Homeಮೀಸಲಾತಿ: ಕಣ್ಣಗಾಯಕ್ಕೊಂದು ಕನ್ನಡಿಮೀಸಲಾತಿ ಪಡೆದವರೇ ಮೀಸಲಾತಿ ವಿರುದ್ಧ ನಿಂತರೆ ಸ್ವವಂಚನೆಯಲ್ಲವೇ?

ಮೀಸಲಾತಿ ಪಡೆದವರೇ ಮೀಸಲಾತಿ ವಿರುದ್ಧ ನಿಂತರೆ ಸ್ವವಂಚನೆಯಲ್ಲವೇ?

- Advertisement -
- Advertisement -

ದಲಿತ ಮತ್ತು ಹಿಂದುಳಿದ ಸಮುದಾಯಗಳಲ್ಲಿ ಈಗಾಗಲೇ ಹಲವರು ಮೀಸಲಾತಿ ಪಡೆದು ಉನ್ನತಮಟ್ಟದ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಕೆಲವರು ಘನತೆಯ ಬದುಕಿನ ಕಡೆ ಮುಖ ಮಾಡಿದ್ದಾರೆ. ಮೀಸಲಾತಿಯಿಂದಾಗಿಯೇ ನಾಲ್ಕಾರು ಜನರ ನಡುವೆ ಬೆರೆತು ಜೀವನ ಸಾಗಿಸಲು ಇವರಿಗೆ ಸಾಧ್ಯವಾಗಿದೆ. ತಮಗೆ ಏನೇ ಸೌಲಭ್ಯ ಸಿಕ್ಕಿದರೂ ಅದರ ಹಿಂದೆ ಈ ಮೀಸಲಾತಿ ಇದೆ ಎನ್ನುವುದು ಅವರ ಅಂತರಾಳ ಅರಿಯದ ಸಂಗತಿಯೇನೂ ಅಲ್ಲ. ಆದರೆ ಇವರಲ್ಲೇ ಇತ್ತೀಚೆಗೆ ಒಂದು ವರ್ಗ ಸದ್ದಿಲ್ಲದೆ ಎದ್ದು ಮೀಸಲಾತಿ ವಿರೋಧಿ ನೆಲೆಯಲ್ಲಿ ಕುಳಿತುಕೊಳ್ಳುತ್ತಿದೆ. ಇವರು ತಮ್ಮ ಸವಲತ್ತುಗಳಿಗಾಗಿ ಮೀಸಲಾತಿ ಒದಗಿದ ಮೇಲೆ ಅದನ್ನೇ ಕಾಲಕಸದಂತೆ ಒದೆಯುವುದರ ಕಡೆ ತಮ್ಮ ಚಿತ್ತವನ್ನು ಹರಿಯಬಿಡುತ್ತಿದ್ದಾರೆ. ಇಡೀ ಕುಟುಂಬದಲ್ಲಿ ಮೊದಲ ಬಾರಿಗೆ ಮೀಸಲಾತಿಯ ಫಲಾನುಭವದಿಂದ ಸಾಮಾಜಿಕ ಸ್ಥಾನಮಾನವನ್ನು ಎತ್ತರಕ್ಕೇರಿಸಿಕೊಂಡವರೂ ಸಹ ಇಂದು ಮೀಸಲಾತಿ ವಿರುದ್ಧವಾಗಿ ಮಾತನಾಡುತ್ತಾ ಅದನ್ನು ಇನ್ನಿತರರಿಗೆ ದಕ್ಕದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಇದು ವಿಪರ್ಯಾಸ!

