Homeಕರ್ನಾಟಕಗೌರಿ ಲಂಕೇಶ್ ದಿನ: ಗೌರಿಯನ್ನು ನೆನೆಯುತ್ತಾ...ಸಾವಿರಾರು ಗೌರಿಯರ ಮಾತುಗಳು...

ಗೌರಿ ಲಂಕೇಶ್ ದಿನ: ಗೌರಿಯನ್ನು ನೆನೆಯುತ್ತಾ…ಸಾವಿರಾರು ಗೌರಿಯರ ಮಾತುಗಳು…

ಇಂದಿನ ಸ್ಥಿತಿಯಲ್ಲಿ ಅಪ್ಪ (ಲಂಕೇಶ್), ಗೌರಿ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂಬ ಆಲೋಚನೆ ನನ್ನನ್ನು ಸದಾ ಕಾಡುತ್ತದೆ- ಕವಿತಾ ಲಂಕೇಶ್

- Advertisement -
- Advertisement -

ಗೌರಿ ಲಂಕೇಶ್ ಅಮರ್‌ ರಹೇ….ಅಮರ್‌ ರಹೇ…ಅಮರ್‌ ರಹೇ…ಗೌರಿ ಲಂಕೇಶ್ ಆಶಯಗಳನ್ನು ಈಡೇರಿಸೋಣ..ಈಡೇರಿಸೋಣ…ನಾನುಗೌರಿ..ನಾವೇಲ್ಲ ಗೌರಿ…ನೂರು ಗುಂಡುಗಳು ತೂರಿ ಬಂದರೂ ಗುಡು ಗುಡು ಗುಡು ಗುಡುಗುವೆವು…

ಈ ಎಲ್ಲಾ ಘೋಷಣೆಗಳು ಕೇಳಿ ಬಂದಿದ್ದು, ಚಾಮರಾಜಪೇಟೆಯಲ್ಲಿರುವ ಗೌರಿ ಲಂಕೇಶ್‌ರವರ ಸಮಾಧಿ ಬಳಿ…ಹೌದು, ಇಂದು ಹಿಂದೂತ್ವವಾದಿಗಳ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ ಅವರು ನಮ್ಮನ್ನಗಲಿ ನಾಲ್ಕು ವರ್ಷ.

ಗೌರಿ ಲಂಕೇಶ್ ಅವರ ನೆನಪಿನಲ್ಲಿ ಇಂದು (ಸೆಪ್ಟಂಬರ್ 05) ಗೌರಿ ಮೆಮೋರಿಯಲ್ ಟ್ರಸ್ಟ್‌ನಿಂದ ‘ಗೌರಿ ನೆನಹು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹುತಾತ್ಮರಾದ ಗೌರಿ ಲಂಕೇಶ್ ಅವರಿಗೆ ಹೋರಾಟದ ವಂದನೆಗಳನ್ನು ಸಲ್ಲಿಸಲಾಯಿತು.

ಗೌರಿ ನೆನಹುನಲ್ಲಿ ಮಾತನಾಡಿದ ಸಹೋದರಿ ಕವಿತಾ ಲಂಕೇಶ್ ಅವರು, “ಆ ಘಟನೆ ಇನ್ನು ನೆನ್ನೆ, ಮೊನ್ನೆ ಆದ ಹಾಗೆ ಕಣ್ಣ ಮುಂದಿದೆ. ಆಕೆಯ ಹೋರಾಟ ಮುಂದುವರೆಯುತ್ತಿದೆ. ಕಡಿಮೆ ಸ್ಥಳ ಸಿಕ್ಕರೂ ಜನ ಮಾತನಾಡುತ್ತಿದ್ದಾರೆ, ಗೌರಿ ಅಂತಹ ಜನ ಇನ್ನೂ ಇದ್ದಾರಲ್ಲ ಎಂಬುದೇ ಹೆಮ್ಮೆಯ ವಿಷಯ. ಪರಿಸ್ಥಿತಿ ಅಂದಿಗಿಂತಲೂ ಇಂದು ಹೆಚ್ಚು ಹದಗೆಟ್ಟಿದೆ. ಪತ್ರಕರ್ತರ ಮೇಲೆ ಹಲ್ಲೆಗಳಾಗುತ್ತಿವೆ. ಸರ್ಕಾರದ ವಿರುದ್ಧ ಬರೆಯಲಾಗದ ಸ್ಥಿತಿ ತಂದಿದ್ದಾರೆ. ಇಂತ ಸ್ಥಿತಿಯಲ್ಲಿ ಅಪ್ಪ (ಲಂಕೇಶ್), ಗೌರಿ ಇದ್ದಿದ್ದರೇ ಏನು ಮಾಡುತ್ತಿದ್ದರು ಎಂಬ ಆಲೋಚನೆ ನನ್ನನ್ನು ಕಾಡುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ಇಂದು ಗೌರಿ ದಿನ: ಗೌರಿ ಲಂಕೇಶ್ ನೆನಪಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಸಂವಾದ ಕಾರ್ಯಕ್ರಮಗಳು

