Homeಕರ್ನಾಟಕಮಾಂದಲ್‌ಪಟ್ಟಿಯ ಗುಡ್ಡ ವಿಸ್ತಾರದಲ್ಲಿ ಅರಳಿದ ನೀಲಿ ಸಂತಸ! ಕಣ್ಮನ ಸೆಳೆದ ನೀಲಕುರಿಂಜಿಯ ಸೋದರ ಸಂಬಂಧಿ

ಮಾಂದಲ್‌ಪಟ್ಟಿಯ ಗುಡ್ಡ ವಿಸ್ತಾರದಲ್ಲಿ ಅರಳಿದ ನೀಲಿ ಸಂತಸ! ಕಣ್ಮನ ಸೆಳೆದ ನೀಲಕುರಿಂಜಿಯ ಸೋದರ ಸಂಬಂಧಿ

- Advertisement -
- Advertisement -

ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ 7000ಕ್ಕೂ ಮಿಗಿಲಾದ ಹೂ ಬಿಡುವ ಸಸ್ಯ ಪ್ರಬೇಧಗಳಿವೆ. ಆದರೆ ಸಮುದ್ರ ಮಟ್ಟದಿಂದ 1700 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿರುವ ಶೋಲಾ ಅರಣ್ಯ ಪ್ರದೇಶಗಳ ಪರ್ವತ ಶ್ರೇಣಿಗಳಲ್ಲಿ ಬೆಳೆಯುವ ಹೂ ಬಿಡುವ ಪೊದೆಯಂತಹ ಸಸ್ಯಜಾತಿಯೇ ಕುರಿಂಜಿ ಹೂ ಅಥವಾ ನೀಲಕುರಿಂಜಿ ಹೂ.

ಏನಿದು ನೀಲಕುರಿಂಜಿ?

ವೈಜ್ಞಾನಿಕವಾಗಿ ಗುರುತಿಸಲ್ಪಟ್ಟಿರುವ ಹಲವಾರು ಸಸ್ಯ ಪ್ರಬೇಧಗಳಲ್ಲಿ ಸ್ಟ್ರೊಬಿಲಾಂತಸ್ (Strobilanthes) ಅನ್ನುವ ಸಸ್ಯಕುಲಕ್ಕೆ ಸೇರಿದ ಅಕ್ಯಾಂತೇಸಿಯೇ (Acanthaceae) ಕುಟುಂಬದ ಒಂದು ಸದಸ್ಯ ಈ ನೀಲಕುರಿಂಜಿ. ಸ್ಟ್ರೊಬಿಲಾಂತಸ್ ಸಸ್ಯಕುಲದಲ್ಲಿ 250ಕ್ಕೂ ಹೆಚ್ಚಿನ ಹೂವುಗಳು ಅರಳುತ್ತವೆ. ಕರ್ನಾಟಕದ ಕೊಡಗು ಜಿಲ್ಲೆಯ ಪುಷ್ಪಗಿರಿ ಪರ್ವತಶ್ರೇಣಿ, ಬ್ರಹ್ಮಗಿರಿ ಪರ್ವತಶ್ರೇಣಿ, ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ಪರ್ವತಶ್ರೇಣಿ ಮತ್ತು ಬಳ್ಳಾರಿಯ ಸಂಡೂರಿನ ಬೆಟ್ಟಗಳಲ್ಲಿ ಕೂಡಾ ಈ ಹೂವುಗಳು ಅರಳುತ್ತವೆ.

ನೀಲಕುರಿಂಜಿಯ ವಿಶೇಷ ಏನು?

