Homeಮುಖಪುಟಇವಿಎಂ-ವಿವಿಪ್ಯಾಟ್ ತಪಾಸಣೆಯಲ್ಲಿ ಖಾಸಗಿ ಸಿಬ್ಬಂದಿ ಬಳಕೆ!: ಹೊರಗುತ್ತಿಗೆ ವಿಷಯ ಮುಚ್ಚಿಟ್ಟ ಚುನಾವಣಾ ಆಯೋಗ, ಆರ್‌ಟಿಐ ಕಾಯಿದೆಯಡಿ...

ಇವಿಎಂ-ವಿವಿಪ್ಯಾಟ್ ತಪಾಸಣೆಯಲ್ಲಿ ಖಾಸಗಿ ಸಿಬ್ಬಂದಿ ಬಳಕೆ!: ಹೊರಗುತ್ತಿಗೆ ವಿಷಯ ಮುಚ್ಚಿಟ್ಟ ಚುನಾವಣಾ ಆಯೋಗ, ಆರ್‌ಟಿಐ ಕಾಯಿದೆಯಡಿ ವಿಷಯ ಬಹಿರಂಗ

- Advertisement -
- Advertisement -

ಇವಿಎಂ-ವಿವಿಪ್ಯಾಟ್ ತಪಾಸಣೆಯಲ್ಲಿ ಖಾಸಗಿ ಸಿಬ್ಬಂದಿ ಬಳಕೆ!

ಹೊರಗುತ್ತಿಗೆ ವಿಷಯ ಮುಚ್ಚಿಟ್ಟ ಚುನಾವಣಾ ಆಯೋಗ

ಆರ್‌ಟಿಐ ಕಾಯಿದೆಯಡಿ ವಿಷಯ ಬಹಿರಂಗ

ಚುನಾವಣಾ ಅಕ್ರಮ ಶಂಕೆಗೆ ಇನ್ನಷ್ಟು ಪುಷ್ಟಿ

 

ಮೂಲ: ಪೂನಂ ಅಗರ್ವಾಲ್, ‘ದಿ ಕ್ವಿಂಟ್’

ಮರುನಿರೂಪಣೆ: ನಿಖಿಲ್ ಕೋಲ್ಪೆ

ಪ್ರಜಾಪ್ರಭುತ್ವದಲ್ಲಿ ಅತ್ಯಂತ ಸೂಕ್ಷ್ಮವಾಗಿರುವ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಖಾಸಗಿ ಸಂಸ್ಥೆ ಭಾಗಿಯಾಗಿರುವುದಿಲ್ಲ ಮತ್ತು ಹೊರಗುತ್ತಿಗೆ ನೀಡಲಾಗಿರುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳುತ್ತಲೇ ಬಂದಿದೆ. ಆದರೆ, ಹಿಂದಿನ ಕೆಲವು ವಿಧಾನಸಭಾ ಚುನಾವಣೆಗಳು ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಅಕ್ರಮ ನಡೆದಿರುವ ಬಗ್ಗೆ ವ್ಯಾಪಕ ಆರೋಪ ಮತ್ತು ಸಂಶಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ‘ದಿ ಕ್ವಿಂಟ್’ ನಡೆಸಿದ ತನಿಖೆಯಿಂದ ಇದು ಸುಳ್ಳೆಂದು ಬಹಿರಂಗವಾಗಿದ್ದು, ಇಂತಹಾ ಸಂಶಯಗಳಿಗೆ ಮತ್ತು ಸಾಧ್ಯತೆಗಳಿಗೆ ಮರುಹುಟ್ಟು ನೀಡಿದೆ.

ಹಿಂದೆ, ಅಂದರೆ 2017ರಿಂದಲೇ ‘ಕ್ವಿಂಟ್’ ಬಳಿ ಇರುವ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ)ಯಡಿ ಪಡೆದ ಉತ್ತರವೊಂದರ ಪ್ರಕಾರ, ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮತ್ತು ವೋಟರ್ ವೆರಿಫೈಡ್‌ ಪೇಪರ್ ಅಡಿಟ್ ಟ್ಟ್ರೈಲ್ (ವಿವಿಪ್ಯಾಟ್) ಯಂತ್ರಗಳನ್ನು ತಯಾರಿಸುವ ಸಾರ್ವಜನಿಕ ರಂಗದ ಉದ್ದಿಮೆಯಾಗಿರುವ ಇಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಸಂಸ್ಥೆಯು, ಮುಂಬಯಿ ಮೂಲದ ಖಾಸಗಿ ಸಂಸ್ಥೆಯಾಗಿರುವ ಟಿ ಎಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ಇಂಜಿನಿಯರ್‌ಗಳನ್ನು “ಸಮಾಲೋಚಕರು”
(Consultants) ಎಂಬ ನೆಲೆಯಲ್ಲಿ ನೇಮಿಸಿಕೊಂಡಿತ್ತು.

