Homeಕರ್ನಾಟಕಮಾಂದಲ್‌ಪಟ್ಟಿಯ ಗುಡ್ಡ ವಿಸ್ತಾರದಲ್ಲಿ ಅರಳಿದ ನೀಲಿ ಸಂತಸ! ಕಣ್ಮನ ಸೆಳೆದ ನೀಲಕುರಿಂಜಿಯ ಸೋದರ ಸಂಬಂಧಿ

ಮಾಂದಲ್‌ಪಟ್ಟಿಯ ಗುಡ್ಡ ವಿಸ್ತಾರದಲ್ಲಿ ಅರಳಿದ ನೀಲಿ ಸಂತಸ! ಕಣ್ಮನ ಸೆಳೆದ ನೀಲಕುರಿಂಜಿಯ ಸೋದರ ಸಂಬಂಧಿ

- Advertisement -
- Advertisement -

ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ 7000ಕ್ಕೂ ಮಿಗಿಲಾದ ಹೂ ಬಿಡುವ ಸಸ್ಯ ಪ್ರಬೇಧಗಳಿವೆ. ಆದರೆ ಸಮುದ್ರ ಮಟ್ಟದಿಂದ 1700 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿರುವ ಶೋಲಾ ಅರಣ್ಯ ಪ್ರದೇಶಗಳ ಪರ್ವತ ಶ್ರೇಣಿಗಳಲ್ಲಿ ಬೆಳೆಯುವ ಹೂ ಬಿಡುವ ಪೊದೆಯಂತಹ ಸಸ್ಯಜಾತಿಯೇ ಕುರಿಂಜಿ ಹೂ ಅಥವಾ ನೀಲಕುರಿಂಜಿ ಹೂ.

ಏನಿದು ನೀಲಕುರಿಂಜಿ?

ವೈಜ್ಞಾನಿಕವಾಗಿ ಗುರುತಿಸಲ್ಪಟ್ಟಿರುವ ಹಲವಾರು ಸಸ್ಯ ಪ್ರಬೇಧಗಳಲ್ಲಿ ಸ್ಟ್ರೊಬಿಲಾಂತಸ್ (Strobilanthes) ಅನ್ನುವ ಸಸ್ಯಕುಲಕ್ಕೆ ಸೇರಿದ ಅಕ್ಯಾಂತೇಸಿಯೇ (Acanthaceae) ಕುಟುಂಬದ ಒಂದು ಸದಸ್ಯ ಈ ನೀಲಕುರಿಂಜಿ. ಸ್ಟ್ರೊಬಿಲಾಂತಸ್ ಸಸ್ಯಕುಲದಲ್ಲಿ 250ಕ್ಕೂ ಹೆಚ್ಚಿನ ಹೂವುಗಳು ಅರಳುತ್ತವೆ. ಕರ್ನಾಟಕದ ಕೊಡಗು ಜಿಲ್ಲೆಯ ಪುಷ್ಪಗಿರಿ ಪರ್ವತಶ್ರೇಣಿ, ಬ್ರಹ್ಮಗಿರಿ ಪರ್ವತಶ್ರೇಣಿ, ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ಪರ್ವತಶ್ರೇಣಿ ಮತ್ತು ಬಳ್ಳಾರಿಯ ಸಂಡೂರಿನ ಬೆಟ್ಟಗಳಲ್ಲಿ ಕೂಡಾ ಈ ಹೂವುಗಳು ಅರಳುತ್ತವೆ.

ನೀಲಕುರಿಂಜಿಯ ವಿಶೇಷ ಏನು?

