Homeಮುಖಪುಟದಕ್ಷಿಣದ ಸಿನಿಮಾಗಳೆಂದರೆ ‘KGF, RRR, ಪುಷ್ಪ’ ಅಷ್ಟೇ ಅಲ್ಲ: ಬಾಲಿವುಡ್‌ ಎದುರು ಚರ್ಚೆ ಹಾದಿತಪ್ಪಿತೆ?

ದಕ್ಷಿಣದ ಸಿನಿಮಾಗಳೆಂದರೆ ‘KGF, RRR, ಪುಷ್ಪ’ ಅಷ್ಟೇ ಅಲ್ಲ: ಬಾಲಿವುಡ್‌ ಎದುರು ಚರ್ಚೆ ಹಾದಿತಪ್ಪಿತೆ?

- Advertisement -
- Advertisement -

‘ಪುಷ್ಪ’, ‘ಆರ್‌‌ಆರ್‌‌ಆರ್’, ‘ಕೆಜಿಎಫ್- 2’ ಸಿನಿಮಾಗಳ ಯಶಸ್ಸಿನ ಹಿನ್ನೆಲೆಯಲ್ಲಿ ಬಾಲಿವುಡ್ ಮಂದಿ ಒತ್ತಡಕ್ಕೊಳಗಾಗಿದ್ದಾರೆಂಬ ಚರ್ಚೆ ನಡೆಯುತ್ತಿದೆ‌. ‘ಹಿಂದಿ ರಾಷ್ಟ್ರೀಯ ಭಾಷೆ’ ಎಂಬ ಹೇಳಿಕೆಗಳನ್ನು ನೋಡಿದರೆ ಬಾಲಿವುಡ್ ತಾರೆಗಳು ಭಯಗೊಂಡಿರುವುದು ನಿಜವೂ ಅನಿಸುತ್ತಿದೆ. ಇದೆಲ್ಲದರ ಹೊರತಾಗಿ ಯಶಸ್ವಿ ಸಿನಿಮಾವೆಂದರೆ ಏನೆಂದು ನಾವು ಕೇಳಿಕೊಳ್ಳುವ ಅಗತ್ಯವೂ ಇದೆ. ‘ಪ್ಯಾನ್‌ ಇಂಡಿಯಾ’ ಹಾಗೂ ‘ಹಣ ಗಳಿಕೆ’ಯ ಮಾನದಂಡಗಳಾಚೆಯ ಯಶಸ್ಸುಗಳನ್ನೂ ಮನಗಾಣಬೇಕಿದೆ.

ಬಾಲಿವುಡ್‌ಗೆ ದಕ್ಷಿಣದ ಸಿನಿಮಾಗಳು ಸೆಡ್ಡು ಹೊಡೆದಿವೆ ಎಂಬ ಚರ್ಚೆಗೆ ಬಳಕೆಯಾಗುತ್ತಿರುವ ಈ ಮೂರೂ ಸಿನಿಮಾಗಳು ಏನನ್ನು ಹೇಳಲು ಹೊರಟಿವೆ? ಇವುಗಳ ಯಶಸ್ಸು ಪ್ರತಿನಿಧಿಸುತ್ತಿರುವುದೇನೂ ಎಂಬುದೂ ಮುಖ್ಯವಲ್ಲವೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಪುಷ್ಪ’ ಮಾಫಿಯಾಗಳು ಮೇಲುಗೈ ಸಾಧಿಸುವ ಕಥೆಯುಳ್ಳ ಸಿನಿಮಾ, ಹಿಂದುತ್ವವನ್ನು ಜನರ ತಲೆಯೊಳಗೆ ತರುಕಲು ಯತ್ನಿಸಿರುವ ಸಿನಿಮಾ ‘ಆರ್‌ಆರ್‌ಆರ್‌’, ಬಿಲ್ಡಪ್ ಹಾಗೂ ಹೆಣ್ಣನ್ನು ಸರಕು ಎಂಬಂತೆ ಚಿತ್ರಿಸಿದ ಸಿನಿಮಾ ಕೆಜಿಎಫ್‌. ಇಂಥವುಗಳಿಗೆ ಭಾರೀ ಹಣ ತೆತ್ತು ಸಿನಿಮಾ ನೋಡಿದ ಪ್ರೇಕ್ಷಕ ಬಯಸಿದ್ದಾದರೂ ಏನು? ಇವುಗಳನ್ನೆಲ್ಲ ‘ಮನರಂಜನೆ’ ಎನ್ನಲು ಸಾಧ್ಯವೇ? ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಿದರೆ ಮುಂಬರುವ ಪ್ರಯೋಗಗಳು ಹೇಗಿರುತ್ತವೆ? ಈ ಮೂರು ಸಿನಿಮಾಗಳಾಚೆಗೆ ದಕ್ಷಿಣ ಭಾರತದ ಚಿತ್ರರಂಗ ಹಿಡಿದಿರುವ ಹೊಸತನದ ಹಾದಿ ಮಸುಕಾಗಿ ಮತ್ತದೇ ಸವಕಲು ಮಾದರಿಗೆ ನಾವು ಹೊರಳುತ್ತೇವೆಯೇ?

