Homeಮುಖಪುಟಸಾವಧಾನವಾಗಿ ಆವರಿಸಿಕೊಳ್ಳುವ ‘19(1)(a)’

ಸಾವಧಾನವಾಗಿ ಆವರಿಸಿಕೊಳ್ಳುವ ‘19(1)(a)’

- Advertisement -
- Advertisement -

ಸಂವಿಧಾನದ ವಿಚಾರಗಳು ಮತ್ತು ಅದರ ಆಶಯಗಳು ಕಲೆಯಲ್ಲಿ ಅಭಿವ್ಯಕ್ತಿಗೊಳ್ಳುವುದೇ ಅಪರೂಪ. ಹೀಗಿರುವಾಗ ಸಂವಿಧಾನದ ಆತ್ಮ ಎಂದೇ ಕರೆಯುವ ಅನುಚ್ಛೇದಗಳಲ್ಲಿ ಒಂದನ್ನು ಸಿನಿಮಾದ ಶೀರ್ಷಿಕೆಯಾಗಿ ಇಟ್ಟುಕೊಂಡಿರುವುದೇ ಸಿನಿಮಾ ನೋಡಲು ಪ್ರೆರೇಪಿಸುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 75 ವರ್ಷ. ಸ್ವತಂತ್ರ ಭಾರತ ಹೇಗೆ ಮುನ್ನಡೆಯಬೇಕು ಎಂಬುದಕ್ಕೆ ಬೃಹತ್ ಆದ ಸಂವಿಧಾನವನ್ನು ರಚಿಸಿಕೊಂಡು 73 ವರ್ಷಗಳಾಗಿವೆ. ಸಂವಿಧಾನದ ಯಾವ ಆಶಯಗಳು ನಮ್ಮ ದಿನನಿತ್ಯದ ಚರ್ಚೆ, ಕಲೆ, ಸಾಹಿತ್ಯ, ಸಂಶೋಧನೆಗಳಲ್ಲಿ ಪ್ರತಿಫಲಿಸಬೇಕಿತ್ತೊ ಅದಕ್ಕೆ ಬದಲಾಗಿ ಅದರ ವಿರುದ್ಧವಾದ ಸಂಗತಿಗಳೆ ಹೆಚ್ಚು ಅಭಿವ್ಯಕ್ತಿಗೊಳ್ಳುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚು ಕಾಣುತ್ತಿದ್ದೇವೆ. ಸಂವಿಧಾನದ ಆಶಯಗಳನ್ನು ಪ್ರತಿಪಾದಿಸುವ ಧ್ವನಿಗಳನ್ನು ದಬ್ಬಾಳಿಕೆಯ ಮೂಲಕ ಹತ್ತಿಕ್ಕುವುದೂ ಸಾಮಾನ್ಯವಾಗಿದೆ.

