Homeಮುಖಪುಟಬಿಹಾರದಲ್ಲಿ ಆನಂದ್ ಮೋಹನ್ ಅವರ ಬಿಡುಗಡೆ ಮತ್ತು ರಾಜಕಾರಣಿಗಳ ಹುಸಿ ಸಾಮಾಜಿಕ ನ್ಯಾಯ

ಬಿಹಾರದಲ್ಲಿ ಆನಂದ್ ಮೋಹನ್ ಅವರ ಬಿಡುಗಡೆ ಮತ್ತು ರಾಜಕಾರಣಿಗಳ ಹುಸಿ ಸಾಮಾಜಿಕ ನ್ಯಾಯ

- Advertisement -
- Advertisement -

ಬಿಹಾರ ಸರಕಾರವು ಆನಂದ ಮೋಹನ್ ಎಂಬ ಗೂಂಡಾ ರಾಜಕಾರಣಿಯನ್ನು ಜೈಲಿನಿಂದ ಬಿಡುಗಡೆಗೊಳಿಸಿರುವುದು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತೇವೆ ಎಂದು ಹೇಳುವ ರಾಜಕಾರಣಿಗಳ ಇಬ್ಬಗೆ ನೀತಿಯನ್ನು ಎತ್ತಿತೋರಿಸುತ್ತದೆ. ಆತನನ್ನು ಬಿಡುಗಡೆ ಮಾಡುವ ಸರಕಾರದ ನಿರ್ಧಾರವು ಸಾಮಾಜಿಕ ಬಹುಸಂಖ್ಯಾತವಾದದ ಅಪಾಯಗಳನ್ನು ಅನಾವರಣಗೊಳಿಸಿದೆ.

******

ಸಾಮಾಜಿಕ ನ್ಯಾಯದ ಮಹಾನ್ ಪ್ರತಿಮೆಯಾದ ಲಾಲೂ ಪ್ರಸಾದ್ ಯಾದವ್ ಬಿಹಾರವನ್ನು ಆಳುತ್ತಿದ್ದಾಗ, ಡಿಸೆಂಬರ್ 5, 1994ರಂದು ಗೋಪಾಲ್ ಗಂಜ್‌ನ ಕಲೆಕ್ಟರ್ ಜಿ. ಕೃಷ್ಣಯ್ಯ ಅವರನ್ನು ರಾಜಕಾರಣಿಯಾಗಿ ಬದಲಾದ ಗೂಂಡಾ- ಆನಂದ ಮೋಹನ್ ಎಂಬಾತನ ನೇತೃತ್ವದಲ್ಲಿ ಗುಂಪೊಂದು ಕಲ್ಲು ಹೊಡೆದು ಕೊಂದಿತ್ತು. ಸಾಮಾಜಿಕ ನ್ಯಾಯದ ಇನ್ನೊಂದು ಪ್ರತಿಮೆಯಾಗಿರುವ, ಈಗ ಬಿಹಾರದ ಮುಖ್ಯಮಂತ್ರಿಯೂ ಆಗಿರುವ ನಿತೀಶ್ ಕುಮಾರ್ ಅವರು, ಕೃಷ್ಣಯ್ಯ ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈ ಆನಂದ ಮೋಹನ್‌ನ ಬಿಡುಗಡೆಗೆ ದಾರಿ ಮಾಡಿಕೊಟ್ಟಿದ್ದಾರೆ. ಆತನನ್ನು ಬಿಡುಗಡೆಗೊಳಿಸಿಯೂ ಆಗಿದೆ.

