Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

ಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

- Advertisement -
- Advertisement -

ನಾನು ಮುಂಬೈ ಹೋದಾಗಲೆಲ್ಲ ಅಲ್ಲಿನ ಅನೇಕ ಜೀವನೋತ್ಸಾಹದ ಮಹಿಳೆಯರನ್ನು ಕಾಣುತ್ತೇನೆ. ಇವರೆಲ್ಲರೂ ಗೃಹಿಣಿಯರು ಅಥವಾ ಮತ್ತಿತರ ಉದ್ಯೋಗದಲ್ಲಿರುವವರು. ಬರೆಹ ಅವರ ಪ್ರವೃತ್ತಿ. ಇವರಲ್ಲಿ ಅನೇಕರು ಪಿಎಚ್.ಡಿ. ಪದವಿ ಪಡೆದವರು. ಕೆಲವರು ಜಗತ್ತಿನ ಸಾಹಿತ್ಯದಿಂದ ಕನ್ನಡಕ್ಕೆ ಅಗತ್ಯವಾದ ಕೃತಿಗಳನ್ನು ಅನುವಾದ ಮಾಡಿದವರು. ಇವರಲ್ಲಿ ಸೋಮೇಶ್ವರ ಉಚ್ಚಿಲ ಮೂಲದ ಶಾಮಲಾ ಮಾಧವ ಕೂಡ ಒಬ್ಬರು. ಇವರ ಪುಸ್ತಕ ಬಿಡುಗಡೆಗೊಮ್ಮೆ ನಾನು ಮುಂಬೈ ಹೋಗಿದ್ದೆ. ಕಾರ್ಯಕ್ರಮ ಮುಗಿಸಿ ಪುಣೆಗೆ ಹೋಗಿ ಅಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ಅಮೀರಬಾಯಿ ಕರ್ನಾಟಕಿ ಬಗ್ಗೆ ಮಾಹಿತಿ ಹುಡುಕಬೇಕಿತ್ತು. ಆಗ ಶ್ಯಾಮಲಾ ಅವರು ಪುಣೆವಾಸಿಯೂ ಸಾಫ್ಟ್‌ವೇರ್ ಇಂಜಿನಿಯರನೂ ಆದ ತಮ್ಮ ಮಗ ತುಷಾರನ ಜತೆಮಾಡಿ ನನಗೆ ಕಳಿಸಿಕೊಟ್ಟರು. ತುಷಾರ ನನ್ನನ್ನು ಫಿಲ್ಮ ಇನ್ಸ್ಟಿಟ್ಯೂಟ್‌ಗೆ ಕರೆದುಕೊಂಡು ಹೋದರು. ನಾನಲ್ಲಿ ಇದ್ದಷ್ಟೂ ದಿನ ನನಗೆ ಬಗೆಬಗೆಯ ಸಹಾಯ ನೀಡಿದರು. ನನಗೆ ನೆನಪಿರುವಂತೆ, ಅವರಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿತ್ತು. ದಾರ್ಶನಿಕ ಮನೋಭಾವವಿತ್ತು.

ಹೀಗಿರುತ್ತ ಒಂದು ದಿನ ಶ್ಯಾಮಲಾ ಅವರು ನನಗೆ ನೋವಿನಿಂದ ಪತ್ರ ಬರೆದರು: “ನನ್ನ ಮಗು ತುಷಾರನಿಗೆ ಹುಶಾರಿಲ್ಲ. ನನ್ನ ಹೃದಯ ಚಡಪಡಿಸುತ್ತಿದೆ. ಕ್ಯಾನ್ಸರಂತೆ. ಏನು ಮಾಡಲಿ ರಹಮತ್? ದಿಕ್ಕೇ ತೋಚುತ್ತಿಲ್ಲ”. ಇದಾದ ಬಳಿಕ ಅವರು ಸಾವಿನೊಂದಿಗೆ ಸೆಣಸಾಟ ಮಾಡುತ್ತಿರುವ ದಾರುಣ ಸನ್ನಿವೇಶವನ್ನು ಈಮೇಲಲ್ಲಿ ವಾಟ್ಸಾಪಿನಲ್ಲಿ ಹಂಚಿಕೊಳ್ಳುತ್ತಿದ್ದರು. ತುಷಾರ ನಮದು ಜೀವಬಿಟ್ಟ ದಿನ, ಹತಾಶೆಯಿಂದ ಎದೆ ಬಿರಿವಂತೆ ತಮ್ಮ ಶೋಕ ತೋಡಿಕೊಂಡಿದ್ದರು. ಈಗ ಅವರು ತುಷಾರನ ಆರೈಕೆಯಲ್ಲಿ ಪಟ್ಟ ಪಾಡು ಪುಸ್ತಕವಾಗಿ ಹೊರಬಂದಿದೆ. ತಾಯ ಅಳಲೆಲ್ಲವೂ ಹೆಪ್ಪುಗಟ್ಟಿದಂತೆ ಅದರೊಳಗೆ ಬಂದಿದೆ.

