ದೆಹಲಿ ನಾಗರಿಕ ರಕ್ಷಣೆ (ಡಿಸಿಡಿ) ಉದ್ಯೋಗಿಯಾಗಿದ್ದ 21 ವರ್ಷದ ಮುಸ್ಲಿಂ ಯುವತಿಯ ಮೇಲೆ ಭೀಕರವಾಗಿ ಅತ್ಯಾಚಾರವೆಸಗಿ, ಬರ್ಬರವಾಗಿ ಕೊಲೆ ಮಾಡಲಾಗಿದೆ. ಇಂತಹ ಬರ್ಬರ ಕೃತ್ಯ ನಡೆಸಿದವರನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು, ಹೋರಾಟಗಾರರು ಒತ್ತಾಯಿಸಿದ್ದಾರೆ.
ಆಗಸ್ಟ್ 26ರಂದು ದೆಹಲಿಯ ಸಂಗಮ್ ವಿಹಾರ್ನಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, “ಕೆಲಸದ ಸ್ಥಳದಿಂದ ಸಬಿಯಾ (ಹೆಸರು ಬದಲಾಯಿಸಲಾಗಿದೆ) ಅವರನ್ನು ಅಪಹರಿಸಿ, ನಂತರ ಪರಿದಾಬಾದ್ಗೆ ಕರೆದೋಯ್ದು, ಅತ್ಯಾಚಾರವೆಸಗಿ ದೇಹವನ್ನು ವಿರೂಪಗೊಳಿಸಲಾಗಿದೆ, ಸ್ತನಗಳನ್ನು ಕತ್ತರಿಸಲಾಗಿದೆ” ಎಂದು ಸಬಿಯಾ ಕುಟುಂಬ ನೋವು ತೋಡಿಕೊಂಡಿತ್ತು.
ಸಬಿಯಾಳ ಇಬ್ಬರು ಸಹೋದ್ಯೋಗಿಗಳು ಪರಾರಿಯಾಗಿದ್ದು, ಈ ಭೀಕರ ಕೃತ್ಯದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಸಬಿಯಾ ಕುಟುಂಬ, “ಈ ಇಬ್ಬರ ಮೇಲೆ ದೂರು ನೀಡಲು ಸಂಗಮ್ ವಿಹಾರ್ ಪೊಲೀಸ್ ಠಾಣೆಗೆ ಹೋದೆವು. ಆದರೆ ಎನ್ಇಪಿ ದೂರ ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ” ಎಂದು ದೂರಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗಿದ್ದು, ವೈದ್ಯಕೀಯ ವರದಿ ಕೈಸೇರಬೇಕಿದೆ. ಸಿಬಿಐ ತನಿಖೆ ನಡೆಸುವಂತೆ ಸಬಿಯಾ ಕುಟುಂಬ ಆಗ್ರಹಿಸಿ ಒಂದು ವಾರದಿಂದ ತಮ್ಮ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದೆ.
ಇದನ್ನೂ ಓದಿ: ದೆಹಲಿ: ನಾಲ್ಕು ವರ್ಷದ ಮಗುವಿನ ಮೇಲೆ ಅಮಾನವೀಯ ಅತ್ಯಾಚಾರ
ಮಾಧ್ಯಮಗಳಲ್ಲಿ ತಡವಾಗಿ ವರದಿಯಾದ ಸಂಬಂಧ ಬೇಸರ ವ್ಯಕ್ತಪಡಿಸಿರುವ ಪ್ರಜ್ಞಾವಂತರು, “ಅತ್ಯಾಚಾರವನ್ನು ಅತ್ಯಾಚಾರವನ್ನಾಗಿ ನೋಡುತ್ತಿಲ್ಲ. ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಗಳ ಮೇಲೆ ಆದ ಈ ಕೃತ್ಯದ ಕುರಿತು ಮುಖ್ಯವಾಹಿನಿ ಮಾಧ್ಯಮ ಹಾಗೂ ಮೇಲ್ವರ್ಗಗಳು ನಿರ್ಲಕ್ಷ್ಯ ತಾಳಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಸಬಿಯಾ ಹೆಣ್ಣಲ್ಲವೇ? ಅವಳ ಅತ್ಯಾಚಾರ ಮತ್ತು ಕೊಲೆ ಅಮಾನುಷವಲ್ಲವೇ? ಯೋನಿಯನ್ನು