Homeಕರ್ನಾಟಕಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

- Advertisement -
- Advertisement -

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇಬ್ಬರು ಧಾರ್ಮಿಕ ಮೂಲಭೂತವಾದಿಗಳು ರಾಜಸ್ಥಾನದಲ್ಲಿ ಹಿಂದೂ ಟೈಲರ್‌ ಒಬ್ಬರನ್ನು ಭೀಕರವಾಗಿ ಕೊಂದ ಘಟನೆಯ ಕುರಿತು, ಪಬ್ಲಿಕ್‌ ಟಿ.ವಿ. ನಡೆಸುತ್ತಿದ್ದ ಜನಾಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಹೀಗೆ ವಿಷಕಾರಿಯಾಗಿ ಮಾತನಾಡಿದ್ದಾರೆ. ಈ ಪ್ರಚೋದನೆಯನ್ನು ಕಟುವಾದ ಪದಗಳಿಂದ ಖಂಡಿಸಬೇಕಿದ್ದ ಪಬ್ಲಿಕ್‌ ಟಿ.ವಿ. ನಿರೂಪಕ ಅರುಣ್‌ ಬಡಿಗೇರ್‌ ನಗುನಗುತ್ತಾ ಪ್ರತಿಕ್ರಿಯೆ ನೀಡುತ್ತಾ, “ಹೀಗೆಲ್ಲ ಮಾತನಾಡಬಾರದು” ಎಂದು ಸಲಹೆ ನೀಡುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದಾವಣಗೆರೆಯಿಂದ ಪಬ್ಲಿಕ್ ಟಿ.ವಿ.ಗೆ ಕರೆ ಮಾಡಿದ್ದ ವೀರಣ್ಣ ಹಾಗೂ ನಿರೂಪಕ ಅರುಣ್‌ ಬಡಿಗೇರ್‌ ನಡುವಿನ ಸಂಭಾಷಣೆ ಹೀಗಿತ್ತು:

ವೀರಣ್ಣ: ಮುಸಲ್ಮಾನರಿಗೆ ಯಾವುದೇ ರೀತಿಯ ಬೆಂಬಲ ಕೊಡಬಾರದು. ಪಬ್ಲಿಕ್‌ ಟಿ.ವಿ.ಗೆ ಮುಸಲ್ಮಾರನ್ನು ಕರೆಸಿ ಇದು ಮಾಡುತ್ತೀರಲ್ಲ, ಅದನ್ನು ಬಿಡಬೇಕು.

ಅರುಣ್ ಬಡಿಗೇರ್‌: ಅವರನ್ನು ಕರೆಸಲೇಬಾರದು ಅಂತೀರಾ?

ಇದನ್ನೂ ಓದಿರಿ: ‘ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

ವೀರಣ್ಣ: ಕರೆಸಲೇಬಾರದು ಅವರನ್ನು. ಅವರೊಂದು ಇವರೊಂದು ಹೇಳುತ್ತಾರೆ. ಅವರು ಬಾಲ ಬಿಚ್ಚದಂತೆ ನೋಡಿಕೊಳ್ಳಬೇಕು. ಅವರಿಗೆ ಸ್ಥಾನ ಮಾನ ಕೊಡಬಾರದು.

ಬಡಿಗೇರ್:  ಅವರು ಬಾಲ ಬಿಚ್ಚದಂತೆ ನೋಡಿಕೊಳ್ಳಬೇಕು.

ವೀರಣ್ಣ: ಅವರನ್ನು ಕರೆಸಲೇಬಾರದು. ಅವರಿಗೆ ಭಾರತ ದೇಶದಲ್ಲಿ ಯಾವುದೇ ಸ್ಥಾನಮಾನ ಕೊಡಬಾರದು. ಅನ್ನ ನೀರು ಹಾಕಿರುವವರು ನಾವು. ನಮ್ಮಮೇಲೆಯೇ ಬಾಲ ಬಿಚ್ಚುತ್ತಿದ್ದಾರೆ. ಫಸ್ಟ್‌ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಗುಂಡಿಕ್ಕಿ ಹೊಡೆದರೆ ಇವರೆಲ್ಲ ಸುಮ್ಮನಾಗುತ್ತಾರೆ.

