ರಾಜ್ಯದ ಸಿನಿಮಾ ಥಿಯೇಟರ್ಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿರುವ ಸ್ಯಾಂಡಲ್ವುಡ್ನ ಅನೇಕ ನಾಯಕ ನಟರು ಮತ್ತು ನಿರ್ದೇಶಕರು, ರಾಜ್ಯ ಸರ್ಕಾರದ ನಡೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡಿನ ಸರ್ಕಾರ ಅಲ್ಲಿನ ಚಿತ್ರಮಂದಿರಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನೀಡಿರುವ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಈ ಕೂಗು ಕೇಳಿಬರುತ್ತಿದೆ. ಆದರೆ ಕರ್ನಾಟಕದ ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗೆ ಅವಕಾಶ ಎಂದು ಸರ್ಕಾರ ಹೇಳಿದೆ. ಇದರ ವಿರುದ್ಧ ಶಿವರಾಜ್ ಕುಮಾರ್ ಸೇರಿದಂತೆ ಅನೇಕ ನಾಯಕರು ನಿರ್ದೇಶಕರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.
ಶಿವರಾಜ್ ಕುಮಾರ್ ವೀಡಿಯೋವೊಂದನ್ನು ಹಂಚಿಕೊಂಡಿದ್ದು, “ಎಲ್ಲಾ ಕಡೆ 100% ಪ್ರವೇಶ ನೀಡಲಾಗಿದೆ. ಆದರೆ ಚಿತ್ರಮಂದಿರಗಳಲ್ಲಿ ಮಾತ್ರ ಯಾಕೆ 50%? ಚಿತ್ರಮಂದಿರಕ್ಕೂ 100% ಪ್ರವೇಶ ನೀಡಬೇಕು. ನಾವೆಲ್ಲರೂ ಚಿತ್ರರಂಗದೊಟ್ಟಿಗೆ ಇದ್ದೇವೆ. ಸರ್ಕಾರದ ನಿರ್ಧಾರ ಬದಲಾಗಲೇ ಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನೀವು ಸುಳ್ಳು ಹೇಳುವ ವಿಧಾನ ನನಗೆ ಇಷ್ಟ: ಕಂಗನಾಗೆ ಕುನಾಲ್ ವ್ಯಂಗ್ಯ
We want 100% occupancy for our movie theatres. #KFIDemandsFullOccupancy pic.twitter.com/YTE7IrGZvq
— DrShivaRajkumar (@NimmaShivanna) February 3, 2021
ಇದನ್ನೂ ಓದಿ: ಜಗತ್ತಿನ ಸರ್ವಾಧಿಕರಗಳ ಹೆಸರು ‘M’ ಅಕ್ಷರದಿಂದಲೇ ಏಕೆ ಆರಂಭವಾಗುತ್ತದೆ: ರಾಹುಲ್ ಗಾಂಧಿ
ಪುನಿತ್ ರಾಜ್ಕುಮಾರ್ ಟ್ವೀಟ್ ಮಾಡಿ, “ಖಾಸಗೀ ಕಾರ್ಯಕ್ರಮಗಳು, ತೀರ್ಥಕ್ಷೇತ್ರಗಳು, ಸಾರ್ವಜನಿಕ ಸಾರಿಗೆ, ಮಾರುಕಟ್ಟೆಗಳು, ಪ್ರವಾಸಿ ತಾಣಗಳು ಸೇರಿದಂತೆ ಎಲ್ಲವೂ ಸರಾಗವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಚಿತ್ರಮಂದಿರಗಳು ಯಾಕಿಲ್ಲ?” ಎಂದು ಪ್ರಶ್ನಿಸಿದ್ದಾರೆ.
When private functions, places of worship, public transport, markets, tourist places are allowed to operate normally, Why not MOVIE THEATRES !?@drashwathcn @CMofKarnataka @mla_sudhakar #KFIDemandsFullOccupancy pic.twitter.com/wh96okEtOL
— Puneeth Rajkumar (@PuneethRajkumar) February 3, 2021
ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್, “ಸಿನಿಮಾ ಅನೇಕರಿಗೆ ಮನರಂಜನೆಯಾಗಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಅದು ಹಲವರಿಗೆ ಜೀವನಾಧಾರವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
While cinema is entertainment to most, it's lifeline to many.#KFIdemandsFullOccupancy@drashwathcn @CMofKarnataka @mla_sudhakar pic.twitter.com/rkNjc8eWBX
— Prashanth Neel (@prashanth_neel) February 3, 2021
ಇದನ್ನೂ ಓದಿ: ತಲೆಮರೆಸಿಕೊಂಡಿರುವ ದೀಪ್ ಸಿಧು: ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ!
ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ, “ಇತರ ಎಲ್ಲ ಸಾರ್ವಜನಿಕ ಸ್ಥಳಗಳು ಜನರ ದೊಂಬಿಯಿಂದ ತುಂಬಿತುಳುಕುತ್ತಿದೆ. ಕರ್ನಾಟಕವು ಮತ್ತೊಮ್ಮೆ ಚಿತ್ರಮಂದಿರವನ್ನು 50% ಗೆ ಸೀಮಿತಗೊಳಿಸಿದೆ. ಯಾಕೆ? ಸಿನೆಮಾ ಕ್ಷೇತ್ರ ರಾಜ್ಯಾದ್ಯಂತ ಅನೇಕರಿಗೆ ಜೀವನೋಪಾಯದ ಸಾಧನವಾಗಿದೆ ಎಂಬುದನ್ನು ನಾವು ಮರೆಯುತ್ತಿದ್ದೇವೆಯೇ!” ಎಂದು ಪ್ರಶ್ನಿಸಿದ್ದಾರೆ.
While every other public area continues to bustle with people, Karnataka has once again limited the theatre occupancy to 50%. Why? Are we forgetting that cinema is a means of livelihood for many across the state!#KFIDemandsFullOccupancy @drashwathcn @CMofKarnataka @mla_sudhakar
— Rakshit Shetty (@rakshitshetty) February 3, 2021
ನಿರ್ದೇಶಕರಾದ ಪ್ರೀತಂ ಗುಬ್ಬಿ ಟ್ವೀಟ್ ಮಾಡಿ, “ಮನರಂಜನೆಗೆ ತಡೆ ಬೇಡ. ಸಂಪೂರ್ಣ ಪ್ರವೇಶಕ್ಕೆ ಅನುಮತಿ ನೀಡಿ” ಎಂದು ಒತ್ತಾಯಿಸಿದ್ದಾರೆ.
Entertainment cannot be limited …. request for full occupancy #KFIDemandsFullOccupancy @CMofKarnataka pic.twitter.com/P1LludZb0J
— preetham gubbi (@preethamgubbi) February 3, 2021
ಇದನ್ನೂ ಓದಿ: ಪ್ರತಿಪಕ್ಷಗಳ ಆಗ್ರಹಕ್ಕೆ ಮಣಿದ ಕೇಂದ್ರ – ರೈತ ಹೋರಾಟದ ಬಗ್ಗೆ ಸಂಸತ್ತಿನಲ್ಲಿ 15 ಗಂಟೆ…
ನಿರ್ದೇಶಕರಾದ ಮನ್ಸೋರೆ, “ಕಾಲೇಜುಗಳು, ದೇವಸ್ಥಾನಗಳು, ಚರ್ಚ್ಗಳು, ಮಸೀದಿಗಳು, ಮಾರುಕಟ್ಟೆಗಳು, ಮಾಲ್ಗಳು, ಮದುವೆಗಳು, ಇನ್ನಿತರೆ ಸಮಾರಂಭಗಳು… ಜನರು ಮಾಸ್ಕ್ ಹಾಕಿಕೊಂಡು ಹೊರ ಬರುತ್ತಾರೆ. ಚಿತ್ರಮಂದಿರಗಳಲ್ಲಿ ಮಾತ್ರ ಯಾಕೆ ಜನಸಂದಣಿಯನ್ನು ನಿಯಂತ್ರಿಸಲಾಗುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
Colleges, Temples, Churches, Mosques, Markets, Malls, Weddings, functions..
People MASK UP & are stepping out.
Why control footfall only at theatres?#KFIdemandsFullOccupancy@drashwathcn @CMofKarnataka @mla_sudhakar pic.twitter.com/VdSjPbjzuv— mansore (@mansore25) February 3, 2021
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಏರಿಕೆ: ಕತ್ತೆ, ಕುದುರೆ ಮೊರೆ ಹೋದ ಜನತೆ