Homeಮೀಸಲಾತಿ: ಕಣ್ಣಗಾಯಕ್ಕೊಂದು ಕನ್ನಡಿಮೀಸಲಾತಿ ಪಡೆದವರೇ ಮೀಸಲಾತಿ ವಿರುದ್ಧ ನಿಂತರೆ ಸ್ವವಂಚನೆಯಲ್ಲವೇ?

ಮೀಸಲಾತಿ ಪಡೆದವರೇ ಮೀಸಲಾತಿ ವಿರುದ್ಧ ನಿಂತರೆ ಸ್ವವಂಚನೆಯಲ್ಲವೇ?

- Advertisement -
- Advertisement -

ದಲಿತ ಮತ್ತು ಹಿಂದುಳಿದ ಸಮುದಾಯಗಳಲ್ಲಿ ಈಗಾಗಲೇ ಹಲವರು ಮೀಸಲಾತಿ ಪಡೆದು ಉನ್ನತಮಟ್ಟದ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಕೆಲವರು ಘನತೆಯ ಬದುಕಿನ ಕಡೆ ಮುಖ ಮಾಡಿದ್ದಾರೆ. ಮೀಸಲಾತಿಯಿಂದಾಗಿಯೇ ನಾಲ್ಕಾರು ಜನರ ನಡುವೆ ಬೆರೆತು ಜೀವನ ಸಾಗಿಸಲು ಇವರಿಗೆ ಸಾಧ್ಯವಾಗಿದೆ. ತಮಗೆ ಏನೇ ಸೌಲಭ್ಯ ಸಿಕ್ಕಿದರೂ ಅದರ ಹಿಂದೆ ಈ ಮೀಸಲಾತಿ ಇದೆ ಎನ್ನುವುದು ಅವರ ಅಂತರಾಳ ಅರಿಯದ ಸಂಗತಿಯೇನೂ ಅಲ್ಲ. ಆದರೆ ಇವರಲ್ಲೇ ಇತ್ತೀಚೆಗೆ ಒಂದು ವರ್ಗ ಸದ್ದಿಲ್ಲದೆ ಎದ್ದು ಮೀಸಲಾತಿ ವಿರೋಧಿ ನೆಲೆಯಲ್ಲಿ ಕುಳಿತುಕೊಳ್ಳುತ್ತಿದೆ. ಇವರು ತಮ್ಮ ಸವಲತ್ತುಗಳಿಗಾಗಿ ಮೀಸಲಾತಿ ಒದಗಿದ ಮೇಲೆ ಅದನ್ನೇ ಕಾಲಕಸದಂತೆ ಒದೆಯುವುದರ ಕಡೆ ತಮ್ಮ ಚಿತ್ತವನ್ನು ಹರಿಯಬಿಡುತ್ತಿದ್ದಾರೆ. ಇಡೀ ಕುಟುಂಬದಲ್ಲಿ ಮೊದಲ ಬಾರಿಗೆ ಮೀಸಲಾತಿಯ ಫಲಾನುಭವದಿಂದ ಸಾಮಾಜಿಕ ಸ್ಥಾನಮಾನವನ್ನು ಎತ್ತರಕ್ಕೇರಿಸಿಕೊಂಡವರೂ ಸಹ ಇಂದು ಮೀಸಲಾತಿ ವಿರುದ್ಧವಾಗಿ ಮಾತನಾಡುತ್ತಾ ಅದನ್ನು ಇನ್ನಿತರರಿಗೆ ದಕ್ಕದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಇದು ವಿಪರ್ಯಾಸ!

