Homeಮುಖಪುಟಶಾಲೆಗಳ ವೈಚಾರಿಕ ಜಾನಪದಕ್ಕೊಂದು ಮಾದರಿ ರವಿರಾಜ್ ಸಾಗರ್

ಶಾಲೆಗಳ ವೈಚಾರಿಕ ಜಾನಪದಕ್ಕೊಂದು ಮಾದರಿ ರವಿರಾಜ್ ಸಾಗರ್

ಇರುವ ಜಾನಪದವನ್ನೆಲ್ಲಾ ಮೋಹಿಸಬೇಕಿಲ್ಲ. ಜಾನಪದದಲ್ಲಿ ನಾಶಮಾಡಬೇಕಾದ್ದು, ಸಂಗ್ರಹಕ್ಕೆ ಯೋಗ್ಯವಲ್ಲದ್ದು ಹೆಚ್ಚಿದೆ. ಜಾತಿ, ಲಿಂಗ, ಬಣ್ಣ, ಪ್ರದೇಶ, ಒಡೆಯ, ಆಳು ಇಂತಹ ಬೇಧಗಳ ಗಟ್ಟಿಗೊಳಿಸಿ ಯಥಾಸ್ಥಿತಿಯನ್ನು ಉಳಿಸುವ ರಚನೆಗಳ ಸಂಖ್ಯೆ ದೊಡ್ಡದಿದೆ.

- Advertisement -
- Advertisement -

ಎಲೆ ಮರೆ – 3

| ಅರುಣ್ ಜೋಳದಕೂಡ್ಲಿಗಿ |

ಮಸ್ಕಿ ತಾಲೂಕಿನ ಮಲ್ಕಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಷ್ಟ್ರು ರವಿಚಂದ್ರ.ಡಿ (ರವಿರಾಜ್ ಸಾಗರ್) ಅವರು `ನಮ್ಮೂರ ಜಾನಪದ ಅನುಸಂಧಾನ’ ಎನ್ನುವ ವಿಶಿಷ್ಠ ಕೃತಿ ರಚಿಸಿದ್ದಾರೆ. ಇಲ್ಲಿ ಊರಿನ ಜನಪದರು, ಅವರ ಮೌಖಿಕ ಸಾಹಿತ್ಯವನ್ನು ಸಂಗ್ರಹಿಸಿದ ಶಾಲಾ ಮಕ್ಕಳು ಮತ್ತು ಶಿಕ್ಷಕರು, ಇದೇ ಮೌಖಿಕ ಲಯ ಬಳಸಿ ಮಕ್ಕಳ ಕಲಿಕೆಗೆ ನೆರವಾಗುವಂತೆ ರವಿಚಂದ್ರ ಅವರು ರಚಿಸಿದ ಪದ್ಯಗಳಿವೆ. ಇಲ್ಲಿ ಈ ಮೂರೂ ಸಂಗತಿಗಳ ಮುಖಾಮುಖಿಯಾಗಿದೆ. ವಿಶೇಷವೆಂದರೆ ಜಾನಪದದ ಸಂಗ್ರಹ ಮತ್ತು ಅದರ ಅನ್ವಯಿಕತೆ ಎರಡೂ ಜೊತೆಜೊತೆಗೆ ನಡೆದಿದೆ. ಇದು ಈ ಕೃತಿಯ ವಿಶಿಷ್ಟ ಸಂಗತಿ.