ಈ ಪುಸ್ತಕವನ್ನು ಕೇವಲ ಶಾಮಲಾ ಅವರು ಬರೆದಿಲ್ಲ. ಇದರಲ್ಲಿ ತುಷಾರನ ಗೆಳೆಯರಾದ ಸಂಜಯ ಮುಖರ್ಜಿ, ಪ್ರಸಾದ ನಾಯ್ಕರ ಬರೆಹಗಳಿವೆ. ಶ್ಯಾಮಲಾ ಅವರ ಗೆಳತಿ, ಕನ್ನಡ ಲೇಖಕಿ ನೇಮಿಚಂದ್ರ ಅವರ ಬರೆಹವಿದೆ. ಎಲ್ಲವೂ ತುಷಾರನ ಜೀವನ ಪ್ರೀತಿಯ ಬಗೆಗಿನ ಬರೆಹಗಳು. ಬೇನೆ ನೋವು ಸಾವಿನ ದಾರುಣತೆಯನ್ನು ಕುರಿತವು.

ಇವುಗಳಲ್ಲೆಲ್ಲ ಹೆತ್ತತಾಯಿ ಶ್ಯಾಮಲಾ ಅವರ ಬರೆಹವು ದೀರ್ಘವಾಗಿದೆ. ಅವರ ಬರೆಹದ ವಿಶೇಷತೆ ಎಂದರೆ, ತುಷಾರನ ಹುಟ್ಟು, ಬಾಲ್ಯದ ಆಟೋಟ, ತಾರುಣ್ಯದ ಚಟುವಟಿಕೆ, ಯೌವನದ ಚಿಂತನಶೀಲತೆ, ಬೇನೆಯ ಜತೆ ಮಾಡಿದ ಸೆಣಸಾಟ ಎಲ್ಲವೂ ಒಟ್ಟೊಟ್ಟಿಗೆ ಬಂದಿರುವುದು. ಇದು, ಕಾಲಾನುಕ್ರಮಣಿಕೆ ಇದ್ದೂ ಅದನ್ನು ಮುರಿದಿರುವ ವಿಶಿಷ್ಟ ಕಥನಕ್ರಮ. ಕಾಲ ಎಂದರೆ ಸಮಯ ಮಾತ್ರವಲ್ಲ, ಸಾವು ಎಂದೂ ಅರ್ಥವಿದೆಯಷ್ಟೆ. ಈ ಕಾಲಕ್ರಮವನ್ನು ಬೆರೆಸುವ ಕ್ರಮವು, ಜೀವವೊಂದು ಲೋಕಕ್ಕೆ ಆಗಮಿಸುವ ಮತ್ತು ತೆರಳುವ ನಡುವಿನ ಕಾಲದ ಬದುಕನ್ನು ಹಿಡಿಯುವುದಕ್ಕೆ ಲೇಖಕಿ ಕಂಡುಕೊಂಡಿರುವ ದಾರ್ಶನಿಕ ಕ್ರಮದಂತೆಯೂ ತೋರುವುದು.

ಇದನ್ನೂ ಓದಿ: ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಈ ಅನುಭವ ಕಥನದಲ್ಲಿ ಕಾಣುವ ವಿಶೇಷತೆ ಎಂದರೆ, ಮಹಾನಗರದ ಹೊಸ ಔದ್ಯೋಗಿಕ ಜಗತ್ತಿನಲ್ಲಿ, ಏರ್ಪಡುವ ಭಾಷಾತೀತ ಧರ್ಮಾತೀತ ಜಾತ್ಯತೀತ ಮಾನವ ಸಂಬಂಧಗಳು. ತುಷಾರನ ಗೆಳೆಯ ಗೆಳತಿಯರು, ವೈದ್ಯರು, ಕಷ್ಟಕ್ಕೆ ಮಿಡಿವ ಲೇಖಕಿಯ ಗೆಳತಿಯರು, ಶಿಕ್ಷಕರು, ಸಹಾಯಕರು- ಎಲ್ಲರೂ ಕೇವಲ ಮನುಷ್ಯರು. ಹೀಗಾಗಿ ಈ ಕೃತಿ ಬೇನೆಗೆ ಒಳಗಾಗಿ ಒಬ್ಬ ಯುವಕ ಅಕಾಲಿಕವಾಗಿ ಮೃತ್ಯುವಶವಾದ, ಅವನ ತಾಯಿ ಮಗನನ್ನು ಉಳಿಸಿಕೊಳ್ಳಲು ಸೆಣಸಾಟ ಮಾಡುವ ಕಥನ ಮಾತ್ರವಲ್ಲ; ಮನುಷ್ಯರ ನೋವು ನಲಿವುಗಳಲ್ಲಿ ಕೇವಲ ಪ್ರೀತಿ ಅಂತಃಕರಣದಿಂದ ಒದಗುವ ಲೋಕದ ಕಾರುಣ್ಯದ ಕಥನವೂ ಆಗಿದೆ.

