Homeಮುಖಪುಟಬಿಹಾರದಲ್ಲಿ ಆನಂದ್ ಮೋಹನ್ ಅವರ ಬಿಡುಗಡೆ ಮತ್ತು ರಾಜಕಾರಣಿಗಳ ಹುಸಿ ಸಾಮಾಜಿಕ ನ್ಯಾಯ

ಬಿಹಾರದಲ್ಲಿ ಆನಂದ್ ಮೋಹನ್ ಅವರ ಬಿಡುಗಡೆ ಮತ್ತು ರಾಜಕಾರಣಿಗಳ ಹುಸಿ ಸಾಮಾಜಿಕ ನ್ಯಾಯ

- Advertisement -
- Advertisement -

ಬಿಹಾರ ಸರಕಾರವು ಆನಂದ ಮೋಹನ್ ಎಂಬ ಗೂಂಡಾ ರಾಜಕಾರಣಿಯನ್ನು ಜೈಲಿನಿಂದ ಬಿಡುಗಡೆಗೊಳಿಸಿರುವುದು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತೇವೆ ಎಂದು ಹೇಳುವ ರಾಜಕಾರಣಿಗಳ ಇಬ್ಬಗೆ ನೀತಿಯನ್ನು ಎತ್ತಿತೋರಿಸುತ್ತದೆ. ಆತನನ್ನು ಬಿಡುಗಡೆ ಮಾಡುವ ಸರಕಾರದ ನಿರ್ಧಾರವು ಸಾಮಾಜಿಕ ಬಹುಸಂಖ್ಯಾತವಾದದ ಅಪಾಯಗಳನ್ನು ಅನಾವರಣಗೊಳಿಸಿದೆ.

******

ಸಾಮಾಜಿಕ ನ್ಯಾಯದ ಮಹಾನ್ ಪ್ರತಿಮೆಯಾದ ಲಾಲೂ ಪ್ರಸಾದ್ ಯಾದವ್ ಬಿಹಾರವನ್ನು ಆಳುತ್ತಿದ್ದಾಗ, ಡಿಸೆಂಬರ್ 5, 1994ರಂದು ಗೋಪಾಲ್ ಗಂಜ್‌ನ ಕಲೆಕ್ಟರ್ ಜಿ. ಕೃಷ್ಣಯ್ಯ ಅವರನ್ನು ರಾಜಕಾರಣಿಯಾಗಿ ಬದಲಾದ ಗೂಂಡಾ- ಆನಂದ ಮೋಹನ್ ಎಂಬಾತನ ನೇತೃತ್ವದಲ್ಲಿ ಗುಂಪೊಂದು ಕಲ್ಲು ಹೊಡೆದು ಕೊಂದಿತ್ತು. ಸಾಮಾಜಿಕ ನ್ಯಾಯದ ಇನ್ನೊಂದು ಪ್ರತಿಮೆಯಾಗಿರುವ, ಈಗ ಬಿಹಾರದ ಮುಖ್ಯಮಂತ್ರಿಯೂ ಆಗಿರುವ ನಿತೀಶ್ ಕುಮಾರ್ ಅವರು, ಕೃಷ್ಣಯ್ಯ ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈ ಆನಂದ ಮೋಹನ್‌ನ ಬಿಡುಗಡೆಗೆ ದಾರಿ ಮಾಡಿಕೊಟ್ಟಿದ್ದಾರೆ. ಆತನನ್ನು ಬಿಡುಗಡೆಗೊಳಿಸಿಯೂ ಆಗಿದೆ.