ಕೃಷ್ಣಯ್ಯ ಅವರು ದಾಳಿಯ ವೇಳೆ ಕಲ್ಲುಗಳೇಟಿನಿಂದ ಸಾವಿಗೀಡಾದರು. ಈ ದಾಳಿಯ ಹಿಂದಿನ ಸಾಂಕೇತಿಕತೆಯು ಒಂದು ಕಾಲಘಟ್ಟಗಳನ್ನು ಮೀರುವ ಸಾಧ್ಯತೆಯಿದೆ. ಸಂವಿಧಾನವು ಆಧುನಿಕತೆಯ ಒಂದು ಯುಗವನ್ನು ಪ್ರವರ್ತಿಸಿದೆ. ಕಾನೂನಿನ ಆಡಳಿತ ಎಂಬ ಮೆಕಾಲೆಯ ಬೀಜವನ್ನು ಸೂಟುಬೂಟುಗಳಲ್ಲಿ ಅಲಂಕೃತರಾದ ಬ್ರಿಟಿಷ್ ರಾಣಿಯ ಮಕ್ಕಳು ಸೂಲಗಿತ್ತಿಯರಾಗಿ ಬೆಳೆಸಿದರು. ಆದುದರಿಂದ ಒಬ್ಬ “ಅಸ್ಪೃಶ್ಯ” ಕಾನೂನೇ ಇಲ್ಲದ ಗೋಪಾಲ್ ಗಂಜ್‌ನ ಕಲೆಕ್ಟರ್ ಆದ; ಮತ್ತು ಶಿಲಾಯುಗದ ಒಂದು ಸಾಮಾಜಿಕ ನೈತಿಕತೆಯು ಆತನನ್ನು ಕಲ್ಲೆಸೆದು ಕೊಂದಿತು.

ಕೃಷ್ಣಯ್ಯ ಅವರು ಭಾರತದ ಗಣರಾಜ್ಯವನ್ನು ಗೋಪಾಲ್ ಗಂಜ್‌ನಲ್ಲಿ ಪ್ರತಿನಿಧಿಸುತ್ತಿದ್ದ ವ್ಯಕ್ತಿ. ಡಿ.ಸಿಗಳು ಈ ಗಣರಾಜ್ಯದ ತಳಮಟ್ಟದಲ್ಲಿನ ರಾಯಭಾರಿಗಳು. ಸರಕಾರವು ತಳಮಟ್ಟದಲ್ಲಿ ಒಂದು ಪ್ರಾತಿನಿಧ್ಯವನ್ನು ಹೊಂದಿದ್ದೇ ಆಗಿದ್ದಲ್ಲಿ- ಅದು ಕಲೆಕ್ಟರ್ ಅಥವಾ ಜಿಲ್ಲಾಧಿಕಾರಿ ಕಚೇರಿ ಆಗಿರುತ್ತದೆ. ಆದುದರಿಂದ, ಜಿಲ್ಲಾಧಿಕಾರಿಯನ್ನು ಕೊಲೆ ಮಾಡುವುದೆಂದರೆ, ಭಾರತೀಯ ಗಣರಾಜ್ಯದ ಮೇಲೆ ದಾಳಿ ಮಾಡಿದಂತೆಯೇ. ಕೊಲೆಗಡುಕರನಿಗೆ ಖಂಡಿತವಾಗಿಯೂ ಈ ಜಿಲ್ಲಾಧಿಕಾರಿಯ ಸಾಮಾಜಿಕ ಹಿನ್ನೆಲೆ ಗೊತ್ತಿರಲೇಬೇಕು. ಕಾನೂನುಪ್ರಕಾರ ಕೊಲೆಗಡುಕನಿಗೆ ಗಲ್ಲಾಗಲೇಬೇಕು. ಬದಲಾಗಿ ಭಾರತೀಯ ಗಣರಾಜ್ಯದ ಶತ್ರುವಿಗೆ ಈಗ ಸ್ವಾತಂತ್ರ್ಯ ನೀಡಲಾಗಿದೆ.

ಲಾಲೂ ಪ್ರಸಾದ್ ಯಾದವ್

ಗಣರಾಜ್ಯದ ಮೇಲಿನ ಈ ದಾಳಿಯು ಸಾಮಾಜಿಕ ನ್ಯಾಯದ ಆಡಳಿತದ ಅಡಿಯಲ್ಲಿ ನಡೆಯಿತು. ಆಗಿನಿಂದ ಸಾಮಾಜಿಕ ನ್ಯಾಯದ ಸಿದ್ಧಾಂತಿಗಳೆಲ್ಲಾ ಅಡಗಿ ಕುಳಿತಿದ್ದಾರೆ. ದಿವಂಗತ ಪತ್ರಕರ್ತ ಚಂದನ್ ಮಿತ್ರಾ ಅವರ ಮಾತುಗಳಲ್ಲಿ ಹೇಳುವುದಾದರೆ, ದಲಿತ ಚಿಂತನೆಯ ಮುಖಂಡರ ಮೌನವು ಶೋಷಕರಿಗೆ ಬಹುಮಾನ ನೀಡುವುದಕ್ಕೆ ಸಮನಾಗಿರುತ್ತದೆ. ದಲಿತರು ಬಹಳ ಕಾಲದಿಂದ ಲಾಲೂ ಪ್ರಸಾದ್ ಯಾದವ್ ಅವರನ್ನು ಬಹುಮಾನಿಸುತ್ತಾ ಬಂದಿದ್ದಾರೆ.

