Homeಅಂಕಣಗಳು"ಸುದೀಪನೂ ನಲವತ್ತು ಪರಸೆಂಟಾದ ಅಂತಾರಲ್ಲಾ ಸಾರ್"

“ಸುದೀಪನೂ ನಲವತ್ತು ಪರಸೆಂಟಾದ ಅಂತಾರಲ್ಲಾ ಸಾರ್”

- Advertisement -
- Advertisement -

ಬಿಜೆಪಿಯಲ್ಲಿ ಮತದಾರರಿಗೆ ತೋರಿಸಲು ಯೋಗ್ಯವಾದಂತಹ ಮುಸುಡಿ ಯಾವುದು ಇಲ್ಲವೆಂದು ಗ್ರಹಿಸಿದ ಬೊಮ್ಮಾಯಿ ನಮ್ಮ ಸರೋವರದ ಸಂಜೀವಣ್ಣನ ಮಗನಾದ ಸುದೀಪನನ್ನು ಗೋಗರೆದು ಎಳೆದು ತಂದಿದ್ದಾರಲ್ಲಾ. ತನ್ನ ಮಾತುಕತೆ ಮತ್ತು ಒಂದಿಷ್ಟು ಅಭಿನಯದಿಂದ ಜನಮನ ಸೆಳೆದಿದ್ದ ಸುದೀಪ್‌ನನ್ನು ಮಾತನಾಡಿಸಬೇಕೆನಿಸಿತು. ಫೋನ್ ಮಾಡಲಾಗಿ ರಿಂಗಾಯ್ತು ರಿಂಗ್ ಟೋನ್: “ಎಲ್ಲ ಮಾಯಾ ನಾವು ಮಾಯಾ ಎಲ್ಲ ಮಾ…”

“ಹಲೋ ಯಾರು?”

“ನಾನು ಸಾರ್ ನಿಮ್ಮ ಅಭಿಮಾನಿ ಯಾಹು.”

“ಯಾಹು ಅಂದ್ರ್ಯಾರು?”

“ಅದೆ ಸಾರ್, ಸಿರ್ಸಿ ಅತ್ರ ಮಾತಾಡ್ ಮಾತಾಡ್ ಮಲ್ಲಿಗೆ ಶೂಟಿಂಗ್ ನ್ಯಡಿವಾಗ ಪರಿಚಯಾದೆ. ನಿಮ್ಮ ಹೋಟ್ಲಲ್ಲಿ ಕುಡುದೂ ಕುಡುದು ಲಾಸಾದೆ ಅಂತ ನಿಮಗೆ ಮುಜುಗರ ಮಾಡಿದ್ನಲ್ಲಾ..”

“ಓ ಗೊತ್ತಾಯ್ತು ಬುಡಿ, ಹೇಗಿದ್ದೀರಿ?”

“ಹಾಗೆ ಇದ್ದಿನಿ, ನೀವ್ಯಾಕ್ ಸಾರ್ ಹಿಂಗಾದ್ರಿ?”

“ನಾನೇನಾಗಿದ್ದಿನಿ?”

“ಹೋಗಿ ಹೋಗಿ ಬಿಜೆಪಿ ಸೇರಿದ್ರಲ್ಲ ಸಾರ್?”

“ಬಿಜೆಪಿ ಸೇರಿಲ್ಲ. ನಮ್ಮ ಮಾಮನಿಗೆ ಕ್ಯಾನ್‌ವಾಸ್ ಮಾಡ್ತಿನಿ.”

“ಆ ನಿಮ್ಮ ಮಾಮ ಅಂದ್ರೆ ಯಾರು ಸಾರ್?”

“ಬೊಮ್ಮಾಯಿ.”

“ಅವರು ಬೇರೆ ಜಾತಿ, ನೀವು ಬೇರೆ ಜಾತಿ ಅಲ್ಲವಾ?”

“ಅವರು ನಮ್ಮ ಮಾವ ಆಗಿ ಹುಟ್ಟಬೇಕಾಗಿತ್ತು. ಮಿಸ್ಸಾದ್ರು ಆದ್ರು ನಮಗೆ ಮಾಮ.”

