HomeUncategorizedಉನ್ನಾವ್ ಅತ್ಯಾಚಾರ ಆರೋಪಿ ಶಾಸಕನೂರಲ್ಲಿ ಸೆಂಗರ್ ಕುಟುಂಬದ್ದೇ ಪಾಳೇಗಾರಿಕೆ: ಇಲ್ಲಿದೆ ಗ್ರೌಂಡ್ ರಿಪೋರ್ಟ್

ಉನ್ನಾವ್ ಅತ್ಯಾಚಾರ ಆರೋಪಿ ಶಾಸಕನೂರಲ್ಲಿ ಸೆಂಗರ್ ಕುಟುಂಬದ್ದೇ ಪಾಳೇಗಾರಿಕೆ: ಇಲ್ಲಿದೆ ಗ್ರೌಂಡ್ ರಿಪೋರ್ಟ್

- Advertisement -
- Advertisement -

ಅತ್ಯಾಚಾರ ಮತ್ತು ಕೊಲೆಯತ್ನ ಆರೋಪ ಎದುರಿಸುತ್ತಿರುವ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸೆಂಗರ್ ನ ಉನ್ನಾವ್ ಗ್ರಾಮಕ್ಕೆ ‘ದಿ ಕ್ವಿಂಟ್’ ತಂಡ ಭೇಟಿ ನೀಡಿ ಅಲ್ಲಿನ ಭಯಭೀತ ವಾತಾವರಣವನ್ನು ತೆರೆದಿಟ್ಟಿದೆ.

‘ಸೆಂಗರ್ ಗಳ ಹುಕುಂ ಇಲ್ಲದೇ ಇಲ್ಲಿ ಹುಲ್ಲುಕಡ್ಡಿ ಕೂಡ ಚಲಿಸುವಂತಿಲ್ಲ. ಅವರ ಒಪ್ಪಿಗೆಯಿಲ್ಲದೇ ತುಂಡುಭೂಮಿ ಮಾರಂಗಿಲ್ಲ, ಕೊಳ್ಳಂಗಿಲ್ಲ….’ – ಎನ್ನುತ್ತಾನೆ ಗ್ರಾಮದ ಯುವಕ ಅಜೀತ್.

ಇದು ಉನ್ನಾವ್. ಅತ್ಯಾಚಾರ ಮತ್ತು ಕೊಲೆಯತ್ನದ ಆರೋಪಿ ಶಾಸಕ ಕುಲದೀಪ್ ಸೆಂಗರ್ ನ ಗ್ರಾಮ. ಇಲ್ಲಿ ಶಾಸಕ ಮತ್ತು ಕುಟುಂಬದ ವಿರುದ್ಧ ಯಾರೂ ಮಾತಾಡುವಂತಿಲ್ಲ. ಈ ಕುಟುಂಬದ ನಜರ್ ಇಲ್ಲದೇ ಏನೂ ನಡೆಯುವಂತಿಲ್ಲ. ಒಂಥರಾ ಹಳೇ ಸಿನಿಮಾಗಳಲ್ಲಿ ಗೌಡರ ದರ್ಪ, ಪಾಳೇಗಾರಿಕೆಯಡಿ ನಲುಗುವ ಊರಿನಂತಿದೆ ಉನ್ನಾವ್.

ಸತತ ಸಾರ್ವಜನಿಕ ಒತ್ತಾಯ ಮತ್ತು ಒತ್ತಡಗಳ ಪರಿಣಾಮವಾಗಿ ಈಗ ಬಿಜೆಪಿ ಕುಲದೀಪ್ ಸೆಂಗರ್ ನನ್ನು ಪಕ್ಷದಿಂದ ಉಚ್ಛಾಟಿಸಿದೆ. ಅತ್ಯಾಚಾರ ಆರೋಪಕ್ಕೆ ಸಿಕ್ಕ 14 ತಿಂಗಳ ಬಳಿಕ ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ. ಈ ಶಾಸಕರ ಉನ್ನಾವ್ 30 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದ್ದು ಇಲ್ಲಿ ಯಾರೂ ಶಾಸಕರಿಗೆ ಅಹಿತ ಅನಿಸುವುದನ್ನು ಮಾತಾಡಲು ಒಲ್ಲರು, ಶಾಸಕರ ನಜರ್ ಗೆ ಬೀಳದಂತೆ ಬದುಕಲು ಯತ್ನಿಸುವವರು.

