Homeಕರ್ನಾಟಕಶ್ರದ್ಧಾಂಜಲಿ: ದುರಿತ ಕಾಲದ ಎಚ್ಚರದ ದನಿಯೊಂದು ಕರಗಿ...

ಶ್ರದ್ಧಾಂಜಲಿ: ದುರಿತ ಕಾಲದ ಎಚ್ಚರದ ದನಿಯೊಂದು ಕರಗಿ…

- Advertisement -
- Advertisement -

ಜಿ ರಾಜಶೇಖರ್‌ರನ್ನು ನಾನು ಯಾವತ್ತೂ ಭೇಟಿಯಾಗಿಲ್ಲ. ಅವಕಾಶ ಬರಲಿಲ್ಲ. ಅಥವಾ ಅವಕಾಶ ಮಾಡಿಕೊಳ್ಳಲಿಲ್ಲ. ಆದರೆ ಜಿ ರಾಜಶೇಖರ್ ಹತ್ತಿರ ಅನ್ನಿಸುತ್ತಿದ್ದರು. ಪರಿಚಿತರು ಅನ್ನಿಸುತ್ತಿತ್ತು. ಅವರ ಬಿಡಿ ಬರಹಗಳನ್ನು, ಲೇಖನಗಳನ್ನು ಓದಿಕೊಂಡ ನನಗೆ ಮತ್ತು ನನ್ನಂತಹ ಅನೇಕರಿಗೆ ಹೀಗೆ ಅನ್ನಿಸಿರುವುದರಲ್ಲಿ ಅಚ್ಚರಿಯೇನಾದರೂ ಉಂಟೆ. ಚೆ ಗುವೆರಾ ಹೇಳುತ್ತಾನಲ್ಲ, “ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಿನ್ನ ಎದೆ ಕಂಪಿಸಿದರೆ ನೀನು ನನ್ನ ಸಂಗಾತಿ”, ಹಾಗೇ ಅನ್ಯಾಯವೊ, ಅಹಿತಕರವಾದದ್ದೊ, ಜೀವವಿರೋಧಿಯಾದದ್ದೊ ನಡೆದಾಗ ಮಾತನಾಡುವವರು ನಮ್ಮದೆ ಮಾತನ್ನು ಮಾರ್ದನಿಸಿದಂತೆ ಇರುತ್ತದೆ ನೋಡಿ, ಹಾಗೇ ಅವರು ನಮ್ಮವರಾಗಿಬಿಡುತ್ತಾರೆ.

ಎಡಪಂಥೀಯ ಸಂಘಟನೆಯೊಳಗಿದ್ದು, ಅದರ ತಪ್ಪುಗಳನ್ನು ಕಟುವಾಗಿ ಟೀಕಿಸಬಲ್ಲವರಾಗಿದ್ದರು ಎಂಬುದೇ ಜಿಆರ್ ಬದ್ಧತೆ ಮತ್ತು ನ್ಯಾಯಕ್ಕೆ, ಸತ್ಯಕ್ಕೆ ಹೊರತಾದ ಚೌಕಟ್ಟುಗಳು ಅವರ ಬಳಿ ಸುಳಿಯಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಶಾಲೆಯ ಮೇಷ್ಟ್ರಾಗಿ, ವಿಮಾ ಸಂಸ್ಥೆಯ ಉದ್ಯೋಗಿಯಾಗಿ ಜನರೊಂದಿಗೆ ಬೆರೆತ ಜಿಆರ್ ಜೀವಪರ ಜೀವವಾಗಿ ಅಸಂಖ್ಯರ ಪ್ರೀತಿಗೆ ಪಾತ್ರರಾಗಿದ್ದನ್ನು ನಾನು ತಿಳಿದೆ.