ಈ ಖಾಸಗಿ ‘ಸಮಾಲೋಚಕ’ ಇಂಜಿನಿಯರ್‌ಗಳನ್ನು 2019ರ ಲೋಕಸಭಾ ಚುನಾವಣಾ ಪ್ರಕ್ರಿಯೆಯುದ್ದಕ್ಕೂ ಬಳಸಿಕೊಳ್ಳಲಾಗಿತ್ತು ಎಂದು ‘ಕ್ವಿಂಟ್’ ಪತ್ತೆಹಚ್ಚಿದೆ. ಅವರ ಕೆಲಸಗಳು ಅತ್ಯಂತ ಸೂಕ್ಷ್ಮ ಸ್ವರೂಪದವುಗಳಾಗಿದ್ದು, ಅವುಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಚುನಾವಣಾ ಪ್ರಕ್ರಿಯೆಯ ಆರಂಭದಿಂದ ಅಂದರೆ, ಮೊದಲ ಹಂತದ ಪರಿಶೀಲನೆ (ಎಫ್ಎಲ್‌ಸಿ)ಯಿಂದ ಹಿಡಿದು, ಮತ ಎಣಿಕೆ ಮುಕ್ತಾಯವಾಗುವ ವರೆಗೂ ಪರೀಕ್ಷಿಸುವುದು ಮತ್ತು ನಿರ್ವಹಿಸುವುದು ಸೇರಿತ್ತು.

ಲೋಕಸಭಾ ಚುನಾವಣೆಯಲ್ಲಿ ಬಳಸಲಾದ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಪರಿಶೀಲಿಸಲು ಇಸಿಐಎಲ್ ಸಂಸ್ಥೆಯು ಖಾಸಗಿ ಸಮಾಲೋಚಕರನ್ನು ಬಳಸಿದೆಯೇ ಎಂದು ‘ಕ್ವಿಂಟ್’ ಕಳೆದ ವಾರ ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗ, ಅದು ‘ಇಲ್ಲ’ ಎಂಬ ಉತ್ತರ ನೀಡಿತ್ತು.

“ಬಿಇಎಲ್ ಮತ್ತು ಇಸಿಐಎಲ್ ಸಂಸ್ಥೆಗಳಿಗೆ ಇಂಜಿನಿಯರ್‌ಗಳನ್ನು ಒದಗಿಸಲು ಯಾವುದೇ ಖಾಸಗಿ ಸಂಸ್ಥೆಯನ್ನು ನೇಮಿಸಲಾಗಿಲ್ಲ” ಎಂದು ಚುನಾವಣಾ ಆಯೋಗದ ವಕ್ತಾರೆ ಶಿಫಾಲಿ ಶರಣ್ ಉತ್ತರ ನೀಡಿದ್ದರು. (ಇಲ್ಲಿ ಬಿಇಎಲ್ ಎಂದರೆ, ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ತಯಾರಿಸಲು ಸರಕಾರ ನೇಮಿಸಿದ ಸಾರ್ವಜನಿಕ ರಂಗದ ಇನ್ನೊಂದು ಉದ್ದಿಮೆಯಾಗಿರುವ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್)

ಚುನಾವಣಾ ಆಯೋಗವು ಸಾರ್ವಜನಿಕರಿಂದ ಸತ್ಯವನ್ನು ಮುಚ್ಚಿಡುತ್ತಿದೆ ಎಂಬುದು ಸ್ಪಷ್ಟ. ಆದರೆ, ಯಾಕಾಗಿ?

