Homeಕರ್ನಾಟಕಯಡ್ಯೂರಪ್ಪಗೆ ರಾಜ್ಯಪಾಲ ಹುದ್ದೆ!? ಸಿಎಂ ಗಾದಿಯಿಂದ ಕೆಳಗಿಳಿಸಲು ನಡೆದಿದೆಯಾ ಹೊಸ ಮಸಲತ್ತು...

ಯಡ್ಯೂರಪ್ಪಗೆ ರಾಜ್ಯಪಾಲ ಹುದ್ದೆ!? ಸಿಎಂ ಗಾದಿಯಿಂದ ಕೆಳಗಿಳಿಸಲು ನಡೆದಿದೆಯಾ ಹೊಸ ಮಸಲತ್ತು…

ಪ್ರಮಾಣ ವಚನದ ವಿಳಂಬ ಇರಬಹುದು, ಸಂಪುಟ ರಚನೆಗೆ ಕೊಕ್ಕೆ ಹಾಕಿದ್ದಿರಬಹುದು, ಮೂವರು ಡಿಸಿಎಂ ನೇಮಕ, ರಾಜ್ಯಾಧ್ಯಕ್ಷರ ಶಾಕಿಂಗ್ ನೇಮಕ, ಮೇಯರ್ ಆಯ್ಕೆ, ನೆರೆ ಪರಿಹಾರದ ನಿರ್ಲಕ್ಷ್ಯ ಹೀಗೆ ಸಿಎಂ ಆದ ನಂತರದಲ್ಲಿ ಯಡ್ಯೂರಪ್ಪನವರು ತಮ್ಮದೇ ಪಕ್ಷದಿಂದ ಅನುಭವಿಸುತ್ತಿರುವ ಅವಮಾನಗಳು ಒಂದೆರಡಲ್ಲ..

- Advertisement -
- Advertisement -

ಯಡ್ಯೂರಪ್ಪರನ್ನು ರಾಜ್ಯ ರಾಜಕಾರಣದಲ್ಲಿ ಮೂಲೆಗುಂಪು ಮಾಡಲು ಸಕಲ ತಯಾರಿ ನಡೆಸಿರುವ ಬಿಜೆಪಿ ಹೈಕಮಾಂಡ್, ಅದಕ್ಕಾಗಿ ಅವರನ್ನು ಯಾವುದಾದರೊಂದು ರಾಜ್ಯಕ್ಕೆ ಗೌರ್ನರ್ ಆಗಿ ನೇಮಿಸುವ ಯೋಜನೆ ಹಾಕಿಕೊಂಡಿದೆಯಾ? ಇಂತದ್ದೊಂದು ಚರ್ಚೆ ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ರಾಜ್ಯ ಕಚೇರಿ ಜಗನ್ನಾಥ್ ಭವನದ ಆಸುಪಾಸಿನಲ್ಲಿ ಹರಿದಾಡುತ್ತಿದೆ.