ಇದನ್ನು ವಿಪರ್ಯಾಸ ಎಂದು ಕರೆಯುವ ಬದಲು ವಂಚನೆ ಎಂದು ಕರೆದರೇನೇ ಹೆಚ್ಚು ಸಮಂಜಸ ಎನಿಸುತ್ತದೆ. ಏಕೆಂದರೆ ಈಗಾಗಲೇ ಮೀಸಲಾತಿ ವಿರೋಧಿಗಳ ದೊಡ್ಡ ದಂಡೇ ಅಲ್ಲಲ್ಲಿ ನಿಂತು ವಿರೋಧಿ ದನಿಗೈಯುತ್ತಿದೆ. ಸಾಮಾಜಿಕ ನ್ಯಾಯದ ಪರಿಪಾಲನೆಗಾಗಿ ಬಂದ ಈ ಅವಕಾಶವನ್ನು ‘ಪ್ರತಿಭೆ’ ಎನ್ನುವ ಅಸ್ತ್ರ ಬಳಸಿ ಧೂಳೀಪಟ ಮಾಡಲು ಈ ವರ್ಗ ಮೊದಲಿನಿಂದಲೂ ಸಂಚು ರೂಪಿಸುತ್ತಲೇ ಬರುತ್ತಿದೆ. ‘ಪ್ರತಿಭೆ ಎನ್ನುವುದು ನಮ್ಮ ಸ್ವತ್ತು ಮಾತ್ರ’, ‘ನಮಗಲ್ಲದೆ ಪ್ರತಿಭೆ ಯಾರಿಗಿದೆ…..’ ‘ಈ ಮೀಸಲಾತಿಯಿಂದ ನಮ್ಮ ಸವಲತ್ತುಗಳನ್ನೆಲ್ಲ ಎಸ್ಸಿ, ಎಸ್ಟಿ, ಓಬಿಸಿಗಳು ಕಸಿದುಕೊಳ್ಳುತ್ತಿದ್ದಾರೆ’ ಎಂದು ಹುಯಿಲೆಬ್ಬಿಸುತ್ತಾ ಬಂದವರಿಗೆ ಈ ದೇಶದಲ್ಲಿನ ಜಾತಿವ್ಯವಸ್ಥೆಯಿಂದ ಅಸ್ವಸ್ಥಗೊಂಡ ಸಾಮಾಜಿಕ ನೆಲೆ ಅರ್ಥವಾಗುವುದಾದರೂ ಹೇಗೆ? ಅರ್ಥಮಾಡಿಕೊಳ್ಳಲು ಇವರು ಯಾವ ಅವಮಾನದ ನೋವನ್ನು ಅನುಭವಿಸಿದ್ದಾರೆ? ಅವಮಾನ, ಜಾತಿ ತಾರತಮ್ಯ, ಅಸ್ಪೃಶ್ಯತೆಯ ನೋವು ಇಲ್ಲದವರಿಗೆ ಸಹಜವಾಗೇ ಮೀಸಲಾತಿ ತಮ್ಮ ವಿರುದ್ಧವೆಂಬಂತೆ ಗೋಚರವಾಗುತ್ತದೆ.

