Homeಅಂಕಣಗಳುರಾಸಲೀಲೆಯ ರಾಜಕೀಯ

ರಾಸಲೀಲೆಯ ರಾಜಕೀಯ

- Advertisement -
- Advertisement -

ವಿಧಾನಸಭೆಯಲ್ಲಿ ವಿರೋಧ ಪಕ್ಷವನ್ನು ಸರಿಯಾಗಿ ಜಾಡಿಸಿದ ಕುಮಾರಣ್ಣನ ಹಾವಭಾವ ಮತ್ತು ಭಾಷೆಯನ್ನು ಮೆಚ್ಚಿಕೊಂಡ ಬಿಜೆಪಿಗಳು ಅವರಿಗೆ ಭರ್ಜರಿ ಭೋಜನ ಹಾಕಿದರಂತಲ್ಲಾ. ಕುಮಾರಣ್ಣನನ್ನು ಮಧ್ಯದಲ್ಲಿ ಕೂರಿಸಿಕೊಂಡು ಅಕ್ಕಪಕ್ಕದಲ್ಲಿ ಎಡೂರಪ್ಪ ಮತ್ತು ಬೊಮ್ಮಾಯಿ ಕುಳಿತು ವಿಶೇಷ ಕಾಳಜಿಯಿಂದ ಉಣ್ಣಿಸುತ್ತಿರುವುದನ್ನು ನೋಡಿದ ಭೋಜನಪ್ರಿಯ ಬಿಜೆಪಿಗಳೇ ದಂಗುಬಡಿದು ಹೋದರಂತಲ್ಲಾ. ಕುಮಾರಣ್ಣನ ಮಾತುಗಳನ್ನು ಮಾಜಿ ಪ್ರಧಾನಿಗಳೇ ಮೆಚ್ಚಿಕೊಂಡ ಮೇಲೆ, ಅವರಿಗೆ ಊಟಹಾಕಿ ಉಪಚರಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿದ ಬೊಮ್ಮಾಯಿ, ಕುಮಾರಣ್ಣನ ಇಷ್ಟದ ಭೋಜನ ಬಡಿಸುತ್ತಿರಬೇಕಾದರೆ ಇದನ್ನ ನೋಡಿದ ಚನ್ನಪಟ್ಟಣದ ಮಾಜಿ ಮಂತ್ರಿಯಾದ ಯೋಗೇಶ್ವರ್‌ಗೆ ಹೊಟ್ಟೆಯುರಿಯುಂಟಾಗಿ, ’ನಮ್ಮ ಪಾರ್ಟಿಯವರಿಗೇನು ಬಂದಿದೆ, ನನ್ನನ್ನು ಸೋಲಿಸಿದವನನ್ನು ಕರೆದು ಊಟ ಹಾಕುತ್ತಿರಬೇಕಾದರೆ ಇದು ನನ್ನ ವಿರುದ್ಧದ ಷಡ್ಯಂತ್ರವಲ್ಲವೇ’ ಎಂದು ಭಾವಿಸಿದರಂತಲ್ಲಾ. ಕೂಡಲೆ, ತಾನೂ ಕೂಡ ಎಡೂರಪ್ಪನ ವಿರುದ್ಧ ಪಿತೂರಿ ನಡೆಸಿ, ದೆಹಲಿ ಮಟ್ಟದವರೆಗೂ ಹೋಗಿ, ವಿಜಯೇಂದ್ರನ ಹಾವಳಿ ವಿಪರೀತವಾಗಿದೆ ಎಂದು ದೂರು ಹೇಳಿ, ಅಂತೂ ಪರೀಕ್ಷೆ ಬರೆದಿದ್ದೇನೆಂದು ರಿಸಲ್ಟಿಗಾಗಿ ಕಾಯುತ್ತಿರಬೇಕಾದರೆ, ಎಡೂರಪ್ಪ ಇಳಿದು ಬೊಮ್ಮಾಯಿ ಏರಿದ ಮೇಲೆ ಯೋಗೇಶ್ವರನ ಮಂತ್ರಿಗಿರಿಯೇ ಹೋಯ್ತಂತಲ್ಲಾ. ಥೂತ್ತೇರಿ.

