Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

ಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

- Advertisement -
- Advertisement -

ನಾನು ಮುಂಬೈ ಹೋದಾಗಲೆಲ್ಲ ಅಲ್ಲಿನ ಅನೇಕ ಜೀವನೋತ್ಸಾಹದ ಮಹಿಳೆಯರನ್ನು ಕಾಣುತ್ತೇನೆ. ಇವರೆಲ್ಲರೂ ಗೃಹಿಣಿಯರು ಅಥವಾ ಮತ್ತಿತರ ಉದ್ಯೋಗದಲ್ಲಿರುವವರು. ಬರೆಹ ಅವರ ಪ್ರವೃತ್ತಿ. ಇವರಲ್ಲಿ ಅನೇಕರು ಪಿಎಚ್.ಡಿ. ಪದವಿ ಪಡೆದವರು. ಕೆಲವರು ಜಗತ್ತಿನ ಸಾಹಿತ್ಯದಿಂದ ಕನ್ನಡಕ್ಕೆ ಅಗತ್ಯವಾದ ಕೃತಿಗಳನ್ನು ಅನುವಾದ ಮಾಡಿದವರು. ಇವರಲ್ಲಿ ಸೋಮೇಶ್ವರ ಉಚ್ಚಿಲ ಮೂಲದ ಶಾಮಲಾ ಮಾಧವ ಕೂಡ ಒಬ್ಬರು. ಇವರ ಪುಸ್ತಕ ಬಿಡುಗಡೆಗೊಮ್ಮೆ ನಾನು ಮುಂಬೈ ಹೋಗಿದ್ದೆ. ಕಾರ್ಯಕ್ರಮ ಮುಗಿಸಿ ಪುಣೆಗೆ ಹೋಗಿ ಅಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ಅಮೀರಬಾಯಿ ಕರ್ನಾಟಕಿ ಬಗ್ಗೆ ಮಾಹಿತಿ ಹುಡುಕಬೇಕಿತ್ತು. ಆಗ ಶ್ಯಾಮಲಾ ಅವರು ಪುಣೆವಾಸಿಯೂ ಸಾಫ್ಟ್‌ವೇರ್ ಇಂಜಿನಿಯರನೂ ಆದ ತಮ್ಮ ಮಗ ತುಷಾರನ ಜತೆಮಾಡಿ ನನಗೆ ಕಳಿಸಿಕೊಟ್ಟರು. ತುಷಾರ ನನ್ನನ್ನು ಫಿಲ್ಮ ಇನ್ಸ್ಟಿಟ್ಯೂಟ್‌ಗೆ ಕರೆದುಕೊಂಡು ಹೋದರು. ನಾನಲ್ಲಿ ಇದ್ದಷ್ಟೂ ದಿನ ನನಗೆ ಬಗೆಬಗೆಯ ಸಹಾಯ ನೀಡಿದರು. ನನಗೆ ನೆನಪಿರುವಂತೆ, ಅವರಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿತ್ತು. ದಾರ್ಶನಿಕ ಮನೋಭಾವವಿತ್ತು.

ಹೀಗಿರುತ್ತ ಒಂದು ದಿನ ಶ್ಯಾಮಲಾ ಅವರು ನನಗೆ ನೋವಿನಿಂದ ಪತ್ರ ಬರೆದರು: “ನನ್ನ ಮಗು ತುಷಾರನಿಗೆ ಹುಶಾರಿಲ್ಲ. ನನ್ನ ಹೃದಯ ಚಡಪಡಿಸುತ್ತಿದೆ. ಕ್ಯಾನ್ಸರಂತೆ. ಏನು ಮಾಡಲಿ ರಹಮತ್? ದಿಕ್ಕೇ ತೋಚುತ್ತಿಲ್ಲ”. ಇದಾದ ಬಳಿಕ ಅವರು ಸಾವಿನೊಂದಿಗೆ ಸೆಣಸಾಟ ಮಾಡುತ್ತಿರುವ ದಾರುಣ ಸನ್ನಿವೇಶವನ್ನು ಈಮೇಲಲ್ಲಿ ವಾಟ್ಸಾಪಿನಲ್ಲಿ ಹಂಚಿಕೊಳ್ಳುತ್ತಿದ್ದರು. ತುಷಾರ ನಮದು ಜೀವಬಿಟ್ಟ ದಿನ, ಹತಾಶೆಯಿಂದ ಎದೆ ಬಿರಿವಂತೆ ತಮ್ಮ ಶೋಕ ತೋಡಿಕೊಂಡಿದ್ದರು. ಈಗ ಅವರು ತುಷಾರನ ಆರೈಕೆಯಲ್ಲಿ ಪಟ್ಟ ಪಾಡು ಪುಸ್ತಕವಾಗಿ ಹೊರಬಂದಿದೆ. ತಾಯ ಅಳಲೆಲ್ಲವೂ ಹೆಪ್ಪುಗಟ್ಟಿದಂತೆ ಅದರೊಳಗೆ ಬಂದಿದೆ.

