Homeಅಂಕಣಗಳುಪುಸ್ತಕ ಪರಿಚಯ; ಎಡಿತ್ ನೆಸ್ಬೂತರ ಕಾದಂಬರಿ: ‘ರೈಲ್ವೆಮಕ್ಕಳು’

ಪುಸ್ತಕ ಪರಿಚಯ; ಎಡಿತ್ ನೆಸ್ಬೂತರ ಕಾದಂಬರಿ: ‘ರೈಲ್ವೆಮಕ್ಕಳು’

- Advertisement -
- Advertisement -

ಕನ್ನಡದ ಮಕ್ಕಳ ಸಾಹಿತ್ಯ ಹೆಚ್ಚಾಗಿ ಪದ್ಯಕೇಂದ್ರಿತ. ಕಾದಂಬರಿ ಬರೆವ ಕಸುವಿದ್ದವರು ಮಕ್ಕಳಿಗಾಗಿ ಬರೆಯುವುದು ಕಡಿಮೆ. ದೊಡ್ಡ ಕಥನವೊಂದನ್ನು ಕಲ್ಪಿಸಿಕೊಳ್ಳಲು ಅಶಕ್ತರಾಗಿರುವವರು, ಮಕ್ಕಳ ಕಥನಗಳನ್ನು ಸರಳೀಕರಿಸಿ ಯಾಂತ್ರಿಕವಾಗಿ ಬರೆಯುವುದು ಹೆಚ್ಚು. ಈ ಹಿನ್ನೆಲೆಯಲ್ಲಿ ಶತಮಾನದ ಹಿಂದಿನ ಮಕ್ಕಳ ಕೃತಿಯೊಂದು ಕನ್ನಡಕ್ಕೆ ಬಂದಿದೆ. ಅದು ಬ್ರಿಟಿಷ್ ಲೇಖಕಿ ಎಡಿತ್ ನೆಸ್ಬೂತ್ ಅವರ ‘ದ ರೈಲ್ವೆ ಚಿಲ್ದ್ರನ್’ (1906). 19ನೇ ಶತಮಾನದಲ್ಲಿ ಸಮಾಜವಾದಿ ಚಳವಳಿಯಲ್ಲಿ ತೊಡಗಿಕೊಂಡಿದ್ದ ರಾಜಕೀಯ ಕಾರ್ಯಕರ್ತೆಯೂ ಆಗಿದ್ದ ಎಡಿತರ ಈ ಕಾದಂಬರಿ ಬಹಳ ಜನಪ್ರಿಯ. ಇದು ಸಿನಿಮಾ ಕೂಡ ಆಯಿತು. ಇದನ್ನು ವೃತ್ತಿಯಿಂದ ವೈದ್ಯರಾದ ಬಳ್ಳಾರಿ ಡಾ. ಅರವಿಂದ ಪಟೇಲರು ಕನ್ನಡಕ್ಕೆ ತಂದಿದ್ದಾರೆ.