ಸ್ಟ್ರೊಬಿಲಾಂತಸ್ ಸಸ್ಯಕುಲದ ಹೂವುಗಳಲ್ಲಿ ಕೆಲವು ಹೂವುಗಳು ಪ್ರತೀ ವರ್ಷ ಅರಳಿದರೆ ಕೆಲವು 16 ವರ್ಷಗಳಿಗೊಮ್ಮೆ ಅರಳುತ್ತವೆ. ಹಾಗೇ 12 ವರ್ಷಗಳಿಗೊಮ್ಮೆ ಅರಳುವ ಹೂವೇ ನೀಲಕುರಿಂಜಿ ಹೂವು. ನೀಲಕುರಿಂಜಿ ಎನ್ನುವುದು ಮೂಲದಲ್ಲಿ ತಮಿಳಿನದಾಗಿದ್ದು ನೀಲಿ ಬಣ್ಣದಿಂದ ತುಂಬಿದ ಪರ್ವತ ಎಂದರ್ಥ. ವೈಜ್ಞಾನಿಕವಾಗಿ ಸ್ಟ್ರೊಬಿಲಾಂತಸ್ ಕುಂತಿಯಾನ (Strobilanthes kunthiana) ಎಂಬ ಹೆಸರಿನ ಈ ಹೂವು ಆ ಕುಲದಲ್ಲೇ ಅತೀ ಹೆಚ್ಚು ಪ್ರಮಾಣದಲ್ಲಿ ಪರ್ವತಶ್ರೇಣಿಯ ತುಂಬೆಲ್ಲಾ ಹಬ್ಬಿ ಅರಳುವ ಹೂವಾಗಿದೆ. ಈ ಹೂವು ಅರಳಿರುವ ಕಾಲದಲ್ಲಿ ಇಡೀ ಪರ್ವತವೇ ನೀಲಿ ಬಣ್ಣದಿಂದ ತುಂಬಿ ನೀಲಕುರಿಂಜಿಯೆ ಹೆಸರಿನ ಅರ್ಥವನ್ನು ಸಾರುತ್ತದೆ ಮಾತ್ರವಲ್ಲ ನೋಡುಗರ ಕಣ್ಮನ ಸೆಳೆಯುತ್ತದೆ.

ಈ ನೀಲಕುರಿಂಜಿ ಹೂವುಗಳು ಪ್ರತೀ 12 ವರ್ಷಗಳಿಗೊಮ್ಮೆ ಅರಳುತ್ತದೆ. ಈಗಾಗಲೇ ದಾಖಲಿಸಲ್ಪಟ್ಟಿರುವ ಮಾಹಿತಿಯಂತೆ ಈ ಹೂವು ಮೊದಲ ಬಾರಿಗೆ 1838ರಲ್ಲಿ ದಾಖಲಾಗಿದ್ದು ನಂತರ 12 ವಷರ್ಗಳ ಅಂತರದಲ್ಲಿ 1850, 1862 1874, 1886, 1898, 1910, 1922, 1934, 1946, 1958, 1970, 1982, 1994, 2006 ಮತ್ತು ಕೊನೆಯದಾಗಿ 2018ರಲ್ಲಿ ಅರಳಿರುವುದು ದಾಖಲಾಗಿರುತ್ತದೆ. 2018ರಲ್ಲಿ ಕೊಡಗಿನ ಪುಷ್ಪಗಿರಿ ಪರ್ವತ ಶ್ರೇಣಿಯ ತುದಿಯಲ್ಲಿ ಈ ಹೂವುಗಳು ಅರಳಿರುವುದನ್ನು ಅಲ್ಲಿನ ಅರಣ್ಯಾಧಿಕಾರಿಗಳು ದೃಢೀಕರಿಸಿರುತ್ತಾರೆ. ಮುಂದೆ 2030ಕ್ಕೆ ಅರಳುವುದನ್ನು ನಿರೀಕ್ಷಿಸಲಾಗಿದೆ. ಪುಷ್ಪಗಿರಿ ಅರಣ್ಯ ಪ್ರದೇಶವು ಸಮುದ್ರ ಮಟ್ಟದಿಂದ 1700 ಮೀಟರ್ ಎತ್ತರದಲ್ಲಿರುವುದು ನಾವು ಗಮನಿಸಬೇಕಾದ ವಿಚಾರ.

2021ರಲ್ಲಿ ಕೊಡಗಿನಲ್ಲಿ ಅರಳಿರುವ ಹೂವು ಯಾವುದು?

