Homeಕರ್ನಾಟಕಭೂಮಿ-ವಸತಿ ಸಮಸ್ಯೆಗಳ ಪರಿಹಾರಕ್ಕಾಗಿ ಮಲೆನಾಡಿಗರ ಬೈಕ್‌ ರ್‍ಯಾಲಿ ಮತ್ತು ಬೃಹತ್ ಪ್ರತಿಭಟನೆ

ಭೂಮಿ-ವಸತಿ ಸಮಸ್ಯೆಗಳ ಪರಿಹಾರಕ್ಕಾಗಿ ಮಲೆನಾಡಿಗರ ಬೈಕ್‌ ರ್‍ಯಾಲಿ ಮತ್ತು ಬೃಹತ್ ಪ್ರತಿಭಟನೆ

- Advertisement -
- Advertisement -

ಭೂಮಿ ಮತ್ತು ವಸತಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲೆಯ ಐದು ತಾಲ್ಲೂಕುಗಳ 102 ಹಳ್ಳಿಗಳಲ್ಲಿ ಎರಡು ದಿನಗಳ ಬೈಕ್ ಜಾಥಾ ಮತ್ತು ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ಜನಶಕ್ತಿ ಮಂಗಳವಾರ ಹೇಳಿದೆ.‌ ಮಾರ್ಚ್ 24-25 ರಂದು ಜಿಲ್ಲೆಯಾದ್ಯಂತ ಬೈಕ್‌‌‌ ಜಾಥಾ ನಡೆಯಲಿದ್ದು, ಮಾರ್ಚ್ 28ರ ಸೋಮವಾರದಂದು ಕೊಪ್ಪ ತಾಲ್ಲೂಕು ಕಚೇರಿಯ ಎದುರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಕರ್ನಾಟಕ ಜನಶಕ್ತಿ ಕಾರ್ಯದರ್ಶಿ ಕೆ. ಎಲ್‌. ಅಶೋಕ್‌ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಅಶೋಕ್‌, “ಕಳೆದ ಹತ್ತಾರು ವರ್ಷಗಳಿಂದ ತಮ್ಮ ನೆತ್ತಿಯ ಮೇಲೋಂದು ಸೂರು ಹಾಗು ತಮ್ಮ ಕನಿಷ್ಟ ಜೀವನೋಪಾಯಕ್ಕಾಗಿ ಎರಡೋ ಮೂರೋ ಎಕರೆ ಭೂಮಿಯನ್ನು ಕೃಷಿ ಮಾಡಿಕೊಂಡು, ಅದರ ಮಂಜೂರಿಗಾಗಿ ಸಾವಿರಾರು ಜನರು ಹತ್ತಾರು ವರ್ಷಗಳಿಂದ  ಹಾಕಿ ಕಾಯುತ್ತಾ ಕುಳಿತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಗಳ ಹಿನ್ನೆಲೆಯಲ್ಲಿ ಚಳವಳಿಗಳು ಮತ್ತು ಚುನಾವಣೆಗಳು