ಸಂವಿಧಾನ ಗಟ್ಟಿ ಧ್ವನಿಗಳಲ್ಲಿ ಒಬ್ಬರಾಗಿದ್ದ ಗೌರಿ ಲಂಕೇಶರ ಹತ್ಯೆಯ ಘಟನೆಯೇ ಮಲೆಯಾಳಂನ ’19(1)(a)’ ಸಿನಿಮಾಗೆ ಪ್ರೇರಣೆ ಎಂಬುದು ಮೇಲ್ನೋಟಕ್ಕೇ ಕಾಣುತ್ತದೆ. ಬರವಣಿಗೆ ಎಂಬುದು ತನ್ನ ಆತ್ಮದ ಅನುಸಂಧಾನ ಎಂದು ನಂಬಿದ್ದ, ತನ್ನ ಸುತ್ತಲು ನಡೆಯುವ ದೌರ್ಜನ್ಯವನ್ನು ಬರವಣಿಗೆ ಮೂಲಕ ಅಭಿವ್ಯಕ್ತಿಸುತ್ತಿದ್ದ ಮತ್ತು ಬಾಬಾಸಾಹೇಬರ ಅಲೋಚನೆಗಳ ಪ್ರಭಾವವಿದ್ದ ಗೌರಿ ಶಂಕರ್ ಎಂಬ ಲೇಖಕನನ್ನು ಆತನ ಅಭಿಪ್ರಾಯದ ಕಾರಣಕ್ಕಾಗಿಯೇ ಕೊಲೆ ಮಾಡಲಾಗುತ್ತದೆ. ಒಂದು ಸಣ್ಣ ಊರಿನಲ್ಲಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡು ತಂದೆಯೊಡನೆ ಸಾಧಾರಣ ಬದುಕನ್ನು ಕಟ್ಟಿಕೊಂಟು ಬದುಕುತ್ತಿರುವ ಯುವತಿ (ಈ ಪಾತ್ರಕ್ಕೆ ಹೆಸರಿಲ್ಲ) ಈ ಸಿನಿಮಾದ ಪ್ರಧಾನ ಪಾತ್ರ. ಒಂದು ದಿನ ವ್ಯಕ್ತಿಯೊಬ್ಬ ಈ ಯುವತಿಯ ಅಂಗಡಿಗೆ ಬಂದು ಕೈ ಬರಹದ ಒಂದಷ್ಟು ಪುಟಗಳಿದ್ದ ಕಟ್ಟನ್ನು ಕೊಟ್ಟು, ಅದರ ಪ್ರತಿ ಮಾಡಿ ಬೈಡಿಂಗ್ ಮಾಡಲು ಹೇಳಿ, ನಂತರ ಮರಳಿ ಪಡೆಯುತ್ತೇನೆ, ಸ್ವಲ್ಪ ತಡವಾದರೂ ಕಾಯುತ್ತಿರಿ ಎಂದು ಹೇಳಿಹೋಗುತ್ತಾನೆ. ತಡ ರಾತ್ರಿ ಎಷ್ಟು ಸಮಯವಾದರೂ ಆ ವ್ಯಕ್ತಿ ಅದನ್ನು ಪಡೆಯಲು ಬರುವುದಿಲ್ಲ. ಸ್ವಲ್ಪ ದಿನದ ನಂತರ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮದ ಮುಖಾಂತರ ಯುವತಿಗೆ ತಿಳಿಯುವುದು, ತನಗೆ ಜೆರಾಕ್ಸ್ ಮಾಡಲು ಕೊಟ್ಟ ವ್ಯಕ್ತಿ ಪ್ರಸಿದ್ಧ ಬರಹಗಾರ ಗೌರಿ ಶಂಕರ್ ಮತ್ತು ಆತನನ್ನು ತನ್ನ ಅಭಿಪ್ರಾಯದ ರಾಜಕೀಯ ಕಾರಣಕ್ಕಾಗಿ ಕೊಲೆ ಮಾಡಲಾಗಿದೆಯೆಂದು.

ಗೌರಿ ಶಂಕರ್ ಹತ್ಯೆಯ ಸುದ್ದಿ ಆ ಯುವತಿಯನ್ನು ಅಲುಗಾಡಿಸಿಬಿಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಒಮ್ಮೆಯೂ ಯೋಚಿಸದ, ತನ್ನ ಪಾಲಿಗೆ ಬಂದ ಬದುಕನ್ನು ಬದುಕುವುದಷ್ಟೆ ತನ್ನ ಕರ್ತವ್ಯ ಎಂದು ನಂಬಿದ್ದ ಈಕೆಗೆ ಗೌರಿ ಶಂಕರ್ ಹತ್ಯೆ ಮತ್ತು ಅದಕ್ಕೆ ಕಾರಣವಾಗುವ ಸಂಗತಿಯಿಂದ ಅವಳ ಅಲೋಚನೆ ಮತ್ತು ವ್ಯಕ್ತಿತ್ವ ಸ್ಥಿತ್ಯಂತರವಾಗುವುದನ್ನು ಬಹಳ ಸಾವಧಾನವಾಗಿ ಕಟ್ಟಿಕೊಡಲಾಗಿದೆ.

ನಿಧಾನಗತಿಯಲ್ಲಿ ಚಲಿಸುವ ಈ ಸಿನಿಮಾದಲ್ಲಿ, ಗೌರಿ ಶಂಕರ್ ಹತ್ಯೆಯ ನಂತರ ಏನಾದರು ಘಟನೆ ಘಟಿಸಬಹುದು ಈ ಕೊಲೆಗೆ ಪ್ರತಿಯಾಗಿ ಯಾವುದಾದರು ಹೋರಾಟ ಮತ್ತು ಪ್ರತಿರೋಧದ ಘಟನೆಗಳನ್ನು ತರಬಹುದು ಎಂಬ ನಿರೀಕ್ಷೆಯ ಜೊತೆ ಕಾಯುವುದು ಸಹಜ. ಆದರೆ ಆ ತರದ ಘಟನೆಗಳಾವುದನ್ನು ನಿರ್ದೇಶಕಿ ಇಂದು ತರುವುದಿಲ್ಲ. ಆದರೆ ಈ ಸಿನಿಮಾದಲ್ಲಿ ಗೌರಿ ಶಂಕರ್ ಪಾತ್ರ ಮತ್ತು ಆ ಪಾತ್ರದ ಘಟನೆ ನೆಪ ಮಾತ್ರ. ಇದನ್ನ ಹಿನ್ನೆಲೆಯಾಗಿಸಿಕೊಂಡು ಹೇಗೆ ಒಬ್ಬ ಸಾಧಾರಣ ಯುವತಿ ತನ್ನ ಸಾಧಾರಣ ಬದುಕು, ಸುತ್ತಲಿನ ಪರಿಸರ ಮತ್ತು ಸಮುದಾಯವನ್ನ ಹೊಸ ಕಣ್ಣೋಟದಲ್ಲಿ ನೋಡುವುದಕ್ಕೆ ಪ್ರಾರಂಭಿಸುತ್ತಾಳೆ ಹಾಗು ಗೌರಿಶಂಕರ್ ಎಂಬ ವ್ಯಕ್ತಿತ್ವಕ್ಕೆ, ಆತನ ಅಲೋಚನೆಗೆ, ಮುಂದುವರೆದು ಅವನ ಬದುಕಿಗೆ ಹೇಗೆ ಸ್ಪಂದಿಸುತ್ತಾಳೆ ಎಂಬುದನ್ನು ಬಹಳ ಸವಾಕಾಶವಾಗಿ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ.