*****

ಸುಮ್ಮನೆ ಮಾತಿಗೆ ಹೇಳೋದಾದ್ರೆ ಎಡೂರಪ್ಪನ ಟೀಮು ಕುಮಾರಣ್ಣನ ಋಣದಲ್ಲಿದೆಯಂತಲ್ಲಾ. ಧರ್ಮರಾಯನ ಸರಕಾರದಂತೆ ನಡೆದುಕೊಂಡು ಹೋಗುತ್ತಿದ್ದ ಧರ್ಮಸಿಂಗ್ ಸರಕಾರವನ್ನ ಕೆಡವಿ ಎಮ್ಮೆಲ್ಲೆಗಳನ್ನೆಲ್ಲಾ ರೆಸಾರ್ಟಿನಿಂದ ಜಮೀರ್ ಅಹಮದ್ದನ ನ್ಯಾಷನಲ್ ಟ್ರಾವಲ್ ಬಸ್‌ನಲ್ಲಿ ತಂದು ವಿಧಾನಸೌಧದ ಮುಂದೆ ಸುರಿದುಕೊಂಡು, ಕುಮಾರಣ್ಣ ಮುಖ್ಯಮಂತ್ರಿಯಾಗಿ ಎಡೂರಪ್ಪ ಉಪಮುಖ್ಯಮಂತ್ರಿಯಾದ ಘಟನೆ ಸಾಮಾನ್ಯವೆ. ಪವರಿಲ್ಲದೆ ಮನೆಗೆ ಹೋಗುವ ಸ್ಥಿತಿಯಲ್ಲಿದ್ದ ಎಡೂರಪ್ಪ ಉಪಮುಖ್ಯಮಂತ್ರಿಯಾದದ್ದೂ ಅಲ್ಲದೆ, ಮೂರುಬಾರಿ ಮುಖ್ಯಮಂತ್ರಿಯಾದುದ್ದರಲ್ಲಿ ಕುಮಾರಣ್ಣನ ಕಾಂಟ್ರಿಬ್ಯೂಷನ್ ಕಡಿಮೆಯೇ! ಇದೆಲ್ಲಾ ನೆನಸಿಕೊಂಡು ಬಿಜೆಪಿಗಳು ಮತ್ತು ದಳದವರು ಖುಷಿಯಿಂದ ಮೆಲುಕು ಹಾಕುತ್ತಿರುವಾಗಲೇ ಇತಿಹಾಸ ಮರುಕಳಿಸಿದಂತೆ ಕುಮಾರಣ್ಣನ ಕೆಲಸವನ್ನ ಬಿಜೆಪಿ ಪಾರ್ಟಿಯೇ ಮಾಡಿಬಿಟ್ಟಿತಲ್ಲಾ. ಕುಮಾರಣ್ಣ ಶಾಸಕರನ್ನ ರೆಸಾರ್ಟಿಗೆ ಕರೆದುಕೊಂಡು ಹೋದರೆ ಬಿಜೆಪಿಯವರು ಬಾಂಬೆಗೆ ಕರೆದುಕೊಂಡು ಹೋಗಿ ತಾವು ಕದ್ದು ತಂದ ಶಾಸಕರಿಗೆ ಏನೇನನ್ನೆಲ್ಲಾ ಒದಗಿಸಿಕೊಟ್ಟು, ನಂತರ ಸಿಡಿ ಬಿಡುಗಡೆ ಮಾಡದಂತೆ ಸ್ಟೇ ತರುಬೇಕಾಗುವಂತೆ ಮಾಡಿ, ಖೆಡ್ಡಾದೊಳಕ್ಕೆ ಕೆಡವಿಕೊಂಡು ತಾವು ಬದುಕಿರುವವರೆಗೆ ಬಿಜೆಪಿ ಬಗ್ಗೆ ಉಸಿರೆತ್ತದಂತೆ ಮಾಡಿದ್ದಾರಲ್ಲಾ. ಹೀಗೆ ರಚನೆಗೊಂಡ ಸರಕಾರದ ಬಗ್ಗೆ ಕಿಡಿಕಾರುವುದು ಬಿಟ್ಟು ಅಪ್ಪ ಮಕ್ಕಳೇ ಬಿಜೆಪಿ ಸರಕಾರಕ್ಕೆ ಬೆಂಗಾವಲಾಗಿರುವುದನ್ನು ನೋಡಿದ ಜನ ದಳ ನಿಜಕ್ಕೂ ಬಿಜೆಪಿಯ ಬಿಟೀಂ ಎಂದರಂತಲ್ಲಾ. ಥೂತ್ತೇರಿ.