ಹೌದು, ಈಗ ಕೇಳಿಬರುತ್ತಿರುವ ವರ್ತಮಾನ ನಿಜವೇ ಆದಲ್ಲಿ ಯಡ್ಯೂರಪ್ಪನವರನ್ನು ಗೋವಾ ಅಥವಾ ಜಾರ್ಖಂಡ್, ಈ ಎರಡರಲ್ಲಿ ಯಾವುದಾದರು ಒಂದು ರಾಜ್ಯಕ್ಕೆ ಗೌರ್ನರ್ ಆಗಿ ಆಯ್ಕೆ ಮಾಡಲು ತಯಾರಿಗಳು ನಡೆದಿವೆ. ಬಿಜೆಪಿ ಹೈಕಮಾಂಡ್‌ಗೆ, ಕರ್ನಾಟಕದ ಯಡ್ಯೂರಪ್ಪನವರ ಸರ್ಕಾರ ಬೇಡದ ಕೂಸು. ಅದಕ್ಕಾಗಿ ಎಷ್ಟೆಲ್ಲ ನಿರ್ಲಕ್ಷ್ಯ ತೋರಲು ಸಾಧ್ಯವೋ ಅಷ್ಟೂ ನಿರ್ಲಕ್ಷ್ಯದೊಂದಿಗೆ ಯಡ್ಯೂರಪ್ಪನವರಿಗೆ ನಿರಂತರವಾಗಿ ಅವಮಾನ ಮಾಡಲಾಗುತ್ತಿದೆ. ಪ್ರಮಾಣ ವಚನದ ವಿಳಂಬ ಇರಬಹುದು, ಸಂಪುಟ ರಚನೆಗೆ ಕೊಕ್ಕೆ ಹಾಕಿದ್ದಿರಬಹುದು, ಮೂವರು ಡಿಸಿಎಂ ನೇಮಕ, ರಾಜ್ಯಾಧ್ಯಕ್ಷರ ಶಾಕಿಂಗ್ ನೇಮಕ, ಮೇಯರ್ ಆಯ್ಕೆ, ನೆರೆ ಪರಿಹಾರದ ನಿರ್ಲಕ್ಷ್ಯ ಹೀಗೆ ಸಿಎಂ ಆದ ನಂತರದಲ್ಲಿ ಯಡ್ಯೂರಪ್ಪನವರು ತಮ್ಮದೇ ಪಕ್ಷದಿಂದ ಅನುಭವಿಸುತ್ತಿರುವ ಅವಮಾನಗಳು ಒಂದೆರಡಲ್ಲ. ಅದಕ್ಕೆಲ್ಲ ಕಾರಣ ಬಿ.ಎಲ್.ಸಂತೋಷ್ ಎಂಬ ಆರೆಸ್ಸೆಸ್ ತಂತ್ರಗಾರ!

ಬಹಳ ದಿನಗಳಿಂದಲೇ ಕರ್ನಾಟಕ ಸಿಎಂ ಗಾದಿಯ ಮೇಲೆ ಕಣ್ಣಿಟ್ಟಿರುವ ಈ ಸಂತೋಷ್ ಹಂತಹಂತವಾಗಿ ರಾಜ್ಯ ಬಿಜೆಪಿಯನ್ನು ತನ್ನ ಕಬ್ಜಾಕ್ಕೆ ತೆಗೆದುಕೊಳ್ಳುತ್ತಾ ಬರುತ್ತಿದ್ದಾರೆ. ಯಡ್ಯೂರಪ್ಪ ಸಿಎಂ ಆಗುವುದು ನಿಕ್ಕಿಯಾಗುವುದಕ್ಕು ಕೆಲ ದಿನಗಳ ಮೊದಲಷ್ಟೇ ತಾನು ಬಿಜೆಪಿ ‘ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ’ಯಂತಹ ಪವರ್‌ಫುಲ್ ಹುದ್ದೆಗೆ ನೇಮಕವಾಗುವಂತೆ ನೋಡಿಕೊಂಡ ಸಂತೋಷ್, ಯಡ್ಯೂರಪ್ಪರನ್ನು ನಿಯಂತ್ರಿಸಲು ಬೇಕಾದ ಶಸ್ತ್ರಗಳನ್ನು ತನ್ನ ಬತ್ತಳಿಕೆಗೆ ಸೇರ್ಪಡೆ ಮಾಡಿಕೊಂಡಿದ್ದರು. ‘ಬ್ರಾಹ್ಮಣ’ ಜಾತಿಯ ಜೊತೆಗೆ ಸಂಘ ಪರಿವಾರದ ಪವರ್‌ಫುಲ್ ಬ್ಯಾಕ್‌ಅಪ್ ಇರುವ ಸಂತೋಷ್‌ರನ್ನು ಕರ್ನಾಟಕದಲ್ಲಿ ಸಿಎಂ ಮಾಡಿ, ಆ ಮೂಲಕ ಲಿಂಗಾಯತ ಜಾತಿಯ ಹಂಗೇ ಇಲ್ಲದೆ ಹಿಂದೂತ್ವದ ಅಜೆಂಡಾದಲ್ಲಿ ಕರ್ನಾಟಕವನ್ನು ಕಬ್ಜಾ ಮಾಡಿಕೊಳ್ಳಬೇಕೆನ್ನುವುದು ನಾಗ್ಪುರ ಹೆಡ್‌ಕ್ವಾರ್ಟರ್‌ನ ಲೆಕ್ಕಾಚಾರ.

