Homeಮುಖಪುಟಯಾವ ಕಥೆ ಹೇಳಬೇಕು? ಇನ್ನಷ್ಟು ಪ್ರಶ್ನೆಗಳು

ಯಾವ ಕಥೆ ಹೇಳಬೇಕು? ಇನ್ನಷ್ಟು ಪ್ರಶ್ನೆಗಳು

- Advertisement -
- Advertisement -

“ಕುದುರೆಯನ್ನೇರಿ ರಾಜಕುಮಾರಿಗಾಗಿ ಓಡೋಡಿ ಬರುತ್ತಿರುವ ರಾಜಕುಮಾರ, ರಾಜ್ಯ, ರಾಜ ಮತ್ತು ರಾಣಿಯವರ ಕಥೆಯನ್ನೇಕೆ ನನಗೆ ಹೇಳಲಾಗುವುದಿಲ್ಲ” ಒರ್ಹಾನ್ ಪಾಮುಕ್ ಹೀಗೆ ತಮ್ಮ ಒಂದು ಪುಸ್ತಕದಲ್ಲಿ ವಿಷಾದಿಸುತ್ತಾರೆ.

“ಯುದ್ಧದ ಸಮಯದಲ್ಲಿ ಪ್ರೀತಿಯ ಕಥೆಯನ್ನು ಹೇಳು, ಶಾಂತಿಯ ಸಮಯದಲ್ಲಿ ಯುದ್ಧದ ಕಥೆಯನ್ನು” ಯಾರೋ ಹೇಳಿದ್ದು.

“ಮನಸ್ಸಿಗೆ ನೆಮ್ಮದಿ (ಸುಕೂನ್) ಸಿಗುತ್ತೆ” ಉತ್ತರಪ್ರದೇಶದಲ್ಲಿ ನಿಜವಾದ ರೇಪ್ ವೀಡಿಯೊಗಳನ್ನು ಮಾರುವ ಅಂಗಡಿಗೆ ಬಂದ ಗ್ರಾಹಕನೊಬ್ಬ ಹೇಳಿದ್ದು.

“ನನಗೆ ಕಥೆ ಇಷ್ಟವಾಯಿತು ಎಂದರೆ ಸಾಕಲ್ಲ, ಅದನ್ನಿಟ್ಟುಕೊಂಡು ಸಿನೆಮಾ ಮಾಡಲು ಏನು ತೊಂದರೆ?”
ಕಥೆಗಳನ್ನು ಬರೆಯುವುದಕ್ಕೆ ಮತ್ತು ನಾಟಕ ಅಥವಾ ಸಿನೆಮಾ ಮಾಡಲು ಒಂದು ದೊಡ್ಡ ವ್ಯತ್ಯಾಸವಿದೆ. ಒಬ್ಬ ಲೇಖಕನಿಗೆ ತಟ್ಟಿದ ವಿಷಯ, ಕತೆಯನ್ನು ಇಟ್ಟುಕೊಂಡು ಬರೆಯಲು ನೇರವಾಗಿ ಪ್ರಾರಂಭಿಸಬಹುದು ಆದರೆ ಸಿನೆಮಾ ಮತ್ತು ನಾಟಕದಲ್ಲಿ ಹಾಗಲ್ಲ. ಒಂದು ಸಿನೆಮಾ ನಿರ್ಮಿಸಲು ಕೆಲವು ವರ್ಷಗಳೇ ಬೇಕಾಗುವುದೆಂಬ ಮತ್ತು ಇದೊಂದು ಸಾಮೂಹಿಕ ಕಲೆಯಾಗಿರುವ ಕಾರಣದಿಂದ ಹಾಗೂ ಒಂದು ನಿರ್ದಿಷ್ಟ ಸಂಖ್ಯೆಯ ನೋಡುಗರನ್ನು ತಲುಪಲೇಬೇಕಾದ ಕಾರಣದಿಂದ ನಾವು ಹೇಳುವ ಕಥೆಯನ್ನು ಆಯ್ಕೆ ಮಾಡುವಾಗ ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ.

ಒಂದು ಕಥೆ ಇಷ್ಟವಾಯಿತು ಎನ್ನುವುದು ಖಂಡಿತವಾಗಿಯೂ ಸಮಾಧಾನಕರ ಉತ್ತರವಲ್ಲ. ಆ ಕಥೆ ನಮಗೆ ಯಾವ ಕಾರಣಕ್ಕೆ ಇಷ್ಟವಾಯಿತು ಎನ್ನುವ ಪ್ರಶ್ನೆಗೂ ಸೂಕ್ತ ಉತ್ತರವನ್ನು ಪಡೆಯಬೇಕಾಗುತ್ತದೆ. ನಾವಿರುವ ಸಮಯದಲ್ಲಿ ನಮಗಿಷ್ಟವಾದ ಕಥೆಯು ಪ್ರಸ್ತುತವೇ? ಏನಾದರೂ ಹೊಸತನ್ನು ಹೊಂದಿದೆಯೇ ಈ ಕಥೆ? ಮೊದಲಿಗೆ ಈ ಎರಡು ಪ್ರಶ್ನೆಗಳನ್ನು ನೋಡುವ.