ಎಡಿತ್ ನೆಸ್ಬೂತ್

ಮೂರು ಮಕ್ಕಳು ಮುಖ್ಯ ಪಾತ್ರಗಳಲ್ಲಿ ನಿರೂಪಣೆಗೊಂಡಿರುವ ಈ ಕಾದಂಬರಿ, ಮಕ್ಕಳ ದೃಷ್ಟಿಯಿಂದ ರೋಚಕವೂ ರಾಜಕೀಯ ದೃಷ್ಟಿಯಿಂದ ಐತಿಹಾಸಿಕವೂ ಆದ ಆಯಾಮವುಳ್ಳದ್ದು. ಮೂರು ಮಕ್ಕಳು ನಾಟಕೀಯವಾದ ಸನ್ನಿವೇಶದಿಂದ ರೈಲಿಗೆ ತೆರೆದುಕೊಳ್ಳುವ ಮೂಲಕ ಕಥೆ ಶುರುವಾಗುತ್ತದೆ. ಈ ಮಕ್ಕಳ ತಂದೆಯನ್ನು ಶತ್ರುದೇಶಕ್ಕೆ ಗುಪ್ತಮಾಹಿತಿ ಒದಗಿಸುತ್ತಿದ್ದಾನೆಂದು ಆಪಾದಿಸಿ ಸರ್ಕಾರ, ಸೆರೆಮನೆಗೆ ಹಾಕಿದೆ. ಇದನ್ನು ಮಕ್ಕಳಿಗೆ ತಿಳಿಯದಂತೆ ಗುಟ್ಟಾಗಿಟ್ಟು, ಗಂಡ ಬರುವತನಕ ಕುಟುಂಬ ಸಂಭಾಳಿಸುವ ಹೊಣೆ, ಮಕ್ಕಳ ತಾಯ ಮೇಲೆ ಬೀಳುತ್ತದೆ. ಸನ್ನಿವೇಶ ಪಲ್ಲಟದಿಂದ ಬಡತನಕ್ಕಿಳಿದ ಕುಟುಂಬವು, ಲಂಡನ್ ತೊರೆದು ಹಳ್ಳಿಯೊಂದರಲ್ಲಿ ಬಿಡಾರ ಹೂಡುತ್ತದೆ. ಅದು ಹೊಲ ಕಾಡು ಹೊಳೆಗಳಿಂದ ಕೂಡಿದ ತಾಣ. ಈ ಹೊಸತಾಣದಲ್ಲಿ ಮಕ್ಕಳು ತಮ್ಮ ಸುತ್ತ ತೆರೆದುಬಿದ್ದಿರುವ ನಿಸರ್ಗ ಮತ್ತು ಮನುಷ್ಯ ಪರಿಸರಕ್ಕೆ ಮೆಲ್ಲಗೆ ಬಿಚ್ಚಿಕೊಳ್ಳುತ್ತವೆ. ಮನೆಯ ಬಳಿ ಹಾದುಹೋಗಿರುವ ರೈಲುಹಳಿ, ಓಡಾಡುವ ಬಂಡಿ ಮತ್ತು ರೈಲ್ವೆ ನಿಲ್ದಾಣ ಅವರನ್ನು ಸೆಳೆಯುತ್ತದೆ. ಸ್ಟೇಶನ್‌ಮಾಸ್ತರ್, ಸಿಗ್ನಲ್‌ಮನ್, ಪೋರ್ಟರು ಗೆಳೆಯರಾಗುತ್ತಾರೆ. ಈ ಹೊಸ ಪರಿಸರದಲ್ಲಿ ಮಕ್ಕಳು ಮಾಡುವ ಸಾಹಸ, ಪ್ರಕಟಿಸುವ ಜೀವಂತಿಕೆಗಳನ್ನು ಕಾದಂಬರಿ ಕಾಣಿಸುತ್ತ ಹೋಗುತ್ತದೆ. ಕೊನೆಗೊಂದು ದಿನ ಮಕ್ಕಳ ಅಪ್ಪ ನಿರ್ದೋಷಿಯೆಂದು ಸಾಬೀತಾಗಿ, ಸೆರೆಮನೆಯಿಂದ ಬಿಡುಗಡೆಗೊಂಡು ರೈಲಿನಿಂದ ಇಳಿವ ಮೂಲಕ ಕಾದಂಬರಿ ಮುಗಿಯುತ್ತದೆ.