ದಳ ಬಿಜೆಪಿಯ ಬಿಟೀಮ್ ಆದುದಕ್ಕೆ ಭಯಂಕರ ಸಿಟ್ಟುಮಾಡಿಕೊಂಡಿರುವ ಯೋಗೇಶ್ ಕುಮಾರಣ್ಣನ ಬಗ್ಗೆ ಹೀನಾಯವಾಗಿ ಮಾತನಾಡಿದ್ದಾರಂತಲ್ಲಾ. ಈತ ನೆಲಕಚ್ಚಿದ ಪಾರ್ಟಿಯ ನಾಯಕ, ಮುಖ್ಯಮಂತ್ರಿಯಾಗಿದ್ದಾಗ ಹೋಟೆಲಿನಲ್ಲಿದ್ದು ರಾಸಲೀಲೆ ನಡೆಸಿದ ಗಿರಾಕಿ. ಈತ ನಡೆಸುತ್ತಿದ್ದ ಪ್ರಣಯಾಟಕ್ಕೆ ಸಮಯವಿಲ್ಲದಿದ್ದಾಗ, ಇನ್ನು ಮಂತ್ರಿ ಶಾಸಕರು ಜನಗಳನ್ನ ಮಾತನಾಡಿಸಲು ಬಿಡುವೆಲ್ಲಿ ಎಂದು ಕಿಡಿಕಾರಿ ಕರ್ನಾಟಕದ ಜನಕ್ಕೆ ಬಿಟ್ಟಿ ಮನರಂಜನೆ ಕೊಟ್ಟಿದ್ದಾರಲ್ಲಾ. ಕುಮಾರಣ್ಣನ ರಾಜಕೀಯ ಇತಿಹಾಸದಲ್ಲಿ ಇಷ್ಟು ಕಠೋರವಾಗಿ ಯಾರೂ ಟೀಕಿಸಿರಲಿಲ್ಲವಲ್ಲಾ. ಯೋಗೇಶ್ವರನ ಮಾತಿನಿಂದ ಕೆರಳಿದ ಕುಮಾರಣ್ಣ ನೀನೇನು ಸಾಚಾನೆ, ಮೆಗಾಸಿಟಿ ಹೆಸರಲ್ಲಿ ಜನಗಳ ದುಡ್ಡನ್ನು ಲಪಟಾಯಿಸಿ ಸಿನಿಮಾ ತೆಗೆದು ಹಣ ಹಾಕಿದವರನ್ನು ಹಾಳು ಮಾಡಿದ್ದಿ. ವೆಸ್ಟೆಂಡ್ ಹೋಟೆಲಿನ ರಾಸಲೀಲೆ ವಿಷಯಕ್ಕೆ ಬಂದರೆ ನನ್ನ ಜೊತೆ ಸಾರಾ ಮಹೇಶ್ ಇದ್ದರು. ಅವರ ಎದುರಲ್ಲೇ ಇನ್ನೂ ಹಲವರ ಜೊತೆಗೆ ವಿಶ್ರಾಂತಿಗೆ ಹೋಗುತ್ತಿದ್ದುದು ಅಲ್ಲಿಗೆ. ಕದ್ದುಮುಚ್ಚಿ ಏನನ್ನೂ ಮಾಡಿಲ್ಲ. ಅದರಲ್ಲೂ ಹೊರಗಡೆ ಪೊಲೀಸರಿದ್ದರು ಎಂದಿದ್ದಾರಲ್ಲಾ. ಆ ಪೊಲೀಸರ ಮುಖಾಂತರವೇ ನಾನು ಮಾಹಿತಿ ಸಂಗ್ರಹಿಸಿದ್ದು ಎಂದು ಯೋಗೇಶ್ವರ್ ಇನ್ನ ಹೇಳಿಲ್ಲವಂತಲ್ಲಾ. ಥೂತ್ತೇರಿ.