ಇದನ್ನು ವಿಪರ್ಯಾಸ ಎಂದು ಕರೆಯುವ ಬದಲು ವಂಚನೆ ಎಂದು ಕರೆದರೇನೇ ಹೆಚ್ಚು ಸಮಂಜಸ ಎನಿಸುತ್ತದೆ. ಏಕೆಂದರೆ ಈಗಾಗಲೇ ಮೀಸಲಾತಿ ವಿರೋಧಿಗಳ ದೊಡ್ಡ ದಂಡೇ ಅಲ್ಲಲ್ಲಿ ನಿಂತು ವಿರೋಧಿ ದನಿಗೈಯುತ್ತಿದೆ. ಸಾಮಾಜಿಕ ನ್ಯಾಯದ ಪರಿಪಾಲನೆಗಾಗಿ ಬಂದ ಈ ಅವಕಾಶವನ್ನು ‘ಪ್ರತಿಭೆ’ ಎನ್ನುವ ಅಸ್ತ್ರ ಬಳಸಿ ಧೂಳೀಪಟ ಮಾಡಲು ಈ ವರ್ಗ ಮೊದಲಿನಿಂದಲೂ ಸಂಚು ರೂಪಿಸುತ್ತಲೇ ಬರುತ್ತಿದೆ. ‘ಪ್ರತಿಭೆ ಎನ್ನುವುದು ನಮ್ಮ ಸ್ವತ್ತು ಮಾತ್ರ’, ‘ನಮಗಲ್ಲದೆ ಪ್ರತಿಭೆ ಯಾರಿಗಿದೆ…..’ ‘ಈ ಮೀಸಲಾತಿಯಿಂದ ನಮ್ಮ ಸವಲತ್ತುಗಳನ್ನೆಲ್ಲ ಎಸ್ಸಿ, ಎಸ್ಟಿ, ಓಬಿಸಿಗಳು ಕಸಿದುಕೊಳ್ಳುತ್ತಿದ್ದಾರೆ’ ಎಂದು ಹುಯಿಲೆಬ್ಬಿಸುತ್ತಾ ಬಂದವರಿಗೆ ಈ ದೇಶದಲ್ಲಿನ ಜಾತಿವ್ಯವಸ್ಥೆಯಿಂದ ಅಸ್ವಸ್ಥಗೊಂಡ ಸಾಮಾಜಿಕ ನೆಲೆ ಅರ್ಥವಾಗುವುದಾದರೂ ಹೇಗೆ? ಅರ್ಥಮಾಡಿಕೊಳ್ಳಲು ಇವರು ಯಾವ ಅವಮಾನದ ನೋವನ್ನು ಅನುಭವಿಸಿದ್ದಾರೆ? ಅವಮಾನ, ಜಾತಿ ತಾರತಮ್ಯ, ಅಸ್ಪೃಶ್ಯತೆಯ ನೋವು ಇಲ್ಲದವರಿಗೆ ಸಹಜವಾಗೇ ಮೀಸಲಾತಿ ತಮ್ಮ ವಿರುದ್ಧವೆಂಬಂತೆ ಗೋಚರವಾಗುತ್ತದೆ.