(ಈ ಮಾತಿಗೆ ನಗುತ್ತಾ ಬಡಿಗೇರ್‌ ಪ್ರತಿಕ್ರಿಯೆ ನೀಡುತ್ತಾರೆ)

ಬಡಿಗೇರ್‌: ಸಾರ್‌, ನಾಯಕರ ವಿಚಾರದಲ್ಲಿ ಹಾಗೆಲ್ಲ ಮಾತನಾಡಬಾರದು. ಅವರ ಮೇಲೆ ಕೋಪ ಇದೆ ಎಂದು ಹೀಗೆಲ್ಲ ಹೇಳಬಾರದು. ಹಂತಕರಿಗೂ ನಿಮಗೂ ವ್ಯತ್ಯಾಸ ಏನಿದೆ?

ವೀರಣ್ಣ: ನಿನ್ನೆಯಿಂದ ಇವರ್‍ಯಾಕೆ ಮಾತನಾಡಿಲ್ಲ?

ಬಡಿಗೇರ್‌: ಭಿನ್ನಾಭಿಪ್ರಾಯ ಇರಲಿ. ಆದರೆ ನಮಗೂ ಅವರಿಗೂ ವ್ಯತ್ಯಾಸ ಇರುತ್ತದೆಯೇ? ತಮ್ಮ ಪಕ್ಷದಲ್ಲಿರುವ ವೋಟುಗಳಿಗೆ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಾಗೆಂದು ಗುಂಡು ಹೊಡೆದು ಸಾಯಿಸಿ ಎಂದರೆ? ಇದು ಒಳ್ಳೆಯದಲ್ಲ.

ವೀರಣ್ಣ: ಒಂದು ಕಲ್ಲಂಗಡಿಯನ್ನು ಹೊಡೆದಿದ್ದಕ್ಕೆ ದಂಡ ಕಟ್ಟಿಸಲಿಲ್ಲವೇ?

ಬಡಿಗೇರ್‌: ಹೂಂ ಹೂಂ, ಹಾ… ಹಾ.. ಓಕೆ.

ವೀರಣ್ಣ: ಅವರ ಬೆಂಬಲದಿಂದಾಗಿಯೇ ನಿಗುರುತ್ತಿದ್ದಾರೆ.

ಬಡಿಗೇರ್‌: ಅವರನ್ನು ಬೆಂಬಲಿಸುವುದಕ್ಕಾಗಿಯೇ ಹೀಗೆ ಮಾಡುತ್ತಿದ್ದಾರೆ ಅಂತಾನಾ?

ವೀರಣ್ಣ: ಕರೆಕ್ಟ್‌ ಸರ್‌‌.

ಬಡಿಗೇರ್‌: ಓಕೆ ಓಕೆ

ವೀರಣ್ಣ: ಅವರನ್ನು ಫಸ್ಟ್‌ ನಿರ್ನಾಮ ಮಾಡಿದರೆ ಇವರೆಲ್ಲ ಪ್ಲಾಪ್‌ ಆಗುತ್ತಾರೆ.

ಬಡಿಗೇರ್‌: ಧನ್ಯವಾದಗಳು ವೀರಣ್ಣನವರೇ ನಮ್ಮ ಜೊತೆ ಮಾತನಾಡಿದ್ದಕ್ಕೆ…

(ಮುಂದಿನ ಕರೆಗೆ ಹೋಗುತ್ತಾರೆ)

ವರದಿಗಳಲ್ಲಿ ಪೂರ್ವಗ್ರಹ

ಕೋಮುದ್ವೇಷ ಪ್ರಕರಣಗಳಲ್ಲಿ ಮಾಧ್ಯಮಗಳು ಪಕ್ಷಪಾತಿಯಾಗಿ, ಪೂರ್ವಗ್ರಹ ಪೀಡಿತವಾಗಿ ವರದಿ ಮಾಡುವುದು ಇದು ಮೊದಲೇನಲ್ಲ. ಸುಳ್ಳುಗಳನ್ನು ವರದಿ ಮಾಡುವುದು ನಿಂತು ಹೋಗುವುದೂ ಇಲ್ಲ. ಯಾರೋ ಒಬ್ಬಾತ ಮಾಡುವ ತಪ್ಪನ್ನು ಇಡೀ ಸಮುದಾಯದ ತಲೆಗೆ ಕಟ್ಟುವ ಕೆಲಸವನ್ನು ಯಾವುದೇ ಮುಜುಗರವಿಲ್ಲದೆ ಮಾಧ್ಯಮಗಳು ಮಾಡುತ್ತಲೇ ಬಂದಿವೆ. ಅದು ರಾಜಸ್ಥಾನದ ಘಟನೆಯಲ್ಲೂ ಸಾಬೀತಾಗಿದೆ.