*****

ಕುಮಾರಣ್ಣನನ್ನು ನಡುವೆ ಕೂರಿಸಿಕೊಂಡಿದ್ದನ್ನು ನೋಡಿದ ದಳದವರು ಹೆದರಿಕೊಂಡು, ಇದೇನು ಕುಮಾರಣ್ಣ ನಮ್ಮನ್ನೆ ಬಲಿಕೊಡಲು ಹೊರಟಿದ್ದಾರಲ್ಲಾ ಎಂದು ಚರ್ಚಿಸಿದರಂತಲ್ಲಾ. ಇದಕ್ಕೆ ಬಿಜೆಪಿ ಉತ್ತರ ಪ್ರದೇಶದಲ್ಲಿ ಮಾಡಿದ ಮನೆಮುರುಕ ರಾಜಕಾರಣವೇ ಕಾರಣವಂತಲ್ಲಾ. ಅತ್ತ ಓವೈಸಿಯನ್ನು ಓಲೈಸುತ್ತ ಇತ್ತ ಮಾಯಾವತಿಯನ್ನು ಮರುಳುಮಾಡಿದ ಯೋಗಿ ಟೀಮು ಅವರ ಜೊತೆಯಲ್ಲೇ ಎಸ್ಪಿ ಯಾದವರನ್ನ ಮಕಾಡೆ ಮಲಗಿಸಿದ್ದನ್ನ ನೋಡಿದ ಭಾರತದ ಜನ ದಂಗುಬಡಿದು ಹೋಗಿದ್ದಾರಲ್ಲಾ. ದಳದ ಪಾರ್ಟಿ ಮುಖಂಡರಿಗೆ ಇದು ಹಳೆ ವರೆಸೆಯಾಗಿ ಕಾಣುತ್ತಿದೆ. ಕುಮಾರಣ್ಣ ವೆಸ್ಟೆಂಡ್ ಹೋಟೆಲು ಕಾಲಿ ಮಾಡುವಂತಾದುದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಸಿದ್ದರಾಮಯ್ಯ ಎಷ್ಟೇ ಹೇಳಿದರೂ ದೇವು ಟೀಮು ನಂಬುತ್ತಿಲ್ಲವಂತಲ್ಲಾ.
ಆದ್ದರಿಂದ ದಳಪತಿಗಳಿಗೆ ಸಿದ್ದರಾಮಯ್ಯನ ಟೀಮು ನಿರ್ನಾಮವಾಗದ ಹೊರತು ಉಳಿಗಾಲವಿಲ್ಲ ಎನ್ನಿಸಿ ರಾಸಲೀಲೆಗೆ ಹೆಸರಾದವರು ಹೆಚ್ಚಿರುವ ಬಿಜೆಪಿಯ ಡೈನಿಂಗ್ ಹಾಲಿನಲ್ಲಿ ಕುಳಿತರಂತಲ್ಲಾ. ಥೂತ್ತೇರಿ.


ಇದನ್ನೂ ಓದಿ:  ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...