“ಯಾಕೊ ಈ ಸಂಬಂಧನೇ ಅಸಂಬದ್ಧವಾಗಿ ಕಾಣ್ತಾ ಅದೆ.”

“ವಿಶಾಲ ಮನಸ್ಸಿನಿಂದ ನೋಡಿ ಯಲ್ಲ ಸರಿಕಾಣ್ತದೆ.”

“ನಿಜ ಸಾರ್ ನೀವು ಬಿಗ್‌ಬಾಸಲ್ಲಿ ಕಾಣಿಸಿಕೊಂಡು ಮಾತಾಡದನ್ನ ಕೇಳಿದ್ರೆ ಈ ಮನುಷ್ಯನ ಮನಸ್ಸು ಎಷ್ಟು ವಿಶಾಲ ಅನ್ಸದು, ಆದ್ರೀಗೇನಾಯ್ತು ನೋಡಿ ಸಾ..”

“ಈಗೇನಾಗಿದೆ?”

“ನೀವು ಇಷ್ಟು ವರ್ಷ ಮಾಡಿದ್ದು ಮಾತಾಡಿದ್ದು ಯಲ್ಲ ಬಿಜೆಪಿ ಚರಂಡಿಲಿ ಕೊಚಗಂಡೋದಂಗಾಯ್ತು ಸಾರ್.”

“ಬಿಜೆಪಿನ ಚರಂಡಿ ಅಂತೀರಲ್ರೀ?”

“ಹೌದು ಸಾರ್ ಆ ಪಾರ್ಟಿ ಜನಕ್ಕೆ ಮುಸಲ್ಮಾನರನ್ನ ಕಂಡ್ರಾಗಲ್ಲ, ದಲಿತ್ರನ್ನ ಕಂಡ್ರಾಗಲ್ಲ, ಬಡವರನ್ನ ಕಂಡ್ರಾಗಲ್ಲ, ಸಾಹಿತಿಗಳನ್ನ ಕಂಡ್ರಾಗಲ್ಲ, ನಾಟಕ ಕಂಡ್ರಾಗಲ್ಲ, ಸಂಗೀತ ಕಂಡ್ರಾಗಲ್ಲ, ನಿಮ್ಮ ಮಕ್ಕಳು ಹಾಕೋ ಬಟ್ಟೆ ಕಂಡ್ರಾಗಲ್ಲ, ನಿಮ್ಮ ಮನೆ ಹೆಂಗಸರು ಕುಂಕುಮ ಇಡದೇಯಿದ್ರಾಗಲ್ಲ, ಅವುರೊಂಥರ ಬಗ್ಗೆ ಹೇಳಕ್ಕೆ ಈ ಪದ ಸಾಲಲ್ಲ ಸರ್. ಹೊಸ ಪದನೆ ಹುಡುಕಬೇಕು.”

ಇದನ್ನೂ ಓದಿ: ಸಾಚಾರ್ ವರದಿಯ ನಂತರವೂ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ

“ನನಿಗೇನು ಅಂಗೆ ಕಾಣಲ್ಲ.”

“ಕಂಡಿದ್ರೆ ನೀವ್ಯಾಕೆ ಸಾರ್ ಬಿಜೆಪಿಗೊಯ್ತಿದ್ರಿ?”

“ಪುನಃ ಅದ್ನೆ ಹೇಳ್ತಿರಲ್ರಿ, ನಾನು ಬಿಜೆಪಿಗೋಗಿಲ್ಲ.”

“ಹೋಗದೆಯಿದ್ರು ನಿಮ್ಮ ಮಾಮನ ಜೊತೆ ನಿಂತಿದ್ದಿರಲ್ಲಾ?”

“ಹೌದು ನಮ್ಮ ಮಾವ ಅಂಗಲ್ಲ.”

“ನಿಮ್ಮ ಮಾವನ ಆಡಳಿತದಲ್ಲಿ ಏನಾಯ್ತು ಗೊತ್ತ ಸಾರ್?”

“ಏನಾಯ್ತು?”

