Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

ಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

- Advertisement -
- Advertisement -

ನಾನು ಮುಂಬೈ ಹೋದಾಗಲೆಲ್ಲ ಅಲ್ಲಿನ ಅನೇಕ ಜೀವನೋತ್ಸಾಹದ ಮಹಿಳೆಯರನ್ನು ಕಾಣುತ್ತೇನೆ. ಇವರೆಲ್ಲರೂ ಗೃಹಿಣಿಯರು ಅಥವಾ ಮತ್ತಿತರ ಉದ್ಯೋಗದಲ್ಲಿರುವವರು. ಬರೆಹ ಅವರ ಪ್ರವೃತ್ತಿ. ಇವರಲ್ಲಿ ಅನೇಕರು ಪಿಎಚ್.ಡಿ. ಪದವಿ ಪಡೆದವರು. ಕೆಲವರು ಜಗತ್ತಿನ ಸಾಹಿತ್ಯದಿಂದ ಕನ್ನಡಕ್ಕೆ ಅಗತ್ಯವಾದ ಕೃತಿಗಳನ್ನು ಅನುವಾದ ಮಾಡಿದವರು. ಇವರಲ್ಲಿ ಸೋಮೇಶ್ವರ ಉಚ್ಚಿಲ ಮೂಲದ ಶಾಮಲಾ ಮಾಧವ ಕೂಡ ಒಬ್ಬರು. ಇವರ ಪುಸ್ತಕ ಬಿಡುಗಡೆಗೊಮ್ಮೆ ನಾನು ಮುಂಬೈ ಹೋಗಿದ್ದೆ. ಕಾರ್ಯಕ್ರಮ ಮುಗಿಸಿ ಪುಣೆಗೆ ಹೋಗಿ ಅಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ಅಮೀರಬಾಯಿ ಕರ್ನಾಟಕಿ ಬಗ್ಗೆ ಮಾಹಿತಿ ಹುಡುಕಬೇಕಿತ್ತು. ಆಗ ಶ್ಯಾಮಲಾ ಅವರು ಪುಣೆವಾಸಿಯೂ ಸಾಫ್ಟ್‌ವೇರ್ ಇಂಜಿನಿಯರನೂ ಆದ ತಮ್ಮ ಮಗ ತುಷಾರನ ಜತೆಮಾಡಿ ನನಗೆ ಕಳಿಸಿಕೊಟ್ಟರು. ತುಷಾರ ನನ್ನನ್ನು ಫಿಲ್ಮ ಇನ್ಸ್ಟಿಟ್ಯೂಟ್‌ಗೆ ಕರೆದುಕೊಂಡು ಹೋದರು. ನಾನಲ್ಲಿ ಇದ್ದಷ್ಟೂ ದಿನ ನನಗೆ ಬಗೆಬಗೆಯ ಸಹಾಯ ನೀಡಿದರು. ನನಗೆ ನೆನಪಿರುವಂತೆ, ಅವರಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿತ್ತು. ದಾರ್ಶನಿಕ ಮನೋಭಾವವಿತ್ತು.

ಹೀಗಿರುತ್ತ ಒಂದು ದಿನ ಶ್ಯಾಮಲಾ ಅವರು ನನಗೆ ನೋವಿನಿಂದ ಪತ್ರ ಬರೆದರು: “ನನ್ನ ಮಗು ತುಷಾರನಿಗೆ ಹುಶಾರಿಲ್ಲ. ನನ್ನ ಹೃದಯ ಚಡಪಡಿಸುತ್ತಿದೆ. ಕ್ಯಾನ್ಸರಂತೆ. ಏನು ಮಾಡಲಿ ರಹಮತ್? ದಿಕ್ಕೇ ತೋಚುತ್ತಿಲ್ಲ”. ಇದಾದ ಬಳಿಕ ಅವರು ಸಾವಿನೊಂದಿಗೆ ಸೆಣಸಾಟ ಮಾಡುತ್ತಿರುವ ದಾರುಣ ಸನ್ನಿವೇಶವನ್ನು ಈಮೇಲಲ್ಲಿ ವಾಟ್ಸಾಪಿನಲ್ಲಿ ಹಂಚಿಕೊಳ್ಳುತ್ತಿದ್ದರು. ತುಷಾರ ನಮದು ಜೀವಬಿಟ್ಟ ದಿನ, ಹತಾಶೆಯಿಂದ ಎದೆ ಬಿರಿವಂತೆ ತಮ್ಮ ಶೋಕ ತೋಡಿಕೊಂಡಿದ್ದರು. ಈಗ ಅವರು ತುಷಾರನ ಆರೈಕೆಯಲ್ಲಿ ಪಟ್ಟ ಪಾಡು ಪುಸ್ತಕವಾಗಿ ಹೊರಬಂದಿದೆ. ತಾಯ ಅಳಲೆಲ್ಲವೂ ಹೆಪ್ಪುಗಟ್ಟಿದಂತೆ ಅದರೊಳಗೆ ಬಂದಿದೆ.