ಹೋರಾಟಗಾರ್ತಿ, ಚಿಂತಕಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್ ಮಾತನಾಡಿ, “ಧಾರ್ಮಿಕ ಸಂಘಟನೆಗಳು ಹೆಚ್ಚಾಗಿ ಹೇಗೆ ರಾಜಕೀಯ ಮಾಡುತ್ತಿವೆ ಎಂಬುದನ್ನು ಲಂಕೇಶರು, ಗೌರಿ ಲಂಕೇಶರು ತಮ್ಮ ಬರಹಗಳ ಮೂಲಕ, ಚಿಂತನೆ ಮೂಲಕ ತಮ್ಮದೇ ರೀತಿಯಲ್ಲಿ ತಿಳಿಸಿದ್ದಾರೆ. ಈ ದಿನ ಗೌರಿ ಆಶಯದಲ್ಲಿ ಮುನ್ನಡೆಯುತ್ತಿರುವವರು, ನಾವೆಲ್ಲರೂ ಅದನ್ನು ಪಾಲಿಸಬೇಕಿದೆ. ಅನ್ಯಾಯ ಖಂಡಿಸುವ ಕೆಲಸ ಮಾಡುವವರಿಗೆ ಗುಂಡೇಟು ಬೀಳುವುದು ದುರಂತದ ವಿಷಯ. ಇವತ್ತಿಗೂ ಅದು ಇದೆ. ಅದು ಮುಂದೆಯೂ ಮುಂದುವರೆಯಲಿದೆ. ಆದರೆ, ನಾವ್ಯಾರು ಎದೆಗುಂದಬಾರದು. ಅವರಿದ್ದ ಕಾಲಕ್ಕಿಂತಲೂ ಕೆಟ್ಟ ಕಾಲ ಈಗ ಇದೆ. ಜಾತಿಯತೆ, ಕೋಮುದೌರ್ಜನ್ಯ ಹೆಚ್ಚಾಗುತ್ತಿದೆ. ಮತ್ತೆ ಗೌರಿ, ಲಂಕೇಶ್ ಅವರನ್ನು ನೆನೆಯುತ್ತಾ ಈ ಸವಾಲು ಸ್ವೀಕರಿಸಬೇಕಾಗಿದೆ. ಯಾವುದಕ್ಕೂ ಜಗ್ಗದೆ, ಅನ್ಯಾಯ ಸಹಿಸುವುದಿಲ್ಲ ಎಂಬ ಸಂಕಲ್ಪ ತೆಗೆದುಕೊಳ್ಳಬೇಕಾಗಿದೆ”  ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಗೌರಿ ನೆನಹು ಕಾರ್ಯಕ್ರಮ ಆಯೋಜಿಸಿದ್ದ ಗೌರಿ ಮೆಮೋರಿಯಲ್ ಟ್ರಸ್ಟ್ ಸದಸ್ಯರಾದ ನೂರ್ ಶ್ರೀಧರ್, ಹೇಗೆ ಗೌರಿ ಲಂಕೇಶ್ ಅವರ ಹತ್ಯೆಯಿಂದ ಜನ ಸಿಡಿದೆದ್ದರು ಎಂಬುದನ್ನು ತಿಳಿಸಿದರು.

