Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

- Advertisement -
- Advertisement -

ಕನ್ನಡದಲ್ಲಿ ಕಲಾವಿದರು-ಲೇಖಕರು ಬರೆದ ಆತ್ಮಕಥೆಗಳು ಸಾಕಷ್ಟಿವೆ. ಆದರೆ ರಾಜಕಾರಣಿಗಳ ಆತ್ಮಕಥೆಗಳ ಸಂಖ್ಯೆ ಕಡಿಮೆ. ಇರುವ ಕೆಲವು ಆತ್ಮಕಥೆಗಳಾದರೂ ಆಧುನಿಕ ಕರ್ನಾಟಕದ ರಾಜಕೀಯ ಚರಿತ್ರೆಯ ಅಪೂರ್ವ ದಾಖಲೆಗಳಂತಿವೆ. ಇವುಗಳಲ್ಲಿ ಹಗರಿಬೊಮ್ಮನಹಳ್ಳಿಯ ಶಾಸಕರಾಗಿದ್ದ ಚನ್ನಬಸವನಗೌಡರ ‘ನಾನೊಬ್ಬ ಸಾರ್ವಜನಿಕ’ ಹಾಗೂ ಕರ್ನಾಟಕದ ಶಿಕ್ಷಣಮಂತ್ರಿಗಳಾಗಿದ್ದ ಬಿ.ಎ. ಮೊಹಿದೀನ್ ಅವರ ‘ನನ್ನೊಳಗಿನ ನಾನು’ ಸೇರಿವೆ.

ಇದೊಂದು ಹೇಳಿ ಬರೆಯಿಸಿದ ಆತ್ಮಕಥೆ. ಇದರಲ್ಲಿ ಲೇಖಕರ ವೈಯಕ್ತಿಕ, ವ್ಯಕ್ತಿತ್ವದ, ಕುಟುಂಬದ, ಬ್ಯಾರಿ ಸಮುದಾಯದ, ಕರಾವಳಿಯ ಹಾಗೂ ರಾಜ್ಯದ ರಾಜಕಾರಣದ ಸ್ತರಗಳಿವೆ. ಆತ್ಮಕಥೆಯ ಹೆಸರು ಸಾಂಕೇತಿಕವಾಗಿದೆ. ಬಾಳನ್ನೆಲ್ಲ ಸಾರ್ವಜನಿಕವಾಗಿ ಮತ್ತು ಬಹಿರ್ಮುಖಿಯಾಗಿ ಕಳೆದ ವ್ಯಕ್ತಿಯೊಬ್ಬರು ತಮ್ಮ ವೃದ್ಧಾಪ್ಯದ ಸಾವಿನ ಸನ್ನಿಧಿಯಲ್ಲಿ ಬದುಕನ್ನು ಒಮ್ಮೆ ಹಿಂತಿರುಗಿ ಕಾಣುವಾಗ ಹುಟ್ಟುವ ನೋಟದಲ್ಲಿ ಜನ್ಮತಳೆದ ಕೃತಿಯಿದು. ಇದು ತನ್ನನ್ನು ತಾನು ನೋಡಿಕೊಳ್ಳುವ ಆತ್ಮಾವಲೋಕನ ಕ್ರಮದಲ್ಲಿ ಹುಟ್ಟಿದ ಕೃತಿ. ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಕಂಡರಿಸುತ್ತ ಅದರ ಮೌಲ್ಯಮಾಪನ ಮಾಡುವ ಕೃತಿ ಕೂಡ. ಲೇಖಕರು ಗಂಡಾಳಿಕೆ ಮನೋಭಾವದಿಂದ ಹೆಂಗರುಳಿನ ಅಂತಃಕರಣಕ್ಕೆ, ಹಿರಿತನದಿಂದ ಮಗುತನಕ್ಕೆ ರೂಪಾಂತರವಾದಂತೆ ಇಲ್ಲಿನ ಭಾವವಿದೆ. ಒಂಟಿತನದಲ್ಲಿ, ಏಕಾಂತದಲ್ಲಿ ಕಾಡುವ ಬಾಲ್ಯಕಾಲದ ನೆನಪುಗಳು ಬರುವ ಕಡೆ ಆತ್ಮಕಥೆ ಆಪ್ತವಾಗಿದೆ.