ಈ ಪುಸ್ತಕವನ್ನು ಕೇವಲ ಶಾಮಲಾ ಅವರು ಬರೆದಿಲ್ಲ. ಇದರಲ್ಲಿ ತುಷಾರನ ಗೆಳೆಯರಾದ ಸಂಜಯ ಮುಖರ್ಜಿ, ಪ್ರಸಾದ ನಾಯ್ಕರ ಬರೆಹಗಳಿವೆ. ಶ್ಯಾಮಲಾ ಅವರ ಗೆಳತಿ, ಕನ್ನಡ ಲೇಖಕಿ ನೇಮಿಚಂದ್ರ ಅವರ ಬರೆಹವಿದೆ. ಎಲ್ಲವೂ ತುಷಾರನ ಜೀವನ ಪ್ರೀತಿಯ ಬಗೆಗಿನ ಬರೆಹಗಳು. ಬೇನೆ ನೋವು ಸಾವಿನ ದಾರುಣತೆಯನ್ನು ಕುರಿತವು.

ಇವುಗಳಲ್ಲೆಲ್ಲ ಹೆತ್ತತಾಯಿ ಶ್ಯಾಮಲಾ ಅವರ ಬರೆಹವು ದೀರ್ಘವಾಗಿದೆ. ಅವರ ಬರೆಹದ ವಿಶೇಷತೆ ಎಂದರೆ, ತುಷಾರನ ಹುಟ್ಟು, ಬಾಲ್ಯದ ಆಟೋಟ, ತಾರುಣ್ಯದ ಚಟುವಟಿಕೆ, ಯೌವನದ ಚಿಂತನಶೀಲತೆ, ಬೇನೆಯ ಜತೆ ಮಾಡಿದ ಸೆಣಸಾಟ ಎಲ್ಲವೂ ಒಟ್ಟೊಟ್ಟಿಗೆ ಬಂದಿರುವುದು. ಇದು, ಕಾಲಾನುಕ್ರಮಣಿಕೆ ಇದ್ದೂ ಅದನ್ನು ಮುರಿದಿರುವ ವಿಶಿಷ್ಟ ಕಥನಕ್ರಮ. ಕಾಲ ಎಂದರೆ ಸಮಯ ಮಾತ್ರವಲ್ಲ, ಸಾವು ಎಂದೂ ಅರ್ಥವಿದೆಯಷ್ಟೆ. ಈ ಕಾಲಕ್ರಮವನ್ನು ಬೆರೆಸುವ ಕ್ರಮವು, ಜೀವವೊಂದು ಲೋಕಕ್ಕೆ ಆಗಮಿಸುವ ಮತ್ತು ತೆರಳುವ ನಡುವಿನ ಕಾಲದ ಬದುಕನ್ನು ಹಿಡಿಯುವುದಕ್ಕೆ ಲೇಖಕಿ ಕಂಡುಕೊಂಡಿರುವ ದಾರ್ಶನಿಕ ಕ್ರಮದಂತೆಯೂ ತೋರುವುದು.

