Homeಮುಖಪುಟಪ್ರಶ್ನಿಸುವ ಪರಂಪರೆ ಕಟ್ಟಿದ ಪ್ರಖರ ಸುದ್ದಿಗಾರನ ನಿರ್ಗಮನ

ಪ್ರಶ್ನಿಸುವ ಪರಂಪರೆ ಕಟ್ಟಿದ ಪ್ರಖರ ಸುದ್ದಿಗಾರನ ನಿರ್ಗಮನ

- Advertisement -
- Advertisement -

ನಮ್ಮ ಜನತಂತ್ರದ ಆಧಾರ ಸ್ತಂಭಗಳನ್ನು ಅಲುಗಿಸಲಾಗುತ್ತಿರುವ ಈ ಸಂದಿಗ್ಧ ಕಾಲಘಟ್ಟದಲ್ಲಿ ದೇಶ ಒಬ್ಬ ಯೋಗ್ಯ ಪತ್ರಕರ್ತನನ್ನು ಕಳೆದುಕೊಂಡಿದೆ. ಹಿಂದೀ ಟೆಲಿವಿಷನ್ ಪತ್ರಿಕೋದ್ಯಮ ಪ್ರವರ್ತಕ ವಿನೋದ್ ದುವಾ ನಿಧನರಾಗಿದ್ದಾರೆ. ಸರ್ವಾಧಿಕಾರವನ್ನು ಧರ್ಮಾಂಧತೆಯನ್ನು ಕೋಮುವಾದವನ್ನು ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸುತ್ತಿದ್ದ ಧೀರ ಪತ್ರಿಕೋದ್ಯೋಗಿಯನ್ನು ಸಾವು ಸೆಳೆದುಕೊಂಡಿದೆ.

ಪತ್ನಿ ಪದ್ಮಾವತೀ ’ಚಿನ್ನಾ’ ದುವಾ ಅವರೊಂದಿಗೆ ಆರು ತಿಂಗಳ ಹಿಂದೆ ಕೋವಿಡ್ ಸೋಂಕಿಗೆ ಗುರಿಯಾಗಿದ್ದ ವಿನೋದ್ ಅವರ ಆರೋಗ್ಯ ಕುಸಿಯುತ್ತಲೇ ಹೋಯಿತು. ಚಿನ್ನಾ ಜೂನ್ ತಿಂಗಳಲ್ಲೇ ಅಗಲಿ ಹೋದರು.

ಹಳೆಯ ದಿಲ್ಲಿಯಲ್ಲಿ ಹುಟ್ಟಿ ಬೆಳೆದ ದುವಾ, ಹನ್ಸರಾಜ್ ಕಾಲೇಜಿನಿಂದ ಇಂಗ್ಲಿಷ್ ಪದವಿ ಪಡೆದು ದೆಹಲಿ ವಿಶ್ವಿವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. ಪತ್ರಿಕೋದ್ಯಮಕ್ಕೆ ಪ್ರವೇಶಿಸುವ ಮುನ್ನ ದೆಹಲಿಯ ರಂಗಭೂಮಿ ವಲಯಗಳಲ್ಲಿ ಸಕ್ರಿಯರಾಗಿದ್ದರು.