ಕಾದಂಬರಿಯಲ್ಲಿ ರೈಲುಬಂಡಿಯು ಮಕ್ಕಳ ವಿಸ್ಮಯಕ್ಕೆ ಮಾತ್ರ ಇಂಬಾಗುವುದಿಲ್ಲ. ಅವರಲ್ಲಿ ನೋವಿಗೆ ಮಿಡಿವ ಮನುಷ್ಯತ್ವವನ್ನು ಉದ್ದೀಪಿಸುವ ಸಂಗಾತಿಯಾಗುತ್ತದೆ. ಬೆಟ್ಟ ನದಿ ಕಾಡು ಕಡಲು, ಅವರಲ್ಲಿ ಹುದುಗಿರುವ ಕ್ರಿಯಾಶೀಲತೆಯನ್ನು ಹೊಮ್ಮಿಸುತ್ತವೆ. ಗೋಪಾಲಕೃಷ್ಣ ಅಡಿಗರು ಅನುವಾದಿಸಿದ ಬನದ ಮಕ್ಕಳು ಕಾದಂಬರಿಯಲ್ಲಿ ಮಕ್ಕಳ ಸೃಜನಶೀಲತೆಯನ್ನು ಹೊಮ್ಮಿಸುತ್ತಿರುವುದು ಕಾಡಾದರೆ, ಇಲ್ಲಿ ಆಧುನಿಕ ಯಂತ್ರಜಗತ್ತಿಗೆ ಸಂಬಂಧಿಸಿದ ರೈಲುಗಾಡಿ ಅದಕ್ಕೆ ಅನುವಾಗುತ್ತದೆ. ಕೈಗಾರಿಕೀಕರಣಗೊಂಡ ದೇಶದ ಸಹಜ ಅಭಿವ್ಯಕ್ತಿಯಂತೆ ಈ ವಸ್ತುವಿದೆ. ವಿಶೇಷವೆಂದರೆ ಇಲ್ಲಿನ ರೈಲುಗಾಡಿ ಕೇವಲ ತಂತ್ರಜ್ಞಾನದ ಉತ್ಪನ್ನವಲ್ಲ. ಪರಿಸರದಲ್ಲಿರುವ ಹೊಳೆ ಕಣಿವೆ ಕಾಡು ಮನುಷ್ಯರ ಜತೆ ಬೆರೆತು ತಾನೂ ಒಂದು ಪಾತ್ರ. ಈ ಹಿನ್ನೆಲೆಯಲ್ಲಿ ‘ರೈಲ್ವೆಮಕ್ಕಳು’ ಎಂಬ ಕಾದಂಬರಿ ಶೀರ್ಷಿಕೆ ಅರ್ಥಪೂರ್ಣ. ತಂದೆಯಿಂದ ದೂರವಾಗಿರುವ ಮಕ್ಕಳ ಅನಾಥಪ್ರಜ್ಞೆಯನ್ನು ರೈಲು ನೀಗಿಸುತ್ತದೆ. ಈ ಕಾದಂಬರಿ ಇರಾನಿನ ಮಜೀದ್ ಮಜೀದಿಯವರು ಮಾಡಿರುವ ಮಕ್ಕಳ ಮೇಲಿನ ಸಿನಿಮಾಗಳನ್ನು ನೆನಪಿಸುತ್ತದೆ. ದೈವಿಕವಾದ ಚೆಲುವು ಮುಗ್ಧತೆ ಕರುಣೆ ಪ್ರೀತಿ ನೆಲದ ಮೇಲಿದ್ದರೆ ಅದು ಮಕ್ಕಳಲ್ಲಿದೆ ಎಂದು ಕಾಣಿಸುವ ಸಿನಿಮಾಗಳವು; ‘ನಿಮ್ಮ ಮಕ್ಕಳು ನಿಮ್ಮವು ಮಾತ್ರವಲ್ಲ, ಅವು ಜಗತ್ತಿಗೆ ಸೇರಿದವು’ ಎಂಬ ದಾರ್ಶನಿಕ ಲೇಖಕ ಖಲೀಲ್ ಗಿಬ್ರಾನನ ಹೇಳಿಕೆಗೆ ವ್ಯಾಖ್ಯೆ ಬರೆದಂತೆ ಅವಿವೆ. ಇಂಗ್ಲೆಂಡಿನಲ್ಲಿ ರೈಲ್ವೆಚಿಲ್ದ್ರನ್ ಸಿನಿಮಾ ಕೂಡ ಆಯಿತು.

ಕಾದಂಬರಿಯಲ್ಲಿ ಮಕ್ಕಳನ್ನು ಬಿಟ್ಟರೆ ಮುಖ್ಯ ಪಾತ್ರ ಮಕ್ಕಳ ತಾಯಿಯದು. ಈಕೆಯೊಬ್ಬ ಕರುಣೆ ಪ್ರೀತಿ ತುಂಬಿದ ಮಹಿಳೆ; ಕಂಡವರ ಮಕ್ಕಳನ್ನೂ ತನ್ನವರೆಂದು ವಾತ್ಸಲ್ಯ ತೋರಬಲ್ಲ ಉದಾರೆ; ಕತೆ ಕವಿತೆ ಬರೆದು, ಸಂಭಾವನೆಯಿಂದ ಮನೆ ಸಂಭಾಳಿಸುವ ದಿಟ್ಟೆ. ಮಕ್ಕಳ ವ್ಯಕ್ತಿತ್ವದ ಹಿಂದೆ ಇವಳ ಪ್ರಭಾವವಿದೆ. ಮಕ್ಕಳನ್ನು ಸಮಾಜಜೀವಿಗಳಾಗಿ ಬೆಳೆಸುವುದಕ್ಕೆ ಬೇಕಾದ ಜೀವನ ಮೌಲ್ಯಗಳನ್ನು ಈಕೆ ತುಂಬುತ್ತಾಳೆ. ಬವಣೆ ಕಡಿದುಕೊಂಡು ಮೈಮೇಲೆ ಬಿದ್ದಾಗ ಎದೆಗುಂದದೆ ಬದುಕಿನ ಬಂಡಿ ಎಳೆವ ಆಕೆಯ ಸಹನೆ ವಿವೇಕ ಅಪೂರ್ವ. ಗಾರ್ಕಿಯ ’ಮದರ್’ ತರಹ ಕೃತಿಯಾದ್ಯಂತ ಜೀವಶಕ್ತಿಯಾಗಿ ಹರಡಿಕೊಳ್ಳುವಳು ಈಕೆ.

