Homeಮೀಸಲಾತಿ: ಕಣ್ಣಗಾಯಕ್ಕೊಂದು ಕನ್ನಡಿಮೀಸಲಾತಿ ಪಡೆದವರೇ ಮೀಸಲಾತಿ ವಿರುದ್ಧ ನಿಂತರೆ ಸ್ವವಂಚನೆಯಲ್ಲವೇ?

ಮೀಸಲಾತಿ ಪಡೆದವರೇ ಮೀಸಲಾತಿ ವಿರುದ್ಧ ನಿಂತರೆ ಸ್ವವಂಚನೆಯಲ್ಲವೇ?

- Advertisement -
- Advertisement -

ದಲಿತ ಮತ್ತು ಹಿಂದುಳಿದ ಸಮುದಾಯಗಳಲ್ಲಿ ಈಗಾಗಲೇ ಹಲವರು ಮೀಸಲಾತಿ ಪಡೆದು ಉನ್ನತಮಟ್ಟದ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಕೆಲವರು ಘನತೆಯ ಬದುಕಿನ ಕಡೆ ಮುಖ ಮಾಡಿದ್ದಾರೆ. ಮೀಸಲಾತಿಯಿಂದಾಗಿಯೇ ನಾಲ್ಕಾರು ಜನರ ನಡುವೆ ಬೆರೆತು ಜೀವನ ಸಾಗಿಸಲು ಇವರಿಗೆ ಸಾಧ್ಯವಾಗಿದೆ. ತಮಗೆ ಏನೇ ಸೌಲಭ್ಯ ಸಿಕ್ಕಿದರೂ ಅದರ ಹಿಂದೆ ಈ ಮೀಸಲಾತಿ ಇದೆ ಎನ್ನುವುದು ಅವರ ಅಂತರಾಳ ಅರಿಯದ ಸಂಗತಿಯೇನೂ ಅಲ್ಲ. ಆದರೆ ಇವರಲ್ಲೇ ಇತ್ತೀಚೆಗೆ ಒಂದು ವರ್ಗ ಸದ್ದಿಲ್ಲದೆ ಎದ್ದು ಮೀಸಲಾತಿ ವಿರೋಧಿ ನೆಲೆಯಲ್ಲಿ ಕುಳಿತುಕೊಳ್ಳುತ್ತಿದೆ. ಇವರು ತಮ್ಮ ಸವಲತ್ತುಗಳಿಗಾಗಿ ಮೀಸಲಾತಿ ಒದಗಿದ ಮೇಲೆ ಅದನ್ನೇ ಕಾಲಕಸದಂತೆ ಒದೆಯುವುದರ ಕಡೆ ತಮ್ಮ ಚಿತ್ತವನ್ನು ಹರಿಯಬಿಡುತ್ತಿದ್ದಾರೆ. ಇಡೀ ಕುಟುಂಬದಲ್ಲಿ ಮೊದಲ ಬಾರಿಗೆ ಮೀಸಲಾತಿಯ ಫಲಾನುಭವದಿಂದ ಸಾಮಾಜಿಕ ಸ್ಥಾನಮಾನವನ್ನು ಎತ್ತರಕ್ಕೇರಿಸಿಕೊಂಡವರೂ ಸಹ ಇಂದು ಮೀಸಲಾತಿ ವಿರುದ್ಧವಾಗಿ ಮಾತನಾಡುತ್ತಾ ಅದನ್ನು ಇನ್ನಿತರರಿಗೆ ದಕ್ಕದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಇದು ವಿಪರ್ಯಾಸ!