ಸಮಕಾಲೀನ ಭಾರತವು ಎರಡು ಬಗೆಯ ಕಠೋರ ಸತ್ಯಗಳನ್ನು ಎದುರಿಸಲು ನಿರಾಕರಿಸುತ್ತಲೇಬಂದಿದೆ. ಒಂದನೆಯದು: ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಯಾವುದೇ ಸಾಮಾಜಿಕ ಲೆಕ್ಕತಪಾಸಣೆಯಿಲ್ಲ. ಎರಡನೆಯದು: ತಮ್ಮ ಸಾವಿಗೆ ಕಾರಣವಾಗುವ ಬೀದಿ ದೀಪಗಳಿಂದ ಆಕರ್ಷಿತವಾಗುವ ಮಳೆಗಾಲದ ಈಚಲ ಹುಳುಗಳಂತೆ ದಲಿತ ಚಿಂತನೆಯ ನಾಯಕರು ವರ್ತಿಸುತ್ತಾರೆ. ಒಬಿಸಿಗಳು ಬೀದಿದೀಪಗಳಂತೆ.

ಮಂಡಲ್ ಆಯೋಗದ ಅನುಷ್ಠಾನದ ತನಕ- ನನ್ನ ವಿವೇಕ ನನಗೆ ಹೇಳುತ್ತದೆ, ಭಾರತೀಯ ಸಮಾಜವು ದಲಿತ-ಆದಿವಾಸಿ ಹಕ್ಕುಗಳ ಬಗ್ಗೆ ರಾಜಿ ಮಾಡಿಕೊಂಡಿತ್ತು ಮತ್ತು ಸಕಾರಾತ್ಮಕ ಕಾರ್ಯದಲ್ಲಿ ತೊಡಗಿತ್ತು. ಮಂಡಲ್ ಆಯೋಗವು ಆ ಒಮ್ಮತವನ್ನು ನುಚ್ಚುನೂರು ಮಾಡಿತು. ಮಂಡಲ್ ಆಯೋಗದ ಅಧ್ಯಕ್ಷರಾಗಿದ್ದ ಪಿ.ಬಿ. ಮಂಡಲ್ ಅವರು ಆಯೋಗದ ಏಕೈಕ ದಲಿತ ಸದಸ್ಯರಾಗಿದ್ದ ಎಲ್.ಆರ್. ನಾಯ್ಕ್ ಅವರನ್ನು ಅಪಮಾನಿಸಿದ್ದರು ಎಂಬುದನ್ನು ಈಚಲ ಹುಳ್ಳಿಗಳು ಕಡೆಗಣಿಸುತ್ತವೆ. ನಾಯ್ಕ್ ಅವರು ಒಬಿಸಿ ಕೋಟಾವನ್ನು ಎರಡು ಕ್ರಮಗಳಲ್ಲಿ- ಒಂದನೆಯದಾಗಿ, ತೀರಾ ಹಿಂದುಳಿದವರು (ಕುಶಲಕರ್ಮಿಗಳು) ಮತ್ತು ಎರಡನೆಯದಾಗಿ, ಹಿಂದುಳಿದವರು (ರೈತ ಒಬಿಸಿಗಳು)- ವಿಭಜಿಸಬೇಕು ಎಂದು ಆಯೋಗಕ್ಕೆ ಸಲಹೆ ಮಾಡಿದ್ದರು. ಅವರ ಸಲಹೆಯನ್ನು ತಿರಸ್ಕರಿಸಲಾಯಿತು ಮತ್ತು ಅವರು ಆಯೋಗದ ಶಿಫಾರಸ್ಸುಗಳಿಗೆ ಸಹಿ ಹಾಕಲು ನಿರಾಕರಿಸಿದರು. ಬದಲಾಗಿ ಅವರು ಭಿನ್ನಮತದ ಟಿಪ್ಪಣಿಯೊಂದನ್ನು ಸಲ್ಲಿಸಿದರು. ಮಂಡಲ್ ಆಯೋಗದ ಶಿಫಾರಸ್ಸುಗಳಿಗೆ ದಲಿತರ ಒಪ್ಪಿಗೆ ಇಲ್ಲ ಎಂಬುದು ದಲಿತ ಚಿಂತನೆಯ ನಾಯಕರನ್ನು ಎಂದಾದರೂ ಬಾಧಿಸಿದೆಯೆ? ಸವರ್ಣೀಯ/ಮೇಲ್ಜಾತಿ ಭಯವಿರುವ ಚಿಂತನಾಶೀಲ ದಲಿತರು- ಒಬಿಸಿಗಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಬಯಸುತ್ತಾರೆಯೆ?