ಆತ್ಮಕಥೆಯ ವಿಶೇಷವೆಂದರೆ, ಸ್ವಂತ ವ್ಯಕ್ತಿತ್ವದ, ಕರ್ನಾಟಕ ರಾಜಕಾರಣದ, ಬ್ಯಾರಿ ಸಮುದಾಯದ ಹಾಗೂ ಕರಾವಳಿಯ ಸಾಮಾಜಿಕ ಸನ್ನಿವೇಶದ ಚಿತ್ರಗಳನ್ನು ಕೊಡುವುದು; ಮಾತ್ರವಲ್ಲದೆ, ಅವುಗಳ ವಿಮರ್ಶೆಯನ್ನೂ ಮಾಡಿರುವುದು. ಸೌದಿ ಅರೇಬಿಯಾದಲ್ಲಿ ಇರುವ ವಂಶಾಡಳಿತದ ರಾಜಪ್ರಭುತ್ವವು ಪೈಗಂಬರ್ ಬಯಸಿದ ಖಲೀಫಾ ಪದ್ಧತಿಗೆ ವಿರುದ್ಧವಾಗಿದೆ ಎಂದು ಲೇಖಕರು ಒಂದೆಡೆ ಹೇಳುತ್ತಾರೆ. ಆತ್ಮಕಥೆ ಮುಗಿಯುವುದು ಮಡದಿಯ ಜತೆ ಗಂಡಾಳಿಕೆಯ ಮನೋಭಾವವುಳ್ಳ ತಾನು ನಡೆದುಕೊಂಡ ಬಗೆಗಿನ ಪರಿತಾಪದಿಂದ. ಬೇರೆಬೇರೆ ಧರ್ಮ ಜಾತಿಗಳ ಮಕ್ಕಳೊಂದಿಗೆ ಬೆರೆಯದ ಮದ್ರಸಾ ಶಿಕ್ಷಣದ ಪದ್ಧತಿಯ ಐಸೊಲೇಶನ್ ಬಗ್ಗೆ ಇಲ್ಲಿ ವಿಮರ್ಶೆಯಿದೆ. ಸಂಪ್ರದಾಯವಾದಿ ಮೌಲವಿಗಳ ಟೀಕೆಯಿದೆ. ಲೇಖಕರು ಅವರೊಟ್ಟಿಗೆ ಚರ್ಚೆ ಕೂಡ ಮಾಡುತ್ತಾರೆ. ಮದ್ರಸಾಗಳ ಧಾರ್ಮಿಕ ಶಿಕ್ಷಣವನ್ನು ಲೌಕಿಕವಾಗಿ ಉಪಯುಕ್ತವಾಗುವ ವಿದ್ಯೆಗಳನ್ನು ಕಲಿವ ಜಾಗವಾಗಿಸಬೇಕೆಂದೂ, ಕ್ರೈಸ್ತ ಮಿಶನರಿ ಶಾಲೆಗಳಿರುವಂತೆ ಎಲ್ಲ ಧರ್ಮ ಜಾತಿಯ ಮಕ್ಕಳು ಕಲಿಯುವಂತೆ ವಿಸ್ತರಣೆ ಪಡೆಯಬೇಕೆಂದೂ, ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ಧರ್ಮದವರಿಗೆ ಸಂಬಂಧಪಟ್ಟಿರಬೇಕೆಂದೂ ಅಭಿಪ್ರಾಯ ಪಡುವರು. ಮಹಿಳಾ ಶಿಕ್ಷಣದ ಪ್ರಾಮುಖ್ಯದ ಬಗ್ಗೆ ಪ್ರಸ್ತಾಪಿಸುವರು. ಈ ಕಾರಣಕ್ಕೆ ಆತ್ಮಕಥೆಯು ಸಮಾಜ ಸುಧಾರಣವಾದಿಯೊಬ್ಬನ ಜಾತ್ಯತೀತ ಚಿಂತನೆಯ ದಾಖಲೆ.