ಕೃಷ್ಣಯ್ಯ ಅವರು ದಾಳಿಯ ವೇಳೆ ಕಲ್ಲುಗಳೇಟಿನಿಂದ ಸಾವಿಗೀಡಾದರು. ಈ ದಾಳಿಯ ಹಿಂದಿನ ಸಾಂಕೇತಿಕತೆಯು ಒಂದು ಕಾಲಘಟ್ಟಗಳನ್ನು ಮೀರುವ ಸಾಧ್ಯತೆಯಿದೆ. ಸಂವಿಧಾನವು ಆಧುನಿಕತೆಯ ಒಂದು ಯುಗವನ್ನು ಪ್ರವರ್ತಿಸಿದೆ. ಕಾನೂನಿನ ಆಡಳಿತ ಎಂಬ ಮೆಕಾಲೆಯ ಬೀಜವನ್ನು ಸೂಟುಬೂಟುಗಳಲ್ಲಿ ಅಲಂಕೃತರಾದ ಬ್ರಿಟಿಷ್ ರಾಣಿಯ ಮಕ್ಕಳು ಸೂಲಗಿತ್ತಿಯರಾಗಿ ಬೆಳೆಸಿದರು. ಆದುದರಿಂದ ಒಬ್ಬ “ಅಸ್ಪೃಶ್ಯ” ಕಾನೂನೇ ಇಲ್ಲದ ಗೋಪಾಲ್ ಗಂಜ್‌ನ ಕಲೆಕ್ಟರ್ ಆದ; ಮತ್ತು ಶಿಲಾಯುಗದ ಒಂದು ಸಾಮಾಜಿಕ ನೈತಿಕತೆಯು ಆತನನ್ನು ಕಲ್ಲೆಸೆದು ಕೊಂದಿತು.

ಕೃಷ್ಣಯ್ಯ ಅವರು ಭಾರತದ ಗಣರಾಜ್ಯವನ್ನು ಗೋಪಾಲ್ ಗಂಜ್‌ನಲ್ಲಿ ಪ್ರತಿನಿಧಿಸುತ್ತಿದ್ದ ವ್ಯಕ್ತಿ. ಡಿ.ಸಿಗಳು ಈ ಗಣರಾಜ್ಯದ ತಳಮಟ್ಟದಲ್ಲಿನ ರಾಯಭಾರಿಗಳು. ಸರಕಾರವು ತಳಮಟ್ಟದಲ್ಲಿ ಒಂದು ಪ್ರಾತಿನಿಧ್ಯವನ್ನು ಹೊಂದಿದ್ದೇ ಆಗಿದ್ದಲ್ಲಿ- ಅದು ಕಲೆಕ್ಟರ್ ಅಥವಾ ಜಿಲ್ಲಾಧಿಕಾರಿ ಕಚೇರಿ ಆಗಿರುತ್ತದೆ. ಆದುದರಿಂದ, ಜಿಲ್ಲಾಧಿಕಾರಿಯನ್ನು ಕೊಲೆ ಮಾಡುವುದೆಂದರೆ, ಭಾರತೀಯ ಗಣರಾಜ್ಯದ ಮೇಲೆ ದಾಳಿ ಮಾಡಿದಂತೆಯೇ. ಕೊಲೆಗಡುಕರನಿಗೆ ಖಂಡಿತವಾಗಿಯೂ ಈ ಜಿಲ್ಲಾಧಿಕಾರಿಯ ಸಾಮಾಜಿಕ ಹಿನ್ನೆಲೆ ಗೊತ್ತಿರಲೇಬೇಕು. ಕಾನೂನುಪ್ರಕಾರ ಕೊಲೆಗಡುಕನಿಗೆ ಗಲ್ಲಾಗಲೇಬೇಕು. ಬದಲಾಗಿ ಭಾರತೀಯ ಗಣರಾಜ್ಯದ ಶತ್ರುವಿಗೆ ಈಗ ಸ್ವಾತಂತ್ರ್ಯ ನೀಡಲಾಗಿದೆ.

ಲಾಲೂ ಪ್ರಸಾದ್ ಯಾದವ್

ಗಣರಾಜ್ಯದ ಮೇಲಿನ ಈ ದಾಳಿಯು ಸಾಮಾಜಿಕ ನ್ಯಾಯದ ಆಡಳಿತದ ಅಡಿಯಲ್ಲಿ ನಡೆಯಿತು. ಆಗಿನಿಂದ ಸಾಮಾಜಿಕ ನ್ಯಾಯದ ಸಿದ್ಧಾಂತಿಗಳೆಲ್ಲಾ ಅಡಗಿ ಕುಳಿತಿದ್ದಾರೆ. ದಿವಂಗತ ಪತ್ರಕರ್ತ ಚಂದನ್ ಮಿತ್ರಾ ಅವರ ಮಾತುಗಳಲ್ಲಿ ಹೇಳುವುದಾದರೆ, ದಲಿತ ಚಿಂತನೆಯ ಮುಖಂಡರ ಮೌನವು ಶೋಷಕರಿಗೆ ಬಹುಮಾನ ನೀಡುವುದಕ್ಕೆ ಸಮನಾಗಿರುತ್ತದೆ. ದಲಿತರು ಬಹಳ ಕಾಲದಿಂದ ಲಾಲೂ ಪ್ರಸಾದ್ ಯಾದವ್ ಅವರನ್ನು ಬಹುಮಾನಿಸುತ್ತಾ ಬಂದಿದ್ದಾರೆ.