ಇಡೀ ಕೃತಿಯಲ್ಲಿ ಇರುವ ಅನುಭವವು ಸಾವಿನಂತಹ ಕಠೋರ ಸತ್ಯದ ಮುಖಾಮುಖಿಯಲ್ಲಿ ಹುಟ್ಟುವುದರಿಂದ, ಅದರ ನಿರೂಪಣೆಯಲ್ಲಿ ಒಂದು ಬಗೆಯ ದಾರ್ಶನಿಕ ಎನ್ನಬಹುದಾದ ನೋಟಗಳಿವೆ, ಮಾತುಗಳಿವೆ. ಇದು ದುಃಖದ ಒಡಲಲ್ಲೇ ಹುಟ್ಟುವ ಅಧ್ಯಾತ್ಮ.

ಕನ್ನಡದಲ್ಲಿ ಈ ಬಗೆಯ ಕೃತಿಗಳು ಬಹಳ ಇಲ್ಲ. ನಾನು ಓದಿರುವ ಎರಡು ಕೃತಿಗಳೆಂದರೆ, ನನಗೆ ಪಾಠ ಹೇಳಿದ ಶಿಕ್ಷಕ ಸಣ್ಣರಾಮ ಅವರು (ಅಳುನುಂಗಿ ನಗುವೊಮ್ಮೆ) ಹಾಗೂ ಬೀದರಿನ ಮಿತ್ರರಾದ ಶಂಭುಲಿಂಗ ವಾಲ್ದೊಡ್ಡಿಯವರು (ಮಹಾತಾಯಿ) ತಮ್ಮತಮ್ಮ ಮಡದಿಯರ ಕ್ಯಾನ್ಸರ್ ಕಾಯಿಲೆಯೊಂದಿಗೆ, ದವಾಖಾನೆ ಮತ್ತು ಮನೆಯಲ್ಲಿ ಮಾಡಿದ ಹೋರಾಟ ಕುರಿತ ಅನುಭವ ಕಥನಗಳು. ಶ್ಯಾಮಲಾ ಅವರ ಪುಸ್ತಕವನ್ನೂ ಒಳಗೊಂಡಂತೆ ಇವೆಲ್ಲವೂ ಕೇವಲ ವೇದನೆಯ ಕಥನಗಳಾಗಿಲ್ಲ. ಸಾವನ್ನು ಸ್ವೀಕರಿಸಿದ ವ್ಯಕ್ತಿ ಬದುಕಿದ್ದಾಗ ಬಾಳಿದ ದೊಡ್ಡ ಬದುಕಿನ ಚಿತ್ರಗಳೂ ಆಗಿವೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದೊಂದಿಗಿನ ಯುದ್ಧಕ್ಕೆ ಇರಾನ್ 40 ವರ್ಷಗಳಿಂದ ಸಿದ್ಧವಾಗಿತ್ತು: ನಿವೃತ್ತ ಲೆಫ್ಟಿನೆಂಟ್ ಜನರಲ್ ಧಿಲ್ಲೋನ್

"ತನ್ನ ಅತ್ಯುನ್ನತ ನಾಯಕತ್ವವನ್ನು ಕಳೆದುಕೊಳ್ಳುವಂತಹ ತುರ್ತು ಪರಿಸ್ಥಿತಿಗಳು ಸೇರಿದಂತೆ, ಅಮೆರಿಕದೊಂದಿಗಿನ ಸಂಭಾವ್ಯ ಯುದ್ಧಕ್ಕಾಗಿ ಇರಾನ್ ನಾಲ್ಕು ದಶಕಗಳಿಂದ ಸಿದ್ಧತೆ ನಡೆಸಿದೆ. ಹೀಗಾಗಿ ಎದುರಾಳಿಗಳಿಗೆ ಆ ದೇಶವನ್ನು ಸಂಪೂರ್ಣವಾಗಿ ನಾಶಪಡಿಸುವುದು ಕಷ್ಟಕರವಾಗಿದೆ" ಎಂದು ಭಾರತೀಯ...