ಹಾಗಂತ, ಯಡ್ಯೂರಪ್ಪನವರನ್ನು ಏಕಾಏಕಿ ಮೂಲೆಗುಂಪು ಮಾಡಿದರೆ ಕರ್ನಾಟಕದ ಮಟ್ಟಿಗೆ ತನ್ನ ಸುಭದ್ರ ಓಟ್‌ಬ್ಯಾಂಕ್ ಆದ ಲಿಂಗಾಯತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತೆ ಅನ್ನೋದು ಬಿಜೆಪಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ವೀರೇಂದ್ರ ಪಾಟೀಲರ ವಿಚಾರದಲ್ಲಿ ಇಂಥಾ ತಪ್ಪು ಮಾಡಿದ ಕಾಂಗ್ರೆಸ್, ಲಿಂಗಾಯತರ ಒಲವು ಕಳೆದುಕೊಂಡ ಇತಿಹಾಸ ಕರ್ನಾಟಕದ ರಾಜಕೀಯ ಪುಟಗಳಲ್ಲಿದೆ. ಈಗಾಗಲೇ ಕೆಲ ಲಿಂಗಾಯತ ಸ್ವಾಮೀಜಿಗಳು ಮತ್ತು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕರಂತಹ ಜಾತ್ಯಸ್ಥ ಅಭಿಮಾನಿಗಳು ಬಹಿರಂಗವಾಗಿಯೇ `ಯಡ್ಯೂರಪ್ಪನವರಿಗೆ ತೊಂದ್ರೆ ಕೊಟ್ಟರೆ ಸುಮ್ಮನಿರಲ್ಲ’ ಎಂಬ ಸಂದೇಶಗಳನ್ನು ದಾಟಿಸುತ್ತಿದ್ದಾರೆ.  ಹಾಗಾಗಿ ಅವರನ್ನು ಬೇರೊಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಕಳಿಸಿಬಿಟ್ಟರೆ, ಗೌರವಯುತವಾಗೇ ಅವರ ರಾಜಕೀಯವನ್ನು ಸಮಾಧಿ ಮಾಡಬಹುದು, ಜೊತೆಗೆ ಲಿಂಗಾಯತರ ವಿರೋಧವೂ ಬರುವುದಿಲ್ಲ ಅನ್ನೋದು ಬಿಜೆಪಿಯ ಲೇಟೆಸ್ಟ್ ಲೆಕ್ಕಾಚಾರ.

ಸಾಮಾನ್ಯವಾಗಿ ರಾಜ್ಯಪಾಲರ ಅಧಿಕಾರಾವಧಿ ಐದು ವರ್ಷಗಳು. ಕೆಲವೊಮ್ಮೆ, ಅವರ ಅಧಿಕಾರಾವಧಿ ಮುಗಿದರು ರಾಷ್ಟ್ರಪತಿಗಳು (ಕೇಂದ್ರ ಸರ್ಕಾರದ ಶಿಫಾರಸ್ಸಿನ ಅನ್ವಯ) ಆ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವವರೆಗೆ ಅವರೇ ಮುಂದುವರೆಯುತ್ತಾರೆ. ಸದ್ಯ ಗೋವಾದ ಮೃದುಲಾ ಸಿನ್ಹಾ ಅವರ ಅಧಿಕಾರಾವದಿ ಮುಗಿದು ಒಂದೂವರೆ ತಿಂಗಳಾಗಿದ್ದರು ಹೊಸ ರಾಜ್ಯಪಾಲರನ್ನು ಇನ್ನೂ ನೇಮಕ ಮಾಡಿಲ್ಲ. ಅದೇ ರೀತಿ ಜಾರ್ಖಂಡ್‌ನ ದ್ರೌಪದಿ ಮುರ್ಮು ಅವರ ಅವಧಿ ಇನ್ನು ಆರು ತಿಂಗಳಲ್ಲಿ ಮುಗಿಯಲಿದೆ. ಯಡ್ಯೂರಪ್ಪನವರನ್ನು ಆದಷ್ಟು ಬೇಗ ಇವರೆಡರಲ್ಲಿ ಒಂದು ಸ್ಥಾನಕ್ಕೆ ನಿಯೋಜಿಸಲು ಯೋಜನೆ ಸಿದ್ಧವಾಗಿದೆ ಎನ್ನಲಾಗುತ್ತಿದೆ.