ದಕ್ಷಿಣ ಭಾರತದತ್ತ ಬಾಲಿವುಡ್ ತಿರುಗಿ ನೋಡಲೇಬೇಕಾದ ಸಾಕಷ್ಟು ಉತ್ಕೃಷ್ಟ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಬರುತ್ತಿವೆ. ಕೋವಿಡ್ ನಡುವೆ ಬಂದ ‘ಆಕ್ಟ್ 1978’, ‘ಅರಿಷಡ್ವರ್ಗ’ ಕನ್ನಡದ ಮಟ್ಟಿಗೆ ಗುರುತಿಸಬಹುದಾದ ಪ್ರಯೋಗಗಳು. ಆದರೆ ತಮಿಳು ಹಾಗೂ ಮಲಯಾಳಂನಲ್ಲಿ ದೊಡ್ಡ ಪಟ್ಟಿಯೇ ಇವೆ. ‘ಸರಪಟ್ಟ ಪರಂಬರೈ’ ಥರದ ಸಿನಿಮಾ ಓಟಿಟಿಗೆ ಬಂತು. ಅದು ಏನಾದರೂ ಚಿತ್ರಮಂದಿರದಲ್ಲಿ ತೆರೆ ಕಂಡಿದಿದ್ದರೆ ಪ್ರೇಕ್ಷಕನಿಗೆ ಸಿಗುತ್ತಿದ್ದ ಫೀಲ್‌ ಉತ್ಕೃಷ್ಟವಾಗಿರುತ್ತಿತ್ತು. ‘ಸೂರರೈ ಪೊಟ್ರು’ ‘ಜೈ ಭೀಮ್’ ಸಿನಿಮಾಗಳು ಚಿತ್ರಮಂದಿರದಲ್ಲಿ ತೆರೆಕಂಡಿದ್ದರೆ ‘ಪ್ಯಾನ್‌ ಇಂಡಿಯಾ’ ಮಾನದಂಡಕ್ಕೆ ಒಳಪಡುತ್ತಿದ್ದವೇನೋ!