ಅವರು ನಿಧನರಾದಾಗ ಫೇಸ್‌ಬುಕ್ಕಿನಲ್ಲಿ ಬಹಳಷ್ಟು ಮಂದಿ ಅವರನ್ನು ನೆನೆದು ತಮ್ಮ ನೆನಪು, ವಿದಾಯದ ಸಂಕಟಗಳನ್ನು ಹಂಚಿಕೊಂಡರು. ಕರಾವಳಿಯ ಕೋಮುವಾದದ ಬಗ್ಗೆ ಹಲವರು ಪ್ರಸ್ತಾಪಿಸಿದ್ದನ್ನು ಓದಿದೆ. ನನಗೂ ಜಿಆರ್ ಹೆಚ್ಚು ಪರಿಚಯವಾಗಿದ್ದು ಅದೇ ಕಾರಣಕ್ಕೆ. ದಕ್ಷಿಣ ಕನ್ನಡದವರೇ ಆದ ಹಿರಿಯ ಪತ್ರಕರ್ತರೊಂದಿಗೆ ಮಾತನಾಡುತ್ತಾ, ’ನೀವೂ ಕೋಮುವಾದದ ಬಗ್ಗೆ ಗಟ್ಟಿಯಾಗಿ ಮಾತನಾಡಿದಿರಿ. ಅವರೂ ಕೋಮುವಾದ ವಿರೋಧಿಸಿದವರು’ ಎಂದು ಮೆಲುಕು ಹಾಕಿದೆ.

ಕೋಮುವಾದದ ಬಗ್ಗೆ ಈಗಂತೂ ಮಾತನಾಡಿ ಅರಗಿಸಿಕೊಳ್ಳುವುದು ಸುಲಭವಲ್ಲ. ವ್ಯವಸ್ಥೆಯೇ ಬೇಟೆಗೆ ಸೀಳುನಾಯಿಗಳನ್ನು ಛೂ ಬಿಡುವಷ್ಟು ಪರಿಸ್ಥಿತಿ ಹದಗಟ್ಟಿದೆ. ಆದರೂ ಜಿಆರ್ ಕೋಮುವಾದ ಕುಲುಮೆಯಲ್ಲಿ ನಿಂತು ಕೆಂಡವನ್ನು ಆರಿಸುವ ಛಾತಿ ತೋರಿದರು.

ಕೋಮುವಾದದ ವಿರುದ್ಧ ಹೋರಾಡುತ್ತಾ, ಕೋಮುವಾದಕ್ಕೆ ಜೀವತೆತ್ತ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಕೊಡಿಸುವುದಕ್ಕೆ ಅವರು ಸದಾ ಓಡಾಡಿದ್ದನ್ನು ಕೇಳಿದೆ. ಅವರ ಕೋಮುವಾದದ ಹೋರಾಟ ಬಾಬ್ರಿ ಮಸೀದಿ ಧ್ವಂಸಕಾಲದಿಂದಲೂ ನಡೆಯುತ್ತಾ ಬಂದಿದೆ. ಇದೇ ಕಾರಣಕ್ಕೆ ಅವರು ಲಂಕೇಶ್ ಪತ್ರಿಕೆಗೆ ಬರೆಯುವುದಕ್ಕೂ ಶುರು ಮಾಡಿದ್ದು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕನ್ನಡದ ಬಹುತೇಕ ಬುದ್ಧಿಜೀವಿಗಳು, ಚಿಂತಕರು ಬಾಯಿಮುಚ್ಚಿಕೊಂಡಿದ್ದಾಗ, ಲಂಕೇಶ್ ದೇಶ ಒಡೆದ ಘಟನೆಯನ್ನು ಖಂಡಿಸಿದ್ದರು ಎಂಬ ಕಾರಣಕ್ಕೆ ಜಿಆರ್ ಅವರ ಪತ್ರಿಕೆಗೆ ಬರೆಯಲಾರಂಭಿಸಿದ್ದರಂತೆ.