ಸಮಕಾಲೀನ ಭಾರತವು ಎರಡು ಬಗೆಯ ಕಠೋರ ಸತ್ಯಗಳನ್ನು ಎದುರಿಸಲು ನಿರಾಕರಿಸುತ್ತಲೇಬಂದಿದೆ. ಒಂದನೆಯದು: ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಯಾವುದೇ ಸಾಮಾಜಿಕ ಲೆಕ್ಕತಪಾಸಣೆಯಿಲ್ಲ. ಎರಡನೆಯದು: ತಮ್ಮ ಸಾವಿಗೆ ಕಾರಣವಾಗುವ ಬೀದಿ ದೀಪಗಳಿಂದ ಆಕರ್ಷಿತವಾಗುವ ಮಳೆಗಾಲದ ಈಚಲ ಹುಳುಗಳಂತೆ ದಲಿತ ಚಿಂತನೆಯ ನಾಯಕರು ವರ್ತಿಸುತ್ತಾರೆ. ಒಬಿಸಿಗಳು ಬೀದಿದೀಪಗಳಂತೆ.

ಮಂಡಲ್ ಆಯೋಗದ ಅನುಷ್ಠಾನದ ತನಕ- ನನ್ನ ವಿವೇಕ ನನಗೆ ಹೇಳುತ್ತದೆ, ಭಾರತೀಯ ಸಮಾಜವು ದಲಿತ-ಆದಿವಾಸಿ ಹಕ್ಕುಗಳ ಬಗ್ಗೆ ರಾಜಿ ಮಾಡಿಕೊಂಡಿತ್ತು ಮತ್ತು ಸಕಾರಾತ್ಮಕ ಕಾರ್ಯದಲ್ಲಿ ತೊಡಗಿತ್ತು. ಮಂಡಲ್ ಆಯೋಗವು ಆ ಒಮ್ಮತವನ್ನು ನುಚ್ಚುನೂರು ಮಾಡಿತು. ಮಂಡಲ್ ಆಯೋಗದ ಅಧ್ಯಕ್ಷರಾಗಿದ್ದ ಪಿ.ಬಿ. ಮಂಡಲ್ ಅವರು ಆಯೋಗದ ಏಕೈಕ ದಲಿತ ಸದಸ್ಯರಾಗಿದ್ದ ಎಲ್.ಆರ್. ನಾಯ್ಕ್ ಅವರನ್ನು ಅಪಮಾನಿಸಿದ್ದರು ಎಂಬುದನ್ನು ಈಚಲ ಹುಳ್ಳಿಗಳು ಕಡೆಗಣಿಸುತ್ತವೆ. ನಾಯ್ಕ್ ಅವರು ಒಬಿಸಿ ಕೋಟಾವನ್ನು ಎರಡು ಕ್ರಮಗಳಲ್ಲಿ- ಒಂದನೆಯದಾಗಿ, ತೀರಾ ಹಿಂದುಳಿದವರು (ಕುಶಲಕರ್ಮಿಗಳು) ಮತ್ತು ಎರಡನೆಯದಾಗಿ, ಹಿಂದುಳಿದವರು (ರೈತ ಒಬಿಸಿಗಳು)- ವಿಭಜಿಸಬೇಕು ಎಂದು ಆಯೋಗಕ್ಕೆ ಸಲಹೆ ಮಾಡಿದ್ದರು. ಅವರ ಸಲಹೆಯನ್ನು ತಿರಸ್ಕರಿಸಲಾಯಿತು ಮತ್ತು ಅವರು ಆಯೋಗದ ಶಿಫಾರಸ್ಸುಗಳಿಗೆ ಸಹಿ ಹಾಕಲು ನಿರಾಕರಿಸಿದರು. ಬದಲಾಗಿ ಅವರು ಭಿನ್ನಮತದ ಟಿಪ್ಪಣಿಯೊಂದನ್ನು ಸಲ್ಲಿಸಿದರು. ಮಂಡಲ್ ಆಯೋಗದ ಶಿಫಾರಸ್ಸುಗಳಿಗೆ ದಲಿತರ ಒಪ್ಪಿಗೆ ಇಲ್ಲ ಎಂಬುದು ದಲಿತ ಚಿಂತನೆಯ ನಾಯಕರನ್ನು ಎಂದಾದರೂ ಬಾಧಿಸಿದೆಯೆ? ಸವರ್ಣೀಯ/ಮೇಲ್ಜಾತಿ ಭಯವಿರುವ ಚಿಂತನಾಶೀಲ ದಲಿತರು- ಒಬಿಸಿಗಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಬಯಸುತ್ತಾರೆಯೆ?