60 ವರ್ಷದಿಂದ ಸೆಂಗರ್ ಕುಟುಂಬದ್ದೇ ರಾಜಕೀಯ ಪಾರುಪತ್ಯ!

ಶಾಸಕ ಸೆಂಗರ್ ಅಜ್ಜ (ತಾಯಿಯ ತಂದೆ) 37 ವರ್ಷಗಳವರೆಗೆ ಗ್ರಾಮದ ಮುಖ್ಯಸ್ಥನಾಗಿದ್ದ. ನಂತರ ಕುಲದೀಪ್ ರಾಜಕೀಯ ಶುರು ಮಾಡಿದ. ಈಗ 4ನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಸೆಂಗರ್ ತಾಯಿ ಎರಡು ಸಲ ಗ್ರಾಮ್ ಪ್ರಧಾನ್ ಆಗಿದ್ದರೆ, ಸಂಗರ್ ಸೊಸೆ, ಸಹೋದರನ ಪತ್ನಿ-ಹೀಗೆ ಗ್ರಾಮ್ ಪ್ರಧಾನ್ ಅಧಿಕಾರ ಅವರ ಕುಟುಂಬದ ಬಳಿಯೇ ಇದೆ ಎಂದು ಅಲ್ಲಿನ ಕೆಲವರು ಹೇಳುವಾಗ, ತಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂಬುದನ್ನು ಖಚಿತ ಮಾಡಿಕೊಳ್ಳುತ್ತಾರೆ.

ಆರಂಭದಲ್ಲಿ ಕಾಂಗ್ರೆಸ್‍ನಲ್ಲಿದ್ದ ಕುಲದೀಪ್ ಪಾರ್ಟಿಗಳನ್ನು ಬದಲಿಸುತ್ತಲೇ ಬಂದು ಈಗ ಬಿಜೆಪಿಯ ಪ್ರಭಾವಿ ಶಾಸಕನೂ, ಮುಖ್ಯಮಂತ್ರಿ ಯೋಗಿಯವರಿಗೆ ಆಪ್ತನೂ ಆಗಿದ್ದಾನೆ. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಲೂಟಿ ಮಾಡುತ್ತಿರುವ ಈ ಕುಟುಂಬ ಪೊಲೀಸ್ ಅಧಿಕಾರಿಗಳ ಮೇಲೆಯೇ ದಾಳಿಗಳನ್ನು ಮಾಡುತ್ತ ಬಂದಿದೆ. 2004ರಲ್ಲಿ ಕುಲದೀಪ್ ಸೆಂಗರ್ ಸಹೋದರ ಅತುಲ್ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮಲಾಲ್ ವರ್ಮಾ ಅವರ ಹೊಟ್ಟೆಗೆ ಗುಂಡು ಹೊಡೆದಿದ್ದ. ಈ ಕುಟುಂಬದ ಒತ್ತಡಕ್ಕೆ ಮಣಿದು ರಾಮಲಾಲ್ ವರ್ಮಾರೇ ದೂರು ಹಿಂಪಡೆಯಬೇಕಾಗಿತು.

ಪೊಲೀಸ್ ಅಧಿಕಾರಿಗಳ ಮೇಲೆಯೇ ಏರಿ ಹೋಗುವ ಈ ಕುಟುಂಬ ಸಾಮಾನ್ಯ ಜನರನ್ನು ಅದೆಷ್ಟು ಭಯಭೀತಿಯಲ್ಲಿ ಇಟ್ಟಿರಬಹುದು ಎಂದು ಊಹಿಸಿ. ಈ ಭೇಟಿಯ ವೇಳೆ ನಮ್ಮ ತಂಡಕ್ಕೆ ಅದರ ದರ್ಶನವೂ ಆಯಿತು. ‘ಪರಿಸ್ಥಿತಿ ಹೀಗಿರುವಾಗ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಎಂತಹ ಹಿಂಸೆ ಕೊಟ್ಟಿರಬಹುದು ಊಹಿಸಿ’ ಎಂದ ಯುವಕ ಅಜಿತ್. (ಹೆಸರು ಬದಲಿಸಿದೆ).

