Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

ಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

- Advertisement -
- Advertisement -

ನಾನು ಮುಂಬೈ ಹೋದಾಗಲೆಲ್ಲ ಅಲ್ಲಿನ ಅನೇಕ ಜೀವನೋತ್ಸಾಹದ ಮಹಿಳೆಯರನ್ನು ಕಾಣುತ್ತೇನೆ. ಇವರೆಲ್ಲರೂ ಗೃಹಿಣಿಯರು ಅಥವಾ ಮತ್ತಿತರ ಉದ್ಯೋಗದಲ್ಲಿರುವವರು. ಬರೆಹ ಅವರ ಪ್ರವೃತ್ತಿ. ಇವರಲ್ಲಿ ಅನೇಕರು ಪಿಎಚ್.ಡಿ. ಪದವಿ ಪಡೆದವರು. ಕೆಲವರು ಜಗತ್ತಿನ ಸಾಹಿತ್ಯದಿಂದ ಕನ್ನಡಕ್ಕೆ ಅಗತ್ಯವಾದ ಕೃತಿಗಳನ್ನು ಅನುವಾದ ಮಾಡಿದವರು. ಇವರಲ್ಲಿ ಸೋಮೇಶ್ವರ ಉಚ್ಚಿಲ ಮೂಲದ ಶಾಮಲಾ ಮಾಧವ ಕೂಡ ಒಬ್ಬರು. ಇವರ ಪುಸ್ತಕ ಬಿಡುಗಡೆಗೊಮ್ಮೆ ನಾನು ಮುಂಬೈ ಹೋಗಿದ್ದೆ. ಕಾರ್ಯಕ್ರಮ ಮುಗಿಸಿ ಪುಣೆಗೆ ಹೋಗಿ ಅಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ಅಮೀರಬಾಯಿ ಕರ್ನಾಟಕಿ ಬಗ್ಗೆ ಮಾಹಿತಿ ಹುಡುಕಬೇಕಿತ್ತು. ಆಗ ಶ್ಯಾಮಲಾ ಅವರು ಪುಣೆವಾಸಿಯೂ ಸಾಫ್ಟ್‌ವೇರ್ ಇಂಜಿನಿಯರನೂ ಆದ ತಮ್ಮ ಮಗ ತುಷಾರನ ಜತೆಮಾಡಿ ನನಗೆ ಕಳಿಸಿಕೊಟ್ಟರು. ತುಷಾರ ನನ್ನನ್ನು ಫಿಲ್ಮ ಇನ್ಸ್ಟಿಟ್ಯೂಟ್‌ಗೆ ಕರೆದುಕೊಂಡು ಹೋದರು. ನಾನಲ್ಲಿ ಇದ್ದಷ್ಟೂ ದಿನ ನನಗೆ ಬಗೆಬಗೆಯ ಸಹಾಯ ನೀಡಿದರು. ನನಗೆ ನೆನಪಿರುವಂತೆ, ಅವರಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿತ್ತು. ದಾರ್ಶನಿಕ ಮನೋಭಾವವಿತ್ತು.

ಹೀಗಿರುತ್ತ ಒಂದು ದಿನ ಶ್ಯಾಮಲಾ ಅವರು ನನಗೆ ನೋವಿನಿಂದ ಪತ್ರ ಬರೆದರು: “ನನ್ನ ಮಗು ತುಷಾರನಿಗೆ ಹುಶಾರಿಲ್ಲ. ನನ್ನ ಹೃದಯ ಚಡಪಡಿಸುತ್ತಿದೆ. ಕ್ಯಾನ್ಸರಂತೆ. ಏನು ಮಾಡಲಿ ರಹಮತ್? ದಿಕ್ಕೇ ತೋಚುತ್ತಿಲ್ಲ”. ಇದಾದ ಬಳಿಕ ಅವರು ಸಾವಿನೊಂದಿಗೆ ಸೆಣಸಾಟ ಮಾಡುತ್ತಿರುವ ದಾರುಣ ಸನ್ನಿವೇಶವನ್ನು ಈಮೇಲಲ್ಲಿ ವಾಟ್ಸಾಪಿನಲ್ಲಿ ಹಂಚಿಕೊಳ್ಳುತ್ತಿದ್ದರು. ತುಷಾರ ನಮದು ಜೀವಬಿಟ್ಟ ದಿನ, ಹತಾಶೆಯಿಂದ ಎದೆ ಬಿರಿವಂತೆ ತಮ್ಮ ಶೋಕ ತೋಡಿಕೊಂಡಿದ್ದರು. ಈಗ ಅವರು ತುಷಾರನ ಆರೈಕೆಯಲ್ಲಿ ಪಟ್ಟ ಪಾಡು ಪುಸ್ತಕವಾಗಿ ಹೊರಬಂದಿದೆ. ತಾಯ ಅಳಲೆಲ್ಲವೂ ಹೆಪ್ಪುಗಟ್ಟಿದಂತೆ ಅದರೊಳಗೆ ಬಂದಿದೆ.