ಈ ಪುಸ್ತಕವನ್ನು ಕೇವಲ ಶಾಮಲಾ ಅವರು ಬರೆದಿಲ್ಲ. ಇದರಲ್ಲಿ ತುಷಾರನ ಗೆಳೆಯರಾದ ಸಂಜಯ ಮುಖರ್ಜಿ, ಪ್ರಸಾದ ನಾಯ್ಕರ ಬರೆಹಗಳಿವೆ. ಶ್ಯಾಮಲಾ ಅವರ ಗೆಳತಿ, ಕನ್ನಡ ಲೇಖಕಿ ನೇಮಿಚಂದ್ರ ಅವರ ಬರೆಹವಿದೆ. ಎಲ್ಲವೂ ತುಷಾರನ ಜೀವನ ಪ್ರೀತಿಯ ಬಗೆಗಿನ ಬರೆಹಗಳು. ಬೇನೆ ನೋವು ಸಾವಿನ ದಾರುಣತೆಯನ್ನು ಕುರಿತವು.

ಇವುಗಳಲ್ಲೆಲ್ಲ ಹೆತ್ತತಾಯಿ ಶ್ಯಾಮಲಾ ಅವರ ಬರೆಹವು ದೀರ್ಘವಾಗಿದೆ. ಅವರ ಬರೆಹದ ವಿಶೇಷತೆ ಎಂದರೆ, ತುಷಾರನ ಹುಟ್ಟು, ಬಾಲ್ಯದ ಆಟೋಟ, ತಾರುಣ್ಯದ ಚಟುವಟಿಕೆ, ಯೌವನದ ಚಿಂತನಶೀಲತೆ, ಬೇನೆಯ ಜತೆ ಮಾಡಿದ ಸೆಣಸಾಟ ಎಲ್ಲವೂ ಒಟ್ಟೊಟ್ಟಿಗೆ ಬಂದಿರುವುದು. ಇದು, ಕಾಲಾನುಕ್ರಮಣಿಕೆ ಇದ್ದೂ ಅದನ್ನು ಮುರಿದಿರುವ ವಿಶಿಷ್ಟ ಕಥನಕ್ರಮ. ಕಾಲ ಎಂದರೆ ಸಮಯ ಮಾತ್ರವಲ್ಲ, ಸಾವು ಎಂದೂ ಅರ್ಥವಿದೆಯಷ್ಟೆ. ಈ ಕಾಲಕ್ರಮವನ್ನು ಬೆರೆಸುವ ಕ್ರಮವು, ಜೀವವೊಂದು ಲೋಕಕ್ಕೆ ಆಗಮಿಸುವ ಮತ್ತು ತೆರಳುವ ನಡುವಿನ ಕಾಲದ ಬದುಕನ್ನು ಹಿಡಿಯುವುದಕ್ಕೆ ಲೇಖಕಿ ಕಂಡುಕೊಂಡಿರುವ ದಾರ್ಶನಿಕ ಕ್ರಮದಂತೆಯೂ ತೋರುವುದು.