ಇದರ ಜೊತೆಗೆ ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಅವರಿಗೆ ಮೀಸಲಾತಿ ಬೇಡವೇ? ಎನ್ನುವ ಅಸ್ತ್ರವನ್ನು ಆಗಾಗ್ಗೆ ಮೀಸಲಾತಿ ವಿರೋಧಿ ವರ್ಗ ಪ್ರಯೋಗಿಸುತ್ತಲೇ ಬರುತ್ತಿತ್ತು. ಇಂತವರಿಗೆ ಸೆಡ್ಡು ಹೊಡೆದು ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಅದು ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದ ಹುಟ್ಟಿದ್ದು. ಜಾತಿಯೇ ಪ್ರಧಾನ ಮಾನದಂಡವಾಗಿರುವ ಈ ದೇಶದಲ್ಲಿ ಜಾತಿ ಜನಸಂಖ್ಯಾವಾರು ಪ್ರಾತಿನಿಧ್ಯದ ಪ್ರಶ್ನೆಯನ್ನು ಈ ಮೀಸಲಾತಿಯ ಪ್ರಕ್ರಿಯೆ ಮುನ್ನಲೆಗೆ ಪದೇಪದೇ ತಂದಿದೆ. ಆ ಮೂಲಕ ಇಲ್ಲಿ ಎಲ್ಲರೂ ಸಮಾನವಾಗಿ ಬದುಕುವಂತಹ ವಾತಾವರಣ ಸೃಷ್ಟಿಗೊಳ್ಳುತ್ತದೆ. ಎಂದು ಗಟ್ಟಿಯಾಗಿ ಕೂಗಿ ಹೇಳಿ ಮೀಸಲಾತಿಯ ಪರವಾಗಿ ಮಾತನಾಡಬೇಕಿದ್ದ ಮೀಸಲಾತಿ ಪಡೆದ ಮನಸ್ಸುಗಳು ಅದರ ವಿರುದ್ಧ ನಿಂತಿರುವುದು ಚಾರಿತ್ರಿಕ ವ್ಯಂಗ್ಯದಂತೆ ಕಾಣುತ್ತದೆ. ಇವರ ಈ ಆತ್ಮದ್ರೋಹದ ಕೆಲಸದಿಂದಾಗಿಯೇ ಇಂದಿನ ಯುವ ಪೀಳಿಗೆ ಮೀಸಲಾತಿಯಿಂದ ಮೇಲೆದ್ದು ಬಂದೆ ಎಂದು ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಿದೆ. ಜೊತೆಗೆ ಮೀಸಲಾತಿ ನಮ್ಮ ಹಕ್ಕು ಎಂದು ಹೇಳಿಕೊಳ್ಳುವುದಕ್ಕೂ ಹಿಂದೆಮುಂದೆ ನೋಡುತ್ತಿದೆ.

ಇಂದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೆ ಬಂದ ತಕ್ಷಣವೇ ಇವರಿಗೆ ಮೀಸಲಾತಿ ಅನ್ನುವುದು ಅಪಥ್ಯವಾಗಿದೆ. ‘ಪ್ರತಿಭೆ ಇದ್ದವರು ಪಡೆದುಕೊಳ್ಳಲಿ’ ಎನ್ನುವ ಮಾತನ್ನು ಯಾವ ಎಗ್ಗಿಲ್ಲದೆ ಹರಿಯಬಿಡುತ್ತಿದ್ದಾರೆ. ಇನ್ನೂ ಮುಂದುವರಿದಂತೆ ‘ತಮ್ಮ ಮಕ್ಕಳು ಜನರಲ್ ಕೆಟಗರಿಯಲ್ಲಿ ಸೀಟನ್ನು ಪಡೆದುಕೊಂಡಿದ್ದಾರೆ ಅದಕ್ಕೆ ಮೀಸಲಾತಿಯೇತರ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎನ್ನುವ ಅರೆತಿಳಿವಳಿಕೆಯನ್ನೂ ಬಿತ್ತುತ್ತಿದ್ದಾರೆ. ಇಷ್ಟೇ ಅಲ್ಲ, ತಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಹೂಂಗುಟ್ಟಲು ಕಲಿತ ‘ಮೀಸಲಾತಿಯಿಂದ ಜಾತಿವ್ಯವಸ್ಥೆ ಹಾಗೇ ಉಳಿಯುತ್ತದೆ’, ‘ಇಲ್ಲಿ ಜಾತಿಯ ದೌರ್ಜನ್ಯ ಎಲ್ಲಿದೆ..’ ‘ಇಲ್ಲಿ ಎಲ್ಲರೂ ಸಮಾನವಾಗಿಯೇ ಬದುಕುತ್ತಿದ್ದೇವೆ…’ ‘ಹಿಂಗಿರುವವರಿಗೆ ಮೀಸಲಾತಿ ಏಕೆ ಬೇಕು’? ಎನ್ನುವ ಆಲೋಚನೆಗಳಿಗೆ ಇವರೂ ಕೂಡ ಪುಷ್ಟಿಯನ್ನು ಒದಗಿಸುತ್ತಿದ್ದಾರೆ. ಮೀಸಲಾತಿಯಿಂದ ತಾವು ಆರ್ಥಿಕವಾಗಿ ಮೇಲೆ ಬಂದವರಾದರೂ ತಮ್ಮ ಮಕ್ಕಳು ಮತ್ತು ಸಮುದಾಯದ ಮಕ್ಕಳನ್ನು ಮೀಸಲಾತಿಯನ್ನು ಕೀಳರಿಮೆ ಎಂದು ಕಾಣುವ ಮನಸ್ಥಿತಿಯಿಂದ ಹೊರತರಲು ಆಗಿಲ್ಲ ಮತ್ತು ಆಗುತ್ತಿಲ್ಲ.