ಇದನ್ನು ವಿಪರ್ಯಾಸ ಎಂದು ಕರೆಯುವ ಬದಲು ವಂಚನೆ ಎಂದು ಕರೆದರೇನೇ ಹೆಚ್ಚು ಸಮಂಜಸ ಎನಿಸುತ್ತದೆ. ಏಕೆಂದರೆ ಈಗಾಗಲೇ ಮೀಸಲಾತಿ ವಿರೋಧಿಗಳ ದೊಡ್ಡ ದಂಡೇ ಅಲ್ಲಲ್ಲಿ ನಿಂತು ವಿರೋಧಿ ದನಿಗೈಯುತ್ತಿದೆ. ಸಾಮಾಜಿಕ ನ್ಯಾಯದ ಪರಿಪಾಲನೆಗಾಗಿ ಬಂದ ಈ ಅವಕಾಶವನ್ನು ‘ಪ್ರತಿಭೆ’ ಎನ್ನುವ ಅಸ್ತ್ರ ಬಳಸಿ ಧೂಳೀಪಟ ಮಾಡಲು ಈ ವರ್ಗ ಮೊದಲಿನಿಂದಲೂ ಸಂಚು ರೂಪಿಸುತ್ತಲೇ ಬರುತ್ತಿದೆ. ‘ಪ್ರತಿಭೆ ಎನ್ನುವುದು ನಮ್ಮ ಸ್ವತ್ತು ಮಾತ್ರ’, ‘ನಮಗಲ್ಲದೆ ಪ್ರತಿಭೆ ಯಾರಿಗಿದೆ…..’ ‘ಈ ಮೀಸಲಾತಿಯಿಂದ ನಮ್ಮ ಸವಲತ್ತುಗಳನ್ನೆಲ್ಲ ಎಸ್ಸಿ, ಎಸ್ಟಿ, ಓಬಿಸಿಗಳು ಕಸಿದುಕೊಳ್ಳುತ್ತಿದ್ದಾರೆ’ ಎಂದು ಹುಯಿಲೆಬ್ಬಿಸುತ್ತಾ ಬಂದವರಿಗೆ ಈ ದೇಶದಲ್ಲಿನ ಜಾತಿವ್ಯವಸ್ಥೆಯಿಂದ ಅಸ್ವಸ್ಥಗೊಂಡ ಸಾಮಾಜಿಕ ನೆಲೆ ಅರ್ಥವಾಗುವುದಾದರೂ ಹೇಗೆ? ಅರ್ಥಮಾಡಿಕೊಳ್ಳಲು ಇವರು ಯಾವ ಅವಮಾನದ ನೋವನ್ನು ಅನುಭವಿಸಿದ್ದಾರೆ? ಅವಮಾನ, ಜಾತಿ ತಾರತಮ್ಯ, ಅಸ್ಪೃಶ್ಯತೆಯ ನೋವು ಇಲ್ಲದವರಿಗೆ ಸಹಜವಾಗೇ ಮೀಸಲಾತಿ ತಮ್ಮ ವಿರುದ್ಧವೆಂಬಂತೆ ಗೋಚರವಾಗುತ್ತದೆ.