ಇದನ್ನೂ ಓದಿ: ಉಪಶಮನ ನೀತಿಯಡಿ ಗ್ಯಾಂಗ್‌ಸ್ಟರ್‌ ರಾಜಕಾರಣಿ ಆನಂದ್‌ ಬಿಡುಗಡೆ; ನ್ಯಾಯದ ಅಣಕ ಎಂದ ಐಎಎಸ್ ಸಂಘ

ದಲಿತರು ಲಾಲೂ ಪ್ರಸಾದರ “ಬುರಾ ಬಲಾ” (ಒಳ್ಳೆಯ-ಕೆಟ್ಟ) ಪ್ರಮೇಯದಿಂದ ಉತ್ತೇಜಿತರಾದರೆ? ಕೇವಲ ಸವರ್ಣೀಯರ ವಿನಾಶದಿಂದ ದಲಿತರ ಉದ್ಧಾರವಾಗುವುದು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇವೆಯೇ? ದಶಕಗಳ ಹಿಂದೆ ಬ್ರಾಹ್ಮಣ ಅಧಿಪತ್ಯವನ್ನು ಮುರಿದ ತಮಿಳುನಾಡಿನಲ್ಲಿ ದಲಿತರ ಪರಿಸ್ಥಿತಿ ಏನು? ದಲಿತರ ಬ್ರಾಹ್ಮಣ ವಿರೋಧಿ ಮಾತಿನ ಮಳೆಯ ಕುರಿತ ಮೋಹಕ್ಕೆ ಯಾವುದೇ ತಾರ್ಕಿಕ ವಿವರಣೆಯನ್ನು ಕಂಡುಕೊಳ್ಳಲು ನಾನಂತೂ ವಿಫಲನಾಗಿದ್ದೇನೆ.

ದಲಿತರು ಕಂಡುಕೊಳ್ಳದ್ದು ಮತ್ತು ಸಾಮಾಜಿಕ ನ್ಯಾಯದ ಸಮರ್ಥಕರು ವಿವರಿಸದೇ ಇರುವಂತದ್ದು ಇದು: ಮೇಲೇಳುತ್ತಿರುವ ಎರಡು ಸಾಮಾಜಿಕ ಶಕ್ತಿಗಳು ಒಂದು ಇನ್ನೊಂದರೊಂದಿಗೆ ಸ್ಪರ್ಧಿಸಲು ಬಯಸುತ್ತವೆಯೇ ಹೊರತು ಪರಸ್ಪರ ಸಹಕರಿಸಲು ಅಲ್ಲ. ಈ ಸ್ಪರ್ಧೆಯು ಸುಲಭವಾಗಿ ಸಂಘರ್ಷವಾಗಿ ಪರಿಣಮಿಸಿ ಅವನತಿ ಹೊಂದಬಹುದು. ದಲಿತರು ಮತ್ತು ಒಬಿಸಿಗಳು ಗಣರಾಜ್ಯದ ಸಂಕಲ್ಪದಿಂದ ಅತ್ಯಂತ ಹೆಚ್ಚು ಲಾಭ ಪಡೆದವರು. ದಲಿತ ಬುದ್ಧಿಜೀವಿ ಸಂಪ್ರದಾಯವು ಜಾತಿಪದ್ಧತಿಯನ್ನು ತೊಡೆದುಹಾಕಲು ಬಯಸಿದರೆ, ಒಬಿಸಿ ಸಂಪ್ರದಾಯವು ರಾಜಕೀಯ ಅಧಿಕಾರ ವ್ಯವಸ್ಥೆ ಮತ್ತು ಸಾರ್ವಜನಿಕ ಸಂಸ್ಥೆಗಳಿಂದ ಸವರ್ಣೀಯರನ್ನು ತೊಲಗಿಸಿ, ತಮ್ಮದೇ ಅಧಿಪತ್ಯವನ್ನು ಹೇರಲು ಬಯಸುತ್ತದೆ. ಒಮ್ಮೆ ಆಧಿಕಾರ ಪಡೆದರೆ, ಒಬಿಸಿಗಳು (ಆಳಬೇಕಾದ) ಪ್ರಜೆಗಳಿಗಾಗಿ ಹುಡುಕಲಾರಂಭಿಸುತ್ತಾರೆ ಮತ್ತು ದಲಿತರು ಅವರ ಗುರಿಯಾಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ದಲಿತರು ವಿಫಲರಾಗಿದ್ದಾರೆ. “ನವ ಠಾಕೂರರು” ಠಾಕೂರರಾಗಲು ಬಯಸುತ್ತಾರೆ- ಠಾಕೂರರ ರೀತಿಯ ಔದಾರ್ಯ ಇಲ್ಲದೆಯೇ. ಸಶಕ್ತೀಕರಣಗೊಂಡ ಒಬಿಸಿಗಳು ಸಲಾಮು ಬಯಸುತ್ತಾರೆ, ದಲಿತರು ಅದನ್ನು ನಿರಾಕರಿಸುತ್ತಾರೆ. ದಲಿತರ ಈ ಸ್ಥಿತಿಯು ಅವರನ್ನು ಒಬಿಸಿಗಳ ಜೊತೆ ಸಂಘರ್ಷಕ್ಕೆ ತಳ್ಳುತ್ತದೆ.