ಶತಮಾನಗಳ ಉದ್ದಕ್ಕೂ ಅಘೋಷಿತ ಮೀಸಲಾತಿಯನ್ನು (ಸವಲತ್ತುಗಳನ್ನು) ಪಡೆದು ನಿರಂತರ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾ ಬಂದವರ ಮಾತುಗಳನ್ನು ಬ್ರಿಟಿಷ್ ಮತ್ತು ಸ್ವತಂತ್ರ ಭಾರತದಲ್ಲಿ ಸಂವಿಧಾನಬದ್ಧವಾಗಿ ಪಡೆದ ಈ ಮೀಸಲಾತಿ ಫಲಾನುಭವಿಗಳು ಚಾಚೂತಪ್ಪದೆ ಕೇಳುತ್ತಿದ್ದಾರೆ. ಆದರೆ ತಮ್ಮದೇ ಸಮುದಾಯದವರ ಆರ್ತನಾದಕ್ಕೆ ಕಿವುಡಾಗಿದ್ದಾರೆ. ಅವರು ಹೇಳುವ ಸಂಸ್ಕೃತಿ, ಪರಂಪರೆ ಇತ್ಯಾದಿಗಳನ್ನು ಉರು ಹೊಡೆದು ಅವುಗಳೇ ನಮ್ಮ ಜೀವನದ ಧ್ಯೇಯ ಎನ್ನುವಂತೆ ಬೀಗುತ್ತಿದ್ದಾರೆ. ಇಂತವರಿಗೆ ಇಲ್ಲಿ ಇನ್ನೂ ಜಾತಿವ್ಯವಸ್ಥೆ ಜೀವಂತವಾಗಿದೆ ಮತ್ತು ಕ್ರೂರವಾಗಿದೆ, ಇಲ್ಲಿ ಅಸಮಾನತೆ ಎನ್ನುವುದು ನಿರಂತರ ಪ್ರವಾಹವಾಗಿದೆ, ಉದ್ಯೋಗಗಳ ಸೃಷ್ಟಿ ನಡೆಯುತ್ತಿಲ್ಲ, ಎಲ್ಲ ಸರ್ಕಾರಿ ಉದ್ದಿಮೆಗಳಲ್ಲಿ ಬಹುಪಾಲು ಹುದ್ದೆಗಳನ್ನು ಮೇಲ್ಜಾತಿ ಮತ್ತು ಮೇಲ್ವರ್ಗದವರೇ ಪಡೆದುಕೊಂಡಿದ್ದಾರೆ, ಖಾಸಗಿ ಉದ್ದಿಮೆಗಳಲ್ಲಿ ನಮ್ಮಂತವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟಿದೆ ಎಂಬ ಸತ್ಯಸಂಗತಿ ಅರ್ಥವಾಗಬೇಕಿದೆ. ಇಲ್ಲದಿದ್ದರೆ ಇವರು ಸಾಮಾಜಿಕ ನ್ಯಾಯಕ್ಕೆ ಮಗ್ಗಲುಮುಳ್ಳಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲ.