ಇದರ ಜೊತೆಗೆ ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಅವರಿಗೆ ಮೀಸಲಾತಿ ಬೇಡವೇ? ಎನ್ನುವ ಅಸ್ತ್ರವನ್ನು ಆಗಾಗ್ಗೆ ಮೀಸಲಾತಿ ವಿರೋಧಿ ವರ್ಗ ಪ್ರಯೋಗಿಸುತ್ತಲೇ ಬರುತ್ತಿತ್ತು. ಇಂತವರಿಗೆ ಸೆಡ್ಡು ಹೊಡೆದು ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಅದು ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದ ಹುಟ್ಟಿದ್ದು. ಜಾತಿಯೇ ಪ್ರಧಾನ ಮಾನದಂಡವಾಗಿರುವ ಈ ದೇಶದಲ್ಲಿ ಜಾತಿ ಜನಸಂಖ್ಯಾವಾರು ಪ್ರಾತಿನಿಧ್ಯದ ಪ್ರಶ್ನೆಯನ್ನು ಈ ಮೀಸಲಾತಿಯ ಪ್ರಕ್ರಿಯೆ ಮುನ್ನಲೆಗೆ ಪದೇಪದೇ ತಂದಿದೆ. ಆ ಮೂಲಕ ಇಲ್ಲಿ ಎಲ್ಲರೂ ಸಮಾನವಾಗಿ ಬದುಕುವಂತಹ ವಾತಾವರಣ ಸೃಷ್ಟಿಗೊಳ್ಳುತ್ತದೆ. ಎಂದು ಗಟ್ಟಿಯಾಗಿ ಕೂಗಿ ಹೇಳಿ ಮೀಸಲಾತಿಯ ಪರವಾಗಿ ಮಾತನಾಡಬೇಕಿದ್ದ ಮೀಸಲಾತಿ ಪಡೆದ ಮನಸ್ಸುಗಳು ಅದರ ವಿರುದ್ಧ ನಿಂತಿರುವುದು ಚಾರಿತ್ರಿಕ ವ್ಯಂಗ್ಯದಂತೆ ಕಾಣುತ್ತದೆ. ಇವರ ಈ ಆತ್ಮದ್ರೋಹದ ಕೆಲಸದಿಂದಾಗಿಯೇ ಇಂದಿನ ಯುವ ಪೀಳಿಗೆ ಮೀಸಲಾತಿಯಿಂದ ಮೇಲೆದ್ದು ಬಂದೆ ಎಂದು ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಿದೆ. ಜೊತೆಗೆ ಮೀಸಲಾತಿ ನಮ್ಮ ಹಕ್ಕು ಎಂದು ಹೇಳಿಕೊಳ್ಳುವುದಕ್ಕೂ ಹಿಂದೆಮುಂದೆ ನೋಡುತ್ತಿದೆ.

ಇಂದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೆ ಬಂದ ತಕ್ಷಣವೇ ಇವರಿಗೆ ಮೀಸಲಾತಿ ಅನ್ನುವುದು ಅಪಥ್ಯವಾಗಿದೆ. ‘ಪ್ರತಿಭೆ ಇದ್ದವರು ಪಡೆದುಕೊಳ್ಳಲಿ’ ಎನ್ನುವ ಮಾತನ್ನು ಯಾವ ಎಗ್ಗಿಲ್ಲದೆ ಹರಿಯಬಿಡುತ್ತಿದ್ದಾರೆ. ಇನ್ನೂ ಮುಂದುವರಿದಂತೆ ‘ತಮ್ಮ ಮಕ್ಕಳು ಜನರಲ್ ಕೆಟಗರಿಯಲ್ಲಿ ಸೀಟನ್ನು ಪಡೆದುಕೊಂಡಿದ್ದಾರೆ ಅದಕ್ಕೆ ಮೀಸಲಾತಿಯೇತರ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎನ್ನುವ ಅರೆತಿಳಿವಳಿಕೆಯನ್ನೂ ಬಿತ್ತುತ್ತಿದ್ದಾರೆ. ಇಷ್ಟೇ ಅಲ್ಲ, ತಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಹೂಂಗುಟ್ಟಲು ಕಲಿತ ‘ಮೀಸಲಾತಿಯಿಂದ ಜಾತಿವ್ಯವಸ್ಥೆ ಹಾಗೇ ಉಳಿಯುತ್ತದೆ’, ‘ಇಲ್ಲಿ ಜಾತಿಯ ದೌರ್ಜನ್ಯ ಎಲ್ಲಿದೆ..’ ‘ಇಲ್ಲಿ ಎಲ್ಲರೂ ಸಮಾನವಾಗಿಯೇ ಬದುಕುತ್ತಿದ್ದೇವೆ…’ ‘ಹಿಂಗಿರುವವರಿಗೆ ಮೀಸಲಾತಿ ಏಕೆ ಬೇಕು’? ಎನ್ನುವ ಆಲೋಚನೆಗಳಿಗೆ ಇವರೂ ಕೂಡ ಪುಷ್ಟಿಯನ್ನು ಒದಗಿಸುತ್ತಿದ್ದಾರೆ. ಮೀಸಲಾತಿಯಿಂದ ತಾವು ಆರ್ಥಿಕವಾಗಿ ಮೇಲೆ ಬಂದವರಾದರೂ ತಮ್ಮ ಮಕ್ಕಳು ಮತ್ತು ಸಮುದಾಯದ ಮಕ್ಕಳನ್ನು ಮೀಸಲಾತಿಯನ್ನು ಕೀಳರಿಮೆ ಎಂದು ಕಾಣುವ ಮನಸ್ಥಿತಿಯಿಂದ ಹೊರತರಲು ಆಗಿಲ್ಲ ಮತ್ತು ಆಗುತ್ತಿಲ್ಲ.