ಇರುವ ಜಾನಪದವನ್ನೆಲ್ಲಾ ಮೋಹಿಸಬೇಕಿಲ್ಲ. ಜಾನಪದದಲ್ಲಿ ನಾಶಮಾಡಬೇಕಾದ್ದು, ಸಂಗ್ರಹಕ್ಕೆ ಯೋಗ್ಯವಲ್ಲದ್ದು ಹೆಚ್ಚಿದೆ. ಜಾತಿ, ಲಿಂಗ, ಬಣ್ಣ, ಪ್ರದೇಶ, ಒಡೆಯ, ಆಳು ಇಂತಹ ಬೇಧಗಳ ಗಟ್ಟಿಗೊಳಿಸಿ ಯಥಾಸ್ಥಿತಿಯನ್ನು ಉಳಿಸುವ ರಚನೆಗಳ ಸಂಖ್ಯೆ ದೊಡ್ಡದಿದೆ. ಅಂತಹ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ರಚನೆಗಳನ್ನು ಮುಂದಿನ ತಲೆಮಾರಿಗೆ ಕಾಪಿಡುವ ಅಗತ್ಯವಿಲ್ಲ. ಪ್ರತಿ ಜಾನಪದ ಸಂಗ್ರಾಹಕರು ಇದನ್ನು ಗಮನಿಸಬೇಕಿದೆ. ರವಿರಾಜ್ ಅವರು ಈ ಸಂಗ್ರಹದಲ್ಲಿ ಅಂತಹ ಸೂಕ್ಷ್ಮತೆಯನ್ನು ಕಾಯ್ದುಕೊಂಡಿದ್ದಾರೆ. ಈ ಕೃತಿಯಲ್ಲಿ ಶಿಕ್ಷಕರಾದ ರವಿಚಂದ್ರ ಅವರು ಜಾನಪದ ಲಯ ಬಳಸಿ ಬರೆದ ಹಾಡುಗಳಲ್ಲಿ ಜೀವಪರವಾದ ಆಯಾಮವಿದೆ. ಇಲ್ಲಿ ಸಂವಿಧಾನಿಕ ಆಶಯಗಳನ್ನು ಬಲಪಡಿಸುವ ಜಾಗೃತಿ ಮೂಡಿಸುವ ಸದಾಶಯವಿದೆ.

ಸೂವ್ವೀ ಸೂವಮ್ಮಾ ಶಾಲಿಗೆ ಹೋಗಮ್ಮಾ

ಸೂವ್ವೀ ಸೂವ್ವೀ ಸೂವಮ್ಮಾ ||
ಓಣ್ಯಾಗ ಅಡಬ್ಯಾಡ ಶಾಲೀಗೇ ಹೋಗಮ್ಮಾ.
ಶಾಲೀಗಾ ಹೋಗಿ ನೀನಾರು ಕಲಿಯಮ್ಮಾ |
ಸುವ್ವೀ ಸುವ್ವೀ|
ಮಾಸ್ತಾರು ಬಡಿತಾರಂತ ಅಂಜಿಕೆ ಬ್ಯಾಡಮ್ಮಾ
ಮಾಸ್ತಾರು ಹೇಳಿದ್ದಾ ಕೇಳಿ ಶಾಣ್ಯಾಕಿ ಆಗಮ್ಮಾ
ಕಲಿತ ನಾರಿ ಸುಖಿ ಕುಟುಂಬಕ ದಾರಿ |ಸುವ್ವೀ ಸುವ್ವೀ|

ನಿಮ್ಮಪ್ಪಗಾ ಹೆದರಾಬ್ಯಾಡ ಹೊಲಕಾ ನೀ ಬರಬ್ಯಾಡ
ಎಲ್ಲಾ ದಗುದಾವಾ ನಾನೇ ಮಾಡುವೇ
ನೀ ಬೇಸು ಓದಮ್ಮಾ |ಸುವ್ವೀ ಸುವ್ವೀ|
ನಂಗೂನು ಕಲೀಬೇಕಂತಾ ತುಂಬಾ ಆಸೆಯಿತ್ತಮ್ಮಾ
ನೀನಾರು ನಾಕಕ್ಷರ ಕಲಿತು ಆಪೀಸರ್ ಆಗಮ್ಮಾ
ನಮ್ಮೂರಿಗ ಹೆಸರಾ ತಾರಮ್ಮಾ |ಸುವ್ವೀ ಸುವ್ವೀ| (ಪುಟ:6)