ಸ್ಟ್ರೊಬಿಲಾಂತಸ್ ಸಸ್ಯಕುಲದಲ್ಲಿ 250ಕ್ಕೂ ಹೆಚ್ಚಿನ ಹೂವುಗಳಿದ್ದು ಅವುಗಳಲ್ಲಿ ಕೊಡಗು ಜಿಲ್ಲೆಯ ಪರ್ವತ ಶ್ರೇಣಿಗಳಲ್ಲಿ ಮೂರು ಜಾತಿಯ ಹೂವುಗಳು ಅರಳುವುದು ದಾಖಲಾಗಿರುತ್ತದೆ. ಅವುಗಳೆಂದರೆ ಸ್ಟ್ರೊಬಿಲಾಂತಸ್ ಕುಂತಿಯಾನ (Strobilanthes kunthiana), ಸ್ಟ್ರೊಬಿಲಾಂತಸ್ ಸಿಸಿಲಿಸ್ (Strobilanthes sessilis) ಮತ್ತು ಸ್ಟ್ರೊಬಿಲಾಂತಸ್ ಕುಸ್ಪಿಡೇಟಸ್ (Strobilanthes cuspidatus). ಇವುಗಳಲ್ಲಿ ಸ್ಟ್ರೊಬಿಲಾಂತಸ್ ಕುಂತಿಯಾನ ಹೊರತುಪಡಿಸಿ ಉಳಿದ 2 ಜಾತಿಯ ಹೂವುಗಳು 4-5-6-7 ವರ್ಷಗಳ ಅಂತರದಲ್ಲಿ ಕೊಡಗು ಜಿಲ್ಲೆಯ ಪರ್ವತಗಳಲ್ಲಿ ಅಥವಾ ಎತ್ತರದ ಗುಡ್ಡಗಳಲ್ಲಿ ಅರಳುವುದನ್ನು ಅಲ್ಲಿನ ಸ್ಥಳೀಯರು ದಾಖಲಿಸಿರುತ್ತಾರೆ. ಸದರಿ 2021ರ ಆಗಸ್ಟ್ ಮಾಹೆಯಲ್ಲಿ ಕೊಡಗಿನ ಅತ್ಯಂತ ಆಕರ್ಷಣೀಯ ಪರ್ವತ ಪ್ರದೇಶವಾದ ಮಾಂದಲ್‌ಪಟ್ಟಿಯಲ್ಲಿ ಮತ್ತು ಪುಷ್ಪಗಿರಿ ಪರ್ವತ ಪ್ರದೇಶದಲ್ಲಿ ಅರಳಿರುವುದು ಸ್ಟ್ರೊಬಿಲಾಂತಸ್ ಸಿಸಿಲಿಸ್ ಜಾತಿಯ ಕುರಿಂಜಿ ಹೂವಾಗಿರುತ್ತದೆ.

ಈ ಹೂವುಗಳನ್ನು ಕಳೆದ ಮೂರು ವರ್ಷಗಳಿಂದ ಕೊಡಗಿನ ಬೇರೆ ಬೇರೆ ಗುಡ್ಡ ಪ್ರದೇಶಗಳಲ್ಲಿ ಅರಳಿರುವುದನ್ನು ನಾನೇ ಕಂಡಿದ್ದೇನೆ. ಕಳೆದ ವರ್ಷ ಕೂಡಾ ಕೊಡಗು ಜಿಲ್ಲೆಯ ಕಾಲೂರಿನಲ್ಲಿ ಮತ್ತು ಪುಷ್ಪಗಿರಿಯಲ್ಲಿ ಈ ಹೂವುಗಳು ಅರಳಿದೆ. ಆದರೆ ಈ ವರ್ಷ ಮಾಂದಲ್‌ಪಟ್ಟಿಯ ಬೆಟ್ಟದ ಪೂರ್ತಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಅರಳಿರುವುದರಿಂದ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸುದ್ದಿಯಾಗಿದ್ದು ಮಾತ್ರವಲ್ಲದೆ ಪ್ರವಾಸಿಗರನ್ನು ಆಕರ್ಷಿಸುವ ಕಾರಣದಿಂದಲೋ ಅಥವಾ ಮಾಹಿತಿಯ ಕೊರತೆಯಿಂದಲೋ ಸುದ್ದಿ ಮಾಧ್ಯಮಗಳು ಮತ್ತು ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನ ಈ ಹೂವುಗಳನ್ನು ನೀಲಕುರಿಂಜಿ ಎಂದು ಕರೆದರು. ಆದರೆ
ವಾಸ್ತವದಲ್ಲಿ ಕೊಡಗು ಜಿಲ್ಲೆಯ ಅನೇಕ ಗುಡ್ಡಗಳಲ್ಲಿ ಅರಳಿರುವ ಈ ನೀಲಿ ಸುಂದರಿ ಮಾತ್ರ ಸ್ಟ್ರೊಬಿಲಾಂತಸ್ ಸಿಸಿಲಿಸ್!.

ವ್ಯತ್ಯಾಸವೇನು?