ಶತಮಾನಗಳ ಉದ್ದಕ್ಕೂ ಅಘೋಷಿತ ಮೀಸಲಾತಿಯನ್ನು (ಸವಲತ್ತುಗಳನ್ನು) ಪಡೆದು ನಿರಂತರ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾ ಬಂದವರ ಮಾತುಗಳನ್ನು ಬ್ರಿಟಿಷ್ ಮತ್ತು ಸ್ವತಂತ್ರ ಭಾರತದಲ್ಲಿ ಸಂವಿಧಾನಬದ್ಧವಾಗಿ ಪಡೆದ ಈ ಮೀಸಲಾತಿ ಫಲಾನುಭವಿಗಳು ಚಾಚೂತಪ್ಪದೆ ಕೇಳುತ್ತಿದ್ದಾರೆ. ಆದರೆ ತಮ್ಮದೇ ಸಮುದಾಯದವರ ಆರ್ತನಾದಕ್ಕೆ ಕಿವುಡಾಗಿದ್ದಾರೆ. ಅವರು ಹೇಳುವ ಸಂಸ್ಕೃತಿ, ಪರಂಪರೆ ಇತ್ಯಾದಿಗಳನ್ನು ಉರು ಹೊಡೆದು ಅವುಗಳೇ ನಮ್ಮ ಜೀವನದ ಧ್ಯೇಯ ಎನ್ನುವಂತೆ ಬೀಗುತ್ತಿದ್ದಾರೆ. ಇಂತವರಿಗೆ ಇಲ್ಲಿ ಇನ್ನೂ ಜಾತಿವ್ಯವಸ್ಥೆ ಜೀವಂತವಾಗಿದೆ ಮತ್ತು ಕ್ರೂರವಾಗಿದೆ, ಇಲ್ಲಿ ಅಸಮಾನತೆ ಎನ್ನುವುದು ನಿರಂತರ ಪ್ರವಾಹವಾಗಿದೆ, ಉದ್ಯೋಗಗಳ ಸೃಷ್ಟಿ ನಡೆಯುತ್ತಿಲ್ಲ, ಎಲ್ಲ ಸರ್ಕಾರಿ ಉದ್ದಿಮೆಗಳಲ್ಲಿ ಬಹುಪಾಲು ಹುದ್ದೆಗಳನ್ನು ಮೇಲ್ಜಾತಿ ಮತ್ತು ಮೇಲ್ವರ್ಗದವರೇ ಪಡೆದುಕೊಂಡಿದ್ದಾರೆ, ಖಾಸಗಿ ಉದ್ದಿಮೆಗಳಲ್ಲಿ ನಮ್ಮಂತವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟಿದೆ ಎಂಬ ಸತ್ಯಸಂಗತಿ ಅರ್ಥವಾಗಬೇಕಿದೆ. ಇಲ್ಲದಿದ್ದರೆ ಇವರು ಸಾಮಾಜಿಕ ನ್ಯಾಯಕ್ಕೆ ಮಗ್ಗಲುಮುಳ್ಳಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲ.