“ಇನ್ನೂ ಹಲವರು ನಿವೇಶನಕ್ಕಾಗಿ ಸರ್ಕಾರಕ್ಕೂ ಗ್ರಾಮಪಂಚಾಯಿತಿಗೂ ಅರ್ಜಿ ಹಾಕಿ ಜನಪ್ರತಿನಿಧಿಗಳ ಭರವಸೆಯಿಂದ ತಾವಿದ್ದ ಬಾಡಿಗೆ ಮನೆಯಲ್ಲೋ ,ಎಸ್ಟೇಟ್‌ಗಳಲೈನ್‌ಗಳಲ್ಲಿ ಕಾಯುತ್ತಿದ್ದಾರೆ. ಆದರೆ ಒಂದು ಜವಾಬ್ದಾರಿಯುತ ಆಡಳಿತ ಯಂತ್ರಾಂಗ ಹಾಗು ಸರ್ಕಾರ ತಮಗೆ ಸಿಗಬೇಕಾದ ನ್ಯಾಯಬದ್ದ ಹಕ್ಕಾದ ಭೂಮಿ ಹಾಗು ನಿವೇಶನ ನೀಡಲು ಮೀನಾಮೇಷ ಎಣಿಸುತ್ತಾ ಕಾಲಕಳೆಯುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈಗಾಗಲೇ ಮಲೆನಾಡಿನ ಬಹುತೇಕ ಭೂಮಿಯನ್ನ ಒಂದೋ ರಾಷ್ಟ್ರೀಯ ಉದ್ಯಾನ, ಹುಲಿಯೋಜನೆ, ಕಸ್ತೂರಿ ರಂಗನ್ ವರದಿ ಹೆಸರಲ್ಲಿ ಬಡವರನ್ನು ಭೂಮಿ ವಂಚಿತರನ್ನಾಗಿಸಲು ಸರ್ಕಾರ ಹೊರಟಿದೆ. ಉಳಿದ ಸರ್ಕಾರಿ ಭೂಮಿಯನ್ನು ಸೆಕ್ಷನ್ 4 ಎಂದು ಘೋಷಿಸಿ ಈಗಾಗಲೇ ವಾಸವಿರುವ ಹಾಗೂ ಕೃಷಿ ಮಾಡಿಕೊಂಡಿರುವ ಭೂಮಿಯನ್ನೂ ಮೀಸಲು ಅರಣ್ಯ ಮಾಡುವ ಹುನ್ನಾರದಲ್ಲಿದ್ದಾರೆ” ಎಂದು ಕರ್ನಾಟಕ ಜನಶಕ್ತಿ ಹೇಳಿದೆ.

“ಈ ಹಿಂದೆಯೇ ಅರಣ್ಯ ಇಲಾಖೆ ಒಂದೊಂದು ನೋಟಿಸ್ ಕೊಟ್ಟು ದಾಖಲೆ ಕೇಳುತ್ತಿದೆ. ಜನರು ಆ ಕ್ಷಣದಲ್ಲಿ ಎದ್ದು ಬಿದ್ದು ಆಕ್ಷೇಪಣೆ ಸಲ್ಲಿಸಿ ಹಾಗೇ ತಮ್ಮ ಜವಾಬ್ದಾರಿ ಮುಗಿಯಿತೆಂಬಂತೆ ಇರುತ್ತಾರೆ. ಆದರೆ ಇದು ಇಲ್ಲಿಗೇ ಮುಗಿಯುವುದಿಲ್ಲ. ಒಂದು ಆಕ್ಷೇಪಣೆ ಸಲ್ಲಿಸಿದ ಮಾತ್ರಕ್ಕೆ ನಿವೇಶನ ಹಾಗೂ ಕೃಷಿ ಭೂಮಿಗೆ ಹಕ್ಕುಪತ್ರ ಸಿಗುವುದಿಲ್ಲ” ಎಂದು ಕರ್ನಾಟಕ ಜನಶಕ್ತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ತೆಲಂಗಾಣ ಸಶಸ್ತ್ರ ಹೋರಾಟದ ಕಮಾಂಡರ್‌‌, ಹಿರಿಯ ಕಮ್ಯುನಿಷ್ಟ್‌ ನಾಯಕಿ ಮಲ್ಲು ಸ್ವರಾಜ್ಯಂ 

