Homeಅಂಕಣಗಳುಪುಟಕ್ಕಿಟ್ಟ ಪುಟಗಳು: ಚೈತನ್ಯಪೂರ್ಣವಾಗಿರಲು ಪ್ರೇರೇಪಿಸುವ ಓಶೋನ 'ಭಾರತ ಎನ್ನೊಲವು'

ಪುಟಕ್ಕಿಟ್ಟ ಪುಟಗಳು: ಚೈತನ್ಯಪೂರ್ಣವಾಗಿರಲು ಪ್ರೇರೇಪಿಸುವ ಓಶೋನ ‘ಭಾರತ ಎನ್ನೊಲವು’

- Advertisement -
- Advertisement -

’ಇಂಡಿಯಾ ಮೈ ಲವ್’ ಎಂಬ ಪುಸ್ತಕವು ಓಶೋ ಅವರ ಭಾಷಣಗಳನ್ನು ಆಧರಿಸಿ ಸಂಗ್ರಹಿಸಿರುವ ಕೃತಿ. ಧಾರ್ಮಿಕ ಡಾಂಭಿಕತನ ಮತ್ತು ತತ್ವಶಾಸ್ತ್ರಜ್ಞರ, ಪಂಡಿತರ ಆಷಾಡಭೂತಿತನಗಳನ್ನು ಬಯಲಿಗೆಳೆದ ಓಶೋ, ಪ್ರತಿಪಾದಿಸಿದ್ದು ಆಧ್ಯಾತ್ಮಿಕತೆ ಎಂಬುದು ಸರಳ, ನೇರ ಮತ್ತು ಮುಕ್ತ ಎಂಬುದನ್ನು. ಆದರೆ ಅದನ್ನು ಕಠಿಣಗೊಳಿಸಿ ತಮ್ಮನ್ನು ಸುಭಗರೆನಿಸಿಕೊಂಡು ಸಾಮಾನ್ಯರನ್ನು ಶೋಷಣೆ ಮಾಡಿದವರ ಬಗ್ಗೆ ಓಶೋ ಬಹಳ ಆಕ್ರೋಶ ಹೊಂದಿದ್ದರು.

ನಮ್ಮ ಭಾರತದ ಆಧ್ಯಾತ್ಮಿಕ ಪರಂಪರೆಯು ಸರಳವೂ, ನೇರವೂ ಮತ್ತು ಮುಕ್ತವೂ ಆಗಿದ್ದು ಪಂಡಿತರ ದೊರೆತನದಲ್ಲಿ ಸಾಮಾನ್ಯರಿಗೆ ನಿಲುಕಲಾರದಂತಹ ಹೊರೆಯೇನಾಗಿರಲಿಲ್ಲ. ಅದನ್ನೇ ಭಾರತ ಎನ್ನೊಲವು ಕೃತಿಯಲ್ಲಿ ಗಮನಿಸಿರುವುದು. ನನ್ನ ಪ್ರಿಯ ಭಾರತ ಎಂದು ಕನ್ನಡದಲ್ಲಿ ಅನುವಾದವಾಗಿದೆ. ಆದರೆ, ಅದು ಮೈ ಡಿಯರ್ ಇಂಡಿಯಾ ಎಂಬ ಅರ್ಥದಲ್ಲಿ ನೋಡುವುದಕ್ಕಿಂತ ಭಾರತವೇ ತನ್ನ ಒಲವು ಎಂಬ ಅರ್ಥದಲ್ಲಿ ಗಮನಿಸುವುದು ಸೂಕ್ತವಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ.

ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಪ್ರೇಮ ಎಂಬುದರ ರೂಪಕವಾಗಿ ಓಶೋ ಮನಗಾಣಿಸಲು ಯತ್ನಿಸುತ್ತಾರೆ. ಪ್ರೇಮ ಮತ್ತು ಆಧ್ಯಾತ್ಮಿಕವೆಂಬುದು ಸಮನಾರ್ಥಕ ಪದಗಳು. ಅಥವಾ ಒಂದೇ ನಾಣ್ಯದ ಎರಡು ಮುಖಗಳು. ಆ ನಾಣ್ಯವಾದರೂ ಯಾವುದು? ಜೀವನ. ಜೀವನಕ್ಕೆ ಮಿಗಿಲಾದುದು ಜೀವಕ್ಕೆ ಯಾವುದೂ ಇಲ್ಲ. ಇನ್ನೂ ಸೂಕ್ಷ್ಮವಾಗಿ ಮತ್ತು ಸ್ಥೂಲವಾಗಿ ನೋಡಿದರೆ, ಜೀವ ಇಲ್ಲದೇ ಇರುವುದೂ ಕೂಡಾ ಅಸ್ತಿತ್ವದಲ್ಲಿ ತಮ್ಮ ಇರುವಿಕೆಯ ತರಂಗದಲ್ಲಿ ಇರುತ್ತವೆ. ಸ್ಪಂದಿಸುತ್ತಿರುತ್ತವೆ. ಹಾಗಾಗಿ ವಸ್ತುಗಳು, ವಿಷಯಗಳು, ಪ್ರಾಣಿಗಳು, ಮನುಷ್ಯರು, ಒಟ್ಟಿನಲ್ಲಿ ಎಲ್ಲಾ ಭೂತಗಳೂ ಕೂಡಾ ಈ ಅಸ್ತಿತ್ವದಲ್ಲಿ ತಮ್ಮದೇ ಇರುವಿಕೆಯ ಮೌಲ್ಯವನ್ನು ಹೊಂದಿವೆ. ಹಾಗೂ ಅದನ್ನು ಗುರುತಿಸುವ, ಗೌರವಿಸುವ, ಸಮ್ಮತಿಸುವ ಯಾವನೇ ಆಗಲಿ ಅವನು ಪ್ರೇಮಿಯಾಗುತ್ತಾನೆ. ಪ್ರೇಮಿಯೇ ಆಧ್ಯಾತ್ಮಿಕ ವ್ಯಕ್ತಿ.

ಈ ಪ್ರೇಮಿಯು ರಾಜನಾಗಿರಬಹುದು, ಭಿಕ್ಷುಕನಾಗಿರಬಹುದು, ಹೆಣ್ಣಾಗಿರಬಹುದು, ಗಂಡಾಗಿರಬಹುದು, ಬುದ್ಧಿವಂತನಾಗಿರಬಹುದು, ಮುಗ್ಧನೋ, ಮೂರ್ಖನೋ, ಯೋಧನೋ, ಕಲಾವಿದನೋ, ಪಂಡಿತನೋ ಏನೋ ಆಗಿರಬಹುದು. ಅಥವಾ ಏನೂ ಆಗಿಲ್ಲದಿರಬಹುದು. ಆದರೆ ಅವನು ಪ್ರೇಮಿಯಾಗಿರುತ್ತಾನೆ. ತಾನು ಪ್ರೀತಿಸುತ್ತಿದ್ದೇನೆ ಎಂಬ ಬೌದ್ಧಿಕ ಅರಿವಿಲ್ಲದೇ ಉಸಿರಾಟದಷ್ಟೇ ಸಹಜವಾಗಿ ಪ್ರೇಮವನ್ನು ಹೊಂದಿರುತ್ತಾನೆ. ಪ್ರೇಮವು ಅವನ ಸಹಜವಾದ ಮತ್ತು ಜೀವಂತಿಕೆಯ ಸ್ವಭಾವ ಅಥವಾ ಗುಣವಾಗಿರುತ್ತದೆ. ಇಂತಹ ಗುಣ ಲಕ್ಷಣಗಳನ್ನು ನಿರೂಪಿಸುವ ಅನೇಕಾನೇಕ ಸಂಗತಿಗಳು ಭಾರತ ಎನ್ನೊಲವು ಕೃತಿಯಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತವೆ.