‘ಸಮಾಲೋಚಕ’ ಸಂಸ್ಥೆಯ ನಿಗೂಢತೆ

2017ರಲ್ಲಿ ಉತ್ತರಖಂಡ ವಿಧಾನಸಭಾ ಚುನಾವಣೆಯ ವೇಳೆ ವಕೀಲ ಅಮಿತ್ ಅಹ್ಲುವಾಲಿಯಾ ಎಂಬವರು ಮಾಹಿತಿ ಹಕ್ಕು ಕಾಯಿದೆಯಡಿ ಒಂದು ಅರ್ಜಿ ಸಲ್ಲಿಸಿದ್ದರು. ಅವರು ಆ ಹೊತ್ತಿಗೆ ಇಸಿಐಎಲ್ ಸಂಸ್ಥೆಗೆ ಕೇಳಿದ್ದ ಪ್ರಶ್ನೆ ಮತ್ತು ಪಡೆದಿದ್ದ ಉತ್ತರ ಕೆಳಗಿವೆ:

“ಇಸಿಐಎಲ್‌ಗೆ ಸಮಾಲೋಚಕರನ್ನು ಒದಗಿಸುವ/ಪೂರೈಸುವ ಯಾವುದೇ ಸಂಸ್ಥೆ ಇದೆಯೇ? ಹೌದಾದಲ್ಲಿ, ಸಮಾಲೋಚಕರ ನೇಮಕಾತಿಗೆ ಇರುವ ಮಾನದಂಡಗಳ ಜೊತೆಗೆ ಈ ಮಾಹಿತಿಯನ್ನು ದಯವಿಟ್ಟು ನೀಡಿರಿ.”

“ಇಸಿಐಎಲ್ ನುರಿತ/ಅರೆನುರಿತ “ಸಮಾಲೋಚಕ”ರನ್ನು ನೇಮಿಸುತ್ತಿದೆ. ಹೌದು. ಅಧಿಕೃತವಾದ ಒಂದೇ ಒಂದು ಮಾನವಶಕ್ತಿ ಪೂರೈಕೆ ಸಂಸ್ಥೆ ಎಂದರೆ, M/s ಟಿ ಎಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಮುಂಬಯಿ ವಿಳಾಸ ಹೊಂದಿದೆ). (ಇದ್ದದ್ದು ಇದ್ದ ಹಾಗೆ- ಅಂದರೆ, ವಿಳಾಸ ಕೊಡಲಾಗಿಲ್ಲ!)

ಈ ಆರ್‌ಟಿಐ ಮಾಹಿತಿಯ ಆಧಾರದಲ್ಲಿ ‘ಕ್ವಿಂಟ್’,  2017ರ ಉತ್ತರಖಂಡ ವಿಧಾನಸಭಾ ಚುನಾವಣೆಯ ವೇಳೆ ಭಾಗಿಯಾಗಿದ್ದ ಕೆಲವು ‘ಸಮಾಲೋಚಕ’ ಇಂಜಿನಿಯರ್‌ಗಳ ಜೊತೆಗೆ ಮಾತನಾಡಿತು. ಅವರಲ್ಲಿ ಕೆಲವರು ತಮ್ಮನ್ನು 2019ರ ಲೋಕಸಭಾ ಚುನಾವಣೆ ಮತ್ತು 2018ರ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಕೆಲವು ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ನಿರ್ವಹಣೆಗೆ ನೇಮಿಸಲಾಗಿತ್ತು ಎಂದು ದೃಢಪಡಿಸಿದರು.

ಮುಕ್ತ, ನ್ಯಾಯಬದ್ಧ ಚುನಾವಣೆ ಜೊತೆ ರಾಜಿ?