“ಮುಸಲ್ಮಾನ ಹುಡುಗಿಯರ ಹಿಜಾಬ್ ಕಿತ್ರು, ಮುಸ್ಲಿಮರು ಹಣ್ಣು ಮಾರ್ತಾ ಯಿದ್ರೆ ಅಂಗಡಿನೆ ಉಡಾಯಿಸಿದ್ರು, ಹಣ್ಣು ಬೀದಿಗೆ ಚೆಲ್ಲಿ ತುಳುದ್ರು. ದನನಾ ಸಾಗುಸ್ತ ಅವರೆ ಅಂತ ಮುಸ್ಲಿಂ ಹುಡುಗನ್ನ ಹೊಡದ್ರು, ಅವುನು ಸೊಂಟ ಮುರುಕೊಂಡು ಕುಂತಲ್ಲೇ ಅವುನೆ. ಮೊನ್ನೆ ಕನಕಪುರದತ್ರ ಇದ್ರಿಷ್‌ನ ಕೊಲೆ ಆಯತು. ದೇವಸ್ಥಾನದತ್ರ ಮುಸ್ಲಿಮರು ಅಂಗಡಿ ಹಾಕದಂಗೆ ಮಾಡಿದ್ರು. ನಿಮ್ಮ ಹೋಟ್ಲಿರೋ ಶಿವಮೊಗ್ಗದಲ್ಲಿ 144 ಸೆಕ್ಷೆನ್ನಿದ್ರು ಈಶ್ವರಪ್ಪ ಮೆರವಣಿಗೆ ತೆಗೆದು ಮುಸಲ್ಮಾನರ ಕೇರಿಗೆ ನುಗ್ಗಿದರು. ಅವರ ಮನೆ ಲೂಟಿಯಾಗಂಗೆ ಮಾಡಿದ್ರು, ಟಿವಿ, ಪ್ರಿಜ್ಜು, ಪಾತ್ರೆ ಹರಡಿ ಬೀದಿಗಾಕಿದ್ರು. ಇದಕ್ಕೆ ಸಾಕ್ಷಿಯಾಗಿ ಎಂ.ಪಿ, ಡಿ.ಸಿ, ತಹಸೀಲ್ದಾರರೂ ಇದ್ರು. ಇದು ನಡೆದದ್ದು ಬೊಮ್ಮಾಯಿ ಅಂದ್ರೆ ನಿಮ್ಮ ಮಾವ ಮುಖ್ಯಮಂತ್ರಿಯಾಗಿದ್ದಾಗಿ ಸಾರ್. ಹಿಂಗಾಯ್ತಂತಲ್ಲಾ ಅಂತ ನಿಮ್ಮ ಮಾವನ್ನ ಕೇಳಿ; ಅದಕೇನಂತರೆ ಗೊತ್ತ? ಆಕ್ಷನ್‌ಗೆ ರಿಯಾಕ್ಷನ್ ಸಹಜ ಅಂತರೆ.”

“ಅದು ಸಹಜ ಅಲ್ಲವಾ.”

“ಪ್ರಚೋದನೆ ತಪ್ಪಲ್ಲವೇ? ನಿಮ್ಮನ್ನೆ ಒಬ್ಬ ಪತ್ರಕರ್ತ ಪದೇಪದೆ ಟೀಕೆ ಮಾಡಿದಾಗ ನೀವೇನಂದಿದ್ರೀ?”

“ಮರತೋಗಿದೆ..”

“ಬಿಜೆಪಿ ಸೇರಿದ ಮೇಲೆ ಮರಿಬೇಕಾಗುತ್ತೆ. ಆ ಪತ್ರಕರ್ತ ಹೀಗೆ ಬರೀತಿದ್ರೆ ನಾನು ಸುಮ್ಮನಿರಕ್ಕಾಗಲ್ಲ ಅಂದಿದ್ರಿ.”

“ಹೌದು ಆಗ ನನ್ನ ಸೈರಣೆ ಹಾಳಾಗಿತ್ತು.”