ನಿತೀಶ್ ಕುಮಾರ್

ನನ್ನ ಜೀವನದ ಅನುಭವವು ಕಂಡುಕೊಂಡಿರುವಂತೆ, ಒಬಿಸಿಗಳು ಒಂದು ಸಾಮಾಜಿಕ ವರ್ಗವಾಗಿ ಕನಿಷ್ಟ ತರ್ಕಶೀಲರು. ಎಲ್.ಆರ್. ನಾಯ್ಕ್ ಅವರನ್ನು ಉಲ್ಲೇಖಿಸಿ ಹೇಳುವುದಾದರೆ, ಒಬಿಸಿ ಚಿಂತಕರು ತಕ್ಷಣವೇ ನಿಮ್ಮ ಕುರಿತು ಸಂಶಯಪಡುತ್ತಾರೆ. ಯುಪಿ ಗೆಸ್ಟ್‌ಹೌಸ್ ಪ್ರಕರಣವನ್ನು ಉಲ್ಲೇಖಿಸಿ; ಅವರ ಕಣ್ಣು ಕೆಂಪಾಗುತ್ತದೆ. ಅಖಿಲೇಶ್ ಯಾದವ್ ಅವರು ಹಲವಾರು ದಲಿತ ಅಧಿಕಾರಿಗಳನ್ನು ಹಿಂಬಡ್ತಿಗೊಳಿಸಿದ ಆರೋಪದ ವಿಷಯ ಉಲ್ಲೇಖಿಸಿ; ಅವರು ದೂರ ನಡೆದೇಬಿಡುತ್ತಾರೆ.