ರಾಜ್ಯಪಾಲರಾಗಬೇಕೆಂದರೆ, ಆ ವ್ಯಕ್ತಿ ಸಂಸತ್ತು ಅಥವಾ ರಾಜ್ಯ ವಿಧಾನಸಭೆಗಳ ಸದಸ್ಯನಾಗಿರಬಾರದು. ಆದರೆ ಯಡ್ಯೂರಪ್ಪ ಸದ್ಯ ಎಂಎಲ್‌ಎ. ಹೇಗೂ ಮುಂದಿನ ಜನವರಿ ಅಥವಾ ಮಾರ್ಚ್‌ನೊಳಗೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ತಯಾರಿಯಲ್ಲಿ ಬಿಜೆಪಿ ಹೈಕಮಾಂಡ್ ಇರೋದ್ರಿಂದ ಯಡ್ಯೂರಪ್ಪನವರು ಸಹಜವಾಗಿಯೇ ತಮ್ಮ ಎಂಎಲ್‌ಎ ಸ್ಥಾನದಿಂದ ತೆರವುಗೊಳ್ಳುತ್ತಾರೆ. ಆಗ ಅವರನ್ನು ರಾಜ್ಯಪಾಲರನ್ನಾಗಿ ಬೀಳ್ಕೊಟ್ಟು ಮೋದಿ-ಶಾ ನೇತೃತ್ವದಲ್ಲಿ ಚುನಾವಣೆ ಎದುರಿಸಬಹುದು. ಆಗೊಮ್ಮೆ ಬಹುಮತ ದೊರಕಿದರೆ ಆರೆಸ್ಸೆಸ್ ಆಣತಿಯಂತೆ ಸಂತೋಷ್‌ರನ್ನು ಸಿಎಂ ಮಾಡಬಹುದು ಅನ್ನೋದು ಇಡೀ ಲೆಕ್ಕಾಚಾರದ ಹಿಂದಿರುವ ಅಂಕಗಣಿತ!

ರಾಜಕಾರಣದಲ್ಲಿ ಅಸ್ತಿತ್ವದಲ್ಲಿರುವ ರೂಢಿಯ ಪ್ರಕಾರ, ಸಾಮಾನ್ಯವಾಗಿ ರಾಜ್ಯಪಾಲರ ಹುದ್ದೆ ಅನ್ನೋದು ಒಬ್ಬ ರಾಜಕಾರಣಿಯ ಸಕ್ರಿಯ ರಾಜಕಾರಣಕ್ಕೆ ಮಂಗಳ ಹಾಡಿದಂತೆ. ಹಿಂದೆ ೨೦೦೩ರಲ್ಲಿ ಎಸ್.ಎಂ.ಕೃಷ್ಣ ವಿರುದ್ಧ ದೇವೇಗೌಡರು ಇಂತದ್ದೇ ದಾಳ ಉರುಳಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡುವ ಸಂದರ್ಭ ಎದುರಾದಾಗ ತಮ್ಮ ಒಕ್ಕಲಿಗ ಜಾತಿ ರಾಜಕಾರಣಕ್ಕೆ ಮುಳ್ಳಾಗುತ್ತಾರೆನ್ನುವ ಕಾರಣಕ್ಕೆ ದೇವೇಗೌಡರು ಕಾಂಗ್ರೆಸ್‌ನ ಮುಂದೆ ಎಸ್.ಎಂ.ಕೃಷ್ಣರನ್ನು ರಾಜ್ಯ ರಾಜಕಾರಣದಿಂದ ದೂರ ಇಡಬೇಕೆನ್ನುವ ‘ಭೀಷ್ಮ’ ಷರತ್ತು ವಿಧಿಸಿದ್ದರು. ಅದೇ ಕಾರಣಕ್ಕೆ ಅಂದಿನ ಯುಪಿಎ ಸರ್ಕಾರ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು. ಅದಾದ ಮೇಲೆ ಕರ್ನಾಟಕದ ರಾಜಕಾರಣದಲ್ಲಿ ಕೃಷ್ಣರ ಗಾರುಡಿ ಮತ್ತೆ ಗರಿಬಿಚ್ಚಲೇ ಇಲ್ಲ.