ಇದನ್ನೂ ಓದಿ: ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಈ ಅನುಭವ ಕಥನದಲ್ಲಿ ಕಾಣುವ ವಿಶೇಷತೆ ಎಂದರೆ, ಮಹಾನಗರದ ಹೊಸ ಔದ್ಯೋಗಿಕ ಜಗತ್ತಿನಲ್ಲಿ, ಏರ್ಪಡುವ ಭಾಷಾತೀತ ಧರ್ಮಾತೀತ ಜಾತ್ಯತೀತ ಮಾನವ ಸಂಬಂಧಗಳು. ತುಷಾರನ ಗೆಳೆಯ ಗೆಳತಿಯರು, ವೈದ್ಯರು, ಕಷ್ಟಕ್ಕೆ ಮಿಡಿವ ಲೇಖಕಿಯ ಗೆಳತಿಯರು, ಶಿಕ್ಷಕರು, ಸಹಾಯಕರು- ಎಲ್ಲರೂ ಕೇವಲ ಮನುಷ್ಯರು. ಹೀಗಾಗಿ ಈ ಕೃತಿ ಬೇನೆಗೆ ಒಳಗಾಗಿ ಒಬ್ಬ ಯುವಕ ಅಕಾಲಿಕವಾಗಿ ಮೃತ್ಯುವಶವಾದ, ಅವನ ತಾಯಿ ಮಗನನ್ನು ಉಳಿಸಿಕೊಳ್ಳಲು ಸೆಣಸಾಟ ಮಾಡುವ ಕಥನ ಮಾತ್ರವಲ್ಲ; ಮನುಷ್ಯರ ನೋವು ನಲಿವುಗಳಲ್ಲಿ ಕೇವಲ ಪ್ರೀತಿ ಅಂತಃಕರಣದಿಂದ ಒದಗುವ ಲೋಕದ ಕಾರುಣ್ಯದ ಕಥನವೂ ಆಗಿದೆ.

ಇಡೀ ಕೃತಿಯಲ್ಲಿ ಇರುವ ಅನುಭವವು ಸಾವಿನಂತಹ ಕಠೋರ ಸತ್ಯದ ಮುಖಾಮುಖಿಯಲ್ಲಿ ಹುಟ್ಟುವುದರಿಂದ, ಅದರ ನಿರೂಪಣೆಯಲ್ಲಿ ಒಂದು ಬಗೆಯ ದಾರ್ಶನಿಕ ಎನ್ನಬಹುದಾದ ನೋಟಗಳಿವೆ, ಮಾತುಗಳಿವೆ. ಇದು ದುಃಖದ ಒಡಲಲ್ಲೇ ಹುಟ್ಟುವ ಅಧ್ಯಾತ್ಮ.

ಕನ್ನಡದಲ್ಲಿ ಈ ಬಗೆಯ ಕೃತಿಗಳು ಬಹಳ ಇಲ್ಲ. ನಾನು ಓದಿರುವ ಎರಡು ಕೃತಿಗಳೆಂದರೆ, ನನಗೆ ಪಾಠ ಹೇಳಿದ ಶಿಕ್ಷಕ ಸಣ್ಣರಾಮ ಅವರು (ಅಳುನುಂಗಿ ನಗುವೊಮ್ಮೆ) ಹಾಗೂ ಬೀದರಿನ ಮಿತ್ರರಾದ ಶಂಭುಲಿಂಗ ವಾಲ್ದೊಡ್ಡಿಯವರು (ಮಹಾತಾಯಿ) ತಮ್ಮತಮ್ಮ ಮಡದಿಯರ ಕ್ಯಾನ್ಸರ್ ಕಾಯಿಲೆಯೊಂದಿಗೆ, ದವಾಖಾನೆ ಮತ್ತು ಮನೆಯಲ್ಲಿ ಮಾಡಿದ ಹೋರಾಟ ಕುರಿತ ಅನುಭವ ಕಥನಗಳು. ಶ್ಯಾಮಲಾ ಅವರ ಪುಸ್ತಕವನ್ನೂ ಒಳಗೊಂಡಂತೆ ಇವೆಲ್ಲವೂ ಕೇವಲ ವೇದನೆಯ ಕಥನಗಳಾಗಿಲ್ಲ. ಸಾವನ್ನು ಸ್ವೀಕರಿಸಿದ ವ್ಯಕ್ತಿ ಬದುಕಿದ್ದಾಗ ಬಾಳಿದ ದೊಡ್ಡ ಬದುಕಿನ ಚಿತ್ರಗಳೂ ಆಗಿವೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...