ಇದನ್ನೂ ಓದಿ: ಉಪಶಮನ ನೀತಿಯಡಿ ಗ್ಯಾಂಗ್‌ಸ್ಟರ್‌ ರಾಜಕಾರಣಿ ಆನಂದ್‌ ಬಿಡುಗಡೆ; ನ್ಯಾಯದ ಅಣಕ ಎಂದ ಐಎಎಸ್ ಸಂಘ

ದಲಿತರು ಲಾಲೂ ಪ್ರಸಾದರ “ಬುರಾ ಬಲಾ” (ಒಳ್ಳೆಯ-ಕೆಟ್ಟ) ಪ್ರಮೇಯದಿಂದ ಉತ್ತೇಜಿತರಾದರೆ? ಕೇವಲ ಸವರ್ಣೀಯರ ವಿನಾಶದಿಂದ ದಲಿತರ ಉದ್ಧಾರವಾಗುವುದು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇವೆಯೇ? ದಶಕಗಳ ಹಿಂದೆ ಬ್ರಾಹ್ಮಣ ಅಧಿಪತ್ಯವನ್ನು ಮುರಿದ ತಮಿಳುನಾಡಿನಲ್ಲಿ ದಲಿತರ ಪರಿಸ್ಥಿತಿ ಏನು? ದಲಿತರ ಬ್ರಾಹ್ಮಣ ವಿರೋಧಿ ಮಾತಿನ ಮಳೆಯ ಕುರಿತ ಮೋಹಕ್ಕೆ ಯಾವುದೇ ತಾರ್ಕಿಕ ವಿವರಣೆಯನ್ನು ಕಂಡುಕೊಳ್ಳಲು ನಾನಂತೂ ವಿಫಲನಾಗಿದ್ದೇನೆ.

ದಲಿತರು ಕಂಡುಕೊಳ್ಳದ್ದು ಮತ್ತು ಸಾಮಾಜಿಕ ನ್ಯಾಯದ ಸಮರ್ಥಕರು ವಿವರಿಸದೇ ಇರುವಂತದ್ದು ಇದು: ಮೇಲೇಳುತ್ತಿರುವ ಎರಡು ಸಾಮಾಜಿಕ ಶಕ್ತಿಗಳು ಒಂದು ಇನ್ನೊಂದರೊಂದಿಗೆ ಸ್ಪರ್ಧಿಸಲು ಬಯಸುತ್ತವೆಯೇ ಹೊರತು ಪರಸ್ಪರ ಸಹಕರಿಸಲು ಅಲ್ಲ. ಈ ಸ್ಪರ್ಧೆಯು ಸುಲಭವಾಗಿ ಸಂಘರ್ಷವಾಗಿ ಪರಿಣಮಿಸಿ ಅವನತಿ ಹೊಂದಬಹುದು. ದಲಿತರು ಮತ್ತು ಒಬಿಸಿಗಳು ಗಣರಾಜ್ಯದ ಸಂಕಲ್ಪದಿಂದ ಅತ್ಯಂತ ಹೆಚ್ಚು ಲಾಭ ಪಡೆದವರು. ದಲಿತ ಬುದ್ಧಿಜೀವಿ ಸಂಪ್ರದಾಯವು ಜಾತಿಪದ್ಧತಿಯನ್ನು ತೊಡೆದುಹಾಕಲು ಬಯಸಿದರೆ, ಒಬಿಸಿ ಸಂಪ್ರದಾಯವು ರಾಜಕೀಯ ಅಧಿಕಾರ ವ್ಯವಸ್ಥೆ ಮತ್ತು ಸಾರ್ವಜನಿಕ ಸಂಸ್ಥೆಗಳಿಂದ ಸವರ್ಣೀಯರನ್ನು ತೊಲಗಿಸಿ, ತಮ್ಮದೇ ಅಧಿಪತ್ಯವನ್ನು ಹೇರಲು ಬಯಸುತ್ತದೆ. ಒಮ್ಮೆ ಆಧಿಕಾರ ಪಡೆದರೆ, ಒಬಿಸಿಗಳು (ಆಳಬೇಕಾದ) ಪ್ರಜೆಗಳಿಗಾಗಿ ಹುಡುಕಲಾರಂಭಿಸುತ್ತಾರೆ ಮತ್ತು ದಲಿತರು ಅವರ ಗುರಿಯಾಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ದಲಿತರು ವಿಫಲರಾಗಿದ್ದಾರೆ. “ನವ ಠಾಕೂರರು” ಠಾಕೂರರಾಗಲು ಬಯಸುತ್ತಾರೆ- ಠಾಕೂರರ ರೀತಿಯ ಔದಾರ್ಯ ಇಲ್ಲದೆಯೇ. ಸಶಕ್ತೀಕರಣಗೊಂಡ ಒಬಿಸಿಗಳು ಸಲಾಮು ಬಯಸುತ್ತಾರೆ, ದಲಿತರು ಅದನ್ನು ನಿರಾಕರಿಸುತ್ತಾರೆ. ದಲಿತರ ಈ ಸ್ಥಿತಿಯು ಅವರನ್ನು ಒಬಿಸಿಗಳ ಜೊತೆ ಸಂಘರ್ಷಕ್ಕೆ ತಳ್ಳುತ್ತದೆ.