ಇದರ ಜೊತೆಗೆ ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಅವರಿಗೆ ಮೀಸಲಾತಿ ಬೇಡವೇ? ಎನ್ನುವ ಅಸ್ತ್ರವನ್ನು ಆಗಾಗ್ಗೆ ಮೀಸಲಾತಿ ವಿರೋಧಿ ವರ್ಗ ಪ್ರಯೋಗಿಸುತ್ತಲೇ ಬರುತ್ತಿತ್ತು. ಇಂತವರಿಗೆ ಸೆಡ್ಡು ಹೊಡೆದು ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಅದು ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದ ಹುಟ್ಟಿದ್ದು. ಜಾತಿಯೇ ಪ್ರಧಾನ ಮಾನದಂಡವಾಗಿರುವ ಈ ದೇಶದಲ್ಲಿ ಜಾತಿ ಜನಸಂಖ್ಯಾವಾರು ಪ್ರಾತಿನಿಧ್ಯದ ಪ್ರಶ್ನೆಯನ್ನು ಈ ಮೀಸಲಾತಿಯ ಪ್ರಕ್ರಿಯೆ ಮುನ್ನಲೆಗೆ ಪದೇಪದೇ ತಂದಿದೆ. ಆ ಮೂಲಕ ಇಲ್ಲಿ ಎಲ್ಲರೂ ಸಮಾನವಾಗಿ ಬದುಕುವಂತಹ ವಾತಾವರಣ ಸೃಷ್ಟಿಗೊಳ್ಳುತ್ತದೆ. ಎಂದು ಗಟ್ಟಿಯಾಗಿ ಕೂಗಿ ಹೇಳಿ ಮೀಸಲಾತಿಯ ಪರವಾಗಿ ಮಾತನಾಡಬೇಕಿದ್ದ ಮೀಸಲಾತಿ ಪಡೆದ ಮನಸ್ಸುಗಳು ಅದರ ವಿರುದ್ಧ ನಿಂತಿರುವುದು ಚಾರಿತ್ರಿಕ ವ್ಯಂಗ್ಯದಂತೆ ಕಾಣುತ್ತದೆ. ಇವರ ಈ ಆತ್ಮದ್ರೋಹದ ಕೆಲಸದಿಂದಾಗಿಯೇ ಇಂದಿನ ಯುವ ಪೀಳಿಗೆ ಮೀಸಲಾತಿಯಿಂದ ಮೇಲೆದ್ದು ಬಂದೆ ಎಂದು ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಿದೆ. ಜೊತೆಗೆ ಮೀಸಲಾತಿ ನಮ್ಮ ಹಕ್ಕು ಎಂದು ಹೇಳಿಕೊಳ್ಳುವುದಕ್ಕೂ ಹಿಂದೆಮುಂದೆ ನೋಡುತ್ತಿದೆ.

ಇಂದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೆ ಬಂದ ತಕ್ಷಣವೇ ಇವರಿಗೆ ಮೀಸಲಾತಿ ಅನ್ನುವುದು ಅಪಥ್ಯವಾಗಿದೆ. ‘ಪ್ರತಿಭೆ ಇದ್ದವರು ಪಡೆದುಕೊಳ್ಳಲಿ’ ಎನ್ನುವ ಮಾತನ್ನು ಯಾವ ಎಗ್ಗಿಲ್ಲದೆ ಹರಿಯಬಿಡುತ್ತಿದ್ದಾರೆ. ಇನ್ನೂ ಮುಂದುವರಿದಂತೆ ‘ತಮ್ಮ ಮಕ್ಕಳು ಜನರಲ್ ಕೆಟಗರಿಯಲ್ಲಿ ಸೀಟನ್ನು ಪಡೆದುಕೊಂಡಿದ್ದಾರೆ ಅದಕ್ಕೆ ಮೀಸಲಾತಿಯೇತರ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎನ್ನುವ ಅರೆತಿಳಿವಳಿಕೆಯನ್ನೂ ಬಿತ್ತುತ್ತಿದ್ದಾರೆ. ಇಷ್ಟೇ ಅಲ್ಲ, ತಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಹೂಂಗುಟ್ಟಲು ಕಲಿತ ‘ಮೀಸಲಾತಿಯಿಂದ ಜಾತಿವ್ಯವಸ್ಥೆ ಹಾಗೇ ಉಳಿಯುತ್ತದೆ’, ‘ಇಲ್ಲಿ ಜಾತಿಯ ದೌರ್ಜನ್ಯ ಎಲ್ಲಿದೆ..’ ‘ಇಲ್ಲಿ ಎಲ್ಲರೂ ಸಮಾನವಾಗಿಯೇ ಬದುಕುತ್ತಿದ್ದೇವೆ…’ ‘ಹಿಂಗಿರುವವರಿಗೆ ಮೀಸಲಾತಿ ಏಕೆ ಬೇಕು’? ಎನ್ನುವ ಆಲೋಚನೆಗಳಿಗೆ ಇವರೂ ಕೂಡ ಪುಷ್ಟಿಯನ್ನು ಒದಗಿಸುತ್ತಿದ್ದಾರೆ. ಮೀಸಲಾತಿಯಿಂದ ತಾವು ಆರ್ಥಿಕವಾಗಿ ಮೇಲೆ ಬಂದವರಾದರೂ ತಮ್ಮ ಮಕ್ಕಳು ಮತ್ತು ಸಮುದಾಯದ ಮಕ್ಕಳನ್ನು ಮೀಸಲಾತಿಯನ್ನು ಕೀಳರಿಮೆ ಎಂದು ಕಾಣುವ ಮನಸ್ಥಿತಿಯಿಂದ ಹೊರತರಲು ಆಗಿಲ್ಲ ಮತ್ತು ಆಗುತ್ತಿಲ್ಲ.