‘ಮೇಲ್ಜಾತಿಯ ಬಡಮಕ್ಕಳು ಪ್ರತಿಭೆ ಇದ್ದರೂ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ’ ಎನ್ನುವವರು ಕೇವಲ ಜಾತಿಯಿಂದಾಗಿ ಇಂದೂ ಕೂಡ ಮಾನಸಿಕ ಯಾತನೆಯನ್ನು ಬಡತನದೊಂದಿಗೆ ಅನುಭವಿಸಿ ನರಳುವವರ ಪಾಡನ್ನೂ ಅರ್ಥಮಾಡಿಕೊಳ್ಳಬೇಕಿದೆ. ‘ಸರ್ವರೂ ಸಮಾನರು’ ಎಂದಾದ ತಕ್ಷಣವೇ ಈ ಮೀಸಲಾತಿ ಎನ್ನುವ ಪದ ಬುಡಸಮೇತ ಕಳಚಿ ಬೀಳಲಿ. ಅಲ್ಲಿಯವರೆಗೆ ಮಹಿಳೆಯರಿಗೆ, ಜಾತಿಯಿಂದ ನೋವುಂಡರಿಗೆ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ, ಪ್ರಾದೇಶಿಕ ಭಾಷೆಯ ಮಡಿಲನ್ನೇ ಆಶ್ರಯಿಸಿರುವವರಿಗೆ, ವಿಶೇಷಚೇತನರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿಯ ಇನ್ನಷ್ಟು ಶೇಕಡತೆ ವಿಸ್ತರಿಸುವಂತಾಗಲಿ. ಸಮತೆಯ ಆಶಯ ಹೊದ್ದು ನಿಂತಿರುವ ಈ ಮೀಸಲಾತಿ ಖಾಸಗಿ ಕ್ಷೇತ್ರದಲ್ಲೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲಿ. ಇದಕ್ಕೆ ಆಳುವ ಸರ್ಕಾರಗಳು ಮುನ್ನುಡಿ ಬರೆಯುವಂತಾಗಲಿ. ಈ ಧ್ಯೇಯವನ್ನು ಎಸ್ಸಿ, ಎಸ್ಟಿ, ಓಬಿಸಿ ಸಮುದಾಯಗಳಲ್ಲಿ ಮೀಸಲಾತಿ ಪಡೆದು ಅದರ ವಿರುದ್ಧವೇ ಮಾತನಾಡುತ್ತಿರುವವರು ಹೊರುವಂತಾಗಲಿ. ಏಕೆಂದರೆ ಜಾತಿಕಾರಣಕ್ಕೆ ಮೀಸಲಾತಿ ನೀಡುವುದು ಸಲ್ಲದು ಎಂದು ಹುಯಿಲೆಬ್ಬಿಸುತ್ತಿದ್ದ ಮನಸುಗಳಿಗೆ ಇಂದು ಕಿಂಚಿತ್ತು ಹೋರಾಟವಿಲ್ಲದೆ ಕೇವಲ ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ಸಿಕ್ಕಿದೆ. ಅದೂ ಸಹ ಬರೋಬ್ಬರಿ 10%.
ಡಾ. ಹೆಚ್.ಡಿ. ಉಮಾಶಂಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. 15% sc ಮೀಸಲಾತಿಯೊಳಗೆ ಈಗ ಹಣಕಾಸು ಮಾನದಂಡ ಇಲ್ಲ. ಹೀಗಾಗಿ,ಇದರಲ್ಲಿ ಶೇ.೨-೩ ರಶ್ಟನ್ನು ಈಗಾಗಲೇ ಮೀಸಲಾತಿಪಡೆದು ಮೇಲೆ ಬಂದಿರುವ ಎರಡನೇ ಪೀಳಿಗೆಯವರು,ಆದಾಯತೆರಿಗೆ ಕಟ್ಟುವವರು ಮುಂತಾದವರು ಇದರೊಳಗೆ ಸ್ಪರ್ದಿಸಬೇಕು.
    ಇನ್ನಳಿದ ಶೇ೧೨-೧೩ ರಶ್ಟನ್ನು ಈವರೆಗೂ ಮೀಸಲಾತಿ ಸವಲತ್ತು ಪಡೆಯದ ಮೊದಲ ಪೀಳಿಗೆಯವರಿಗೆ ಮೀಸಲಿಡಬೇಕು.ಇದು st ಗುಂಪಿಗೂ ಆಗಬೇಕು.
    ಒಂದು ಸಲ ಮೀಸಲಾತಿ ಪಡೆದ obc ಗುಂಪಿನ ಎರಡನೇ ಪೀಳಿಗೆಯವರಿಗೆ ಮೀಸಲಾತಿ ಸವಲತ್ತು ಇಲ್ಲದ್ದರಿಂದ ಹಾಗೆ ಮಾತಾಡುತ್ತಾರೆ.
    ಹಲಪಂಗಡಗಳನ್ನು ಒಂದೇ ಮೀಸಲಾತಿ ಗುಂಪಿಗೆ ಸೇರಿಸಿರುವುದರಿಂದ ಉಂಟಾಗಿರುವ ಗೋಜಲನ್ನು ಒಳಮೀಸಲಾತಿ ಕೊಡುವುದರ ಮೂಲಕ ಸರಿಪಡಿಸಬೇಕು.