ಆಳುವ ಪಕ್ಷ ಅವರ ಮೇಲೆ ರಾಜದ್ರೋಹದ ಕೇಸು ಹೆಟ್ಟಿ ಕಿರುಕುಳ ನೀಡಿದಾಗ ಅವರು ದೈಹಿಕರಾಗಿ ಜರ್ಝರಿತರು. ಸುಪ್ರೀಮ್ ಕೋರ್ಟು ಅವರ ಪರವಾಗಿ ತೀರ್ಪು ನೀಡಿತು. ರಾಜದ್ರೋಹದ ಕೇಸನ್ನು ವಜಾ ಮಾಡಿತು. ಅಧಿಕಾರಸ್ಥರು ಮತ್ತು ಅಧಿಕಾರವನ್ನು ಕಡೆಗಣ್ಣಿನಿಂದ ಕಂಡ ವಿರಳರು ದುವಾ. ಜನಹಿತಕ್ಕಾಗಿ ಹೇಮಾ ಹೇಮಿಗಳನ್ನು ಎದುರು ಹಾಕಿಕೊಳ್ಳಲು ಹಿಂದೆಮುಂದೆ ನೋಡದ ನಿರ್ಭೀತರು. ಕೇವಲ ಘೋಷಣೆಗೆ ಸೀಮಿತವಾಗದೆ ನಿಜ ಅರ್ಥದಲ್ಲಿ ನೇರ ಮತ್ತು ದಿಟ್ಟರಾಗಿದ್ದವರು ಅವರು. ಜನವಾಣಿ ಕಾರ್ಯಕ್ರಮದ ಸಂದರ್ಶನಗಳ ಸರಣಿಯಲ್ಲಿ ಅವರೆದುರು ಕುಳಿತ ಮಂತ್ರಿಮಾನ್ಯರು ತತ್ತರಿಸುತ್ತಿದ್ದ ಗಳಿಗೆಗಳಿದ್ದವು. ನಿಮ್ಮ ಕೆಲಸ ಕಾರ್ಯಗಳ ಮೌಲ್ಯಮಾಪನದಲ್ಲಿ ನಿಮಗೆ ಹತ್ತರಲ್ಲಿ ಮೂರೇ ಅಂಕ ನೀಡುತ್ತಿರುವುದಾಗಿ ಮಂತ್ರಿಗಳ ಮುಖಕ್ಕೇ ಹೇಳುವ ನೈತಿಕ ಧೈರ್ಯವನ್ನು ದುವಾ ಸಂಪಾದಿಸಿದ್ದರು. ಈ ಅವಹೇಳನವನ್ನು ಮತ್ತೆಮತ್ತೆ ಎದುರಿಸಿದ ಮಂತ್ರಿಗಳು ದೂರದರ್ಶನ ಬಿತ್ತರಿಸುತ್ತಿದ್ದ ಈ ಕಾರ್ಯಕ್ರಮವನ್ನೇ ರದ್ದು ಮಾಡುವಂತೆ ಪ್ರಧಾನಿಯ ಮೇಲೆ ಬಹುವಾದ ಒತ್ತಡ ತಂದದ್ದು ಉಂಟು. ಆದರೆ ಸಫಲರಾಗಲಿಲ್ಲ.

ದುವಾ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ನಿರರ್ಗಳರಾಗಿದ್ದರು. ಯಥಾಸ್ಥಿತಿಯನ್ನೂ, ಆಳುವ ವ್ಯವಸ್ಥೆಯನ್ನು ಅಂಜದೆ ಅಳುಕದೆ ಪ್ರಶ್ನಿಸುತ್ತಲೇ ಬಂದ ಅಪರೂಪದ ಪತ್ರಕರ್ತ. ಸೂಫೀ ಸಂಗೀತ ಮತ್ತು ಕವಿತೆಯೆಡೆಗಿನ ಅಗಾಧ ಪ್ರೇಮ ಅವರ ಸುದ್ದಿಗಾರಿಕೆಗೆ ಸೊಬಗು ಸಿರಿವಂತಿಕೆಗಳ ನೀಡಿತ್ತು.

ಅವರ ಆಕ್ರಮಣಶೀಲತೆಯಲ್ಲಿ ಇಂದಿನ ಬಹುತೇಕ ಆಂಕರುಗಳಂತೆ ಕೇವಲ ಭಾವ ಭಂಗಿಗಳ ಟೊಳ್ಳು ಇರಲಿಲ್ಲ. ಬದಲಾಗಿ ಅಧ್ಯಯನಶೀಲತೆ ಮತ್ತು ಆಳದ ತಿಳಿವಳಿಕೆಯ ಹರಿತ ಧಾರೆಯಿರುತ್ತಿತ್ತು.
ಅವರು ತಮ್ಮ ಕಾರ್ಯಕ್ರಮಗಳ ವೀಕ್ಷಿಸುತ್ತಿದ್ದವರ ಉದ್ಯೋಗಿಯಾಗಿದ್ದರೇ ವಿನಾ ಕಟ್ಟಕಡೆಯ ತನಕ ಯಾವುದೇ ಮಾಲೀಕರ ಉದ್ಯೋಗಿ ಆಗಿರಲಿಲ್ಲ. ಸ್ಥಾವರವಾಗಿ ಉಳಿಯದೆ ಜಂಗಮವಾಗಿ ಕೆಲಸ ಮಾಡಿದವರು. ಹತ್ತು ಹಲವು ಸುದ್ದಿ ಸಂಸ್ಥೆಗಳಿಗೆ ಗುತ್ತಿಗೆ ಕರಾರಿನ ಮೂಲಕ ಕಾರ್ಯಕ್ರಮಗಳನ್ನು ಮಾಡಿಕೊಟ್ಟವರು. ಗುತ್ತಿಗೆ ಮುಗಿದ ಕ್ಷಣವೇ ಮುಂದಿನ ಸಂಸ್ಥೆಗೆ ನಡೆಯುತ್ತಿದ್ದವರು. ಎಲ್ಲಿಯೂ ದೀರ್ಘ ಕಾಲ ನೆಲೆ ನಿಲ್ಲದೆ ಯಾಕೆ ಅಷ್ಟೊಂದು ಸಂಸ್ಥೆಗಳಿಗೆ ಕೆಲಸ ಮಾಡಿದಿರಿ ಎಂಬ ಪ್ರಶ್ನೆಗೆ ಅವರ ಉತ್ತರ- ನಿಷ್ಠುರನಾಗಿದ್ದ ನನ್ನನ್ನು ಯಾರೂ ಬಹುಕಾಲ ಇಷ್ಟಪಡುತ್ತಿರಲಿಲ್ಲ.