c

ತನ್ನ ಬರವಣಿಗೆಗಿಂತ ತನ್ನ ಬದುಕು ದೊಡ್ಡದಲ್ಲ, ನನ್ನ ನಂತರ ನನ್ನ ಬರವಣಿಗೆ ಮಾತನಾಡುತ್ತದೆ ಎಂದು ನಂಬಿದ್ದ ಗೌರಿಶಂಕರನ ಕೊನೆಯ ಕೃತಿಯನ್ನು ಹೇಗಾದರೂ ಮಾಡಿ ಸರಿಯಾದ ವಾರಸುದಾರರಿಗೆ ತಲುಪಿಸಬೇಕು ಎಂದು ಶ್ರಮಿಸುವ ಈ ಯುವತಿ ತನ್ನ ಆ ಜರ್ನಿಯಲ್ಲಿ ಗೌರಿ ಶಂಕರ ಜೀವಿಸಿದ್ದ ಬದುಕಿಗೆ ಹತ್ತಿರವಾಗುವುದರ ಜೊತೆಜೊತೆಯಲ್ಲಿಯೇ ತನ್ನ ಬದುಕನ್ನು ಹೊಸದಾಗಿ ನೋಡಲು ಪ್ರಾರಂಭಿಸುತ್ತಾಳೆ. ತನ್ನ ತಂದೆಯೊಟ್ಟಿಗಿನ ಅಂತರಕ್ಕೆ ಕಾರಣಕಂಡುಕೊಂಡು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಮನೆಯಲ್ಲಿ ಯಾವುದೇ ಅಭಿಪ್ರಾಯ ಕೇಳದೆ ಮದುವೆ ನಿಶ್ಚಯ ಮಾಡುವ ತನ್ನ ಸ್ನೇಹಿತೆಗೆ ’ನಿನ್ನ ಒಪ್ಪಿಗೆಯಂತೆ’ ಬದುಕು ಎಂದು ಸಲಹೆ ನೀಡುತ್ತಾಳೆ.

ಭಾರತ ಸಂವಿಧಾನದಲ್ಲಿ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸಲು ಇರುವ ಒಂದು ಕಲಂನನ್ನೆ ಸಿನಿಮಾದ ಶೀರ್ಷಿಕೆಯಾಗಿ ಇಟ್ಟುಕೊಂಡು ತನ್ನ ಚೊಚ್ಚಲ ಸಿನಿಮಾದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕಿ ವಿ.ಎಸ್ ಇಂದು. ಯಾರಾದರೂ ಉಪೇಕ್ಷೆ ಮಾಡುವಂತಹ ಸಣ್ಣ ಊರು, ಸಣ್ಣ ಬದುಕು, ಸಣ್ಣ ವ್ಯಕ್ತಿತ್ವ, ಇವರುಗಳು ಸಮಾಜ ಘಾತುಕ ಘಟನೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಮತ್ತು ಆ ಘಟನೆಗಳು ಅವರನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಇಂದು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆ. ಹೆಸರೆ ಇಲ್ಲದ ಯುವತಿಯ ಪಾತ್ರದಲ್ಲಿನ ನಿತ್ಯ ಮೆನನ್ ಅಭಿನಯ ಸದಾ ಕಾಲ ನೆನಪಿನಲ್ಲಿ ಉಳಿಯುವಂತದ್ದು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ಹಿಪೊಕ್ರಸಿ ಜಗತ್ತಿನಲ್ಲಿ ಮತ್ತೊಂದು ಎದೆಯ ದನಿ ಸಾಯಿ ಪಲ್ಲವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...