ಈ ರಚನೆಯಲ್ಲಿ ಹೆಣ್ಣು ಶಾಲೆಗೆ ಹೋಗಿ ಕಲಿಯುವ ಆಶಯವಿದೆ. ಜಾನಪದ ಸಾಹಿತ್ಯದ ತಾಯಿ ಗಂಡ ಬೈದರೂ ಎದುರಾಡದೆ ಬಾಳು ಎಂದರೆ ಆಧುನಿಕ ತಾಯಿ `ನಿಮ್ಮಪ್ಪಗಾ ಹೆದರಬೇಡ ಹೊಲಕ ನೀ ಬರಬ್ಯಾಡ, ಸಾಲಿ ಓದಿ ಆಫಿಸರ್ ಆಗಮ್ಮಾ’ ಎಂದು ಹಾರೈಸುತ್ತಾಳೆ. ಬಹುಶಃ ಜಾನಪದ ಲಯ ಬಳಸಿ ಆಧುನಿಕ ವೈಚಾರಿಕತೆಯನ್ನು ಮೂಡಿಸುವ ಪ್ರಯತ್ನವೆಂದರೆ ಇದು. ರವಿಚಂದ್ರರ ರಚನೆಯ ಮತ್ತೊಂದು ಹಾಡು `ಜಾಗೃತಿ ಜನಪದ’ ಹೀಗಿದೆ:

ಕುಂತಂತ ಮೇಲ್ಜಾತಿ ನಿಂತಂತ ಕೆಳಜಾತಿ
ಅಣ್ಣಾ ಅಕ್ಕಂದಿರೆ ಕೇಳಿರಿ
ಮನುಷ ಕುಲವೆಲ್ಲ ಒಂದೇ
ಎನ್ನುವ ನಿಸರ್ಗ ಸತ್ಯವಾ ತಿಳಿಯಿರಿ ||

ಈ ಪದದಲ್ಲಿ ಜಾತಿಪದ್ಧತಿಯ ಲೋಪದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಆಯಾಮವಿದೆ. ಮತ್ತೊಂದು ಜಲಪದ ಹಾಡಿನಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶವಿದೆ. ಬಹುಶಃ ರವಿಚಂದ್ರ ಅವರ ಎಲ್ಲಾ ರಚನೆಗಳಲ್ಲಿಯೂ ಈ ಆಯಾಮವಿರುವುದು ಆಶಾದಾಯಕ ಬೆಳವಣಿಗೆ. ಜೀವಪ್ರಪಂಚ, ನಿಸರ್ಗ ಸೋಜಿಗ, ಶಾಲೆ ಹಬ್ಬ, ನೀರಿಗೋಗೋನು ಬಾ, ಮಳೆಹಾಡು, ಬನ್ನಿಮಕ್ಕಳೆ ನಮ್ಮೂರ ಶಾಲೆಗೆ, ಮುಂತಾದ ಹಾಡುಗಳಲ್ಲಿ ಸಮತೆಯ ನಿಸರ್ಗ ವಿವೇಕವನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಮೈಲಾರ ಮಹಾದೇವ, ಕುವೆಂಪು, ನಾ.ಡಿಸೋಜ, ರಾಜಕುಮಾರ್ ತರಹದವರ ಗುಣಲಕ್ಷಣಗಳನ್ನೇ ಒಗಟಾಗಿಸಿ ಉತ್ತರವಾಗಿ ಇವರುಗಳ ಹೆಸರು ತಂದಿರುವುದು ಪ್ರಯೋಗಶೀಲವಾಗಿದೆ.