ನಿತೀಶ್ ಕುಮಾರ್

ನನ್ನ ಜೀವನದ ಅನುಭವವು ಕಂಡುಕೊಂಡಿರುವಂತೆ, ಒಬಿಸಿಗಳು ಒಂದು ಸಾಮಾಜಿಕ ವರ್ಗವಾಗಿ ಕನಿಷ್ಟ ತರ್ಕಶೀಲರು. ಎಲ್.ಆರ್. ನಾಯ್ಕ್ ಅವರನ್ನು ಉಲ್ಲೇಖಿಸಿ ಹೇಳುವುದಾದರೆ, ಒಬಿಸಿ ಚಿಂತಕರು ತಕ್ಷಣವೇ ನಿಮ್ಮ ಕುರಿತು ಸಂಶಯಪಡುತ್ತಾರೆ. ಯುಪಿ ಗೆಸ್ಟ್‌ಹೌಸ್ ಪ್ರಕರಣವನ್ನು ಉಲ್ಲೇಖಿಸಿ; ಅವರ ಕಣ್ಣು ಕೆಂಪಾಗುತ್ತದೆ. ಅಖಿಲೇಶ್ ಯಾದವ್ ಅವರು ಹಲವಾರು ದಲಿತ ಅಧಿಕಾರಿಗಳನ್ನು ಹಿಂಬಡ್ತಿಗೊಳಿಸಿದ ಆರೋಪದ ವಿಷಯ ಉಲ್ಲೇಖಿಸಿ; ಅವರು ದೂರ ನಡೆದೇಬಿಡುತ್ತಾರೆ.