  2. ಶೇ ೧೦ ರ ಹೊಸ ಸವರ್ಣೀಯ ಬಡವರ ಮೀಸಲಾತಿಯನ್ನು ಇತ್ತೀಚಿಗೆ ಕೇಂದ್ರ ಸರಕಾರ ಜಾರಿಗೆ ತಂದಿದೆ . ನಮ್ಮ ರಾಜ್ಯದಲ್ಲಿ ಓಬಿಸಿ ಮೀಸಲಾತಿಯಲ್ಲಿ ಭೂ ಒಡೆತನದ ಜಾತಿಗಳಾದ ಲಿಂಗಾಯತ , ಒಕ್ಕಲಿಗ , ರೆಡ್ಡಿ , ಬಂಟ , ಕೊಡವ ಜಾತಿಗಳು ನುಸುಳಿವೆ . ಹೊರ ರಾಜ್ಯಗಳಲ್ಲಿ ಇಂತಹದೆ ಭೂ ಒಡೆತನದ ಜಾತಿಗಳೆನಿಸಿದ ಮರಾಠ , ಜಾಟ್ , ಪಟೇಲ್ ಇತ್ಯಾದಿ ಜಾತಿಗಳವರು ಓಬಿಸಿ ಮೀಸಲಾತಿಗಾಗಿ ನಿರಂತರ ಹೋರಾಡುತ್ತಿವೆ . ಇಂತಹ ಜಾತಿಗಳ ಬಡವರಿಗಾಗಿ ಕೇಂದ್ರ ಸರ್ಕಾರ ತಂದದ್ದು ಶೇ ೧೦ ರ ಮೀಸಲಾತಿ .
    ಈ ೧೦ % ಮೀಸಲಾತಿ ಪಟ್ಟಿಗೆ ಕರ್ನಾಟಕದ ಭೂ ಒಡೆತನದ ಜಾತಿಗಳನ್ನು ವರ್ಗಾಯಿಸಬೇಕು . ಕರ್ನಾಟಕದಲ್ಲಿ ಭೂ ಒಡೆತನದ ಜಾತಿಗಳನ್ನು ಓಬಿಸಿ ಪಟ್ಟಿಗೆ ತಂದಿರುವುದು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹ . ೧೦ % ಮೀಸಲಾತಿ ಯನ್ನು ಟೀಕಿಸುವವರು ಈ ದಿಕ್ಕಿನಲ್ಲಿ ಯೋಚಿಸುತ್ತಿಲ್ಲ. ವಾದಿರಾಜ್ , ಬೆಂಗಳೂರು .

LEAVE A REPLY

Please enter your comment!
Please enter your name here

- Advertisment -

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...