ಈ ಪುಸ್ತಕವನ್ನು ಕೇವಲ ಶಾಮಲಾ ಅವರು ಬರೆದಿಲ್ಲ. ಇದರಲ್ಲಿ ತುಷಾರನ ಗೆಳೆಯರಾದ ಸಂಜಯ ಮುಖರ್ಜಿ, ಪ್ರಸಾದ ನಾಯ್ಕರ ಬರೆಹಗಳಿವೆ. ಶ್ಯಾಮಲಾ ಅವರ ಗೆಳತಿ, ಕನ್ನಡ ಲೇಖಕಿ ನೇಮಿಚಂದ್ರ ಅವರ ಬರೆಹವಿದೆ. ಎಲ್ಲವೂ ತುಷಾರನ ಜೀವನ ಪ್ರೀತಿಯ ಬಗೆಗಿನ ಬರೆಹಗಳು. ಬೇನೆ ನೋವು ಸಾವಿನ ದಾರುಣತೆಯನ್ನು ಕುರಿತವು.

ಇವುಗಳಲ್ಲೆಲ್ಲ ಹೆತ್ತತಾಯಿ ಶ್ಯಾಮಲಾ ಅವರ ಬರೆಹವು ದೀರ್ಘವಾಗಿದೆ. ಅವರ ಬರೆಹದ ವಿಶೇಷತೆ ಎಂದರೆ, ತುಷಾರನ ಹುಟ್ಟು, ಬಾಲ್ಯದ ಆಟೋಟ, ತಾರುಣ್ಯದ ಚಟುವಟಿಕೆ, ಯೌವನದ ಚಿಂತನಶೀಲತೆ, ಬೇನೆಯ ಜತೆ ಮಾಡಿದ ಸೆಣಸಾಟ ಎಲ್ಲವೂ ಒಟ್ಟೊಟ್ಟಿಗೆ ಬಂದಿರುವುದು. ಇದು, ಕಾಲಾನುಕ್ರಮಣಿಕೆ ಇದ್ದೂ ಅದನ್ನು ಮುರಿದಿರುವ ವಿಶಿಷ್ಟ ಕಥನಕ್ರಮ. ಕಾಲ ಎಂದರೆ ಸಮಯ ಮಾತ್ರವಲ್ಲ, ಸಾವು ಎಂದೂ ಅರ್ಥವಿದೆಯಷ್ಟೆ. ಈ ಕಾಲಕ್ರಮವನ್ನು ಬೆರೆಸುವ ಕ್ರಮವು, ಜೀವವೊಂದು ಲೋಕಕ್ಕೆ ಆಗಮಿಸುವ ಮತ್ತು ತೆರಳುವ ನಡುವಿನ ಕಾಲದ ಬದುಕನ್ನು ಹಿಡಿಯುವುದಕ್ಕೆ ಲೇಖಕಿ ಕಂಡುಕೊಂಡಿರುವ ದಾರ್ಶನಿಕ ಕ್ರಮದಂತೆಯೂ ತೋರುವುದು.