ಪ್ರಸ್ತುತ ಎಂದರೇನು? ನಾಟಕ ಮಾಡುವಾಗಂತೂ ನಮ್ಮ ಪರಿಚಯದ ಅನೇಕರಿಗೆ ಇನ್ನೂ ಬಾದಲ್ ಸರ್ಕಾರ್, ಮೋಹನ್ ರಾಕೇಶ್, ಟೆಂಡುಳ್ಕರ್, ಗಿರೀಶ್ ಕಾರ್ನಾಡ್ ಅವರ ಕೃತಿಗಳೇ ಸೆಳೆಯುತ್ತವೆ. ತಮಗಿಷ್ಟವಾದ ಕೃತಿಗಳು ಇಂದಿಗೂ ಪ್ರಸ್ತುತ ಎಂದು ಗಟ್ಟಿಯಾಗಿಯೇ ಪ್ರತಿಪಾದಿಸುತ್ತಾರೆ. ಆದರೆ ಈ ಶ್ರೇಷ್ಠ ಲೇಖಕರ ಅದ್ಭುತ ಕೃತಿಗಳು ನಿಜವಾಗಿಯೂ ಪ್ರಸ್ತುತವಾಗಿ ಉಳಿದಿವೆಯೇ? ಅದನ್ನು ಪತ್ತೆ ಹಚ್ಚುವುದು ಹೇಗೆ? ಆಯಾ ಕೃತಿಗಳು ಸದಾಕಾಲ ಚಾಲ್ತಿಯಲ್ಲಿರುವ ಮಾನವೀಯ ಅಂಶಗಳನ್ನು, ಮನುಷ್ಯನ ತುಡಿತಗಳನ್ನು ಹೊಂದಿರುವ ಕಾರಣದಿಂದ ಅ ಕೃತಿಗಳು ಇಂದಿಗೂ ಪ್ರಸ್ತುತ ಎನ್ನುವ ಉತ್ತರವನ್ನು ನೀಡಬಹುದು. ಇನ್ನು ಆಯಾಕಾಲದಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ಸಮಸ್ಯೆಗಳನ್ನು ಕೆಲವು ಕೃತಿಗಳು ಉದ್ದೇಶಿಸಿದ್ದರಿಂದ ಅವುಗಳು ಪ್ರಸ್ತುತವಲ್ಲ ಎಂದು ಉತ್ತರ ಸಿಗಬಹುದು; ಉದಾಹರಣೆಗೆ ವರದಕ್ಷಿಣೆ ಅಥವಾ ನಿರುದ್ಯೋಗ (ಇವುಗಳು ಮುಂಚೆ ಇದ್ದವು ಈಗ ಇಲ್ಲ ಎಂದು ಹೇಳುತ್ತಿಲ್ಲ, ಆದರೆ ಇಂತಹ ಸಮಸ್ಯೆಗಳು ಆ ಬ್ರ್ಯಾಕೆಟ್‍ನಲ್ಲಿ ಹಾಕಬಹುದು). ಆದರೆ ಪ್ರಸಕ್ತ ಸಮಯದಲ್ಲಿ ಇರುವ ಸಮಸ್ಯೆಗಳನ್ನು ಉದ್ದೇಶಿಸುವ ಕೃತಿಗಳೇ ಪ್ರಸ್ತುತ ಎಂತಲೂ ಹೇಳಲಾಗುವುದಿಲ್ಲ. ರಾಜರಾಣಿಯರ, ರಾಜಕುಮಾರರ, ಪೌರಾಣಿಕ ಕಥೆಗಳ ಕೃತಿಗಳು ಪ್ರಸ್ತುತವಲ್ಲ ಹಾಗೂ ಇತ್ತೀಚಿನ ಇತಿಹಾಸದ ಮತ್ತು ಕೆಲವು ದಶಕ, ಶತಕಗಳ ಹಿಂದಿನ ಸಬ್‍ಆಲ್ಟರ್ನ್ ಇತಿಹಾಸವನ್ನು, ಜನರ ಸಮಸ್ಯೆಗಳನ್ನು ಪ್ರಸಕ್ತ ಸಮಾಜಕ್ಕೆ ತೋರಿಸುವುದೂ ಪ್ರಸ್ತುತವಲ್ಲ ಎಂದು ಹೇಳಲಾಗದು. ಅಂದರೆ ಇಂದು ಹೆಚ್ಚಾಗಿ ಕಾಣುತ್ತಿರುವ ಸಮಸ್ಯೆಗಳನ್ನು ಉದ್ದೇಶಿಸಿ ಕೃತಿ ರಚಿಸಿದಲ್ಲಿ ಅದನ್ನು ಪ್ರಸ್ತುತ ಎಂದು ಖಡಾಖಂಡಿತವಾಗಿ ಹೇಳಬಹುದೇ? ಪ್ರಸ್ತುತ ಏನು ಎಂದು ನಿರ್ಧರಿಸುವುದನ್ನು ಆಯಾ ಕರ್ತೃ ಮತ್ತು ನೋಡುಗರಿಗೆ ಬಿಟ್ಟ ವಿಷಯವೇ? ಒಂದು ಕೃತಿಯನ್ನು ಇದು ಪ್ರಸ್ತುತ ಅಥವಾ ಇಲ್ಲ ಎಂದು ಹೇಳಬಹುದೇ ಹೊರತು, ಪ್ರಸ್ತುತ ಎನ್ನುವುದಕ್ಕೆ ಮಾನದಂಡಗಳೇನು ಎನ್ನುವುದಕ್ಕೆ ಮಾನದಂಡಗಳನ್ನು ನಿರ್ಧರಿಸಲು ಸಾಧ್ಯವೋ ಇಲ್ಲವೋ, ನನಗೂ ಹೊಳೆಯುತ್ತಿಲ್ಲ.