ಪತ್ರಿಕೋದ್ಯಮಕ್ಕೆ ಅವರು ಕಾಲಿಟ್ಟದ್ದು ದೂರದರ್ಶನದ ಮೂಲಕ. 80ರ ದಶಕಗಳಲ್ಲಿ ಎನ್‌ಡಿಟಿವಿಯ ಪ್ರಣಯ್ ರಾಯ್ ಜೊತೆ ಆರಂಭಿಸಿದ ವಿರಳ ಒಳನೋಟಗಳ ಚುರುಕಿನ ಚುನಾವಣಾ ವಿಶ್ಲೇಷಣೆಗಳು ದುವಾ ಅವರಿಗೆ ದಿನಬೆಳಗಾಗುವುದರಲ್ಲಿ ಖ್ಯಾತಿ ತಂದುಕೊಟ್ಟವು. ಉರ್ದು ಹಿಂದೀ ಸಾಹಿತ್ಯದ ಆಳದ ಓದು ಅವರ ಸುದ್ದಿ ಪ್ರಸ್ತುತಿಯಲ್ಲಿ ಪ್ರತಿಫಲಿಸುತ್ತಿತ್ತು. ಅವರ ಪದಲಾಲಿತ್ಯ, ಪ್ರಖರ ವಿಶ್ಲೇಷಣೆ, ಸುಡುಕೆಂಡಗಳನ್ನು ಉಡಿಯಲ್ಲಿ ಕಟ್ಟಿಕೊಂಡಿರುತ್ತಿದ್ದಂತಹ ಟೀಕೆ ಟಿಪ್ಪಣಿಗಳ ವಿಶಿಷ್ಟ ಸೂಜಿಗಲ್ಲಿನ ಶೈಲಿ ಆದರ್ಶ ಪತ್ರಕರ್ತನೊಬ್ಬನ ದಾರಿ ದೀವಿಗೆ.

ಪ್ರಣಯ್ ರಾಯ್ ಪ್ರಕಾರ ದುವಾ ತಮ್ಮ ಕಾಲದ ಏಕೈಕ ಮಹಾನ್ ಟಿವಿ ಪತ್ರಕರ್ತರಾಗಿದ್ದರು. ತಾವು ಸದಾ ಮೆಚ್ಚಿ ಗೌರವಿಸಿದ ಈ ಸೋಜಿಗದ ಪ್ರತಿಭೆಯಿಂದ ಸಾಕಷ್ಟು ಕಲಿತದ್ದಾಗಿ ಹೇಳಿದ್ದಾರೆ.
ಇಂದಿರಾ ಗಾಂಧೀ ಹೇರಿದ್ದ ತುರ್ತುಪರಿಸ್ಥಿತಿಯಂತಹುದೇ ಗಂಭೀರ ಕಳವಳಕಾರಿ ದುಸ್ಥಿತಿ ಈಗ ದೇಶವನ್ನು ಅವರಿಸಿದೆ. ಅಂದು ಬಸ್ಸುಗಳು ರೈಲುಗಾಡಿಗಳಲ್ಲಿ ಬಂಗಾರದ ದಿನಗಳು ಬರಲಿವೆ ಎಂಬ ಘೋಷಣೆಗಳನ್ನು ಬರೆಸಲಾಗಿತ್ತು. ಇಂದು ’ಅಚ್ಛೇ ದಿನ’ಗಳ ಆಮಿಷವನ್ನು ತೂಗು ಬಿಡಲಾಗಿದೆ. ಇಂದಿರಾ ಸುತ್ತಮುತ್ತಲ ಪಾಪಾಸುಕಳ್ಳಿ ಹಿಡಿಯಷ್ಟು ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಆದರೆ ಇಂದು ಆಳುತ್ತಿರುವವರ ಹಿಂದೆ ದೇಶವ್ಯಾಪಿ ಬೃಹತ್ ಸಂಘಟನೆಯೇ ಇದೆ. ಅದು ಪ್ರತಿಪಾದಿಸುವ ಭೇದಭಾವದ ಸಿದ್ಧಾಂತವೇ ಆವರಿಸಿದೆ ಎಂಬುದು ದುವಾ ಭಾವನೆಯಾಗಿತ್ತು.