ಸ್ಟ್ರೊಬಿಲಾಂತಸ್ ಸಸ್ಯಕುಲದ ಹೂವುಗಳಲ್ಲಿ ಕೆಲವು ಹೂವುಗಳು ಪ್ರತೀ ವರ್ಷ ಅರಳಿದರೆ ಕೆಲವು 16 ವರ್ಷಗಳಿಗೊಮ್ಮೆ ಅರಳುತ್ತವೆ. ಹಾಗೇ 12 ವರ್ಷಗಳಿಗೊಮ್ಮೆ ಅರಳುವ ಹೂವೇ ನೀಲಕುರಿಂಜಿ ಹೂವು. ನೀಲಕುರಿಂಜಿ ಎನ್ನುವುದು ಮೂಲದಲ್ಲಿ ತಮಿಳಿನದಾಗಿದ್ದು ನೀಲಿ ಬಣ್ಣದಿಂದ ತುಂಬಿದ ಪರ್ವತ ಎಂದರ್ಥ. ವೈಜ್ಞಾನಿಕವಾಗಿ ಸ್ಟ್ರೊಬಿಲಾಂತಸ್ ಕುಂತಿಯಾನ (Strobilanthes kunthiana) ಎಂಬ ಹೆಸರಿನ ಈ ಹೂವು ಆ ಕುಲದಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ಪರ್ವತಶ್ರೇಣಿಯ ತುಂಬೆಲ್ಲಾ ಹಬ್ಬಿ ಅರಳುವ ಹೂವಾಗಿದೆ. ಈ ಹೂವು ಅರಳಿರುವ ಕಾಲದಲ್ಲಿ ಇಡೀ ಪರ್ವತವೇ ನೀಲಿ ಬಣ್ಣದಿಂದ ತುಂಬಿ ನೀಲಕುರಿಂಜಿಯೆ ಹೆಸರಿನ ಅರ್ಥವನ್ನು ಸಾರುತ್ತದೆ ಮಾತ್ರವಲ್ಲ ನೋಡುಗರ ಕಣ್ಮನ ಸೆಳೆಯುತ್ತದೆ.

ಈ ನೀಲಕುರಿಂಜಿ ಹೂವುಗಳು ಪ್ರತೀ 12 ವರ್ಷಗಳಿಗೊಮ್ಮೆ ಅರಳುತ್ತದೆ. ಈಗಾಗಲೇ ದಾಖಲಿಸಲ್ಪಟ್ಟಿರುವ ಮಾಹಿತಿಯಂತೆ ಈ ಹೂವು ಮೊದಲ ಬಾರಿಗೆ 1838ರಲ್ಲಿ ದಾಖಲಾಗಿದ್ದು ನಂತರ 12 ವಷರ್ಗಳ ಅಂತರದಲ್ಲಿ 1850, 1862 1874, 1886, 1898, 1910, 1922, 1934, 1946, 1958, 1970, 1982, 1994, 2006 ಮತ್ತು ಕೊನೆಯದಾಗಿ 2018ರಲ್ಲಿ ಅರಳಿರುವುದು ದಾಖಲಾಗಿರುತ್ತದೆ. 2018ರಲ್ಲಿ ಕೊಡಗಿನ ಪುಷ್ಪಗಿರಿ ಪರ್ವತ ಶ್ರೇಣಿಯ ತುದಿಯಲ್ಲಿ ಈ ಹೂವುಗಳು ಅರಳಿರುವುದನ್ನು ಅಲ್ಲಿನ ಅರಣ್ಯಾಧಿಕಾರಿಗಳು ದೃಢೀಕರಿಸಿರುತ್ತಾರೆ. ಮುಂದೆ 2030ಕ್ಕೆ ಅರಳುವುದನ್ನು ನಿರೀಕ್ಷಿಸಲಾಗಿದೆ. ಪುಷ್ಪಗಿರಿ ಅರಣ್ಯ ಪ್ರದೇಶವು ಸಮುದ್ರ ಮಟ್ಟದಿಂದ 1700 ಮೀಟರ್ ಎತ್ತರದಲ್ಲಿರುವುದು ನಾವು ಗಮನಿಸಬೇಕಾದ ವಿಚಾರ.

2021ರಲ್ಲಿ ಕೊಡಗಿನಲ್ಲಿ ಅರಳಿರುವ ಹೂವು ಯಾವುದು?