ಇದನ್ನೂ ಓದಿ: ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಈ ಅನುಭವ ಕಥನದಲ್ಲಿ ಕಾಣುವ ವಿಶೇಷತೆ ಎಂದರೆ, ಮಹಾನಗರದ ಹೊಸ ಔದ್ಯೋಗಿಕ ಜಗತ್ತಿನಲ್ಲಿ, ಏರ್ಪಡುವ ಭಾಷಾತೀತ ಧರ್ಮಾತೀತ ಜಾತ್ಯತೀತ ಮಾನವ ಸಂಬಂಧಗಳು. ತುಷಾರನ ಗೆಳೆಯ ಗೆಳತಿಯರು, ವೈದ್ಯರು, ಕಷ್ಟಕ್ಕೆ ಮಿಡಿವ ಲೇಖಕಿಯ ಗೆಳತಿಯರು, ಶಿಕ್ಷಕರು, ಸಹಾಯಕರು- ಎಲ್ಲರೂ ಕೇವಲ ಮನುಷ್ಯರು. ಹೀಗಾಗಿ ಈ ಕೃತಿ ಬೇನೆಗೆ ಒಳಗಾಗಿ ಒಬ್ಬ ಯುವಕ ಅಕಾಲಿಕವಾಗಿ ಮೃತ್ಯುವಶವಾದ, ಅವನ ತಾಯಿ ಮಗನನ್ನು ಉಳಿಸಿಕೊಳ್ಳಲು ಸೆಣಸಾಟ ಮಾಡುವ ಕಥನ ಮಾತ್ರವಲ್ಲ; ಮನುಷ್ಯರ ನೋವು ನಲಿವುಗಳಲ್ಲಿ ಕೇವಲ ಪ್ರೀತಿ ಅಂತಃಕರಣದಿಂದ ಒದಗುವ ಲೋಕದ ಕಾರುಣ್ಯದ ಕಥನವೂ ಆಗಿದೆ.

ಇಡೀ ಕೃತಿಯಲ್ಲಿ ಇರುವ ಅನುಭವವು ಸಾವಿನಂತಹ ಕಠೋರ ಸತ್ಯದ ಮುಖಾಮುಖಿಯಲ್ಲಿ ಹುಟ್ಟುವುದರಿಂದ, ಅದರ ನಿರೂಪಣೆಯಲ್ಲಿ ಒಂದು ಬಗೆಯ ದಾರ್ಶನಿಕ ಎನ್ನಬಹುದಾದ ನೋಟಗಳಿವೆ, ಮಾತುಗಳಿವೆ. ಇದು ದುಃಖದ ಒಡಲಲ್ಲೇ ಹುಟ್ಟುವ ಅಧ್ಯಾತ್ಮ.

ಕನ್ನಡದಲ್ಲಿ ಈ ಬಗೆಯ ಕೃತಿಗಳು ಬಹಳ ಇಲ್ಲ. ನಾನು ಓದಿರುವ ಎರಡು ಕೃತಿಗಳೆಂದರೆ, ನನಗೆ ಪಾಠ ಹೇಳಿದ ಶಿಕ್ಷಕ ಸಣ್ಣರಾಮ ಅವರು (ಅಳುನುಂಗಿ ನಗುವೊಮ್ಮೆ) ಹಾಗೂ ಬೀದರಿನ ಮಿತ್ರರಾದ ಶಂಭುಲಿಂಗ ವಾಲ್ದೊಡ್ಡಿಯವರು (ಮಹಾತಾಯಿ) ತಮ್ಮತಮ್ಮ ಮಡದಿಯರ ಕ್ಯಾನ್ಸರ್ ಕಾಯಿಲೆಯೊಂದಿಗೆ, ದವಾಖಾನೆ ಮತ್ತು ಮನೆಯಲ್ಲಿ ಮಾಡಿದ ಹೋರಾಟ ಕುರಿತ ಅನುಭವ ಕಥನಗಳು. ಶ್ಯಾಮಲಾ ಅವರ ಪುಸ್ತಕವನ್ನೂ ಒಳಗೊಂಡಂತೆ ಇವೆಲ್ಲವೂ ಕೇವಲ ವೇದನೆಯ ಕಥನಗಳಾಗಿಲ್ಲ. ಸಾವನ್ನು ಸ್ವೀಕರಿಸಿದ ವ್ಯಕ್ತಿ ಬದುಕಿದ್ದಾಗ ಬಾಳಿದ ದೊಡ್ಡ ಬದುಕಿನ ಚಿತ್ರಗಳೂ ಆಗಿವೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...