ಪಿಸಿದ. ಸಿಟ್ಟು ಬಂದ ಲಿಂಗಪ್ಪ, “ಓಹೋ ನೀನೇನು ಮಹಾ ಪತ್ರಕರ್ತನೋ, ನನ್ನನ್ನ ನೋಡಕ್ಕಾಗಲವ ನಿನಗೆ, ನಾನ್ಯಾರು ಅಂತ ಗೊತ್ತಿಲ್ಲ ನಿನಿಗೆ. ನಿನ್ನಂಥೋರ ಭಾಳ ಜನ ನೋಡಿದ್ದಿನಿ” ಎಂದು ಜೋರು ಗಂಟಲಿನಿಂದ ಕೂಗಾಡುತ್ತ ಬಂದರು. ಶಿವಮೊಗ್ಗಕ್ಕೆ ಬಂದವರು ಕ್ರಾಂತಿಭಗತ್ ಎಂಬ ಪತ್ರಿಕೆಯಲ್ಲಿ ಲಂಕೇಶರಿಗೆ ಜೋರು ಮಾಡಿ ಬಂದೆ ಎಂದು ಬರೆದುಕೊಂಡರು.

ಲಿಂಗಪ್ಪ ಪತ್ರಕರ್ತರಾಗಿದ್ದರು. ಸಾಮಾನ್ಯ ಜನರ ಸಮಸ್ಯೆ ಹಿಡಿದು ಜಿಲ್ಲಾಧಿಕಾರಿ ಕಚೇರಿ, ತಾಲೂಕೂ ಆಫೀಸು ತಿರುಗುತ್ತಿದ್ದರು. ತಾವು ಪ್ರಿಂಟ್ ಮಾಡಿದ ಪತ್ರಿಕೆಯನ್ನು ತಾವೇ ಹಂಚುತ್ತ ಅಧಿಕಾರಿಯ ಮುಂದೆ ಪತ್ರಿಕೆ ಎಸೆದು ಓದ್‌ಕಳಯ್ಯ ಎನ್ನುತ್ತಿದ್ದರು. ಶಿವಮೊಗ್ಗಕ್ಕೆ ಬಂದ ಎ.ಸಿ, ಡಿ.ಸಿ, ತಹಸೀಲ್ದಾರ್ ಯಾರೇ ಅಧಿಕಾರಿಗಳಿರಲಿ, ಯಾರನ್ನೇ ಮರೆತರೂ ಲಿಂಗಪ್ಪನನ್ನು ಮರೆತಿರಲಾರರು. ಏಕೆಂದರೆ ಅವರು ಒಳ್ಳೆಯವರಾಗಿದ್ದರೆ ಸರಿ, ಇಲ್ಲವಾದರೆ ಅವರ ಜನ್ಮ ಜಾಲಾಡಿರುತ್ತಿದ್ದರು. ಈ ತಹಸೀಲ್ದಾರನನ್ನ ವರ್ಗ ಮಾಡುಸ್ತಿನಿ, ಡಿ.ಸಿ ವಿರುದ್ಧ ತನಿಖೆಗೆ ಲೋಕಾಯುಕ್ತಕ್ಕೆ ಬರೆದಿದ್ದಿನಿ ಎಂದುಕೊಂಡು ಸುತ್ತುತ್ತಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ: ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ

ಜಿಲ್ಲೆಯ ಎಲ್ಲ ರಾಜಕಾರಣಿಗಳಿಗೂ ಕಾಮ್ರೆಡ್ ಲಿಂಗಪ್ಪ ಗೊತ್ತಿದ್ದ ವ್ಯಕ್ತಿ. ಅವರು ಪ್ರೆಸ್‌ಮೀಟಿಗೆ ಬಂದರಂತೂ ಲಿಂಗಪ್ಪನವರ ಪ್ರಶ್ನೆಗೆ ಉತ್ತರ ಕೊಡುವರಷ್ಟರಲ್ಲಿ ಉಳಿದ ಪತ್ರಕರ್ತರ ಪ್ರಶ್ನೆ ಹಾಗೇ ಉಳಿಯುತ್ತಿದ್ದವು. ಯಾವ ಮಂತ್ರಿಯ ಬಳಿ ಯಾವ ದೂರು ಹೇಳಬೇಕು, ಯಾವ ಅಧಿಕಾರಿಯ ಬಳಿ ಯಾವ ಸಮಸ್ಯೆ ಎತ್ತಬೇಕೆಂಬ ಅರಿವು ಲಿಂಗಪ್ಪನವರಿಗಿರಲಿಲ್ಲ. ಊರ ಚರಂಡಿಗಳ ವಿಷಯ, ಪಾರ್ಕುಗಳ ವಿಷಯ, ಸೋಮಾರಿ ಅಧಿಕಾರಿಗಳ ವಿಷಯ ಇವುಗಳು ಎಲ್ಲರನ್ನು ಪ್ರಶ್ನೆ ಮಾಡುವ ಸಂಗತಿಗಳಾಗಿದ್ದವು ಅವರಿಗೆ. ಬಂಗಾರಪ್ಪ, ಲಿಂಗಪ್ಪ ಬಂದ ಕೂಡಲೇ “ಹೇಳಿ ಲಿಂಗಪ್ಪ ನಿಮ್ಮ ಪ್ರಶ್ನೆಗಳು ಮುಗುದ ಮ್ಯಾಲೆ ಮಾತಾಡ್ತಿನಿ” ಎನ್ನುತ್ತಿದ್ದರು. ಪಟೇಲರು ಬಂದಾಗ, ಅವರು ಮುಖ್ಯಮಂತ್ರಿಯಾಗಿದ್ದರೂ ಲಿಂಗಪ್ಪನ ದೃಷ್ಟಿಯಲ್ಲಿ ಅವರು ಕೇವಲ ಪಟೇಲರಾಗಿದ್ದರು. ಆದ್ದರಿಂದ ಅವರ ಕೈಗೆ ಪತ್ರಿಕೆ ಕೊಟ್ಟ ಲಿಂಗಪ್ಪ ಅದನ್ನು ಓದಲು ಒತ್ತಾಯ ಮಾಡಿದರು. ಲಿಂಗಪ್ಪನವರನ್ನು ಪೂರ್ಣ ಅರ್ಥಮಾಡಿಕೊಂಡಿದ್ದ ಪಟೇಲರು ಪತ್ರಿಕೆ ಓದುವಂತೆ ನಟಿಸಿ “ಏ ಲಿಂಗ ಇದೇನಲೆ ಕನ್ನಡದ ಕೊಲೆ ಮಾಡ್ತಿಯಲ್ಲೊ ಕಾಗುಣಿತ ಕಲ್ತಗಳಲೆ” ಎಂದು ಗದರಿದರು. ಆಗ ಲಿಂಗಪ್ಪ ಏನೂ ಬೇಸರ ಮಾಡಿಕೊಳ್ಳದೆ, ಅದ್ಯಲ್ಲ ಕಾಮನ್, ಪತ್ರಿಕೆ ತಂದಾಗ ಪ್ರಿಂಟ್ ಮಿಸ್ಟಿಕ್ ಆಯ್ತದೆ, ವಿಷಯ ಮುಖ್ಯ ಎಂದಿದ್ದರು. ಯಾವುದೇ ಪ್ರೆಸ್ ಮೀಟಿಗೆ ಲಿಂಗಪ್ಪ ಬಂದರು ಅವರ ಪ್ರಶ್ನೆ ಮತ್ತು ಅವರು ಕೇಳಿಸಿಕೊಳ್ಳದ ಉತ್ತರದಿಂದ ಕೊನೆಯಾಗುತ್ತಿದ್ದವು. ಹಾಗಾಗಿ ಶಿವಮೊಗ್ಗದ ಪತ್ರಕರ್ತರಲ್ಲೇ ವಿಭಿನ್ನವಾಗುಳಿದ ಲಿಂಗಪ್ಪ ಒಂದರ್ಥದಲ್ಲಿ ಪತ್ರಕರ್ತರಷ್ಟೇ ಆಗಿರಲಿಲ್ಲ. ಅದೊಂದು ಜನಸಾಮಾನ್ಯರ ದೂರಿನ ದನಿಯಾಗಿತ್ತು.