ಸೀಳಿ, ಮೊಲೆ ಕತ್ತರಿಸಿ, ದೇಹದ ಮೇಲೆ 50 ಬಾರಿ ಚಾಕುವಿನಿಂದ ಇರಿದು ಈ ಸಬಿಯ ಎಂಬ ಹೆಣ್ಣನ್ನು ಕೊಲ್ಲಲಾಯಿತು. ಅದೂ ಅವಳನ್ನು ರೇಪ್ ಮಾಡಿದ ಮೇಲೆ. ಇಷ್ಟಕ್ಕೂ ಈಕೆ ಮಾಮೂಲಿ ಹೆಣ್ಣಲ್ಲ, ದೆಹಲಿ ಪೊಲೀಸ್ ಸಿಬ್ಬಂದಿ. ಆದರೆ ಯಾವ ಮುಖ್ಯ ವಾಹಿನಿಯಲ್ಲೂ ಇದರ ಬಗ್ಗೆ ಚರ್ಚೆ ಆಗಲಿಲ್ಲ. ಚರ್ಚೆ ಬಿಡಿ, ಸುದ್ದಿಯೂ ಆಗಲಿಲ್ಲ. ಅವಳ ತಪ್ಪೇನು ಗೊತ್ತಾ? 1. ಅವಳು ಹೆಣ್ಣಾಗಿ ಹುಟ್ಟಿದ್ದು ಮೊದಲ ತಪ್ಪು. ಆ ಕ್ಷಣವೇ ಅವಳು ಅತ್ಯಾಚಾರಕ್ಕೆ ಅರ್ಹಳಾದಳು. 2. ರೇಪ್ ಮತ್ತು ಕೊಲೆ ಆಯ್ತು, ಅದರ ವಿರುದ್ಧ ಕ್ಯಾಂಡಲ್ ಮಾರ್ಚ್, ಪ್ರತಿಭಟನೆ, ಆಕ್ರೋಶ ಹೊರ ಹೊಮ್ಮಲಿಲ್ಲ. ಏಕೆಂದರೆ ಅವಳು ಮೇಲ್ಜಾತಿ ಮನೆಯ ಮಗಳಲ್ಲ. 3. ಕನಿಷ್ಠ ಸುದ್ದಿಯೂ ಆಗಲಿಲ್ಲ, ಏಕೆಂದರೆ ಅವಳು ಪ್ರಬಲ ಜಾತಿಯ ಹೆಣ್ಣು ಕೂಡ ಅಲ್ಲ. 4. ಅವಳು ಮುಸ್ಲಿಂ ಹೆಣ್ಣು, ಈ ಪ್ರಕರಣವನ್ನು ಸಂಪೂರ್ಣ ನಿರ್ಲಕ್ಷಿಸಲು ಇದಕ್ಕಿಂತ ದೊಡ್ಡ ಕಾರಣ ಬೇಕಿರಲಿಲ್ಲ” ಎಂದು ಭಾಗ್ಯನಾರಾಯಣ ಬೊಗ್ಗವರಪು ಎಂಬವರು ಫೇಸ್ಬುಕ್ ಪೋಸ್ಟ್ ಮಾಡಿದ್ದು, ಚಿಂತಕ ಯೋಗೇಶ್ ಮಾಸ್ಟರ್ ಅದನ್ನು ಹಂಚಿಕೊಂಡಿದ್ದಾರೆ.
“ಬರೆಯಲು ನಾಚಿಕೆಯಾಗುತ್ತಿದೆ. ಇದು ಸಬಿಯಾ, ಮುಸ್ಲಿಂ ಹುಡುಗಿ. ಸಬಿಯಾ ಮುಸ್ಲಿಂ ಆಗಿರುವುದರಿಂದ ಜನರು ಸುಮ್ಮನಾಗಿದ್ದಾರೆ. ಸಬಿಯಾಗಾಗಿ ನಿಮ್ಮ ಧ್ವನಿಯನ್ನು ಹೆಚ್ಚಿಸಿ. ನಮ್ಮ ಮನೆಯಲ್ಲೂ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಇದ್ದಾರೆ. ಕೇಂದ್ರ ಸರಕಾರವಾಗಲಿ ಅಥವಾ ಅಲ್ಲಿನ ರಾಜ್ಯವಾಗಲಿ ಮೌನವಾಗಿದೆ. ಸಹೋದರಿಯರು ಮತ್ತು ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲದ ನಾಡಿನಲ್ಲಿ ನಾವಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯೇ” ಎಂದು ಸಬೀತ್ ಕುಂಬ್ರಾ ಪೋಸ್ಟ್ ಮಾಡಿದ್ದಾರೆ.
ಇದೇ ರೀತಿಯಲ್ಲಿ ನೂರಾರು ಸಾಮಾಜಿಕ ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿ, ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೈಸೂರು ಅತ್ಯಾಚಾರ ಪ್ರಕರಣ: ಐವರು ಆರೋಪಿಗಳ ಬಂಧನ
ತಪ್ಪಿತಸ್ಥರಿಗೆ ಕಟಿಣ ಶಿಕ್ಷೆ ಆಗಬೇಕು.