“ಈ ಹೇಡಿಗಳು ಪನ್ಸಾರೆ, ದಾಬೊಲ್ಕರ್‌ ಅವರನ್ನು ಕೊಂದ ನಂತರ ಕಲ್ಬುರ್ಗಿ ಅವರನ್ನು ಟಾರ್ಗೆಟ್ ಮಾಡಿದರು. ನಂತರ ಗೌರಿ ಅವರನ್ನು ಟಾರ್ಗೆಟ್ ಮಾಡಿದರು. ಹೆಣ್ಣು ಜರ್ನಲಿಸ್ಟ್ ಏನು ಮಾಡಲು ಸಾಧ್ಯ ಎಂದು ಕೊಂಡಿದ್ರು. ಆ ಸಣ್ಣ ದೇಹದಲ್ಲಿನ ಗೌರಿ ಒಂದು ಜೀವ ಸೆಲೆ ಎಂಬುದು ಅವರಿಗೆ ತಿಳಿಯಲಿಲ್ಲ. ಅವರ ದೊಡ್ಡ ತಪ್ಪು ಗೌರಿ ಲಂಕೇಶ್ ಅವರನ್ನು ಟಾರ್ಗೆಟ್ ಮಾಡಿದ್ದು. ಗೌರಿ ಇಷ್ಟು ದೊಡ್ಡ ವ್ಯಕ್ತಿತ್ವ ಎಂಬುದು ಅವರಿಗೆ ತಿಳಿದಿರಲಿಲ್ಲ. ಗೌರಿ ಎಲ್ಲ ಜನರ ಹೃದಯದಲ್ಲಿ ಇದ್ದವರು ಎಂದು ಅವರಿಗೆ ತಿಳಿಯಲಿಲ್ಲ. ಹಾಗಾಗಿ ಅವರು ಗೌರಿ ಅವರ ಎದೆಗೆ ಹೊಡೆದ ಗುಂಡು ದೇಶ, ವಿದೇಶಗಳ ಸಹೃದಯರ ಹೃದಯಗಳಿಗೆ ತಾಗಿತ್ತು. ಅದು ಗೌರಿ ಘರ್ಜನೆಯಾಯಿತು. ಅದು ಭಯದ ಬದಲು ಇನ್ನು ವಿಶ್ವಾಸ, ಹೋರಾಟದ ಸಂಕಲ್ಪಕ್ಕೆ ನಾಂದಿಯಾಯಿತು. ನಾನುಗೌರಿ..ನಾವೆಲ್ಲಾ ಗೌರಿ ಎಂಬುದು ತಾನಾಗೆ ಹುಟ್ಟಿಕೊಂಡ ಒಂದು ಹೋರಾಟವಾಯಿತು” ಎಂದರು.

“ಈ ಘರ್ಜನೆಯಿಂದ ಈ ಹಂತಕರ ಪಡೆಗೆ ಮುಳುವಾಯಿತು. ಅಂದಿನ ಸರ್ಕಾರ ಕೂಡ ಈ ಒತ್ತಡಕ್ಕೆ ಒಳಗಾಗಬೇಕಾಯಿತು. ಸಂಘ ಪರಿವಾರದ ಷಡ್ಯಂತರ ಎಷ್ಟು ಕೆಲಸ ಮಾಡಿದರೂ ಕೂಡ ಆರೋಪಿಗಳನ್ನು ಬಿಡಿಸಲು ಸಾಧ್ಯವಾಗಲಿಲ್ಲ. ಇಂದು ನಮ್ಮನ್ನೆಲ್ಲಾ ಕಾಪಾಡಿದ್ದು ಈ ಗೌರಿ ಘರ್ಜನೆ. ಗೌರಿ ಆಶಯಗಳನ್ನು ಹೊತ್ತ ಗೌರಿ ತಂಡ ಕೆಲಸ ನಿಲ್ಲಿಸಲಿಲ್ಲ. ಕೆಲಸ ಮುಂದುವರೆಸಿದೆ. ಗೌರಿ ಆಶಯಗಳನ್ನು ಮುಂದುವರೆಸಲು ನಾನಾ ರೀತಿಯ ಚಿಂತನೆ ನಡೆಯುತ್ತಿದೆ. ಮುಂದೆ ಪತ್ರಿಕೋದ್ಯಮದಲ್ಲಿ ದಟ್ಟ ಅಲೆ ಸೃಷ್ಟಿಯಾಗಲಿದೆ” ಎಂದು ಗೌರಿ ಮೆಮೋರಿಯಲ್ ಟ್ರಸ್ಟ್ ಸದಸ್ಯರಾದ ನೂರ್ ಶ್ರೀಧರ್ ತಿಳಿಸಿದ್ದಾರೆ.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಮೇಲಿನ KCOCA ಕಾಯ್ದೆ ಕೈಬಿಡದಂತೆ ಸುಪ್ರೀಂ ಆದೇಶ