‘ಮೇಲ್ಜಾತಿಯ ಬಡಮಕ್ಕಳು ಪ್ರತಿಭೆ ಇದ್ದರೂ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ’ ಎನ್ನುವವರು ಕೇವಲ ಜಾತಿಯಿಂದಾಗಿ ಇಂದೂ ಕೂಡ ಮಾನಸಿಕ ಯಾತನೆಯನ್ನು ಬಡತನದೊಂದಿಗೆ ಅನುಭವಿಸಿ ನರಳುವವರ ಪಾಡನ್ನೂ ಅರ್ಥಮಾಡಿಕೊಳ್ಳಬೇಕಿದೆ. ‘ಸರ್ವರೂ ಸಮಾನರು’ ಎಂದಾದ ತಕ್ಷಣವೇ ಈ ಮೀಸಲಾತಿ ಎನ್ನುವ ಪದ ಬುಡಸಮೇತ ಕಳಚಿ ಬೀಳಲಿ. ಅಲ್ಲಿಯವರೆಗೆ ಮಹಿಳೆಯರಿಗೆ, ಜಾತಿಯಿಂದ ನೋವುಂಡರಿಗೆ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ, ಪ್ರಾದೇಶಿಕ ಭಾಷೆಯ ಮಡಿಲನ್ನೇ ಆಶ್ರಯಿಸಿರುವವರಿಗೆ, ವಿಶೇಷಚೇತನರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿಯ ಇನ್ನಷ್ಟು ಶೇಕಡತೆ ವಿಸ್ತರಿಸುವಂತಾಗಲಿ. ಸಮತೆಯ ಆಶಯ ಹೊದ್ದು ನಿಂತಿರುವ ಈ ಮೀಸಲಾತಿ ಖಾಸಗಿ ಕ್ಷೇತ್ರದಲ್ಲೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲಿ. ಇದಕ್ಕೆ ಆಳುವ ಸರ್ಕಾರಗಳು ಮುನ್ನುಡಿ ಬರೆಯುವಂತಾಗಲಿ. ಈ ಧ್ಯೇಯವನ್ನು ಎಸ್ಸಿ, ಎಸ್ಟಿ, ಓಬಿಸಿ ಸಮುದಾಯಗಳಲ್ಲಿ ಮೀಸಲಾತಿ ಪಡೆದು ಅದರ ವಿರುದ್ಧವೇ ಮಾತನಾಡುತ್ತಿರುವವರು ಹೊರುವಂತಾಗಲಿ. ಏಕೆಂದರೆ ಜಾತಿಕಾರಣಕ್ಕೆ ಮೀಸಲಾತಿ ನೀಡುವುದು ಸಲ್ಲದು ಎಂದು ಹುಯಿಲೆಬ್ಬಿಸುತ್ತಿದ್ದ ಮನಸುಗಳಿಗೆ ಇಂದು ಕಿಂಚಿತ್ತು ಹೋರಾಟವಿಲ್ಲದೆ ಕೇವಲ ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ಸಿಕ್ಕಿದೆ. ಅದೂ ಸಹ ಬರೋಬ್ಬರಿ 10%.
ಡಾ. ಹೆಚ್.ಡಿ. ಉಮಾಶಂಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. 15% sc ಮೀಸಲಾತಿಯೊಳಗೆ ಈಗ ಹಣಕಾಸು ಮಾನದಂಡ ಇಲ್ಲ. ಹೀಗಾಗಿ,ಇದರಲ್ಲಿ ಶೇ.೨-೩ ರಶ್ಟನ್ನು ಈಗಾಗಲೇ ಮೀಸಲಾತಿಪಡೆದು ಮೇಲೆ ಬಂದಿರುವ ಎರಡನೇ ಪೀಳಿಗೆಯವರು,ಆದಾಯತೆರಿಗೆ ಕಟ್ಟುವವರು ಮುಂತಾದವರು ಇದರೊಳಗೆ ಸ್ಪರ್ದಿಸಬೇಕು.
    ಇನ್ನಳಿದ ಶೇ೧೨-೧೩ ರಶ್ಟನ್ನು ಈವರೆಗೂ ಮೀಸಲಾತಿ ಸವಲತ್ತು ಪಡೆಯದ ಮೊದಲ ಪೀಳಿಗೆಯವರಿಗೆ ಮೀಸಲಿಡಬೇಕು.ಇದು st ಗುಂಪಿಗೂ ಆಗಬೇಕು.
    ಒಂದು ಸಲ ಮೀಸಲಾತಿ ಪಡೆದ obc ಗುಂಪಿನ ಎರಡನೇ ಪೀಳಿಗೆಯವರಿಗೆ ಮೀಸಲಾತಿ ಸವಲತ್ತು ಇಲ್ಲದ್ದರಿಂದ ಹಾಗೆ ಮಾತಾಡುತ್ತಾರೆ.
    ಹಲಪಂಗಡಗಳನ್ನು ಒಂದೇ ಮೀಸಲಾತಿ ಗುಂಪಿಗೆ ಸೇರಿಸಿರುವುದರಿಂದ ಉಂಟಾಗಿರುವ ಗೋಜಲನ್ನು ಒಳಮೀಸಲಾತಿ ಕೊಡುವುದರ ಮೂಲಕ ಸರಿಪಡಿಸಬೇಕು.