ಭಾರತವೆಂದರದು ಭೌಗೋಳಿಕವಾಗಿ ನೆಲದ ಭಾಗವಲ್ಲ. ಅದೊಂದು ಆಧ್ಯಾತ್ಮಿಕ ಅಥವಾ ಪ್ರೇಮದ ಪರಂಪರೆಯಿಂದ ಸದಾ ಸ್ಪಂದಿಸುತ್ತಿರುವ ಕ್ಷೇತ್ರವನ್ನಾಗಿ ಗುರುತಿಸಲು ಬೇಕಾದ ಅಂಶಗಳನ್ನು ಓಶೋ ನಮ್ಮ ಗಮನಕ್ಕೆ ತಂದು, ಭಾರತದ ಈ ಪ್ರೇಮದ ಪರಂಪರೆಯಿಂದ ಒಬ್ಬ ವಿನಯ ಮತ್ತು ಆನಂದದಿಂದ ಹಗುರತನವನ್ನು ಅನುಭವಿಸಲು ಪ್ರೇರೇಪಿಸುತ್ತಾರೆ.

ಇಡೀ ಜಗತ್ತು ಕಂಡಿರುವ ಮುದವಾದ ಪ್ರೇಮದ ಕನಸನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿರುವ ಭಾರತ ಅನೇಕಾನೇಕಾ ಬುದ್ಧರನ್ನು ಹೆತ್ತಿದೆ ಮತ್ತು ಮತ್ತಷ್ಟು ಮಗದಷ್ಟು ಹೆರಲು ಫಲವತ್ತಾಗಿದೆ. ನಮ್ಮ ವಿಸ್ಮೃತಿಯಲ್ಲಿ ಕಳೆದುಹೋಗಿರುವ ಆ ಚೈತನ್ಯವನ್ನು ನಮ್ಮ ಸ್ಮರಣೆಗೆ ತಂದು ನಾವು ಎಂತಹ ಚೈತನ್ಯಭರಿತರು, ಪ್ರೇಮಸ್ವರೂಪರು ಎಂದು ಮನವರಿಕೆ ಮಾಡಿ ನಮ್ಮ ಬದುಕನ್ನು ಆನಂದಗೊಳಿಸಿಕೊಳ್ಳಲು ಈ ಕೃತಿಯಲ್ಲಿ ಓಶೋ ಪ್ರೇರೇಪಿಸುತ್ತಾರೆ.

ಪ್ರಜ್ಞೆ ಅಥವಾ ಎಚ್ಚರವಾಗಿರುವ ಸ್ಥಿತಿಯಾದ ಧ್ಯಾನದ ಮುಖೇನ ಮೌನವನ್ನು ಕಂಡುಕೊಳ್ಳುವುದು ಒಂದು ಮುಖ್ಯವಾದ ಅಭ್ಯಾಸ. ಧ್ಯಾನವೆಂದರೆ ಒಂದು ಇರುವಿಕೆಯ ಸ್ಥಿತಿಯೇ ಹೊರತು, ಮಾಡುವುದೋ, ಮೈಮರೆಯುವುದೋ ಅಥವಾ ಯಾವುದೋ ಧಾರ್ಮಿಕ ಆಚರಣೆಯ ಭಾಗವೋ ಅಲ್ಲ. ಅಲ್ಲಿ ಯಾವ ಪ್ರತಿಮೆಯಿರಲಿ ಯಾವ ಸಾಕ್ಷಾತ್ಕಾರದ ಆಸೆ ಅಥವಾ ದೈವಾನುಗ್ರಹದ ವಾಂಛೆಯೂ ಬೇಕಾಗಿಲ್ಲ.