ಈಗ ನಾವು ಒಂದು ಸಾಮಾಜಿಕ ನ್ಯಾಯದ ಲೆಕ್ಕ ತಪಾಸಣೆ ಮಾಡೋಣ. 1984ರಲ್ಲಿ ರಾಜೀವ್ ಗಾಂಧಿಯವರು ಪ್ರಧಾನಮಂತ್ರಿ ಆದಾಗ ಲಾಲೂ ಪ್ರಸಾದ್ ಯಾದವ್ ಅವರು ಕೇವಲ 36 ವರ್ಷ ವಯಸ್ಸಿನವರಾಗಿದ್ದರು. ಅಧಿಕಾರದಲ್ಲಿ ರಾಜೀವ್ ಗಾಂಧಿಯವರ ಮೊದಲ ಕ್ರಮವೆಂದರೆ, ಉಪಗ್ರಹ ಆಧರಿತ ದೂರ ಶಿಕ್ಷಣವಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಭಾರೀ ಗಾತ್ರದ ಆಂಟೆನಾ ಮತ್ತು ತರಗತಿಗಳಲ್ಲಿ ಟಿವಿ ಸೆಟ್ಟುಗಳನ್ನು ಅಳವಡಿಸಲಾಯಿತು. ವಿದ್ಯುತ್ ಇಲ್ಲದೆ ಯೋಜನೆ ವಿಫಲವಾಯಿತು. ನಂತರ ಅವರು ವಿಶ್ವದಲ್ಲೇ ಅತ್ಯಂತ ದೊಡ್ಡದಾದ ದೂರ ಶಿಕ್ಷಣ ಸಂಸ್ಥೆಯಾದ ಇಂದಿರಾ ಗಾಂಧಿ ರಾಷ್ಟ್ರೀಯ ದೂರ ಶಿಕ್ಷಣ ವಿಶ್ವವಿದ್ಯಾಲಯ (IGNOU) ಸ್ಥಾಪಿಸಿದರು. ಜವಾಹರ್ ನವೋದಯ ವಿದ್ಯಾಲಯಗಳು ಗ್ರಾಮೀಣ ಭಾರತದ ಪ್ರತಿಭೆಗಳನ್ನು ಬೆಳೆಸುವಲ್ಲಿ ಅತ್ಯಂತ ಯಶಸ್ವಿ ಪ್ರಯೋಗಗಳಲ್ಲಿ ಒಂದು. ಈ ಶಾಲೆಗಳ ವಿದ್ಯಾರ್ಥಿಗಳು ಇಂದು ವಿಶ್ವದಾದ್ಯಂತ ಹರಡಿದ್ದಾರೆ. ರಾಜೀವ್ ಗಾಂಧಿಯವರು ಆರಂಭಿಸಿದ ಐಟಿ ಕ್ರಾಂತಿಯ ಬಗ್ಗೆ ಹೇಳುವ ಆಗತ್ಯವೇ ಇಲ್ಲ.

ಹೀಗಿರುವಾಗ, ಸಾಮಾಜಿಕ ನ್ಯಾಯದ ರಾಜಕಾರಣಿಗಳು ಆರಂಭಿಸಿದ ಕ್ರಮಗಳಾದರೂ ಯಾವುವು? ಚಾರ್ವಾಹ ವಿದ್ಯಾಲಯ. ಒಬಿಸಿ ಪ್ರತಿಮೆಗಳು ತಮ್ಮ “ಬಫೆಲೋ ರಾಷ್ಟ್ರೀಯತೆ”ಯ ಪ್ರಮೇಯಕ್ಕಿಂತ ಮೇಲೇರಲು ಸಾಧ್ಯವಾಗಲೇ ಇಲ್ಲ. ಈ ಪ್ರಮೇಯ ಸುಲಭ: ಹಿಂದೆ ಎಷ್ಟು ಉತ್ಪಾದನೆ ಇತ್ತೋ ಅಷ್ಟನ್ನೇ ತಿನ್ನಿರಿ, ಹೊಸದೇನನ್ನೂ ಉತ್ಪಾದಿಸಬೇಡಿ. ಈಗ ಕಾಂಗ್ರೆಸ್ ಕೂಡಾ ಈ ಸಾಮಾಜಿಕ ನ್ಯಾಯದ ರಾಜಕಾರಣಿಗಳಿಗೆ ಕೈಚಾಚಿರುವುದರಿಂದ ದೇಶದ ನಾಶವನ್ನು ನಿಲ್ಲಿಸಲಾಗದು. ಸಾಮಾಜಿಕ ಬಹುಸಂಖ್ಯಾತವಾದ ಕೂಡಾ ಧಾರ್ಮಿಕ ಬಹುಸಂಖ್ಯಾತವಾದದಷ್ಟೇ ಭಯಾನಕವಾಗಬಲ್ಲದು ಎಂಬುದನ್ನು ಕಾಂಗ್ರೆಸ್ ಗಮನಿಸಬೇಕು.

ಕೃಪೆ: ದ ಇಂಡಿಯನ್ ಎಕ್ಸ್‌ಪ್ರೆಸ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಚಂದ್ರ ಭಾನ್ ಪ್ರಸಾದ್
(ಲೇಖಕರು ಯುಎಸ್‌ಎಯ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಮೆರ್ಕಟಸ್ ಸೆಂಟರ್‌ನಲ್ಲಿ ಸಹಯೋಗಿ ವಿದ್ವಾಂಸರಾಗಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...