ಕಾದಂಬರಿಯ ಇಷ್ಟವಾಗುವ ಮತ್ತೊಂದು ಪಾತ್ರ ರೈಲ್ವೆ ಪೋರ್ಟರನದು. ಅವನೊಬ್ಬ ಬಡವ. ಸ್ವಾಭಿಮಾನಿ. ತನಗೆ ನೆರವಾಗುವ ನೆಪದಲ್ಲಿ ಉಳ್ಳವರು ಸಹಾನುಭೂತಿಯನ್ನು ತೋರಿಸಿ ಆತ್ಮಗೌರವಕ್ಕೆ ಧಕ್ಕೆ ತರುವ ಬಗ್ಗೆ ಎಚ್ಚರವುಳ್ಳವನು. ಮಕ್ಕಳಾದರೂ ಅವನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಪ್ರೀತಿ ತೋರುವರು. ಕರುಣೆ-ದಾನಗಳನ್ನು ಧಾರ್ಮಿಕ ಮೌಲ್ಯವಾಗಿಸಿಕೊಂಡ ಸಮಾಜಗಳಲ್ಲಿ, ಅವು ಉಳ್ಳವರ ಹೆಚ್ಚುಗಾರಿಕೆಯ ಪ್ರದರ್ಶನಗಳೂ ಆಗುತ್ತವೆ. ಅವಕ್ಕೆ ಬಡವರ ಕಷ್ಟ ಗೊತ್ತಾಗಬಹುದು. ಸ್ವಾಭಿಮಾನ ಅರ್ಥವಾಗುವುದಿಲ್ಲ. ಇಂತಹ ಸಮಾಜಗಳಲ್ಲಿ ಬಡವರ ದೈನ್ಯಕ್ಕಿಳಿದುಬಿಡುವರು. ಆದರೆ ಖಾಸಗಿತನವನ್ನು ಮೌಲ್ಯವಾಗಿಸಿಕೊಂಡು ಬದುಕುವ, ದುಃಖವನ್ನು ಸಾರ್ವಜನಿಕವಾಗಿಯೂ ಭಾವುಕವಾಗಿಯೂ ಪ್ರದರ್ಶಿಸದೆ ಒಳಗೇ ಅನುಭವಿಸುವ ಯೂರೋಪಿಯನ್ ಸಮಾಜದಲ್ಲಿ, ಸುತ್ತಮುತ್ತಲಿನವರ ಕಷ್ಟಸುಖದಲ್ಲಿ ಭಾಗಿಯಾಗದಿದ್ದರೆ ನಮ್ಮ ಬದುಕಿಗೆ ಅರ್ಥವಿಲ್ಲ ಎಂಬ ಆಶಯವನ್ನು ಕಾದಂಬರಿ ಹೊಮ್ಮಿಸುವುದು ಮಹತ್ವದ ಸಂಗತಿ.