ಇದಕ್ಕೆ ಉದಾಹರಣೆಯಾಗಿ ‘ಕುದುರೆ ಮುಖ ರಾಷ್ಟ್ರೀಯ ಉದ್ಯಾನ’ ಇದೆ ಎಂದು ಹೇಳಿರುವ ಕರ್ನಾಟಕ ಜನಶಕ್ತಿ, “ಕುದುರೆ ಮುಖ ವ್ಯಾಪ್ತಿಯ ಜನರು ತಮ್ಮ ಜೀವನಕ್ಕಾಗಿ ಕೃಷಿ ಮಾಡಿಕೊಂಡಿದ್ದ ಭೂಮಿಗೆ 2001 ರಲ್ಲಿ ಸರ್ಕಾರ ಹಕ್ಕು ಪತ್ರ ನೀಡಿತ್ತು. ಅವರಿಗೆ ಎಲ್ಲಾ ದಾಖಲೆ ಗಳು ಇದ್ದಾಗ್ಯೂ 2014 ರಲ್ಲಿ ಅರಣ್ಯ ಇಲಾಖೆ ಸುಮಾರು 50 ಜನ ಆದಿವಾಸಿಗಳ ಮೇಲೆ ಸರ್ಕಾರಿ ಭೂಮಿ ಅಕ್ರಮ ಭೂ ಕಭಳಿಕೆ ಮಾಡಿರುವ ಆರೋಪದಡಿ ಕೇಸು ದಾಖಲಿಸಿ ಕೋರ್ಟಿಗೆ ಅಲೆಯುವಂತೆ ಮಾಡಿದೆ. ಸರ್ಕಾರ ಒಂದು ಕಡೆ ಎಲ್ಲರಿಗೂ ಭೂಮಿ ಕೊಡುತ್ತೇವೆ, ನಿವೇಶನ ಕೊಡುತ್ತೇವೆ ಎನ್ನುತ್ತದೆ. ಆದರೆ ಆದೇ ಸಮಯದಲ್ಲಿ ಅರಣ್ಯ ಇಲಾಖೆ ಮೂಲಕ ಕಿತ್ತುಕೊಳ್ಳುವ ಹುನ್ನಾರ ಮಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಮೂಲಭೂತ ಅಗತ್ಯವಾದ ನಿವೇಶನ ಹಾಗೂ ಭೂಮಿಯ ಹಕ್ಕಿಗಾಗಿ ಹೋರಾಡದೇ ಹೋದರೆ, ಮುಂದಿನ ದಿನಗಳಲ್ಲಿ ಬದುಕು ಕಟ್ಟಿಕೊಂಡ ಭೂಮಿಯಲ್ಲಿ ಪರಕೀಯರಂತೆ ಬದುಕ ಬೇಕಾಗುತ್ತದೆ ಎಂದು ಎಚ್ಚರಿಸಿರುವ ಕರ್ನಾಟಕ ಜನಶಕ್ತಿ, ಜನರನ್ನು ಜಾಗೃತರಾಗುವಂತೆ ಕರೆ ನೀಡಿದೆ.

ಈ ಹಿನ್ನಲೆಯಲ್ಲಿ ಮಾರ್ಚ್‌ 24-25 ರಂದು ಭೂಮಿ ಹಾಗು ನಿವೇಶನಕ್ಕೆ ಆಗ್ರಹಿಸಿ ಹಾಗೂ ಇಡೀ ಮಲೆನಾಡನ್ನು ಮೀಸಲು ಅರಣ್ಯ ಮಾಡುವ ಹುನ್ನಾರದ ಸೆಕ್ಷನ್ 4 ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ಜನಶಕ್ತಿಯು ಮಲೆನಾಡಿನ ಜನ ಜನಜಾಗೃತಿ ಬೈಕ್‌ ಜಾಥಾವನ್ನು ಹಾಗೂ 28 ರಂದು ಕೊಪ್ಪ ತಾಲ್ಲೂಕು ಕಛೇರಿ ಮುಂದೆ ನಡೆಯುವ ಜನಾಗ್ರಹ ಸಭೆ ನಡೆಸಲಿದೆ ಎಂದು ಅಶೋಕ್ ಹೇಳಿದ್ದಾರೆ.

ಇದನ್ನೂ ಓದಿ: 10 ವರ್ಷಗಳ ಸತತ ಹೋರಾಟ!; 2011ರ ದೇಶದ್ರೋಹ ಪ್ರಕರಣದಲ್ಲಿ ಹೋರಾಟಗಾರ್ತಿ ಸೋನಿ ಸೋರಿ ಖುಲಾಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...