ಈಗ ನಾವು ಒಂದು ಸಾಮಾಜಿಕ ನ್ಯಾಯದ ಲೆಕ್ಕ ತಪಾಸಣೆ ಮಾಡೋಣ. 1984ರಲ್ಲಿ ರಾಜೀವ್ ಗಾಂಧಿಯವರು ಪ್ರಧಾನಮಂತ್ರಿ ಆದಾಗ ಲಾಲೂ ಪ್ರಸಾದ್ ಯಾದವ್ ಅವರು ಕೇವಲ 36 ವರ್ಷ ವಯಸ್ಸಿನವರಾಗಿದ್ದರು. ಅಧಿಕಾರದಲ್ಲಿ ರಾಜೀವ್ ಗಾಂಧಿಯವರ ಮೊದಲ ಕ್ರಮವೆಂದರೆ, ಉಪಗ್ರಹ ಆಧರಿತ ದೂರ ಶಿಕ್ಷಣವಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಭಾರೀ ಗಾತ್ರದ ಆಂಟೆನಾ ಮತ್ತು ತರಗತಿಗಳಲ್ಲಿ ಟಿವಿ ಸೆಟ್ಟುಗಳನ್ನು ಅಳವಡಿಸಲಾಯಿತು. ವಿದ್ಯುತ್ ಇಲ್ಲದೆ ಯೋಜನೆ ವಿಫಲವಾಯಿತು. ನಂತರ ಅವರು ವಿಶ್ವದಲ್ಲೇ ಅತ್ಯಂತ ದೊಡ್ಡದಾದ ದೂರ ಶಿಕ್ಷಣ ಸಂಸ್ಥೆಯಾದ ಇಂದಿರಾ ಗಾಂಧಿ ರಾಷ್ಟ್ರೀಯ ದೂರ ಶಿಕ್ಷಣ ವಿಶ್ವವಿದ್ಯಾಲಯ (IGNOU) ಸ್ಥಾಪಿಸಿದರು. ಜವಾಹರ್ ನವೋದಯ ವಿದ್ಯಾಲಯಗಳು ಗ್ರಾಮೀಣ ಭಾರತದ ಪ್ರತಿಭೆಗಳನ್ನು ಬೆಳೆಸುವಲ್ಲಿ ಅತ್ಯಂತ ಯಶಸ್ವಿ ಪ್ರಯೋಗಗಳಲ್ಲಿ ಒಂದು. ಈ ಶಾಲೆಗಳ ವಿದ್ಯಾರ್ಥಿಗಳು ಇಂದು ವಿಶ್ವದಾದ್ಯಂತ ಹರಡಿದ್ದಾರೆ. ರಾಜೀವ್ ಗಾಂಧಿಯವರು ಆರಂಭಿಸಿದ ಐಟಿ ಕ್ರಾಂತಿಯ ಬಗ್ಗೆ ಹೇಳುವ ಆಗತ್ಯವೇ ಇಲ್ಲ.

ಹೀಗಿರುವಾಗ, ಸಾಮಾಜಿಕ ನ್ಯಾಯದ ರಾಜಕಾರಣಿಗಳು ಆರಂಭಿಸಿದ ಕ್ರಮಗಳಾದರೂ ಯಾವುವು? ಚಾರ್ವಾಹ ವಿದ್ಯಾಲಯ. ಒಬಿಸಿ ಪ್ರತಿಮೆಗಳು ತಮ್ಮ “ಬಫೆಲೋ ರಾಷ್ಟ್ರೀಯತೆ”ಯ ಪ್ರಮೇಯಕ್ಕಿಂತ ಮೇಲೇರಲು ಸಾಧ್ಯವಾಗಲೇ ಇಲ್ಲ. ಈ ಪ್ರಮೇಯ ಸುಲಭ: ಹಿಂದೆ ಎಷ್ಟು ಉತ್ಪಾದನೆ ಇತ್ತೋ ಅಷ್ಟನ್ನೇ ತಿನ್ನಿರಿ, ಹೊಸದೇನನ್ನೂ ಉತ್ಪಾದಿಸಬೇಡಿ. ಈಗ ಕಾಂಗ್ರೆಸ್ ಕೂಡಾ ಈ ಸಾಮಾಜಿಕ ನ್ಯಾಯದ ರಾಜಕಾರಣಿಗಳಿಗೆ ಕೈಚಾಚಿರುವುದರಿಂದ ದೇಶದ ನಾಶವನ್ನು ನಿಲ್ಲಿಸಲಾಗದು. ಸಾಮಾಜಿಕ ಬಹುಸಂಖ್ಯಾತವಾದ ಕೂಡಾ ಧಾರ್ಮಿಕ ಬಹುಸಂಖ್ಯಾತವಾದದಷ್ಟೇ ಭಯಾನಕವಾಗಬಲ್ಲದು ಎಂಬುದನ್ನು ಕಾಂಗ್ರೆಸ್ ಗಮನಿಸಬೇಕು.

ಕೃಪೆ: ದ ಇಂಡಿಯನ್ ಎಕ್ಸ್‌ಪ್ರೆಸ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಚಂದ್ರ ಭಾನ್ ಪ್ರಸಾದ್
(ಲೇಖಕರು ಯುಎಸ್‌ಎಯ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದ ಮೆರ್ಕಟಸ್ ಸೆಂಟರ್‌ನಲ್ಲಿ ಸಹಯೋಗಿ ವಿದ್ವಾಂಸರಾಗಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...