ಇದನ್ನೂ ಓದಿ: ಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

ಲೇಖಕರು ಒಂದೆಡೆ ಹೀಗೆ ಹೇಳುತ್ತಾರೆ: “ಮಸೀದಿ ಮದ್ರಸಾಗಳ ಆವರಣದೊಳಗಿರುವ ಶಾಲೆಗಳಲ್ಲಿ ಶಾಲಾ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಹಾಡು ನಾಟಕ ನೃತ್ಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ವಿದ್ಯಾರ್ಥಿಗಳಿಗೆ ಅಲ್ಲಿಯ ವ್ಯವಸ್ಥಾಪಕರು, ಧಾರ್ಮಿಕ ನಾಯಕರು ಬಿಡುತ್ತಿಲ್ಲ ಎಂಬ ಆರೋಪ ಕೂಡ ಇದೆ. ಇದು ತಪ್ಪು. ಎಳೆಯ ಮಕ್ಕಳನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ಇದೂ ಶಿಕ್ಷಣದ ಒಂದು ಅಂಗವಾಗಿದೆ. ಇಂದಿನ ಕಾಲದ ಅಗತ್ಯವೂ ಆಗಿದೆ. ಇದರಿಂದ ಮಕ್ಕಳ ಪ್ರತಿಭೆ ಹೊರಹೊಮ್ಮಿ ಅರಳಿ ಬೆಳೆಯಲು ಸಹಕಾರಿಯಾಗುತ್ತದೆ ಮತ್ತು ಇದು ಸೌಹಾರ್ದ ಬದುಕಿಗೆ ತುಂಬಾ ಅಗತ್ಯವೂ ಆಗಿದೆ.”

ಆತ್ಮಕಥೆಯು 70-80ರ ದಶಕದ ಕೂಡುಬದುಕಿನ ಚಿತ್ರಗಳನ್ನು ಕೊಡುತ್ತದೆ. ಅದರಲ್ಲಿ ಮುಸ್ಲಿಮರು ಭೂತದಕೋಲ, ಯಕ್ಷಗಾನ, ಕೋಳಿಅಂಕ, ಕಂಬಳದಲ್ಲಿ ಭಾಗವಹಿಸುವ ವಿವರಗಳಿವೆ. ಬಂಟರು ಸ್ಥಳೀಯ ಉರುಸನ್ನು ನಡೆಸಿಕೊಡುವ ವಿವರಗಳಿವೆ. ಇಲ್ಲೊಂದು ವಿಶೇಷ ಪ್ರಸಂಗ ಬರುತ್ತದೆ: ಯಕ್ಷಗಾನಕ್ಕೆ ಹೋಗಲು ಹಟಮಾಡುವ ಮೊಮ್ಮಗನನ್ನು ಮನೆಯ ಅಜ್ಜಿ ನಿರಾಕರಿಸಿ, ಅವನಿಗೆ ಬುದ್ಧಿಹೇಳಲು ಮೌಲವಿಯೊಬ್ಬರಿಗೆ ಒಪ್ಪಿಸುವಳು. ಆದರೆ ಆ ಮೌಲವಿಯು ಮಗುವಿಗೆ ಹಣಕೊಟ್ಟು ನಿದ್ದೆಗೆಡದಂತೆ ಎಚ್ಚರವಹಿಸಿ, ಆಟಕ್ಕೆ ಗುಪ್ತವಾಗಿ ಕಳಿಸಿಕೊಡುತ್ತಾರೆ. ಮಕ್ಕಳನ್ನು ಅವರ ಸಹಜ ಇಚ್ಛೆಗೆ ವಿರುದ್ಧವಾಗಿ ಹಿಡಿದಿಡಬಾರದು ಎಂಬ ಶಿಕ್ಷಕ ಪ್ರಜ್ಞೆಯ ಜತೆಗೆ, ಮಕ್ಕಳು ಸ್ಥಳೀಯ ಪರಿಸರದೊಂದಿಗೆ ಸಹಜವಾಗಿ ಬೆರೆಯುವ ಸನ್ನಿವೇಶವೂ ಇರಬೇಕೆಂಬ ನಾಗರಿಕ ಪ್ರಜ್ಞೆಯನ್ನು ಪ್ರಕಟಿಸುತ್ತಾರೆ. ಇದಕ್ಕೆ ಪೂರಕವಾಗಿ ಆತ್ಮಕಥೆಯು ಬ್ಯಾರಿ ಮುಸ್ಲಿಮರ ಸಂಸ್ಕೃತಿಯ ಚಿತ್ರಗಳನ್ನು ಕೊಡುವುದು. ಬ್ಯಾರಿಗಳ ಮದುವೆ ಬಟ್ಟೆಬರೆ ಊಟಆಟ ಉರುಸುಗಳನ್ನು ದಟ್ಟವಾಗಿ ಕಟ್ಟಿಕೊಡುತ್ತದೆ.