ಈ ಘಟನೆಯನ್ನು ಮುಸ್ಲಿಂ ಸಮುದಾಯ ಬಲವಾಗಿ ಖಂಡಿಸಿದೆ, ಕೊಲೆಗೈದವರನ್ನು ಗಲ್ಲಿಗೆ ಹಾಕುವಂತೆ ಒತ್ತಾಯಿಸಿದೆ. ಇಸ್ಲಾಂ ಯಾವುದೇ ಕಾರಣಕ್ಕೂ ಇಂತಹ ಕೃತ್ಯಕ್ಕೆ ಆಸ್ಪದ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಘಟನೆಯನ್ನು ವಿರೋಧಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಆದಿಯಾಗಿ ಅನೇಕ ರಾಜಕಾರಣಗಳು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಎಡಪರ ಚಿಂತಕರು, ಬಲಪಂಥೀಯರು, ಪ್ರಗತಿಪರರು- ಎಲ್ಲರೂ ಈ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಮುಸ್ಲಿಂ ಸಮುದಾಯದ ಮೇಲೆ, ಬಿಜೆಪಿ ಹಾಗೂ ಸಂಘಪರಿವಾರೇತರ ನಾಯಕರ ಮೇಲೆ ವಿನಾಕಾರಣ ವಿಷಕಾರಲಾಗುತ್ತಿದೆ.

ಎಲ್ಲ ಜಾತಿ, ಜನಾಂಗದ ಜನರು ನೀಡುವ ತೆರಿಗೆಯಲ್ಲಿ ಸರ್ಕಾರಗಳು ನಡೆಯುತ್ತಿವೆ. ಆದರೆ ಕನಿಷ್ಠ ಸಾಂವಿಧಾನಿಕ ಕಾಳಜಿ ಇಲ್ಲದ ಮಾಧ್ಯಮಗಳು ಏಕಿಷ್ಟು ದ್ವೇಷವನ್ನು ಕಾರುತ್ತಿವೆ? ಘಟನೆಯನ್ನು ಎಲ್ಲ ವರ್ಗದ ಜನರು ಖಂಡಿಸಿದ್ದರೂ ಅದನ್ನು ಇಂಥವರು ಖಂಡಿಸಿಯೇ ಇಲ್ಲ ಎಂದು ಬಿಂಬಿಸುವ ಕೆಲಸವನ್ನು ಮಾಡುತ್ತಿರುವುದು ಏತಕ್ಕೆ? ಮಾಧ್ಯಮಗಳು ಈ ಸಾವಿನಲ್ಲಿ ರಾಜಕೀಯ ಹಿತಾಸಕ್ತಿ ಮೆರೆಯುತ್ತಿವೆಯೇ? ಎಂಬ ಪ್ರಶ್ನೆಗಳು ಎದ್ದಿವೆ.

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದ ವ್ಯಕ್ತಿಯ ಮಾತನ್ನು ಹೆಡ್‌ಲೈನ್‌ ಮಾಡಿ ಫೇಸ್‌ಬುಕ್‌ ಪೋಸ್ಟ್ ಮಾಡಿರುವ ಪಬ್ಲಿಕ್ ಟಿ.ವಿ. ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿರಿ: ವೈಯಕ್ತಿಕ ದ್ವೇಷದ ಪ್ರಕರಣಕ್ಕೆ ಕೋಮು ಆಯಾಮ ನೀಡಿ ‘ಮುಸ್ಲಿಂ ದ್ವೇಷ’ ಹರಡಿದ ದಿಗ್ವಿಜಯ & ಪಬ್ಲಿಕ್ ಟಿವಿ