ಶತಮಾನಗಳ ಉದ್ದಕ್ಕೂ ಅಘೋಷಿತ ಮೀಸಲಾತಿಯನ್ನು (ಸವಲತ್ತುಗಳನ್ನು) ಪಡೆದು ನಿರಂತರ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾ ಬಂದವರ ಮಾತುಗಳನ್ನು ಬ್ರಿಟಿಷ್ ಮತ್ತು ಸ್ವತಂತ್ರ ಭಾರತದಲ್ಲಿ ಸಂವಿಧಾನಬದ್ಧವಾಗಿ ಪಡೆದ ಈ ಮೀಸಲಾತಿ ಫಲಾನುಭವಿಗಳು ಚಾಚೂತಪ್ಪದೆ ಕೇಳುತ್ತಿದ್ದಾರೆ. ಆದರೆ ತಮ್ಮದೇ ಸಮುದಾಯದವರ ಆರ್ತನಾದಕ್ಕೆ ಕಿವುಡಾಗಿದ್ದಾರೆ. ಅವರು ಹೇಳುವ ಸಂಸ್ಕೃತಿ, ಪರಂಪರೆ ಇತ್ಯಾದಿಗಳನ್ನು ಉರು ಹೊಡೆದು ಅವುಗಳೇ ನಮ್ಮ ಜೀವನದ ಧ್ಯೇಯ ಎನ್ನುವಂತೆ ಬೀಗುತ್ತಿದ್ದಾರೆ. ಇಂತವರಿಗೆ ಇಲ್ಲಿ ಇನ್ನೂ ಜಾತಿವ್ಯವಸ್ಥೆ ಜೀವಂತವಾಗಿದೆ ಮತ್ತು ಕ್ರೂರವಾಗಿದೆ, ಇಲ್ಲಿ ಅಸಮಾನತೆ ಎನ್ನುವುದು ನಿರಂತರ ಪ್ರವಾಹವಾಗಿದೆ, ಉದ್ಯೋಗಗಳ ಸೃಷ್ಟಿ ನಡೆಯುತ್ತಿಲ್ಲ, ಎಲ್ಲ ಸರ್ಕಾರಿ ಉದ್ದಿಮೆಗಳಲ್ಲಿ ಬಹುಪಾಲು ಹುದ್ದೆಗಳನ್ನು ಮೇಲ್ಜಾತಿ ಮತ್ತು ಮೇಲ್ವರ್ಗದವರೇ ಪಡೆದುಕೊಂಡಿದ್ದಾರೆ, ಖಾಸಗಿ ಉದ್ದಿಮೆಗಳಲ್ಲಿ ನಮ್ಮಂತವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟಿದೆ ಎಂಬ ಸತ್ಯಸಂಗತಿ ಅರ್ಥವಾಗಬೇಕಿದೆ. ಇಲ್ಲದಿದ್ದರೆ ಇವರು ಸಾಮಾಜಿಕ ನ್ಯಾಯಕ್ಕೆ ಮಗ್ಗಲುಮುಳ್ಳಾಗಿ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲ.