ಸ್ಟ್ರೊಬಿಲಾಂತಸ್ ಸಸ್ಯಕುಲದಲ್ಲಿ 250ಕ್ಕೂ ಹೆಚ್ಚಿನ ಹೂವುಗಳಿದ್ದು ಅವುಗಳಲ್ಲಿ ಕೊಡಗು ಜಿಲ್ಲೆಯ ಪರ್ವತ ಶ್ರೇಣಿಗಳಲ್ಲಿ ಮೂರು ಜಾತಿಯ ಹೂವುಗಳು ಅರಳುವುದು ದಾಖಲಾಗಿರುತ್ತದೆ. ಅವುಗಳೆಂದರೆ ಸ್ಟ್ರೊಬಿಲಾಂತಸ್ ಕುಂತಿಯಾನ (Strobilanthes kunthiana), ಸ್ಟ್ರೊಬಿಲಾಂತಸ್ ಸಿಸಿಲಿಸ್ (Strobilanthes sessilis) ಮತ್ತು ಸ್ಟ್ರೊಬಿಲಾಂತಸ್ ಕುಸ್ಪಿಡೇಟಸ್ (Strobilanthes cuspidatus). ಇವುಗಳಲ್ಲಿ ಸ್ಟ್ರೊಬಿಲಾಂತಸ್ ಕುಂತಿಯಾನ ಹೊರತುಪಡಿಸಿ ಉಳಿದ 2 ಜಾತಿಯ ಹೂವುಗಳು 4-5-6-7 ವರ್ಷಗಳ ಅಂತರದಲ್ಲಿ ಕೊಡಗು ಜಿಲ್ಲೆಯ ಪರ್ವತಗಳಲ್ಲಿ ಅಥವಾ ಎತ್ತರದ ಗುಡ್ಡಗಳಲ್ಲಿ ಅರಳುವುದನ್ನು ಅಲ್ಲಿನ ಸ್ಥಳೀಯರು ದಾಖಲಿಸಿರುತ್ತಾರೆ. ಸದರಿ 2021ರ ಆಗಸ್ಟ್ ಮಾಹೆಯಲ್ಲಿ ಕೊಡಗಿನ ಅತ್ಯಂತ ಆಕರ್ಷಣೀಯ ಪರ್ವತ ಪ್ರದೇಶವಾದ ಮಾಂದಲ್‌ಪಟ್ಟಿಯಲ್ಲಿ ಮತ್ತು ಪುಷ್ಪಗಿರಿ ಪರ್ವತ ಪ್ರದೇಶದಲ್ಲಿ ಅರಳಿರುವುದು ಸ್ಟ್ರೊಬಿಲಾಂತಸ್ ಸಿಸಿಲಿಸ್ ಜಾತಿಯ ಕುರಿಂಜಿ ಹೂವಾಗಿರುತ್ತದೆ.

ಈ ಹೂವುಗಳನ್ನು ಕಳೆದ ಮೂರು ವರ್ಷಗಳಿಂದ ಕೊಡಗಿನ ಬೇರೆ ಬೇರೆ ಗುಡ್ಡ ಪ್ರದೇಶಗಳಲ್ಲಿ ಅರಳಿರುವುದನ್ನು ನಾನೇ ಕಂಡಿದ್ದೇನೆ. ಕಳೆದ ವರ್ಷ ಕೂಡಾ ಕೊಡಗು ಜಿಲ್ಲೆಯ ಕಾಲೂರಿನಲ್ಲಿ ಮತ್ತು ಪುಷ್ಪಗಿರಿಯಲ್ಲಿ ಈ ಹೂವುಗಳು ಅರಳಿದೆ. ಆದರೆ ಈ ವರ್ಷ ಮಾಂದಲ್‌ಪಟ್ಟಿಯ ಬೆಟ್ಟದ ಪೂರ್ತಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಅರಳಿರುವುದರಿಂದ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸುದ್ದಿಯಾಗಿದ್ದು ಮಾತ್ರವಲ್ಲದೆ ಪ್ರವಾಸಿಗರನ್ನು ಆಕರ್ಷಿಸುವ ಕಾರಣದಿಂದಲೋ ಅಥವಾ ಮಾಹಿತಿಯ ಕೊರತೆಯಿಂದಲೋ ಸುದ್ದಿ ಮಾಧ್ಯಮಗಳು ಮತ್ತು ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನ ಈ ಹೂವುಗಳನ್ನು ನೀಲಕುರಿಂಜಿ ಎಂದು ಕರೆದರು. ಆದರೆ
ವಾಸ್ತವದಲ್ಲಿ ಕೊಡಗು ಜಿಲ್ಲೆಯ ಅನೇಕ ಗುಡ್ಡಗಳಲ್ಲಿ ಅರಳಿರುವ ಈ ನೀಲಿ ಸುಂದರಿ ಮಾತ್ರ ಸ್ಟ್ರೊಬಿಲಾಂತಸ್ ಸಿಸಿಲಿಸ್!.

ವ್ಯತ್ಯಾಸವೇನು?

ಸ್ಟ್ರೊಬಿಲಾಂತಸ್ ಕುಂತಿಯಾನ ಮತ್ತು ಸ್ಟ್ರೊಬಿಲಾಂತಸ್ ಸಿಸಿಲಿಸ್ ಹೂವುಗಳ ನಡುವೆ ಕಾಣಲು ಅಂತಹ ದೊಡ್ಡ ವ್ಯತ್ಯಾಸವೇನಿರುವುದಿಲ್ಲ. ಎರಡೂ ಪೊದೆಯ ಸಸ್ಯಗಳಾಗಿದ್ದು ಹೂವುಗಳು ಗೊಂಚಲಾಗಿ ಬೆಳೆಯುತ್ತದೆ ಮತ್ತು ಹೂವುಗಳಿಗೆ ಬೇರೆ ಹೂವುಗಳಂತೆ ತೊಟ್ಟುಗಳಿರುವುದಿಲ್ಲ. ಹೂವನ್ನು ನೇರ ಗೊಂಚಲಿನಿಂದಲೇ ಬೇರ್ಪಡಿಸಬೇಕು. ಕನಕಾಂಬರ ಹೂವಿನ ಹಾಗೆ!.

ನೀಲಕುರಿಂಜಿಯ ಹೂವುಗಳ ಕಾಂಡವು ತುಸು ಎತ್ತರಕ್ಕೆ, ನೇರವಾಗಿ ಬೆಳಯುವುದಲ್ಲದೆ ಕಾಂಡವು ಗಟ್ಟಿಯಾಗಿರುತ್ತದೆ. ಎಲೆಗಳು ತುಸು ಉದ್ದವಾಗಿರುತ್ತದೆ. ಹೂವಿನ ಮುಂಭಾಗ ತುಸು ಹೆಚ್ಚೇ ಅಗಲವಾಗಿರುತ್ತದೆ. ಆದರೆ ಸ್ಟ್ರೊಬಿಲಾಂತಸ್ ಸಿಸಿಲಿಸ್ ಹೂವುಗಳು ಗಂಟೆಯಾಕಾರದಲ್ಲಿ ಅರಳಿ ಹೂವಿನ ದಳದ ಅಂಚುಗಳು ಸ್ವಲ್ಪವೇ ಸ್ವಲ್ಪ ಹಿಮ್ಮುಖವಾಗಿ ಬಾಗಿರುತ್ತದೆ. ಎರಡೂ ಹೂವುಗಳನ್ನು ಒಟ್ಟಿಗೇ ನೋಡುವ ಕಾಲ ಬಹುಶಃ ಸಿಗಲಾರದೇನೋ ಅಥವಾ ಮುಂಬರುವ ದಿನಗಳಲ್ಲಿ ಒಟ್ಟಿಗೇ ಒಂದೇ ವರ್ಷ ಅರಳುವುದೇನೋ? ಕಾದು ನೋಡಬೇಕಿದೆ.

ವಿನೋದ್ ಕುಮಾರ್ ವಿ ಕೆ

ವಿನೋದ್ ಕುಮಾರ್ ವಿ ಕೆ
ವಿನೋದ್ ಹುಟ್ಟಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ. 2011ರಿಂದ ಛಾಯಾಗ್ರಹಣದಲ್ಲಿ ಆಸಕ್ತಿ. ಹಕ್ಕಿ, ಚಿಟ್ಟೆ, ಕೀಟಗಳಿಂದ ಪ್ರಾರಂಭವಾಗಿ ಟ್ರೆಕ್ಕಿಂಗ್ ಹವ್ಯಾಸವಾಗಿ ಬೆಳೆದಿದೆ. ಅರಣ್ಯ ಇಲಾಖೆಯಲ್ಲಿ ಕಚೇರಿ ಸಹಾಯಕನಾಗಿ ವೃತ್ತಿ. ಸದ್ಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ವಾಸವಾಗಿದ್ದಾರೆ.


ಇದನ್ನೂ ಓದಿ: ಗೌರಿ ಕಾರ್ನರ್: ಸೌಹಾರ್ದ ಗಿರಿಯಲ್ಲಿ ನಿಸರ್ಗದ ’ನೀಲಿಗ್ಯಾನ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...