ಇದನ್ನೂ ಓದಿರಿ: ಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

ಕೋವಿಡ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಭಾರತೀಯರು ಅತಿ ಹೆಚ್ಚು ನೋಡಿದ್ದು ಮಲಯಾಳಂ ಸಿನಿಮಾಗಳನ್ನು. ದೈತ್ಯ ಕಲಾವಿದ ಫಹಾದ್ ಫಾಸಿಲ್ ಅವರ ‘ಸಿ ಯೂ ಸೂನ್’, ‘ಇರುಳ್’, ‘ಜೋಜಿ’, ‘ಮಾಲಿಕ್’ ಒಟಿಟಿಗೆ ಬಂದವು. ಒಂದು ರೀತಿಯಲ್ಲಿ ಹೇಳುವುದಾದರೆ ಫಾಸಿಲ್, ಓಟಿಟಿಯ ಏಕಚಕ್ರಾಧಿಪತಿಯಂತೆ ಮೆರೆದರು. ಒಟಿಟಿಯಲ್ಲಿ ಬಂದ ‘ನಾಯಟ್ಟು’, ‘ಮಾಲಿಕ್’‌, ‘ಗ್ರೇಟ್ ಇಂಡಿಯನ್‌ ಕಿಚನ್’, ‘ಹೋಮ್’, ‘ಕುರುತಿ’, ‘ದೃಶ್ಯಂ2’ ಮೊದಲಾದ ಸಿನಿಮಾಗಳು ಹೊಸ ಚರ್ಚೆಯನ್ನೇ ಹುಟ್ಟು ಹಾಕಿದವು. ಕೋವಿಡ್‌ ಸೋಂಕಿನ ಭೀತಿಯಿಂದಾಗಿ ಮನೆಯೊಳಗೆ ಕುಳಿತ ಜನರನ್ನು ರಂಜಿಸಿದ್ದು, ಚಿಂತನೆಗೆ ಹಚ್ಚಿದ್ದು ಓಟಿಟಿಯಲ್ಲಿ ಬಂದ ಈ ಸಿನಿಮಾಗಳೆಂದರೆ ತಪ್ಪಾಗದು.

ತಮಿಳಿನಲ್ಲಿ 2021, 2022ನೇ ಇಸವಿಯಲ್ಲಿ ಬಿಡುಗಡೆಯಾದ ‘ಮಂಡೇಲಾ’, ‘ಕರ್ಣನ್’, ‘ಸಾರ್ಪಟ್ಟ ಪರಂಬರೈ’, ‘ಜೈ ಭೀಮ್’, ‘ರೈಟರ್’, ‘ಠಾಣಾಕ್ಕಾರನ್’ ಸಿನಿಮಾಗಳು ಕಥೆ ಹಾಗೂ ಉತ್ಕೃಷ್ಟತೆಯ ದೃಷ್ಟಿಯಿಂದ ಅದ್ಭುತವಾದ ಪ್ರಯೋಗಗಳು. ‘ರೈಟರ್‌’ ಹಾಗೂ ‘ಕರ್ಣನ್’ ಕೆಲಕಾಲ ಥೇಟರ್‌ನಲ್ಲಿಯೂ ಪ್ರದರ್ಶನ ಕಂಡವು.

ಇತ್ತೀಚಿಗೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಈಗ ಒಟಿಟಿಗೂ ಬಂದಿರುವ ‘ಪಡ’ ಎಂಬ ಮಲಯಾಳಂ ಸಿನಿಮಾ ನೈಜ ಘಟನೆಯನ್ನು ಆಧರಿಸಿ ಮೂಡಿಬಂದಿದೆ. ಆದಿವಾಸಿಗಳ ಬೆಟ್ಟದಂತ ನೋವಿಗೆ ಕನ್ನಡಿ ಹಿಡಿದಿದೆ. ಅಹಿಂಸಾತ್ಮಕವಾದರೂ ಮಿಲಿಟೆಂಟ್ ಪ್ರತಿರೋಧಕ್ಕೆ ಇಳಿದ ಹೋರಾಟಗಾರರು ಎದುರಿಸಿದ ಪ್ರಭುತ್ವದ ಕಿರುಕುಳವನ್ನು ತೆರೆದಿಟ್ಟಿದೆ.

ಇದನ್ನೂ ಓದಿರಿ: NFDC ಜತೆಗೆ ಇತರ ಸರ್ಕಾರಿ ಸಿನಿಮಾ ಸಂಸ್ಥೆಗಳ ವಿಲೀನ – ಅಪಾಯಗಳೇನು?