ಯಾವ ರಾಜಕಾರಣಿಯನ್ನು ಎಂದೂ ಓಲೈಸಿದವರಲ್ಲ ಲಿಂಗಪ್ಪ. ಎಲ್ಲರಿಗೂ ಒಂದೇ ದೊಣ್ಣೆಯಿಂದ ಬೀಸುತ್ತಿದ್ದ ಅವರನ್ನು ಎಲ್ಲರೂ ಸಹಿಸಿಕೊಂಡು ಸಾಗಹಾಕುತ್ತಿದ್ದರು. ಲಿಂಗಪ್ಪ ಎಲ್ಲ ರಾಜಕಾರಣಿಗಳ ಬಳಿ ಕೂಗಾಡಿದರೂ ಕಾಗೋಡು ತಿಮ್ಮಪ್ಪನವರ ಎದುರು ಹೆಚ್ಚು ಕೆರಳಿ ಮಾತನಾಡುತ್ತಿರಲಿಲ್ಲ. ಒಮ್ಮೆ ಕೊಣಂದೂರಿನಲ್ಲಿ ತಿಮ್ಮಪ್ಪ ಗೋಪಾಲಗೌಡರನ್ನು ಕುರಿತು ಮಾತನಾಡುತ್ತಿದ್ದರು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಗೋಪಾಲಗೌಡರ ಕಟುಮಾತುಗಳಿಗೆ ಅಂಜಿ ಸರಿಯಾಗಿ ನಡೆದುಕೊಳ್ಳುತ್ತಿದ್ದರು ಎಂದರು. ಇದರಿಂದ ಸ್ಫೂರ್ತಿಗೊಂಡ ಲಿಂಗಪ್ಪ ಧಿಗ್ಗನೆದ್ದು “ಅದು ಸೋಷಲಿಸ್ಟರ ದನಿಗಿದ್ದ ಶಕ್ತಿ” ಎಂದರು. ತಿಮ್ಮಪ್ಪ ಲಿಂಗಪ್ಪನ ಕಡೆ ಕೈ ತೋರಿ “ಮಂಗ” ಎಂದರು. ಸಭೆ ಒಳಗೊಳಗೆ ನಕ್ಕಿತು. ಬಹುಶಃ ಅಂದಿನಿಂದ ಲಿಂಗಪ್ಪ ತಿಮ್ಮಪ್ಪರೆದುರು ತಮ್ಮ ಧ್ವನಿಯ ವ್ಯಾಲ್ಯೂಂ ಕಡಿಮೆ ಮಾಡಿಕೊಂಡರು.

ತೊಂಭತ್ತೆಂಟು ವರ್ಷವಾದರೂ ಗೋಪಾಳ ಬಡಾವಣೆಯಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತ, ನನ್ನ ಮನೆಯ ಸಾಲಿನ ನಾಲ್ಕನೆ ಮನೆಯಲ್ಲಿದ್ದ ತನ್ನ ಅನಾದಿಕಾಲದ ಗೆಳತಿಯ ಮನೆಗೆ ಬರುತ್ತಿದ್ದ ಲಿಂಗಪ್ಪನವರಿಂದ ಕನಿಷ್ಟ ಎರಡು ದಶಕ ತಪ್ಪಿಸಿಕೊಂಡು ತಿರುಗುತ್ತಿದ್ದೆ ನಾನು. ಅಕಸ್ಮಾತ್ ಸಿಕ್ಕರೆ ಲಿಂಗಪ್ಪನವರ ಸಾಹಸ ಕೇಳಿ ಮುಂದೆ ಹೋಗಬೇಕಿತ್ತು. ಹಿರಿಯ ಜೀವ ಮತ್ತು ಪತ್ರಕರ್ತನ ಮಾತನ್ನು ಕೇಳಿಸಿಕೊಳ್ಳಲೇಬೇಕಿತ್ತು. ಜಿಲ್ಲೆಯಲ್ಲಿ ಅವರು ಮುಂದೆ ತಂದ ರಾಜಕಾರಣಿಗಳು, ಕಲಾವಿದರು, ಕಾರ್ಪೊರೇಟರುಗಳು, ಪಾರ್ಕು, ಚರಂಡಿ, ಕಟ್ಟಡಗಳು, ಪ್ರೆಸ್ ಕಾಲೋನಿ ಇವುಗಳ ವಿಷಯವನ್ನು ಒಂದು ಸಾವಿರ ಬಾರಿಯಾದರೂ ಕೇಳಿದ್ದೇನೆ. ನನ್ನ ಮನೆಯ ಮುಂದಿದ್ದ ಜಾಗವನ್ನು ನೀಟಾದ ಪಾರ್ಕು ಮಾಡಿಸಿ ಅದರ ಉದ್ಘಾಟನೆಗೆ ಎಡೂರಪ್ಪನಿಂದ ಹಿಡಿದು ಊರಿನ ಮುನ್ಸಿಪಾಲಿಟಿ ಮೆಂಬರ್‌ವರೆಗೆ ಹೆಸರುಗಳನ್ನು ಉದ್ಘಾಟನಾ ಶಿಲೆಯ ಮೇಲೆ ಕೆತ್ತಿಸಿ ತಂದೇಬಿಟ್ಟರು. ಯಾವ ರಾಜಕಾರಣಿಯೂ ಬರಲಿಲ್ಲ. ಲಿಂಗಪ್ಪ ಅವಾಚ್ಯ ಮಾತುಗಳಿಂದ ಬೈದು ಗಾರೆಕೆಲಸದವರಿಂದ ಶಿಲಾಫಲಕ ನಿಲ್ಲಿಸಿ ಹೋದರು.

ಶಿವಮೊಗ್ಗದ ಸರಕಾರಿ ಯಂತ್ರ ಲಿಂಗಪ್ಪನವರ ದನಿಗೆ ಹೆದರುತ್ತಿತ್ತು. ಹಾಗಾಗಿ ಅವರು ಬಂದ ಕೂಡಲೇ ಕೆಲಸ ಮುಗಿಸಿ ಕಳುಹಿಸುತ್ತಿದ್ದರು. ಈ ಅವರ ಗುಣದ ಕಾರಣಕ್ಕಾಗಿಯೇ ದಿನ ಬೆಳಗಾಗುವುದರಲ್ಲಿ ಪಾರ್ಕು ರೆಡಿಯಾಗಿ ಅದಕ್ಕೆ ಲೈಟು, ಕಾರಂಜಿ ಮತ್ತು ವಾಕ್ ಮಾಡುವ ದಾರಿ ಎಲ್ಲ ರೆಡಿಯಾದವು. ಆ ಪಾರ್ಕಿಗೆ ಅವರ ಹೆಸರಿಡುವುದು ಸೂಕ್ತ. ಪ್ರತಿಭಟನೆಗಳಿಲ್ಲದಿದ್ದರೆ ಯಾವ ಕೆಲಸವನ್ನು ಮಾಡದೆ ಆರಾಮವಾಗಿರುವ ನಮ್ಮ ಸರ್ಕಾರಿ ಕರ್ಮಚಾರಿಗಳು ಲಿಂಗಪ್ಪನ ದನಿ ಮುಳುಗಿ ಹೋದ ಕಾರಣಕ್ಕೆ ನಿರುಮ್ಮಳವಾಗಿರಬಲ್ಲರು. ಹಾಲಿ ಶಿವಮೊಗ್ಗದ ಪತ್ರಕರ್ತರಿಗೆ ಹೋಲಿಸಿದರೆ ಎಂದೂ ಭ್ರಷ್ಟರಾಗದ ಲಿಂಗಪ್ಪ ಆ ಕಾರಣಕ್ಕಾಗಿಯೂ ಜೋರು ದನಿಯಲ್ಲಿ ಕೂಗಾಡುತ್ತಿದ್ದರು. ಇನ್ನ ಆ ಕೂಗು ಕೇಳಲಾರದು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...