“ಫೇಸ್ಬುಕ್ ಪೇಜ್‌ಗಳಲ್ಲಿ ತಲೆಕೆಟ್ಟವರಂತೆ ಕಾಮೆಂಟ್ ಮಾಡುವವರ ಅಭಿಪ್ರಾಯಗಳನ್ನೇ ಹೆಡ್ಲೈನ್ ಮಾಡುವ ಹಿಂದಿನ ಉದ್ದೇಶ ಏನಿತ್ತು? ಅಂತಾ harmful ಅಲ್ಲದ ಸಣ್ಣಪುಟ್ಟ ಪೋಸ್ಟ್‌ಗಳಿಗೂ ನೋಟೀಸ್ ಕೊಟ್ಟು ಬ್ಲಾಕ್ ಮಾಡುವ Facebook ಸಂಸ್ಥೆ community standard ನ್ನು ಉಲ್ಲಂಘಿಸಿದ ಅಡಿಯಲ್ಲಿ ನೋಟಿಸ್ ಯಾಕೆ ಜಾರಿ ಮಾಡಿಲ್ಲ? ಹೋಗಲಿ ಕಾಂಗ್ರೆಸ್ ಪಕ್ಷದ ಲೀಗಲ್ ಸೆಲ್ ಮತ್ತು IT Cell ಗಳು ನಿಜವಾಗಿಯೂ ಜೀವಂತವಾಗಿದ್ದಾವಾ? ಯಾವುದೇ ಪಕ್ಷದ ಮುಖಂಡರಾದರೂ ಈ ರೀತಿಯ ಹೆಡ್ಲೈನ್ ಕೊಟ್ಟು ಸಾರ್ವಜನಿಕವಾಗಿ ಎಂತಹ ಅಭಿಪ್ರಾಯ ಮೂಡಿಸುತ್ತಿದ್ದರೆ? ಇದರಿಂದ ಮುಂದಾಗಬಹುದಾದ ಅಪಾಯಗಳೇನು ಎಂಬ ಕನಿಷ್ಟ ಅರಿವಾದರೂ ಇದೆಯೇ? ಈ ಮೂಲಕ ಪಬ್ಲಿಕ್ ಟಿವಿ ಸಮಾಜಕ್ಕೆ ಯಾವ ಸಂದೇಶ ಕೊಡ್ತಿದೆ?” ಎಂದು ಸಾಮಾಜಿಕ ಕಾರ್ಯಕರ್ತ ಪ್ರಗತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಮಾಧ್ಯಮದವರು ಇಂದು ಕಿರುಚುತ್ತಾ ಕೂಗುತ್ತಾ ಮತಾಂಧ ಶಕ್ತಿಗಳನ್ನು ಪ್ರೇರೇಪಿಸುವ ಕೆಲಸ ಮಾಡುತ್ತಿರುವುದಕ್ಕೆ ಸ್ಪಷ್ಟ ಉದಾರಹಣೆ ಇದು. ಸಮಾಜದ ಶಾಂತಿ ಕೆಡಿಸಲೆಂದೇ ಕೆಲ ಮಾಧ್ಯಮಗಳು ಇಂದು ಕೆಲಸ ನಿರ್ವಹಿಸುತ್ತಿರುವಂತಿದೆ. ಜನರು ತಪ್ಪು ಮಾತನಾಡಿದಾಗ ತಿದ್ದಬೇಕಾದ ಮಾಧ್ಯಮದವರು ಇಂತಹ ತಲೆ ಬರಹ ಕೊಟ್ಟಿರುವುದು ಅವರ ಹಿಂಸಾ ವಿರೋಧಿ ಕೌರ್ಯ ಮನಸ್ಥಿತಿಯನ್ನು ತೋರಿಸಿದೆ. ನಿಸ್ಸಂಶಯವಾಗಿ ಇದು ಮಾಧ್ಯಮ ಭಯೋತ್ಪಾದಕತೆ” ಎಂದು ಲೇಖಕಿ ಚೈತ್ರಿಕಾ ಹರ್ಗಿ ಅಭಿಪ್ರಾಯಪಟ್ಟಿದ್ದಾರೆ.