ಸಚಿವ ಬಿ. ನಾಗೇಂದ್ರ ವಜಾಗೆ ಆಗ್ರಹಿಸಿ ಆಗಸ್ಟ್ 24ರಂದು ವಿಧಾನಸೌಧ ಮುತ್ತಿಗೆಗೆ ಕರೆ ನೀಡಿದ ಬಿಜೆಪಿ: ಉಲ್ಬಣಗೊಂಡ ರಾಜಕೀಯ ಸಂಘರ್ಷ

ಕರ್ನಾಟಕದ ರಾಜಕೀಯ ವಲಯದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣವು ಭಾರಿ ಸಂಚಲನ ಮೂಡಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಸಮರ...

ಕೇರಳ ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯ; ದಲಿತ ಪಿಎಚ್‌ಡಿ ಸಂಶೋಧಕಿಯಿಂದ ಆರೋಪ

ತುಂಚತ್ ಎಝುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯದ (ಟಿಇಎಂಯು) ದಲಿತ ಸಂಶೋಧಕಿಯೊಬ್ಬರು, "ಸಹಾಯಕ ಪ್ರಾಧ್ಯಾಪಕರೊಬ್ಬರು ತಮ್ಮ ವಿರುದ್ಧ ಜಾತಿ ಆಧಾರಿತ ತಾರತಮ್ಯ, ಕಿರುಕುಳ ಮತ್ತು ಪಿಎಚ್‌ಡಿ ಸಂಶೋಧನೆಗೆ ಅಡ್ಡಿಪಡಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ. ಆಗಸ್ಟ್ 15 ರಿಂದ ತಿರೂರಿನ...

ಉತ್ತರ ಪ್ರದೇಶ| ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ತನ್ನದೇ ಅಂಗಡಿಯ ಸಿಹಿತಿಂಡಿ ತಿನ್ನಲು ನಿರಾಕರಿಸಿದ ಮಾಲೀಕ

ಆಹಾರ ಸುರಕ್ಷತಾ ದಾಳಿಯ ವೇಳೆ ಸಿಹಿ ತಿಂಡಿ ಅಂಗಡಿಯ ಮಾಲೀಕನೊಬ್ಬ ತನ್ನದೇ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಸಿಹಿತಿಂಡಿಯನ್ನು ತಿನ್ನಲು ನಿರಾಕರಿಸಿ ಸುದ್ದಿಯಾಗಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಕಲಬೆರಕೆ ಹಾಗೂ ನಕಲಿ ಸಿಹಿತಿಂಡಿಗಳನ್ನು ಮಾರಾಟ...

ದೇಶದ ಅಭಿವೃದ್ಧಿಗೆ ಕೌಶಲ್ಯದ ಕೊರತೆ ಸವಾಲು: 8.7 ಕೋಟಿ ಯುವಜನರು ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದ ನೀತಿ ಆಯೋಗ

ಭಾರತದ ಆರ್ಥಿಕ ಪ್ರಗತಿ ಹಾಗೂ ಭವಿಷ್ಯದ ಅಭಿವೃದ್ಧಿಯ ಹಾದಿಯಲ್ಲಿ ದೇಶದ ಯುವಶಕ್ತಿಯನ್ನು ಬಳಸಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ. ಆದರೆ ಪ್ರಸ್ತುತ ದೇಶದಲ್ಲಿ ಕೋಟ್ಯಂತರ ಯುವಜನರು ಯಾವುದೇ ರೀತಿಯ ಶಿಕ್ಷಣ, ಉದ್ಯೋಗ ಅಥವಾ ಕೌಶಲ್ಯ ತರಬೇತಿಯಲ್ಲಿ...

ಮೀಸಲಾತಿ ಭಿಕ್ಷೆಯಲ್ಲ, ಸಾಂವಿಧಾನಿಕ ಹಕ್ಕು: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್

"ಯಾರದ್ದೋ ಬೇಡಿಕೆಗೆ ಮೀಸಲಾತಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಇದು ತಲೆಮಾರುಗಳಿಂದ ಸಾಮಾಜಿಕ ತಾರತಮ್ಯವನ್ನು ಎದುರಿಸಿದ ಸಮುದಾಯಗಳನ್ನು ಬೆಂಬಲಿಸಲು ಇರುವ ಸಾಂವಿಧಾನಿಕ ಹಕ್ಕು" ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಶುಕ್ರವಾರ ಹೇಳಿದ್ದಾರೆ. ದೆಹಲಿಗೆ ತೆರಳುವ...