  2. ಶೇ ೧೦ ರ ಹೊಸ ಸವರ್ಣೀಯ ಬಡವರ ಮೀಸಲಾತಿಯನ್ನು ಇತ್ತೀಚಿಗೆ ಕೇಂದ್ರ ಸರಕಾರ ಜಾರಿಗೆ ತಂದಿದೆ . ನಮ್ಮ ರಾಜ್ಯದಲ್ಲಿ ಓಬಿಸಿ ಮೀಸಲಾತಿಯಲ್ಲಿ ಭೂ ಒಡೆತನದ ಜಾತಿಗಳಾದ ಲಿಂಗಾಯತ , ಒಕ್ಕಲಿಗ , ರೆಡ್ಡಿ , ಬಂಟ , ಕೊಡವ ಜಾತಿಗಳು ನುಸುಳಿವೆ . ಹೊರ ರಾಜ್ಯಗಳಲ್ಲಿ ಇಂತಹದೆ ಭೂ ಒಡೆತನದ ಜಾತಿಗಳೆನಿಸಿದ ಮರಾಠ , ಜಾಟ್ , ಪಟೇಲ್ ಇತ್ಯಾದಿ ಜಾತಿಗಳವರು ಓಬಿಸಿ ಮೀಸಲಾತಿಗಾಗಿ ನಿರಂತರ ಹೋರಾಡುತ್ತಿವೆ . ಇಂತಹ ಜಾತಿಗಳ ಬಡವರಿಗಾಗಿ ಕೇಂದ್ರ ಸರ್ಕಾರ ತಂದದ್ದು ಶೇ ೧೦ ರ ಮೀಸಲಾತಿ .
    ಈ ೧೦ % ಮೀಸಲಾತಿ ಪಟ್ಟಿಗೆ ಕರ್ನಾಟಕದ ಭೂ ಒಡೆತನದ ಜಾತಿಗಳನ್ನು ವರ್ಗಾಯಿಸಬೇಕು . ಕರ್ನಾಟಕದಲ್ಲಿ ಭೂ ಒಡೆತನದ ಜಾತಿಗಳನ್ನು ಓಬಿಸಿ ಪಟ್ಟಿಗೆ ತಂದಿರುವುದು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹ . ೧೦ % ಮೀಸಲಾತಿ ಯನ್ನು ಟೀಕಿಸುವವರು ಈ ದಿಕ್ಕಿನಲ್ಲಿ ಯೋಚಿಸುತ್ತಿಲ್ಲ. ವಾದಿರಾಜ್ , ಬೆಂಗಳೂರು .

LEAVE A REPLY

Please enter your comment!
Please enter your name here

- Advertisment -

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...