ಸ್ಟ್ರೊಬಿಲಾಂತಸ್ ಕುಂತಿಯಾನ ಮತ್ತು ಸ್ಟ್ರೊಬಿಲಾಂತಸ್ ಸಿಸಿಲಿಸ್ ಹೂವುಗಳ ನಡುವೆ ಕಾಣಲು ಅಂತಹ ದೊಡ್ಡ ವ್ಯತ್ಯಾಸವೇನಿರುವುದಿಲ್ಲ. ಎರಡೂ ಪೊದೆಯ ಸಸ್ಯಗಳಾಗಿದ್ದು ಹೂವುಗಳು ಗೊಂಚಲಾಗಿ ಬೆಳೆಯುತ್ತದೆ ಮತ್ತು ಹೂವುಗಳಿಗೆ ಬೇರೆ ಹೂವುಗಳಂತೆ ತೊಟ್ಟುಗಳಿರುವುದಿಲ್ಲ. ಹೂವನ್ನು ನೇರ ಗೊಂಚಲಿನಿಂದಲೇ ಬೇರ್ಪಡಿಸಬೇಕು. ಕನಕಾಂಬರ ಹೂವಿನ ಹಾಗೆ!.

ನೀಲಕುರಿಂಜಿಯ ಹೂವುಗಳ ಕಾಂಡವು ತುಸು ಎತ್ತರಕ್ಕೆ, ನೇರವಾಗಿ ಬೆಳಯುವುದಲ್ಲದೆ ಕಾಂಡವು ಗಟ್ಟಿಯಾಗಿರುತ್ತದೆ. ಎಲೆಗಳು ತುಸು ಉದ್ದವಾಗಿರುತ್ತದೆ. ಹೂವಿನ ಮುಂಭಾಗ ತುಸು ಹೆಚ್ಚೇ ಅಗಲವಾಗಿರುತ್ತದೆ. ಆದರೆ ಸ್ಟ್ರೊಬಿಲಾಂತಸ್ ಸಿಸಿಲಿಸ್ ಹೂವುಗಳು ಗಂಟೆಯಾಕಾರದಲ್ಲಿ ಅರಳಿ ಹೂವಿನ ದಳದ ಅಂಚುಗಳು ಸ್ವಲ್ಪವೇ ಸ್ವಲ್ಪ ಹಿಮ್ಮುಖವಾಗಿ ಬಾಗಿರುತ್ತದೆ. ಎರಡೂ ಹೂವುಗಳನ್ನು ಒಟ್ಟಿಗೇ ನೋಡುವ ಕಾಲ ಬಹುಶಃ ಸಿಗಲಾರದೇನೋ ಅಥವಾ ಮುಂಬರುವ ದಿನಗಳಲ್ಲಿ ಒಟ್ಟಿಗೇ ಒಂದೇ ವರ್ಷ ಅರಳುವುದೇನೋ? ಕಾದು ನೋಡಬೇಕಿದೆ.

ವಿನೋದ್ ಕುಮಾರ್ ವಿ ಕೆ

ವಿನೋದ್ ಕುಮಾರ್ ವಿ ಕೆ
ವಿನೋದ್ ಹುಟ್ಟಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ. 2011ರಿಂದ ಛಾಯಾಗ್ರಹಣದಲ್ಲಿ ಆಸಕ್ತಿ. ಹಕ್ಕಿ, ಚಿಟ್ಟೆ, ಕೀಟಗಳಿಂದ ಪ್ರಾರಂಭವಾಗಿ ಟ್ರೆಕ್ಕಿಂಗ್ ಹವ್ಯಾಸವಾಗಿ ಬೆಳೆದಿದೆ. ಅರಣ್ಯ ಇಲಾಖೆಯಲ್ಲಿ ಕಚೇರಿ ಸಹಾಯಕನಾಗಿ ವೃತ್ತಿ. ಸದ್ಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ವಾಸವಾಗಿದ್ದಾರೆ.


ಇದನ್ನೂ ಓದಿ: ಗೌರಿ ಕಾರ್ನರ್: ಸೌಹಾರ್ದ ಗಿರಿಯಲ್ಲಿ ನಿಸರ್ಗದ ’ನೀಲಿಗ್ಯಾನ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪ್ಪಿನಂಗಡಿ: ಸೂರ್ಯ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಚಿಕಿತ್ಸೆಗೆಂದು ತೆರಳಿ ಶವವಾಗಿ ಮರಳಿದ ಬೀದಿಬದಿ ವ್ಯಾಪಾರಿ!

ಖಾಸಗಿ ಆಸ್ಪತ್ರೆಗಳ ಹಣದ ದಾಹ ಮತ್ತು ವೈದ್ಯಕೀಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯಕ್ಕೆ ಮತ್ತೊಂದು ಬಡ ಜೀವ ಬಲಿಯಾಗಿದೆ. ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೊಹಮ್ಮದ್ ಶರೀಫ್ (35) ಎಂಬ ಬೀದಿ ಬದಿ...

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...