‘ಮೇಲ್ಜಾತಿಯ ಬಡಮಕ್ಕಳು ಪ್ರತಿಭೆ ಇದ್ದರೂ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ’ ಎನ್ನುವವರು ಕೇವಲ ಜಾತಿಯಿಂದಾಗಿ ಇಂದೂ ಕೂಡ ಮಾನಸಿಕ ಯಾತನೆಯನ್ನು ಬಡತನದೊಂದಿಗೆ ಅನುಭವಿಸಿ ನರಳುವವರ ಪಾಡನ್ನೂ ಅರ್ಥಮಾಡಿಕೊಳ್ಳಬೇಕಿದೆ. ‘ಸರ್ವರೂ ಸಮಾನರು’ ಎಂದಾದ ತಕ್ಷಣವೇ ಈ ಮೀಸಲಾತಿ ಎನ್ನುವ ಪದ ಬುಡಸಮೇತ ಕಳಚಿ ಬೀಳಲಿ. ಅಲ್ಲಿಯವರೆಗೆ ಮಹಿಳೆಯರಿಗೆ, ಜಾತಿಯಿಂದ ನೋವುಂಡರಿಗೆ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ, ಪ್ರಾದೇಶಿಕ ಭಾಷೆಯ ಮಡಿಲನ್ನೇ ಆಶ್ರಯಿಸಿರುವವರಿಗೆ, ವಿಶೇಷಚೇತನರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿಯ ಇನ್ನಷ್ಟು ಶೇಕಡತೆ ವಿಸ್ತರಿಸುವಂತಾಗಲಿ. ಸಮತೆಯ ಆಶಯ ಹೊದ್ದು ನಿಂತಿರುವ ಈ ಮೀಸಲಾತಿ ಖಾಸಗಿ ಕ್ಷೇತ್ರದಲ್ಲೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲಿ. ಇದಕ್ಕೆ ಆಳುವ ಸರ್ಕಾರಗಳು ಮುನ್ನುಡಿ ಬರೆಯುವಂತಾಗಲಿ. ಈ ಧ್ಯೇಯವನ್ನು ಎಸ್ಸಿ, ಎಸ್ಟಿ, ಓಬಿಸಿ ಸಮುದಾಯಗಳಲ್ಲಿ ಮೀಸಲಾತಿ ಪಡೆದು ಅದರ ವಿರುದ್ಧವೇ ಮಾತನಾಡುತ್ತಿರುವವರು ಹೊರುವಂತಾಗಲಿ. ಏಕೆಂದರೆ ಜಾತಿಕಾರಣಕ್ಕೆ ಮೀಸಲಾತಿ ನೀಡುವುದು ಸಲ್ಲದು ಎಂದು ಹುಯಿಲೆಬ್ಬಿಸುತ್ತಿದ್ದ ಮನಸುಗಳಿಗೆ ಇಂದು ಕಿಂಚಿತ್ತು ಹೋರಾಟವಿಲ್ಲದೆ ಕೇವಲ ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ಸಿಕ್ಕಿದೆ. ಅದೂ ಸಹ ಬರೋಬ್ಬರಿ 10%.
ಡಾ. ಹೆಚ್.ಡಿ. ಉಮಾಶಂಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. 15% sc ಮೀಸಲಾತಿಯೊಳಗೆ ಈಗ ಹಣಕಾಸು ಮಾನದಂಡ ಇಲ್ಲ. ಹೀಗಾಗಿ,ಇದರಲ್ಲಿ ಶೇ.೨-೩ ರಶ್ಟನ್ನು ಈಗಾಗಲೇ ಮೀಸಲಾತಿಪಡೆದು ಮೇಲೆ ಬಂದಿರುವ ಎರಡನೇ ಪೀಳಿಗೆಯವರು,ಆದಾಯತೆರಿಗೆ ಕಟ್ಟುವವರು ಮುಂತಾದವರು ಇದರೊಳಗೆ ಸ್ಪರ್ದಿಸಬೇಕು.