‘ಕ್ವಿಂಟ್’, ಮಾಜಿ ಮುಖ್ಯ ಚುನಾವಣಾ ಕಮೀಷನರ್ ಎಸ್. ವೈ. ಖುರೇಶಿ ಅವರೊಂದಿಗೆ ಮಾತನಾಡಿತು. 2017ರ ಚುನಾವಣೆ ನಡೆದು ಕೆಲವು ತಿಂಗಳುಗಳ ಬಳಿಕ ಇಸಿಐಎಲ್ ಸಂಸ್ಥೆಯು ಇವಿಎಂ ಮತ್ತು ವಿವಿಪ್ಯಾಟ್ ತಪಾಸಣೆಗೆ ಹೊರಗುತ್ತಿಗೆ ಕೊಟ್ಟಿರುವ ಬಗ್ಗೆ ಆರೋಪಗಳು ಬಂದಿದ್ದವು ಎಂದು ಅವರು ತಿಳಿಸಿದರು. ಆದರೆ, ತಾನು ಆಗಿನ ಚುನಾವಣಾ ಆಯೋಗವನ್ನು ಕೇಳಿದಾಗ, ಕೇವಲ ಸಂಸ್ಥೆಯೊಳಗಿನ ಇಂಜಿನಿಯರ್‌ಗಳನ್ನು ಮಾತ್ರ ಬಳಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿತ್ತು ಎಂದು ಖುರೇಶಿ ತಿಳಿಸಿದರು.

ಚುನಾವಣಾ ಆಯೋಗ ಅವರಿಗೆ ಈ ಭರವಸೆ ಜೊತೆ ಲಿಖಿತ ಮಾರ್ಗದರ್ಶಿ ಸೂತ್ರವನ್ನೂ ನೀಡಿದ್ದು, ಆ ಕುರಿತು ಅವರು ಟ್ವೀಟ್ ಕೂಡಾ ಮಾಡಿದ್ದರು. ಅದು ಹೀಗೆ ಹೇಳುತ್ತದೆ: “ಬಿಇಎಲ್/ಇಸಿಐಎಲ್‌ನ ಸಂಬಳ ಪಟ್ಟಿಯಲ್ಲಿ ಇರುವ ಇಂಜಿನಿಯರ್‌ಗಳನ್ನು ಮಾತ್ರ ಎಫ್ಎಲ್‌ಸಿ (ಮೊದಲ ಹಂತದ ತಪಾಸಣೆ)ಗಾಗಿ ಬಳಸಲಾಗಿದೆ.”

ಅದರೆ, ಇಸಿಐಎಲ್ ಸಂಸ್ಥೆ ಆರ್‌ಟಿಐ ಪ್ರಶ್ನೆಗೆ  ನೀಡಿದ ಉತ್ತರದಲ್ಲಿ 2017ರಿಂದಲೇ ಟಿ ಎಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ನಿಂದ ಹೊರಗುತ್ತಿಗೆ ಇಂಜಿನಿಯರ್‌ಗಳನ್ನು ಪಡೆಯುತ್ತಿರುವುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಿದೆ. ಹೀಗಿರುವಾಗ ಚುನಾವಣಾ ಆಯೋಗವು ಖುರೇಶಿಯವರಂತಹ ಒಬ್ಬ ಮಾಜಿ ಕೇಂದ್ರ ಮುಖ್ಯ ಚುನಾವಣಾ ಕಮೀಷನರ್‌ಗೇ ಸುಳ್ಳು ಯಾಕೆ ಹೇಳಿತು?
(ಮೂಲ ವರದಿಯಲ್ಲಿ ಇದನ್ನು ಸಾಬೀತುಪಡಿಸುವ ಲಿಖಿತ ವಿವರಗಳಿದ್ದು, ಅದನ್ನು ಇಲ್ಲಿ ನೀಡಲಾಗಿಲ್ಲ).

ಖುರೇಶಿಯವರು ತನ್ನ ಪುಸ್ತಕ “ಎನ್ ಅನ್‌ಡಾಕ್ಯುಮೆಂಟೆಡ್ ವಂಡರ್: ದಿ ಮೇಕಿಂಗ್ ಆಫ್ ದಿ ಗ್ರೇಟ್ ಇಂಡಿಯನ್ ಇಲೆಕ್ಷನ್’ನಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಖಾಸಗಿಯವರನ್ನು ಬಳಸದಿರುವ ಮಹತ್ವವನ್ನು ವಿವರಿಸಿದ್ದಾರೆ. ಅವರು ಹೇಳಿರುವುದರ ಸಾರಾಂಶವೆಂದರೆ, ಸರಕಾರಿ ನೌಕರರನ್ನೇ ಬಳಸಲಾಗುವುದು ಏಕೆಂದರೆ, ಅವರ ಮೇಲೆ ಆಡಳಿತಾತ್ಮಕ ನಿಯಂತ್ರಣ ಇರುತ್ತದೆ. ಖಾಸಗಿಯವರ ಮೇಲೆ ಚುನಾವಣೆ ಮುಗಿದ ತಕ್ಷಣ ಯಾವುದೇ ನಿಯಂತ್ರಣ ಇರುವುದಿಲ್ಲ. ಅವರಿಗೆ ಯಾವುದೇ ಭಯವಿಲ್ಲದ ಕಾರಣ ಅಕ್ರಮ ನಡೆಸುವುದು ಸುಲಭ.