“ಸೈರಣೆ ಹಾಳಾದಾಗ ಸಂಭವಿಸೊ ಆಕ್ಷನ್‌ಗೆ ಯಾರು ಕಾರಣ ಸಾರ್? ಅದೆ ನಿಮ್ಮ ಮಾವನಿಗೆ ಗೊತ್ತಿಲ್ಲ, ಇರ್ಲಿ ಅಂತೂ ನಿಮಗೆ ನೀವೇ ಹಿನ್ನಡೆ ತಂದುಕೊಂಡ್ರಿ.”

“ಇದು ಹಿನ್ನಡೆ ಹೇಗ್ರಿ? ಒಂಥರದ ಮುನ್ನಡೆ.”

“ಇಲ್ಲ ಸಾರ್, ಕಾಗೆ ಸ್ನೇಹ ಮಾಡಿ ಗರುಡ ಪಕ್ಷಿ ಹಾಳಾಯ್ತು ಅನ್ನೋ ಗಾದೆ ಹಾಂಗೆ, ಸುದೀಪನ ವ್ಯಕ್ತಿತ್ವನೆ ಹಾಳಾಯ್ತು.”

“ಸುಮಲತಾರ ಚುನಾವಣೆ ಪ್ರಚಾರಕ್ಕೆ ದರ್ಶನ್, ಯಶ್ ಹೋಗಿರಲಿಲ್ವ?”

“ಕೊನೆಪಕ್ಷ ಸುಮಲತ ಪಕ್ಷೇತರವಾಗಿದ್ರು, ಅದರಲ್ಲೂ ಮಹಿಳೆ. ಅವರ ವಿರುದ್ಧ ಎರಡು ಪಾರ್ಟಿ ಒಂದಾಗಿದ್ದೋ. ಮಂಡ್ಯದಲ್ಲಿ ಸೆರೆಗೊಡ್ಡಿ ನಿಂತ ಆಕೆಯ ಸಹಾಯಕ್ಕೆ ಹೋಗಿದ್ದುದು ಮಾನವೀಯ ನಡವಳಿಕೆ. ಆಗ ನೀವು ದೂರ ಇದ್ರಿ.”

“ಅದಕ್ಕೆ ಬೇರೇ ಕಾರಣ ಇದೆ.”

“ಅವು ನಮಗೆ ಗೊತ್ತಾಗಲಿಲ್ಲ. ಅಂಬರೀಶು ಸರೋವರ ಸಂಜೀವಣ್ಣನಿಗೆ ಮಾಡಿದ ಉಪಕಾರಕ್ಕೆ ಸಂಜೀವಣ್ಣ ಚುನಾವಣಾ ಪ್ರಚಾರಕ್ಕೆ ಹೋಗಲಿಲ್ಲ. ಮೊಯ್ಲಿಯವರು ಭಾರಿ ಉಪಕಾರ ಮಾಡಿದ್ರಂತೆ, ಆದ್ರು ಅವರ ಚುನಾವಣೆ ಪ್ರಚಾರಕೆ ಸಂಜೀವಣ್ಣ ಹೋಗಲಿಲ್ಲ”

“ನಮ್ಮಪ್ಪ ನನ್ನಂಗೆ ಸ್ಟಾರ್ ನಟ ಅಲ್ಲ”

“ನೀವು ಸ್ಟಾರ್ ನಟ ಅಲ್ಲ ಸಾರ್. ನನಿಗೇನೋ ಬಿಜಿನೆಸ್ ಮ್ಯಾನ್ ತರ ಕಾಣ್ತಿರಿ. ನಟನೆ ಸೀರಿಯಸ್ಸಾಗಿ ತಗಂಡಂಗೆ ಕಾಣ್ತಯಿಲ್ಲ. ನಿಮ್ಮ ಮಾವ ನಿಮಗೆ ಸಹಾಯ ಮಾಡಿದ್ರೆ ಅದನ್ನ ವಾಪಸ್ ಮಾಡಿ, ಅದು ಬಿಟ್ಟು ನಿಮ್ಮ ವ್ಯಕ್ತಿತ್ವನೆ ನಾಶ ಮಾಡಿಕಂಡ್ರಲ್ಲ ಸಾರ್?”