ರವಿರಾಜ್ ಅವರು ಶಿವಮೊಗ್ಗದ ಸಾಗರ ತಾಲೂಕಿನ ಮಂಡಗಳಲೆಯವರು. ಕಳೆದ ಹತ್ತು ವರ್ಷದಿಂದ ರಾಯಚೂರಿನ ಮಸ್ಕಿ ತಾಲೂಕಿನ ಮಲ್ಕಾಪುರದಲ್ಲಿ ಶಿಕ್ಷಕರಾಗಿದ್ದಾರೆ. `ಮಂದಾರ ಕನ್ನಡ’ ಎನ್ನುವ ಶಾಲಾಮಕ್ಕಳ ಪತ್ರಿಕೆಯನ್ನು ಕಳೆದ ಏಳೆಂಟು ವರ್ಷದಿಂದ ತರುತ್ತಿದ್ದಾರೆ. ಈ ತನಕ `ನರಲೀಲೆ’ `ನಮ್ಮೂರ ಜಾನಪದ ಸಿರಿ’ `ಮಂದಾರಮಾಲೆ-1’ `ಮಂದಾರ ಮಾಲೆ-2’ ಮಕ್ಕಳ ಬರಹಗಳನ್ನು ಸಂಪಾದಿಸಿದ್ದಾರೆ. `ಕಲಿತವರು’ `ಮೇ-10’ `ವಿಶ್ವಾಪುರದ ವೀರಮಕ್ಕಳು’ ಮಕ್ಕಳ ನಾಟಕಗಳು ಪ್ರದರ್ಶನ ಕಂಡಿವೆ. ಮಕ್ಕಳು ಮತ್ತು ಸಾಹಿತ್ಯಿಕ ಸಂಘಟನೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರವಿರಾಜ್ ಅವರ ಕ್ರಿಯಾಶೀಲ ತೊಡಗುವಿಕೆಯ ಕಾರಣ ಮಲ್ಕಾಪುರದ ಸರಕಾರಿ ಶಾಲೆ ನಿಜಕ್ಕೂ ಸೃಜನಶೀಲತೆಯಲ್ಲಿ ಜೀವಂತಿಕೆಯ ತಾಣವಾಗಿದೆ.

ಕರ್ನಾಟಕದ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಕೆಲವರು ವಿಶ್ವವಿದ್ಯಾಲಯಗಳ ಬಹುಪಾಲು ಅಧ್ಯಾಪಕರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಈಗ ಬರೆಯುತ್ತಿರುವ ಅತ್ಯುತ್ತಮ ಕವಿಗಳು ಶಾಲಾ ಮಾಸ್ತರರು. ಉಳಿದಂತೆ ಸರಕಾರಿ ಶಾಲೆ ಉಳಿಸುವ ಪ್ರಯೋಗದಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ. ಹಿಂದೆ ಲಕ್ಷ್ಮಣ ಬದಾಮಿ ಅವರು ಮಕ್ಕಳಿಂದ ಜಾನಪದ ಸಂಗ್ರಹಿಸಿ ಪುಸ್ತಕ ಮಾಡಿದ್ದಾರೆ. ಇದೊಂದು ಜಾನಪದ ಸಂಗ್ರಹಕ್ಕೆ ಬಳಸುವ ವಿಶಿಷ್ಟ ದಾರಿ. ಆದರೆ ಜಾನಪದ ಮೌಲ್ಯಗಳನ್ನು ಮುರಿದುಕಟ್ಟುವ ರವಿಚಂದ್ರ ಅವರಂತಹ ಗೀತೆಗಳ ರಚನೆಯನ್ನು ಎಲ್ಲಾ ಶಿಕ್ಷಕರು ಮಾಡಬೇಕಿದೆ. ಇದನ್ನು ಉಪಪಠ್ಯವಾಗಿ ಮಕ್ಕಳಿಗೆ ಕಲಿಸಬೇಕಿದೆ. ಬಹುಶಃ ಈ ಪುಸ್ತಕದ ಮೂಲಕ ರವಾನೆಯಾಗಬೇಕಿರುವ ಸಂದೇಶವೂ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...