2019ರ ಲೋಕಸಭಾ ಚುನಾವಣೆಗೆ ಒದಗಿಸಲು ಇಸಿಐಎಲ್ ಬಳಿ ಸಾಕಷ್ಟು ಇಂಜಿನಿಯರ್‌ಗಳು ಇದ್ದಿರಲಾರರು. ಇವಿಎಂ ತಯಾರಿಸುವ ಎರಡೇ ಸಂಸ್ಥೆಗಳಾದ ಇಸಿಐಎಲ್ ಮತ್ತು ಬಿಇಎಲ್ ಒಟ್ಟು 2,220 ಇಂಜಿನಿಯರ್‌ಗಳನ್ನು ಪೂರೈಸಿದ್ದವು. ಪ್ರಶ್ನೆ ಎಂದರೆ, ಇಸಿಐಎಲ್ ಅರ್‌ಟಿಐ ಅಡಿಯಲ್ಲಿ ಗುತ್ತಿಗೆ ಇಂಜಿನಿಯರ್‌ಗಳ ಬಳಕೆಯನ್ನು ಒಪ್ಪಿಕೊಂಡಿರುವಾಗ, ಚುನಾವಣಾ ಆಯೋಗವು ನಿರಾಕರಿಸುತ್ತಿರುವುದು ಏಕೆ? ಸಾರ್ವಜನಿಕರೊಂದಿಗೆ ಈ ಮಾಹಿಯನ್ನು ಏಕೆ ಹಂಚಿಕೊಂಡಿಲ್ಲ? ಇಂತಹಾ ಸೂಕ್ಷ್ಮ ಜವಾಬ್ದಾರಿಗೆ ಆಯ್ಕೆಯದ ಈ ನಿರ್ದಿಷ್ಟ ಸಂಸ್ಥೆಯನ್ನು ಯಾವ ಮಾನದಂಡ ಅಥವಾ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಯಿತು? ಪ್ರಕ್ರಿಯೆ ನಡೆದಿಲ್ಲವಾದರೆ, ಯಾರ ಶಿಫಾರಸಿನ ಮೇಲೆ ಆಯ್ಕೆ ನಡೆಯಿತು? ಸಂಸ್ಥೆಯ ಅರ್ಹತೆ ಮತ್ತು ಹಿನ್ನೆಲೆ ಏನು? ಬಳಸಿಕೊಳ್ಳಲಾದ ಖಾಸಗಿ ಇಂಜಿನಿಯರ್‌ಗಳ ಹಿನ್ನೆಲೆಯನ್ನು ಚುನಾವಣಾ ಆಯೋಗ ತಪಾಸಣೆ ಮಾಡಿದೆಯೇ?

(ಮೂಲ ವರದಿಯಲ್ಲಿ ಉತ್ತರಖಂಡ ಚುನಾವಣೆಯಲ್ಲಿ ಇಸಿಐಎಲ್ ಹೊರಗುತ್ತಿಗೆ ಇಂಜಿನಿಯರ್‌ಗಳ ಬಳಕೆ ಒಪ್ಪಿಕೊಂಡಿರುವ ಬಗ್ಗೆ ಆರ್‌ಟಿಐ ಪತ್ರ ವ್ಯವಹಾರಗಳ ವಿವರಗಳಿದ್ದು, ಅದನ್ನಿಲ್ಲಿ ನೀಡಲಾಗಿಲ್ಲ. ಮುಖ್ಯ ವಿಷಯ ಎಂದರೆ, ಈ ಖಾಸಗಿ ‘ಸಮಾಲೋಚಕ’ರನ್ನು ತಪಾಸಣೆ, ಮತದಾನ ಮಾತ್ರವಲ್ಲ; ಎಣಿಕೆ ವೇಳೆಯೂ ಬಳಸಿಕೊಳ್ಳಲಾಗಿತ್ತು ಎಂಬುದು! ಪಾರದರ್ಶಕತೆಗಾಗಿ ಹೋರಾಡುತ್ತಿರುವ ಕಾರ್ಯಕರ್ತರು ಇದರಲ್ಲಿ ಗಂಭೀರ ಲೋಪ ಮತ್ತು ವಂಚನೆಯ ಸಾಧ್ಯತೆಯನ್ನು ಕಾಣುತ್ತಿದ್ದಾರೆ.)