ಇಡೀ ಭಾರತದ ಆಧ್ಯಾತ್ಮಿಕ ಪರಂಪರೆಯೇ ಅಹಿಂಸೆಯ ಪರಂಪರೆ. ಭಾರತವೆಂಬುದು ಒಂದು ಸಂಪೂರ್ಣ ಹೆಣ್ಣು. ಅದರಲ್ಲೂ ತಾಯಿ. ಅವಳು ತನ್ನ ಮೌನದ ಹಾಡನ್ನು ಎಲ್ಲೆಡೆಯೂ ಕೇಳಿಸುತ್ತಾಳೆ. ಕೇಳಿರುವ ಮಕ್ಕಳು ಆನಂದದ ಸೂತ್ರಗಳನ್ನಾಗಿ ಎಲ್ಲೆಲ್ಲೋ ದಾಖಲಿಸಿದ್ದಾರೆ. ಸಾವಿರಾರು ವರ್ಷಗಳಿಂದ ನಾನಾ ರೀತಿಗಳಲ್ಲಿ ದಾಖಲಿಸಿರುವ ಆ ಯೋಗಿಗಳು, ದಾರ್ಶನಿಕರು ಒಂದರ್ಥದಲ್ಲಿ ಸಹಜ ಮನುಷ್ಯರು. ಎಂಥಾ ಕಗ್ಗತ್ತಲಿನಲ್ಲಿಯೂ ಕಾಣಲಾಗುವಂತೆ ಹೊಂಬಣ್ಣ ಬೆಳಕಿನ ಹೆಜ್ಜೆಗಳನ್ನು ಬಿಟ್ಟುಹೋಗಿದ್ದಾರೆ. ಆ ಹೆಜ್ಜೆಗಳೋ ತಮ್ಮನ್ನು ಅನುಸರಿಸಲು ಕರೆಯುವುದಿಲ್ಲ. ಆದರೆ ಅದರಂತೆ ಮತ್ತಷ್ಟು ಹೆಜ್ಜೆಗಳನ್ನು ಹೊಸತಾಗಿ ರೂಪಿಸಲು ಕರೆ ನೀಡುವವು. ಅದರಲ್ಲೂ ಮುಖ್ಯವಾಗಿ ಅದೊಂದು ಕಲೆಗಾರಿಕೆ ಮತ್ತು ಕೌಶಲ್ಯವಿದೆ ಎಂಬುದನ್ನು ನಿರೂಪಿಸುವವು. ಮಿಕ್ಕದ್ದು ನಮಗೆ ಬಿಟ್ಟದ್ದು.

ಅಹಮಿಕೆಯ ಆರ್ಭಟವನ್ನು ಅರಿತವನು ತಾನೇ ತಾನಾಗಿ ಶರಣಾನಾಗುವನು. ತನ್ನ ಹಿನ್ನೆಲೆಯ ಧರ್ಮ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿ ಯಾವುದೇ ಇರಲಿ, ಅವನು ಪ್ರೇಮಿಯಾಗುವನು, ಯೋಗಿಯಾಗುವನು, ಸೂಫಿಯಾಗುವನು, ಸಿದ್ಧನಾಗುವನು, ಬುದ್ಧನಾಗುವನು. ಇವರೆಲ್ಲರ ನೆಲವೇ ಭಾರತ.