ಇನ್ನೂ ಹೊಸತು ಎಂದರೇನು ಎನ್ನುವ ಪ್ರಶ್ನೆಗೂ ನಮ್ಮ ಬಳಿ ಸರಳ ಉತ್ತರಗಳಿಲ್ಲ. ಜಗತ್ತಿನಲ್ಲಿ ಇರುವ ಜೋಕ್‍ಗಳು ಕೇವಲ ಏಳೋ ಎಂಟೋ ಎಂದು ಹೇಳಲಾಗುತ್ತದೆ. ಅವೇ ಜೋಕ್‍ಗಳನ್ನು ಬೇರೆ ಬೇರೆ ಪಾತ್ರಗಳು ಮತ್ತು ಸಂದರ್ಭಗಳಿಗೆ ತುರುಕಿಸಿ ಹೊಸ ಜೋಕ್‍ಗಳೆಂದು ಹೇಳಲಾಗುತ್ತದೆ. ಇದೇ ಮಾತನ್ನು ಕಥೆಗಳಿಗೂ ಅನ್ವಯಿಸಬಹುದಾದರೆ, ಹೊಸ ಕಥೆ ಎಂದರೇನು? ಹೊಸ ಕಥೆಗಳನ್ನು ತರಲು ಸಾಧ್ಯವೇ ಇಲ್ಲವೇ? ಅನೇಕರು ಅನೇಕ ರೀತಿಯಲ್ಲಿ ಈ ಪ್ರಶ್ನೆಗೆ ಉತ್ತರ ನೀಡಬಹುದು ಆದರೆ ಮುಖ್ಯ ವಿಷಯವೆಂದರೆ, ನಾವು ಯಾವುದಾದರೂ ಕಥೆಯನ್ನು ಆಯ್ಕೆ ಮಾಡಿಕೊಂಡಾಗ ಈ ಎಲ್ಲ ಪ್ರಶ್ನೆಗಳನ್ನು ಆ ಕಥೆಗೆ ಕೇಳಲೇಬೇಕಾಗುತ್ತದೆ. ಅಲ್ಲಿ ಸಮಾಧಾನಕರ ಉತ್ತರ ಸಿಗಬಹುದು ಅಥವಾ ಸಿಗದೇ ಇರಬಹುದು.