ಲಂಕೇಶರಿಗೆ ಜಿಆರ್ ಎಂದರೆ ಅಷ್ಟೇ ಪ್ರೀತಿ. “ನಮ್ಮ ರಾಜಶೇಖರ ಎಷ್ಟು ಒಳ್ಳೆಯ ವಿಚಾರವಂತ. ನಿಷ್ಠುರತೆ ಮತ್ತು ಬದುಕಿನ ಬಗ್ಗೆ ಪ್ರೀತಿಯನ್ನು ಇಟ್ಟುಕೊಂಡ ಆತ ಶ್ರೇಷ್ಠ ಚಿಂತನಕಾರ ಎನ್ನುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ” ಎಂದು ಸ್ವತಃ ಲಂಕೇಶ್ ಹೇಳಿದ್ದರಂತೆ. ಆದರೆ ಅದೇ ಲಂಕೇಶ್ ಅವರನ್ನು ಟೀಕಿಸುವುದಕ್ಕೆ ಅವರ ಸ್ನೇಹ ಅಡ್ಡಿಪಡಿಸಿರಲಿಲ್ಲ. ಲಂಕೇಶ್ ಪ್ರಗತಿರಂಗ ಎಂಬ ಪಕ್ಷ ಕಟ್ಟಿ ರಾಜಕೀಯಕ್ಕೆ ಇಳಿದಾಗ ಅದರ ಪ್ರಣಾಳಿಕೆಯನ್ನು ಗಂಭೀರವಾಗಿ ವಿಮರ್ಶಿಸಿದ್ದರು ಜಿಆರ್.

ಸದಾ ಕಾಲ ತಮ್ಮನ್ನು ಕೇಳಿಕೊಳ್ಳುತ್ತಾ, ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸುತ್ತಾ ತತ್ವಕ್ಕಿಂತ ಜೀವಕ್ಕೆ ಬೆಲೆ ಕಟ್ಟಿ ಬದುಕಿದವರು ಜಿಆರ್ ಎಂಬುದನ್ನು ಅವರ ಬದುಕೇ ಹೇಳುತ್ತದೆ. ಕೋಮುವಾದದ ವಿರುದ್ಧದ ಹೋರಾಟದ ಜೊತೆಜೊತೆಗೇ ಅವರು ಪ್ರಭುತ್ವದ ಕ್ರೌರ್ಯಗಳನ್ನು ಟೀಕಿಸಿದ್ದಾರೆ. ಆದರೆ ಅವರ ಆತಂಕ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೋಮುವಾದದ ಕಡೆಗಿತ್ತು. ಈ ದೇಶದಲ್ಲಿ ಹಿಂದೂ ಕೋಮುವಾದ ಅಧಿಕಾರ ಹಿಡಿಯಬಹುದು ಎಂದು ಹೇಳಿದ್ದವರಲ್ಲಿ ಜಿಆರ್ ಕೂಡ ಒಬ್ಬರು. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಅಸಹಿಷ್ಣುತೆ ನುಸುಳಿದ್ದಾಗ ಕನಲಿ ಎಚ್ಚರಿಸಿದವರು. ಜಿಆರ್ ಗಟ್ಟಿಯಾಗಿ ಕೋಮುವಾದದ ಕುರಿತು ಮಾತನಾಡುತ್ತಾ ಬಂದಿದ್ದರಿಂದಲೇ ಜೀವಪರವಾಗಿ ಮಿಡಿಯುವ ಯುವಪಡೆಯೊಂದು ಬೆಳೆದು
ನಿಂತಿದ್ದು ಎನ್ನುತ್ತಿದ್ದರು ಅಲ್ಲಿಯ ಗೆಳೆಯರು.

ಎಪ್ಪತ್ತರ ದಶಕದಿಂದ ಬೀದಿ ಹೋರಾಟಗಳಲ್ಲಿ ಭಾಗವಹಿಸುತ್ತಾ ಅದೆಷ್ಟು ಮನಸ್ಸುಗಳನ್ನು ಹುರಿದುಂಬಿಸುತ್ತಾ ಬಂದಿದ್ದಾರೊ ಲೆಕ್ಕವಿಲ್ಲ. “ಸಂವಿಧಾನವನ್ನು ಬದಲಾಯಿಸಲು ಅದನ್ನೆನು ಜನಿವಾರವೆ?” ಎಂಬ ಘೋಷಣೆಯ ಪ್ಲಕಾರ್ಡ್ ಹಿಡಿದು ನಿಂತ ಜಿಆರ್ ಅವರ ಕುಬ್ಜ ದೇಹ ಎಷ್ಟು ಅಗಾಧ ಆತ್ಮಶಕ್ತಿಯನ್ನು ಹೊಂದಿತ್ತು ಮತ್ತು ಅದು ಎಚ್ಚರವಾಗಿ ಕರಾವಳಿಯನ್ನು, ಈ ನಾಡನ್ನು ಹೇಗೆ ಆವರಿಸಿಕೊಂಡಿರಬಹುದು ಎಂಬುದು ಸಾಮಾನ್ಯದ ಬೆರಗಲ್ಲ.