ಆಳುವವರ ಬಾಲ ಬಡಿಯುವ ಭಟ್ಟಂಗಿ ಸುದ್ದಿಗಾರಿಕೆಯನ್ನು ಅವರು ದರಬಾರಿ ಮತ್ತು ಸರಕಾರಿ ಎಂದು ಹೆಸರಿಟ್ಟು ಹಂಗಿಸುತ್ತಿದ್ದರು. ಭಾರತ ರಾಜಕಾರಣದ ಅತಿರಥ ಮಹಾರಥರನ್ನು ಸಂದರ್ಶಿಸಿದ್ದ ಅವರು ಭಟ್ಟಂಗಿ ಪ್ರಶ್ನೆಗಳನ್ನು ಎಂದೂ ಕೇಳಿದವರಲ್ಲ. ದೂರದರ್ಶನಕ್ಕಾಗಿ ಅವರು ನಡೆಸಿಕೊಟ್ಟ ಕೆದಕುವ ಶೋಧ ಎಂಬ ಅಜಮಾಸು ಅರ್ಥದ ’ಪರಖ್’ ಎಂಬ ಶೀರ್ಷಿಕೆಯ ಕಾರ್ಯಕ್ರಮ ಇಂದಿಗೂ ಅನುಕರಣೀಯ.

ಅಧಿಕಾರವನ್ನು ಸದಾ ಪ್ರಶ್ನಿಸಿದ ಪತ್ರಿಕೆಗಳಲ್ಲಿ ಒಂದಾದ ’ಜನಸತ್ತಾ’ದ ಮಾಜಿ ಸಂಪಾದಕ ಓಮ್ ಥನ್ವಿ ಅವರ ಪ್ರಕಾರ ದುವಾ ತಮ್ಮ ಟಿವಿ ಸುದ್ದಿ ಪ್ರಸ್ತುತಿಗಳ ಬರಹರೂಪವನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿರಲಿಲ್ಲ. ಆಂಕರ್‌ಗಳು ಅವಲಂಬಿಸುವ ಟೆಲಿಪ್ರಾಂಪ್ಟರಿನ ಹಂಗೂ ಅವರಿಗೆ ಇರಲಿಲ್ಲ. ಕ್ಯಾಮೆರಾ ಚಾಲೂ ಆಯಿತೆಂದರೆ ಅವರ ಆಲೋಚನೆಗಳು ಅಭಿಜಾತವಾಗಿ ಹರಿಯುತ್ತಿದ್ದವು. ಹರಿತ ವ್ಯಂಗ್ಯ ವಿಡಂಬನೆ ಮತ್ತು ಸೂಕ್ಷ್ಮ ಒಳನೋಟಗಳ ಲೀಲಾಜಾಲ ವಿಶ್ಲೇಷಣೆ ಅವರದಾಗಿತ್ತು. ತಪ್ಪು, ತಡವರಿಕೆ ರೀಟೇಕ್‌ಗಳ ಗೊಡವೆಯೇ ಅವರಿಗಿರಲಿಲ್ಲ. ಟೆಲಿವಿಷನ್ ಸುದ್ದಿ ತಂತ್ರಜ್ಞಾನ ಇನ್ನೂ ನಡೆಯಲು ಕಲಿಯುತ್ತಿದ್ದ ದಿನಗಳಲ್ಲಿ ಮಾಧ್ಯಮದ ಮೇಲೆ ಬಿಗಿ ಹಿಡಿತ ಸಾಧಿಸಿದ್ದರು ದುವಾ.