“ವ್ಯಕ್ತಿತ್ವನ ನಾಶ ಆಗೋ ಅಂತದ್ದೇನಾಗಿದೇರಿ? ಸುಮ್ಮನೆ ಏನೇನೋ ಮಾತಾಡಬೇಡಿ..”

“ದೇವರಾಣೆ ನಾನು ಏನೇನೂ ಮಾತಾಡ್ತಯಿಲ್ಲ ಸಾರ್. ನಿಮ್ಮ ವಿಷಯದಲ್ಲಿ ಕಂಡಿದ್ನ ಹೇಳ್ತ ಯಿದಿನಿ. ಸಿನಿಮಾದಲ್ಲಿ ನಿಮ್ಮ ವಿಶೇಷ ಪ್ರತಿಭೆ ತೋರದೆಯಿದ್ರೂ ಬಿಗ್‌ಬಾಸಲ್ಲಿ ನೀವಾಡುತಿದ್ದ ಮಾತು, ತಿಕ್ಕಲ ಜನಗಳನ್ನೆಲ್ಲಾ ನೀವು ನಿಭಾಯಿಸುತಿದ್ದ ರೀತಿಗೆ ನಮ್ಮ ಜನ ನಿಮ್ಮನ್ನ ಮೆಚ್ಚಿಗಂಡಿದ್ರು. ಈಗ ಬಿಜೆಪಿ ಮಾಡಿರೋ ಎಲ್ಲಾ ಅನಾಹುತನೂ ನಿಮ್ಮ ತಲೆಗೆ ಕಟ್ಟಿ, ನೀವು ಟಿವಿ ಪರದೆ ಮೇಲೆ ಬಂದಾಗ, ಬಂದಾ ಇವುನೊಬ್ಬ ಅಂತರೆ ಜೆಡಿಎಸ್‌ನವರು, ಕಾಂಗ್ರೆಸ್ಸಿನವರು, ಎಎಪಿಗಳು ಇನ್ನು ಯಾರ್‍ಯಾರೋ ನಿಮ್ಮ ಮನಸ್ಥಿತಿಗೆ ಮರುಗಿ ಟಿವಿ ಆಫ್ ಮಾಡಬಹುದು. ಟಿವಿ ಒಂಥರ ನಮ್ಮ ಜನಗಳ ಮುಗ್ಧ ಮನಸ್ಸಿನ ಪರದೆ. ಅಲ್ಲಿ ಜನಮನ ಗೆದ್ದ ನೀವು ಮುಂದೆ ಒಬ್ಬ ಈಶ್ವರಪ್ಪನಂಗೆ ಕಾಣಬಹುದು. ರೇಣುಕಾಚಾರಿ, ಸಿ.ಟಿ ರವಿ, ಅಶ್ವತ್ಥನಾರಾಯಣ, ಮಾಡಾಳು ಮಗನಂಗೂ ಕಾಣಬಹುದು. ಜಾತ್ಯತೀತವಾಗಿ ಜನಸಮೂಹವನ್ನ ಆವರಿಸೊ ಸಿನಿಮಾ ಟಿವಿ ಪರದೆಯಲ್ಲಿ ಕಾಣಿಸಿಗಳೂ ಕಲಾವಿದರು ಜಾತ್ಯತೀತವಾಗಿ ಬದುಕೋದು ಒಳ್ಳೆದು. ಜಾತ್ಯತೀತವಾಗಿ ಬದುಕೋದು ಕಷ್ಟವಾದೋರು ಬಿಜೆಪಿ ಸೇರತರೆ. ಅಲ್ಲಿಗೆ ಅವರ ಅವಸಾನ ಆರಂಭವಾದಂಗೆ. ನಿಮ್ಮ ಕತೆನೂ ಅಂಗೇ ಆಗಬಹುದು ಅಂತ ನನ್ನ ಅನುಮಾನ.”

“ಅಂಗೇನೂ ಆಗಲ್ಲ ಕಂಡ್ರಿ, ಬಿಜೆಪಿಲೂ ನಾನು ಹೀರೊ ಆಯ್ತಿನಿ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...