ಕೆಲವರು ನೋಡುಗರ ಆಯ್ಕೆಯ ಅಧ್ಯಯನ ಮಾಡಿ ತಾವು ಯಾವ ಕಥೆ ಹೇಳಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ‘ಜನ ಇಂಥದ್ದನ್ನೇ ಇಷ್ಟಪಡ್ತಾರೆ, ನಾವೇನು ಮಾಡಬೇಕು?’ ಎನ್ನುವ ಉಡಾಫೆಯ ಕಾರಣಗಳನ್ನು ತಮ್ಮ ರಚನೆಗಳಿಗೆ ನೀಡುತ್ತಾರೆ. ಈ ಧೋರಣೆ ತಪ್ಪು ಎಂದು ನಿಸ್ಸಂಶಯವಾಗಿ ಹೇಳಬಲ್ಲೆ. ಇದಕ್ಕೆ ಹಲವಾರು ಕಾರಣಗಳಿವೆ. ಒಂದು, ಜನ ಏನು ಇಷ್ಟ ಪಡುತ್ತಾರೆ ಎಂದು ಯೋಚಿಸಿ ಚಿತ್ರವನ್ನು ಮಾಡಿದಾಗ, ಅವರು ಆ ಚಿತ್ರವನ್ನು ಮಾಡುವಷ್ಟರಲ್ಲಿ ಅಂತಹ ಕಥೆಗಳನ್ನು ನೋಡಿರುತ್ತಾರೆ. ಮತ್ತೇ ಅಂತಹ ಕಥೆಗಳನ್ನು ಜನರು ಏಕೆ ಇಷ್ಟಪಡಬೇಕು ಎನ್ನುವ ಪ್ರಶ್ನೆಗೆ ಅವರಲ್ಲಿ ಉತ್ತರವಿರುವುದಿಲ್ಲ. ಇಲ್ಲಿ ಕೆಲವು ವರ್ಷಗಳ ಹಿಂದೆ ಬಂದ ಕನ್ನಡ ಚಿತ್ರ ‘ತಿಥಿ’ಯ ಉದಾಹರಣೆ ಕೊಡಬಹುದು. ತಿಥಿ ಚಿತ್ರ ಹಿಟ್ ಆದಕೂಡಲೇ ಅಂತಹದ್ದೇ ಹಲವಾರು ಚಿತ್ರಗಳು ಬಂದವು ಆದರೆ ಅವ್ಯಾವೂ ಸ್ವಾಭಾವಿಕವಾಗಿಯೇ ಯಶಸ್ವಿಯಾಗಲಿಲ್ಲ. ಹಾಗೂ ‘ಜನ ಏನು ಇಷ್ಟಪಡುತ್ತಾರೆ’ ಎನ್ನುವ ನಿರ್ಣಯಕ್ಕೆ ಆಳವಾದ ಅಧ್ಯಯನದಿಂದ ಬಂದಿರುವುದಿಲ್ಲ.

ಇದರೊಂದಿಗೆ, ಆಳವಾದ ಸಾಮಾಜಿಕ ವಿಷಯವನ್ನು ಹೊಂದಿರುವ ಕಥೆಗಳಿಂದ ಹಿಡಿದು ಕೇವಲ ವೈಭವೀಕರಿಸಿದ ಹಿಂಸೆ, ಪೊಳ್ಳು ಕಥೆಗಳನ್ನು ಹೊಂದಿರುವ ಚಿತ್ರಗಳೂ ಯಶಸ್ವಿಯಾಗಿದ್ದು ವಾಸ್ತವ. ಹಾಗಾದರೆ ಜನ ಏನು ಇಷ್ಟಪಡುತ್ತಾರೆ ಎಂದು ಖಚಿತವಾಗಿ ಹೇಳುವುದು ಹೇಗೆ? ಹಾಗೂ ಅವರ ಇಷ್ಟ ಚಿತ್ರ ನಿರ್ಮಿಸುವವರಿಗೆ ಏಕೆ ಮಾನದಂಡವಾಗಬೇಕು? ಮೇಲೆ ಹೇಳಿದಂತೆ, ರೇಪ್ ವಿಡಿಯೋಗಳನ್ನು ಮಾರಾಟ ಮಾಡಲಾಗುತ್ತದೆ, ಅದಕ್ಕೂ ಗ್ರಾಹಕರಿದ್ದಾರೆ, ಹಾಗಿರುವಾಗ ಅವೇ ಚಿತ್ರಗಳನ್ನೇಕೆ ನಿರ್ಮಿಸಬಾರದು? ಕಥೆ ಹೇಳುವವರೇ ತನಗೆ ಈ ಕಥೆ ಇಷ್ಟವೇ? ಯಾವ ಕಾರಣಕ್ಕೆ ಇಷ್ಟ ಎನ್ನುವ ನಿರ್ದಿಷ್ಟ ಉತ್ತರವನ್ನು ಕಂಡುಕೊಳ್ಳಬೇಕಾಗುತ್ತದೆ. ಆ ಉತ್ತರ ಇತರರಿಗೆ ಸಮಂಜಸ ಎನ್ನಿಸದೇ ಇರಬಹುದು, ಆದರೆ ತನ್ನ ಉತ್ತರಗಳಲ್ಲಿ ರಚಿಸುವವನಿಗೆ ಬಲವಾದ ನಂಬಿಕೆಯಿದ್ದರೆ ಅಲ್ಲೊಂದು ಉತ್ತಮ ಕೃತಿ ಬೆಳೆಯುತ್ತಿರುತ್ತದೆ. ಜಗತ್ತಿನ ಎಲ್ಲಾ ಶ್ರೇಷ್ಠ ಕೃತಿಗಳು ಹುಟ್ಟಿದ್ದು ಹೀಗೆ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...