ಕಂಡಿರುವಷ್ಟು, ಕಾಣುತ್ತಿರುವಷ್ಟೇನೆಲ್ಲಾ ಇವೆಯೋ ಅವೆಲ್ಲದರ ಆಚೆಯ ವಿಶ್ವದ ಕನಸು ಭಾರತದ ಗರ್ಭದಲ್ಲಿ ಬೀಜ ಬಿತ್ತಿದೆ. ಆ ಕಸುವನ್ನು ಅನೇಕಾನೇಕ ಯೋಗಿಗಳು, ಪ್ರೇಮಿಗಳು, ದಾರ್ಶನಿಕರು ರಹಸ್ಯವೆಂದು ಕರೆದಿದ್ದಾರೆ. ಅದನ್ನು ಅನುಭವಿಸಿ ತಮ್ಮ ಅನುಭಾವದ ಕಂಪನವನ್ನು ಈ ಮಣ್ಣಿಗೆ ಬೆರೆಸಿದ್ದಾರೆ. ಹಾಗಾಗಿ ಈ ಮಣ್ಣು ಭೂಮಿಯ ಸಾಧಾರಣ ಮಣ್ಣಾಗದೇ ಜೀವನ ಪ್ರೀತಿಯ, ಆಧ್ಯಾತ್ಮಿಕ ಅನುಭಾವದ ತರಂಗಗಳನ್ನು ಹೊಂದಿದೆ. ಹಾಗಂತ ಮುಟ್ಟಿದ ತಕ್ಷಣ ಕರೆಂಟ್ ಹೊಡೆದಂತೆ ವಿದ್ಯುಚ್ಛಕ್ತಿಯ ತರಂಗವೇನಲ್ಲ ಇದು. ಸುಪ್ತಾವಸ್ಥೆಯಲ್ಲಿ ತನ್ನ ಪಾಡಿಗೆ ತಾನಿರುವ ಚೈತನ್ಯವಿದು.

ಅದಕ್ಕೆ ತೆರೆದುಕೊಳ್ಳುವ ಹೊಣೆಗಾರಿಕೆಯನ್ನು ತಾನೇ ಹೊತ್ತುಕೊಳ್ಳಬೇಕು. ತನ್ನ ಮನಸ್ಸಿನ ಚಲನವಲನಗಳನ್ನು ಗಮನಿಸುತ್ತಾ, ತನ್ನ ತಾನು ನೋಡಿಕೊಳ್ಳುತ್ತಾ, ತನ್ನ ಗುಣ ಅವಗುಣ, ವರ್ತನೆ ಪ್ರತಿವರ್ತನೆಗಳ ದಾಂಧಲೆಗಳನ್ನು ಅರಿತುಕೊಳ್ಳುತ್ತಾ ಯಾವನು ಅಥವಾ ಯಾವಳು ಆತ್ಮಾವಲೋಕನ ಮಾಡಿಕೊಳ್ಳಲು ತೊಡಗುತ್ತಾರೆಯೋ ಆ ಗಳಿಗೆಯಿಂದಲೇ ಆತ್ಮಾನಂದ ಜಾಗೃತವಾಗುತ್ತದೆ. ಆತ್ಮಸಾಕ್ಷಾತ್ಕಾರದ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಅದಕ್ಕೆ ವಿಶ್ವದ ಬೇರಾವ ಕ್ಷೇತ್ರಕ್ಕಿಂತಲೂ ಭಾರತವು ಹೇಗೆ ಪೂರಕವಾಗಿದೆ ಎಂಬುದನ್ನೇ ಸಾಕ್ಷಿಗಳ ಮತ್ತು ದಾಖಲೆಗಳ ಸಮೇತ ಓಶೋ ವಿವರಿಸಲು ಯತ್ನಿಸುತ್ತಾರೆ.

ಒಟ್ಟಾರೆ ಭಾರತದ ಪ್ರೇಮ ಮತ್ತು ಆಧ್ಯಾತ್ಮದ ಸುವರ್ಣ ಗತಕಾಲವು ಸತ್ತ ಸಮಯವಾಗಿರದೇ ಪ್ರಸ್ತುತದಲ್ಲಿಯೂ ಚೈತನ್ಯಪೂರ್ಣವಾಗಿರಲು ಪ್ರೇರೇಪಿಸಲು ಈ ಪುಸ್ತಕ ಇಂಡಿಯಾ ಮೈ ಲವ್.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಖರ್ಚು ಮಾಡಿಬಿಡು, ಇನ್ನೂ ಬಾಕಿಯೇಕುಳಿಸಿಕೊಂಡಿರುವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...