ಭೋಜನಪ್ರಿಯ ದುವಾ ಗಂಭೀರ ಸುದ್ದಿ ವಿಶ್ಲೇಷಣೆಯ ಜೊತೆಗೆ ’ಜಾಯ್ಕಾ ಇಂಡಿಯಾ ಕಾ’ ಎಂಬ ಅತ್ಯಂತ ಜನಪ್ರಿಯ ತಿಂಡಿ ತಿನಿಸು ಭೋಜನದ ಕಾರ್ಯಕ್ರಮವನ್ನೂ ದೀರ್ಘಕಾಲ ನಡೆಸಿಕೊಟ್ಟರು. ಕರ್ನಾಟಕವೂ ಸೇರಿದಂತೆ ದೇಶದ ಮೂಲೆಮೂಲೆಗಳ ಅಪರೂಪದ ರುಚಿಕರ ವ್ಯಂಜನಗಳು ಮತ್ತು ಹೊಟೆಲುಗಳನ್ನು ಪರಿಚಯಿಸಿದರು. ಮೈಸೂರಿನ ಗುರು ಸ್ವೀಟ್ಸ್‌ನಲ್ಲಿ ಮೈಸೂರು ಪಾಕ್ ಮೆದ್ದು ಹೊರಬಿದ್ದು ಅರಮನೆ ನಗರಿಯ ಸ್ವಚ್ಛತೆ ಮತ್ತು ಅಲ್ಲಿನ ಪೌರರ ನೈರ್ಮಲ್ಯಪ್ರಜ್ಞೆಯನ್ನು ಮೆಚ್ಚಿದ್ದು ಈ ಪತ್ರಕರ್ತನಿಗೆ ಇನ್ನೂ ನೆನಪಿದೆ. ವಿದೇಶಗಳಿಗೂ ಪಯಣಿಸಿದ ಅವರ ಈ ಕಾರ್ಯಕ್ರಮದ ಹೆಸರು ವಿಶೇಷವಾಗಿ ಉತ್ತರಭಾರತದ ಭೋಜನಪ್ರಿಯರ ನಾಲಗೆಗಳ ಮೇಲೆ ನಲಿಯಿತು.

ಟೆಲಿವಿಷನ್ ಪತ್ರಿಕೋದ್ಯಮದ ನಂತರ ಭಾರೀ ಸೆಟ್ಟುಗಳ ಸ್ಟುಡಿಯೋಗಳ ಅಂಧಾದುಂದಿನ ಹಂಗಿಲ್ಲದ ಸಾಮಾಜಿಕ ಅಂತರ್ಜಾಲ ತಾಣಗಳ ನೇರ ಸರಳ ಗುಣಗಳು ದುವಾ ಅವರನ್ನು ಸೆಳೆದಿದ್ದವು.

ಸಿದ್ಧಾರ್ಥ ವರದರಾಜನ್ ಸಂಗಾತಿಗಳು ನಡೆಸುವ ’ದಿ ವೈರ್’ ಹೆಸರಿನ ಡಿಜಿಟಲ್ ಸುದ್ದಿ ವೇದಿಕೆಗೆ ನಡೆಸಿಕೊಟ್ಟ ಸುದ್ದಿ ವಿಶ್ಲೇಷಣೆಗಳ ಪ್ರದರ್ಶನಗಳಿಗೆ ಚಿಕ್ಕಾಸನ್ನೂ ಪಡೆಯಲಿಲ್ಲ ಅವರು. ತಾವು ದುಡಿದ ಸಂಸ್ಥೆಗಳಿಗೆ ಘನತೆ ತಂದುಕೊಟ್ಟವರು. ಮೂರೂವರೆ ದಶಕಗಳ ಕಾಲ ಟೀವಿ ಪತ್ರಿಕೋದ್ಯಮದ ಬೆಳಕಿನ ಸ್ತಂಭವಾಗಿದ್ದವರು.

ಅಪ್ರತಿಮ ಅಭಿಜಾತ ಸಮಾಜಮುಖಿ ಸುದ್ದಿ ಸಂವಹನಕಾರ ಕಟ್ಟಕಡೆಯ ಸುದ್ದಿ ಪ್ರಸ್ತುತಿ ಮುಗಿಸಿ ಮರಳಿ ಬಾರದಂತೆ ಮರೆಯಾಗಿದ್ದಾನೆ. ಹೀಗೆ ನಿರ್ಗಮಿಸುವ ಕಾಲ ಇದಾಗಿರಲಿಲ್ಲ. ಆದರೆ ಕಾಲನನ್ನು ಗೆದ್ದವರು ಯಾರಿದ್ದಾರೆ?


ಇದನ್ನೂ ಓದಿ: ವಿನೋದ್ ದುವಾ ವಿರುದ್ಧ ಎಫ್‌ಐಆರ್ ರದ್ದು; ದೇಶದ್ರೋಹ ಕಾನೂನಿನ ಮೂಲಭೂತ ನಿಯಮಗಳನ್ನು ನೆನಪಿಸಿದ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...