ಎಲ್ಲೇ ಏನೇ ಗಲಭೆ, ಅಹಿತಕರ ಘಟನೆಗಳು ನಡೆದರೆ ಅಲ್ಲಿಗೆ ಖುದ್ದು ಭೇಟಿ ನೀಡಿ ಸತ್ಯಶೋಧನೆ ನಡೆಸಿ ಸಿದ್ಧಪಡಿಸಿದ ವರದಿಗಳು ಬಹುಶಃ ಯಾವ ಪತ್ರಕರ್ತನೂ, ಸತ್ಯಶೋಧನಾ ತಂಡಗಳು ಮಾಡಿರಲಾರವು. ಸುರತ್ಕಲ್ ಗಲಭೆ, ಮಂಗಳೂರಿನ ಪಬ್‌ದಾಳಿ, ಹೋಮ್‌ಸ್ಟೇ ದಾಳಿ, ಕುಂದಾಪುರದಲ್ಲಿ ನಡೆದ ಗಲಭೆ, ಆದಿ ಉಡುಪಿಯ ಬೆತ್ತಲೆ ಪ್ರಕರಣ ಹೀಗೆ ಹಲವು ಘಟನೆಗಳ ಹಿಂದಿನ ಅಮಾನವೀಯ, ಜೀವವಿರೋಧಿ ಶಕ್ತಿ ಮತ್ತು ಉದ್ದೇಶಗಳನ್ನು ಬೆತ್ತಲು ಮಾಡಿದವರು ಜಿಆರ್.

ಸಾಮಾಜಿಕ, ರಾಜಕೀಯ ವಿದ್ಯಮಾನಗಳಿಗೆ ಸ್ಪಂದಿಸಿ ನೂರಾರು ಲೇಖನಗಳನ್ನು ಬರೆದು, ಬಹುತ್ವದ ಚಿಂತನೆಗಳ ಮೂಲಕ ಈ ದೇಶ, ಈ ನಾಡು ಎದುರಿಸಿದ ಹಿಂಸೆಯ ವಿಕೃತಿಗಳನ್ನು ಅಕ್ಷರಗಳ ರೂಪದಲ್ಲಿ ಎಚ್ಚರಿಸಿದವರು ಜಿಆರ್.

ನಿರಂಕುಶತೆ, ಮತಾಂಧತೆ ಹಲವು ರೂಪಗಳಲ್ಲಿ ಆವರಿಸಿಕೊಳ್ಳುತ್ತಿರುವಾಗ, ಜಿಆರ್ ಹಾಕಿಕೊಟ್ಟಿರುವ ಹೋರಾಟದ ಮಾರ್ಗದಲ್ಲಿ ಬೆಳಕಿದ್ದು, ಆ ಮಾರ್ಗದಲ್ಲಿ ನಡೆಯುವುದು ಅವರಿಗೆ ಸಲ್ಲಿಸುವ ನಿಜ ಶ್ರದ್ಧಾಂಜಲಿಯಾಗಬಹುದು.

ಎಸ್ ಕುಮಾರ್
ಸಂಪಾದಕರು, ಈದಿನ.ಕಾಂ


ಇದನ್ನೂ ಓದಿ: “ಜನಪ್ರಿಯತೆಯನ್ನು ನಾವು ಸಾಹಿತ್ಯಿಕ ಅರ್ಹತೆಯೆಂದು ಗೊಂದಲಿಸಬಾರದು” – ಜಿ. ರಾಜಶೇಖರ್ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...