ಅಕ್ರಮ ವಿದೇಶಿ ನಿಧಿ ವರ್ಗಾವಣೆ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಮಗ ರಣಿಂದರ್ ಸಿಂಗ್ಗೆ ಜಾರಿ ನಿರ್ದೇಶನಾಲಯ ಮಂಗಳವಾರ ನೋಟಿಸ್ ನೀಡಿದೆ.
2016 ರ ಹಿಂದೆಯೇ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಥವಾ ಫೆಮಾವನ್ನು ಉಲ್ಲಂಘಿಸಿದ ಆರೋಪದ ಮೇಲೆ ರಣಿಂದರ್ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಬ್ರಿಟಿಷ್ ವರ್ಜಿನ್ ದ್ವೀಪಗಳ ತೆರಿಗೆ ಧಾಮದಲ್ಲಿ ಸ್ವಿಟ್ಜರ್ಲೆಂಡ್ಗೆ ಹಣದ ವರ್ಗಾವಣೆ ಸೇರಿದಂತೆ ಟ್ರಸ್ಟ್ ಮತ್ತು ಕೆಲವು ಅಂಗಸಂಸ್ಥೆಗಳನ್ನು ರಚಿಸಲಾಗಿರುವುದರ ಕುರಿತು ವಿವರಣೆ ನೀಡಲು ರಣಿಂದರ್ ಸಿಂಗ್ ಅವರಿಗೆ ಸಮನ್ಸ್ ನೀಡಲಾಗಿದೆ.
ಈ ಹಿಂದೆ ಉಲ್ಲಂಘನೆ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಿ ಪಂಜಾಬ್ನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ನಾನು ಬಂಡೆ ಅಲ್ಲ; ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲು: ಡಿ.ಕೆ.ಶಿವಕುಮಾರ್
ರಣಿಂದರ್ ಸಿಂಗ್ ಅವರು ಈ ಹಿಂದೆ, “ಮರೆಮಾಡಲು ಏನೂ ಇಲ್ಲ ಮತ್ತು ತನಿಖೆಗೆ ಸಹಕರಿಸಲು ಸಿದ್ಧವಾಗಿದ್ದೇನೆ” ಎಂದು ಹೇಳಿದ್ದರು.
2011 ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಇಲಾಖೆಯು ತನ್ನ ಫ್ರೆಂಚ್ ಸಹವರ್ತಿಗಳಿಂದ ಪಡೆದ ವಿವರಗಳ ಭಾಗವಾಗಿ, ಆಲ್ಪೈನ್ ರಾಷ್ಟ್ರದಲ್ಲಿ ರಣಿಂದರ್ ಸಿಂಗ್ ಅವರು ಕಡಲಾಚೆಯ ಖಾತೆಯನ್ನು ಹೊಂದಿದ್ದಾರೆಂದು ಮಾಹಿತಿ ಬಂದಿದ್ದರಿಂದ ಈ ಪ್ರಕರಣ ದಾಖಲಾಗಿದೆ.
ರಣಿಂದರ್ ಸಿಂಗ್ ಮತ್ತು ಅವರ ತಂದೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಈ ಎಲ್ಲಾ ಆರೋಪಗಳನ್ನೂ ನಿರಾಕರಿಸಿ, ಇದನ್ನು ಸುಳ್ಳು ಎಂದಿದ್ದಾರೆ.
ಇದನ್ನೂ ಓದಿ: ನ.9ರಂದು ಲಾಲೂ ಜೈಲಿನಿಂದ ಹೊರಗೆ; ಮರುದಿನ ನಿತೀಶ್ಗೆ ಬೀಳ್ಕೊಡುಗೆ: ತೇಜಸ್ವಿ ಯಾದವ್