2018ರಲ್ಲಿ ಇದೇ ಅತುಲ್ ಸೆಂಗರ್ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಮರಕ್ಕೆ ಕಟ್ಟಿ ವಿಪರೀತ ಹಡೆದಿದ್ದ ಎಂದು ಹೆಸರು ಹೇಳಲು ಇಚ್ಛಿಸದ ಜನ ಹೇಳುತ್ತಾರೆ. ಆಗ ಬಹುಶಃ ಒಳಗಾಯಗಳಾಗಿದ್ದವು ಎನಿಸುತ್ತದೆ. ಮುಂದೆ ಐದೇ ದಿನದಲ್ಲಿ ಆಕೆಯ ತಂದೆ ಪೊಲೀಸ್ ಲಾಕಪ್ಪಿನಲ್ಲಿ ಮೃತಪಟ್ಟರು. ಪೊಲೀಸ್ ಸ್ಟೇಷನ್ನಿನಲ್ಲೂ ಅತುಲ್ ಒತ್ತಡ ಹೇರಿ ಮತ್ತೆ ದೌರ್ಜನ್ಯ ನಡೆಸಿದ್ದಾನೆ ಎಂಬ ಆರೋಪವೂ ಇದೆ. ಈ ಕುರಿತು ದೂರು ದಾಖಲಾಗಿದೆ.

ಅತುಲ್ ಮರಕ್ಕೆ ಕಟ್ಟಿ ದೌರ್ಜನ್ಯ ನಡೆಸಿದಾಗ ದೂರು ಕೊಟ್ಟರೂ ಬಂಧಿಸದ ಪೊಲೀಸರು, ಸಂತ್ರಸ್ತೆಯ ತಂದೆಯನ್ನೇ, ‘ ಅಕ್ರಮವಾಗಿ ಶಸ್ತ್ರಾಸ್ತ ಹೊಂದಿದ್ದ’ ಎಂದು ಆರೋಪಿಸಿ ಬಂಧಿಸಿದ್ದರು. ಶಾಸಕ ಮತ್ತು ಆತನ ಇಬ್ಬರು ಸಹೋದರರ ಈ ದರ್ಪ ಮತ್ತು ಪಾಳೇಗಾರಿಕೆಯ ಬಗ್ಗೆ ಭಯದಿಂದಲೇ ಇಲ್ಲಿನ ಜನರು ಹೇಳುತ್ತಾರೆ.

ಈಗ ಶಾಸಕನ ಅತ್ಯಾಚಾರ, ಕೊಲೆಯತ್ನ, ಸಂಚು ಕೇಸುಗಳಲ್ಲಿ, ಇನ್ನಿಬ್ಬರು ಸಹೋದರರು ಕೊಲೆಯತ್ನ ಕೇಸು ಎದುರಿಸುತ್ತಿದ್ದಾರೆ. ಇಷ್ಟೆಲ್ಲದರ ನಂತರವೂ ಶಾಸಕನ ವಿರುದ್ಧ ಇಲ್ಲಿ ಯಾರೂ ಸೊಲ್ಲೆತ್ತುವಂತಿಲ್ಲ. ಉತ್ತರ ಪ್ರದೇಶದ ಪಕ್ಷೇತರ ಶಾಸಕ, ಡಾನ್ ‘ರಾಜಾ ಭಯ್ಯಾ’ನ ಮಾದರಿಯಲ್ಲೇ ಕುಲದೀಪ್ ಕೂಡ ಜನರನ್ನು ಭಯದಲ್ಲಿಟ್ಟು ನಾಲ್ಕು ಸಲ ಗೆದ್ದಿದ್ದಾನೆ.

ಆಧಾರ: ದಿ ಕ್ವಿಂಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...