ಪೃಥ್ವಿರಾಜ್ ಸುಕುಮಾರನ್‌, ಸೂರಜ್ ವೆಂಜರಮೂಡು ಥರದ ಅದ್ಭುತ ನಟರು ಅಭಿನಯಿಸಿರುವ ‘ಜನಗಣಮನ’ (ಮಲಯಾಳಂ) ಸಿನಿಮಾ ಮೊನ್ನೆಯಷ್ಟೇ ಅಂದರೆ ಏಪ್ರಿಲ್‌ 28ರಂದು ಚಿತ್ರಮಂದಿರಗಳಿಗೆ ಬಂದಿದೆ. ಪ್ರಕರಣವೊಂದರ ಸುತ್ತ ಮಾಧ್ಯಮ ಹಾಗೂ ರಾಜಕಾರಣಿಗಳು ಸೃಷ್ಟಿಸುವ ಸಮೂಹ ಸನ್ನಿ, ವಾಸ್ತವಗಳಿಗೆ ಮಾಬ್‌ ಕುರುಡಾಗುವ ಪರಿಯನ್ನು ಈ ಸಿನಿಮಾ ಮನವರಿಕೆ ಮಾಡಿಕೊಟ್ಟಿದೆ. #FuckFascism ಎನ್ನುವಷ್ಟು ಧೈರ್ಯ ಮಲಯಾಳಿಗರಿಗಿದೆ. ಕ್ಯಾಂಪಸ್‌ಗಳ ಮೇಲೆ ಕೇಸರಿಧಾರಿಗಳು ದಾಳಿ ಮಾಡುತ್ತಿರುವುದರಿಂದ ಶೈಕ್ಷಣಿಕ ಹಾಗೂ ಡೆಮಾಕ್ರಟಿಕ್ ವ್ಯವಸ್ಥೆ ದಮನವಾಗುತ್ತಿರುವ ಸೂಕ್ಷ್ಮಗಳನ್ನು ಕಥೆಯೊಳಗೆ ತರಲಾಗಿದೆ.

ಇಷ್ಟೆಲ್ಲ ಅದ್ಭುತ ಸಿನಿಮಾಗಳು ದಕ್ಷಿಣ ಭಾರತದಲ್ಲಿಯೇ ಕಳೆದೆರಡು ವರ್ಷಗಳಲ್ಲಿ ಬಂದಿವೆ. ಪ್ರಾದೇಶಿಕ ಅಸ್ಮಿತೆಯೊಂದಿಗೆ ಜಾಗತಿಕ ಹಾಗೂ ರಾಷ್ಟ್ರೀಯ ವಿದ್ಯಮಾನಗಳೊಂದಿಗೆ ಮುಖಾಮುಖಿಯಾಗಿವೆ. ಹೊಸ ಆಲೋಚನೆಯನ್ನು ಹುಟ್ಟಿಹಾಕಿ, ಪ್ರಭುತ್ವದ ಮತೀಯ ತಾರತಮ್ಯವನ್ನು ಪ್ರಶ್ನಿಸಿವೆ. ಹೀಗಿರುವಾಗ ಬಾಲಿವುಡ್‌ v/s ದಕ್ಷಿಣ ಭಾರತದ ಚಿತ್ರರಂಗದ ಚರ್ಚೆಗೆ ಬಳಕೆಯಾಗುತ್ತಿರುವ ಸಿನಿಮಾಗಳ್ಯಾವುವು? ನಮ್ಮಲ್ಲಿ ಅದ್ಬುತ ಪ್ರಯೋಗಗಳು ನಡೆಸುತ್ತಿದ್ದರೂ ನಾವು ಬಾಲಿವುಡ್‌ಗೆ ಚಾಲೆಂಜ್ ಮಾಡುತ್ತಿರುವುದು ಯಾವ ರೀತಿಯ ಸಿನಿಮಾಗಳ ಮೂಲಕ? ನಮ್ಮ‌ ದೃಷ್ಟಿಕೋನ ಬದಲಾಗುವ ಅವಶ್ಯಕತೆ ಇದೆ ಅಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...