ಆರ್‌ಟಿಐ ಮಾಹಿತಿಯು ಇಂತಹ ಕೆಲವು ಇಂಜಿನಿಯರ್‌ಗಳ ಹೆಸರು ಹಾಗೂ ಮೊಬೈಲ್ ನಂಬರ್‌ಗಳನ್ನು ಒಳಗೊಂಡಿತ್ತು. ವಿಚಾರಿಸಿದಾಗ, ತಾವು ಟಿ ಎಂಡ್ ಎಂ ಸಂಸ್ಥೆಗೆ ಅರ್ಜಿ ಹಾಕಿ, ಇಸಿಐಎಲ್‌ನಲ್ಲಿ ಕೆಲಸದ ಗುತ್ತಿಗೆ ಪಡೆದಿರುವುದಾಗಿ ಅವರು ತಿಳಿಸಿದರು. ಕೆಲವೇ ಕೆಲವು ಇಸಿಐಎಲ್‌ನ ಖಾಯಂ ನೌಕರರನ್ನು ಚುನಾವಣೆಗೆ ನಿಯೋಜಿಸಲಾಗಿತ್ತು ಎಂದೂ ಅವರು ತಿಳಿಸಿದರು. ಯಾವುದೇ ಒಂದು ಪಕ್ಷ ತನ್ನ ಜನರನ್ನೇ ಅರ್ಜಿ ಹಾಕಿಸಿ, ಈ ಮೂಲಕ ಒಳಸೇರಿಸಲು ಸಾಧ್ಯವಿಲ್ಲವೆ ಎಂಬುದೊಂದು ಗಂಭೀರ ಪ್ರಶ್ನೆ.

ಚುನಾವಣೆ ನಡೆಯುವುದಕ್ಕೆ ಕೇವಲ ಹದಿನೈದು ದಿನಗಳಿರುವಾಗಿನ ತನಕ ಅಂದರೆ, ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ನಂತರದಲ್ಲಿ ಈ ಖಾಸಗಿ ‘ಸಮಾಲೋಚಕ’ರಿಗೆ ಇವಿಎಂ ಮತ್ತು ವಿವಿಪ್ಯಾಟ್ ತೆರೆಯುವ ಅವಕಾಶವಿದ್ದು, ಅವರು ಅಭ್ಯರ್ಥಿಗಳ ಹೆಸರು, ಚಿಹ್ನೆ ಮುಂತಾದವುಗಳನ್ನು ಅಳವಡಿಸಬೇಕಾಗಿತ್ತು. ಇಂತಹಾ ಸೂಕ್ಷ್ಮ ಕೆಲಸಕ್ಕೆ ಹೊರಗಿನವರನ್ನು ನೇಮಿಸುವುದರಿಂದ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಾಗಲಿಲ್ಲವೆ? ಇದು ಚುನಾವಣಾ ಆಯೋಗಕ್ಕೆ ಗೊತ್ತಿಲ್ಲ ಅಂದರೆ ಹೇಗೆ? ಚುನಾವಣೆ ನಡೆಯುತ್ತಿರುವಾಗಲೂ, ನಡೆದ ಬಳಿಕವೂ ಇವರನ್ನು ಬಳಸಲಾಗಿರುವಾಗ ಚುನಾವಣಾ ಆಯೋಗಕ್ಕೆ ಗೊತ್ತಿಲ್ಲದೇ ಇರುವುದು ಹೇಗೆ ಸಾಧ್ಯ? ಈ ಕುರಿತು ಇನ್ನಷ್ಟು ವಿವರಗಳನ್ನು ‘ಕ್ವಿಂಟ್’ ಪ್ರಕಟಿಸಲಿದೆ.

ಕೃಪೆ: ದಿ ಕ್ವಿಂಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...