ಸರ್ಕಾರಿ ಶಾಲೆಗೆ ಅತಿಕ್ರಮಣ ಮತ್ತು ಶಿಕ್ಷಕರಿಗೆ ಬೆದರಿಕೆ ಆರೋಪ: ಲಾತೂರ್‌ನಲ್ಲಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ವಿರುದ್ಧ ಎಫ್‌ಐಆರ್ ದಾಖಲು

ಅನುಮತಿಯಿಲ್ಲದೆ ಸರ್ಕಾರಿ ಶಾಲೆಯ ತರಗತಿ ಕೊಠಡಿಗೆ ಪ್ರವೇಶಿಸಿ, ಶೈಕ್ಷಣಿಕ ಕಾರ್ಯಗಳಿಗೆ ಅಡ್ಡಿಪಡಿಸಿದ ಹಾಗೂ ಕರ್ತವ್ಯದಲ್ಲಿದ್ದ ಶಿಕ್ಷಕರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಮತ್ತು ಅವರ...

ಸರ್ಕಾರಿ ಶಾಲೆಗೆ ಅತಿಕ್ರಮಣ ಮತ್ತು ಶಿಕ್ಷಕರಿಗೆ ಬೆದರಿಕೆ ಆರೋಪ: ಲಾತೂರ್‌ನಲ್ಲಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ವಿರುದ್ಧ ಎಫ್‌ಐಆರ್ ದಾಖಲು

ಅನುಮತಿಯಿಲ್ಲದೆ ಸರ್ಕಾರಿ ಶಾಲೆಯ ತರಗತಿ ಕೊಠಡಿಗೆ ಪ್ರವೇಶಿಸಿ, ಶೈಕ್ಷಣಿಕ ಕಾರ್ಯಗಳಿಗೆ ಅಡ್ಡಿಪಡಿಸಿದ ಹಾಗೂ ಕರ್ತವ್ಯದಲ್ಲಿದ್ದ ಶಿಕ್ಷಕರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಮತ್ತು ಅವರ...

ಶೇ.80 ರಷ್ಟು ಮಹಿಳೆಯರು ಕಿರುಕುಳ ಎದುರಿಸುತ್ತಿದ್ದಾರೆ; ಹಿಂಸಾಚಾರವು ಅವರ ಪ್ರಗತಿಗೆ ಅಡ್ಡಿಯಾಗಿದೆ: ರಾಹುಲ್ ಗಾಂಧಿ

ದೇಶದ ಅತಿದೊಡ್ಡ ಆಸ್ತಿಯಾಗಿರುವ ಮಹಿಳೆಯರು ಪ್ರಗತಿ ಸಾಧಿಸುವುದನ್ನು ತಡೆಯಲು ಸಮಾಜದಲ್ಲಿ ಹಿಂಸಾಚಾರವನ್ನು ಬಳಸಲಾಗುತ್ತಿದೆ. ಶೇಕಡಾ 80 ರಷ್ಟು ಜನರು ಕಿರುಕುಳ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ...

‘ಅಕ್ರಮ ವಲಸಿಗರ ಪರಿಶೀಲನೆ’ ನೆಪದಲ್ಲಿ ಬಂಗಾಳಿ ವಲಸೆ ಕಾರ್ಮಿಕರ ಮೇಲೆ ಬೆಂಗಳೂರು ಪೊಲೀಸರಿಂದ ದೌರ್ಜನ್ಯ: ಜಂಟಿ ಸತ್ಯಶೋಧನಾ ವರದಿ

ಬೆಂಗಳೂರು ನಗರದಲ್ಲಿ ನಡೆದ "ಅಕ್ರಮ ವಲಸಿಗರ ಪರಿಶೀಲನೆ" ಕಾರ್ಯಾಚರಣೆಯ ಹೆಸರಿನಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರನ್ನು ಭಾಷೆ ಮತ್ತು ವರ್ಗದ ಆಧಾರದ ಮೇಲೆ ಪ್ರೊಫೈಲಿಂಗ್ ಮಾಡಿ, ಅವರ ಮೇಲೆ ಅನಿಯಂತ್ರಿತ ಬಂಧನ, ಹಲ್ಲೆ...