ಕಾದಂಬರಿ ಇಂಗ್ಲೆಂಡಿನ ಹಳ್ಳಿಬಾಳಿನ ಸೂಕ್ಷ್ಮ ವಿವರಗಳ ಸಮೇತವಾದ ಜೀವಂತ ಚಿತ್ರವನ್ನು ಕಟ್ಟಿಕೊಡುತ್ತದೆ. ಕಥೆಯಲ್ಲಿ ಪತ್ತೇದಾರಿ ಗುಣವಿದ್ದು, ಕುತೂಹಲ ಹುಟ್ಟಿಸಿಕೊಂಡು ಹೋಗುತ್ತದೆ. ಬಹುಮಟ್ಟಿಗೆ ಕಥೆಯನ್ನು ಮಕ್ಕಳ ದೊಡ್ಡವರ ಸಂಭಾಷಣೆಯ ಮೂಲಕ ಕಟ್ಟಿರುವುದರಿಂದ ಓದಲು ಸರಾಗವಾಗಿದೆ. ಇಂಗ್ಲೆಂಡಿನ ಮಕ್ಕಳ ವರ್ತನೆ ಜಗಳ ಆಲೋಚನೆ ಪ್ರೀತಿಗಳನ್ನು ಕಾಣುವಾಗ, ನಮ್ಮ ಕುಟುಂಬಗಳಲ್ಲೂ ಹೀಗೆ ಅಲ್ಲವೇ ಎಂಬ ಆಪ್ತಭಾವ ಬರುತ್ತದೆ. ದೇಶ ಭಾಷೆ ಸಂಸ್ಕೃತಿಗಳು ಬೇರೆ; ಆದರೆ ಮಾನವ ಸ್ವಭಾವಗಳು ಬಹುತೇಕ ಒಂದೇ. ಕಾದಂಬರಿ, ಕೇವಲ ಮಕ್ಕಳ ಲೋಕದ ರೊಮ್ಯಾಂಟಿಕ್ ಜಗತ್ತನ್ನು ಒಳಗೊಂಡಿಲ್ಲ. ದುಷ್ಟ ಪ್ರಭುತ್ವದ ವಿರುದ್ಧ ನಾಗರಿಕ ಸಮಾಜದಲ್ಲಿರುವ ಪ್ರಜ್ಞಾವಂತರು ಪ್ರತಿರೋಧ ಮಾಡಿದಾಗ, ಅವರಿಗೆ ಅದು ಕೊಡುವ ಕಿರುಕುಳ, ಅವರು ಅದನ್ನು ಹಲ್ಲುಕಚ್ಚಿ ಎದುರಿಸುವ ಘಟನೆಗಳು ಇಲ್ಲಿವೆ. ರಷ್ಯಾ ದೇಶದಲ್ಲಿ ಝಾರ್ ದೊರೆಗಳನ್ನು ಟೀಕಿಸಿ ಬರೆದು ದೇಶಭ್ರಷ್ಟನಾದ ಲೇಖಕನೊಬ್ಬನ ಪಾತ್ರವೂ ಇದೆ. ಹೀಗಾಗಿ ಕಾದಂಬರಿಗೆ ರಾಜಕೀಯ ಆಯಾಮವೂ ಪ್ರಾಪ್ತವಾಗಿದೆ. ಆದರೆ ಈ ಕಾದಂಬರಿ ರಚಿತವಾದ ಕಾಲಕ್ಕೆ ಇಂಗ್ಲೆಂಡು ಜಗತ್ತಿನ ಹಲವಾರು ದೇಶಗಳನ್ನು ಆಕ್ರಮಿಸಿಕೊಂಡಿತ್ತು. ಅಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ರಾಜದ್ರೋಹದ ಆಪಾದನೆ ಹೊರಿಸಿ ಜೈಲಿಗೆ ಅಟ್ಟುತ್ತಿತ್ತು. ಕೊಲ್ಲುತ್ತಿತ್ತು. ಇಂಗ್ಲಿಷ್ ಲೇಖಕರು ಈ ಬಗ್ಗೆ ಪರಿತಾಪ ಪ್ರಜ್ಞೆಯಿಲ್ಲದೆ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಪ್ರತಿರೋಧ, ಸಮಾಜವಾದದಂತಹ ಮೌಲ್ಯಗಳ ಬಗ್ಗೆ ಬರೆಯುವುದು ಸೋಜಿಗ ಮತ್ತು ವೈರುಧ್ಯವೆನಿಸುತ್ತದೆ. ಇಂತಹುದೇ ವೈರುಧ್ಯ, ಭಾರತದಲ್ಲಿ ಪ್ರಭುತ್ವಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವಾಗ ನಿರ್ಲಿಪ್ತವಾಗಿದ್ದು, ಬೇರೆ ದೇಶಗಳ ಸರ್ವಾಧಿಕಾರಿ ಸರ್ಕಾರಗಳ ವಿರುದ್ಧ ತಮ್ಮ ಡೆಮಾಕ್ರಟಿಕ್ ಆಕ್ರೋಶ ಹರಿಸುತ್ತಿರುವ ನಮ್ಮ ಕೆಲವು ಲೇಖಕರ ವಿಷಯದಲ್ಲಿಯೂ ಕಾಣುವುದು. ಈ ಕಾರಣದಿಂದಲೂ ‘ರೈಲ್ವೆಮಕ್ಕಳು’ ಕಾದಂಬರಿಯ ಪ್ರಕಟಣೆಯು ಪ್ರಸ್ತುತವೆನಿಸುತ್ತದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ’ನಾವೂ ಇತಿಹಾಸ ಕಟ್ಟಿದೆವು- ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು’ ಪುಸ್ತಕದಿಂದ ಆಯ್ದ ಭಾಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...