ಇದನ್ನೂ ಓದಿ: ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಈ ಅನುಭವ ಕಥನದಲ್ಲಿ ಕಾಣುವ ವಿಶೇಷತೆ ಎಂದರೆ, ಮಹಾನಗರದ ಹೊಸ ಔದ್ಯೋಗಿಕ ಜಗತ್ತಿನಲ್ಲಿ, ಏರ್ಪಡುವ ಭಾಷಾತೀತ ಧರ್ಮಾತೀತ ಜಾತ್ಯತೀತ ಮಾನವ ಸಂಬಂಧಗಳು. ತುಷಾರನ ಗೆಳೆಯ ಗೆಳತಿಯರು, ವೈದ್ಯರು, ಕಷ್ಟಕ್ಕೆ ಮಿಡಿವ ಲೇಖಕಿಯ ಗೆಳತಿಯರು, ಶಿಕ್ಷಕರು, ಸಹಾಯಕರು- ಎಲ್ಲರೂ ಕೇವಲ ಮನುಷ್ಯರು. ಹೀಗಾಗಿ ಈ ಕೃತಿ ಬೇನೆಗೆ ಒಳಗಾಗಿ ಒಬ್ಬ ಯುವಕ ಅಕಾಲಿಕವಾಗಿ ಮೃತ್ಯುವಶವಾದ, ಅವನ ತಾಯಿ ಮಗನನ್ನು ಉಳಿಸಿಕೊಳ್ಳಲು ಸೆಣಸಾಟ ಮಾಡುವ ಕಥನ ಮಾತ್ರವಲ್ಲ; ಮನುಷ್ಯರ ನೋವು ನಲಿವುಗಳಲ್ಲಿ ಕೇವಲ ಪ್ರೀತಿ ಅಂತಃಕರಣದಿಂದ ಒದಗುವ ಲೋಕದ ಕಾರುಣ್ಯದ ಕಥನವೂ ಆಗಿದೆ.

ಇಡೀ ಕೃತಿಯಲ್ಲಿ ಇರುವ ಅನುಭವವು ಸಾವಿನಂತಹ ಕಠೋರ ಸತ್ಯದ ಮುಖಾಮುಖಿಯಲ್ಲಿ ಹುಟ್ಟುವುದರಿಂದ, ಅದರ ನಿರೂಪಣೆಯಲ್ಲಿ ಒಂದು ಬಗೆಯ ದಾರ್ಶನಿಕ ಎನ್ನಬಹುದಾದ ನೋಟಗಳಿವೆ, ಮಾತುಗಳಿವೆ. ಇದು ದುಃಖದ ಒಡಲಲ್ಲೇ ಹುಟ್ಟುವ ಅಧ್ಯಾತ್ಮ.

ಕನ್ನಡದಲ್ಲಿ ಈ ಬಗೆಯ ಕೃತಿಗಳು ಬಹಳ ಇಲ್ಲ. ನಾನು ಓದಿರುವ ಎರಡು ಕೃತಿಗಳೆಂದರೆ, ನನಗೆ ಪಾಠ ಹೇಳಿದ ಶಿಕ್ಷಕ ಸಣ್ಣರಾಮ ಅವರು (ಅಳುನುಂಗಿ ನಗುವೊಮ್ಮೆ) ಹಾಗೂ ಬೀದರಿನ ಮಿತ್ರರಾದ ಶಂಭುಲಿಂಗ ವಾಲ್ದೊಡ್ಡಿಯವರು (ಮಹಾತಾಯಿ) ತಮ್ಮತಮ್ಮ ಮಡದಿಯರ ಕ್ಯಾನ್ಸರ್ ಕಾಯಿಲೆಯೊಂದಿಗೆ, ದವಾಖಾನೆ ಮತ್ತು ಮನೆಯಲ್ಲಿ ಮಾಡಿದ ಹೋರಾಟ ಕುರಿತ ಅನುಭವ ಕಥನಗಳು. ಶ್ಯಾಮಲಾ ಅವರ ಪುಸ್ತಕವನ್ನೂ ಒಳಗೊಂಡಂತೆ ಇವೆಲ್ಲವೂ ಕೇವಲ ವೇದನೆಯ ಕಥನಗಳಾಗಿಲ್ಲ. ಸಾವನ್ನು ಸ್ವೀಕರಿಸಿದ ವ್ಯಕ್ತಿ ಬದುಕಿದ್ದಾಗ ಬಾಳಿದ ದೊಡ್ಡ ಬದುಕಿನ ಚಿತ್ರಗಳೂ ಆಗಿವೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...