    ಇನ್ನಳಿದ ಶೇ೧೨-೧೩ ರಶ್ಟನ್ನು ಈವರೆಗೂ ಮೀಸಲಾತಿ ಸವಲತ್ತು ಪಡೆಯದ ಮೊದಲ ಪೀಳಿಗೆಯವರಿಗೆ ಮೀಸಲಿಡಬೇಕು.ಇದು st ಗುಂಪಿಗೂ ಆಗಬೇಕು.
    ಒಂದು ಸಲ ಮೀಸಲಾತಿ ಪಡೆದ obc ಗುಂಪಿನ ಎರಡನೇ ಪೀಳಿಗೆಯವರಿಗೆ ಮೀಸಲಾತಿ ಸವಲತ್ತು ಇಲ್ಲದ್ದರಿಂದ ಹಾಗೆ ಮಾತಾಡುತ್ತಾರೆ.
    ಹಲಪಂಗಡಗಳನ್ನು ಒಂದೇ ಮೀಸಲಾತಿ ಗುಂಪಿಗೆ ಸೇರಿಸಿರುವುದರಿಂದ ಉಂಟಾಗಿರುವ ಗೋಜಲನ್ನು ಒಳಮೀಸಲಾತಿ ಕೊಡುವುದರ ಮೂಲಕ ಸರಿಪಡಿಸಬೇಕು.

  2. ಶೇ ೧೦ ರ ಹೊಸ ಸವರ್ಣೀಯ ಬಡವರ ಮೀಸಲಾತಿಯನ್ನು ಇತ್ತೀಚಿಗೆ ಕೇಂದ್ರ ಸರಕಾರ ಜಾರಿಗೆ ತಂದಿದೆ . ನಮ್ಮ ರಾಜ್ಯದಲ್ಲಿ ಓಬಿಸಿ ಮೀಸಲಾತಿಯಲ್ಲಿ ಭೂ ಒಡೆತನದ ಜಾತಿಗಳಾದ ಲಿಂಗಾಯತ , ಒಕ್ಕಲಿಗ , ರೆಡ್ಡಿ , ಬಂಟ , ಕೊಡವ ಜಾತಿಗಳು ನುಸುಳಿವೆ . ಹೊರ ರಾಜ್ಯಗಳಲ್ಲಿ ಇಂತಹದೆ ಭೂ ಒಡೆತನದ ಜಾತಿಗಳೆನಿಸಿದ ಮರಾಠ , ಜಾಟ್ , ಪಟೇಲ್ ಇತ್ಯಾದಿ ಜಾತಿಗಳವರು ಓಬಿಸಿ ಮೀಸಲಾತಿಗಾಗಿ ನಿರಂತರ ಹೋರಾಡುತ್ತಿವೆ . ಇಂತಹ ಜಾತಿಗಳ ಬಡವರಿಗಾಗಿ ಕೇಂದ್ರ ಸರ್ಕಾರ ತಂದದ್ದು ಶೇ ೧೦ ರ ಮೀಸಲಾತಿ .
    ಈ ೧೦ % ಮೀಸಲಾತಿ ಪಟ್ಟಿಗೆ ಕರ್ನಾಟಕದ ಭೂ ಒಡೆತನದ ಜಾತಿಗಳನ್ನು ವರ್ಗಾಯಿಸಬೇಕು . ಕರ್ನಾಟಕದಲ್ಲಿ ಭೂ ಒಡೆತನದ ಜಾತಿಗಳನ್ನು ಓಬಿಸಿ ಪಟ್ಟಿಗೆ ತಂದಿರುವುದು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹ . ೧೦ % ಮೀಸಲಾತಿ ಯನ್ನು ಟೀಕಿಸುವವರು ಈ ದಿಕ್ಕಿನಲ್ಲಿ ಯೋಚಿಸುತ್ತಿಲ್ಲ. ವಾದಿರಾಜ್ , ಬೆಂಗಳೂರು .

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...