“ಹಿಂದೂ ಮುಸ್ಲಿಂ ಸಂಘರ್ಷದ ಸೂಕ್ಷ್ಮತೆ ಅರಿವಿದ್ದ ಮಾಧ್ಯಮ ಇಂತಹ ವಿಚಾರದಲ್ಲಿ ಜನಾಭಿಪ್ರಾಯ ಕೇಳುವ ಕೆಲಸ ಮಾಡಲ್ಲ. ತಲೆಕೆಟ್ಟ ಒಬ್ಬ ಹೀಗೆ ವಿರೋಧ ಪಕ್ಷದ ನಾಯಕರನ್ನು ಕೊಲ್ಲಬೇಕು ಎಂದು ಹೇಳಿದಾಗ ಆ ಕರೆ ಮಾಡಿದ ವ್ಯಕ್ತಿಗೆ ನೋಡಪ್ಪ ಹೀಗೆ ಹೇಳೋದು ಕಾನೂನಿನ ಉಲ್ಲಂಘನೆ, ಅದು ಮತ್ತಷ್ಟು ಸಂಘರ್ಷಕ್ಕೆ ಪ್ರಚೋದನೆ ಕೊಟ್ಟಂತೆ ಎಂದು ಮನವರಿಗೆ ಮಾಡಬೇಕಿತ್ತು. ಆದರೆ ಆತನ‌ ಹೇಳಿಕೆಯನ್ನೇ ಹೆಡ್ಡಿಂಗ್ ಹಾಕಿ ಪ್ರಸಾರ ಮಾಡುವ ಮೂಲಕ ಚಾನೆಲ್ ಆತನ ಹೇಳಿಕೆಗೆ ಬೆಂಬಲ ಸೂಚಿಸಿದೆ. ಈಗ ಈ ಚಾನೆಲ್ ವಿರುದ್ಧ ಪೊಲೀಸ್ ಇಲಾಖೆಯೇ ಕೇಸು ದಾಖಲಿಸಬೇಕು. ಕಾಂಗ್ರೆಸ್ ಕೂಡಾ ದೂರು ಕೊಡಬೇಕು. ಈ ನಾಯಕರ ಕೊಲೆ ಆದರೆ ಅದರ ಹೊಣೆ ರಂಗನಾಥ ಮತ್ತು ಬಡಿಗೇರ ಹೊರುತ್ತಾರೆಯೇ? ಹಿಂದೆ ಕಲಬುರ್ಗಿಯವರ ವಿಚಾರದಲ್ಲಿ ಮಾಧ್ಯಮಗಳ ವರದಿ ಕೊಲೆಗೆ ಪ್ರೇರಣೆ ನೀಡಿದ್ದವು ಎಂಬ ಆರೋಪ ಕೇಳಿಬಂದಿತ್ತು” ಎಂದು ಹಿರಿಯ ಪತ್ರಕರ್ತೆ ಹೇಮಾ ವೆಂಕಟ್‌‌ ಎಚ್ಚರಿಸಿದ್ದಾರೆ.

“ಕೆಲ ತಿಂಗಳ ಹಿಂದೆ ಅರುಣ್ ಬಡಿಗೇರ ಮತ್ತು ರಂಗನಾಥರ ವಿರುದ್ಧ ಜಾಮೀನುರಹಿತ ಸೆಕ್ಷನ್ ಅಡಿ FIR ದಾಖಲಾಗಿತ್ತು. ಅದರ ಕತೆ ಏನಾಯ್ತು? ಮುಸ್ಲಿಂ ವ್ಯಕ್ತಿಗಳು ಹಿಂದೂಗಳನ್ನು ಕೊಂದಾಗ ಕೆರಳುವ ಹಿಂದೂ ಸಮಾಜ, ಹಿಂದೂಗಳು ಮುಸ್ಲಿಮರ ಕೊಲೆ ಮಾಡಿದಾಗ ಅವರಿಗೆ ಷಹಬ್ಬಾಸ್ ಹೇಳುವುದು, ಸನ್ಮಾನ ಮಾಡುವುದನ್ನು ಯಾಕೆ ವಿರೋಧಿಸಲ್ಲ? ನರಗುಂದರ ಮುಸ್ಲಿಂ ಯುವಕನನ್ನು ಬಜರಂಗಿಗಳು ಕೊಂದರಲ್ಲ, ಧರ್ಮಸ್ಥಳದ ದಲಿತ ದಿನೇಶನನ್ನು ಬಜರಂಗಿಯೊಬ್ಬ ಕೊಂದನಲ್ಲ, ಬಜರಂಗಿ ಶಂಭೂಲಾಲ್ ಕೇಸರಿಶಾಲು, ನಾಮ‌ ಹಾಕೊಂಡು ಮುಸ್ಲಿಂ ಯುವಕನಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಅದರ ವಿಡಿಯೋ ಮಾಡಿ ಸಂಭ್ರಮಿಸಿದನಲ್ಲ ಆಗ ಟಿವಿಯವರು ಜನಾಭಿಪ್ರಾಯ ಕೇಳಿದರೇ? ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕೊಲೆಯಾದರೆ ಯಾರು ಜವಾಬ್ದಾರರು?” ಎಂದು ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಳ್ಳಂಗಡಿ ಹೊಡೆದಾಗ ಬಾಯಿ ಬಡಿದುಕೊಂಡ ಬೋಳಿಮಕ್ಕಳು ,ಕನ್ಹಯ್ಯ ಕೊಲೆ ಆದಾಗ ಬಾಯಿ ಬಿಡದೇ ಇರೋ ಹಂದಿ ಮಕ್ಕಳನ್ನು ಇನ್ನೇನು ಮಾಡಬೇಕು ಬೇಸಡಿಕೆಗಳೇ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...