ಯಡ್ಯೂರಪ್ಪನವರು ಗೌರ್ನರ್ ಆಫರ್‌ಗೆ ಅಷ್ಟು ಸುಲಭಕ್ಕೆ ಒಪ್ಪಲಾರರು ಎಂಬುದು ಎಷ್ಟು ಸತ್ಯವೋ ಸಿಬಿಐ, ಇಡಿಗಳ ಕರಾಮತ್ತಿನ ಮುಂದೆ ಯಡ್ಯೂರಪ್ಪನವರಿಗೆ ಬೇರೆ ಆಯ್ಕೆಗಳೇ ಇರುವುದಿಲ್ಲ ಅನ್ನೋದೂ ಅಷ್ಟೇ ಸತ್ಯ. ಕಡೇಪಕ್ಷ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದಾದರು ಯಡ್ಯೂರಪ್ಪನವರು ಒಪ್ಪಿಕೊಳ್ಳಲೇಬೇಕಾಗುತ್ತೆ. ಈಗಾಗಲೇ ತನ್ನ ಬ್ಯುಸಿನೆಸ್ ಪಾರ್ಟ್ನರ್ ಡಿ.ಕೆ.ಶಿವಕುಮಾರ್‌ಗೆ ಬಂದಿರುವ ಗತಿ ಕಂಡಿರುವ ಯಡ್ಯೂರಪ್ಪನವರು ೨೦೧೩ರಲ್ಲಿ ಬಂಡಾಯವೆದ್ದಂತೆ ಕೆಜೆಪಿಯನ್ನೋ, ಮತ್ತೊಂದನ್ನೋ ಕಟ್ಟಲಾರರು ಅನ್ನೋದು ಸಂತೋಷ್‌ರ ತಂಡಕ್ಕೆ ಸ್ಪಷ್ಟವಾಗಿ ಗೊತ್ತು.

ಬಿಜೆಪಿಯೊಳಗೆ ಯಡ್ಯೂರಪ್ಪನವರ ವಿರುದ್ಧ ಇಂಥಾ ಚಿತಾವಣೆಗಳು ನಡೆಯುತ್ತಿರೋದ್ರಿಂದಲೇ ಅವರನ್ನು ನಂಬಿ ತಮ್ಮತಮ್ಮ ಪಕ್ಷಗಳಿಗೆ ‘ಕೈ’ಕೊಟ್ಟು, ಅನರ್ಹತೆಯ ತೂಗುಗತ್ತಿಯಲ್ಲಿ ಹೊಯ್ದಾಡುತ್ತಿರುವ ರೆಬೆಲ್ ಶಾಸಕರಲ್ಲಿ ಒಂದಷ್ಟು ಜನ ವಾಪಾಸ್ ಮಾತೃಪಕ್ಷಗಳ ಕದ ತಟ್ಟುವ ಆಲೋಚನೆಯಲ್ಲಿರೋದು ಎನ್ನಲಾಗುತ್ತಿದೆ. ಅದೇನೆ ಆಗಲಿ, ಯಡ್ಯೂರಪ್ಪನವರನ್ನು ಗೌರವಯುತವಾಗಿಯೋ, ಜಬರ್‌ದಸ್ತಿಯಿಂದಲೋ, ಬೆದರಿಸಿಯೋ ‘ಮಾರ್ಗದರ್ಶಕ ಮಂಡಳಿ’ಯ ‘ಗೃಹಪ್ರವೇಶ’ ಮಾಡಿಸುವ ಲಕ್ಷಣಗಳು ಬಿಜೆಪಿ ಪಾಳೆಯದಲ್ಲಿ ದಿನದಿಂದ ದಿನಕ್ಕೆ ದಟ್ಟವಾಗುತ್ತಲೇ ಬರುತ್ತಿವೆ. ಹಾಗಾಗಿ ‘ಗೌರ್ನರ್’ ತರದ ಗಾಳಿಸುದ್ದಿಗಳೂ ವಿಪರೀತ ಕುತೂಹಲ ಕೆರಳಿಸುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...