ಈ ಕಾರಣದಿಂದ ಆತ್ಮಕತೆಯು ಮುಸ್ಲಿಮರ ದಟ್ಟವಾದ ಜಾನಪದ ಸಂಸ್ಕೃತಿಯನ್ನು ಮೂಲಭೂತವಾದವೂ; ಕರಾವಳಿಯ ಧಾರ್ಮಿಕ ಕೂಡುಬಾಳ್ವೆಯ ಬದುಕನ್ನು ಕೋಮುವಾದವೂ ಕಳೆದುಹಾಕಿದವು ಎಂಬ ವಿಷಾದಕರ ದನಿಯನ್ನು ಒಳಗೊಂಡಿದೆ. ಇದರ ಭಾಗವಾಗಿಯೇ ಇಲ್ಲಿ ಬರುವ ಸುರತ್ಕಲ್ ಕೋಮುಗಲಭೆಯ ವಿವರಗಳನ್ನು ಗಮನಿಸಬೇಕು. ಕರಾವಳಿಯಲ್ಲಿ ಆರ್ಥಿಕ ಬಡತನವಿದ್ದಾಗ ಅದು ಸಾಂಸ್ಕೃತಿಕವಾಗಿ ಸಿರಿವಂತವಾಗಿತ್ತು ಮತ್ತು ಕೂಡುಬಾಳಿನ ಬದುಕನ್ನು ಹೊಂದಿತ್ತು. ಈಗ ಆರ್ಥಿಕ ಏಳಿಗೆಯಿದೆ; ಸಂಪತ್ತಿದೆ. ಆದರೆ ಮನುಷ್ಯ ಸಂಬಂಧಗಳು ಹಾಗೂ ಸಾಮಾಜಿಕ ಬದುಕು ವಿಘಟಿತವಾಗಿದೆ ಎಂಬ ವಿಷಾದವನ್ನು ಆತ್ಮಕಥೆ ಓದುಗರಲ್ಲಿ ಮೂಡಿಸುತ್ತದೆ. ಹಲಾಲ್, ಹಿಜಾಬ್, ಆಜಾನ್, ಟಿಪ್ಪು, ಉರಿಗೌಡ-ನಂಜೇಗೌಡ, ವ್ಯಾಪಾರ ನಿಷೇಧ, ಮೀಸಲಾತಿ ರದ್ದತಿ ಮೊದಲಾದ ವಿದ್ಯಮಾನಗಳು ಕಳೆದ ಒಂದು ವರ್ಷದಿಂದ ಕರ್ನಾಟಕದ ರಾಜಕೀಯ ಸಾಮಾಜಿಕ ಆರ್ಥಿಕ ಬದುಕನ್ನು ಕದಡಿವೆ. ಈ ಹಿನ್ನೆಲೆಯಲ್ಲಿ ಈ ಆತ್ಮಕಥೆಯು, ಸಾಂಸ್ಕೃತಿಕವಾಗಿ ಕಳೆದುಹೋದ ಸುವರ್ಣಯುಗದಂತೆ, ಸಮಾಜವಾದಿ ರಾಜಕಾರಣದ ಅಧ್ಯಾಯದಂತೆ ಭಾಸವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...