ಹೋರಾಟಗಾರರಾದ ಮಲ್ಲೂ ಕುಂಬಾರ್‌ ಗೌರಿಯವರನ್ನು ನೆನೆಯುತ್ತಾ, “ಲೈಂಗಿಕ ಅಲ್ಪ ಸಂಖ್ಯಾತರ ಬಗ್ಗೆ ಯಾರು ದನಿ ಎತ್ತದ ಕಾಲದಲ್ಲಿ ತುಂಬಾ ಸೂಕ್ಷ್ಮವಾಗಿ ಮಾತಾಡುತ್ತಿದ್ದವರು ಗೌರಿ. ಗೌರಿ ಕೊಲ್ಲಲ್ಪಟ್ಟಿದ್ದಾಳೆ. ಆದರೆ ಸತ್ತಿಲ್ಲ. ಎಲ್ಲಾ ಶೋಷಿತರು ತಮ್ಮ ಈಗೋಗಳನ್ನು ಬಿಟ್ಟು ಒಂದಾಗಿ ಗೌರಿ ಆಶಯಕ್ಕೆ ಗೌರವ ಸಲ್ಲಿಸಬೇಕಿದೆ” ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆ ಕಾರ್ಯಕರ್ತೆ ಚೆನ್ನಮ್ಮ ಮಾತನಾಡುತ್ತಾ, “ಒಂದು ಒಳ್ಳೆ ಬದುಕು ಕಟ್ಟಿ ಕೊಳ್ಳಲು ಸಹಾಯ ಮಾಡಿದವರು ಗೌರಿ ಅವರು. ಒಬ್ಬ ಮಹಿಳೆ ಹೇಗೆ ದಿಟ್ಟವಾಗಿ ಹೋರಾಟ ಮಾಡಬಹುದು ಎಂಬುದಕ್ಕೆ ಆದರ್ಶವಾಗಿದ್ದಾರೆ. ಇಷ್ಟೊಂದು ಎದುರಾಳಿಗಳ ನಡುವೆ ಸತ್ಯವನ್ನು ಬರೆಯಲು ಮನಸ್ಸು ಮಾಡಿದವರು ಅವರು. ಪೆನ್ನಿನ ಮೂಲಕ ಅವರ ತಪ್ಪುಗಳನ್ನು ಹೊರ ಹಾಕವುದನ್ನು ಕಲಿಸಿಕೊಟ್ಟಿದ್ದಾರೆ. ನಗರದಲ್ಲಷ್ಟೇ ಅಲ್ಲ ನಾವು ಹೋಗುವ ಪ್ರತಿ ಹಳ್ಳಿಯ ಜನರ ಮನಸ್ಸಿನಲ್ಲಿಯೂ ಅವರು ಆಳವಾಗಿ ಬೇರೂರಿದ್ದಾರೆ” ಎಂದು ಗೌರಿ ಲಂಕೇಶ್ ಅವರು ಜನರ ಮನಸ್ಸಲ್ಲಿ ವಿಸ್ತರಿಸಿರುವ ಬಗೆಯನ್ನು ವಿವರಿಸಿದ್ದಾರೆ.

ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್, ಸಹೋದರಿ ಕವಿತಾ ಲಂಕೇಶ್, ಗೌರಿ ಮೆಮೋರಿಯಲ್ ಟ್ರಸ್ಟ್‌ ಕಾರ್ಯದರ್ಶಿ ದೀಪು, ಕೆ.ಎಲ್, ಅಶೋಕ್, ಚಿಂತಕರಾದ ಶಿವಸುಂದರ್‌, ಹೋರಾಟಗಾರರಾದ ಸಿರಿಮನೆ ನಾಗರಾಜು, ವಾಸು, ಮಲ್ಲಿಗೆ ಸಿರಿಮನೆ, ಪ್ರೋ. ನಗರಿ ಬಾಬಯ್ಯ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್‌ ಬೆಂಕಿಕೆರೆ, ಹೇಮಂತ್ ಸೇರಿದಂತೆ, ಚಿಂತಕರು ಸಾಮಾಜಿಕ ಹೋರಾಟಗಾರರು ಭಾಗವಹಿಸಿದ್ದರು.

ಇದನ್ನೂ ಓದಿ: ನಾನು ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮಾಧ್ಯಮವನ್ನು ಜನರ ತೆಕ್ಕೆಗೆ ಮರಳಿ ಪಡೆಯುವ ಬಗ್ಗೆ ಎರಡು ಮಾತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...